ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಕೀನ್ಯಾ ಮತ್ತು ಸೊಮಾಲಿಯಾ ನಡುವಿನ ಹಿಂದೂ ಮಹಾಸಾಗರದ ಗಡಿ ವಿವಾದ.
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ನದಿ ಸಂರಕ್ಷಣೆ ಕಾರ್ಯಕ್ರಮ.
2. ನಾಸಾದ ಲೂಸಿ ಮಿಷನ್
3. ಭೂಮಿಯ ನೀರಿನ ಸಂಗ್ರಹ (TWS) ನಷ್ಟದ ಬಗ್ಗೆ WMO ವರದಿ.
4. ಸ್ವಚ್ಛ, ಆರೋಗ್ಯಕರ ಮತ್ತು ಸುಸ್ಥಿರ ಪರಿಸರ, ಒಂದು ಸಾರ್ವತ್ರಿಕ ಹಕ್ಕು ಎಂದು ಗುರುತಿಸುವುದು.
5. ಪ್ರಾದೇಶಿಕ ಸೇನೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
1. 2021 ರ ನೊಬೆಲ್ ಸಾಹಿತ್ಯ ಪ್ರಶಸ್ತಿ.
2. ಅತಿರಪ್ಪಿ ಜಲವಿದ್ಯುತ್ ಯೋಜನೆ.
3. 2021 ರ ನೊಬೆಲ್ ಶಾಂತಿ ಪ್ರಶಸ್ತಿ.
4. ಇರಾಕ್ ಚುನಾವಣೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.
ಕೀನ್ಯಾ ಮತ್ತು ಸೊಮಾಲಿಯಾ ನಡುವಿನ ಹಿಂದೂ ಮಹಾಸಾಗರದ ಗಡಿ ವಿವಾದ:
(The Indian Ocean border dispute between Kenya and Somalia)
ಸಂದರ್ಭ:
‘ಸೊಮಾಲಿಯಾ’ ಜೊತೆಗಿನ ದೀರ್ಘಾವಧಿಯ ಕಡಲ ಗಡಿ ವಿವಾದದ ಕುರಿತು ಮುಂದಿನ ವಾರ ತೀರ್ಪು ಬರುವ ಮುನ್ನ ವಿಶ್ವಸಂಸ್ಥೆಯ ‘ಅಂತಾರಾಷ್ಟ್ರೀಯ ನ್ಯಾಯಾಲಯ’ (ICJ) ದ ಅಧಿಕಾರ ವ್ಯಾಪ್ತಿಯನ್ನು ಸ್ವೀಕರಿಸಲು ‘ಕೀನ್ಯಾ’ ನಿರಾಕರಿಸಿದೆ.
- ತಾನು ಒಂದು ಸಾರ್ವಭೌಮ ರಾಷ್ಟ್ರವಾಗಿರುವುದರಿಂದ, ತನ್ನನ್ನು ಯಾವುದೇ ಅಂತಾರಾಷ್ಟ್ರೀಯ ನ್ಯಾಯಾಲಯ ಅಥವಾ ನ್ಯಾಯಮಂಡಳಿಗೆ ತನ್ನ ಸ್ಪಷ್ಟ ಒಪ್ಪಿಗೆಯಿಲ್ಲದೆ ಒಳಪಡಿಸಲಾಗದು ಎಂದು ‘ಕೀನ್ಯಾ’ ಹೇಳುತ್ತದೆ.
ಏನಿದು ಪ್ರಕರಣ?
ಎರಡು ನೆರೆಯ ರಾಷ್ಟ್ರಗಳ ನಡುವಿನ ಭಿನ್ನಾಭಿಪ್ರಾಯದ ಮುಖ್ಯ ಅಂಶವೆಂದರೆ ಹಿಂದೂ ಮಹಾಸಾಗರದಲ್ಲಿ ತಮ್ಮ ಕಡಲ ಗಡಿಯನ್ನು ಯಾವ ‘ದಿಕ್ಕಿಗೆ’ ವಿಸ್ತರಿಸಬೇಕು ಎಂಬುದಕ್ಕೆ ಸಂಬಂಧಿಸಿದೆ.
ವಿವಾದಿತ ಪ್ರದೇಶ ಎಲ್ಲಿದೆ?
- ಸೊಮಾಲಿಯಾದ ಪ್ರಕಾರ, ಸಮುದ್ರದ ಗಡಿಯು ಹಿಂದೂ ಮಹಾಸಾಗರದ ಕಡೆಗೆ ಒಂದೇ ದಿಕ್ಕಿನಲ್ಲಿ, ಅಂದರೆ ಆಗ್ನೇಯಕ್ಕೆ, ಅದರ ಭೂ ಗಡಿಯು ಚಲಿಸುವ ದಿಕ್ಕಿನಲ್ಲಿ ವಿಸ್ತರಿಸಬೇಕು.
- ಮತ್ತೊಂದೆಡೆ, ಕೀನ್ಯಾವು ಸಮುದ್ರವನ್ನು ತಲುಪುವಾಗ, ಪ್ರಾದೇಶಿಕ ಆಗ್ನೇಯ ಗಡಿಯು 45 ಡಿಗ್ರಿ ತಿರುವು ಪಡೆಯಬೇಕು ಮತ್ತು ಅದರ ನಂತರ ಅದು ಅಕ್ಷಾಂಶದ ದಿಕ್ಕಿನಲ್ಲಿ ಚಲಿಸಬೇಕು, ಅಂದರೆ ಸಮಭಾಜಕಕ್ಕೆ ಸಮಾನಾಂತರವಾಗಿರಬೇಕು ಎಂದು ವಾದಿಸುತ್ತಾರೆ.ಈ ವ್ಯವಸ್ಥೆಯು ಕೀನ್ಯಾಕ್ಕೆ ಪ್ರಯೋಜನವನ್ನು ನೀಡುತ್ತದೆ. ಕೀನ್ಯಾದ ಕರಾವಳಿಯ ಉದ್ದ ಕೇವಲ 536 ಕಿ.ಮೀ ಮತ್ತು ಇದು ಸೊಮಾಲಿಯಾದ ಕರಾವಳಿ (3,333 ಕಿ.ಮೀ) ಗಿಂತ 6 ಪಟ್ಟು ಕಡಿಮೆ ಇದೆ.
ಈ ಪ್ರದೇಶವು ಏಕೆ ಅಷ್ಟೊಂದು ಪ್ರಾಮುಖ್ಯತೆಯನ್ನು ಪಡೆದಿದೆ?
ವಿವಾದಿತ ತ್ರಿಕೋನ ಪ್ರದೇಶವು ಸುಮಾರು 1.6 ಲಕ್ಷ ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ ಮತ್ತು ಇದು ಶ್ರೀಮಂತ ಸಮುದ್ರ ನಿಕ್ಷೇಪಗಳಿಂದ ಸಮೃದ್ಧವಾಗಿದೆ. ಈ ಪ್ರದೇಶದಲ್ಲಿ ತೈಲ ಮತ್ತು ಅನಿಲ ನಿಕ್ಷೇಪವಿದೆ ಎಂದು ನಂಬಲಾಗಿದೆ.
ಅಂತರಾಷ್ಟ್ರೀಯ ನ್ಯಾಯಾಲಯದ (ICJ) ಕುರಿತು:
- ಅಂತರಾಷ್ಟ್ರೀಯ ನ್ಯಾಯಾಲಯವನ್ನು- ICJ 1945 ರಲ್ಲಿ ವಿಶ್ವಸಂಸ್ಥೆಯ ಚಾರ್ಟರ್ ಮೂಲಕ ಸ್ಥಾಪಿಸಲಾಯಿತು ಮತ್ತು ಇದು ಏಪ್ರಿಲ್ 1946 ರಲ್ಲಿ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
- ಇದು ವಿಶ್ವಸಂಸ್ಥೆಯ ಪ್ರಮುಖ ನ್ಯಾಯಾಂಗ ಸಂಸ್ಥೆಯಾಗಿದೆ ಮತ್ತು ಇದು ಹೇಗ್ (ನೆದರ್ಲ್ಯಾಂಡ್ಸ್) ನ ಶಾಂತಿ ಅರಮನೆಯಲ್ಲಿ ( the Peace Palace in The Hague (Netherlands) ನೆಲೆಗೊಂಡಿದೆ.
- ವಿಶ್ವಸಂಸ್ಥೆಯ ಆರು ಪ್ರಮುಖ ಅಂಗಗಳ ಪ್ರಧಾನ ಕಛೇರಿ ನ್ಯೂಯಾರ್ಕ್ ನಲ್ಲಿದ್ದರೆ, ನ್ಯೂಯಾರ್ಕ್(USA) ನಲ್ಲಿಲ್ಲದ ಏಕೈಕ ಸಂಸ್ಥೆ ಇದು.
- ಇದು ರಾಷ್ಟ್ರಗಳ ನಡುವಿನ ಕಾನೂನು ವಿವಾದಗಳನ್ನು ಬಗೆಹರಿಸುತ್ತದೆ ಮತ್ತು ಅಧಿಕೃತ ಯುಎನ್ ಅಂಗಗಳು ಮತ್ತು ವಿಶೇಷ ಏಜೆನ್ಸಿಗಳು ಅದರ ಮುಂದೆ ಪ್ರಸ್ತಾಪಿಸಿದ ಕಾನೂನು ಪ್ರಶ್ನೆಗಳ ಬಗ್ಗೆ ಅಂತರರಾಷ್ಟ್ರೀಯ ಕಾನೂನಿಗೆ ಅನುಸಾರವಾಗಿ ಸಲಹಾತ್ಮಕ ಅಭಿಪ್ರಾಯಗಳನ್ನು ನೀಡುತ್ತದೆ.
ರಚನೆ:
- ಅಂತರರಾಷ್ಟ್ರೀಯ ನ್ಯಾಯಾಲಯವು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿಯಿಂದ ಒಂಬತ್ತು ವರ್ಷಗಳ ಅವಧಿಗೆ ಆಯ್ಕೆಯಾದ 15 ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ. ಈ ಎರಡು ಅಂಗಗಳು ಒಂದೇ ಸಮಯದಲ್ಲಿ ಆದರೆ ಪ್ರತ್ಯೇಕವಾಗಿ ಮತ ಚಲಾಯಿಸುತ್ತವೆ.
- ನ್ಯಾಯಾಧೀಶರಾಗಿ ಆಯ್ಕೆಯಾಗಲು, ಅಭ್ಯರ್ಥಿಯು ಎರಡೂ ಸಂಸ್ಥೆಗಳಲ್ಲಿ ಸಂಪೂರ್ಣ ಬಹುಮತವನ್ನು ಹೊಂದಿರಬೇಕು.
- ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು, ನ್ಯಾಯಾಲಯದ ಒಟ್ಟು ಸದಸ್ಯರ ಮೂರನೇ ಒಂದು ಭಾಗದಷ್ಟು ನ್ಯಾಯಾಧೀಶರು ಪ್ರತಿ ಮೂರು ವರ್ಷಗಳಿಗೊಮ್ಮೆ ಚುನಾಯಿಸಲ್ಪಡುತ್ತಾರೆ ಮತ್ತು ಈ ಸದಸ್ಯರು ಮತ್ತೆ ನ್ಯಾಯಾಧೀಶರಾಗಿ ಚುನಾಯಿತ ರಾಗಲು ಅರ್ಹರಾಗಿರುತ್ತಾರೆ.
- ‘ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ’ ಆಡಳಿತ ವ್ಯವಹಾರಗಳಲ್ಲಿ ನೆರವು ನೀಡಲು ಅದಕ್ಕೆ ಶಾಶ್ವತ ಆಡಳಿತ ಸಚಿವಾಲಯವಿದೆ (Registry). ಇಂಗ್ಲಿಷ್ ಮತ್ತು ಫ್ರೆಂಚ್ ಇದರ ಅಧಿಕೃತ ಭಾಷೆಗಳಾಗಿವೆ.
ಅಂತರರಾಷ್ಟ್ರೀಯ ನ್ಯಾಯಾಲಯದ 15 ನ್ಯಾಯಾಧೀಶರನ್ನು ಈ ಕೆಳಗಿನ ವಲಯಗಳಿಂದ ಆಯ್ಕೆ ಮಾಡಲಾಗುತ್ತದೆ:
- ಆಫ್ರಿಕಾದಿಂದ ಮೂವರು.
- ಲ್ಯಾಟಿನ್ ಅಮೆರಿಕ ಮತ್ತು ಕೆರಿಬಿಯನ್ ದೇಶಗಳಿಂದ ಇಬ್ಬರು.
- ಏಷ್ಯಾದಿಂದ ಮೂವರು.
- ಪಶ್ಚಿಮ ಯುರೋಪ್ ಮತ್ತು ಇತರ ರಾಜ್ಯಗಳಿಂದ ಐದು ಜನ.
- ಪೂರ್ವ ಯುರೋಪಿನಿಂದ ಇಬ್ಬರು.
ನ್ಯಾಯಾಧೀಶರ ಸ್ವಾತಂತ್ರ್ಯ:
ಅಂತರರಾಷ್ಟ್ರೀಯ ಸಂಸ್ಥೆಗಳ ಇತರ ಅಂಗಗಳಂತೆ, ಅಂತರರಾಷ್ಟ್ರೀಯ ನ್ಯಾಯಾಲಯವು ಸರ್ಕಾರದ ಪ್ರತಿನಿಧಿಗಳನ್ನು ಹೊಂದಿಲ್ಲ. ನ್ಯಾಯಾಲಯದ ಸದಸ್ಯರು ಸ್ವತಂತ್ರ ನ್ಯಾಯಾಧೀಶರು, ತಮ್ಮ ಕರ್ತವ್ಯದ ಪ್ರಮಾಣವಚನ ಸ್ವೀಕರಿಸುವ ಮೊದಲು ಅವರ ಮೊದಲ ಕಾರ್ಯವೆಂದರೆ ಅವರು ತಮ್ಮ ಅಧಿಕಾರವನ್ನು ನಿಷ್ಪಕ್ಷಪಾತವಾಗಿ ಮತ್ತು ಶುದ್ಧ ಆತ್ಮಸಾಕ್ಷಿಯೊಂದಿಗೆ ಚಲಾಯಿಸುತ್ತೇವೆ ಎಂದು ಮುಕ್ತ ನ್ಯಾಯಾಲಯದಲ್ಲಿ ಘೋಷಿಸುವುದು.
ನ್ಯಾಯವ್ಯಾಪ್ತಿ ಮತ್ತು ಕಾರ್ಯಗಳು:
- ‘ಅಂತರರಾಷ್ಟ್ರೀಯ ನ್ಯಾಯಾಲಯವು’ ಉಭಯ ನ್ಯಾಯವ್ಯಾಪ್ತಿಯೊಂದಿಗೆ ‘ವಿಶ್ವ ನ್ಯಾಯಾಲಯ’ವಾಗಿ ಕಾರ್ಯನಿರ್ವಹಿಸುತ್ತದೆ, ಅಂದರೆ ದೇಶಗಳ ನಡುವಿನ ಕಾನೂನು ವಿವಾದಗಳ ಇತ್ಯರ್ಥ (ವಿವಾದಾತ್ಮಕ ಪ್ರಕರಣಗಳು ) ವಿಶ್ವಸಂಸ್ಥೆಯ ವಿವಿಧ ಅಂಗಗಳು ಮತ್ತು ವಿಶೇಷ ಏಜೆನ್ಸಿಗಳು ಕಾನೂನು ಪ್ರಶ್ನೆಗಳ ಕುರಿತು ಮಾಡುವ ವಿನಂತಿಗಳಿಗೆ ಸಲಹಾತ್ಮಕ ಅಭಿಪ್ರಾಯಗಳನ್ನು ನೀಡುವುದು (ಸಲಹಾ ಪ್ರಕ್ರಿಯೆಗಳು).
- ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು ಮತ್ತು ‘ಅಂತರಾಷ್ಟ್ರೀಯ ನ್ಯಾಯಾಲಯದ’ ಕಾಯ್ದೆಯ ಪಕ್ಷಗಳಾಗಿ ಮಾರ್ಪಟ್ಟಿರುವ ದೇಶಗಳು ಅಥವಾ ವಿಶೇಷ ಷರತ್ತುಗಳ ಅಡಿಯಲ್ಲಿ ‘ನ್ಯಾಯಾಲಯ’ದ ಅಧಿಕಾರ ವ್ಯಾಪ್ತಿಯನ್ನು ಒಪ್ಪಿಕೊಂಡಿರುವ ದೇಶಗಳು ಮಾತ್ರ’ ವಿವಾದಾತ್ಮಕ ಪ್ರಕರಣಗಳ (Contentious Cases) ವಿಲೇವಾರಿಗಾಗಿ ‘ಅಂತರರಾಷ್ಟ್ರೀಯ ನ್ಯಾಯಾಲಯದ’ ಪಕ್ಷಗಳಾಗಿವೆ ಅಥವಾ ಸದಸ್ಯ ದೇಶಗಳಾಗಿವೆ.
- ‘ಅಂತರಾಷ್ಟ್ರೀಯ ನ್ಯಾಯಾಲಯ’ದ ತೀರ್ಮಾನವು / ನಿರ್ಧಾರವು ಪಕ್ಷಗಳ / ದೇಶಗಳ ಮೇಲೆ ಮೇಲ್ಮನವಿ ಸಲ್ಲಿಸಲು ಸಾಧ್ಯವಾಗದಂತೆ ಅಂತಿಮವಾಗಿದೆ ಮತ್ತು ಬಂಧನ ಕಾರಿಯಾಗಿದೆ, (ಹೆಚ್ಚೆಂದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಸತ್ಯದ ಆವಿಷ್ಕಾರದ ಮೇಲೆ ಅದರ ತೀರ್ಪನ್ನು ಮರು ವ್ಯಾಖ್ಯಾನಿಸಬಹುದು).
ಸಾಮಾನ್ಯ ಅಧ್ಯಯನ ಪತ್ರಿಕೆ : 3
ವಿಷಯಗಳು: ನೇರ ಮತ್ತು ಪರೋಕ್ಷ ಕೃಷಿ ನೆರವು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ವಿಷಯಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆ – ಉದ್ದೇಶಗಳು, ಕಾರ್ಯಗಳು, ಮಿತಿಗಳು, ಸುಧಾರಣೆಗಳು; ಬಫರ್ ಸ್ಟಾಕ್ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ವಿಷಯಗಳು; ತಂತ್ರಜ್ಞಾನ ಮಿಷನ್; ಪಶುಸಂಗೋಪನೆಗೆ ಸಂಬಂಧಿಸಿದ ಅರ್ಥಶಾಸ್ತ್ರ.
ನದಿ ಸಂರಕ್ಷಣೆ ಕಾರ್ಯಕ್ರಮ:
(River Ranching Programme)
ಸಂದರ್ಭ:
ಇತ್ತೀಚೆಗೆ, ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆಯ ಸಚಿವಾಲಯವು ರಾಷ್ಟ್ರವ್ಯಾಪಿ ‘ನದಿ ಸಂರಕ್ಷಣೆ ಕಾರ್ಯಕ್ರಮ’ (River Ranching Programme) ವನ್ನು ಉತ್ತರ ಪ್ರದೇಶದಲ್ಲಿ ಪ್ರಾರಂಭಿಸಿತು.
- ‘ಉತ್ತರ ಪ್ರದೇಶ’ದ ಜೊತೆಗೆ ಉತ್ತರಾಖಂಡ, ಒರಿಸ್ಸಾ, ತ್ರಿಪುರಾ ಮತ್ತು ಛತ್ತೀಸ್ಗಡದಂತಹ 4 ಇತರ ರಾಜ್ಯಗಳು ಈ ಕಾರ್ಯಕ್ರಮದ ಪ್ರಾರಂಭೋತ್ಸವದಲ್ಲಿ ಭಾಗವಹಿಸಿದ್ದವು.
- ಕಾರ್ಯಕ್ರಮದ ಅಡಿಯಲ್ಲಿ, ಉತ್ತರ ಪ್ರದೇಶದ ಮೂರು ಸ್ಥಳಗಳಾದ ಬ್ರಿಜ್ಘಾಟ್, ಗರ್ಮುಕ್ತೇಶ್ವರ, ತಿಗ್ರಿ, ಮೀರತ್ ಮತ್ತು ಬಿಜ್ನೋರ್ನಲ್ಲಿ 3 ಲಕ್ಷ ಮೀನು ಮರಿಗಳನ್ನು ಸಾಕಲಾಗುತ್ತದೆ.
ರಿವರ್ ರಾಂಚಿಂಗ್ ಎಂದರೇನು?
- ರಿವರ್ ರಾಂಚಿಂಗ್ ಎನ್ನುವುದು ಜಲಕೃಷಿಯ ಒಂದು ರೂಪವಾಗಿದ್ದು, ಇದರಲ್ಲಿ ‘ಸಾಲ್ಮನ್’ ನಂತಹ ಮೀನು ಪ್ರಭೇದಗಳು ತಮ್ಮ ಜೀವನದ ಮೊದಲ ಹಂತಗಳಲ್ಲಿ ಕೃತಕ ಅಥವಾ ನೈಸರ್ಗಿಕ ಜಲ ತಾಣದಲ್ಲಿ, ಅಂದರೆ, ಸೆರೆಯಲ್ಲಿ ಇರಿಸಲ್ಪಟ್ಟಿರುತ್ತವೆ.
- ಇದರ ನಂತರ, ಈ ಮೀನುಗಳ ಮರಿಗಳು ಸ್ವಲ್ಪ ಬೆಳೆದಾಗ ಸಮುದ್ರ ಅಥವಾ ನದಿಯ ಸಿಹಿ ನೀರಿನಲ್ಲಿ ಬಿಡಲಾಗುತ್ತದೆ. ಈ ಮೀನುಗಳು, ವಯಸ್ಕರಾಗಿ, ಸಮುದ್ರದಿಂದ ತಮ್ಮ ಸಿಹಿನೀರಿನ ಮೂಲ ಸ್ಥಳಕ್ಕೆ ಮೊಟ್ಟೆ ಇಡಲು ಹಿಂತಿರುಗಿದಾಗ, ಅವುಗಳನ್ನು ಹಿಡಿಯಲಾಗುತ್ತದೆ.
ಈ ಕಾರ್ಯಕ್ರಮದ ಕುರಿತು:
ಈ ಕಾರ್ಯಕ್ರಮವನ್ನು ‘ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ’ ( PMMSY) ಯೋಜನೆಯಡಿಯಲ್ಲಿ ವಿಶೇಷ ಚಟುವಟಿಕೆಯಾಗಿ ಆರಂಭಿಸಲಾಯಿತು, ಭೂಮಿ ಮತ್ತು ನೀರನ್ನು ಉತ್ಪಾದಕ ವಾಗಿ ವಿಸ್ತರಣೆ ಮಾಡುವುದು, ವೈವಿಧ್ಯಗೊಳಿಸುವುದು, ಭೂಮಿಯ ಮತ್ತು ಜಲ ವಲಯಗಳ ಉತ್ಪಾದಕತೆಯ ವೈವಿಧ್ಯತೆಯ ಮೂಲಕ ಮೀನಿನ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆರಂಭಿಸಲಾಗಿದೆ.
ಅನುಷ್ಠಾನ ಸಂಸ್ಥೆ:
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯ ಕೇಂದ್ರ ಘಟಕವಾಗಿ, ರಾಷ್ಟ್ರೀಯ ಮೀನುಗಾರಿಕಾ ಅಭಿವೃದ್ಧಿ ಮಂಡಳಿ, ಹೈದರಾಬಾದ್ ಈ ಕಾರ್ಯಕ್ರಮದ ನೋಡಲ್ ಏಜೆನ್ಸಿಯಾಗಿದೆ.
ಕಾರ್ಯಕ್ರಮದ ಅವಶ್ಯಕತೆ:
ಮಾನವ ಜನಸಂಖ್ಯೆಯ ಹೆಚ್ಚಳ ಹಾಗೂ ಉತ್ತಮ ಗುಣಮಟ್ಟದ ಪ್ರೋಟೀನ್ನ ಅಗತ್ಯತೆಯಿಂದಾಗಿ ಮೀನಿನ ಬೇಡಿಕೆ ಕ್ರಮೇಣ ಹೆಚ್ಚುತ್ತಿದೆ.
ಹೀಗಾಗಿ, ಆರ್ಥಿಕ ಮತ್ತು ಪರಿಸರ ಸ್ನೇಹಿ ರೀತಿಯಲ್ಲಿ ಮೀನು ಸಂಪನ್ಮೂಲಗಳ ಸಮರ್ಥನೀಯ ಬಳಕೆ ಮತ್ತು ಸಂರಕ್ಷಣೆಯನ್ನು ಉತ್ತೇಜಿಸುವುದು ಇಂದಿನ ಅಗತ್ಯವಾಗಿದೆ ಮತ್ತು ಇದನ್ನು ಗಮನದಲ್ಲಿಟ್ಟುಕೊಂಡು ‘ನದಿ ಸಂರಕ್ಷಣೆ ಕಾರ್ಯಕ್ರಮ’ವನ್ನು ಆರಂಭಿಸಲಾಗಿದೆ.
- ಈ ಕಾರ್ಯಕ್ರಮವು ಸುಸ್ಥಿರ ಮೀನುಗಾರಿಕೆಯನ್ನು ಸಾಧಿಸಲು, ಆವಾಸಸ್ಥಾನದ ಅವನತಿ ಕಡಿಮೆ ಮಾಡಲು, ಜೀವವೈವಿಧ್ಯದ ಸಂರಕ್ಷಣೆ, ಸಾಮಾಜಿಕ-ಆರ್ಥಿಕ ಲಾಭಗಳನ್ನು ಅಧಿಕಗೊಳಿಸಲು ಮತ್ತು ಪರಿಸರ ವ್ಯವಸ್ಥೆಯ ಸೇವೆಗಳನ್ನು ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ.
- ಇದರ ಹೊರತಾಗಿ, ‘ನದಿ ಸಂರಕ್ಷಣೆ ಕಾರ್ಯಕ್ರಮ’ವು ಸಾಂಪ್ರದಾಯಿಕ ಮೀನುಗಾರಿಕೆ, ಪರಿಸರ ವ್ಯವಸ್ಥೆಯ ಸುಸ್ಥಿರತೆ ವ್ಯಾಪಾರ ಮತ್ತು ಒಳನಾಡಿನ ಸಮುದಾಯಗಳ ಸಾಮಾಜಿಕ ಭದ್ರತೆಯನ್ನು ಉತ್ತೇಜಿಸುತ್ತದೆ.
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY) ಕುರಿತು:
- ಇದು ದೇಶದ ಮೀನುಗಾರಿಕೆ ಕ್ಷೇತ್ರದ ಮೇಲೆ ಕೇಂದ್ರೀಕೃತವಾದ ಯೋಜನೆ ಮತ್ತು ಸುಸ್ಥಿರ ಅಭಿವೃದ್ಧಿಯ ಯೋಜನೆಯಾಗಿದೆ.
- ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (PMMSY) ದೇಶದ ಮೀನುಗಾರಿಕೆ ವಲಯದ ಸುಸ್ಥಿರ ಅಭಿವೃದ್ಧಿಗೆ ಗಮನಹರಿಸಿದ 20,050 ಕೋಟಿ ರೂ. ಅಂದಾಜು ಹೂಡಿಕೆಯ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಆತ್ಮ ನಿರ್ಭರ ಭಾರತ ಪ್ಯಾಕೇಜ್ ಅಡಿಯಲ್ಲಿ 2020-21ರಿಂದ 2024-25ರ ಆರ್ಥಿಕ ವರ್ಷದ ನಡುವೆ 5 ವರ್ಷಗಳಲ್ಲಿ ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಾಗಲಿದೆ. ಪಿಎಂಎಂಎಸ್.ವೈ. ಅಡಿಯಲ್ಲಿ 20,050 ಕೋಟಿ ರೂ. ಹೂಡಿಕೆ ಮೀನುಗಾರಿಕೆ ವಲಯದಲ್ಲಿ ಈವರೆಗಿನ ಅತ್ಯಧಿಕ ಹೂಡಿಕೆಯಾಗಿದೆ. ಈ ಪೈಕಿ 12,340 ಕೋಟಿ ರೂ. ಹೂಡಿಕೆಯನ್ನು ಸಾಗರ, ಒಳನಾಡ ಮೀನುಗಾರಿಕೆ ಮತ್ತು ಜಲಚರಗಳ ಕ್ಷೇತ್ರದ ಫಲಾನುಭವಿ ಆಧಾರಿತ ಚಟುವಟಿಕೆಗಳಿಗೆ ಉದ್ದೇಶಿಸಿದ್ದರೆ, ಮೀನುಗಾರಿಕೆ ಮೂಲಸೌಕರ್ಯದಲ್ಲಿ ಸುಮಾರು 7710 ಕೋಟಿ ರೂ. ಹೂಡಿಕೆ ಮಾಡಲಾಗುತ್ತದೆ.
- PMMSYಮೀನು ಉತ್ಪಾದನೆಯನ್ನು 2024-25ರ ಹೊತ್ತಿಗೆ ಹೆಚ್ಚುವರಿಯಾಗಿ 70 ಲಕ್ಷ ಟನ್ ಹೆಚ್ಚಳ ಮಾಡುವ, 2024-25ರ ಹೊತ್ತಿಗೆ ಮೀನುಗಾರಿಕೆಯ ರಫ್ತಿನ ಗಳಿಕೆಯನ್ನು 1,00,000 ಕೋಟಿ ರೂ.ಗಳಿಗೆ ಹೆಚ್ಚಿಸುವ, ಮೀನುಗಾರರ ಮತ್ತು ಮೀನುಕೃಷಿಕರ ಆದಾಯವನ್ನು ದುಪ್ಪಟ್ಟು ಮಾಡುವ ಹಾಗೂ ಕೊಯ್ಲು ನಂತರದ ನಷ್ಟವನ್ನು ಶೇ.20-25ರಿಂದ ಶೇ.10ಕ್ಕೆ ತಗ್ಗಿಸುವ ಮತ್ತು ಹೆಚ್ಚುವರಿಯಾಗಿ 55 ಲಕ್ಷ ನೇರ ಮತ್ತು ಪರೋಕ್ಷ ಲಾಭದಾಯಕ ಉದ್ಯೋಗಾವಕಾಶವನ್ನು ಮೀನುಗಾರಿಕೆ ಮತ್ತು ಅದರ ಪೂರಕ ಚಟುವಟಿಕೆ ವಲಯದಲ್ಲಿ ಸೃಷ್ಟಿಸುವ ಗುರಿ ಹೊಂದಿದೆ.
- ಪಿಎಂಎಂಎಸ್.ವೈ. ಅನ್ನು ಮೀನು ಉತ್ಪಾದನೆ ಮತ್ತು ಉತ್ಪಾದಕತೆ, ಗುಣಮಟ್ಟ, ತಾಂತ್ರಿಕತೆ, ಕೊಯ್ಲೋತ್ತರ ಮೂಲಸೌಕರ್ಯ ಮತ್ತು ನಿರ್ವಹಣೆ, ಆಧುನೀಕರಣ ಹಾಗೂ ಮೌಲ್ಯ ಸರಪಳಿಯ ಬಲವರ್ಧನೆ, ಪತ್ತೆ, ಚೈತನ್ಯಶೀಲ ಮೀನುಗಾರಿಕೆ ನಿರ್ವಹಣಾ ಚೌಕಟ್ಟು ಸ್ಥಾಪನೆ ಮತ್ತು ರೈತರ ಕಲ್ಯಾಣದ ನಡುವಿನ ಪ್ರಮುಖ ಕಂದಕವನ್ನು ನಿವಾರಿಸಲು ವಿನ್ಯಾಸಗೊಳಿಸಲಾಗಿದೆ.
- PMMSY ಅನೇಕ ಹೊಸ ಮಧ್ಯಸ್ಥಿಕೆಗಳಾದ ಮೀನುಗಾರಿಕೆ ಹಡಗುಗಳ ವಿಮೆ, ಮೀನುಗಾರಿಕೆ ಹಡಗುಗಳ/ದೋಣಿಗಳ ಹೊಸತನ/ಮೇಲ್ದರ್ಜೀಕರಣಕ್ಕೆ ಬೆಂಬಲ, ಜೈವಿಕ ಶೌಚಾಲಯಗಳು, ಉಪ್ಪು / ಕ್ಷಾರೀಯ ಪ್ರದೇಶಗಳಲ್ಲಿ ಜಲಚರ ಕೃಷಿ, ಸಾಗರ ಮಿತ್ರರು, ಎಫ್.ಎಫ್.ಪಿ.ಓ/ಸಿಗಳು, ನ್ಯೂಕ್ಲಿಯಸ್ ತಳಿ ಸಂವರ್ಧನೆ ಕೇಂದ್ರಗಳು, ಮೀನುಗಾರಿಕೆ ಮತ್ತು ಜಲಚರ ನವೋದ್ಯಮಗಳು, ಕಾವುಪೆಟ್ಟಿಗೆ, ಸಮಗ್ರ ಜಲಚರ ಪಾರ್ಕ್ ಗಳು, ಸಮಗ್ರ ಕರಾವಳಿ ಮೀನುಗಾರಿಕಾ ಗ್ರಾಮಗಳ ಅಭಿವೃದ್ಧಿ, ಜಲಚರ ಪ್ರಯೋಗಾಲಯ ಜಾಲ ಮತ್ತು ವಿಸ್ತರಣಾ ಸೇವೆಗಳು, ಪತ್ತೆಹಚ್ಚುವಿಕೆ, ಪ್ರಮಾಣೀಕರಣ ಮತ್ತು ಮಾನ್ಯತೆ, ಆರ್.ಎ.ಎಸ್, ಬಯೋಫ್ಲಾಕ್ ಮತ್ತು ಪಂಜರ ಸಂಸ್ಕೃತಿ, ಇ-ವಾಣಿಜ್ಯ / ಮಾರುಕಟ್ಟೆ, ಮೀನುಗಾರಿಕಾ ನಿರ್ವಹಣಾ ಯೋಜನೆಗಳು, ಇತ್ಯಾದಿಗಳಿಗೆ ಅವಕಾಶ ನೀಡುತ್ತದೆ.
- ಈ ಯೋಜನೆಯಲ್ಲಿ, ‘ಕ್ಲಸ್ಟರ್ ಅಥವಾ ಪ್ರದೇಶ ಆಧಾರಿತ ವಿಧಾನವನ್ನು’ ಅಳವಡಿಸಿಕೊಳ್ಳುವ ಮೂಲಕ ಮೀನು ಸಮೂಹಗಳು ಮತ್ತು ಪ್ರದೇಶಗಳನ್ನು ರಚಿಸಲಾಗುತ್ತದೆ.
ಯೋಜನೆಯ ಗುರಿ ಮತ್ತು ಉದ್ದೇಶಗಳು:
- 2024-25ರ ವೇಳೆಗೆ ಹೆಚ್ಚುವರಿಯಾಗಿ 7 ಮಿಲಿಯನ್ ಟನ್ ಮೀನು ಉತ್ಪಾದನೆ ಹೆಚ್ಚಿಸುವುದು.
- 2024-25ರ ವೇಳೆಗೆ ಮೀನಿನ ರಫ್ತು ಆದಾಯವನ್ನು ರೂ .1,00,000 ಕೋಟಿಗೆ ಹೆಚ್ಚಿಸಲು.
- ಮೀನುಗಾರರು ಮತ್ತು ಮೀನು ರೈತರ ಆದಾಯವನ್ನು ದ್ವಿಗುಣಗೊಳಿಸಲು.
- ಸುಗ್ಗಿಯ ನಂತರದ ನಷ್ಟವನ್ನು 20-25 ಪ್ರತಿಶತದಿಂದ 10 ಪ್ರತಿಶತಕ್ಕೆ ಇಳಿಸುವುದು.
- PMMSY ಮೀನು ಉತ್ಪಾದನೆಯನ್ನು 2024-25ರ ಹೊತ್ತಿಗೆ ಹೆಚ್ಚುವರಿಯಾಗಿ 70 ಲಕ್ಷ ಟನ್ ಹೆಚ್ಚಳ ಮಾಡುವ, 2024-25ರ ಹೊತ್ತಿಗೆ ಮೀನುಗಾರಿಕೆಯ ರಫ್ತಿನ ಗಳಿಕೆಯನ್ನು 1,00,000 ಕೋಟಿ ರೂ.ಗಳಿಗೆ ಹೆಚ್ಚಿಸುವ, ಮೀನುಗಾರರ ಮತ್ತು ಮೀನುಕೃಷಿಕರ ಆದಾಯವನ್ನು ದುಪ್ಪಟ್ಟು ಮಾಡುವ ಹಾಗೂ ಕೊಯ್ಲು ನಂತರದ ನಷ್ಟವನ್ನು ಶೇ.20-25ರಿಂದ ಶೇ.10ಕ್ಕೆ ತಗ್ಗಿಸುವ ಮತ್ತು ಹೆಚ್ಚುವರಿಯಾಗಿ 55 ಲಕ್ಷ ನೇರ ಮತ್ತು ಪರೋಕ್ಷ ಲಾಭದಾಯಕ ಉದ್ಯೋಗಾವಕಾಶವನ್ನು ಮೀನುಗಾರಿಕೆ ಮತ್ತು ಅದರ ಪೂರಕ ಚಟುವಟಿಕೆ ವಲಯದಲ್ಲಿ ಸೃಷ್ಟಿಸುವ ಗುರಿ ಹೊಂದಿದೆ.
- ಮೀನುಗಾರಿಕೆ ವಲಯ ಮತ್ತು ಸಂಬಂಧಿತ ಚಟುವಟಿಕೆಗಳಲ್ಲಿ 55 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು.
- PMMSY ಪ್ರಾಥಮಿಕವಾಗಿ ಕ್ಲಸ್ಟರ್ ಅಥವಾ ಪ್ರದೇಶ ಆಧಾರಿತ ವಿಧಾನಗಳನ್ನು ಮತ್ತು ಮೀನುಗಾರಿಕಾ ಕ್ಲಸ್ಟರ್ ಗಳನ್ನು ಹಿಂದುಳಿದ ಮತ್ತು ಮುಂದುವರಿದ ಸಂಪರ್ಕದೊಂದಿಗೆ ಅಳವಡಿಸಿಕೊಳ್ಳುವುದಕ್ಕೆ ಗಮನ ನೀಡುತ್ತದೆ. ಅಲಂಕಾರಿಕ ಮೀನು ಕೃಷಿ ಮತ್ತು ಸಮುದ್ರ ಕಳೆಯಲ್ಲಿ ಉದ್ಯೋಗಾವಕಾಶ ಸೃಷ್ಟಿಗೂ ವಿಶೇಷ ಗಮನ ಹರಿಸುತ್ತದೆ. ಗುಣಮಟ್ಟದ, ಬೀಜ ಮತ್ತು ಮೇವು, ಜಾತಿಗಳ ವೈವಿಧ್ಯೀಕರಣದ ಬಗ್ಗೆ ವಿಶೇಷ ಗಮನಹರಿಸಿ, ನಿರ್ಣಾಯಕ ಮೂಲಸೌಕರ್ಯ, ಮಾರುಕಟ್ಟೆ ಜಾಲ ಇತ್ಯಾದಿಗಳಿಗೆ ಇದು ಒತ್ತು ನೀಡುತ್ತದೆ.
- ಈವರೆಗೆ ಪಿಎಂಎಂಎಸ್.ವೈ ಅಡಿಯಲ್ಲಿ ಮೀನುಗಾರಿಕೆ ಇಲಾಖೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮೊದಲ ಹಂತದಲ್ಲಿ 123 ಕೋಟಿ ಮೌಲ್ಯದ ಪ್ರಸ್ತಾಪಗಳಿಗೆ ಅನುಮೋದನೆ ನೀಡಿದೆ. ಪಿಎಂಎಂಎಸ್.ವೈ ಅಡಿಯಲ್ಲಿ ಆದಾಯ ಸೃಷ್ಟಿಸುವ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗಿದೆ.
ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಜಾಗೃತಿ.
ನಾಸಾದ ಲೂಸಿ ಮಿಷನ್:
(NASA’s Lucy mission)
ಸಂದರ್ಭ:
ಇತ್ತೀಚೆಗೆ, ಅಮೇರಿಕಾದ ಬಾಹ್ಯಾಕಾಶ ಸಂಸ್ಥೆಯಾದ ‘ನಾಸಾ’ ಮುಂದಿನ ವಾರದಲ್ಲಿ ‘ಲೂಸಿ’ ಮಿಷನ್ (Lucy Mission) ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
- ಈ ಕಾರ್ಯಾಚರಣೆಯಲ್ಲಿ, ಬಾಹ್ಯಾಕಾಶ ನೌಕೆಯು ‘ಕ್ಷುದ್ರಗ್ರಹ’ಕ್ಕೆ ಪ್ರಯಾಣಿಸಲು ಭೂಮಿಯ ಗುರುತ್ವಾಕರ್ಷಣೆಯ ಕ್ಷೇತ್ರವನ್ನು ಬಳಸಿಕೊಳ್ಳುತ್ತದೆ ಮತ್ತು ಇದಕ್ಕಾಗಿ ಉಡಾವಣೆ ವಾಹನವು ಭೂಮಿಯ ಮೂಲಕ ಎರಡು ಬಾರಿ ಹಾರುತ್ತದೆ.
‘ಲೂಸಿ’ ಮಿಷನ್ ಕುರಿತು:
ಇದು ಗುರು ಗ್ರಹದ ‘ಟ್ರೋಜನ್ ಕ್ಷುದ್ರಗ್ರಹಗಳನ್ನು’ ಅನ್ವೇಷಿಸಲು ನಾಸಾ ಕಳುಹಿಸಿದ ಮೊದಲ ಮಿಷನ್ ಆಗಿದೆ.
ಈ ಮಿಷನ್ ಸೌರಶಕ್ತಿಯಿಂದ ಚಾಲಿತವಾಗಿದೆ.
ಈ ಮಿಷನ್ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು 12 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. ಈ ಸಮಯದಲ್ಲಿ, ಬಾಹ್ಯಾಕಾಶ ನೌಕೆಯು ಸುಮಾರು 6.3 ಶತಕೋಟಿ ಕಿಮೀ ಪ್ರಯಾಣಿಸಿ “ಎಂಟು ಕ್ಷುದ್ರಗ್ರಹಗಳನ್ನು” ಸುತ್ತಿ “ಯುವ ಸೌರವ್ಯೂಹ” ದ ಬಗ್ಗೆ ಮಾಹಿತಿ ಪಡೆಯಲಿದೆ.
ಮಿಷನ್ ಉದ್ದೇಶ:
‘ಟ್ರೋಜನ್ ಕ್ಷುದ್ರಗ್ರಹಗಳ’ ಗುಂಪಿನಲ್ಲಿರುವ ವಿವಿಧ ಕ್ಷುದ್ರಗ್ರಹಗಳ ಸಂಯೋಜನೆಯನ್ನು ಅರ್ಥಮಾಡಿಕೊಳ್ಳಲು, ಕ್ಷುದ್ರಗ್ರಹಗಳ ದ್ರವ್ಯರಾಶಿ ಮತ್ತು ಸಾಂದ್ರತೆಯನ್ನು ನಿರ್ಧರಿಸಲು ಮತ್ತು ಟ್ರೋಜನ್ ಕ್ಷುದ್ರಗ್ರಹಗಳನ್ನು ಸುತ್ತುವ ಉಪಗ್ರಹಗಳು ಮತ್ತು ಉಂಗುರಗಳನ್ನು ವೀಕ್ಷಿಸಲು ಮತ್ತು ಅಧ್ಯಯನ ಮಾಡಲು ‘ಲೂಸಿ ಮಿಷನ್’ ಅನ್ನು ವಿನ್ಯಾಸಗೊಳಿಸಲಾಗಿದೆ.
‘ಟ್ರೋಜನ್ ಕ್ಷುದ್ರಗ್ರಹಗಳು’ ಎಂದರೇನು?
ಟ್ರೋಜನ್ ಕ್ಷುದ್ರಗ್ರಹಗಳು ಆರಂಭಿಕ ಸೌರವ್ಯೂಹದ ಅವಶೇಷಗಳು ಎಂದು ನಂಬಲಾಗಿದೆ, ಮತ್ತು ಅವುಗಳನ್ನು ಅಧ್ಯಯನ ಮಾಡುವುದರಿಂದ ವಿಜ್ಞಾನಿಗಳಿಗೆ ಅವುಗಳ ಮೂಲ, ವಿಕಸನ ಮತ್ತು ಪ್ರಸ್ತುತ ರೂಪವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
- ಈ ‘ಕ್ಷುದ್ರಗ್ರಹಗಳು’ ಸುಮಾರು 4 ಬಿಲಿಯನ್ ವರ್ಷಗಳ ಹಿಂದೆ ಸೌರವ್ಯೂಹದ ರಚನೆಯೊಂದಿಗೆ ಹುಟ್ಟಿಕೊಂಡಿವೆ ಎಂದು ನಂಬಲಾಗಿದೆ, ಮತ್ತು ಟ್ರೋಜನ್ ಕ್ಷುದ್ರಗ್ರಹಗಳು ಸೌರಮಂಡಲದ ಇತರ ಗ್ರಹಗಳು ರೂಪುಗೊಂಡ ಅದೇ ವಸ್ತುವಿನಿಂದ ರೂಪುಗೊಂಡಿವೆ ಎಂದು ನಂಬಲಾಗಿದೆ.
ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.
ಭೂಮಿಯ ನೀರಿನ ಸಂಗ್ರಹ (TWS) ನಷ್ಟದ ಬಗ್ಗೆ WMO ವರದಿ:
(WMO report on terrestrial water storage (TWS) loss)
ಸಂದರ್ಭ:
ಭೂಮಿಯ ನೀರಿನ ಸಂಗ್ರಹದ (TWS) ನಷ್ಟದ ವರದಿಯನ್ನು (terrestrial water storage (TWS)2021) ಹವಾಮಾನ ಸೇವೆಗಳ ಸ್ಥಿತಿ 2021 ಅನ್ನು ಇತ್ತೀಚೆಗೆ ವಿಶ್ವ ಹವಾಮಾನ ಸಂಸ್ಥೆ (World Meteorological Organization – WMO) ಯು ಬಿಡುಗಡೆ ಮಾಡಿದೆ.
ಭೂಮಿಯ ನೀರಿನ ಸಂಗ್ರಹ (TWS) ಎಂದರೇನು?
‘ಟೆರೆಸ್ಟ್ರಿಯಲ್ ವಾಟರ್ ಸ್ಟೋರೇಜ್ (TWS’) ಎಂದರೆ ಭೂಮಿಯ ಮೇಲಿನ ಭೂಭಾಗ ಮತ್ತು ಅದರ ಕೆಳ ಮೇಲ್ಮೈ, ಅಂದರೆ ಮೇಲ್ಮೈ ನೀರು, ಮಣ್ಣಿನ ತೇವಾಂಶ, ಹಿಮ, ಮಂಜು ಮತ್ತು ಅಂತರ್ಜಲದಲ್ಲಿರುವ ಒಟ್ಟು ನೀರಿನ ಪ್ರಮಾಣವಾಗಿದೆ.
ವರದಿಯ ಪ್ರಮುಖಾಂಶಗಳು:
- ಒಟ್ಟಾರೆಯಾಗಿ, ಭೂಮಿಯ ನೀರಿನ ಸಂಗ್ರಹಣೆ (TWS) 20 ವರ್ಷಗಳಲ್ಲಿ (2002-2021) ಪ್ರತಿ ವರ್ಷ 1 ಸೆಂ.ಮೀ. ದರದಲ್ಲಿ ಕಡಿಮೆಯಾಗಿದೆ.
- ಅಂಟಾರ್ಟಿಕಾ ಮತ್ತು ಗ್ರೀನ್ ಲ್ಯಾಂಡ್ ನಲ್ಲಿ ಭೂಮಿಯ ನೀರಿನ ಸಂಗ್ರಹಣೆಯಲ್ಲಿ ಹೆಚ್ಚಿನ ಇಳಿಕೆ ಸಂಭವಿಸಿವೆ.
- ಹೆಚ್ಚಿನ ಜನಸಂಖ್ಯೆ ಹೊಂದಿರುವ, ಕಡಿಮೆ ಅಕ್ಷಾಂಶದ ಸ್ಥಳಗಳು ಕೂಡ TWS ನಷ್ಟವನ್ನು ಅನುಭವಿಸಿವೆ.
- ಭಾರತವು ‘ಟಿಡಬ್ಲ್ಯೂಎಸ್ ನಷ್ಟದ ಅತ್ಯುನ್ನತ ಹಾಟ್ ಸ್ಪಾಟ್’ ಆಗಿದೆ. ಅಂಟಾರ್ಕ್ಟಿಕಾ ಮತ್ತು ಗ್ರೀನ್ ಲ್ಯಾಂಡ್ ನಲ್ಲಿ ನೀರಿನ ಸಂಗ್ರಹದ ಕೊರತೆಯನ್ನು ಹೊರತುಪಡಿಸಿದರೆ ಭಾರತವು ಭೂಮಿಯ ನೀರಿನ ಸಂಗ್ರಹಣೆಯಲ್ಲಿ ಅತಿ ಹೆಚ್ಚು ನಷ್ಟವನ್ನು ದಾಖಲಿಸಿದೆ.
- ಭಾರತದಲ್ಲಿ, TWS ವರ್ಷಕ್ಕೆ ಕನಿಷ್ಠ 3 ಸೆಂ.ಮೀ ದರದಲ್ಲಿ ಕಡಿಮೆಯಾಗಿದೆ. ಕೆಲವು ಪ್ರದೇಶಗಳಲ್ಲಿ, ನಷ್ಟವು ವರ್ಷಕ್ಕೆ 4 ಸೆಂ.ಮೀ.ಗಿಂತಲೂ ಹೆಚ್ಚಾಗಿದೆ.
- ಭಾರತದ ಉತ್ತರ ಭಾಗವು ದೇಶದೊಳಗೆ ಗರಿಷ್ಠ ನಷ್ಟವನ್ನು ಅನುಭವಿಸಿದೆ.
ಮುಂದಿರುವ ಸವಾಲುಗಳು:
ಪ್ರಪಂಚದಾದ್ಯಂತ ನೀರಿನ ಸಂಪನ್ಮೂಲಗಳು ಮಾನವ ಮತ್ತು ನೈಸರ್ಗಿಕವಾಗಿ ಪ್ರೇರಿತ ಒತ್ತಡಗಳಿಂದಾಗಿ ಭಾರೀ ಒತ್ತಡದಲ್ಲಿವೆ.
- ಈ ಒತ್ತಡಗಳಲ್ಲಿ ಜನಸಂಖ್ಯಾ ಬೆಳವಣಿಗೆ, ನಗರೀಕರಣ ಮತ್ತು ಸಿಹಿನೀರಿನ ಲಭ್ಯತೆ ಕಡಿಮೆಯಾಗುವುದು ಸೇರಿವೆ.
- ಅಭಿವೃದ್ಧಿಯ ಎಲ್ಲಾ ಕ್ಷೇತ್ರಗಳಲ್ಲಿ ಮತ್ತು ಭೂಮಿಯ ಎಲ್ಲಾ ಭಾಗಗಳಲ್ಲಿ ವಿಪರೀತ ಹವಾಮಾನ ಘಟನೆಗಳು ಕೂಡ ‘ಜಲ ಸಂಪನ್ಮೂಲ’ಗಳ ಮೇಲಿನ ಒತ್ತಡಕ್ಕೆ ಕಾರಣವಾಗಿವೆ.
ಭಾರತೀಯ ಸನ್ನಿವೇಶ:
- ಭಾರತದಲ್ಲಿ, ಜನಸಂಖ್ಯೆಯ ಹೆಚ್ಚಳದಿಂದಾಗಿ ತಲಾ ನೀರಿನ ಲಭ್ಯತೆಯು ಕಡಿಮೆಯಾಗುತ್ತಿದೆ.
- ಸರಾಸರಿ ವಾರ್ಷಿಕ ತಲಾ ನೀರಿನ ಲಭ್ಯತೆ ನಿರಂತರವಾಗಿ ಕಡಿಮೆಯಾಗುತ್ತಿದೆ. ಇದು 2001 ರಲ್ಲಿ 1,816 ಕ್ಯೂಬಿಕ್ ಮೀಟರ್ನಿಂದ 2011 ರಲ್ಲಿ 1,545 ಕ್ಯೂಬಿಕ್ ಮೀಟರ್ಗಳಿಗೆ ಕಡಿಮೆಯಾಗಿದೆ.
- ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಪ್ರಕಾರ, 2031 ರಲ್ಲಿ ಇದು 1,367 ಕ್ಯೂಬಿಕ್ ಮೀಟರ್ಗಳಿಗೆ ಇಳಿದು ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ.
- ಭಾರತದ 21 ನದಿ ಜಲಾನಯನ ಪ್ರದೇಶಗಳಲ್ಲಿ ಐದು ಜಲಾನಯನ ಪ್ರದೇಶಗಳು ಸಂಪೂರ್ಣ ನೀರಿನ ಕೊರತೆ (ತಲಾ ನೀರಿನ ಲಭ್ಯತೆ 500 ಘನ ಮೀಟರ್ಗಿಂತ ಕಡಿಮೆ) ಎದುರಿಸುತ್ತಿವೆ.
- 2050 ರ ಹೊತ್ತಿಗೆ, ಆರು ಜಲಾನಯನ ಪ್ರದೇಶಗಳಲ್ಲಿ ಸಂಪೂರ್ಣ ನೀರಿನ ಕೊರತೆಯಾಗುತ್ತದೆ,ಮತ್ತು ನಾಲ್ಕು ಜಲಾನಯನ ಪ್ರದೇಶಗಳಲ್ಲಿ ನೀರಿನ ಒತ್ತಡ ಉಂಟಾಗುತ್ತದೆ.
ಸರ್ಕಾರ ಕೈಗೊಂಡ ಕ್ರಮಗಳು:
- ನೀರಿನ ಸಂರಕ್ಷಣೆಗಾಗಿ
- ಜಲ ಕ್ರಾಂತಿ ಅಭಿಯಾನ
- ರಾಷ್ಟ್ರೀಯ ಜಲ ಮಿಷನ್
- ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಕಾರ್ಯಕ್ರಮ
- ನೀತಿ ಆಯೋಗ ಸಂಯುಕ್ತ ನೀರಿನ ನಿರ್ವಹಣಾ ಸೂಚ್ಯಂಕ
- ಜಲ ಶಕ್ತಿ ಸಚಿವಾಲಯದ ರಚನೆ ಮತ್ತು ಜಲ ಜೀವನ ಮಿಷನ್ ನ ಆರಂಭ.
ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.
ಸ್ವಚ್ಛ, ಆರೋಗ್ಯಕರ ಮತ್ತು ಸುಸ್ಥಿರ ಪರಿಸರವನ್ನು, ಒಂದು ಸಾರ್ವತ್ರಿಕ ಹಕ್ಕು ಎಂದು ಗುರುತಿಸುವುದು:
(Clean, healthy and sustainable environment, a universal right)
ಸಂದರ್ಭ:
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು (United Nations Human Rights Council) ಸ್ವಿಟ್ಜರ್ಲೆಂಡ್ನ ಜಿನೀವಾದಲ್ಲಿ ಸ್ವಚ್ಛ, ಆರೋಗ್ಯಕರ ಮತ್ತು ಸಮರ್ಥನೀಯ ಪರಿಸರವನ್ನು ಸಾರ್ವತ್ರಿಕ ಹಕ್ಕು ಎಂದು ಗುರುತಿಸಲು ಸರ್ವಾನುಮತದಿಂದ ಮತ ಚಲಾಯಿಸಿದೆ.
ಮಹತ್ವ:
ಒಂದು ವೇಳೆ ಇದು ಎಲ್ಲ ಸದಸ್ಯ ರಾಷ್ಟ್ರಗಳಿಂದಲೂ ಮಾನ್ಯತೆ ಪಡೆದರೆ, ಇದು 1948 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ(Universal Declaration of Human Rights) ಯನ್ನು ಅಂಗೀಕರಿಸಿದ ನಂತರ 70 ವರ್ಷಗಳ ನಂತರ ಈ ರೀತಿಯ ಮೊದಲ ಹಕ್ಕಾಗಲಿದೆ.
ಮಾನ್ಯತೆಯ ಅಗತ್ಯತೆ:
ಈ ರೆಸಲ್ಯೂಶನ್ “ಪರಿಸರದ ವಿಷಯಗಳಲ್ಲಿ ಕೆಲಸ ಮಾಡುವ ಮಾನವ ಹಕ್ಕುಗಳ ರಕ್ಷಕರ ಜೀವನ, ಸ್ವಾತಂತ್ರ್ಯ ಮತ್ತು ಭದ್ರತೆಯ ಹಕ್ಕುಗಳನ್ನು ಪರಿಸರ ಮಾನವ ಹಕ್ಕುಗಳ ರಕ್ಷಕರು (environmental human rights defenders) ಎಂದು ಉಲ್ಲೇಖಿಸುತ್ತದೆ.”
- ಪ್ರಪಂಚದಾದ್ಯಂತದ ಪರಿಸರ ರಕ್ಷಕರು ನಿರಂತರ ದೈಹಿಕ ದಾಳಿ, ಬಂಧನ, ಕಣ್ಗಾವಲು, ಕಾನೂನು ಕ್ರಮ ಮತ್ತು ಅಪಪ್ರಚಾರಕ್ಕೆ ಒಳಗಾಗುವ ಅಭಿಯಾನಗಳಿಗೆ ಒಳಗಾಗುತ್ತಾರೆ.
- 2020 ವರ್ಷ ಒಂದರಲ್ಲಿಯೇ, ಸುಮಾರು 200 ಪರಿಸರ ಸಂರಕ್ಷಕರನ್ನು ಕೊಲ್ಲಲಾಗಿದೆ.
ಹಿನ್ನೆಲೆ:
13,000 ಕ್ಕೂ ಹೆಚ್ಚು ನಾಗರಿಕ ಸಮಾಜ ಸಂಘಟನೆಗಳು ಮತ್ತು ಸ್ಥಳೀಯ ಜನರ ಗುಂಪುಗಳು, ವಿಶ್ವಾದ್ಯಂತ 90,000 ಕ್ಕೂ ಹೆಚ್ಚು ಮಕ್ಕಳು, ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆಗಳ ಜಾಗತಿಕ ಒಕ್ಕೂಟ ಮತ್ತು ಖಾಸಗಿ ವಲಯದ ಪಾಲುದಾರರು ಈ ಹಕ್ಕಿಗಾಗಿ ಅವಿರತವಾಗಿ ಪ್ರಚಾರ ಮಾಡಿದ್ದಾರೆ.
ಮುಂದಿರುವ ಸವಾಲುಗಳು:
ಸುರಕ್ಷಿತ, ಸ್ವಚ್ಛ, ಆರೋಗ್ಯಕರ ಮತ್ತು ಸುಸ್ಥಿರ ಪರಿಸರಕ್ಕೆ ಮಾನವ ಹಕ್ಕನ್ನು ಇಲ್ಲಿಯವರೆಗೆ ಯಾವುದೇ ಮಾನವ ಹಕ್ಕುಗಳ ಒಪ್ಪಂದದಲ್ಲಿ ಗುರುತಿಸಲಾಗಿಲ್ಲ ಮತ್ತು ಇದು ಇನ್ನೂ ಸಾಂಪ್ರದಾಯಿಕ ಹಕ್ಕಾಗಿ ಹೊರಹೊಮ್ಮಬೇಕಿದೆ.
- ಸರಿಯಾದ ಪರಿಗಣನೆಯಿಲ್ಲದೆ ಮತ್ತು ಸಾಮಾನ್ಯ ತಿಳುವಳಿಕೆಯನ್ನು ಅಭಿವೃದ್ಧಿಪಡಿಸದೆ ‘ಹಕ್ಕುಗಳಿಗೆ’ ಅಂತರರಾಷ್ಟ್ರೀಯ ಮಟ್ಟದಲ್ಲಿ ‘ಮನ್ನಣೆ’ ನೀಡುವುದು ಅಸ್ಪಷ್ಟತೆ ಮತ್ತು ಗೊಂದಲವನ್ನು ಸೃಷ್ಟಿಸುತ್ತದೆ.
- ರಾಜ್ಯದಿಂದ ತಾವು ಕಾನೂನುಬದ್ಧವಾಗಿ ಏನನ್ನು ಪಡೆಯಬಹುದು ಎಂಬುದು ವ್ಯಕ್ತಿಗಳಿಗೂ ತಿಳಿದಿಲ್ಲ ಮತ್ತು ವ್ಯಕ್ತಿಗಳಿಗೆ ನೀಡಬೇಕಾದ ಭದ್ರತೆಯ ಬಾಧ್ಯತೆಯ ಬಗ್ಗೆ ರಾಜ್ಯವು ಸ್ಪಷ್ಟ ತಿಳುವಳಿಕೆಯನ್ನು ಹೊಂದಿಲ್ಲ.
- ಇದರ ಹೊರತಾಗಿ, ಮಾನವ ಹಕ್ಕುಗಳ ನಿರ್ಣಯಗಳು ಕಾನೂನುಬದ್ಧವಾಗಿ ಬಂಧಿಸುವ ಸಾಧನಗಳಲ್ಲ, ಮತ್ತು ಈ ನಿರ್ಣಯದಲ್ಲಿ ಹಕ್ಕನ್ನು ಗುರುತಿಸುವುದು ಅದರ ನಿಯಮಗಳನ್ನು ಪಾಲಿಸುವಂತೆ ರಾಜ್ಯಗಳನ್ನು ಒತ್ತಾಯ ಮಾಡುವಂತಿಲ್ಲ.
ಈ ಮಾನ್ಯತೆಯ ನಿರೀಕ್ಷಿತ ಫಲಿತಾಂಶಗಳು:
- ಬಲವಾದ ಪರಿಸರ ಕಾನೂನುಗಳು ಮತ್ತು ನೀತಿಗಳು.
- ಸುಧಾರಿತ ಅನುಷ್ಠಾನ ಮತ್ತು ಜಾರಿ.
- ಪರಿಸರ ನಿರ್ಧಾರ ತೆಗೆದುಕೊಳ್ಳುವಲ್ಲಿ ಹೆಚ್ಚಿನ ಸಾರ್ವಜನಿಕ ಭಾಗವಹಿಸುವಿಕೆ.
- ಪರಿಸರ ಅನ್ಯಾಯಗಳನ್ನು ಕಡಿಮೆ ಮಾಡಲಾಗಿದೆ.
- ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳು ಸೇರಿದಂತೆ ಸಮಾನವಕಾಶ.
- ಉತ್ತಮ ಪರಿಸರ ಕಾರ್ಯಕ್ಷಮತೆ.
ವಿಷಯಗಳು: ವಿವಿಧ ಭದ್ರತಾ ಪಡೆಗಳು ಮತ್ತು ಏಜೆನ್ಸಿಗಳು ಮತ್ತು ಅವುಗಳ ಆದೇಶಗಳು.
ಪ್ರಾದೇಶಿಕ ಸೇನೆ:
(Territorial Army)
ಸಂದರ್ಭ:
ಭಾರತೀಯ ಸೇನೆಯು 72 ನೇ ಪ್ರಾದೇಶಿಕ ಸೇನಾ (Territorial Army) ದಿನವನ್ನು ಅಕ್ಟೋಬರ್ 9 ರಂದು ಆಚರಿಸಿತು.
ಪ್ರಾದೇಶಿಕ ಸೇನೆಯ ಬಗ್ಗೆ:
ಆಗಸ್ಟ್ 18, 1948 ರಂದು ‘ಟೆರಿಟೋರಿಯಲ್ ಆರ್ಮಿ ಆಕ್ಟ್’ ಜಾರಿಯಾದ ನಂತರ ‘ಟೆರಿಟೋರಿಯಲ್ ಆರ್ಮಿ’ ತನ್ನ ಪ್ರಸ್ತುತ ರೂಪದಲ್ಲಿ ಜಾರಿಗೆ ಬಂದಿತು.
- ಭಾರತದ ಮೊದಲ ಗವರ್ನರ್ ಜನರಲ್ ಶ್ರೀ ಸಿ ರಾಜಗೋಪಾಲಾಚಾರಿ ಅವರು ಅಕ್ಟೋಬರ್ 9 ರಂದು 1949 ರಲ್ಲಿ ಭಾರತೀಯ ಪ್ರಾದೇಶಿಕ ಸೇನೆಯನ್ನು ಔಪಚಾರಿಕವಾಗಿ ಉದ್ಘಾಟಿಸಿದರು.
- ಆರಂಭದಲ್ಲಿ ಪ್ರಾದೇಶಿಕ ಸೇನೆಯು ಇನ್ಫ್ಯಾಂಟ್ರಿ, ಆರ್ಮರ್ಡ್ ಕಾರ್ಪ್ಸ್, ಏರ್ ಡಿಫೆನ್ಸ್ ಫಿರಂಗಿ, ಸಿಗ್ನಲ್, ಪೂರೈಕೆ ಮತ್ತು ಇತರ ಇಲಾಖಾ ಘಟಕಗಳನ್ನು ಒಳಗೊಂಡಿತ್ತು.
- ಇದು ಸ್ವಯಂಸೇವಕರು ಪ್ರತಿವರ್ಷ ಅಲ್ಪಾವಧಿಯ ತರಬೇತಿಗೆ ಅರ್ಜಿ ಸಲ್ಲಿಸುವ ಸಂಸ್ಥೆಯಾಗಿದ್ದು, ಯಾವುದೇ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಅಥವಾ ಭಾರತದ ರಕ್ಷಣೆಗೆ ಸೇವೆ ಸಲ್ಲಿಸಲು ಸಿದ್ಧರಾಗಿರುತ್ತಾರೆ.
- ಟೆರಿಟೋರಿಯಲ್ ಆರ್ಮಿ, ಇದನ್ನು ‘ಟೆರಿಯರ್ಸ್’ ಎಂದೂ ಕರೆಯುತ್ತಾರೆ, ಸಾಮಾನ್ಯ ಸೈನ್ಯದ ನಂತರ ರಾಷ್ಟ್ರೀಯ ರಕ್ಷಣೆಯ ಎರಡನೇ ಸಾಲು ಎಂದು ಇದನ್ನು ಪರಿಗಣಿಸಲಾಗಿದೆ.
ಅರ್ಹತೆ:
18 ರಿಂದ 42 ವರ್ಷದೊಳಗಿನ ಯಾವುದೇ ಪುರುಷ ಭಾರತೀಯ ಪ್ರಾದೇಶಿಕ ಸೇನೆಗೆ ಸೇರಲು ಅರ್ಜಿ ಸಲ್ಲಿಸಬಹುದು, ಆದರೆ ಇದಕ್ಕಾಗಿ ಅವರು ಲಿಖಿತ ಪರೀಕ್ಷೆ, ಸಂದರ್ಶನ, ವೈದ್ಯಕೀಯ ಪರೀಕ್ಷೆ ಮತ್ತು ಅಗತ್ಯ ತರಬೇತಿಯಲ್ಲಿ ಉತ್ತೀರ್ಣರಾಗಬೇಕು.
ಪಾತ್ರ ಮತ್ತು ಜವಾಬ್ದಾರಿಗಳು:
ಪ್ರಾದೇಶಿಕ ಸೈನ್ಯವು ನಿಯಮಿತ ಸೇನೆಯ ಒಂದು ಭಾಗವಾಗಿದೆ ಮತ್ತು ನಿಯಮಿತ ಸೈನ್ಯವನ್ನು ಸ್ಥಿರ ಕರ್ತವ್ಯಗಳಿಂದ ಮುಕ್ತಗೊಳಿಸುವುದು ಮತ್ತು ನಾಗರಿಕ ವಿಪತ್ತುಗಳನ್ನು ಎದುರಿಸಲು ನಾಗರಿಕ ಆಡಳಿತಕ್ಕೆ ಸಹಾಯ ಮಾಡುವುದು ಮತ್ತು ಸಮುದಾಯಗಳ ಜೀವನದ ಮೇಲೆ ಪರಿಣಾಮ ಬೀರುವ ಅಥವಾ ದೇಶದ ಭದ್ರತೆಗೆ ಧಕ್ಕೆಯಾಗುವ ಸಂದರ್ಭಗಳಲ್ಲಿ ಅಗತ್ಯ ಸೇವೆಗಳ ನಿರ್ವಹಣೆ ಮತ್ತು ಅಗತ್ಯವಿದ್ದಾಗ ಮತ್ತು ನಿಯಮಿತ ಸೇನೆಗೆ ಅಗತ್ಯ ಸೈನಿಕರನ್ನು ಒದಗಿಸುವುದು.
ಪ್ರಾದೇಶಿಕ ಸೇನೆಯು ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತದೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
2021 ರ ನೊಬೆಲ್ ಸಾಹಿತ್ಯ ಪ್ರಶಸ್ತಿ:
ಯುನೈಟೆಡ್ ಕಿಂಗ್ಡಂನಲ್ಲಿ ನೆಲೆಸಿರುವ ಜಂಜಿಬಾರ್ ಅರಬ್ ಬರಹಗಾರ ಅಬ್ದುಲ್ ರಜಾಕ್ ಗುರ್ನಾ (Abdulrazak Gurnah, a Zanzibari Arab writer settled in the United Kingdom)ಅವರನ್ನು ವಸಾಹತುಶಾಹಿ ಮತ್ತು ನಿರಾಶ್ರಿತರ ಜೀವನದ ಕುರಿತು ರಚಿಸಿದ ಕೃತಿಗಳಿಗಾಗಿ ಈ ವರ್ಷದ ಸಾಹಿತ್ಯದ ನೊಬೆಲ್ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
ಅವರ ಜೀವನ:
- ಅಬ್ದುಲ್ ರಜಾಕ್ ಗುರ್ನಾಹ್ 1948 ರಲ್ಲಿ ಜನಿಸಿದರು ಮತ್ತು ಹಿಂದೂ ಮಹಾಸಾಗರದ ಜಂಜಿಬಾರ್ ದ್ವೀಪದಲ್ಲಿ ಬೆಳೆದರು. ಜಂಜಿಬಾರ್ ನಲ್ಲಿ ಕ್ರಾಂತಿ ಸಂಭವಿಸಿದ ನಂತರ 1960 ರ ದಶಕದ ಕೊನೆಯಲ್ಲಿ, ಅವರು ಹಿಂದಿನ ವಸಾಹತುಶಾಹಿ ಶಕ್ತಿಯಾದ ಯುನೈಟೆಡ್ ಕಿಂಗ್ಡಮ್ ಗೆ ಒತ್ತಾಯಪೂರ್ವಕವಾಗಿ ಪಲಾಯನ ಮಾಡಬೇಕಾಯಿತು.
- ಗುರ್ನಾ ಹತ್ತು ಕಾದಂಬರಿಗಳು ಮತ್ತು ಹಲವಾರು ಸಣ್ಣ ಕಥೆಗಳನ್ನು ಪ್ರಕಟಿಸಿದ್ದಾರೆ. ನಿರಾಶ್ರಿತನ ಅಡಚಣೆಯ ವಿಷಯವು ಅವರ ಎಲ್ಲ ಕೃತಿಗಳನ್ನು ಕಂಡುಬರುತ್ತದೆ.
ಅವರ ಕೃತಿಗಳು:
ಮೆಮೊರಿ ಆಫ್ ಡಿಪಾರ್ಚರ್, ಪಿಲ್ಗ್ರಿಮ್ಸ್ ವೇ ಫ್ರಮ್ 1988, ಡಾಟ್ಟಿ (1990), ಪ್ಯಾರಡೈಸ್ (1994) ಇತ್ಯಾದಿಗಳು. ಆಫ್ಟರ್ಲೈವ್ಸ್ (2020) ಅವರ ಇತ್ತೀಚಿನ ಕಾದಂಬರಿ.(Memory of Departure, Pilgrims Way from 1988, Dottie (1990), Paradise (1994) etc. Afterlives (2020) is his latest novel).
ಮುಖ್ಯ ಅಂಶಗಳು:
ಜಂಜಿಬಾರ್ ಎಲ್ಲಿದೆ? ಇದು ಪೂರ್ವ ಆಫ್ರಿಕಾದ ಭಾಗವಾಗಿದ್ದು, ಸ್ವಾಹಿಲಿ ಕರಾವಳಿ ಎಂದು ಕರೆಯಲ್ಪಡುವ ಪ್ರದೇಶವಾಗಿದೆ, ಇದು ಇಂದಿನ ಸೊಮಾಲಿಯಾದಿಂದ ಹಿಂದೂ ಮಹಾಸಾಗರದ ಪಶ್ಚಿಮ ತೀರದಲ್ಲಿರುವ ಮೊಜಾಂಬಿಕ್ ವರೆಗೆ ವ್ಯಾಪಿಸಿದೆ.
ಸ್ವಾಹಿಲಿ ಎಂದರೇನು? ಶತಮಾನಗಳಿಂದ, ಅರೇಬಿಯಾ, ಪರ್ಷಿಯಾ ಮತ್ತು ಭಾರತೀಯ ಉಪಖಂಡದ ವ್ಯಾಪಾರಿಗಳು ಸ್ಥಳೀಯ ಬಂಟು ಜನಸಂಖ್ಯೆಯೊಂದಿಗೆ ಬೆರೆತು ಸ್ವಾಹಿಲಿ (Swahili) ಎಂಬ ಹೊಸ ಸಂಸ್ಕೃತಿ ಮತ್ತು ಭಾಷೆಯನ್ನು ಹುಟ್ಟುಹಾಕಿದರು.
ಟಾನ್ಜಾನಿಯಾ (ಟ್ಯಾಂಗನಿಕಾ ಮತ್ತು ಜಂಜಿಬಾರ್), ಗುರ್ನಾ ಅವರ ಜನ್ಮಭೂಮಿ ಆಗಿದೆ, 19 ನೇ ಶತಮಾನದಲ್ಲಿ ಜರ್ಮನ್ ಅಧೀನದ ಪೂರ್ವ ಆಫ್ರಿಕಾದ ಭಾಗವಾಗಿತ್ತು. ಮೊದಲನೆಯ ಮಹಾಯುದ್ಧದ ನಂತರ, ಇದನ್ನು ಬ್ರಿಟಿಷರು ವಶಪಡಿಸಿಕೊಂಡರು.
ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ:
- ಇದು ಸ್ವೀಡಿಷ್ ಸಾಹಿತ್ಯ ಬಹುಮಾನವಾಗಿದ್ದು, 1901 ರಿಂದ, ಯಾವುದೇ ದೇಶದ ಲೇಖಕರಿಗೆ, ಸ್ವೀಡಿಷ್ ಕೈಗಾರಿಕೋದ್ಯಮಿ ಆಲ್ಫ್ರೆಡ್ ನೊಬೆಲ್ ಅವರ ಇಚ್ಛೆಯಂತೆ, “ಸಾಹಿತ್ಯ ಕ್ಷೇತ್ರದಲ್ಲಿ, ಆದರ್ಶವಾದದ ದಿಕ್ಕಿನೆಡೆಗೆ ಅತ್ಯುತ್ತಮವಾದ ಕೆಲಸವನ್ನು ಮಾಡಿದ ಯಾವುದೇ ದೇಶದ ಲೇಖಕರಿಗೆ ನೀಡಲಾಗುತ್ತದೆ.
- ವೈಯಕ್ತಿಕ ನಿರ್ದಿಷ್ಟ ಕೃತಿಗಳನ್ನು ಕೆಲವೊಮ್ಮೆ ವಿಶೇಷವಾಗಿ ಗಮನಿಸಬಹುದಾದಂತೆ ಉಲ್ಲೇಖಿಸಿದರೂ, ಪ್ರಶಸ್ತಿಯನ್ನು ಒಟ್ಟಾರೆಯಾಗಿ ಲೇಖಕರ ಸಮಗ್ರ ಕೃತಿಗಳ ಆಧಾರದ ಮೇಲೆ ನೀಡಲಾಗುತ್ತದೆ.
ಅತಿರಪ್ಪಿಲ್ಲಿ ಜಲವಿದ್ಯುತ್ ಯೋಜನೆ:
(Athirappilly hydroelectric project)
ಕೇರಳ ಸರ್ಕಾರವು ತ್ರಿಶೂರ್ ಜಿಲ್ಲೆಯ ಚಾಲಕುಡಿ ನದಿಯ ಜಲಾನಯನ ಪ್ರದೇಶದಲ್ಲಿ ಉದ್ದೇಶಿತ 163 ಮೆಗಾವ್ಯಾಟ್ ಅತಿರಪಳ್ಳಿ ಜಲವಿದ್ಯುತ್ ಯೋಜನೆ(Athirappilly hydroelectric project) ಯನ್ನು ರದ್ದುಗೊಳಿಸಿದೆ.
- ಚಾಲಕುಡಿ ನದಿ (Chalakudy River)ಯು ಪೆರಿಯಾರ್ ನದಿಯ ಉಪನದಿಯಾಗಿದ್ದು, ತಮಿಳುನಾಡಿನ ಅನಮಲೈ ಪ್ರದೇಶದಲ್ಲಿ ಹುಟ್ಟುತ್ತದೆ.
ಈ ಯೋಜನೆಯನ್ನು ಏಕೆ ಕೈಬಿಡಲಾಯಿತು?
ಜೀವವೈವಿಧ್ಯತೆಯಿಂದ ಕೂಡಿದ ಮತ್ತು ರಾಜ್ಯದ ಏಕೈಕ ನದಿಪಾತ್ರದ ಅರಣ್ಯದಲ್ಲಿ ನಿರ್ಮಾಣದ ವಿರುದ್ಧ ಪರಿಸರವಾದಿಗಳು ಮತ್ತು ಬುಡಕಟ್ಟು ಸಂಘಟನೆಗಳಿಂದ ಹೆಚ್ಚುತ್ತಿರುವ ವಿರೋಧದ ಹಿನ್ನೆಲೆಯಲ್ಲಿ ಕೇರಳ ಸರ್ಕಾರವು ಈ ನಿರ್ಧಾರವು ಬಂದಿತು.
ಸಂಬಂಧಿತ ಪ್ರಮುಖ ಅಂಶಗಳು:
- ಕಾದರ್ ಬುಡಕಟ್ಟು ಸಮುದಾಯವು ಚಾಲಕುಡಿ ನದಿಯ ಜಲಾನಯನ ಪ್ರದೇಶದಲ್ಲಿ ವಿವಿಧ ಜಲವಿದ್ಯುತ್ ಯೋಜನೆಗಳನ್ನು ಕಾರ್ಯಗತಗೊಳಿಸುವುದರಿಂದಾಗಿ ನಿರಂತರ ಸ್ಥಳಾಂತರದ ಸಮಸ್ಯೆಯನ್ನು ಎದುರಿಸುತ್ತಿದೆ.
- ನಿಮಗೆ ಗೊತ್ತೆ? 1970 ರ ಅಂತ್ಯ ಮತ್ತು 1980 ರ ದಶಕದ ಆರಂಭದಲ್ಲಿ ಬೃಹತ್ ಪ್ರಮಾಣದಲ್ಲಿ ಭಾಗವಹಿಸುವಿಕೆಯೊಂದಿಗೆ ಭಾರತದ ಮೊದಲ ಪರಿಸರ ಚಳುವಳಿಗಳಲ್ಲಿ ಸೈಲೆಂಟ್ ವ್ಯಾಲಿ ಕೂಡ ಒಂದಾಗಿದೆ. ಇದು ಕೇರಳ ಸರ್ಕಾರವನ್ನು ಕೇರಳದ ಪಾಲಕ್ಕಾಡ್ ಜಿಲ್ಲೆಯ ಸೈಲೆಂಟ್ ವ್ಯಾಲಿಯ ನಿತ್ಯಹರಿದ್ವರ್ಣ ಉಷ್ಣವಲಯದ ಕಾಡುಗಳ ಒಳಗೆ ಕುಂತಿ ನದಿಗೆ ಅಡ್ಡಲಾಗಿ ಅಣೆಕಟ್ಟು ಯೋಜನೆಯನ್ನು ಕೈಬಿಡುವಂತೆ ಒತ್ತಾಯಿಸಿತು.
- ಮಾಧವ್ ಗಾಡ್ಗಿಲ್ ವರದಿಯು ಅತಿರಪ್ಪಿ ಹೈಡಲ್ ಯೋಜನೆಯನ್ನು ‘ಅನಪೇಕ್ಷಿತ’ ಎಂದು ಕರೆದಿದೆ ಮತ್ತು ಪರಿಸರ ತಾಂತ್ರಿಕ ಮತ್ತು ಆರ್ಥಿಕ ಆಧಾರದಲ್ಲಿ ಅದನ್ನು ನಿರರ್ಥಕ ಎಂದು ವರ್ಗೀಕರಿಸಿದೆ.
- ಕಸ್ತೂರಿರಂಗನ್ ಸಮಿತಿಯು ಸರಳವಾಗಿ ಪರಿಸರದ ಆಧಾರದ ಮೇಲೆ ಯೋಜನೆಯ ಪ್ರಭಾವದ ಮರು ಮೌಲ್ಯಮಾಪನವನ್ನು ಮಾಡಲು ಶಿಫಾರಸು ಮಾಡಿದೆ.
2021 ನೊಬೆಲ್ ಶಾಂತಿ ಪ್ರಶಸ್ತಿ:
ಪತ್ರಕರ್ತರಾದ ಫಿಲಿಪೈನ್ಸ್ ನ ಮಾರಿಯಾ ರೆಸ್ಸಾ (Maria Ressa) ಮತ್ತು ರಷ್ಯಾದ ಡಿಮಿಟ್ರಿ ಮುರಾಟೋವ್ (Dmitry Muratov) ಅವರಿಗೆ 2021 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು “ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸುವ ಪ್ರಯತ್ನಗಳಿಗಾಗಿ” ನೀಡಲಾಗಿದೆ.
ಹಿನ್ನೆಲೆ:
ನೊಬೆಲ್ ಶಾಂತಿ ಪ್ರಶಸ್ತಿಯನ್ನು ವಾರ್ಷಿಕವಾಗಿ (ಕೆಲವು ವಿನಾಯಿತಿಗಳೊಂದಿಗೆ) “ರಾಷ್ಟ್ರಗಳ ನಡುವೆ ಅತ್ಯುತ್ತಮ ಭ್ರಾತೃತ್ವ ನಿರ್ಮಾಣದ ಕೆಲಸಕ್ಕಾಗಿ, ಪ್ರಸ್ತುತ ನಿಶಸ್ತ್ರೀಕರಣ ಮತ್ತು ಉತ್ತಮ ವಿಶ್ವ ಕ್ರಮವನ್ನು ಉತ್ತೇಜಿಸಲು ಮತ್ತು ಉಚಿತ ಮತ್ತು ಸತ್ಯಾಧಾರಿತ ಪತ್ರಿಕೋದ್ಯಮದ ಪ್ರಚಾರ ಹಾಗೂ ಅಧಿಕಾರ ದುರುಪಯೋಗ, ಸುಳ್ಳು ಮತ್ತು ಯುದ್ಧವನ್ನು ತಡೆಗಟ್ಟಲು ಹಾಗೂ ಜಾಗತಿಕ ಶಾಂತಿಗಾಗಿ” ಮಾಡಿದ ಕಾರ್ಯಕ್ಕಾಗಿ ನೀಡಲಾಗುತ್ತದೆ.
ಇರಾಕ್ ಚುನಾವಣೆ ಮತ್ತು ಅದರ ಮಹತ್ವ:
2019 ರಲ್ಲಿ ಆರಂಭವಾದ ಬೃಹತ್ ಪ್ರತಿಭಟನೆಗಳಿಗೆ ಪ್ರತಿಕ್ರಿಯೆಯಾಗಿ ಈ ಬಾರಿ ಇರಾಕ್ ನಲ್ಲಿ ಮುಂಚಿತವಾಗಿ ಚುನಾವಣೆ ಗಳನ್ನು ನಡೆಸಲಾಗುತ್ತಿದೆ.
- ಇರಾಕ್ನಲ್ಲಿ ಬೀದಿಗಿಳಿದ ಪ್ರತಿಭಟನಾಕಾರರ ಬೇಡಿಕೆಯಿಂದಾಗಿ ಮತದಾನ ನಡೆಯುತ್ತಿರುವುದು ಇದೇ ಮೊದಲು.
- ಇರಾಕ್ ಅನ್ನು ಸಣ್ಣ ಚುನಾವಣಾ ಕ್ಷೇತ್ರಗಳಾಗಿ ವಿಭಜಿಸುವ ಹೊಸ ಚುನಾವಣಾ ಕಾನೂನಿನ ಅಡಿಯಲ್ಲಿ ಮತದಾನ ನಡೆಯುತ್ತಿದೆ.
- ಈ ವರ್ಷದ ಆರಂಭದಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಂಗೀಕರಿಸಿದ ನಿರ್ಣಯವು ಇರಾಕ್ನಲ್ಲಿ ಚುನಾವಣೆಗಳ ಮೇಲ್ವಿಚಾರಣೆಗೆ ವಿಸ್ತೃತ ತಂಡಕ್ಕೆ ಅಧಿಕಾರ ನೀಡಿತು. ಈ ತಂಡವು 600 ಅಂತಾರಾಷ್ಟ್ರೀಯ ವೀಕ್ಷಕರನ್ನು ಹೊಂದಿರುತ್ತದೆ, ಇದರಲ್ಲಿ 150 ವಿಶ್ವಸಂಸ್ಥೆಯ ಪ್ರತಿನಿಧಿಗಳು ಸೇರಿದ್ದಾರೆ.
- ಇರಾಕ್ನಲ್ಲಿ ಮೊದಲ ಬಾರಿಗೆ ಮತದಾರರಿಗೆ ಬಯೋಮೆಟ್ರಿಕ್ ಕಾರ್ಡ್ಗಳನ್ನು ಪರಿಚಯಿಸಲಾಗುತ್ತಿದೆ. ಎಲೆಕ್ಟ್ರಾನಿಕ್ ವೋಟರ್ ಕಾರ್ಡ್ ದುರ್ಬಳಕೆಯನ್ನು ತಡೆಗಟ್ಟಲು ಮತ್ತು ಡಬಲ್ ಮತದಾನವನ್ನು ತಪ್ಪಿಸಲು, ಪ್ರತಿಯೊಬ್ಬ ವ್ಯಕ್ತಿಯು ಮತ ಚಲಾಯಿಸಿದ ನಂತರ 72 ಗಂಟೆಗಳ ಕಾಲ ಬಯೋಮೆಟ್ರಿಕ್ ಕಾರ್ಡ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ.
Join our Official Telegram Channel HERE for Motivation and Fast Updates
Subscribe to our YouTube Channel HERE to watch Motivational and New analysis videos