ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 1:
1. ಝಾನ್ಸಿ ರಾಣಿ ಲಕ್ಷ್ಮೀಬಾಯಿ.
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಮಾನನಷ್ಟ ಮೊಕದ್ದಮೆ ಪ್ರಕರಣ.
2. PESA ಕಾಯಿದೆ.
3. ಕೆನ್-ಬೆಟ್ವಾ ಅಂತರ್ ನದಿ ಜೋಡಣೆ.
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. GM ಆಹಾರಕ್ಕಾಗಿ ಕರಡು ನಿಯಮಾವಳಿಗಳನ್ನು ಬಿಡುಗಡೆ ಮಾಡಿದ
2. ವಿದ್ಯುತ್ ಚಾಲಿತ ವಾಹನಗಳ(EV) ಬಳಕೆಯನ್ನು ಹೆಚ್ಚಿಸಲು ಸಹಾಯ ಮಾಡುವ 2021 ರ ಸರ್ಕಾರದ ನೀತಿಗಳು.
3. ಡಿಜಿಟಲ್ ಲೆಂಡಿಂಗ್ ಮತ್ತು ಸಂಬಂಧಿತ ಸಮಸ್ಯೆಗಳು.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:
1. ನೀಲ್ಗಾಯ್ ಗಳು.
2. ದಾರಾ ಶಿಕೋ.
ಸಾಮಾನ್ಯ ಅಧ್ಯಯನ ಪತ್ರಿಕೆ : 1
ವಿಷಯಗಳು: 18ನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗೆ ಆಧುನಿಕ ಭಾರತದ ಇತಿಹಾಸ-ಮಹತ್ವದ ಘಟನೆಗಳು ವ್ಯಕ್ತಿಗಳು ಮತ್ತು ಸಮಸ್ಯೆಗಳು.
ಝಾನ್ಸಿ ರಾಣಿ ಲಕ್ಷ್ಮೀಬಾಯಿ:
ಸಂದರ್ಭ:
ಉತ್ತರ ಪ್ರದೇಶದ ‘ಝಾನ್ಸಿ ರೈಲು ನಿಲ್ದಾಣ’ ಇನ್ನು ಮುಂದೆ ‘ವೀರರಾಣಿ ಲಕ್ಷ್ಮೀಬಾಯಿ ರೈಲು ನಿಲ್ದಾಣ’ ಎಂದು ಕರೆಯಲ್ಪಡುತ್ತದೆ.
ರೈಲು ನಿಲ್ದಾಣದ ಹೆಸರನ್ನು ಬದಲಾಯಿಸುವ ಪ್ರಕ್ರಿಯೆ:
- ಈ ನಿಲ್ದಾಣದ ಹೆಸರನ್ನು ಬದಲಾಯಿಸುವ ಪ್ರಸ್ತಾವನೆಯನ್ನು ಈ ಹಿಂದೆ ಉತ್ತರ ಪ್ರದೇಶ ಸರ್ಕಾರವು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿತ್ತು.
- ಕೇಂದ್ರ ರೈಲ್ವೇ ಸಚಿವಾಲಯ, ಭಾರತೀಯ ಪುರಾತತ್ವ ಇಲಾಖೆ ಮತ್ತು ಅಂಚೆ ಇಲಾಖೆಯಿಂದ ನಿರಪೇಕ್ಷಣಾ ಪತ್ರವನ್ನು ಪಡೆದ ನಂತರ ಯಾವುದೇ ನಿಲ್ದಾಣ ಅಥವಾ ಸ್ಥಳದ ಹೆಸರು ಬದಲಾವಣೆಗೆ ಸಮ್ಮತಿಯನ್ನು ‘ಗೃಹ ವ್ಯವಹಾರಗಳ ಸಚಿವಾಲಯ’ ನೀಡುತ್ತದೆ.
- ಮೇಲಿನ ಸಂಸ್ಥೆಗಳು ತಮ್ಮ ದಾಖಲೆಗಳಲ್ಲಿ ಪ್ರಸ್ತಾವಿತ ಹೆಸರಿನಂತೆ ಬೇರೆ ಯಾವುದೇ ಪಟ್ಟಣ ಅಥವಾ ಗ್ರಾಮವಿಲ್ಲ ಎಂದು ಖಚಿತಪಡಿಸುತ್ತವೆ.
- ಹೆಸರು ಬದಲಾವಣೆಯನ್ನು ಅನುಮೋದಿಸಿದ ನಂತರ, ಕಾರ್ಯನಿರ್ವಾಹಕ ಆದೇಶವನ್ನು ನೀಡಲಾಗುತ್ತದೆ, ಅದರ ನಂತರ ರೈಲ್ವೆ ಸಚಿವಾಲಯವು ನಿಲ್ದಾಣದ ಕೋಡ್ ಅನ್ನು ಬದಲಾಯಿಸುತ್ತದೆ.
‘ರಾಣಿ ಲಕ್ಷ್ಮೀಬಾಯಿ’ ಬಗ್ಗೆ:
- ‘ರಾಣಿ ಲಕ್ಷ್ಮೀಬಾಯಿ’ ನವೆಂಬರ್ 19, 1828 ರಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನಿಸಿದರು, ಅವರ ಬಾಲ್ಯದ ಹೆಸರು ‘ಮಣಿಕರ್ಣಿಕಾ ತಾಂಬೆ’.
- 1842 ರಲ್ಲಿ, ‘ಲಕ್ಷ್ಮೀಬಾಯಿ’ ಝಾನ್ಸಿಯ ರಾಜ ‘ಗಂಗಾಧರ ನೆವಾಲ್ಕರ್’ ಅವರನ್ನು ವಿವಾಹವಾದರು.
ಬ್ರಿಟಿಷರು ಮತ್ತು ರಾಣಿ ಲಕ್ಷ್ಮೀಬಾಯಿ ನಡುವಿನ ಯುದ್ಧ:
- ರಾಣಿ ಲಕ್ಷ್ಮೀಬಾಯಿಯವರಿಗೆ ಒಬ್ಬ ಮಗನಿದ್ದನು, ಅವನಿಗೆ ‘ದಾಮೋದರ ರಾವ್’ ಎಂದು ಹೆಸರಿಸಲಾಯಿತು, ಆದರೆ ಅವನು ಹುಟ್ಟಿದ ನಾಲ್ಕು ತಿಂಗಳೊಳಗೆ ಅವನು ಮರಣಹೊಂದಿದನು. ಶಿಶುವಿನ ಮರಣದ ನಂತರ, ಲಕ್ಷ್ಮೀಬಾಯಿಯ ಪತಿ ತನ್ನ ಸೋದರಸಂಬಂಧಿಯೊಬ್ಬರ ‘ಆನಂದ್ ರಾವ್’ ಎಂಬ ಹೆಸರಿನ ಮಗುವನ್ನು ದತ್ತು ಪಡೆದರು ಮತ್ತು ಮಹಾರಾಜರ ಮರಣದ ಒಂದು ದಿನ ಮೊದಲು ಅವರಿಗೆ ‘ದಾಮೋದರ ರಾವ್’ ಎಂದು ಹೆಸರಿಸಲಾಯಿತು.
- ಲಾರ್ಡ್ ಡಾಲ್ಹೌಸಿ ಮಗುವನ್ನು ರಾಜ್ಯದ ಉತ್ತರಾಧಿಕಾರಿಯಾಗಿ ಗುರುತಿಸಲು ನಿರಾಕರಿಸಿದರು ಮತ್ತು ‘ಡಾಕ್ಟ್ರಿನ್ ಆಫ್ ಲ್ಯಾಪ್ಸ್’/’ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ’ಯ (Doctrine of Lapse) ಮೂಲಕ ರಾಜ್ಯವನ್ನು ಬಲವಂತವಾಗಿ ವಶಪಡಿಸಿಕೊಂಡನು. ಆದರೆ, ಲಾರ್ಡ್ ಡಾಲ್ಹೌಸಿಯ ಈ ನಿರ್ಧಾರವನ್ನು ಒಪ್ಪಿಕೊಳ್ಳಲು ರಾಣಿ ಲಕ್ಷ್ಮೀಬಾಯಿ ನಿರಾಕರಿಸಿದರು.
- ಅವರು ಬ್ರಿಟಿಷರ ವಿರುದ್ಧ ವೀರಾವೇಶದಿಂದ ಹೋರಾಡಿದರು ಮತ್ತು ತಮ್ಮ ರಾಜ್ಯವನ್ನು ಉಳಿಸಿಕೊಳ್ಳಲು ಬ್ರಿಟಿಷ್ ಸೇನಾ ನಾಯಕ ಸರ್ ‘ಹ್ಯೂ ರೋಸ್’ (Hugh Rose) ವಿರುದ್ಧ ವೀರಾವೇಶದಿಂದ ಹೋರಾಡಿದರು.
- ಜೂನ್ 17, 1858 ರಂದು, ಯುದ್ಧಭೂಮಿಯಲ್ಲಿ , ರಾಣಿ ಲಕ್ಷ್ಮೀಬಾಯಿ ಯವರು ವೀರಾವೇಶದಿಂದ ಹೋರಾಡುತ್ತಲೇ ವೀರ ಸ್ವರ್ಗವನ್ನು ಹೊಂದಿದರು.
ಏನಿದು ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿ?
‘ಡಾಕ್ಟ್ರಿನ್ ಆಫ್ ಲ್ಯಾಪ್ಸ್’ ಅಥವಾ ‘ದತ್ತು ಮಕ್ಕಳಿಗೆ ಹಕ್ಕಿಲ್ಲ’ (Doctrine of Lapse) ಎಂಬುದು ಸಣ್ಣ ರಾಜ್ಯಗಳು ಮತ್ತು ರಾಜಪ್ರಭುತ್ವದ ರಾಜ್ಯಗಳನ್ನು ಸ್ವಾಧೀನಪಡಿಸಿಕೊಂಡು ಅವುಗಳನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸುವ ನೀತಿಯಾಗಿದೆ. 1848 ರಿಂದ 1856 ರವರೆಗೆ ಭಾರತದ ಗವರ್ನರ್-ಜನರಲ್ ಆಗಿದ್ದ ಅವಧಿಯಲ್ಲಿ ಲಾರ್ಡ್ ಡಾಲ್ಹೌಸಿ ಅವರು ಇದನ್ನು ವ್ಯಾಪಕವಾಗಿ ಜಾರಿಗೊಳಿಸಿದರು.
- ಈ ನೀತಿಯ ಪ್ರಕಾರ, ಈಸ್ಟ್ ಇಂಡಿಯಾ ಕಂಪನಿಯ ನೇರ ಅಥವಾ ಪರೋಕ್ಷ (ಸಾಮಂತನಾಗಿ) ನಿಯಂತ್ರಣದಲ್ಲಿರುವ ಯಾವುದೇ ರಾಜಪ್ರಭುತ್ವದ ರಾಜ್ಯದಲ್ಲಿನ, ಆಡಳಿತಗಾರನು ಯಾವುದೇ ಕಾನೂನುಬದ್ಧ ಪುರುಷ ಉತ್ತರಾಧಿಕಾರಿಯನ್ನು ಹೊಂದಿಲ್ಲದಿದ್ದರೆ, ಅದನ್ನು ಕಂಪನಿಯು ಸ್ವಾಧೀನಪಡಿಸಿಕೊಳ್ಳುತ್ತದೆ.
- ಇದರ ಪ್ರಕಾರ, ಭಾರತೀಯ ಆಡಳಿತಗಾರನ ದತ್ತುಪುತ್ರನನ್ನು ರಾಜ್ಯದ ಉತ್ತರಾಧಿಕಾರಿ ಎಂದು ಘೋಷಿಸಲಾಗುವುದಿಲ್ಲ. ಈ ನೀತಿಯು ತನ್ನ ಆಯ್ಕೆಯ ಉತ್ತರಾಧಿಕಾರಿಯನ್ನು ನೇಮಿಸುವ ಭಾರತೀಯ ಆಡಳಿತಗಾರನ ದೀರ್ಘಕಾಲದ ಹಕ್ಕಿಗೆ ಸವಾಲು ಎಸೆಯಿತು.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.
ಮಾನನಷ್ಟ ಮೊಕದ್ದಮೆ ಪ್ರಕರಣ:
(Defamation case)
ಸಂದರ್ಭ:
ಇತ್ತೀಚೆಗೆ, ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ವಿರುದ್ಧ ‘ಮಾನನಷ್ಟ’ ಮೊಕದ್ದಮೆಯ ಪ್ರಕರಣ ದಾಖಲಾಗಿದೆ. ಸಿಧು ಅವರು ತಮ್ಮ ಭಾಷಣದಲ್ಲಿ ಪಕ್ಷದ ಇಬ್ಬರು ಸದಸ್ಯರನ್ನು ಶ್ಲಾಘಿಸುವ ಭರದಲ್ಲಿ, ಈ ಸದಸ್ಯರು “ಪೊಲೀಸರು ಪ್ಯಾಂಟ್ ಒದ್ದೆ ಮಾಡಿಕೊಳ್ಳುವಂತೆ ಮಾಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ” ಎಂದು ಬಣ್ಣಿಸಿದ್ದರು.
- ಆದರೆ, ವಿವಾದದ ನಂತರ ಸಿದ್ದು ಅವರು ತಮ್ಮ ಹೇಳಿಕೆಯನ್ನು ಅಕ್ಷರಶಃ ತೆಗೆದುಕೊಳ್ಳಬಾರದು ಎಂದು ಹೇಳಿದ್ದಾರೆ. ಅದು ಕಾಂಗ್ರೆಸ್ ಅಧಿಕಾರದಲ್ಲಿದೆ ಎಂದು ಹೇಳುವ ವಿಧಾನವಾಗಿದೆ ಎಂದು ಸಮಜಾಯಿಷಿ ನೀಡಿದ್ದಾರೆ.
‘ಮಾನನಷ್ಟ’ ಎಂದರೇನು?
ಮಾನನಷ್ಟ (Defamation) ಎನ್ನುವುದು ಒಬ್ಬ ವ್ಯಕ್ತಿ, ವ್ಯಾಪಾರ, ಉತ್ಪನ್ನ, ಗುಂಪು, ಸರ್ಕಾರ, ಧರ್ಮ ಅಥವಾ ರಾಷ್ಟ್ರದ ಪ್ರತಿಷ್ಠೆಗೆ ಹಾನಿ ಮಾಡುವ ಸುಳ್ಳು ಹೇಳಿಕೆಗಳ ಸಂವಹನವಾಗಿದೆ.
ಭಾರತದಲ್ಲಿ, ಮಾನನಷ್ಟದ ಸಿವಿಲ್ ಮತ್ತು ಕ್ರಿಮಿನಲ್ ಎರಡೂ ರೂಪಗಳಿವೆ. ಎರಡು ರೀತಿಯ ಮಾನನಷ್ಟಗಳ ನಡುವಿನ ವ್ಯತ್ಯಾಸವು ಅವರ ಉದ್ದೇಶಗಳಲ್ಲಿರುತ್ತದೆ.
- ಸಿವಿಲ್ ಪ್ರಕಾರದ ಮಾನನಷ್ಟದಲ್ಲಿ, ಅಪರಾಧಿಯು ಪರಿಹಾರದ ರೂಪದಲ್ಲಿ ಪರಿಹಾರ ಧನವನ್ನು ನೀಡಬೇಕು ಮತ್ತು ಕ್ರಿಮಿನಲ್/ಅಪರಾಧ ಪ್ರಕಾರದ ಮಾನನಷ್ಟದ ಸಂದರ್ಭದಲ್ಲಿ ಅಪರಾಧಿಯನ್ನು ಶಿಕ್ಷಿಸಲಾಗುತ್ತದೆ, ಹೀಗಾಗಿ ಅಂತಹ ಕೃತ್ಯವನ್ನು ಮಾಡದಂತೆ ಇತರರಿಗೆ ಸಂದೇಶವನ್ನು ನೀಡಲಾಗುತ್ತದೆ.
ಕಾನೂನು ನಿಬಂಧನೆಗಳು:
ಕ್ರಿಮಿನಲ್ ಮಾನನಷ್ಟವನ್ನು ಭಾರತೀಯ ದಂಡ ಸಂಹಿತೆಯ (Indian Penal Code- IPC) ಸೆಕ್ಷನ್ 499 ರ ಅಡಿಯಲ್ಲಿ ನಿರ್ದಿಷ್ಟವಾಗಿ ಅಪರಾಧ ಎಂದು ವ್ಯಾಖ್ಯಾನಿಸಲಾಗಿದೆ.
ಸಿವಿಲ್ ಮಾನನಷ್ಟವು ದೌರ್ಜನ್ಯದ ಕಾನೂನನ್ನು (Tort law) ಆಧರಿಸಿದೆ. ದೌರ್ಜನ್ಯದ ಕಾನೂನು: ದೋಷವನ್ನು ವ್ಯಾಖ್ಯಾನಿಸಲು ಕಾನೂನು ಅಥವಾ ಶಾಸನವನ್ನು ಅವಲಂಬಿಸದ ಕಾನೂನಿನ ಕ್ಷೇತ್ರವಾಗಿದೆ, ಆದರೆ ‘ಏನು ಮಾಡುವುದು ತಪ್ಪಾಗಿರಬಹುದು?’ ಎಂದು ವಿವರಿಸಲು ವಿವಿಧ ಕಾನೂನುಗಳನ್ನು ಬಳಸುತ್ತದೆ.
- ಐಪಿಸಿಯ ಸೆಕ್ಷನ್ 499 ರ ಪ್ರಕಾರ, ಮಾನನಷ್ಟವನ್ನು ಮಾತನಾಡುವ ಅಥವಾ ಓದಬಹುದಾದ ಪದಗಳ ಮೂಲಕ, ಚಿಹ್ನೆಗಳ ಮೂಲಕ ಮತ್ತು ಗೋಚರ ಅಭಿವ್ಯಕ್ತಿಯ ಮೂಲಕ ಮಾಡಬಹುದು ಎಂದು ಹೇಳುತ್ತದೆ.
- ಸೆಕ್ಷನ್ 499 ರಲ್ಲಿ ವಿನಾಯಿತಿಗಳನ್ನು ಸಹ ಉಲ್ಲೇಖಿಸಲಾಗಿದೆ. ಇವುಗಳಲ್ಲಿ ‘ಸಾರ್ವಜನಿಕ ಹಿತಾಸಕ್ತಿ’ಯಲ್ಲಿ ಅಗತ್ಯವಾದ ‘ಸತ್ಯ’ವನ್ನು ಹೇಳುವುದು ಅಥವಾ ಪ್ರಕಟಿಸುವುದು ಮಾನನಷ್ಟದ ಅಡಿಯಲ್ಲಿ ಬರುವುದಿಲ್ಲ.
- ಮಾನನಷ್ಟಕ್ಕಾಗಿ ಶಿಕ್ಷೆಗೆ ಸಂಬಂಧಿಸಿದಂತೆ IPC ಯ ಸೆಕ್ಷನ್ 500 ರ ಪ್ರಕಾರ, ಇನ್ನೊಬ್ಬ ವ್ಯಕ್ತಿಯನ್ನು ಮಾನಹಾನಿ ಮಾಡುವ ಯಾವುದೇ ವ್ಯಕ್ತಿಗೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಸರಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.
ಮಾನನಷ್ಟ ಕಾನೂನಿನ ದುರ್ಬಳಕೆ ಮತ್ತು ಸಂಬಂಧಿತ ಕಾಳಜಿಗಳು:
- ಇದರ ಅಡಿಯಲ್ಲಿ, ಕ್ರಿಮಿನಲ್ ನಿಬಂಧನೆಗಳನ್ನು ಸಾಮಾನ್ಯವಾಗಿ ಕಿರುಕುಳದ ಸಾಧನವಾಗಿ ಬಳಸಲಾಗುತ್ತದೆ.
- ಭಾರತೀಯ ಕಾನೂನು ಪ್ರಕ್ರಿಯೆಯ ತೊಡಕಿನ ಸ್ವರೂಪವನ್ನು ಗಮನಿಸಿದರೆ, ಪ್ರಕರಣದ ಗಂಭೀರತೆಯನ್ನು ಲೆಕ್ಕಿಸದೆಯೇ, ಕಾರ್ಯವಿಧಾನವು ಶಿಕ್ಷೆಯಾಗಿ ಬದಲಾಗುತ್ತದೆ.
- ಮಾನನಷ್ಟ ಕಾನೂನುಗಳು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳೊಂದಿಗೆ ಸಂಘರ್ಷಿಸುತ್ತವೆ ಎಂದು ವಿಮರ್ಶಕರು ವಾದಿಸುತ್ತಾರೆ.
- ಕ್ರಿಮಿನಲ್ ಮಾನನಷ್ಟವು ಸಮಾಜದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ: ಉದಾಹರಣೆಗೆ, ರಾಜ್ಯವು ಕ್ರಿಮಿನಲ್ ಮಾನನಷ್ಟ ವನ್ನು ಮಾಧ್ಯಮಗಳು ಮತ್ತು ರಾಜಕೀಯ ವಿರೋಧಿಗಳನ್ನು ಟೀಕೆಗಳಿಂದ ದೂರವಿರಿಸಲು ಮತ್ತು ಅಗತ್ಯ ಸಂಯಮವನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಲು ಒಂದು ಸಾಧನವಾಗಿ ಬಳಸುತ್ತದೆ.
ಸರ್ವೋಚ್ಚ ನ್ಯಾಯಾಲಯದ ಅವಲೋಕನಗಳು:
- 2014 ರ ಸುಬ್ರಮಣಿಯನ್ ಸ್ವಾಮಿ VS ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ, ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500 (ಕ್ರಿಮಿನಲ್ ಮಾನನಷ್ಟ) ಗಳ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿದೆ ಮತ್ತು ಒಬ್ಬ ವ್ಯಕ್ತಿಗೆ ಸ್ವಾತಂತ್ರ್ಯವಿದೆ ಎಂಬ ಕಾರಣಕ್ಕಾಗಿ ಇನ್ನೊಬ್ಬ ವ್ಯಕ್ತಿಯ ‘ಗೌರವ ಮತ್ತು ಘನತೆಯಿಂದ ಬದುಕುವ ಹಕ್ಕನ್ನು’ ಯಾರಿಂದಲೂ ಹಾಳುಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
- ಆಗಸ್ಟ್ 2016 ರಲ್ಲಿ ನ್ಯಾಯಾಲಯವು ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು “ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸಲು” ಕ್ರಿಮಿನಲ್ ಮಾನನಷ್ಟ ಕಾನೂನನ್ನು ದುರುಪಯೋಗ ಪಡಿಸಿಕೊಂಡಿದ್ದಕ್ಕಾಗಿ ಅವರನ್ನು ತೀವ್ರವಾಗಿ ಟೀಕಿಸುತ್ತ “ಸಾರ್ವಜನಿಕ ವ್ಯಕ್ತಿಗಳು” ಟೀಕೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿತ್ತು.
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
PESA ಕಾಯಿದೆ:
(PESA Act)
ಸಂದರ್ಭ:
ಇತ್ತೀಚೆಗಷ್ಟೇ ಒಡಿಶಾದ ಸಂಬಲ್ಪುರದಲ್ಲಿ ‘ಕೆಂದು ಎಲೆ’ (Kendu Leaf) ಗಳ ಮೇಲೆ ಹೇರಿರುವ ಜಿಎಸ್ಟಿಯನ್ನು ರದ್ದುಪಡಿಸುವಂತೆ ಆಗ್ರಹಿಸಿ ಕೆಂದು ಎಲೆ ಕೀಳುವ ಮತ್ತು ಕಟ್ಟುವ ನೂರಾರು ಕಾರ್ಮಿಕರು ಪ್ರತಿಭಟನೆ ನಡೆಸಿದರು.
ಏನಿದು ಪ್ರಕರಣ?
ಪ್ರಸ್ತುತ, 18 ಪ್ರತಿಶತ ‘ಸರಕು ಮತ್ತು ಸೇವಾ ತೆರಿಗೆ’ ಅಂದರೆ ‘ಜಿಎಸ್ಟಿ’ಯನ್ನು ಕೆಂದು ಎಲೆಗಳ ಮೇಲೆ ವಿಧಿಸಲಾಗುತ್ತದೆ, ಇದು ಅರಣ್ಯ ಹಕ್ಕು ಕಾಯಿದೆ, 2006 (Forest Rights Act 2006) ಮತ್ತು 25 ವರ್ಷಗಳನ್ನು ಪೂರ್ಣಗೊಳಿಸಿರುವ ಸಂಭ್ರಮಾಚರಣೆಯಲ್ಲಿರುವ ‘ಪಂಚಾಯತ್ಗಳ (ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) ಕಾಯಿದೆ, 1996’ (ಪಂಚಾಯತ್ಗಳು (Panchayats (Extension to Scheduled Areas) Act, 1996) ಅಂದರೆ ‘PESA ಕಾಯ್ದೆ’ಗೆ ವಿರುದ್ಧವಾಗಿದೆ.
ಇದಲ್ಲದೆ, ‘ಕೆಂದು ಎಲೆ’ಯಿಂದ ತಯಾರಾದ ‘ಬೀಡಿ’ಗೆ ಸರಕಾರ ಶೇ.28ರಷ್ಟು ಜಿಎಸ್ಟಿ ವಿಧಿಸಿದೆ.ಈ ದುಪ್ಪಟ್ಟು ತೆರಿಗೆಯಿಂದ ‘ಕೆಂದು ಎಲೆ ಸಂಘಟನೆ’ಯ ಲಾಭಕ್ಕೆ ಸಾಕಷ್ಟು ನಷ್ಟ ಉಂಟಾಗಿದ್ದು, ಸುಮಾರು 12 ಲಕ್ಷ ಕಾರ್ಮಿಕರ ಜೀವನೋಪಾಯಕ್ಕೆ ತೊಂದರೆಯಾಗಿದೆ. ಇದರೊಂದಿಗೆ ಕೆಂದು ಎಲೆ ಉದ್ಯಮದಲ್ಲಿ ತೊಡಗಿರುವ ಕಾರ್ಮಿಕರ ಲಾಭದಲ್ಲಿ ಸಾಕಷ್ಟು ಕಡಿಮೆ ಯಾಗುವುದರ ಜೊತೆಗೆ, ಅವರು ಈಗ ಅನೇಕ ಸಾಮಾಜಿಕ ಭದ್ರತೆ ಪ್ರಯೋಜನಗಳಿಂದ ವಂಚಿತರಾಗಿದ್ದಾರೆ.
ಕೆಂದು ಎಲೆಯ ಕುರಿತು:
- ‘ಕೆಂದು ಎಲೆಗಳನ್ನು ಒರಿಸ್ಸಾದ ಹಸಿರು ಚಿನ್ನ’ ಎಂದು ಕರೆಯಲಾಗುತ್ತದೆ.ಇದು ಬಿದಿರು ಮತ್ತು ಸಾಲ್ ಬೀಜಗಳಂತಹ ‘ರಾಷ್ಟ್ರೀಕೃತ ಉತ್ಪನ್ನ’ (Nationalised Product) ವಾಗಿದೆ. ಇದು ಒಡಿಶಾದ ಪ್ರಮುಖ ‘ಮರವಲ್ಲದ ಅರಣ್ಯ ಉತ್ಪನ್ನ’ (Non-Wood Forest Products) ಗಳಲ್ಲಿ ಒಂದಾಗಿದೆ.
- ಇದರ ಎಲೆಗಳನ್ನು ಸುತ್ತಿ ‘ಬೀಡಿ’ ತಯಾರಿಸಲಾಗುತ್ತದೆ, ಇದನ್ನು ಸ್ಥಳೀಯರಲ್ಲಿ ಜನಪ್ರಿಯ ಹೊಗೆಸೊಪ್ಪಾಗಿ ಬಳಸಲಾಗುತ್ತದೆ.
- ಒಡಿಶಾದ ತೆಂಡು (ಕೆಂಡು) ಎಲೆಯನ್ನು ಅದರ ‘ಸಂಸ್ಕರಿಸಿದ ರೂಪದಲ್ಲಿ’ (Processed Form) ಅನನ್ಯವಾಗಿ ಬಳಸಲಾಗುತ್ತದೆ, ಆದರೆ ಇದನ್ನು ಭಾರತದ ಉಳಿದ ರಾಜ್ಯಗಳಲ್ಲಿ ಹಣ್ಣಿನ ರೂಪದಲ್ಲಿ ಉತ್ಪಾದಿಸಲಾಗುತ್ತದೆ.
- ಸಾಂಪ್ರದಾಯಿಕ ವೈದ್ಯರು ಮಲೇರಿಯಾ, ಅತಿಸಾರ ಮತ್ತು ಭೇದಿಗಳಿಗೆ ಚಿಕಿತ್ಸೆ ನೀಡಲು ಈ ಚಿಕ್ಕ ಕೆಂದು ಹಣ್ಣುಗಳನ್ನು ಬಳಸುತ್ತಾರೆ.
- ‘ಕೆಂದು ಎಲೆಗಳು’ ರಾಜ್ಯದ ಪ್ರಮುಖ ‘ಸಣ್ಣ ಅರಣ್ಯ ಉತ್ಪನ್ನ’ ಆಗಿರುವುದರಿಂದ, ಇದು ಬುಡಕಟ್ಟು ಹಳ್ಳಿಗಳ ಪ್ರಮುಖ ಆದಾಯದ ಮೂಲವಾಗಿದೆ.
- ಮಧ್ಯಪ್ರದೇಶ ಮತ್ತು ಛತ್ತೀಸ್ಗಢದ ನಂತರ ಒಡಿಶಾ ಕೆಂದು ಎಲೆಗಳ ಮೂರನೇ ಅತಿದೊಡ್ಡ ಉತ್ಪಾದಕ ರಾಜ್ಯವಾಗಿದೆ.
PESA ಕಾಯಿದೆ, 1996 ಕುರಿತು:
ಪಂಚಾಯತ್ಗಳ (ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) ಕಾಯಿದೆ, 1996 ಅಥವಾ PESA ಕಾಯಿದೆಯು ಭಾರತದ ಪರಿಶಿಷ್ಟ/ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಾಂಪ್ರದಾಯಿಕ ಗ್ರಾಮ ಸಭೆಗಳ ಮೂಲಕ ಸ್ವ-ಆಡಳಿತವನ್ನು ಖಾತ್ರಿಪಡಿಸಿಕೊಳ್ಳಲು ಭಾರತ ಸರ್ಕಾರವು ಜಾರಿಗೊಳಿಸಿದ ಕಾನೂನಾಗಿದೆ.
- ಇದನ್ನು 1996 ರಲ್ಲಿ ಸಂಸತ್ತು ಜಾರಿಗೊಳಿಸಿತು ಮತ್ತು ಡಿಸೆಂಬರ್ 24, 1996 ರಂದು ಜಾರಿಗೆ ಬಂದಿತು.
- PESA ಕಾಯ್ದೆಯನ್ನು ಭಾರತದಲ್ಲಿ ಬುಡಕಟ್ಟು ಶಾಸನದ ಬೆನ್ನೆಲುಬು ಎಂದು ಪರಿಗಣಿಸಲಾಗಿದೆ.
- PESA ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಸಾಂಪ್ರದಾಯಿಕ ವ್ಯವಸ್ಥೆಯನ್ನು ಗುರುತಿಸುತ್ತದೆ ಮತ್ತು ಜನರ ಸ್ವ-ಆಡಳಿತವನ್ನು ಬೆಂಬಲಿಸುತ್ತದೆ.
ಹಿನ್ನೆಲೆ:
ಗ್ರಾಮೀಣ ಭಾರತದಲ್ಲಿ ಸ್ಥಳೀಯ ಸ್ವ-ಆಡಳಿತವನ್ನು ಉತ್ತೇಜಿಸಲು, 1992 ರಲ್ಲಿ ಸಾಂವಿಧಾನಕ್ಕೆ 73 ನೇ ತಿದ್ದುಪಡಿಯನ್ನು ತರಲಾಯಿತು. ಈ ತಿದ್ದುಪಡಿಯ ಮೂಲಕ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಯನ್ನು ಶಾಸನಬದ್ಧ ಗೊಳಿಸಲಾಯಿತು.
- ಆದಾಗ್ಯೂ, ಅನುಚ್ಛೇದ 243(M) ಅಡಿಯಲ್ಲಿ ಪರಿಶಿಷ್ಟ ಮತ್ತು ಬುಡಕಟ್ಟು ಪ್ರದೇಶಗಳಿಗೆ ಅದರ ಅನ್ವಯವನ್ನು ನಿರ್ಬಂಧಿಸಲಾಗಿದೆ.
- 1995 ರಲ್ಲಿ ಭೂರಿಯಾ ಸಮಿತಿಯ ಶಿಫಾರಸುಗಳ ನಂತರ, ಭಾರತದ ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಬುಡಕಟ್ಟು ಸ್ವ-ಆಡಳಿತವನ್ನು ಖಾತ್ರಿಪಡಿಸಲು ಬುಡಕಟ್ಟು ಪ್ರದೇಶಗಳಿಗೆ ಪಂಚಾಯತ್ ವಿಸ್ತರಣೆ (PESA) ಕಾಯಿದೆ 1996 ಅಸ್ತಿತ್ವಕ್ಕೆ ಬಂದಿತು.
- PESA ಗ್ರಾಮ ಸಭೆಗೆ ಸಂಪೂರ್ಣ ಅಧಿಕಾರವನ್ನು ನೀಡಿದೆ, ಆದರೆ ರಾಜ್ಯ ಶಾಸಕಾಂಗವು ಪಂಚಾಯತ್ ಮತ್ತು ಗ್ರಾಮ ಸಭೆಗಳ ಸರಿಯಾದ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸಲಹಾತ್ಮಕ ಪಾತ್ರವನ್ನು ಹೊಂದಿದೆ.
- ಗ್ರಾಮ ಸಭೆಗೆ ನಿಯೋಜಿಸಲಾದ ಅಧಿಕಾರವನ್ನು ಉನ್ನತ ಮಟ್ಟದಿಂದ ಮೊಟಕುಗೊಳಿಸಲಾಗುವುದಿಲ್ಲ ಮತ್ತು ಅದು ತನ್ನ ಕಾರ್ಯವೈಖರಿಗೆ ಸಂಪೂರ್ಣ ಸ್ವಾತಂತ್ರವನ್ನು ಹೊಂದಿರುತ್ತದೆ.
ಗ್ರಾಮ ಸಭೆಗಳಿಗೆ ನೀಡಲಾದ ಅಧಿಕಾರಗಳು ಮತ್ತು ಕಾರ್ಯಗಳು:
- ಸ್ಥಳಾಂತರಗೊಂಡ ವ್ಯಕ್ತಿಗಳ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ವಸತಿಯಲ್ಲಿ ಕಡ್ಡಾಯ ಸಮಾಲೋಚನೆಯ ಹಕ್ಕು.
- ಸಾಂಪ್ರದಾಯಿಕ ನಂಬಿಕೆ, ಬುಡಕಟ್ಟು ಸಮುದಾಯಗಳ ಸಂಸ್ಕೃತಿಯ ರಕ್ಷಣೆ
- ಕಿರು ಅರಣ್ಯ ಉತ್ಪನ್ನಗಳ ಮಾಲೀಕತ್ವ
- ಸ್ಥಳೀಯ ವಿವಾದಗಳ ಪರಿಹಾರ
- ಭೂ ಪರಭಾರೆ ತಡೆಗಟ್ಟುವಿಕೆ
- ಗ್ರಾಮೀಣ ಮಾರುಕಟ್ಟೆಗಳ ನಿರ್ವಹಣೆ
- ಮದ್ಯದ ಉತ್ಪಾದನೆ, ಬಟ್ಟಿ ಇಳಿಸುವಿಕೆ ಮತ್ತು ನಿಷೇಧವನ್ನು ನಿಯಂತ್ರಿಸುವ ಹಕ್ಕು.
- ಲೇವಾದೇವಿ ವ್ಯವಹಾರದ ಮೇಲೆ ನಿಯಂತ್ರಣದ ಹಕ್ಕು.
- ಬುಡಕಟ್ಟು ಪಂಗಡಗಳನ್ನು ಒಳಗೊಂಡಿರುವ ಯಾವುದೇ ಇತರ ಹಕ್ಕುಗಳು.
PESA ಗೆ ಸಂಬಂಧಿಸಿದ ಸಮಸ್ಯೆಗಳು:
ರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ರಾಜ್ಯ ಸರ್ಕಾರಗಳು ತಮ್ಮ ಬುಡಕಟ್ಟು ಪ್ರದೇಶಗಳಿಗೆ ರಾಜ್ಯ ಕಾನೂನುಗಳನ್ನು ಜಾರಿಗೊಳಿಸಬೇಕು. ಇದು PESA ಕಾಯ್ದೆಯನ್ನು ಭಾಗಶಃ ಜಾರಿಗೆ ತಂದಿದೆ ಅಥವಾ PESA ಕಾಯ್ದೆಯ ಸಂಪೂರ್ಣ ಜಾರಿಗೊಳಿಸುವಿಕೆಗೆ ತೊಡಕಾಗಿದೆ.
- PESA ಕಾಯ್ದೆಯ ಭಾಗಶಃ ಅನುಷ್ಠಾನವು ಜಾರ್ಖಂಡ್ನಂತೆಯೇ ಆದಿವಾಸಿ ಪ್ರದೇಶಗಳಲ್ಲಿ ಸ್ವ-ಆಡಳಿತ ವ್ಯವಸ್ಥೆಯನ್ನು ಹದಗೆಡಿಸಿದೆ.
- ಸ್ಪಷ್ಟತೆಯ ಕೊರತೆ, ಕಾನೂನು ದೌರ್ಬಲ್ಯ, ಅಧಿಕಾರಶಾಹಿ ನಿರಾಸಕ್ತಿ, ರಾಜಕೀಯ ಇಚ್ಛಾಶಕ್ತಿಯ ಕೊರತೆ, ಅಧಿಕಾರದ ಕ್ರಮಾನುಗತದಲ್ಲಿನ ಬದಲಾವಣೆಗೆ ಪ್ರತಿರೋಧ ಇತ್ಯಾದಿಗಳಿಂದಾಗಿ PESA ಕಾಯ್ದೆಯು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ ಎಂದು ಅನೇಕ ತಜ್ಞರು ಪ್ರತಿಪಾದಿಸಿದ್ದಾರೆ.
- ರಾಜ್ಯಾದ್ಯಂತ ನಡೆಸಲಾದ ಸಾಮಾಜಿಕ ಲೆಕ್ಕಪರಿಶೋಧನೆಗಳ ಪ್ರಕಾರ,ವಾಸ್ತವವಾಗಿ ಯಾವುದೇ ಸಭೆಯನ್ನು ಕರೆದು ಚರ್ಚೆ ಮಾಡದೆ ಮತ್ತು ನಿರ್ಧಾರ ತೆಗೆದುಕೊಳ್ಳದೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಗ್ರಾಮ ಸಭೆಯಿಂದ ಕಾಗದದ ಮೇಲೆ ಮಂಜೂರಾತಿ ನೀಡಲಾಗಿದೆ.
ವಿಷಯಗಳು:ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
ಕೆನ್-ಬೆಟ್ವಾ ಅಂತರ್ ನದಿಜೋಡಣೆಗೆ ಒಪ್ಪಿಗೆ:
(Nod for Ken-Betwa link project)
ಸಂದರ್ಭ:
ಹೊಸ ಅಧ್ಯಯನದ ಪ್ರಕಾರ, ಕೆನ್-ಬೆಟ್ವಾ ನದಿ ಜೋಡಣೆ ಯೋಜನೆ (Ken-Betwa river interlinking project)ಯಿಂದಾಗಿ ಮಧ್ಯಪ್ರದೇಶದ ‘ಪನ್ನಾ ಹುಲಿ ಮೀಸಲು’ (Panna Tiger Reserve) ಪ್ರದೇಶದ ಪ್ರಮುಖ ಭಾಗವು ಮುಳುಗಡೆಯಾಗಲಿದೆ ,ಇದು ಹುಲಿ ಮತ್ತು ಅದರ ಪ್ರಮುಖ ಬೇಟೆಯ ಪ್ರಾಣಿಗಳಾದ ಚಿತಾಲ್ ಮತ್ತು ಸಾಂಬಾರ್ ಗಳಿಗೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ.
ಪ್ರಸ್ತುತ ಕಾಳಜಿಗಳು:
- ಈ ಯೋಜನೆಯು ‘ಪನ್ನಾ ಟೈಗರ್ ರಿಸರ್ವ್’ ನಲ್ಲಿ 58.03 ಚದರ ಕಿಲೋಮೀಟರ್ (10.07 ಪ್ರತಿಶತ) ಪ್ರದೇಶದಷ್ಟು ‘ಕ್ರಿಟಿಕಲ್ ಟೈಗರ್ ಹ್ಯಾಬಿಟೇಟ್’ ಅಥವಾ ನಿರ್ಣಾಯಕ ಹುಲಿ ಆವಾಸಸ್ಥಾನವನ್ನು ನಾಶಪಡಿಸಬಹುದು.
- ಅಧ್ಯಯನದ ಪ್ರಕಾರ, ಆವಾಸಸ್ಥಾನದ ವಿಘಟನೆ ಮತ್ತು ‘ಮುಳುಗುವಿಕೆಯಿಂದಾಗಿ ಸಂಪರ್ಕ ಕಡಿತ’ದಿಂದಾಗಿ ಪರೋಕ್ಷವಾಗಿ ಸುಮಾರು 105.23 ಚದರ ಕಿ.ಮೀ ‘ನಿರ್ಣಾಯಕ ಹುಲಿ ಆವಾಸಸ್ಥಾನ’ ನಾಶವಾಗುತ್ತದೆ.
- ಯೋಜನೆಯಿಂದ ಒಟ್ಟು 86.50 ಚದರ ಕಿ.ಮೀ ಪ್ರದೇಶವು ಮುಳುಗಡೆಯಾಗಲಿದ್ದು, ಈ ಪೈಕಿ 57.21 ಚ.ಕಿ.ಮೀ ಪ್ರದೇಶವು ‘ಪನ್ನಾ ಹುಲಿ ಸಂರಕ್ಷಿತ ಪ್ರದೇಶ’ ವ್ಯಾಪ್ತಿಯಲ್ಲಿ ಬರುತ್ತದೆ. ಇದು ಒಟ್ಟು ಮುಳುಗಿದ ಪ್ರದೇಶದ ಶೇಕಡಾ 65.50 ಆಗಿರುತ್ತದೆ.
- ಕೆನ್-ಬೆಟ್ವಾ ನದಿ ಜೋಡಣೆ ಯೋಜನೆ (Ken-Betwa river interlinking project – KBRIL) ಯಿಂದ ಮುಳುಗಡೆಯಾಗುವ ಪ್ರದೇಶವು ಸಮೃದ್ಧ ಹೂವಿನ ಸಾಂದ್ರತೆ ಮತ್ತು ವೈವಿಧ್ಯತೆಯನ್ನು ಹೊಂದಿದೆ. ಸಾಂಬಾರ್, ಚಿತಾಲ್, ಬ್ಲೂ ಬುಲ್ ಮತ್ತು ಕಾಡುಹಂದಿಗಳಂತಹ ಪ್ರಾಣಿಗಳು ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ.
ಧನಸಹಾಯ:
2020-21ರ ಬೆಲೆಗಳ ಆಧಾರದ ಮೇಲೆ ರೂ 44,605 ಕೋಟಿ ವೆಚ್ಚದಲ್ಲಿ ‘ಕೆನ್-ಬೆಟ್ವಾ ನದಿ ಜೋಡಣೆ ಯೋಜನೆಗೆ’ (Ken-Betwa river interlinking project) ಧನಸಹಾಯ ನೀಡಲು ಮತ್ತು ಅನುಷ್ಠಾನಕ್ಕೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.
- ಈ ಯೋಜನೆಗೆ ಕೇಂದ್ರವೂ ₹.39,317 ಕೋಟಿ ನೀಡಲಿದ್ದು ಅದರಲ್ಲಿ ₹.36,290 ಕೋಟಿ ಅನುದಾನದ ರೂಪದಲ್ಲಿದ್ದರೆ ಹಾಗೂ ₹.3,027 ಕೋಟಿ ಗಳನ್ನು ಸಾಲದ ರೂಪದಲ್ಲಿ ಮಂಜೂರು ಮಾಡಿದೆ.
ಈ ಯೋಜನೆಯ ಕುರಿತು:
ಎರಡು ಭಾಗಗಳ ಯೋಜನೆಯಾಗಿ ‘ಕಲ್ಪಿಸಲಾಗಿರುವ’ ಕೆನ್-ಬೆಟ್ವಾ ಯೋಜನೆಯು ‘ದೇಶದ ಮೊದಲ ಅಂತರ್ ನದಿ ಸಂಪರ್ಕ ಯೋಜನೆಯಾಗಿದೆ.
ಈ ಯೋಜನೆಯಡಿ ಕೆನ್ ನೀರನ್ನು ಬೆಟ್ವಾ ನದಿಗೆ ಕಳುಹಿಸಲಾಗುವುದು. ದೌಧಮ್ ಅಣೆಕಟ್ಟು ಮತ್ತು ಎರಡೂ ನದಿಗಳನ್ನು ಸಂಪರ್ಕಿಸುವ ಕಾಲುವೆ, ಲೋವರ್ ಓರ್ ಯೋಜನೆ (Lower Orr Project), ಕೋಥಾ ಬ್ಯಾರೇಜ್ ಮತ್ತು ಬಿನಾ ಕಾಂಪ್ಲೆಕ್ಸ್ (Bina Complex Multipurpose Project) ವಿವಿದೋದ್ದೇಶ ಯೋಜನೆಗಳ ಮೂಲಕ ಇದನ್ನು ಸಾಧಿಸಲಾಗುತ್ತದೆ.
ಈ ಯೋಜನೆಯನ್ನು ಎಂಟು ವರ್ಷಗಳಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ.
ಇದನ್ನು ಅಂತರರಾಜ್ಯ ನದಿ ವರ್ಗಾವಣೆ ಕಾರ್ಯಾಚರಣೆಯ ಮಾದರಿ ಯೋಜನೆಯೆಂದು ಪರಿಗಣಿಸಲಾಗಿದೆ.
ಮಧ್ಯಪ್ರದೇಶದ ಕೆನ್ ನದಿಯಿಂದ ಹೆಚ್ಚುವರಿ ನೀರನ್ನು ಉತ್ತರ ಪ್ರದೇಶದ ಬೆಟ್ವಾ ನದಿಗೆ ವರ್ಗಾಯಿಸುವುದು ಈ ಯೋಜನೆಯ ಉದ್ದೇಶವಾಗಿದ್ದು, ಎರಡು ರಾಜ್ಯಗಳ ಮಧ್ಯೆ ಹರಡಿರುವ ಬುಂದೇಲ್ಖಂಡ್ ಪ್ರದೇಶದ ಬರ ಪೀಡಿತ ಜಿಲ್ಲೆಗಳಾದ ಝಾನ್ಸಿ, ಬಂಡಾ, ಲಲಿತ್ಪುರ ಮತ್ತು ಮಹೋಬಾ ಜಿಲ್ಲೆಗಳು ಉತ್ತರ ಪ್ರದೇಶ ಮತ್ತು ಟಿಕಮ್ಗಡ್, ಪನ್ನಾ ಮತ್ತು ಛತ್ತರ್ಪುರ- ಮಧ್ಯಪ್ರದೇಶ ಈ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯವನ್ನು ಒದಗಿಸಬಹುದು.
ಯೋಜನೆಯ ಮಹತ್ವ:
- ಈ ಯೋಜನೆಯು ವಾರ್ಷಿಕವಾಗಿ 10.62 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸುತ್ತದೆ, ಸುಮಾರು 62 ಲಕ್ಷ ಜನಸಂಖ್ಯೆಗೆ ಕುಡಿಯುವ ನೀರನ್ನು ಒದಗಿಸುತ್ತದೆ ಮತ್ತು 103 MW ಜಲವಿದ್ಯುತ್ ಮತ್ತು 27 MW ಸೌರ ವಿದ್ಯುತ್ ಉತ್ಪಾದಿಸುತ್ತದೆ.
- ನೀರಿನ ಕೊರತೆ ಎದುರಿಸುತ್ತಿರುವ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ ರಾಜ್ಯಗಳ ಬುಂದೇಲ್ಖಂಡ್ ಪ್ರದೇಶಕ್ಕೆ ಈ ಯೋಜನೆಯು ತುಂಬಾ ಪ್ರಯೋಜನಕಾರಿಯಾಗಿದೆ.
- ಈ ಯೋಜನೆಯು ಕೃಷಿ ಚಟುವಟಿಕೆಗಳನ್ನು ಹೆಚ್ಚಿಸುವ ಮತ್ತು ಉದ್ಯೋಗವನ್ನು ಸೃಷ್ಟಿಸುವ ಮೂಲಕ ಹಿಂದುಳಿದ ಬುಂದೇಲ್ಖಂಡ ಪ್ರದೇಶದಲ್ಲಿ ಸಾಮಾಜಿಕ-ಆರ್ಥಿಕ ಸಮೃದ್ಧಿಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.
- ಈ ಪ್ರದೇಶದಲ್ಲಿನ ಬಿಕ್ಕಟ್ಟಿನಿಂದಾಗಿ ನಡೆಯುವ ಯಾತನಾಮಯವಾದ ವಲಸೆಯನ್ನು ತಡೆಯಲು ಇದು ಸಹಾಯ ಮಾಡುತ್ತದೆ.
ಸಂಬಂಧಿಸಿದ ಕಾಳಜಿಗಳು:
ಹಲವಾರು ಅಡೆತಡೆಗಳಿಂದಾಗಿ ಈ ಯೋಜನೆಯ ಮೇಲೆ ಪರಿಣಾಮ ಬೀರಬಹುದು:
- ಈ ಯೋಜನೆಯೊಂದಿಗೆ, ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶವು ಭಾಗಶಃ ಮುಳುಗಡೆ ಯಾಗುತ್ತದೆ, ಇದು ಇತರ ಪ್ರಾಣಿ ಪಕ್ಷಿಗಳಾದ ರಣಹದ್ದುಗಳು ಮತ್ತು ನರಿಗಳು ಸೇರಿದಂತೆ ಅವುಗಳ ಆವಾಸಸ್ಥಾನಗಳ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.
- ಹಲವಾರು ವರ್ಷಗಳ ಪ್ರತಿಭಟನೆಯ ನಂತರ, ಯೋಜನೆಯು ಅಂತಿಮವಾಗಿ 2016 ರಲ್ಲಿ ಅತ್ಯುನ್ನತ ವನ್ಯಜೀವಿ ನಿಯಂತ್ರಕವಾದ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಅನುಮೋದಿಸಲ್ಪಟ್ಟಿತು.
ಇಂಟರ್ಲಿಂಕಿಂಗ್ ನ ಪ್ರಯೋಜನಗಳು:
- ನೀರು ಮತ್ತು ಆಹಾರ ಭದ್ರತೆಯಲ್ಲಿ ಹೆಚ್ಚಳ
- ನೀರಿನ ಸರಿಯಾದ ಬಳಕೆ.
- ಕೃಷಿಯನ್ನು ಉತ್ತೇಜಿಸಬಹುದು
- ವಿಪತ್ತು ತಗ್ಗಿಸುವಿಕೆ
- ಸಾರಿಗೆಗೆ ಉತ್ತೇಜನ.
ಪ್ರಮುಖ ಅಂಶಗಳು:
- ಕೆನ್ ಮತ್ತು ಬೆಟ್ವಾ ನದಿಗಳು ಮಧ್ಯಪ್ರದೇಶದಲ್ಲಿ ಉಗಮವಾಗುತ್ತವೆ ಮತ್ತು ಇವು ಯಮುನಾ ನದಿಯ ಉಪನದಿಗಳಾಗಿವೆ.
- ಕೇನ್ ನದಿ ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯಲ್ಲಿ ಯಮುನಾ ನದಿಯನ್ನು ಮತ್ತು ಹಮೀರ್ಪುರ ಜಿಲ್ಲೆಯಲ್ಲಿ ಬೆಟ್ವಾ ನದಿಯನ್ನು ಸೇರುತ್ತದೆ.
- ಬೆಟ್ವಾ ನದಿಗೆ ರಾಜ್ಘಾಟ್, ಪರಿಚಾ ಮತ್ತು ಮಾತತಿಲಾ ಎಂಬ ಅಣೆಕಟ್ಟುಗಳನ್ನು ಕಟ್ಟಲಾಗಿದೆ.
- ಕೇನ್ ನದಿ ಪನ್ನಾ ಹುಲಿ ಮೀಸಲು ಪ್ರದೇಶದ ಮೂಲಕ ಹಾದುಹೋಗುತ್ತದೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 3
ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಜಾಗೃತಿ.
GM ಆಹಾರಕ್ಕಾಗಿ ಕರಡು ನಿಯಮಾವಳಿಗಳನ್ನು ಬಿಡುಗಡೆ ಮಾಡಿದ FSSAI:
(FSSAI releases draft regulations for GM foods)
ಸಂದರ್ಭ:
ರೈತರ ನಡುವೆ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತರು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (Food Safety and Standards Authority of India – FSSAI) ತಳೀಯವಾಗಿ ಮಾರ್ಪಡಿಸಿದ (Genetically Modified – GM) ಆಹಾರಗಳ ಕರಡು ನಿಯಮಗಳನ್ನು ವಿರೋಧಿಸುತ್ತಿದ್ದಾರೆ ಮತ್ತು ಈ ನಿಯಮಗಳು “ಸ್ವೀಕಾರಾರ್ಹವಲ್ಲ” ಎಂದು ಹೇಳಿದ್ದಾರೆ.
ಅವರ ಬೇಡಿಕೆ:
ಉತ್ಪಾದನೆ ಅಥವಾ ಆಮದುಗಳ ಮೂಲಕ ಭಾರತದಲ್ಲಿ ‘GM ಆಹಾರ’ಗಳನ್ನು ಅನುಮತಿಸಲಾಗುವುದಿಲ್ಲ ಎಂದು FSSAI ಸ್ಪಷ್ಟವಾಗಿ ಹೇಳಬೇಕು ಎಂದು ಈ ಕಾರ್ಯಕರ್ತರು ಹೇಳುತ್ತಾರೆ.
ಕಾರಣ, ಅವರ ಪ್ರಕಾರ, ಭಾರತದಲ್ಲಿ ಯಾವುದೇ ರೀತಿಯ ‘ವಂಶವಾಹಿ ವರ್ಧಿತ’ ಅಥವಾ ತಳೀಯವಾಗಿ ಮಾರ್ಪಡಿಸಿದ ಆಹಾರವು ನಮ್ಮ ಜನರ ಆರೋಗ್ಯಕ್ಕೆ, ನಮ್ಮ ಪರಿಸರ ಮತ್ತು ಭಾರತದ ವೈವಿಧ್ಯಮಯ ಆಹಾರ ಸಂಸ್ಕೃತಿಗಳಿಗೆ ಅಪಾಯಕಾರಿಯಾಗಿದೆ.
ಹಿನ್ನೆಲೆ:
ಇತ್ತೀಚೆಗೆ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (Food Safety and Standards Authority of India – FSSAI) ವು ‘ಅನುವಂಶಿಕವಾಗಿ/ತಳೀಯವಾಗಿ ಮಾರ್ಪಡಿಸಿದ ಆಹಾರ ಪದಾರ್ಥಗಳ’ (Genetically Modified foods – GM foods) ಕರಡು ನಿಯಮಗಳನ್ನು ಬಿಡುಗಡೆ ಮಾಡಿದೆ.
ಏನಿದು ಪ್ರಕರಣ?
FSSAI ಹೊರಡಿಸಿದ ಕರಡು ನಿಯಮಾವಳಿಯಲ್ಲಿ , 1% ಅಥವಾ ಅದಕ್ಕಿಂತ ಹೆಚ್ಚಿನ ‘ವಂಶವಾಹಿ ವರ್ಧಿತ ಪದಾರ್ಥಗಳನ್ನು’ ಹೊಂದಿರುವ ಎಲ್ಲಾ ಆಹಾರ ಉತ್ಪನ್ನಗಳನ್ನು “GMO ಪದಾರ್ಥಗಳು/GMO ಗಳಿಂದ ಪಡೆದ ಆಹಾರ ಪದಾರ್ಥಗಳು”ಎಂದು ಲೇಬಲ್ ಮಾಡಲಾಗುತ್ತದೆ, ಎಂದು ಪ್ರಸ್ತಾಪಿಸಲಾಗಿದೆ.ಆದರೆ, ಇದನ್ನು ಕಾರ್ಯಕರ್ತರು ‘GM ಆಹಾರ’ ಪದಾರ್ಥಗಳನ್ನು ನಿಷೇಧಿಸುವ ಬದಲು ಅವುಗಳನ್ನು ಆಮದು ಮಾಡಿಕೊಳ್ಳಲು ನೀಡಲಾದ ಮೌನ ಒಪ್ಪಿಗೆ ಎಂದು ಪ್ರತಿಪಾದಿಸಿದ್ದಾರೆ.
ಕರಡಿ(ಡ್ರಾಫ್ಟ್)ನ ಅವಲೋಕನ:
- ಪೂರ್ವಾನುಮತಿ ಇಲ್ಲದೆ ‘ತಳೀಯವಾಗಿ ಮಾರ್ಪಡಿಸಿದ ಜೀವಿಗಳಿಂದ’ (GMO ಗಳು) ಪಡೆದ ಯಾವುದೇ ಆಹಾರ ಉತ್ಪನ್ನಗಳು ಅಥವಾ ಆಹಾರ ಪದಾರ್ಥಗಳನ್ನು ಯಾರೂ ತಯಾರಿಸುವಂತಿಲ್ಲ ಅಥವಾ ಮಾರಾಟ ಮಾಡುವಂತಿಲ್ಲ.
- GM ಆಹಾರಗಳನ್ನು ಪರೀಕ್ಷಿಸಲು ಪ್ರಯೋಗಾಲಯಗಳು ಅನುಸರಿಸಬೇಕಾದ ಕೆಲವು ಮಾನದಂಡಗಳನ್ನು ಕರಡು ನಿರ್ದಿಷ್ಟಪಡಿಸುತ್ತದೆ.
- ಪ್ರಸ್ತಾವಿತ ನಿಯಮಗಳು “ಜೆನೆಟಿಕಲಿ/ ತಳೀಯವಾಗಿ ಮಾರ್ಪಡಿಸಿದ ಜೀವಿಗಳು (Genetically Modified Organisms -GMOs) ಅಥವಾ ತಳೀಯವಾಗಿ ಅಭಿವೃದ್ಧಿಪಡಿಸಿದ ಜೀವಿಗಳು (Genetically Engineered Organisms -GEOs) ಅಥವಾ ಆಹಾರವಾಗಿ ಅಥವಾ ಸಂಸ್ಕರಣೆಗಾಗಿ ನೇರ ಬಳಕೆಗಾಗಿ ಉದ್ದೇಶಿಸಲಾದ ‘’ಜೀವಂತ ಮಾರ್ಪಡಿಸಿದ ಜೀವಿಗಳಿಗೆ’ (Living Modified Organism -LMOs) ಅನ್ವಯಿಸುತ್ತದೆ.”
- ಅಂತಿಮ ಉತ್ಪನ್ನದಲ್ಲಿ ಯಾವುದೇ GM ಪದಾರ್ಥಗಳು ಇಲ್ಲದಿದ್ದರೂ ಸಹ, ನಿಯಮಗಳ ವ್ಯಾಪ್ತಿಯು GMO ಗಳಿಂದ ಪಡೆದ ಆಹಾರ ಪದಾರ್ಥಗಳು ಅಥವಾ ಸಂಸ್ಕರಣೆಯನ್ನು ಬಳಸಿಕೊಂಡು ತಯಾರಿಸಲಾದ ಎಲ್ಲಾ ಆಹಾರ ಉತ್ಪನ್ನಗಳನ್ನು ಒಳಗೊಂಡಿರುತ್ತದೆ.
- ಶಿಶು ಆಹಾರ ಉತ್ಪನ್ನಗಳಲ್ಲಿ, ತಳೀಯವಾಗಿ ಮಾರ್ಪಡಿಸಿದ ಜೀವಿಗಳು (GMO ಗಳು) ಅಥವಾ ತಳೀಯವಾಗಿ ಅಭಿವೃದ್ಧಿಪಡಿಸಿದ ಜೀವಿಗಳನ್ನು (GEOs) “ಒಂದು ಘಟಕಾಂಶವಾಗಿ ಬಳಸಲಾಗುವುದಿಲ್ಲ”.
- ಕರಡಿನಲ್ಲಿ, ಶೇಕಡಾ ಒಂದು ಅಥವಾ ಅದಕ್ಕಿಂತ ಹೆಚ್ಚಿನ GMO ವಿಷಯವನ್ನು ಹೊಂದಿರುವ ಆಹಾರ ಉತ್ಪನ್ನಗಳಿಗೆ ‘ಲೇಬಲಿಂಗ್ ನಿಯಮಗಳಿಗೆ’ (labelling norms) ಅವಕಾಶ ಕಲ್ಪಿಸಲಾಗಿದೆ.
ಭಾರತದಲ್ಲಿ GMO ನಿಯಂತ್ರಣ:
ಆಮದು ಮಾಡಿದ ಸರಕುಗಳಲ್ಲಿ ಜಿಎಂಒ ಮಟ್ಟವನ್ನು ನಿಯಂತ್ರಿಸುವುದನ್ನು ಆರಂಭದಲ್ಲಿ ಕೇಂದ್ರ ಪರಿಸರ ಸಚಿವಾಲಯದ ಅಧೀನದಲ್ಲಿರುವ ಜೆನೆಟಿಕ್ ಎಂಜಿನಿಯರಿಂಗ್ ಮೌಲ್ಯಮಾಪನ ಸಮಿತಿ (Genetic Engineering Appraisal Committee- GEAC) ಅಧೀನದಲ್ಲಿತ್ತು.
- ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006 ರ ಜಾರಿಗೆ ಬಂದ ನಂತರ, ಅದರ ಪಾತ್ರವನ್ನು ಕಡಿಮೆಗೊಳಿಸಲಾಯಿತು ಮತ್ತು ಬದಲಾಗಿ ಆಮದು ಮಾಡಿದ ವಸ್ತುಗಳನ್ನು ಅನುಮೋದಿಸಲು FSSAI ಗೆ ಸೂಚಿಸಲಾಯಿತು.
ತಳೀಯವಾಗಿ ಮಾರ್ಪಡಿಸಿದ ಜೀವಿಗಳು ( ಕುಲಾಂತರಿ ತಳಿಗಳು) ಯಾವುವು?
ತಳೀಯವಾಗಿ ಮಾರ್ಪಡಿಸಿದ ಜೀವಿಗಳಲ್ಲಿ (GMO ಗಳು), ಆನುವಂಶಿಕ ವಸ್ತುವನ್ನು (DNA) ಆನುವಂಶಿಕ ಎಂಜಿನಿಯರಿಂಗ್ ತಂತ್ರಗಳನ್ನು ಬಳಸಿ ಪರಿವರ್ತಿಸಲಾಗುತ್ತದೆ ಅಥವಾ ಕೃತಕವಾಗಿ ಮತ್ತೊಂದು ಬ್ಯಾಕ್ಟೀರಿಯಂಗೆ ಪರಿಚಯಿಸಲಾಗುತ್ತದೆ.
ಆನುವಂಶಿಕ ಮಾರ್ಪಾಡು ಪ್ರಕ್ರಿಯೆಯು ವಂಶವಾಹಿಗಳ ರೂಪಾಂತರ, ಅಳವಡಿಕೆ ಅಥವಾ ಅಳಿಸುವಿಕೆಯನ್ನು ಒಳಗೊಂಡಿರುತ್ತದೆ.
- ಚುಚ್ಚುಮದ್ದಿನ ಜೀನ್ಗಳನ್ನು ಸಾಮಾನ್ಯವಾಗಿ ಮತ್ತೊಂದು ಬ್ಯಾಕ್ಟೀರಿಯಂನಿಂದ ಪಡೆಯಲಾಗುತ್ತದೆ (ಬಿಟಿ ಹತ್ತಿಯಂತೆ, ಬ್ಯಾಸಿಲಸ್ ಥುರಿಂಜಿಯೆನ್ಸಿಸ್ (Bacillus thuringiensis- Bt) ಬ್ಯಾಕ್ಟೀರಿಯಂನ ಜೀನ್ಗಳನ್ನು ಸೇವಿಸಲಾಗುತ್ತದೆ).
- ಪ್ರಭೇದಗಳಲ್ಲಿ ಆನುವಂಶಿಕ ಮಾರ್ಪಾಡನ್ನು, ಪ್ರಭೇದಗಳಲ್ಲಿ ಸ್ವಾಭಾವಿಕವಾಗಿ ಇಲ್ಲದಿರುವ ಅಪೇಕ್ಷಣೀಯ ಹೊಸ ವೈಶಿಷ್ಟ್ಯವನ್ನು ವೇಗವರ್ಧಿಸಲು ಮಾಡಲಾಗುತ್ತದೆ.
GM ತಂತ್ರಗಳ ಬಳಕೆ:
- ಜೈವಿಕ ಮತ್ತು ವೈದ್ಯಕೀಯ ಸಂಶೋಧನೆ,
- ಔಷಧಿಗಳ ಉತ್ಪಾದನೆಯಲ್ಲಿ,
- ಪ್ರಾಯೋಗಿಕ ಚಿಕಿತ್ಸೆ (ಉದಾ. ಜೀನ್ ಚಿಕಿತ್ಸೆ),
- ಕೃಷಿ (ಉದಾ. ಗೋಲ್ಡನ್ ರೈಸ್, ಬಿಟಿ ಹತ್ತಿ ಇತ್ಯಾದಿ),
- ತಳೀಯವಾಗಿ ಮಾರ್ಪಡಿಸಿದ ಬ್ಯಾಕ್ಟೀರಿಯಾದಿಂದ ಪ್ರೋಟೀನ್ ಇನ್ಸುಲಿನ್ ಉತ್ಪಾದಿಸಲು,
- ಜಿಎಂ ಬ್ಯಾಕ್ಟೀರಿಯಾ ಇತ್ಯಾದಿಗಳಿಂದ ಜೈವಿಕ ಇಂಧನಗಳನ್ನು ಉತ್ಪಾದಿಸಲು.
ವಿಷಯಗಳು: ಮೂಲಸೌಕರ್ಯ ಇಂಧನ.
ವಿದ್ಯುತ್ ಚಾಲಿತ ವಾಹನಗಳ(EV) ಬಳಕೆಯನ್ನು ಹೆಚ್ಚಿಸಲು ಸಹಾಯ ಮಾಡುವ 2021 ರ ಸರ್ಕಾರದ ನೀತಿಗಳು:
(Govt Policies of 2021 To Help Boost EV Adoption)
ಸಂದರ್ಭ:
2070 ರ ವೇಳೆಗೆ ತನ್ನ ಇಂಗಾಲದ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ತಗ್ಗಿಸಲು, COP26 ನಲ್ಲಿ ಮಾಡಿದ ಬದ್ಧತೆಯನ್ನು ಪೂರೈಸುವ ಸಲುವಾಗಿ ಹೊಸ ಯುಗದ ತಂತ್ರಜ್ಞಾನಗಳನ್ನು ಉತ್ತೇಜಿಸಲು, ಭಾರತವು ಎಲೆಕ್ಟ್ರಿಕ್ ವೆಹಿಕಲ್ಸ್ (Electric Vehicles – EVs) ಅಳವಡಿಕೆಯನ್ನು ಆಕ್ರಮಣಕಾರಿಯಾಗಿ ಉತ್ತೇಜಿಸುತ್ತಿದೆ.
ಗುರಿ:
2030 ರ ವೇಳೆಗೆ 30 ಪ್ರತಿಶತ ಖಾಸಗಿ ಕಾರುಗಳು, 70 ಪ್ರತಿಶತ ವಾಣಿಜ್ಯ ವಾಹನಗಳು ಮತ್ತು 80 ಪ್ರತಿಶತ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಿಗೆ (EV ಗಳು) ಪರಿವರ್ತಿಸುವ ಗುರಿಯನ್ನು ಭಾರತ ಹೊಂದಿದೆ.
ಇದಕ್ಕಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಖರೀದಿದಾರರು ಮತ್ತು ಉತ್ಪಾದಕರಿಗೆ ವಿವಿಧ ರೀತಿಯ ಪ್ರೋತ್ಸಾಹ ನೀಡುತ್ತಿವೆ.
ಇದಕ್ಕಾಗಿ ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ:
ಆಟೋ ಮೊಬೈಲ್ ವಲಯಕ್ಕೆ ಪಿಎಲ್ಐ ಯೋಜನೆ: ಈ ವರ್ಷದ ಸೆಪ್ಟೆಂಬರ್ನಲ್ಲಿ, ಭಾರತದಲ್ಲಿ ವಿದ್ಯುತ್ ಮತ್ತು ಇಂಧನ ಸೆಲ್ ವಾಹನಗಳು ಮತ್ತು ಡ್ರೋನ್ಗಳ ದೇಶೀಯ ಉತ್ಪಾದನೆಯನ್ನು ವೇಗಗೊಳಿಸಲು 26,058 ಕೋಟಿ ರೂ.ಗಳ ಉತ್ಪಾದನಾ ಸಂಯೋಜಿತ ಪ್ರೋತ್ಸಾಹ ಅಥವಾ ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆಯನ್ನು ಕೇಂದ್ರ ಕ್ಯಾಬಿನೆಟ್ ಅನುಮೋದಿಸಿತು.
FAME II ತಿದ್ದುಪಡಿ: FAME-II (ಫಾಸ್ಟರ್ ಅಡಾಪ್ಷನ್ ಮತ್ತು ಮ್ಯಾನುಫ್ಯಾಕ್ಚರಿಂಗ್ ಆಫ್ ಎಲೆಕ್ಟ್ರಿಕ್ ವೆಹಿಕಲ್ಸ್-II) ಯೋಜನೆಯಡಿ, ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಸಬ್ಸಿಡಿ ದರವನ್ನು ಹೆಚ್ಚಿಸುವ ಮೂಲಕ ಸರ್ಕಾರವು ಪೆಟ್ರೋಲ್ ಚಾಲಿತ ದ್ವಿಚಕ್ರ ವಾಹನಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ನಡುವಿನ ಬೆಲೆ ಅಂತರವನ್ನು ಗಣನೀಯವಾಗಿ ಕಡಿಮೆ ಮಾಡಿದೆ.
ಗುಜರಿ ನೀತಿ / ಸ್ಕ್ರ್ಯಾಪೇಜ್ ನೀತಿ: ಈ ವರ್ಷದ ಆಗಸ್ಟ್ನಲ್ಲಿ ಸರ್ಕಾರವು ‘ಗುಜರಾತ್ ಹೂಡಿಕೆದಾರರ ಶೃಂಗಸಭೆ’ಯಲ್ಲಿ ವಾಸ್ತವಿಕವಾಗಿ ‘ವಾಹನ ಸ್ಕ್ರ್ಯಾಪೇಜ್ ನೀತಿ’ಯನ್ನು ಪ್ರಾರಂಭಿಸಿತು. ಪರಿಸರ ಸ್ನೇಹಿ ರೀತಿಯಲ್ಲಿ ಸೂಕ್ತವಲ್ಲದ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಹಂತಹಂತವಾಗಿ ತೆಗೆದುಹಾಕುವುದು ನೀತಿಯ ಉದ್ದೇಶವಾಗಿದೆ.
ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ತ್ವರಿತ ಅಳವಡಿಕೆಯನ್ನು ಉತ್ತೇಜಿಸಲು ಕೇಂದ್ರದ ಜೊತೆಗೆ, ರಾಜ್ಯ ಸರ್ಕಾರಗಳು ಸಹ ಯಾವುದೇ ಅವಕಾಶವನ್ನು ಬಿಡುತ್ತಿಲ್ಲ. ಬ್ಯಾಟರಿ ಚಾಲಿತ ಎಲೆಕ್ಟ್ರಿಕ್ ವಾಹನಗಳ (BEVs) ವ್ಯಾಪ್ತಿಯನ್ನು ಹೆಚ್ಚಿಸಲು ಮತ್ತು ಅಳವಡಿಸಿಕೊಳ್ಳಲು ದೆಹಲಿ, ಗುಜರಾತ್, ಗೋವಾ, ಮಹಾರಾಷ್ಟ್ರ ಮತ್ತು ರಾಜಸ್ಥಾನ ಸೇರಿದಂತೆ ಭಾರತದ ಸುಮಾರು 20 ರಾಜ್ಯಗಳ ಸರ್ಕಾರಗಳು ಈಗಾಗಲೇ ರಾಜ್ಯ ಮಟ್ಟದ ಕರಡು ಅಥವಾ ಅಂತಿಮ ‘ವಿದ್ಯುತ್ ವಾಹನ ನೀತಿ’ಗಳನ್ನು ಹೊರಡಿಸಿವೆ.
ಮುಂದಿರುವ ಸವಾಲುಗಳು:
- ಪ್ರಸ್ತುತ, ಭಾರತೀಯ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಮಾರುಕಟ್ಟೆಯು ಸಾಮಾನ್ಯ ಜನರನ್ನು ತಲುಪುವಿಕೆಗೆ ಸಂಬಂಧಿಸಿದಂತೆ ವಿಶ್ವದ ಇತರ ಭಾಗಗಳಿಗೆ ಹೋಲಿಸಿದರೆ ಕಡಿಮೆ ಇದೆ.
- ಬಂಡವಾಳದ ವೆಚ್ಚ ಅಧಿಕವಾಗಿದ್ದು, ಆದಾಯ ಮತ್ತು ಪಾವತಿ ಅನಿಶ್ಚಿತವಾಗಿದೆ.
- ಭಾರತೀಯ ಎಲೆಕ್ಟ್ರಿಕ್ ವಾಹನ ಉದ್ಯಮವು ಇತ್ತೀಚಿನ ತಿಂಗಳುಗಳಲ್ಲಿ ರೂಪಾಯಿಯ ನಾಟಕೀಯ ಕುಸಿತದಿಂದಾಗಿ ತೀವ್ರವಾಗಿ ಹಾನಿಗೊಳಗಾಗಿದೆ.
- ಎಲೆಕ್ಟ್ರಿಕ್ ವಾಹನಗಳಲ್ಲಿ ಸ್ಥಳೀಯ ಹೂಡಿಕೆಯು ಒಟ್ಟು ಹೂಡಿಕೆಯ 35% ಮಾತ್ರ.
- ಉತ್ಪಾದನಾ ವೆಚ್ಚದ ವಿಷಯವು, ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯ ಮೇಲೆ ಕೆಟ್ಟದಾಗಿ ಪರಿಣಾಮ ಬೀರುತ್ತದೆ.
- ಭಾರತದಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ಕ್ಷಿಪ್ರ ವಾಗಿ ಅಳವಡಿಕೆ ಮತ್ತು ತಯಾರಿಕೆ (FAME India) ಯೋಜನೆಯನ್ನು ಪದೇ ಪದೇ ವಿಸ್ತರಿಸಲಾಗಿದೆ.
- ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ‘ಅನಿಶ್ಚಿತ ನೀತಿ ಪರಿಸರ’ ಮತ್ತು ‘ಬೆಂಬಲಿಸುವ ಮೂಲಸೌಕರ್ಯದ ಕೊರತೆ’ಯು ಪ್ರಮುಖ ನಿರ್ಬಂಧಗಳಾಗಿವೆ.
- ಭಾರತವು ಲಿಥಿಯಂ ಮತ್ತು ಕೋಬಾಲ್ಟ್ ನ ಯಾವುದೇ ನಿಕ್ಷೇಪಗಳನ್ನು ಹೊಂದಿಲ್ಲ, ಈ ಕಾರಣದಿಂದಾಗಿ ಭಾರತೀಯ ಎಲೆಕ್ಟ್ರಿಕ್ ವಾಹನ (EV) ಮಾರುಕಟ್ಟೆಯು ಜಪಾನ್ ಮತ್ತು ಚೀನಾದ ಲಿಥಿಯಂ-ಐಯಾನ್ ಬ್ಯಾಟರಿಗಳ ಆಮದನ್ನು ಅವಲಂಬಿಸಿದೆ.
ಈ ಸಮಯದ ಅವಶ್ಯಕತೆ:
- ಎಲೆಕ್ಟ್ರಿಕ್ ವಾಹನಗಳು ಪರಿಣಾಮಕಾರಿಯಾಗಿ ಕೊಡುಗೆ ನೀಡಬೇಕಾದರೆ, ನಾವು ಸಂಪೂರ್ಣ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸಂಘಟಿತ ಪ್ರಯತ್ನಗಳನ್ನು ಮಾಡಬೇಕಾಗಿದೆ.
- ಬ್ಯಾಟರಿ ವೆಚ್ಚವು ಎಲೆಕ್ಟ್ರಿಕ್ ವಾಹನದ ಒಟ್ಟು ವೆಚ್ಚದ ಅರ್ಧದಷ್ಟು ಇರುವುದರಿಂದ ವಾಹನಗಳಿಗೆ ಸಬ್ಸಿಡಿ ನೀಡುವ ಬದಲು ಬ್ಯಾಟರಿಗಳಿಗೆ ಸಬ್ಸಿಡಿ ನೀಡುವತ್ತ ಗಮನ ಹರಿಸುವ ಅಗತ್ಯವಿದೆ.
- ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಪ್ರಚಾರಕ್ಕೆ ಹೆಚ್ಚಿನ ಗಮನ ನೀಡಬೇಕು, ಏಕೆಂದರೆ ದ್ವಿಚಕ್ರ ವಾಹನಗಳು ದೇಶದ ಒಟ್ಟು ವಾಹನಗಳ ಶೇಕಡಾ 76 ರಷ್ಟಿದೆ ಮತ್ತು ಅವುಗಳು ಹೆಚ್ಚು ಇಂಧನವನ್ನು ಬಳಸುತ್ತವೆ.
- ಹೂಡಿಕೆಯನ್ನು ಆಕರ್ಷಿಸಲು ವಿಶಾಲವಾದ ಚಾರ್ಜಿಂಗ್ ಕೇಂದ್ರಗಳ ಜಾಲವನ್ನು ಸ್ಥಾಪಿಸುವ ಅಗತ್ಯವಿದೆ.
- ಟೆಕ್ ಪಾರ್ಕ್ಗಳು, ಸಾರ್ವಜನಿಕ ಬಸ್ ಡಿಪೋಗಳು ಮತ್ತು ಮಲ್ಟಿಪ್ಲೆಕ್ಸ್ಗಳಲ್ಲಿ ಕೆಲಸದ ಸ್ಥಳಗಳು ಚಾರ್ಜಿಂಗ್ ಪಾಯಿಂಟ್ಗಳನ್ನು ಸ್ಥಾಪಿಸಲು ಸೂಕ್ತ ಸ್ಥಳಗಳಾಗಿವೆ. ಬೆಂಗಳೂರಿನಲ್ಲಿ, ಕೆಲವು ಮಾಲ್ಗಳಲ್ಲಿ ಪಾರ್ಕಿಂಗ್ ಸ್ಥಳಗಳಲ್ಲಿ ಚಾರ್ಜಿಂಗ್ ಪಾಯಿಂಟ್ಗಳನ್ನು ಸ್ಥಾಪಿಸಲಾಗಿದೆ.
- ದೊಡ್ಡ ಕಾರ್ಪೊರೇಟ್ ಗಳು ಚಾರ್ಜಿಂಗ್ ಕೇಂದ್ರಗಳಲ್ಲಿ ‘ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಅನುಸರಣೆ’ ಯ ರೂಪದಲ್ಲಿ ಹೂಡಿಕೆ ಮಾಡಬಹುದು.
- ಎಲೆಕ್ಟ್ರಿಕ್ ವಾಹನಗಳಿಗೆ ಬ್ಯಾಟರಿಗಳನ್ನು ತಯಾರಿಸಲು ಭಾರತಕ್ಕೆ ಕಚ್ಚಾ ಸಾಮಗ್ರಿಗಳು ಬೇಕಾಗುತ್ತವೆ, ಹಾಗಾಗಿ ಬೊಲಿವಿಯಾ, ಆಸ್ಟ್ರೇಲಿಯಾ ಮತ್ತು ಚಿಲಿಯಲ್ಲಿ ‘ಲಿಥಿಯಂ ಕ್ಷೇತ್ರಗಳನ್ನು’ ಭದ್ರಪಡಿಸುವುದು ತೈಲ ಕ್ಷೇತ್ರಗಳನ್ನು ಖರೀದಿಸುವಷ್ಟೇ ಮುಖ್ಯವಾಗಬಹುದು.
ವಿಷಯಗಳು: ಸಂವಹನ ಜಾಲಗಳ ಮೂಲಕ ಆಂತರಿಕ ಭದ್ರತೆಗೆ ಸವಾಲು ಹಾಕುವುದು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಭದ್ರತೆಯ ಮೂಲಭೂತ ಅಂಶಗಳು, ಅಕ್ರಮ ಹಣ ವರ್ಗಾವಣೆ ಮತ್ತು ಅದನ್ನು ತಡೆಯುವುದು.
ಡಿಜಿಟಲ್ ಲೆಂಡಿಂಗ್ ಮತ್ತು ಸಂಬಂಧಿತ ಸಮಸ್ಯೆಗಳು:
(Digital Lending and associated issues)
ಸಂದರ್ಭ:
ಭಾರತದಲ್ಲಿ, ‘ಭೌತಿಕ ಮೋಡ್’ ಗೆ ಹೋಲಿಸಿದರೆ ‘ಡಿಜಿಟಲ್ ಮೋಡ್’ ಮೂಲಕ ಸಾಲ ನೀಡುವುದು, ಬ್ಯಾಂಕ್ಗಳ ಸಂದರ್ಭದಲ್ಲಿ ಇನ್ನೂ (ಡಿಜಿಟಲ್ ಮೋಡ್ ಮೂಲಕ ರೂ. 1.12 ಲಕ್ಷ ಕೋಟಿ ರೂ. ಫಿಸಿಕಲ್ ಮೋಡ್ ಮೂಲಕ ರೂ. 53.08 ಲಕ್ಷ ಕೋಟಿ ಸಾಲ) ಆರಂಭಿಕ ಹಂತದಲ್ಲಿದೆ.
- ಆದಾಗ್ಯೂ, 2017 ಮತ್ತು 2020 ರ ನಡುವೆ ಮಾದರಿ ಘಟಕಗಳಿಗೆ ಡಿಜಿಟಲ್ ಮೋಡ್ ಮೂಲಕ ಸಾಲ ವಿತರಣೆಯ ಒಟ್ಟು ಪ್ರಮಾಣವು ಹನ್ನೆರಡು ಪಟ್ಟು ಹೆಚ್ಚು (ರೂ. 11,671 ಕೋಟಿಯಿಂದ ರೂ. 41 ಲಕ್ಷ ಕೋಟಿಗೆ) ಬೆಳವಣಿಗೆಯನ್ನು ತೋರಿಸಿದೆ.
- ‘ಡಿಜಿಟಲ್ ಲೆಂಡಿಂಗ್’(Digital Lending) ವಲಯದಲ್ಲಿನ ಬಲವಾದ ಬೆಳವಣಿಗೆಯು ಭಾರತದಲ್ಲಿ ಬಳಸದಿರುವ ಬೃಹತ್ ಸಾಲದ ಸಾಮರ್ಥ್ಯವನ್ನು ಸೂಚಿಸುತ್ತದೆ, ಇದನ್ನು ತಂತ್ರಜ್ಞಾನದ ಬಳಕೆಯ ಮೂಲಕ ಪರಿಣಾಮಕಾರಿಯಾಗಿ ಕಡಿಮೆ ಮಾಡಬಹುದು ಎಂದು ಉದ್ಯಮ ಕ್ಷೇತ್ರದ ಮುಖಂಡರು ಹೇಳುತ್ತಾರೆ.
ಆದ್ದರಿಂದ, ಆರ್ಬಿಐ ನಿಯಂತ್ರಣದ ಅಡಿಯಲ್ಲಿ ‘ಡಿಜಿಟಲ್ ಸಾಲದಾತರನ್ನು’ ತರುವುದರಿಂದ, ಅಡ್ಡಿಪಡಿಸುವವರ ಅನುಸರಣೆ ವೆಚ್ಚವು ಸಾಕಷ್ಟು ಹೆಚ್ಚಾಗಬಹುದಾಗಿದೆ, ಆದ್ದರಿಂದ, ಇದು ದುರುದ್ದೇಶದಿಂದ ವ್ಯಾಪಾರ ಮಾಡುವವರನ್ನು ಹೊರಹಾಕಲು ಸಹಾಯ ಮಾಡುತ್ತದೆ ಮತ್ತು ಅದರಲ್ಲಿ ಗಂಭೀರವಾಗಿ ಭಾಗವಹಿಸುವವರು ಮಾತ್ರ ಸಕ್ರಿಯವಾಗಿ ಉಳಿಯುತ್ತಾರೆ ಎಂದು ಖಚಿತಪಡಿಸುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ.
ಉದ್ಯಮದ ಮೇಲೆ ಪರಿಣಾಮ ಬೀರುವ ಪ್ರಮುಖ ಸಮಸ್ಯೆಗಳು:
ಡಿಜಿಟಲ್ ಸಾಲ ನೀಡುವ ಕಂಪನಿಗಳ ಸಾಮಾನ್ಯ ವಿಧಾನವೆಂದರೆ ರೂ 5,000 ವರೆಗಿನ ಸಣ್ಣ ಸಾಲಗಳೊಂದಿಗೆ ಗ್ರಾಹಕರನ್ನು ಓಲೈಸುವುದು, ಇದನ್ನು ಒಂದೆರೆಡು ವಾರಗಳಲ್ಲಿ ಸ್ವಲ್ಪ ಬಡ್ಡಿಯೊಂದಿಗೆ ಮರುಪಾವತಿ ಮಾಡಬಹುದು, ಸಾಮಾನ್ಯವಾಗಿ ತಿಂಗಳಿಗೆ ರೂ 500 ಕಂತುಗಳ ಮೂಲಕ.
- ಆದರೆ, ಸಾಲಗಾರನು ಈ ಮೊತ್ತವನ್ನು ಪಾವತಿಸಲು ವಿಫಲವಾದರೆ, ಅದು ವಾರ್ಷಿಕವಾಗಿ 120% (10% ಪ್ರತಿ ಮಾಸಿಕ) ದರದಲ್ಲಿ ಹೆಚ್ಚಾಗುತ್ತದೆ, ಸಾಲಗಾರನಿಗೆ ಮೊತ್ತವನ್ನು ಮರುಪಾವತಿಸಲು ಕಷ್ಟವಾಗುತ್ತದೆ.
- ಈ ರೀತಿಯ ಸಾಲವನ್ನು ಕೆಲವೊಮ್ಮೆ “ಈಗ ಖರೀದಿಸಿ, ನಂತರ ಪಾವತಿಸಿ” (Buy Now, Pay Later – BNPL) ಯಂತಹ ಸೇವೆಯ ರೂಪದಲ್ಲಿ ನೀಡಲಾಗುತ್ತದೆ.ಅಂತಹ ಯೋಜನೆಗಳಲ್ಲಿ, ಖರೀದಿದಾರರಿಗೆ ತಕ್ಷಣವೇ ವಸ್ತುವನ್ನು ಖರೀದಿಸಲು ಮತ್ತು ಮೂರು ಅಥವಾ ಹೆಚ್ಚಿನ ಕಂತುಗಳಲ್ಲಿ ನಿಗದಿತ ಬಡ್ಡಿ-ಮುಕ್ತ ಅವಧಿಯಲ್ಲಿ ಪಾವತಿಸಲು ಸೌಲಭ್ಯವನ್ನು ನೀಡಲಾಗುತ್ತದೆ.ಈ ರೀತಿಯ ಸಾಲಗಳು ಹೆಚ್ಚಾಗಿ ಯುವಕರು, ಹೊಸ ಸಾಲಗಾರರು, ಕಡಿಮೆ ನಗದು ಹೊಂದಿರುವ ಹೊಸ ಪೀಳಿಗೆಯನ್ನು ಗುರಿಯಾಗಿರಿಸಿಕೊಳ್ಳುತ್ತವೆ.
RBI ಕಾರ್ಯನಿರತ ಗುಂಪು:
ಆನ್ಲೈನ್ ಪ್ಲಾಟ್ಫಾರ್ಮ್ಗಳು ಮತ್ತು ಮೊಬೈಲ್ ಅಪ್ಲಿಕೇಶನ್ಗಳನ್ನು ಒಳಗೊಂಡಂತೆ – ನಿಯಂತ್ರಿತ ಮತ್ತು ಅನಿಯಂತ್ರಿತ ಹಣಕಾಸು ವಲಯದಲ್ಲಿ ಡಿಜಿಟಲ್ ಸಾಲ ನೀಡುವ ಚಟುವಟಿಕೆಗಳ ಎಲ್ಲಾ ಅಂಶಗಳನ್ನು ಅಧ್ಯಯನ ಮಾಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಡಿಜಿಟಲ್ ಸಾಲ ನೀಡುವ ಬಗ್ಗೆ ರಚಿಸಿದ್ದ ಕಾರ್ಯನಿರತ ಗುಂಪು ನವಂಬರ್ ನಲ್ಲಿ ತನ್ನ ಶಿಫಾರಸುಗಳನ್ನು ಸಲ್ಲಿಸಿದೆ.
ಪ್ರಮುಖ ಶಿಫಾರಸುಗಳು:
- ಈ ರೀತಿಯ ಸಾಲಗಳ ಮೇಲೆ ನಿಗಾ ಇಡಲು ಪ್ರತ್ಯೇಕ ಕಾನೂನು ರೂಪಿಸಬೇಕು.
- ಡಿಜಿಟಲ್ ಲೆಂಡಿಂಗ್ ಆಪ್ (Digital Lending Apps)ಗಳ ತನಿಖೆಗೆ ನೋಡಲ್ ಏಜೆನ್ಸಿ ಇರಬೇಕು.
- ಡಿಜಿಟಲ್ ಸಾಲ ನೀಡುವ ಪರಿಸರ ವ್ಯವಸ್ಥೆಯಲ್ಲಿ ಭಾಗವಹಿಸುವವರಿಗೆ ‘ಸ್ವಯಂ-ನಿಯಂತ್ರಕ ಸಂಸ್ಥೆ’ಯನ್ನು ಸ್ಥಾಪಿಸಬೇಕು.
- ಕೆಲವು ಮೂಲಭೂತ ತಂತ್ರಜ್ಞಾನದ ಮಾನದಂಡಗಳನ್ನು ಅಭಿವೃದ್ಧಿಪಡಿಸಿ ಮತ್ತು ಡಿಜಿಟಲ್ ಸಾಲ ಪರಿಹಾರಗಳನ್ನು ಪರಿಚಯಿಸಲು ಪೂರ್ವ-ಷರತ್ತಾಗಿ ಆ ಮಾನದಂಡಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಿ.
- ಸಾಲವನ್ನು ನೇರವಾಗಿ ಸಾಲಗಾರರ ಬ್ಯಾಂಕ್ ಖಾತೆಗಳಿಗೆ ವಿತರಿಸಬೇಕು ಮತ್ತು ಸಾಲಗಳ ವಿತರಣೆ ಮತ್ತು ಸೇವೆಯನ್ನು ಡಿಜಿಟಲ್ ಸಾಲದಾತರ ಬ್ಯಾಂಕ್ ಖಾತೆಗಳ ಮೂಲಕ ಮಾತ್ರ ಮಾಡಬೇಕು.
- ಪರಿಶೀಲಿಸಬಹುದಾದ ಆಡಿಟ್ ಟ್ರೇಲ್ಗಳೊಂದಿಗೆ ಸಾಲಗಾರರ ಪೂರ್ವ ಮತ್ತು ಸ್ಪಷ್ಟ ಒಪ್ಪಿಗೆಯೊಂದಿಗೆ ಡೇಟಾ ಸಂಗ್ರಹಣೆಯನ್ನು ಮಾಡಬೇಕು ಮತ್ತು ಎಲ್ಲಾ ಡೇಟಾವನ್ನು ಭಾರತದಲ್ಲಿ ನೆಲೆಗೊಂಡಿರುವ ಸರ್ವರ್ಗಳಲ್ಲಿ ಸಂಗ್ರಹಿಸಬೇಕು.
ಡಿಜಿಟಲ್ ಸಾಲ ನೀಡುವಿಕೆಯ ಪ್ರಯೋಜನಗಳು:
- ಡಿಜಿಟಲ್ ಸಾಲವು ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳಿಗೆ ಹೆಚ್ಚು ನ್ಯಾಯೋಚಿತ, ಪರಿಣಾಮಕಾರಿ ಮತ್ತು ಅಂತರ್ಗತ ಪ್ರವೇಶವನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ.
- ಫಿನ್ಟೆಕ್ ನೇತೃತ್ವದಲ್ಲಿ ಈ ನಾವೀನ್ಯತೆಯು, ಕೆಲವು ವರ್ಷಗಳ ಹಿಂದೆ ದ್ವಿತೀಯ ಪೋಷಕ ಪಾತ್ರದಿಂದ ಮುಂದೆ ಬಂದು ಈಗ ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳ ವಿನ್ಯಾಸ, ಬೆಲೆ ಮತ್ತು ವಿತರಣೆಗಾಗಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ.
ಈ ಸಮಯದ ಅವಶ್ಯಕತೆ:
ಡೇಟಾ ಸುರಕ್ಷತೆ, ಖಾಸಗಿತನ, ಗೌಪ್ಯತೆ ಮತ್ತು ಗ್ರಾಹಕರ ರಕ್ಷಣೆಯನ್ನು ಖಾತ್ರಿಪಡಿಸುವಾಗ ನಾವೀನ್ಯತೆಯನ್ನು ಬೆಂಬಲಿಸಲು ಈ ನಿಯಂತ್ರಕ ಸಂಸ್ಥೆಗಳು ಸಮತೋಲಿತ ವಿಧಾನವನ್ನು ಅನುಸರಿಸಬೇಕು.
ಡಿಜಿಟಲ್ ಸಾಲ ನೀಡುವ ಅಪ್ಲಿಕೇಶನ್ಗಳೊಂದಿಗಿನ ಸಮಸ್ಯೆಗಳು ಯಾವುವು?
- ಅವು ಸಾಲಗಾರರನ್ನು ತ್ವರಿತವಾಗಿ ಮತ್ತು ತೊಂದರೆ ಮುಕ್ತ ರೀತಿಯಲ್ಲಿ ಸಾಲ ನೀಡುವ ಭರವಸೆಯೊಂದಿಗೆ ಆಕರ್ಷಿಸುತ್ತವೆ.
- ಆದರೆ ,ಸಾಲಗಾರರಿಂದ ಹೆಚ್ಚುವರಿ ಬಡ್ಡಿದರಗಳು ಮತ್ತು ಹೆಚ್ಚುವರಿ ಗುಪ್ತ ಶುಲ್ಕಗಳನ್ನು ಕೇಳಲಾಗುತ್ತದೆ.
- ಅಂತಹ ಪ್ಲಾಟ್ಫಾರ್ಮ್ಗಳು ಸಾಲ ವಸೂಲಾತಿಗೆ ಸ್ವೀಕಾರಾರ್ಹವಲ್ಲದ ಮತ್ತು ಉನ್ನತ-ಬಲ ಪ್ರಯೋಗದ ಕಠಿಣ ವಿಧಾನಗಳನ್ನು ಅಳವಡಿಸಿಕೊಳ್ಳುತ್ತವೆ.
- ಸಾಲಗಾರರ ಮೊಬೈಲ್ ಫೋನ್ಗಳಲ್ಲಿರುವ ದತ್ತಾಂಶವನ್ನು ಜಾಲಾಡುವ ಮೂಲಕ ಅವುಗಳು ಒಪ್ಪಂದಗಳನ್ನು ದುರುಪಯೋಗಪಡಿಸಿಕೊಳ್ಳುತ್ತವೆ.
ಆರ್ಬಿಐ ನ ಸಲಹೆಗಳು:
ಬ್ಯಾಂಕ್ಗಳು ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಾಲ ನೀಡಲು ತಮ್ಮ ಡಿಜಿಟಲ್ ವೇದಿಕೆಯನ್ನು ಬಳಸಲಿ ಅಥವಾ ಹೊರಗುತ್ತಿಗೆ ಆಧಾರದ ವೇದಿಕೆಯನ್ನೇ ಬಳಸಲಿ, ನಿಬಂಧನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕಳೆದ ವರ್ಷದ ಜೂನ್ ತಿಂಗಳಲ್ಲಿ ಆರ್ಬಿಐ ಸೂಚನೆ ನೀಡಿತ್ತು.
- ಸಾಲ ಪಡೆಯುವುದಕ್ಕೂ ಮುನ್ನ ಇಂಥ ಆ್ಯಪ್ಗಳ ಮೂಲ ಹಾಗೂ ಹಿನ್ನೆಲೆಗಳನ್ನು ವಿವರವಾಗಿ ಪರಿಶೀಲಿಸಿಕೊಳ್ಳಿ.
- ಅಜ್ಞಾತ ವ್ಯಕ್ತಿಗಳ ಜತೆಗೆ ಅಥವಾ ಆ್ಯಪ್ಗಳ ಜತೆಗೆ ಯಾವ ಕಾರಣಕ್ಕೂ ‘ನಿಮ್ಮ ಗ್ರಾಹಕರನ್ನು ತಿಳಿದುಕೊಳ್ಳಿ’ (ಕೆವೈಸಿ) ಕುರಿತ ಮಾಹಿತಿ ಮತ್ತು ದಾಖಲೆಗಳನ್ನು ಹಂಚಿಕೊಳ್ಳಬೇಡಿ.
- ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಪರವಾಗಿ ಹೊರಗುತ್ತಿಗೆಯ ಆಧಾರದಲ್ಲಿ ಕೆಲಸಮಾಡುವ ಆ್ಯಪ್ಗಳು ಕಡ್ಡಾಯವಾಗಿ ಸಾಲ ನೀಡುವ ಸಂಸ್ಥೆಯ ಹೆಸರನ್ನು ಸಾಲ ಪಡೆಯುವವರಿಗೆ ಒದಗಿಸಬೇಕು.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ನೀಲ್ಗಾಯ್ ಗಳು:
- ಇತ್ತೀಚೆಗೆ, ಬಿಹಾರ ಸರ್ಕಾರವು ಸ್ಥಳೀಯವಾಗಿ ‘ನೀಲ್ಗಾಯ್ ಗಳು’ (Nilgais) ಅಥವಾ ಘುರ್ಪಾರಾ ಗಳು ಎಂದು ಕರೆಯಲ್ಪಡುವ ‘ಬ್ಲೂ ಬುಲ್’ (Blue Bull) ಅನ್ನು ಕೊಲ್ಲುವುದನ್ನು ನಿಷೇಧಿಸಿದೆ. ಬದಲಾಗಿ, ರಾಜ್ಯದಲ್ಲಿ ಹೆಚ್ಚುತ್ತಿರುವ ‘ನೀಲ್ಗಾಯ್ ಗಳ’ ಜನಸಂಖ್ಯೆಯನ್ನು ನಿಯಂತ್ರಿಸಲು ಅವುಗಳಿಗೆ ಸಂತಾನಹರಣ ಚಿಕಿತ್ಸೆ ನೀಡಲಾಗುತ್ತದೆ.
- ‘ನೀಲ್ಗಾಯ್’ಏಷ್ಯಾದ ಅತಿದೊಡ್ಡ ಹುಲ್ಲೆ ಮತ್ತು ಉತ್ತರ ಭಾರತದ ಉಪಖಂಡದಲ್ಲಿ ಬಹುತೇಕ ಕಡೆ ಕಂಡುಬರುತ್ತದೆ.
- ‘ನೀಲ್ಗಾಯ್’ಬೋಸೆಲಾಫಸ್ (Boselaphus) ಕುಲದ ಏಕೈಕ ಸದಸ್ಯ ಮತ್ತು ಇದನ್ನು ‘ಬೋವಿಡೆ’ (Bovidae) ಕುಟುಂಬದಲ್ಲಿ ಇರಿಸಲಾಗಿದೆ.
- ಈ ಪ್ರಭೇದವು ವಿಶಿಷ್ಟವಾದ ‘ಲಿಂಗ ದ್ವಿರೂಪತೆ’ಯನ್ನು ಹೊಂದಿದೆ; ಗಂಡು ನೀಲ್ಗಾಯ್ ಗಾತ್ರದಲ್ಲಿ ದೊಡ್ಡದಾಗಿದೆ ಮತ್ತು ಬಣ್ಣದಲ್ಲಿ ಹೆಣ್ಣಿಗಿಂತ ವಿಭಿನ್ನ ವಾಗಿದೆ.
- ‘ನೀಲ್ಗಾಯ್’ ಭಾರತ, ನೇಪಾಳ ಮತ್ತು ಪಾಕಿಸ್ತಾನದಲ್ಲಿ ಕಂಡುಬರುತ್ತದೆ. ಹಿಮಾಲಯದ ತಪ್ಪಲಿನಲ್ಲಿರುವ, ತರೈನ ತಗ್ಗು ಪ್ರದೇಶಗಳಲ್ಲಿ ಅವುಗಳ ಸಂಖ್ಯೆಯು ಸಾಕಷ್ಟು ಅಧಿಕವಾಗಿದೆ.
- ಇದು ಭಾರತೀಯ ಉಪಖಂಡಕ್ಕೆ ಸ್ಥಳೀಯ ಜಾತಿಯಾಗಿದೆ.
- IUCN ಸ್ಥಿತಿ: ಕಡಿಮೆ ಕಾಳಜಿಯ ಪ್ರಾಣಿ. (Least Concern).
ದಾರಾ ಶಿಕೋ:
(Dara Shikoh)
ದಾರಾ ಶಿಕೋ ಮೊಘಲ್ ಚಕ್ರವರ್ತಿ ಷಹಜಹಾನ್ ಅವರ ಹಿರಿಯ ಮಗ.
ತನ್ನ ಸಹೋದರ ಔರಂಗಜೇಬ್ ನ ವಿರುದ್ಧದ ಉತ್ತರಾಧಿಕಾರದ ಯುದ್ಧದಲ್ಲಿ ಸೋತ ನಂತರ ಅವನನ್ನು ಹತ್ತೆಗಯ್ಯಲಾಯಿತು.
ದಾರಾ ಶಿಕೋಹ್ ಹಿಂದೂ ಮತ್ತು ಇಸ್ಲಾಮಿಕ್ ಸಂಪ್ರದಾಯಗಳ ನಡುವೆ ಸಾಮ್ಯತೆಗಳನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿರುವ “ಉದಾರ ಮುಸ್ಲಿಂ” ಎಂದು ವಿವರಿಸಲಾಗಿದೆ.
ಅವನು ಭಗವದ್ಗೀತೆ ಮತ್ತು 52 ಉಪನಿಷತ್ತುಗಳನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದ್ದಾನೆ.
ಷಹಜಹಾನಾಮಾದ ಪ್ರಕಾರ, ದಾರಾ ಶಿಕೋನನ್ನು ಸೋಲಿಸಿದ ನಂತರ, ಔರಂಗಜೇಬ್ ಅವನನ್ನು ಸರಪಳಿಯಲ್ಲಿ ಬಂದಿಸಿ ದೆಹಲಿಗೆ ಕರೆತಂದನು. ಮತ್ತು ಅವನ ತಲೆಯನ್ನು ಕತ್ತರಿಸಿ ಆಗ್ರಾ ಕೋಟೆಗೆ ಕಳುಹಿಸಲಾಯಿತು, ಆದರೆ ಅವನ ಮುಂಡವನ್ನು ಹುಮಾಯೂನ್ ಸಮಾಧಿಯ ಆವರಣದಲ್ಲಿ ಹೂಳಲಾಯಿತು.
ಅವನ ಪರಂಪರೆ:
- ದಾರಾ ಶಿಕೋ ಅವರನ್ನು “ಆ ಕಾಲದ ಶ್ರೇಷ್ಠ ಸ್ವತಂತ್ರ ಚಿಂತಕರಲ್ಲಿ ಒಬ್ಬರು” ಎಂದು ವಿವರಿಸಲಾಗಿದೆ.
- ಅವರು ಉಪನಿಷತ್ತುಗಳ ಶ್ರೇಷ್ಠತೆಯನ್ನು ಗುರುತಿಸಿದರು ಮತ್ತು ಅವುಗಳನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದರು. ಈ ಹಿಂದೆ ಕೆಲವು ಮೇಲ್ಜಾತಿ ಹಿಂದೂಗಳಿಗೆ ಮಾತ್ರ ಉಪನಿಷತ್ತುಗಳ ಮಹತ್ವದ ಅರಿವಿತ್ತು, ಉಪನಿಷತ್ತುಗಳ ಆ ಪರ್ಷಿಯನ್ ಭಾಷಾಂತರವು ಇಂದು ಇತರ ಭಾಷೆಗಳಲ್ಲಿನ ಅನೇಕ ಸ್ವತಂತ್ರ ಚಿಂತಕರನ್ನು ಪ್ರೇರೇಪಿಸಿದೆ, ಮಾಜಿ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಕೂಡ.
- ಔರಂಗಜೇಬನ ಬದಲಿಗೆ ದಾರಾ ಶಿಕೋ ಮೊಘಲ್ ಸಿಂಹಾಸನದ ಮೇಲೆ ಕುಳಿತಿದ್ದರೆ, ಧಾರ್ಮಿಕ ಸಂಘರ್ಷಗಳಲ್ಲಿ ಕೊಲ್ಲಲ್ಪಟ್ಟ ಸಾವಿರಾರು ಜನರ ಜೀವಗಳನ್ನು ಉಳಿಸಬಹುದಿತ್ತು ಎಂದು ಕೆಲವು ಇತಿಹಾಸಕಾರರು ವಾದಿಸುತ್ತಾರೆ.ಒಂದು ರೀತಿಯಲ್ಲಿ, ಅವನೂ ಔರಂಗಜೇಬನ ಸಂಪೂರ್ಣ ವಿರೋಧಾಭಾಸದಂತೆ ಇದ್ದನು. ಅದೇ ಸಮಯದಲ್ಲಿ ಅವರು ಗಂಭೀರ ಸಂಯೋಜಕರಾಗಿದ್ದರು, ಸೌಹಾರ್ದಯುತ ಮತ್ತು ಉದಾರ – ಆದರೆ ಅದೇ ಸಮಯದಲ್ಲಿ, ಅದಕ್ಷ ನಿರ್ವಾಹಕ ಮತ್ತು ಯುದ್ಧದ ಕ್ಷೇತ್ರದಲ್ಲಿ ನಿಷ್ಪರಿಣಾಮಕಾರಿಯಾದ ವ್ಯಕ್ತಿಯಾಗಿದ್ದನು.
ಸುದ್ದಿಯಲ್ಲಿರಲು ಕಾರಣ?
ಮೊಘಲ್ ರಾಜಕುಮಾರ ದಾರಾ ಶಿಕೋನ ಪ್ರತಿಮೆಯನ್ನು ನಿರ್ಮಿಸುವ ತನ್ನ ಪ್ರಯತ್ನವನ್ನು ಮುಂದುವರೆಸಿದ ಕೇಂದ್ರ ಸರ್ಕಾರವು ಅವನ ಜೀವನ ಮತ್ತು ಆಧ್ಯಾತ್ಮಿಕ ಪರಂಪರೆಯ ಮೇಲೆ ಸರಣಿ ನಾಟಕಗಳನ್ನು ಆಯೋಜಿಸಲು ಯೋಜಿಸುತ್ತಿದೆ.
















