ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 1:
1. ART, ಬಾಡಿಗೆ ತಾಯ್ತನ ಮಸೂದೆ.
ಸಾಮಾನ್ಯ ಜ್ಞಾನ ಪತ್ರಿಕೆ 2:
1. ಸಂಸದರ ಪ್ರಶ್ನೆಗಳನ್ನು ಪುರಸ್ಕರಿಸುವ ಮತ್ತು ತಿರಸ್ಕರಿಸುವ ವಿಧಾನ.
2. ಪಕ್ಷಾಂತರ ವಿರೋಧಿ ಕಾನೂನು.
3. ಉತ್ತರಾಖಂಡದ ಚಾರ್ ಧಾಮ್ ಕಾಯಿದೆ.
4. ದೇಶದ್ರೋಹ ಕಾನೂನಿನ ವ್ಯಾಖ್ಯಾನವನ್ನು ಪರಿಶೀಲನೆಗೆ ಒಳಪಡಿಸುವುದಾಗಿ ಹೇಳಿದ ಸರ್ವೋಚ್ಚ ನ್ಯಾಯಾಲಯ.
5. ಹಾಂಗ್ ಕಾಂಗ್ ನ ಆಡಳಿತವನ್ನು ಹೇಗೆ ನಿರ್ವಹಿಸಲಾಗುತ್ತದೆ?
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:
1. ಖೈಟಿಸುಕಾ ಸಚಿಕಾರಮ್.
ಸಾಮಾನ್ಯ ಅಧ್ಯಯನ ಪತ್ರಿಕೆ : 1
ವಿಷಯಗಳು: ಮಹಿಳೆಯರು ಮತ್ತು ಮಹಿಳಾ ಸಂಘಟನೆಯ ಪಾತ್ರ, ಜನಸಂಖ್ಯೆ ಮತ್ತು ಸಂಬಂಧಿತ ಸಮಸ್ಯೆಗಳು, ಬಡತನ ಮತ್ತು ಅಭಿವೃದ್ಧಿ ಸಮಸ್ಯೆಗಳು, ನಗರೀಕರಣ, ಅವುಗಳ ಸಮಸ್ಯೆಗಳು ಮತ್ತು ಪರಿಹಾರಗಳು.
ART, ಬಾಡಿಗೆ ತಾಯ್ತನ ಮಸೂದೆ:
(What’s in ART, Surrogacy Bills?)
ಸಂದರ್ಭ:
ಇತ್ತೀಚೆಗೆ, ‘ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ ನಿಯಂತ್ರಣ ಮಸೂದೆ’, 2020 (Assisted Reproductive Technology Regulation Bill, 2020) ಅನ್ನು ಲೋಕಸಭೆಯು ಅಂಗೀಕರಿಸಿದೆ. ಮಸೂದೆಯಲ್ಲಿ, ದೇಶದಲ್ಲಿ ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (Assisted Reproductive Technology – ART) ಸೇವೆಗಳ ಸುರಕ್ಷಿತ ಮತ್ತು ನೈತಿಕ ವಿಧಾನಗಳನ್ನು ಅಳವಡಿಸಿಕೊಳ್ಳಲು ಹಲವಾರು ನಿಬಂಧನೆಗಳನ್ನು ಮಾಡಲಾಗಿದೆ.
ಮಸೂದೆಯ ಅವಲೋಕನ ಮತ್ತು ಪ್ರಮುಖ ಲಕ್ಷಣಗಳು:
- ಮಸೂದೆಯಲ್ಲಿ, ‘ಇನ್-ವಿಟ್ರೋ ಫರ್ಟಿಲೈಸೇಶನ್’ (IVF) ಚಿಕಿತ್ಸಾಲಯಗಳಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ನೀತಿ ಸಂಹಿತೆಯನ್ನು ರೂಪಿಸಲು ಮತ್ತು ಜಾರಿಗೊಳಿಸಲು ರಾಷ್ಟ್ರೀಯ ಮಂಡಳಿಯ ರಚನೆಗೆ ಅವಕಾಶ ಕಲ್ಪಿಸಲಾಗಿದೆ.
- ಇದರಲ್ಲಿ, ‘ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ’ (ART) ಚಿಕಿತ್ಸಾಲಯಗಳು ಮತ್ತು ಬ್ಯಾಂಕ್ಗಳಿಂದ ತಜ್ಞರು ಮತ್ತು ಭೌತಿಕ ಮೂಲಸೌಕರ್ಯ, ಪ್ರಯೋಗಾಲಯ, ರೋಗನಿರ್ಣಯ ಉಪಕರಣಗಳು ಇತ್ಯಾದಿಗಳನ್ನು ನೇಮಿಸಿಕೊಳ್ಳಲು ಕನಿಷ್ಠ ಮಾನದಂಡಗಳನ್ನು ನಿಗದಿಪಡಿಸಲಾಗಿದೆ.
- ಮಸೂದೆಯಲ್ಲಿ, ART ಮೂಲಕ ಜನಿಸಿದ ಮಗುವಿನ ಪ್ರಯೋಜನಕ್ಕಾಗಿ ‘ಇಂಪ್ಲಾಂಟೇಶನ್’ (Implantation) ಗೂ ಮೊದಲು ಭ್ರೂಣಗಳ ಆನುವಂಶಿಕ ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದೆ.
- ಇದರಲ್ಲಿ, ವೀರ್ಯ (Sperm), ಅಂಡಾಣುಗಳು (Oocytes) ಮತ್ತು ಭ್ರೂಣ (Embryos)ಗಳಿಗೆ ಕ್ರಯೋ-ಸಂರಕ್ಷಣಾ ಪ್ರಕ್ರಿಯೆ (Cryo-Preservation Processes) ಗಳನ್ನು ಸುವ್ಯವಸ್ಥಿತಗೊಳಿಸಲು ನಿಬಂಧನೆಗಳನ್ನು ಮಾಡಲಾಗಿದೆ.
- ಕೇಂದ್ರೀಯ ದತ್ತಸಂಚಯವನ್ನು ನಿರ್ವಹಿಸಲು ಮತ್ತು ಅದರ ಕಾರ್ಯನಿರ್ವಹಣೆಯಲ್ಲಿ ರಾಷ್ಟ್ರೀಯ ಮಂಡಳಿಗೆ ಸಹಾಯ ಮಾಡಲು ‘ರಾಷ್ಟ್ರೀಯ ನೋಂದಣಿ ಮತ್ತು ನೋಂದಣಿ ಪ್ರಾಧಿಕಾರ’ವನ್ನು ರಚಿಸುವುದನ್ನು ಮಸೂದೆಯು ಪ್ರಸ್ತಾಪಿಸುತ್ತದೆ.
- ಮಸೂದೆಯಲ್ಲಿ ‘ಲಿಂಗ ಆಯ್ಕೆ, ಮಾನವ ಭ್ರೂಣಗಳು ಅಥವಾ ಗ್ಯಾಮೆಟ್ಗಳ ಮಾರಾಟ ಮತ್ತು ಅಂತಹ ಕಾನೂನುಬಾಹಿರ ಕೃತ್ಯಗಳನ್ನು’ ನಡೆಸುತ್ತಿರುವ ಏಜೆನ್ಸಿಗಳು/ಸಂಸ್ಥೆಗಳಿಗೆ ಕಠಿಣ ಶಿಕ್ಷೆಯನ್ನು ಒದಗಿಸುವಿಕೆಯನ್ನು ಪ್ರಸ್ತಾಪಿಸಲಾಗಿದೆ.
ಈ ನಿಟ್ಟಿನಲ್ಲಿ ಕಾನೂನಿನ ಅವಶ್ಯಕತೆಗಳು:
ಸಂಬಂಧಪಟ್ಟ ಮಹಿಳೆಯರು ಮತ್ತು ಮಕ್ಕಳನ್ನು ಶೋಷಣೆಯಿಂದ ರಕ್ಷಿಸಲು ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ART) ಸೇವೆಗಳನ್ನು ನಿಯಂತ್ರಿಸುವ ಅಗತ್ಯವಿದೆ. ಪ್ರಸ್ತುತ ಕ್ಲಿನಿಕ್ಗಳು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ICMR) ನಲ್ಲಿ ನೋಂದಾಯಿಸಿಕೊಳ್ಳುವುದು ಸ್ವಯಂಪ್ರೇರಿತವಾಗಿದೆ, ಇದರಿಂದಾಗಿ ಹೆಚ್ಚಿನ ಕ್ಲಿನಿಕ್ಗಳು ನೋಂದಾಯಿಸುವ ಕುರಿತು ತಲೆಕೆಡಿಸಿಕೊಳ್ಳುವುದಿಲ್ಲ ಮತ್ತು ಬಂಜೆತನದ ಚಿಕಿತ್ಸೆಯನ್ನು ನೀಡುವಾಗ ಅಸ್ಪಷ್ಟತೆ ಇದೆ.
ಪ್ರಾಮುಖ್ಯತೆ:
ಈ ಕಾಯಿದೆ ಜಾರಿಗೆ ಬರುವುದರೊಂದಿಗೆ, ‘ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ ಸೇವೆಗಳು’ ದೇಶದಲ್ಲಿ ನಿಯಂತ್ರಿಸಲ್ಪಡುತ್ತವೆ. ಪರಿಣಾಮವಾಗಿ, ಬಂಜೆತನದ ದಂಪತಿಗಳು ART ಚಿಕಿತ್ಸಾಲಯಗಳಲ್ಲಿನ ನೈತಿಕ ಅಭ್ಯಾಸಗಳ ಬಗ್ಗೆ ಹೆಚ್ಚು ಖಚಿತವಾಗಿ ಮತ್ತು ಆತ್ಮವಿಶ್ವಾಸದಿಂದ ಇರುತ್ತಾರೆ.
ART ಎಂದರೇನು? ಅದು ಏಕೆ ಬೇಡಿಕೆಯಲ್ಲಿದೆ?
- ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (Assisted Reproductive Technology – ART), ಸಾಮಾನ್ಯವಾಗಿ ಇನ್-ವಿಟ್ರೊ ಫರ್ಟಿಲೈಸೇಶನ್’ (IVF), ಗರ್ಭಾಶಯದ ಒಳಗಿನ ಗರ್ಭಧಾರಣೆ (IUI), ಅಂಡಾನು ಮತ್ತು ವೀರ್ಯಾಣು ದಾನ, ಕ್ರಯೋ-ಸಂರಕ್ಷಣಾ ಪ್ರಕ್ರಿಯೆಗಳಂತಹ ಕಾರ್ಯವಿಧಾನಗಳನ್ನು ಒಳಗೊಂಡಿರುತ್ತದೆ, ಇವುಗಳಲ್ಲದೆ ಇದರಲ್ಲಿ ‘ಸರೊಗಸಿ’/ಬಾಡಿಗೆ ತಾಯಿ (Surrogacy) ಸೌಲಭ್ಯ ಕೂಡ ಸೇರಿದೆ.
- ಮಕ್ಕಳಿಲ್ಲದಿರುವಿಕೆಯ ಸಾಮಾಜಿಕ ಕಳಂಕ ಮತ್ತು ಸುದೀರ್ಘ ಅವಧಿಯ ದತ್ತು ಪ್ರಕ್ರಿಯೆಯು ಭಾರತದಲ್ಲಿ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನದ (ART) ಬೇಡಿಕೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಆದ್ದರಿಂದ ART ಉದ್ಯಮವು 10% ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರದಲ್ಲಿ ಬೆಳೆಯುವ ನಿರೀಕ್ಷೆಯಿದೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ.
ಭಾರತದಲ್ಲಿ ART vs ಬಾಡಿಗೆ ತಾಯ್ತನ:
- ‘ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ’ (Surrogacy (Regulation) Bill) ಬಂಜೆತನ ಸಮಸ್ಯೆಯ ಪರಿಹಾರಕ್ಕಾಗಿ ‘ಬದಲಿ ತಾಯ್ತನ’ ಅಂದರೆ ‘ಬಾಡಿಗೆ ತಾಯ್ತನ’ (Surrogacy) ಕ್ಕೆ ಸಂಬಂಧಿಸಿದೆ, ಇದರಲ್ಲಿ ಮೂರನೇ ವ್ಯಕ್ತಿ, ಅಂದರೆ ಮಹಿಳೆ, ಬಾಡಿಗೆ ತಾಯಿಯಾಗಿ ಕಾರ್ಯನಿರ್ವಹಿಸುತ್ತಾರೆ. ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ (ART) ವಿಧಾನದಲ್ಲಿ, ಮಗುವನ್ನು ಹೊಂದಲು ಬಯಸುವ ದಂಪತಿಗಳು ಈ ಚಿಕಿತ್ಸೆಯನ್ನು ಪಡೆಯಬಹುದು ಮತ್ತು ಇಲ್ಲಿ ಮೂರನೇ ವ್ಯಕ್ತಿಯ ಪಾಲ್ಗೊಳ್ಳುವಿಕೆಯ ಅಗತ್ಯವಿರುವುದಿಲ್ಲ.
- ಬಾಡಿಗೆ ತಾಯ್ತನವನ್ನು ಭಾರತೀಯ ವಿವಾಹಿತ ದಂಪತಿಗಳಿಗೆ ಮಾತ್ರ ಅನುಮತಿಸಲಾಗಿದೆ. ಆದರೆ, ART ಕಾರ್ಯವಿಧಾನಗಳು ವಿವಾಹಿತ ದಂಪತಿಗಳು, ಸಹ-ಜೀವನ ನಡೆಸುತ್ತಿರುವ ಸಂಗಾತಿಗಳಿಗೆ, ಒಂಟಿ ಮಹಿಳೆಯರು ಮತ್ತು ವಿದೇಶಿಯರಿಗೆ ಸಹ ಮುಕ್ತವಾಗಿರುತ್ತವೆ.
- 2015 ರಲ್ಲಿ ಹೊರಡಿಸಲಾದ ಅಧಿಸೂಚನೆಯ ಮೂಲಕ, ವಿದೇಶಿಗರು ಅಥವಾ OCI ಅಥವಾ PIO ಕಾರ್ಡುದಾರರು ಭಾರತದಲ್ಲಿ ಬಾಡಿಗೆ ತಾಯ್ತನ ಪ್ರಕ್ರಿಯೆಯನ್ನು ಪ್ರಾರಂಭಿಸುವುದನ್ನು ನಿಷೇಧಿಸಲಾಗಿದೆ, ಆದರೆ ಭಾರತೀಯ ಪೌರತ್ವವನ್ನು ಹೊಂದಿರುವ NRI ಗಳು ಬಾಡಿಗೆ ತಾಯ್ತನವನ್ನು ಪಡೆಯಬಹುದು. ಆದರೆ ART ಸೇವೆಗಳನ್ನು ಪಡೆಯಲು ವಿದೇಶಿ ಪ್ರಜೆಗಳು ವೈದ್ಯಕೀಯ ಪ್ರವಾಸೋದ್ಯಮದ ಅಡಿಯಲ್ಲಿ ಭಾರತಕ್ಕೆ ಬರಬಹುದು.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.
ಸಂಸದರ ಪ್ರಶ್ನೆಗಳನ್ನು ಪುರಸ್ಕರಿಸುವ ಮತ್ತು ತಿರಸ್ಕರಿಸುವ ವಿಧಾನ.
(How are MPs’ questions allowed, disallowed?)
ಸಂದರ್ಭ:
ಕಳೆದ ಕೆಲವು ಅಧಿವೇಶನಗಳಲ್ಲಿ, ಕೆಲವು ಸಂಸದರು – ವಿಶೇಷವಾಗಿ ವಿರೋಧ ಪಕ್ಷದ ಸಂಸದರು – ಸಂಸತ್ತಿನಲ್ಲಿ ತಮ್ಮ ಪ್ರಶ್ನೆಗಳನ್ನು ಕೇಳಲು ಅವಕಾಶ ಹೆಚ್ಚಾಗಿ ನೀಡಲಿಲ್ಲ ಎಂಬ ಆರೋಪವನ್ನು ಮಾಡುತ್ತಿದ್ದಾರೆ.
ಸದನದಲ್ಲಿ ಕೇಳಲು ಅನುಮತಿಸದ ಪ್ರಶ್ನೆಗಳು ಈ ಕೆಳಗಿನ ಮುಖ್ಯ ಪ್ರಶ್ನೆಗಳನ್ನು ಒಳಗೊಂಡಿವೆ:
- ಅನಿವಾಸಿ ಭಾರತೀಯರನ್ನು (NRI) ವಿಮಾನ ನಿಲ್ದಾಣಗಳಲ್ಲಿ ಕಿರುಕುಳ ನೀಡಿ ವಾಪಸ್ ಕಳುಹಿಸಲಾಗಿದೆಯೇ?
- ಲಡಾಖ್ನಲ್ಲಿರುವ ‘ವಾಸ್ತವ ನಿಯಂತ್ರಣ ರೇಖೆ’ (LAC) ಯನ್ನು ಅತಿಕ್ರಮಿಸಿ ಚೀನಾ ಸೈನಿಕರು ಭಾರತದ ಭೂಪ್ರದೇಶವನ್ನು ಪ್ರವೇಶಿಸಿದ್ದಾರೆಯೇ?
ಲೋಕಸಭೆ ಮತ್ತು ರಾಜ್ಯಸಭೆಯ ಕಾರ್ಯದರ್ಶಿಗಳು ಈ ಪ್ರಶ್ನೆಗಳಿಗೆ ಅವಕಾಶ ನೀಡದಿರಲು ಸಮಯದ ಅಭಾವ ಮತ್ತು ರಾಷ್ಟ್ರೀಯ ಭದ್ರತೆಯನ್ನು ಕಾರಣವೆಂದು ಉಲ್ಲೇಖಿಸಿದ್ದಾರೆ.
ಸಂಸದರ ಪ್ರಶ್ನೆ ಕೇಳುವ ಹಕ್ಕು:
ಉಭಯ ಸದನಗಳಲ್ಲಿ, ಚುನಾಯಿತ ಸದಸ್ಯರು ಚುಕ್ಕಿ ಗುರುತಿನ ಪ್ರಶ್ನೆಗಳು (Starred Questions), ಚುಕ್ಕಿ ಗುರುತಿಲ್ಲದ ಪ್ರಶ್ನೆಗಳು (Un Starred Questions), ಕಿರು ಸೂಚನೆ ಪ್ರಶ್ನೆಗಳು (Short Notice Questions) ಮತ್ತು ‘ಖಾಸಗಿ ಸದಸ್ಯರಿಗೆ ಪ್ರಶ್ನೆಗಳ (Questions To Private Members),ರೂಪದಲ್ಲಿ ವಿವಿಧ ಸಚಿವಾಲಯಗಳಿಂದ ಮತ್ತು ಇಲಾಖೆಗಳಿಂದ ಮಾಹಿತಿಯನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ.
ಪ್ರಶ್ನೆಗಳ ಸ್ವೀಕಾರಕ್ಕಾಗಿ ಕಾರ್ಯವಿಧಾನ:
- ಸಾಮಾನ್ಯವಾಗಿ, ಸಂಸದರ ಪ್ರಶ್ನೆಗಳ ದೀರ್ಘ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ, ನಂತರ ಅದು ಕಠಿಣವಾದ ಅನುಮೋದನೆಯ ಪ್ರಕ್ರಿಯೆಯ ಮೂಲಕ ಹೋಗುತ್ತದೆ.
- ಪ್ರಶ್ನೆಗಳ ಸ್ವೀಕಾರಾರ್ಹತೆಯನ್ನು ನಿಯಂತ್ರಿಸುವ ಷರತ್ತುಗಳನ್ನು ರಾಜ್ಯಸಭೆಯಲ್ಲಿನ ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ 47-50 ರಲ್ಲಿ ನೀಡಲಾಗಿದೆ.
- ಅರ್ಹತಾ ಷರತ್ತುಗಳನ್ನು ಪೂರೈಸುವ ಯಾವುದೇ ಪ್ರಶ್ನೆಯನ್ನು ಸ್ವೀಕರಿಸಿದ ನಂತರ, ಸಚಿವಾಲಯವು ಸಂಬಂಧಪಟ್ಟ ಸಚಿವಾಲಯಕ್ಕೆ ರವಾನಿಸುತ್ತದೆ. ಸಚಿವಾಲಯದಿಂದ ಸತ್ಯಾಂಶಗಳನ್ನು ಸ್ವೀಕರಿಸಿದ ನಂತರ, ಪ್ರಶ್ನೆಯನ್ನು ಸ್ವೀಕಾರಾರ್ಹತೆಗಾಗಿ / ‘ಅಡ್ಮಿಸಿಬಿಲಿಟಿ’ಗಾಗಿ ಮತ್ತಷ್ಟು ಪರಿಶೀಲಿಸಲಾಗುತ್ತದೆ.
- ಪ್ರಶ್ನೆಗಳ ಅಂತಿಮ ಪಟ್ಟಿಯನ್ನು ಮಂತ್ರಿಗಳಿಗೆ ಕಳುಹಿಸಲಾಗುತ್ತದೆ, ಅದರ ಆಧಾರದ ಮೇಲೆ ಅವರು ತಮ್ಮ ಉತ್ತರಗಳನ್ನು ಸಿದ್ಧಪಡಿಸುತ್ತಾರೆ.
ಚುಕ್ಕಿ ಗುರುತಿನ, ಚುಕ್ಕಿ ಗುರುತಿಲ್ಲದ ಮತ್ತು ಇತರ ವರ್ಗಗಳ ಪ್ರಶ್ನೆಗಳಿಗೆ ಸಂಬಂಧಿಸಿದಂತೆ:
ಚುಕ್ಕಿ ಗುರುತಿನ/ತಾರಾಂಕಿತ ಪ್ರಶ್ನೆಗಳು (Starred Questions): ಇವುಗಳ ಸದಸ್ಯರು ಸದನದಲ್ಲಿ ಸಚಿವರಿಂದ ಮೌಖಿಕ ಉತ್ತರವನ್ನು ಬಯಸುತ್ತಾರೆ ಮತ್ತು ಈ ಪ್ರಶ್ನೆಗಳನ್ನು ಗುರುತಿಸಲು ಸಂಸದರು ನಕ್ಷತ್ರ ಚಿಹ್ನೆಗಳನ್ನು ಬಳಸುತ್ತಾರೆ. ಅಂತಹ ಪ್ರಶ್ನೆಗೆ ಉತ್ತರದ ನಂತರ, ಸದಸ್ಯರು ಅದಕ್ಕೆ ಪೂರಕ ಪ್ರಶ್ನೆಗಳನ್ನು ಕೇಳಬಹುದು.
ಚುಕ್ಕಿ ಗುರುತಿಲ್ಲದ/ಅತಾರಾಂಕಿತ ಪ್ರಶ್ನೆಗಳು (Unstarred Questions): ಈ ಪ್ರಶ್ನೆಗಳಿಗೆ ಲಿಖಿತ ಉತ್ತರಗಳನ್ನು ಸಚಿವರು ನೀಡುತ್ತಾರೆ, ಇದನ್ನು ಪ್ರಶ್ನೋತ್ತರ ಅವಧಿಯ ಕೊನೆಯಲ್ಲಿ ಸದನದಲ್ಲಿ ಮಂಡಿಸಲಾಗುತ್ತದೆ ಎಂದು ಭಾವಿಸಲಾಗಿದೆ. ಹೀಗಾಗಿ ಇದನ್ನು ಮೌಖಿಕ ಉತ್ತರಕ್ಕಾಗಿ ಕರೆಯಲಾಗುವುದಿಲ್ಲ ಮತ್ತು ಅದರ ಮೇಲೆ ಯಾವುದೇ ಪೂರಕ ಪ್ರಶ್ನೆಯನ್ನು ಕೇಳಲಾಗುವುದಿಲ್ಲ.
ಕಿರು ಸೂಚನೆ ಪ್ರಶ್ನೆಗಳು (Short Notice Questions): ಅಂತಹ ಪ್ರಶ್ನೆಗಳನ್ನು ಚುಕ್ಕಿ ಗುರುತಿನ ಮತ್ತು ಚುಕ್ಕಿ ಗುರುತಿಲ್ಲದ ಪ್ರಶ್ನೆಗಳಿಗೆ ನಿಗದಿಪಡಿಸಿದ ಸಮಯಕ್ಕಿಂತ ಕಡಿಮೆ ಸಮಯದಲ್ಲಿ ಪ್ರಶ್ನೋತ್ತರ ಅವಧಿಯ ನಂತರ ಅಥವಾ ಪ್ರಶ್ನೋತ್ತರ ಅವಧಿ ಇಲ್ಲದಿದ್ದರೆ ಕಾರ್ಯಸೂಚಿಯ ಮೊದಲ ಸಂಚಿಕೆಯಾಗಿ ಸದನದಲ್ಲಿ ಮೌಖಿಕವಾಗಿ ಕೇಳಲಾಗುತ್ತದೆ.
ಈ ಪ್ರಶ್ನೆಗಳು ಸದನದ ಅಧ್ಯಕ್ಷರು ಸಾರ್ವಜನಿಕ ಪ್ರಾಮುಖ್ಯತೆಯ ತುರ್ತು ಎಂದು ಪರಿಗಣಿಸಬಹುದಾದಂತಹ ವಿಷಯಗಳಿಗೆ ಸಂಬಂಧಿಸಿರಬೇಕು. ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ಪ್ರಶ್ನೆಯನ್ನು ಮೌಖಿಕ ಉತ್ತರಕ್ಕಾಗಿ ಸದಸ್ಯರಿಂದ ಸ್ವೀಕರಿಸಲು ನೋಟಿಸ್ ನೀಡಬಹುದು ಮತ್ತು ಸಾಮಾನ್ಯ ಪ್ರಶ್ನೆಗೆ ನಿರ್ದಿಷ್ಟಪಡಿಸಿದ 10 ದಿನಗಳ ಸೂಚನೆ ಅವಧಿಗಿಂತ ಕಡಿಮೆ ಅವಧಿಯೊಳಗೆ ಕೇಳಬಹುದು. ಅಂತಹ ಪ್ರಶ್ನೆಗಳನ್ನು ‘ಸಣ್ಣ ಮಾಹಿತಿ ಪ್ರಶ್ನೆಗಳು’ ಎಂದು ಕರೆಯಲಾಗುತ್ತದೆ.
ಖಾಸಗಿ ಸದಸ್ಯರಿಗೆ ಪ್ರಶ್ನೆಗಳು (Questions To Private Members):
ಲೋಕಸಭೆಯ ಕಾರ್ಯವಿಧಾನದ ನಿಯಮಗಳ ನಿಯಮ 40 ಅಥವಾ ರಾಜ್ಯಸಭೆಯ ನಿಯಮ 48 ರ ಅಡಿಯಲ್ಲಿ, ಪ್ರಶ್ನೆಯನ್ನು ಖಾಸಗಿ ಸದಸ್ಯರಿಗೆ ಕೇಳಬಹುದು, ಪ್ರಶ್ನೆಯ ವಿಷಯವು ಯಾವುದೇ ಮಸೂದೆ, ನಿರ್ಣಯ ಅಥವಾ ಆ ಸದಸ್ಯನು ಜವಾಬ್ದಾರರಾಗಿರುವ ಸದನದಲ್ಲಿನ ವ್ಯವಹಾರದ ನಡವಳಿಕೆಗೆ ಸಂಬಂಧಿಸಿದ ಇತರ ವಿಷಯಕ್ಕೆ ಸಂಬಂಧಿಸಿದೆ ಎಂದು ಒದಗಿಸಲಾಗಿದೆ.
ಯಾವ ವಿಧದ ಪ್ರಶ್ನೆಗಳನ್ನು ಕೇಳಬಹುದು?
- ರಾಜ್ಯಸಭೆಯಲ್ಲಿ: ವಿವಿಧ ಮಾನದಂಡಗಳ ಜೊತೆಗೆ, ಪ್ರಶ್ನೆಗಳು ‘ನಿಖರ, ನಿರ್ದಿಷ್ಟ ಮತ್ತು ಒಂದು ಸಮಸ್ಯೆಗೆ ಮಾತ್ರ ಸೀಮಿತವಾಗಿರಬೇಕು; ಇದು ಪ್ರಶ್ನೆಯನ್ನು ಅರ್ಥವಾಗುವಂತೆ ಮಾಡಲು ಸಂಪೂರ್ಣವಾಗಿ ಅಗತ್ಯವಿಲ್ಲದ ಯಾವುದೇ ಹೆಸರು ಅಥವಾ ಹೇಳಿಕೆಯನ್ನು ಹೊಂದಿರಬಾರದು; ಅದು ಯಾವುದೇ ಹೇಳಿಕೆಯನ್ನು ಹೊಂದಿದ್ದರೆ, ಹೇಳಿಕೆಯ ನಿಖರತೆಗೆ ಸದಸ್ಯನು ಸ್ವತಃ ಜವಾಬ್ದಾರನಾಗಿರುತ್ತಾನೆ; ಮತ್ತು ವಾದಗಳು, ತೀರ್ಮಾನಗಳು, ವ್ಯಂಗ್ಯ ನುಡಿಗಟ್ಟುಗಳು, ಉಪಮೆಗಳು, ವಿಶೇಷಣಗಳು ಅಥವಾ ಮಾನಹಾನಿಕರ ಹೇಳಿಕೆಗಳನ್ನು ಹೊಂದಿರಬಾರದು.
- ಲೋಕಸಭೆಯಲ್ಲಿ, ಈಗಾಗಲೇ ಉತ್ತರಿಸಿರುವ ಅಥವಾ ಉತ್ತರಿಸಲು ನಿರಾಕರಿಸಿದ ಪ್ರಶ್ನೆಗಳು; ಅಥವಾ ಯಾವುದೇ ನ್ಯಾಯಾಲಯ ಅಥವಾ ಸಂಸದೀಯ ಸಮಿತಿಯ ಮುಂದೆ ತೀರ್ಪಿಗಾಗಿ ಬಾಕಿ ಇರುವ ವಿಷಯಗಳನ್ನು ಒಳಗೊಂಡಿರುವ ಪ್ರಶ್ನೆಗಳನ್ನು ಸ್ವೀಕರಿಸಲಾಗುವುದಿಲ್ಲ.
ವಿಷಯಗಳು: ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.
ಪಕ್ಷಾಂತರ ನಿಷೇಧ ಕಾಯ್ದೆ:
(Anti-defection law)
ಸಂದರ್ಭ:
ಕಾಂಗ್ರೆಸ್ ಪಕ್ಷವು ಇತ್ತೀಚೆಗೆ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (AITMC) ಸೇರಲು ಕಾಂಗ್ರೆಸ್ ಪಕ್ಷವನ್ನು ತೊರೆದ ಒಟ್ಟು 12 ಶಾಸಕರ ಪೈಕಿ 10 ಶಾಸಕರನ್ನು ಅನರ್ಹಗೊಳಿಸುವಂತೆ,ಮೇಘಾಲಯ ವಿಧಾನಸಭೆಯ ಸ್ಪೀಕರ್ಗೆ ಪತ್ರದ ಮೂಲಕ ಕೋರಿದೆ.
ಈ ಯುಕ್ತ ಪ್ರಕರಣದಲ್ಲಿ 10ನೇ ಅನುಸೂಚಿಯು ಏಕೆ ಅನ್ವಯಿಸುವುದಿಲ್ಲ?
ಭಾರತೀಯ ಸಂವಿಧಾನದ 10 ನೇ ಅನುಸೂಚಿಯನ್ನು ಸಾಮಾನ್ಯವಾಗಿ ‘ಪಕ್ಷಾಂತರ ವಿರೋಧಿ ಕಾಯ್ದೆ’ ಎಂದು ಕರೆಯಲಾಗುತ್ತದೆ. ಈ ಕಾನೂನುಗಳ ಪ್ರಕಾರ, ಪಕ್ಷಾಂತರದ ಆಧಾರದ ಮೇಲೆ ಅನರ್ಹಗೊಳಿಸುವ ನಿಬಂಧನೆಯು ರಾಜಕೀಯ ಪಕ್ಷದ ವಿಭಜನೆಯ ಸಂದರ್ಭದಲ್ಲಿ ಅನ್ವಯಿಸುವುದಿಲ್ಲ.
- ಸದನದ ಸದಸ್ಯನು ತಾನು ಮತ್ತು ತನ್ನ ಶಾಸಕಾಂಗ ಪಕ್ಷದ ಯಾವುದೇ ಇತರ ಸದಸ್ಯರು,ತನ್ನ ಮಾತೃ ರಾಜಕೀಯ ಪಕ್ಷದಲ್ಲಿನ ವಿಭಜನೆಯ ಪರಿಣಾಮವಾಗಿ ಉದ್ಭವಿಸುವ ಹೊಸ ಬಣವನ್ನು ಪ್ರತಿನಿಧಿಸುವ ಗುಂಪನ್ನು ರಚಿಸಿದರೆ ಮತ್ತು ಅದರ ಗುಂಪು ಅದರ ಮೂಲ ರಾಜಕೀಯ ಪಕ್ಷದ ಶಾಸಕಾಂಗದ ಒಟ್ಟು ಸದಸ್ಯರ ಮೂರನೇ ಎರಡರಷ್ಟು ಸದಸ್ಯರನ್ನು ಒಳಗೊಂಡಿದೆ ಎಂದು ಹೇಳಿಕೊಂಡರೆ, ಅಂತಹ ಸದಸ್ಯರನ್ನು ಅನರ್ಹಗೊಳಿಸಲಾಗುವುದಿಲ್ಲ.
- ಅಂತಹ ವಿಭಜನೆಯ ನಂತರ, ಸಂಬಂಧಪಟ್ಟ ಗುಂಪನ್ನು ಅದು ಪ್ರಸ್ತುತ ಸಂಬಂಧ ಹೊಂದಿರುವ ರಾಜಕೀಯ ಪಕ್ಷದ ಭಾಗವೆಂದು ಪರಿಗಣಿಸಲಾಗುತ್ತದೆ.
ಭಾರತೀಯ ಸಂವಿಧಾನದ ಹತ್ತನೇ ಅನುಸೂಚಿ: ಪ್ರಸ್ತುತತೆ:
ಭಾರತೀಯ ಸಂವಿಧಾನದ ಹತ್ತನೇ ಶೆಡ್ಯೂಲ್ ಅನ್ನು ಜನಪ್ರಿಯವಾಗಿ ‘ಪಕ್ಷಾಂತರ ವಿರೋಧಿ ಕಾನೂನು’ ಎಂದು ಕರೆಯಲಾಗುತ್ತದೆ.
ಸಂಸದರು/ಶಾಸಕರು ರಾಜಕೀಯ ಪಕ್ಷಗಳ ಬದಲಾವಣೆಗೆ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಬಹುದಾದ ಸಂದರ್ಭಗಳನ್ನು ಇದು ನಿರ್ದಿಷ್ಟಪಡಿಸುತ್ತದೆ.
ಈ ಅನುಸೂಚಿಯನ್ನು 52 ನೇ ತಿದ್ದುಪಡಿ ಕಾಯಿದೆಯಿಂದ ಸಂವಿಧಾನಕ್ಕೆ ಸೇರಿಸಲಾಗಿದೆ.
ಇದರಲ್ಲಿ,ಸ್ವತಂತ್ರ ಶಾಸಕರು ಚುನಾವಣೆಯ ನಂತರ ಪಕ್ಷಕ್ಕೆ ಸೇರುವ ಷರತ್ತುಗಳ ಬಗ್ಗೆಯೂ ನಿಬಂಧನೆಗಳನ್ನು ಮಾಡಲಾಗಿದೆ.
ಈ ಕಾಯಿದೆಯು ಸಂಸದ ಅಥವಾ ಶಾಸಕರಿಂದ ರಾಜಕೀಯ ಪಕ್ಷ ಬದಲಾವಣೆಗೆ ಸಂಬಂಧಿಸಿದಂತೆ ಈ ಕೆಳಗಿನ ಮೂರು ಸನ್ನಿವೇಶಗಳನ್ನು ನಿರ್ದಿಷ್ಟಪಡಿಸುತ್ತದೆ:
ಸದನದ ಸದಸ್ಯನೊಬ್ಬ ರಾಜಕೀಯ ಪಕ್ಷವೊಂದಕ್ಕೆ ಸೇರಿದವನಾಗಿದ್ದರೆ,
- ತನ್ನ ಮಾತೃಪಕ್ಷದ ಟಿಕೆಟ್ ನಿಂದ ಚುನಾಯಿತರಾದ ಸದಸ್ಯರು ಸ್ವಯಂಪ್ರೇರಣೆಯಿಂದ ತನ್ನ ರಾಜಕೀಯ ಪಕ್ಷದ ಸದಸ್ಯತ್ವವನ್ನು ತ್ಯಜಿಸಿದರೆ, ಅಥವಾ
- ಅವರು ತಮ್ಮ ರಾಜಕೀಯ ಪಕ್ಷದ ಸೂಚನೆಗಳಿಗೆ ವಿರುದ್ಧವಾಗಿ ಸದನದಲ್ಲಿ ಮತ ಚಲಾಯಿಸಿದರೆ.
- ಸ್ವತಂತ್ರ ಅಭ್ಯರ್ಥಿಯು ಚುನಾವಣೆಯ 6 ತಿಂಗಳ ನಂತರ ರಾಜಕೀಯ ಪಕ್ಷವೊಂದಕ್ಕೆ ಸೇರಿದರೆ.
ಮೇಲಿನ ಸಂದರ್ಭಗಳಲ್ಲಿ ಶಾಸಕರು ಪಕ್ಷವನ್ನು ಬದಲಾಯಿಸುವ ಅಥವಾ ಹೊಸ ಪಕ್ಷವನ್ನು ಸೇರುವ ಕಾರ್ಯ ಮಾಡಿದರೆ ಆಗ ಅವರು ತಮ್ಮ ಚುನಾಯಿತ ಶಾಸಕಾಂಗದ ಸ್ಥಾನವನ್ನು ಕಳೆದುಕೊಳ್ಳುತ್ತಾರೆ.
ನಾಮನಿರ್ದೇಶಿತ ಸದಸ್ಯರೊಬ್ಬರು (ಸಂಸದರು ಅಥವಾ ವಿಧಾನಮಂಡಲ ಸದಸ್ಯರು) (Nominated Member) ಶಾಸಕಾಂಗದ/ ಸಂಸತ್ತಿನ ಸದಸ್ಯರಾದ ಆರು ತಿಂಗಳ ಒಳಗೆ ಅವರು ರಾಜಕೀಯ ಪಕ್ಷವೊಂದನ್ನು ಸೇರಬಹುದು ಎಂದು ಕಾನೂನು ತಿಳಿಸುತ್ತದೆ ಅದರ ನಂತರ ಪಕ್ಷವೊಂದಕ್ಕೆ ಸೇರಿದರೆ ವಿಧಾನಮಂಡಲದಲ್ಲಿ ಅಥವಾ ಸಂಸತ್ತಿನಲ್ಲಿ ಆ ನಾಮನಿರ್ದೇಶಿತ ಸದಸ್ಯರು ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಾರೆ.
ಅನರ್ಹತೆಗೆ ಸಂಬಂಧಿಸಿದ ವಿಷಯಗಳು:
- ಪಕ್ಷಾಂತರ ನಿಷೇಧ ಕಾಯಿದೆಯಡಿ, ಸಂಸದ ಅಥವಾ ಶಾಸಕರ ಅನರ್ಹತೆ/ಅನರ್ಹತೆಯನ್ನು ನಿರ್ಧರಿಸುವ ಅಧಿಕಾರ ಶಾಸಕಾಂಗದ ಅಧ್ಯಕ್ಷರಿಗೆ ಇರುತ್ತದೆ.
- ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕಾನೂನಿನಲ್ಲಿ ಯಾವುದೇ ಸಮಯದ ಮಿತಿಯನ್ನು ನಿರ್ದಿಷ್ಟಪಡಿಸಲಾಗಿಲ್ಲ.
- ಕಳೆದ ವರ್ಷ, ಸುಪ್ರೀಂ ಕೋರ್ಟ್ ಪಕ್ಷಾಂತರ ವಿರೋಧಿ ಪ್ರಕರಣಗಳನ್ನು ಮೂರು ತಿಂಗಳ ಅವಧಿಯಲ್ಲಿ ಶಾಸಕಾಂಗದ ಅಧ್ಯಕ್ಷರು ತೀರ್ಮಾನಿಸಬೇಕು ಎಂದು ಹೇಳಿತ್ತು.
ಕಾನೂನಿನ ಅಡಿಯಲ್ಲಿ ವಿನಾಯಿತಿಗಳು:
ಸದನದ ಸದಸ್ಯರು (ಸಂಸದರು/ಶಾಸಕರು) ಕೆಲವು ಸಂದರ್ಭಗಳಲ್ಲಿ ಅನರ್ಹತೆಯ ಅಪಾಯವಿಲ್ಲದೆ ತಮ್ಮ ಪಕ್ಷವನ್ನು ಬದಲಾಯಿಸಬಹುದು.
- ಒಂದು ರಾಜಕೀಯ ಪಕ್ಷದ ಕನಿಷ್ಠ ಮೂರನೇ ಎರಡರಷ್ಟು ಶಾಸಕರು ವಿಲೀನದ ಪರವಾಗಿದ್ದರೆ ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳ್ಳಲು ಅವಕಾಶವಿದೆ ಮತ್ತು ಇದನ್ನು ಕಾನೂನು ಅನುಮತಿಸುತ್ತದೆ.
- ಅಂತಹ ಸನ್ನಿವೇಶದಲ್ಲಿ, ಇತರ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸುವ ಸದಸ್ಯರು ಮತ್ತು ಮೂಲ ಪಕ್ಷದಲ್ಲಿ ಉಳಿಯುವ ಸದಸ್ಯರನ್ನು ಅನರ್ಹಗೊಳಿಸಲಾಗುವುದಿಲ್ಲ.
- ಲೋಕಸಭೆ ಅಥವಾ ವಿಧಾನಸಭೆಯ ಸದಸ್ಯನು ಲೋಕಸಭೆ ಅಥವಾ ವಿಧಾನಸಭೆಯ ಸಭಾಪತಿಯಾಗಿ ಆಯ್ಕೆಯಾದ ನಂತರ ಸ್ವಯಂಪ್ರೇರಣೆಯಿಂದ ತನ್ನ ಪಕ್ಷದ ಸದಸ್ಯತ್ವವನ್ನು ಬಿಟ್ಟುಕೊಟ್ಟರೆ ಅಥವಾ ಸಭಾಪತಿಯ ಹುದ್ದೆಯನ್ನು ತ್ಯಜಿಸಿದ ನಂತರ ಮರಳಿ ತನ್ನ ಮಾತೃ ಪಕ್ಷವನ್ನು ಸೇರಿಕೊಂಡರೆ ಆ ವ್ಯಕ್ತಿಯು ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಅನರ್ಹಗೊಳ್ಳುವುದಿಲ್ಲ.
ಈ ಕಾನೂನಿನಲ್ಲಿನ ಲೋಪ ದೋಷಗಳು:
ಈ ಕಾನೂನನ್ನು ವಿರೋಧಿಸುವವರು, ವ್ಯಕ್ತಿಗಳನ್ನು ಮತದಾರರು ಆಯ್ಕೆ ಮಾಡುತ್ತಾರೆಯೇ ಹೊರತು ಪಕ್ಷಗಳನ್ನಲ್ಲ ಮತ್ತು ಆದ್ದರಿಂದ ಪಕ್ಷಾಂತರ ವಿರೋಧಿ ಕಾನೂನು ನಿರರ್ಥಕವಾಗಿದೆ ಎಂದು ಹೇಳುತ್ತಾರೆ.
ಪಕ್ಷಾಂತರ ನಿಷೇಧ ಕಾನೂನು ಎಂದರೇನು?
(What is Anti-defection law?)
- 1985 ರಲ್ಲಿ, ಸಂವಿಧಾನ 52 ನೆಯ ತಿದ್ದುಪಡಿ ಕಾಯ್ದೆಯ ಮೂಲಕ 10 ನೇ ಅನುಸೂಚಿಯನ್ನು ಸಂವಿಧಾನದಲ್ಲಿ ಸೇರಿಸಲಾಯಿತು.
- ಇದರಲ್ಲಿ, ಸದನದ ಸದಸ್ಯರು ಒಂದು ರಾಜಕೀಯ ಪಕ್ಷದಿಂದ ಇನ್ನೊಂದಕ್ಕೆ ಸೇರಿದಾಗ ‘ಪಕ್ಷಾಂತರದ’ ಆಧಾರದ ಮೇಲೆ ಶಾಸಕರ / ಸಂಸದರ ಅನರ್ಹತೆಯ ಬಗ್ಗೆ ನಿರ್ಧರಿಸಲು ಅವಕಾಶ ಕಲ್ಪಿಸಲಾಗಿದೆ.
- ಸಂಸದರು ಮತ್ತು ಶಾಸಕರು ತಮ್ಮ ಮೂಲ ರಾಜಕೀಯ ಪಕ್ಷವನ್ನು ಅಂದರೆ ಯಾವ ಪಕ್ಷದ ಟಿಕೆಟ್ ಆಧರಿಸಿ ಆಯ್ಕೆಯಾಗಿರುತ್ತಾರೋ ಅದನ್ನು ಹೊರತುಪಡಿಸಿ ಬೇರೆ ಪಕ್ಷಗಳಿಗೆ ಸೇರುವುದನ್ನು ನಿಷೇಧಿಸುವ ಮೂಲಕ ಸರ್ಕಾರಗಳಲ್ಲಿ ಸ್ಥಿರತೆಯನ್ನು ತರುವುದು ಈ ತಿದ್ದುಪಡಿಯ ಉದ್ದೇಶವಾಗಿತ್ತು.
- ಇದರ ಅಡಿಯಲ್ಲಿ ರಾಜಕೀಯ ನಿಷ್ಠೆಯನ್ನು ಬದಲಿಸುವ ಸಂಸದರಿಗೆ ವಿಧಿಸುವ ದಂಡವೆಂದರೆ ಅವರನ್ನು ಸಂಸದೀಯ ಸದಸ್ಯತ್ವದಿಂದ ಅನರ್ಹಗೊಳಿಸುವುದು ಮತ್ತು ಮಂತ್ರಿಗಳಾಗದಂತೆ ನಿಷೇಧಿಸುವುದಾಗಿದೆ.
- ಸದನದ ಮತ್ತೊಬ್ಬ ಸದಸ್ಯರು ಸದನದ ಅಧ್ಯಕ್ಷರಿಗೆ ಪಕ್ಷಾಂತರದ ಕುರಿತು ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಶಾಸಕರು ಮತ್ತು ಸಂಸದರನ್ನು ಅನರ್ಹಗೊಳಿಸುವ ಪ್ರಕ್ರಿಯೆಯನ್ನು ಇದು ತಿಳಿಸುತ್ತದೆ.
- ಪಕ್ಷಾಂತರ ವಿರೋಧಿ ಕಾನೂನನ್ನು ಜಾರಿಗೆ ತರುವ ಎಲ್ಲ ಅಧಿಕಾರಗಳನ್ನು ಸ್ಪೀಕರ್ ಅಥವಾ ಸದನದ ಅಧ್ಯಕ್ಷರಿಗೆ ನೀಡಲಾಗಿದೆ ಮತ್ತು ಅವರ ನಿರ್ಧಾರ ಅಂತಿಮವಾಗಿರುತ್ತದೆ.
ಪ್ರಿಸೈಡಿಂಗ್ ಅಧಿಕಾರಿಯ (ಸಭಾಧ್ಯಕ್ಷರು) ನಿರ್ಧಾರವು ನ್ಯಾಯಾಂಗದ ಪರಿಶೀಲನೆಗೆ ಒಳಪಟ್ಟಿರುತ್ತದೆ:
ಈ ಶಾಸನವು, ಆರಂಭದಲ್ಲಿ ಪ್ರಿಸೈಡಿಂಗ್ ಅಧಿಕಾರಿಯ ನಿರ್ಧಾರವು ನ್ಯಾಯಾಂಗ ಪರಿಶೀಲನೆಗೆ ಒಳಪಡುವುದಿಲ್ಲ ಎಂದು ಹೇಳಿತ್ತು. ಆದರೆ 1992 ರಲ್ಲಿ, ಸುಪ್ರೀಂ ಕೋರ್ಟ್ ಈ ನಿಬಂಧನೆಯನ್ನು ತಿರಸ್ಕರಿಸಿತು ಮತ್ತು ಈ ಸಂದರ್ಭದಲ್ಲಿ ಪ್ರಿಸೈಡಿಂಗ್ ಅಧಿಕಾರಿಯ ತೀರ್ಪಿನ ವಿರುದ್ಧ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿತು.
ಅಲ್ಲದೆ, ಪ್ರಿಸೈಡಿಂಗ್ ಅಧಿಕಾರಿಯು ತನ್ನ ಆದೇಶವನ್ನು ನೀಡುವವರೆಗೆ ನ್ಯಾಯಾಂಗದ ಹಸ್ತಕ್ಷೇಪ ಸಲ್ಲದು ಎಂದು ತೀರ್ಪು ನೀಡಿತು.
ಪಕ್ಷಾಂತರ ನಿಷೇಧ ಕುರಿತು ನಿರ್ಧಾರ ಕೈಗೊಳ್ಳಲು ಪ್ರಿಸೈಡಿಂಗ್ ಅಧಿಕಾರಿಗೆ ಯಾವುದೇ ಸಮಯದ ಮಿತಿ ನಿಗದಿ ಪಡಿಸಲಾಗಿದೆಯೇ?
ಕಾನೂನಿನ ಪ್ರಕಾರ, ಅನರ್ಹತೆ ಕುರಿತ ಅರ್ಜಿಯನ್ನು ನಿರ್ಧರಿಸಲು ಪ್ರಿಸೈಡಿಂಗ್ ಅಧಿಕಾರಿಗಳಿಗೆ ಯಾವುದೇ ಸಮಯ ಮಿತಿಯನ್ನು ನಿಗದಿಪಡಿಸಿಲ್ಲ. ‘ಪಕ್ಷಾಂತರ’ ಪ್ರಕರಣಗಳಲ್ಲಿ, ಯಾವುದೇ ನ್ಯಾಯಾಲಯವು ಅಧ್ಯಕ್ಷೀಯ ಅಧಿಕಾರಿಯು ನಿರ್ಧಾರ ತೆಗೆದುಕೊಂಡ ನಂತರವೇ ಮಧ್ಯಪ್ರವೇಶಿಸಬಹುದು, ಆದ್ದರಿಂದ ಅರ್ಜಿದಾರರ ಬಳಿ ಉಳಿದಿರುವ ಏಕೈಕ ಆಯ್ಕೆಯು ಈ ವಿಷಯವನ್ನು ನಿರ್ಧರಿಸುವವರೆಗೆ ಕಾಯುವುದು ಆಗಿದೆ.
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
ಉತ್ತರಾಖಂಡದ ಚಾರ್ ಧಾಮ್ ಕಾಯಿದೆ:
(Uttarakhand’s Char Dham Act)
ಸಂದರ್ಭ:
ಇತ್ತೀಚೆಗಷ್ಟೇ ಉತ್ತರಾಖಂಡ ಸರ್ಕಾರ ‘ಚಾರ್ ಧಾಮ್ ದೇವಸ್ತಾನಂ ನಿರ್ವಹಣಾ ಕಾಯ್ದೆ’ (Char Dham Devasthanam Management Act) ಯನ್ನು ಹಿಂಪಡೆಯುವುದಾಗಿ ಘೋಷಿಸಿದೆ. ಈ ನಿರ್ಧಾರದ ನಂತರ, ಉತ್ತರಾಖಂಡ್ ಚಾರ್ ಧಾಮ್ ದೇವಸ್ತಾನಂ ಆಡಳಿತ ಮಂಡಳಿಯನ್ನು ರದ್ದುಗೊಳಿಸಲಾಗುತ್ತದೆ. ಈ ಕಾಯ್ದೆಯನ್ನು ಉತ್ತರಾಖಂಡದ ನಾಲ್ಕು ದೇವಸ್ಥಾನಗಳು ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಪುರೋಹಿತರು ಮತ್ತು ಇತರ ಮಧ್ಯಸ್ಥಗಾರರು ವಿರೋಧಿಸುತ್ತಿದ್ದಾರೆ.
ಯೋಜನೆಯ ಬಗ್ಗೆ ಪರಿಸರ ಕಾಳಜಿ:
- ಈ ಯೋಜನೆಯಿಂದಾಗಿ, 55,000 ಮರಗಳು ಸೇರಿದಂತೆ ಸುಮಾರು 690 ಹೆಕ್ಟೇರ್ ಅರಣ್ಯ ಭೂಮಿ ಅಪಾಯಕ್ಕೆ ಒಳಗಾಗಬಹುದು ಮತ್ತು ಸುಮಾರು 20 ಮಿಲಿಯನ್ ಘನ ಮೀಟರ್ ಮಣ್ಣನ್ನು ಅಗೆಯಲಾಗುತ್ತದೆ ಎಂದು ಅಂದಾಜಿಸಲಾಗಿದೆ.
- ರಸ್ತೆಗಳ ಅಗಲೀಕರಣಕ್ಕಾಗಿ ಮರಗಳನ್ನು ನಿರ್ದಯವಾಗಿ ಕಡಿಯುವುದು ಅಥವಾ ಸಸ್ಯವರ್ಗವನ್ನು ಬೇರುಸಹಿತ ಕಿತ್ತುಹಾಕುವುದು ಜೀವವೈವಿಧ್ಯತೆ ಮತ್ತು ಪ್ರಾದೇಶಿಕ ಪರಿಸರಕ್ಕೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು.
‘ಚಾರ್ಧಾಮ್ ಪ್ರಾಜೆಕ್ಟ್’ ಕುರಿತು:
- 889 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ಸುಧಾರಣೆಯನ್ನು ‘ಚಾರ್ಧಾಮ್ ಯೋಜನೆ’ ಒಳಗೊಂಡಿದೆ.
- ಈ ಯೋಜನೆಯ ಮೂಲಕ ಬದರಿನಾಥ ಧಾಮ, ಕೇದಾರನಾಥ ಧಾಮ, ಗಂಗೋತ್ರಿ, ಯಮುನೋತ್ರಿ ಮತ್ತು ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗುವ ಮಾರ್ಗವನ್ನು ಸಂಪರ್ಕಿಸಲಾಗುವುದು.
ರಾಷ್ಟ್ರೀಯ ಭದ್ರತೆಯಲ್ಲಿ ಪಾತ್ರ:
ಈ ಯೋಜನೆಯು ಭಾರತ-ಚೀನಾ ಗಡಿಯನ್ನು ಡೆಹ್ರಾಡೂನ್ ಮತ್ತು ಮೀರತ್ನಲ್ಲಿರುವ ಸೇನಾ ಶಿಬಿರಗಳೊಂದಿಗೆ ಸಂಪರ್ಕಿಸುವ ಕಾರ್ಯತಂತ್ರದ ಫೀಡರ್ ರಸ್ತೆಯಾಗಿ ಕಾರ್ಯನಿರ್ವಹಿಸುತ್ತದೆ. ಡೆಹ್ರಾಡೂನ್ ಮತ್ತು ಮೀರತ್ನಲ್ಲಿ ಭಾರತೀಯ ಸೇನೆಯು ಕ್ಷಿಪಣಿ ನೆಲೆಗಳನ್ನು ಹೊಂದಿದೆ ಮತ್ತು ಈ ಸ್ಥಳಗಳಲ್ಲಿ ಭಾರೀ ಯಂತ್ರೋಪಕರಣಗಳನ್ನು ನಿಯೋಜಿಸಲಾಗಿದೆ.
ಯೋಜನೆಯ ಕುರಿತು ಸುಪ್ರೀಂ ಕೋರ್ಟ್ನ ಅಭಿಪ್ರಾಯಗಳು:
ನವೆಂಬರ್ 2020 ರಲ್ಲಿ ಸುಪ್ರೀಂ ಕೋರ್ಟ್, ಭಾರತ-ಚೀನಾ ಗಡಿಗೆ ಹೋಗುವ ‘ಚಾರ್ಧಾಮ್ ಪ್ರಾಜೆಕ್ಟ್’ (CharDham Project – CDP) ರಸ್ತೆಗಳನ್ನು ವಿಸ್ತರಿಸುವ ವಿನಂತಿಯ ಸಂದರ್ಭದಲ್ಲಿ ಪರಿಸರ ಸಮಸ್ಯೆಗಳು ಮತ್ತು ರಾಷ್ಟ್ರೀಯ ಭದ್ರತಾ ಕಾಳಜಿಗಳನ್ನು ಸಮತೋಲನಗೊಳಿಸುವ ಅಗತ್ಯವನ್ನು ಗಮನಿಸಿತು.
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
ದೇಶದ್ರೋಹ ಕಾನೂನಿನ ವ್ಯಾಖ್ಯಾನವನ್ನು ಪರಿಶೀಲನೆಗೆ ಒಳಪಡಿಸುವ ಸಮಯ ಬಂದಿದೆ ಎಂದು ಹೇಳಿದ ಸರ್ವೋಚ್ಚ ನ್ಯಾಯಾಲಯ:
(It’s time to define limits of sedition, says SC)
ಸಂದರ್ಭ:
ಇತ್ತೀಚೆಗೆ,ರಾಜ್ಯದ ಅಸ್ಸಾಮಿ ಮತ್ತು ಬಂಗಾಳಿ ಮಾತನಾಡುವ ನಾಗರಿಕರ ನಡುವೆ ದ್ವೇಷವನ್ನು ಉತ್ತೇಜಿಸುವ ಸಂಪಾದಕೀಯವನ್ನು ಬರೆಯಲಾಗಿದೆ ಎಂದು ಆರೋಪಿಸಿ ಅಸ್ಸಾಂ ಪೊಲೀಸರಿಂದ ಸ್ಥಳೀಯ ಸುದ್ದಿ ಪೋರ್ಟಲ್ನ ಸಂಪಾದಕ ಮತ್ತು ಸಹ-ಮಾಲೀಕರ ಮೇಲೆ,‘ದೇಶದ್ರೋಹ’ (124A ಅಡಿಯಲ್ಲಿ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
- ಬರಾಕ್ ಕಣಿವೆಯು ಬಂಗಾಳಿಗಳ ಪ್ರಾಬಲ್ಯವನ್ನು ಹೊಂದಿದೆ ಮತ್ತು ಬ್ರಹ್ಮಪುತ್ರ ಕಣಿವೆಯು ಅಸ್ಸಾಮಿ ಮಾತನಾಡುವ ಜನರ ಪ್ರಾಬಲ್ಯವನ್ನು ಹೊಂದಿದೆ.
ಹಿನ್ನೆಲೆ:
ದೇಶದ್ರೋಹ ಕಾನೂನನ್ನು,ವಿಮರ್ಶಕರು, ಪತ್ರಕರ್ತರು, ಸಾಮಾಜಿಕ ಮಾಧ್ಯಮ ಬಳಕೆದಾರರು, ಸರ್ಕಾರದ ಕೋವಿಡ್ -19 ನಿರ್ವಹಣೆಯ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ನೋವುಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಅಥವಾ ಸಾಂಕ್ರಾಮಿಕದ ಎರಡನೇ ಅಲೆಯ ಸಮಯದಲ್ಲಿ ತಮ್ಮ ಕುಂದುಕೊರತೆಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ, ವೈದ್ಯಕೀಯ ಸೇವೆಗಳು, ಉಪಕರಣಗಳು, ಔಷಧಿಗಳು ಮತ್ತು ಆಮ್ಲಜನಕ ಸಿಲಿಂಡರ್ಗಳನ್ನು ಪಡೆಯಲು ಸಹಾಯವನ್ನು ಕೋರಿದ ಕಾರ್ಯಕರ್ತರು ಮತ್ತು ನಾಗರಿಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದೇಶದ್ರೋಹ ಕಾನೂನನ್ನು ಬಳಸಲಾಗಿದೆ.
‘ದೇಶದ್ರೋಹ’(sedition) ಎಂದರೇನು?
ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 124 ಎ ಪ್ರಕಾರ, “ಯಾವುದೇ ವ್ಯಕ್ತಿಯು, ಪದಗಳಿಂದ, ಲಿಖಿತ ಅಥವಾ ಮಾತಿನ ಮೂಲಕ, ಅಥವಾ ಚಿಹ್ನೆಗಳ ಮೂಲಕ, ಅಥವಾ ದೃಶ್ಯ ಪ್ರದರ್ಶನದ ಮೂಲಕ ಅಥವಾ ಯಾವುದೇ ರೀತಿಯಲ್ಲಿ, ಕಾನೂನಿನಿಂದ ಸ್ಥಾಪಿಸಲ್ಪಟ್ಟ ಸರ್ಕಾರದ ವಿರುದ್ಧ, ದ್ವೇಷ ಅಥವಾ ತಿರಸ್ಕಾರವನ್ನು ಪ್ರಚೋದಿಸಿದರೆ ಅಥವಾ ತಿರಸ್ಕಾರವನ್ನು ಪ್ರಚೋದಿಸುವ ಪ್ರಯತ್ನವನ್ನು ತೋರಿಸಿದರೆ,ದಂಡದೊಂದಿಗೆ ಜೀವಾವಧಿ ಶಿಕ್ಷೆ ಅಥವಾ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಒಂದು ಅವಧಿಯ ಜೈಲು ಶಿಕ್ಷೆ, ಇದಕ್ಕೆ ದಂಡವನ್ನು ಸೇರಿಸಬಹುದು ಅಥವಾ ದಂಡದಿಂದ ಮಾತ್ರ ಶಿಕ್ಷೆ ವಿಧಿಸಬಹುದಾಗಿದೆ”.
ಸರಿಯಾದ ವ್ಯಾಖ್ಯಾನ ಅಗತ್ಯವಿದೆ:
- ದೇಶದ್ರೋಹ ಕಾನೂನು ಬಹಳ ಹಿಂದಿನಿಂದಲೂ ವಿವಾದದಲ್ಲಿದೆ. ತಮ್ಮ ನೀತಿಗಳನ್ನು ಬಹಿರಂಗವಾಗಿ ವಿಮರ್ಶೆ ಮಾಡಿದವರ ಮೇಲೆ ಭಾರತೀಯ ದಂಡ ಸಂಹಿತೆಯ (IPC) ‘ಸೆಕ್ಷನ್ 124-ಎ’ ಕಾನೂನನ್ನು ಬಳಸಿದ್ದಕ್ಕಾಗಿ ಆಗಾಗ್ಗೆ ಸರ್ಕಾರಗಳನ್ನು ಟೀಕಿಸಲಾಗಿದೆ.
- ಆದ್ದರಿಂದ, ಈ ವಿಭಾಗವನ್ನು ವ್ಯಕ್ತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿರ್ಬಂಧವೆಂದು ಪರಿಗಣಿಸಲಾಗುತ್ತದೆ ಮತ್ತು ಒಂದು ರೀತಿಯಲ್ಲಿ ಸಂವಿಧಾನದ 19 ನೇ ಪರಿಚ್ಚೇಧದ ಅಡಿಯಲ್ಲಿ ಒದಗಿಸಲಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ವಿಧಿಸಬೇಕಾದ ಸಮಂಜಸವಾದ ನಿರ್ಬಂಧಗಳ ನಿಬಂಧನೆಗಳ ಅಡಿಯಲ್ಲಿ ಬರುತ್ತದೆ.
ಈ ಕಾನೂನನ್ನು ವಸಾಹತುಶಾಹಿ ಬ್ರಿಟಿಷ್ ಆಡಳಿತಗಾರರು 1860 ರ ದಶಕದಲ್ಲಿ ಜಾರಿಗೆ ತಂದರು, ಅಂದಿನಿಂದ ಈ ಕಾನೂನು ಚರ್ಚೆಯ ವಿಷಯವಾಗಿದೆ. ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರೂ ಸೇರಿದಂತೆ ಸ್ವಾತಂತ್ರ್ಯ ಚಳವಳಿಯ ಅನೇಕ ಉನ್ನತ ನಾಯಕರ ವಿರುದ್ಧ ದೇಶದ್ರೋಹದ ಕಾನೂನಿನಡಿಯಲ್ಲಿ ಬಂಧಿಸಲಾಗಿತ್ತು.
- ಮಹಾತ್ಮ ಗಾಂಧಿ ಈ ಕಾನೂನನ್ನು “ನಾಗರಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಲು ವಿನ್ಯಾಸಗೊಳಿಸಲಾದ ಭಾರತೀಯ ದಂಡ ಸಂಹಿತೆಯ ರಾಜಕೀಯ ವಿಭಾಗಗಳ ರಾಜಕುಮಾರ” ಎಂದು ಬಣ್ಣಿಸಿದರು.
- ಕಾನೂನನ್ನು “ಹೆಚ್ಚು ಆಕ್ಷೇಪಾರ್ಹ ಮತ್ತು ಖಂಡನೀಯ” ಎಂದು ವಿವರಿಸಿದ ನೆಹರೂ, “ನಮ್ಮಿಂದ ಅಂಗೀಕರಿಸಲ್ಪಟ್ಟ ಯಾವುದೇ ಕಾನೂನುಗಳ ನಿಬಂಧನೆಗಳಲ್ಲಿ ಇದಕ್ಕೆ ಯಾವುದೇ ಸ್ಥಾನವನ್ನು ನೀಡಬಾರದು” ಮತ್ತು “ನಾವು ಅದನ್ನು ಬೇಗನೆ ತೊಡೆದುಹಾಕುತ್ತೇವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಬಂಧಿತ ಸುಪ್ರೀಂ ಕೋರ್ಟ್ನ ತೀರ್ಪುಗಳು:
ಕೇದಾರ್ ನಾಥ್ ಸಿಂಗ್ VS ಬಿಹಾರ ರಾಜ್ಯ ಪ್ರಕರಣ (1962): ಐಪಿಸಿಯ ಸೆಕ್ಷನ್ 124 ಎ ಅಡಿಯಲ್ಲಿ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಮಯದಲ್ಲಿ, ಸುಪ್ರೀಂ ಕೋರ್ಟ್ನ ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಕೇದಾರ್ ನಾಥ್ ಸಿಂಗ್ VS ಬಿಹಾರ ರಾಜ್ಯ ಪ್ರಕರಣದಲ್ಲಿ (1962) ಕೆಲವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿತು.
- ಸರ್ಕಾರದ ಟೀಕಾಕಾರರು ಸರ್ಕಾರದ ಕ್ರಮಗಳನ್ನು ಇಷ್ಟಪಡದೇ ಅದರ ಕುರಿತು ಎಷ್ಟೇ ಕಠಿಣವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೂ, ಹಿಂಸಾತ್ಮಕ ಕೃತ್ಯಗಳಿಂದ ಸಾರ್ವಜನಿಕ ಸುವ್ಯವಸ್ಥೆಯ ಉಲ್ಲಂಘನೆಗೆ ಕಾರಣವಾಗದಿದ್ದಲ್ಲಿ ಅದು ಶಿಕ್ಷಾರ್ಹವಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಬಲ್ವಂತ್ ಸಿಂಗ್ vs ಪಂಜಾಬ್ ರಾಜ್ಯ (1995) ಪ್ರಕರಣ:
ಈ ಪ್ರಕರಣದಲ್ಲಿ, ‘ಖಲಿಸ್ತಾನ್ ಜಿಂದಾಬಾದ್’ ನಂತಹ ಕೇವಲ ಘೋಷಣೆಗಳನ್ನು ಕೂಗುವುದು ದೇಶದ್ರೋಹಕ್ಕೆ ಸಮವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು. ಸ್ಪಷ್ಟವಾಗಿ, ದೇಶದ್ರೋಹ ಕಾನೂನನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಭಿನ್ನಾಭಿಪ್ರಾಯವನ್ನು ನಿಗ್ರಹಿಸಲು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದೂ ಸಹ ನ್ಯಾಯಪೀಠವು ಅಭಿಪ್ರಾಯಪಟ್ಟಿತ್ತು.
ಸುಪ್ರೀಂಕೋರ್ಟ್ ಇತ್ತೀಚಿಗೆ ಮಾಡಿದ ಅವಲೋಕನಗಳು:
ಜೂನ್ 2021 ರಲ್ಲಿ ಸುಪ್ರೀಂಕೋರ್ಟ್ “ದೇಶದ್ರೋಹದ ಕಾನೂನಿನ ಮಿತಿಗಳನ್ನು ವ್ಯಾಖ್ಯಾನಿಸುವ ಸಮಯ ಬಂದಿದೆ” ಎಂದು ಹೇಳಿತ್ತು.
- ಎರಡು ಸುದ್ದಿ ವಾಹಿನಿಗಳು ಸಲ್ಲಿಸಿದ ರಿಟ್ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.ಸುದ್ದಿ ವಾಹಿನಿಗಳು ತಮ್ಮ ವಿರುದ್ಧ ದಾಖಲಿಸಿದ FIR ಮತ್ತು ತಿರಸ್ಕಾರ ಪ್ರಕರಣಗಳನ್ನು ರದ್ದುಪಡಿಸುವಂತೆ ಆದೇಶಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದವು.
ದೇಶದ್ರೋಹಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮಾಡಿದ ಸಾಮಾನ್ಯ ಅವಲೋಕನಗಳು:
- ದೇಶದ್ರೋಹದ ಮಿತಿಗಳನ್ನು ನಾವು ವ್ಯಾಖ್ಯಾನಿಸುವ ಸಮಯ ಬಂದಿದೆ.
- ವಿಶೇಷವಾಗಿ ಪತ್ರಿಕಾ ಮತ್ತು ವಾಕ್ ಸ್ವಾತಂತ್ರ್ಯ ವಿಷಯದಲ್ಲಿ 124ಎ ಸೆಕ್ಷನ್ (ದೇಶದ್ರೋಹ) ಮತ್ತು 153ನೇ ಸೆಕ್ಷನ್ಗಳ (ವರ್ಗಗಳ ನಡುವೆ ದ್ವೇಷ ಹುಟ್ಟುಹಾಕುವುದು) ವ್ಯಾಖ್ಯಾನ ಅಗತ್ಯವಿದ್ದು, ಆ ಬಗ್ಗೆ ಪರಿಶೀಲನೆ ನಡೆಸುತ್ತೇವೆ’ ಎಂದು ನ್ಯಾಯಪೀಠವು ತಿಳಿಸಿದೆ.
ವಿಷಯಗಳು: ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಗುಂಪುಗಳು ಮತ್ತು ಭಾರತಕ್ಕೆ ಸಂಬಂಧಿಸಿದ ಒಪ್ಪಂದಗಳು ಮತ್ತು / ಅಥವಾ ಭಾರತದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಅಂಶಗಳು.
ಹಾಂಗ್ ಕಾಂಗ್ ನ ಆಡಳಿತವನ್ನು ಹೇಗೆ ನಿರ್ವಹಿಸಲಾಗುತ್ತದೆ?
(How is Hong Kong administered?)
ಸಂದರ್ಭ:
ಹಾಂಗ್ ಕಾಂಗ್ ಅಧಿಕಾರಿಗಳು ಅದರ ಬೀಜಿಂಗ್-ಸಂಯೋಜಿತ ಸರ್ಕಾರವನ್ನು ಟೀಕಿಸುವ ಸಾರ್ವಜನಿಕ ಭಾಷಣದ ಮೇಲೆ ನಗರ-ರಾಜ್ಯದ ಹಿಡಿತವನ್ನು ಬಲಪಡಿಸಲು ಹೊಸ ಕಾನೂನುಗಳನ್ನು ಅನುಸರಿಸುತ್ತಿದ್ದಾರೆ.
ಅಗತ್ಯತೆ:
ನಗರ-ರಾಜ್ಯ ನಿವಾಸಿಗಳು ತಮ್ಮ ಆಲೋಚನೆಗಳ ಮೇಲೆ ಸ್ವಯಂ ಸೆನ್ಸಾರ್ಶಿಪ್ ಅನ್ನು ಹೇರಿಕೊಳ್ಳುತ್ತಿದ್ದಾರೆ ಮತ್ತು ತಮ್ಮ ನಗರವು ಪ್ರಗತಿಪರ ಗುರುತನ್ನು ಶಾಶ್ವತವಾಗಿ ಕಳೆದುಕೊಂಡಿರಬಹುದು ಎಂದು ಹಲವರು ಭಾವಿಸುತ್ತಾರೆ.
ಹಾಂಗ್ ಕಾಂಗ್ ಅನ್ನು ಹೇಗೆ ನಿರ್ವಹಿಸಲಾಗುತ್ತದೆ?
ಹಾಂಗ್ ಕಾಂಗ್ ಅನ್ನು ‘ಒಂದು ದೇಶ, ಎರಡು ಆಡಳಿತ ವ್ಯವಸ್ಥೆಗಳು’ (One Country Two Systems) ಎಂಬ ವಿಧಾನದಿಂದ ನಿಯಂತ್ರಿಸಲಾಗುತ್ತದೆ. ‘ಹಾಂಗ್ ಕಾಂಗ್’ ಮತ್ತು ‘ಮಕಾವು’ ವಿಶೇಷ ಆಡಳಿತ ಪ್ರದೇಶಗಳು ಮತ್ತು ಎರಡೂ ಹಿಂದಿನ ವಸಾಹತುಗಳು.
ನೀತಿಯ ಪ್ರಕಾರ, ಹಾಂಗ್ ಕಾಂಗ್ ಮತ್ತು ಮಕಾವು, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭಾಗವಾಗಿದ್ದರೂ, ಮುಖ್ಯ ಭೂಭಾಗದ ಚೀನಾದ ನೀತಿಗಳಿಗಿಂತ ವಿಭಿನ್ನ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು.
- ಹಾಂಗ್ ಕಾಂಗ್ ಜುಲೈ 1, 1997 ರಿಂದ ಚೀನಾದ ನಿಯಂತ್ರಣಕ್ಕೆ ಮರಳಿತು, ಮತ್ತು ಮಕಾವು ಸಾರ್ವಭೌಮತ್ವವನ್ನು ಡಿಸೆಂಬರ್ 20, 1999 ರಂದು ಚೀನಾಕ್ಕೆ ವರ್ಗಾಯಿಸಲಾಯಿತು.
- ಈ ಪ್ರದೇಶಗಳು ತಮ್ಮದೇ ಕರೆನ್ಸಿಗಳು, ಆರ್ಥಿಕ ಮತ್ತು ಕಾನೂನು ವ್ಯವಸ್ಥೆಗಳನ್ನು ಹೊಂದಿವೆ, ಆದರೆ ರಕ್ಷಣಾ ಮತ್ತು ರಾಜತಾಂತ್ರಿಕತೆಯನ್ನು ಬೀಜಿಂಗ್ ನಿರ್ಧರಿಸುತ್ತದೆ.
- ಅವರ ಅಲ್ಪಾವಧಿಯ ಸಂವಿಧಾನವು 50 ವರ್ಷಗಳವರೆಗೆ ಮಾನ್ಯವಾಗಿರುತ್ತದೆ-ಅಂದರೆ, ಹಾಂಗ್ ಕಾಂಗ್ಗೆ 2047 ಮತ್ತು ಮಕಾವುಗೆ 2049 ರವರೆಗೆ. ಈ ಅವಧಿಯ ನಂತರದ ವ್ಯವಸ್ಥೆ ಹೇಗಿರುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ಹಿನ್ನೆಲೆ:
ಇತ್ತೀಚೆಗೆ, ಹಾಂಗ್ ಕಾಂಗ್ ನ ನಾಯಕಿ ‘ಕ್ಯಾರಿ ಲ್ಯಾಮ್’ ಹಾಂಗ್ ಕಾಂಗ್ ನಲ್ಲಿ ವಿದೇಶಿ ನಿರ್ಬಂಧಗಳಿಗೆ ಪ್ರತಿಕ್ರಿಯಿಸಲು ಚೀನಾ ಮುಖ್ಯ ಭೂಪ್ರದೇಶದ ಕಾನೂನಿನ ಅನುಷ್ಠಾನವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಹಾಂಕಾಂಗ್ ನಗರವು ಈಗ ಚೀನೀ ಕಾನೂನನ್ನು ಅಳವಡಿಸಿಕೊಳ್ಳಲು ಸಿದ್ಧವಾಗಿದೆ ಎಂಬುದಕ್ಕೆ ಇದು ಸ್ಪಷ್ಟ ಸಂಕೇತವಾಗಿದೆ.
ವಿದೇಶಿ ನಿರ್ಬಂಧಗಳಿಗೆ ಪ್ರತಿಕ್ರಿಯಿಸಲು ಹಾಂಗ್ ಕಾಂಗ್ ನಲ್ಲಿ ಚೀನೀ ಕಾನೂನು:
ಈ ಕಾನೂನನ್ನು ಬೀಜಿಂಗ್ನ ಶಾಸಕಾಂಗದ ಬದಲು ಹಾಂಗ್ ಕಾಂಗ್ನ ಶಾಸಕಾಂಗದ ಮೂಲಕ ಪರಿಚಯಿಸಲು ಪ್ರಸ್ತಾಪಿಸಲಾಗಿದೆ. ಈ ಕಾನೂನನ್ನು ಹಾಂಗ್ ಕಾಂಗ್ನ ‘ಕಿರು ಸಂವಿಧಾನ’ದ ಅನುಬಂಧಕ್ಕೆ ಸೇರಿಸಲಾಗುತ್ತದೆ. ಹಾಂಗ್ ಕಾಂಗ್ ನ ‘ಮಿನಿ-ಕಾನ್ಸ್ಟಿಟ್ಯೂಷನ್’ ಅನ್ನು ‘ಬೇಸಿಕ್ ಲಾ’ ಅಥವಾ ಮೂಲ ಕಾನೂನು ಎಂದು ಕರೆಯಲಾಗುತ್ತದೆ.
ಏನಿದು ‘ಪ್ರಸ್ತಾವಿತ ಕಾನೂನು’?
- ಜೂನ್ ನಲ್ಲಿ ಬೀಜಿಂಗ್ನಿಂದ ಒಂದು ಕಾನೂನನ್ನು ಅಂಗೀಕರಿಸಲಾಯಿತು, ಅದರ ಅಡಿಯಲ್ಲಿ ತಾರತಮ್ಯ ಮಾಡುವ ಅಥವಾ ಚೀನಾದ ನಾಗರಿಕರು ಅಥವಾ ಘಟಕಗಳ ವಿರುದ್ಧ ತಾರತಮ್ಯದ ವಿಧಾನಗಳನ್ನು ಅನ್ವಯಿಸುವ ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು ಚೀನಾ ಸರ್ಕಾರದ ‘ನಿರ್ಬಂಧ-ವಿರೋಧಿ ಪಟ್ಟಿಯಲ್ಲಿ’ (anti-sanctions list) ಸೇರಿಸಬಹುದು.
- ಚೀನೀ ಕಾನೂನಿನ ಪ್ರಕಾರ, ಈ ಪಟ್ಟಿಯಲ್ಲಿರುವ ವ್ಯಕ್ತಿಗಳಿಗೆ ಚೀನಾ ಪ್ರವೇಶವನ್ನು ನಿರಾಕರಿಸಬಹುದು ಅಥವಾ ದೇಶದಿಂದ ಹೊರಹಾಕಬಹುದು.
- ಕಾನೂನಿನ ಪ್ರಕಾರ, ಚೀನಾದಲ್ಲಿ ಅಂತಹ ವ್ಯಕ್ತಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು. ಅವರು ಚೀನೀ ಘಟಕಗಳು ಅಥವಾ ನಾಗರಿಕರೊಂದಿಗೆ ವ್ಯಾಪಾರ ಮಾಡುವುದನ್ನು ಸಹ ನಿಷೇಧಿಸಬಹುದು.
ಈ ಕಾನೂನನ್ನು ಅನ್ವಯಿಸುವ ಅವಶ್ಯಕತೆಗಳು:
ತಂತ್ರಜ್ಞಾನ, ಹಾಂಕಾಂಗ್ ಮತ್ತು ದೂರದ ಪಶ್ಚಿಮ ಪ್ರದೇಶವಾದ ಕ್ಸಿನ್ಜಿಯಾಂಗ್ ಮತ್ತು ವ್ಯಾಪಾರ ವಾಣಿಜ್ಯದ ಕುರಿತು ಚೀನಾದ ಮೇಲೆ, ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಒತ್ತಡದಿಂದಾಗಿ ಕಾನೂನನ್ನು ತರಲಾಗಿದೆ.
ಈ ಕಾನೂನಿಗೆ ಸಂಬಂಧಿಸಿದ ಕಾಳಜಿಗಳು ಮತ್ತು ಸಮಸ್ಯೆಗಳು:
ಹಾಂಗ್ ಕಾಂಗ್ ನಲ್ಲಿ ಈ ಕಾನೂನನ್ನು ಜಾರಿಗೊಳಿಸುವುದರಿಂದ ‘ಜಾಗತಿಕ ಹಣಕಾಸು ಕೇಂದ್ರ’ ಎಂಬ ಖ್ಯಾತಿಯನ್ನು ಅದು ಕಳೆದುಕೊಳ್ಳಬಹುದು ಎಂದು ವಿಮರ್ಶಕರು ಎಚ್ಚರಿಸಿದ್ದಾರೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ಖೈಟಿಸುಕಾ ಸಚಿಕಾರಮ್:
(Kyhytysuka sachicarum)
- ಇತ್ತೀಚೆಗೆ, ಅಂತರರಾಷ್ಟ್ರೀಯ ಸಂಶೋಧಕರ ತಂಡವು ಹೊಸ ಸಮುದ್ರ ಸರೀಸೃಪವನ್ನು ಕಂಡುಹಿಡಿದಿದೆ. ಒಂದು ಮೀಟರ್ ಉದ್ದದ ತಲೆಬುರುಡೆಯ ಈ ಮಾದರಿಗೆ ‘ಖೈಟಿಸುಕಾ ಸಚಿಕಾರಮ್’ ಎಂದು ಹೆಸರಿಸಲಾಗಿದೆ.
- ಈ ಪಳೆಯುಳಿಕೆಯು ಪ್ರಾಚೀನ ಇಚ್ಥಿಯೋಸಾರ್ನ (Ichthyosaur) ಕೊನೆಯ ಉಳಿದಿರುವ ಜಾತಿಗಳಲ್ಲಿ ಒಂದಾಗಿದೆ, ಇದು ಜೀವಂತ ಕತ್ತಿಮೀನಿನಂತೆ ವಿಲಕ್ಷಣವಾಗಿ ಕಾಣುತ್ತದೆ.













