[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 14ನೇ ಜುಲೈ 2021

 

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಮಿಂಚು/ಸಿಡಿಲು ಹೊಡೆತ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಚಿಲ್ಲರೆ ನೇರ ಯೋಜನೆಯನ್ನು ಆರಂಭಿಸಿದ RBI

2. ಸಿಂಗಾಪುರದ ನಂತರ, ಭಾರತದ BHIM-UPI ಅನ್ನು ಅಳವಡಿಸಿಕೊಂಡ ಭೂತಾನ್.

3. ಲಡಾಖ್‌ನಲ್ಲಿ ಭಾರತದ ಮೊದಲ ಹಸಿರು ಹೈಡ್ರೋಜನ್ ಸಾರಿಗೆ ಯೋಜನೆಯನ್ನು ಆರಂಭಿಸಲಿರುವ NTPC REL.

4. ಪರಿಸರ ನಿಯಮಗಳನ್ನು ಉಲ್ಲಂಘಿಸುವವರಿಗೆ ಅಮ್ನೆಸ್ಟಿ ಯೋಜನೆ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಗೌರವ ಕಾನ್ಸುಲ್ ಜನರಲ್.

2. ಭಾರತದ ಮೊದಲ ಕ್ರಿಪ್ಟೋಗಾಮಿಕ್ ಉದ್ಯಾನವನ.

3. ಅಂತರರಾಷ್ಟ್ರೀಯ ವ್ಯಾಪಾರ ಹಣಕಾಸು ಸೇವೆಗಳ ವೇದಿಕೆ (ITFS).

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆಗಳು ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು, ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಸ್ಥಳ- ನಿರ್ಣಾಯಕ ಭೌಗೋಳಿಕ ವೈಶಿಷ್ಟ್ಯಗಳಲ್ಲಿನ ಬದಲಾವಣೆಗಳು (ಸಾಗರಗಳು ಮತ್ತು ಐಸ್-ಕ್ಯಾಪ್ಗಳು ಸೇರಿದಂತೆ) ಮತ್ತು ಸಸ್ಯ ಮತ್ತು ಪ್ರಾಣಿ ಮತ್ತು ಅಂತಹ ಬದಲಾವಣೆಗಳ ಪರಿಣಾಮಗಳು.

ಮಿಂಚು/ಸಿಡಿಲು ಹೊಡೆತ:


(How lightning strikes?)

ಸಂದರ್ಭ:

ಕಳೆದ 24 ಗಂಟೆಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸಂಭವಿಸಿದ ಮಿಂಚಿನ (lightning) ಪ್ರತ್ಯೇಕ ಘಟನೆಗಳಲ್ಲಿ ಕನಿಷ್ಠ 30 ಜನರು ಸಾವನ್ನಪ್ಪಿದ್ದಾರೆ. ಈ ಹೆಚ್ಚಿನ ಘಟನೆಗಳು ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಸಂಭವಿಸಿವೆ.

 

ಮಿಂಚಿನಿಂದ ಉಂಟಾಗುವ ಸಾವುಗಳು ಎಷ್ಟು ಸಾಮಾನ್ಯ?

  1. ಮಿಂಚಿನಿಂದ ದೇಶದಲ್ಲಿ ಆಗಾಗ್ಗೆ ಸಾವುಗಳು ಸಂಭವಿಸುತ್ತಿವೆ. ಕಳೆದ ವರ್ಷ ಜುಲೈನಲ್ಲಿ ಬಿಹಾರದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ 40 ಜನರು ಮಿಂಚಿನ ಹೊಡೆತದಿಂದ ಸಾವನ್ನಪ್ಪಿದ್ದರು.
  2. ಒಟ್ಟಾರೆಯಾಗಿ, ಭಾರತದಲ್ಲಿ ಪ್ರತಿವರ್ಷ ಸರಾಸರಿ 2,000-2,500 ಸಾವುಗಳು ಮಿಂಚಿನಿಂದ ಸಂಭವಿಸುತ್ತವೆ.
  3. ಅಲ್ಲದೆ, ನೈಸರ್ಗಿಕ ಕಾರಣಗಳಿಂದ ಉಂಟಾಗುವ ಹೆಚ್ಚಿನ ಆಕಸ್ಮಿಕ ಸಾವುಗಳು ಮಿಂಚಿನಿಂದ ಉಂಟಾಗುತ್ತವೆ.

 

ಸವಾಲುಗಳು ಮತ್ತು ಕಾಳಜಿಗಳು:

ಭಾರತದಲ್ಲಿ ಮಿಂಚಿನ ಘಟನೆಗಳನ್ನು ಪತ್ತೆಹಚ್ಚಲಾಗಿಲ್ಲ, ಮತ್ತು ಅದರ ಬಗ್ಗೆ ಸಂಶೋಧನಾ ಅಧ್ಯಯನಗಳನ್ನು ನಡೆಸಲು ವಿಜ್ಞಾನಿಗಳು ಸಾಕಷ್ಟು ಡೇಟಾವನ್ನು ಹೊಂದಿಲ್ಲ.

ಆಗಾಗ್ಗೆ, ಭೂಕಂಪಗಳಂತಹ ಇತರ ನೈಸರ್ಗಿಕ ವಿಕೋಪಗಳಂತೆ ಮಿಂಚಿನ ವಿರುದ್ಧ ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳು ಮತ್ತು ಮುನ್ನೆಚ್ಚರಿಕೆಗಳು ಪ್ರಚಾರವನ್ನು ಪಡೆಯುವುದಿಲ್ಲ.

 

ಮಿಂಚು ಎಂದರೇನು?

(What is lightning?)

ಇದು ವಾತಾವರಣದಲ್ಲಿ ಅತ್ಯಂತ ವೇಗವಾಗಿ ಮತ್ತು ಬೃಹತ್ ಪ್ರಮಾಣದಲ್ಲಿ ವಿದ್ಯುಚ್ಛ ಕ್ತಿಯು ಬಿಡುಗಡೆ ಯಾಗುವ ಪ್ರಕ್ರಿಯೆಯಾಗಿದ್ದು ಅವುಗಳಲ್ಲಿ ಕೆಲವು ಭಾಗ ಭೂಮಿಯ ಮೇಲ್ಮೈ ಕಡೆಗೆ ನಿರ್ದೇಶಿಸಲ್ಪಡುತ್ತದೆ.

  1. ಈ ವಿದ್ಯುಚ್ಛಕ್ತಿ ಬಿಡುಗಡೆಯಾಗುವ ಪ್ರಕ್ರಿಯೆಯು 10-12 ಕಿ.ಮೀ ನಷ್ಟು ಎತ್ತರವಾದ ದೈತ್ಯ ತೇವಾಂಶವನ್ನು ಹೊಂದಿರುವ ಮೋಡಗಳಲ್ಲಿ ಉಂಟಾಗುತ್ತದೆ.

 

ಮಿಂಚು ಹೇಗೆ ಹೊಡೆಯುತ್ತದೆ?

  1. 10-12 ಕಿ.ಮೀ ಎತ್ತರವಿರುವ ದೈತ್ಯ ತೇವಾಂಶವನ್ನು ಹೊಂದಿರುವ ಮೋಡಗಳಲ್ಲಿ ವಿದ್ಯುತ್ ಹೊರಸೂಸುವಿಕೆ ಉತ್ಪತ್ತಿಯಾಗುತ್ತದೆ. ಈ ಮೋಡಗಳ ತಳವು ಸಾಮಾನ್ಯವಾಗಿ ಭೂಮಿಯ ಮೇಲ್ಮೈಯ 1-2 ಕಿ.ಮೀ.ವ್ಯಾಪ್ತಿಯಲ್ಲಿರುತ್ತದೆ. ಈ ಮೋಡಗಳ ಮೇಲ್ಭಾಗದ ತಾಪಮಾನವು ಮೈನಸ್ 35 ರಿಂದ ಮೈನಸ್ 45 ಡಿಗ್ರಿ ಸೆಲ್ಸಿಯಸ್ ಇರುತ್ತದೆ.
  2. ಈ ಮೋಡಗಳಲ್ಲಿ ನೀರಿನ ಆವಿ ಹೆಚ್ಚಾಗುತ್ತಿದ್ದಂತೆ, ತಾಪಮಾನದಲ್ಲಿನ ಇಳಿಕೆಯಿಂದ ಅದು ಘನೀಕರಿಸುತ್ತದೆ. ಈ ಪ್ರಕ್ರಿಯೆಯಲ್ಲಿ ಶಾಖವು ಉತ್ಪತ್ತಿಯಾಗುತ್ತದೆ, ಇದರಿಂದಾಗಿ ನೀರಿನ ಅಣುಗಳು ಮತ್ತಷ್ಟು ಮೇಲಕ್ಕೆ ಚಲಿಸುತ್ತವೆ.
  3. ಅವು ಶೂನ್ಯ ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನಕ್ಕೆ ಚಲಿಸುವಾಗ, ನೀರಿನ ಹನಿಗಳು ಸಣ್ಣ ಐಸ್ ಸ್ಫಟಿಕಗಳಾಗಿ ಬದಲಾಗುತ್ತವೆ. ಅವು ಮೇಲಕ್ಕೆ ಚಲಿಸುತ್ತಲೇ ಇರುತ್ತವೆ, ದ್ರವ್ಯರಾಶಿಯನ್ನು ಸಂಗ್ರಹಿಸುತ್ತವೆ – ಅವು ಭಾರವಾದ ತನಕ ಅವು ಭೂಮಿಗೆ ಬೀಳಲು ಪ್ರಾರಂಭಿಸುತ್ತವೆ.
  4. ಹೀಗೆ ಒಂದು ಪ್ರಕ್ರಿಯೆಯ ನಿರ್ಮಾಣಕ್ಕೆ ಕಾರಣವಾಗುತ್ತದೆ, ಇದರಲ್ಲಿ ಏಕಕಾಲದಲ್ಲಿ, ಸಣ್ಣ ಐಸ್ ಹರಳುಗಳು (ಕ್ರಿಸ್ಟಲ್) ಮೇಲಕ್ಕೆ ಚಲಿಸುತ್ತವೆ ಮತ್ತು ದೊಡ್ಡ ಹರಳುಗಳು ಕೆಳಗಿಳಿಯುತ್ತವೆ.
  5. ಈ ಪ್ರಕ್ರಿಯೆಯ ಪರಿಣಾಮವಾಗಿ, ಈ ಕಣಗಳ ನಡುವೆ ಘರ್ಷಣೆಗಳು ಸಂಭವಿಸುತ್ತವೆ, ಎಲೆಕ್ಟ್ರಾನ್‌ಗಳನ್ನು ಬಿಡುಗಡೆ ಮಾಡುತ್ತವೆ, ಈ ಪ್ರಕ್ರಿಯೆಯು ವಿದ್ಯುತ್ ಕಿಡಿಯ ಉತ್ಪಾದನೆಗೆ ಹೋಲುತ್ತದೆ. ಚಲಿಸುವ ಉಚಿತ ಎಲೆಕ್ಟ್ರಾನ್‌ಗಳು ಒಂದಕ್ಕೊಂದು ಹೆಚ್ಚು ಘರ್ಷಣೆಯನ್ನು ಹೊಂದಿರುತ್ತವೆ ಮತ್ತು ಹೊಸ ಎಲೆಕ್ಟ್ರಾನ್‌ಗಳನ್ನು ರಚಿಸಲಾಗುತ್ತದೆ; ಹೀಗೆ ಸರಪಳಿ ಕ್ರಿಯೆ ಪ್ರಾರಂಭವಾಗುತ್ತದೆ.ಈ ಪ್ರಕ್ರಿಯೆಯು ಮೋಡಗಳ ಮೇಲಿನ ಪದರವನ್ನು ಧನಾತ್ಮಕವಾಗಿ ಚಾರ್ಜ್ ಮಾಡುವ ಮತ್ತು ಮಧ್ಯದ ಪದರವನ್ನು ಋಣಾತ್ಮಕವಾಗಿ ಚಾರ್ಜ್ ಮಾಡುವ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ.
  6. ಈ ಪ್ರಕ್ರಿಯೆಯು ಮೋಡಗಳ ಮೇಲಿನ ಪದರವನ್ನು ಧನಾತ್ಮಕವಾಗಿ ಚಾರ್ಜ್ ಮಾಡುವ ಮತ್ತು ಮಧ್ಯದ ಪದರವನ್ನು ಧಣಾತ್ಮಕವಾಗಿ ಚಾರ್ಜ್ ಮಾಡುವ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ. ಈ ಎರಡು ಪದರಗಳ ನಡುವಿನ ವಿದ್ಯುತ್ ಸಾಮರ್ಥ್ಯದಲ್ಲಿ ಹಲವಾರು ಶತಕೋಟಿ ವೋಲ್ಟ್‌ಗಳ ವ್ಯತ್ಯಾಸವಿದೆ. ಈ ಕಾರಣದಿಂದಾಗಿ, ಎರಡು ಪದರಗಳ ನಡುವೆ ಯಾವುದೇ ಸಮಯದಲ್ಲಿ ಒಂದು ದೊಡ್ಡ ವಿದ್ಯುತ್ ಪ್ರವಾಹ (ಲಕ್ಷಾಂತರ ಆಂಪಿಯರ್‌ಗಳು) ಹರಿಯಲು ಪ್ರಾರಂಭಿಸುತ್ತದೆ.
  7. ಪರಿಣಾಮವಾಗಿ,ಅಗಾಧ ಪ್ರಮಾಣದ ಶಾಖವನ್ನು ಉತ್ಪಾದಿಸಲಾಗುತ್ತದೆ, ಮತ್ತು ಇದು ಮೋಡದ ಎರಡು ಪದರಗಳ ನಡುವೆ ಗಾಳಿಯ ಕಾಲಮ್ ಅನ್ನು ಬಿಸಿಮಾಡಲು ಕಾರಣವಾಗುತ್ತದೆ. ಈ ಶಾಖವು ಮಿಂಚಿನ ಸಮಯದಲ್ಲಿ ಗಾಳಿಯ ಕಾಲಮ್ಗೆ ಕೆಂಪು ಬಣ್ಣವನ್ನು ನೀಡುತ್ತದೆ. ಬಿಸಿಯಾದ ಗಾಳಿಯ ಕಾಲಮ್ ವಿಸ್ತರಿಸಿದಂತೆ, ಇದು ಆಘಾತ ತರಂಗಗಳನ್ನು ಉಂಟುಮಾಡುತ್ತದೆ ಮತ್ತು ಅದು ಗುಡುಗು / ಮಿಂಚು ಉಂಟಾಗಲು ಕಾರಣವಾಗುತ್ತದೆ.

 

ವಿದ್ಯುತ್ ಪ್ರವಾಹವು ಮೋಡದಿಂದ ಭೂಮಿಯನ್ನು ಹೇಗೆ ತಲುಪುತ್ತದೆ?

ಭೂಮಿಯು ವಿದ್ಯುಚ್ಛಕ್ತಿಯ ಉತ್ತಮ ವಾಹಕವಾಗಿದ್ದರೂ, ಅದು ವಿದ್ಯುತ್ ತಟಸ್ಥವಾಗಿದೆ. ಆದಾಗ್ಯೂ, ಮೋಡದ ಮಧ್ಯದ ಪದರಕ್ಕೆ ಹೋಲಿಸಿದರೆ, ಅದು ಧನಾತ್ಮಕ ಆವೇಶಕ್ಕೆ ಒಳಗಾಗುತ್ತದೆ. ಪರಿಣಾಮವಾಗಿ, ಪ್ರವಾಹದ ಸುಮಾರು 15% -20% ಭೂಮಿಯ ಕಡೆಗೆ ನಿರ್ದೇಶಿಸಲ್ಪಡುತ್ತದೆ. ಈ ಪ್ರವಾಹದ ಹರಿವಿನಿಂದಲೇ ಭೂಮಿಯ ಮೇಲಿನ ಜೀವ ಮತ್ತು ಆಸ್ತಿಗೆ ಹಾನಿಯಾಗುತ್ತದೆ.

 

ಮಿಂಚಿನ ಹೊಡೆತದಿಂದ ಉಂಟಾಗುವ ಸಾವುಗಳನ್ನು ಹೇಗೆ ಕಡಿಮೆ ಮಾಡಬಹುದು?

  1. CROPC (ಹವಾಮಾನ ಸ್ಥಿತಿಸ್ಥಾಪಕ ವೀಕ್ಷಣಾ ವ್ಯವಸ್ಥೆಗಳ ಪ್ರಚಾರ ಮಂಡಳಿ) ಪ್ರಕಾರ, ರೈತರು, ದನಗಾಹಿಗಳು, ಮಕ್ಕಳು ಮತ್ತು ಬಯಲು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಮಿಂಚಿನ ಕುರಿತು ಮುನ್ನೆಚ್ಚರಿಕೆ ನೀಡುವುದು ಮುಖ್ಯವಾದ ಅಂಶವಾಗಿದೆ.
  2. ಸ್ಥಳೀಯ, ಮಿಂಚು ಸುರಕ್ಷತಾ ಕ್ರಿಯಾ ಯೋಜನೆಗಳಾದಂತಹ ಮಿಂಚು ಸಂರಕ್ಷಣಾ ಸಾಧನಗಳನ್ನು ಅಳವಡಿಸುವ ಮೂಲಕ ಸಾವು ನೋವುಗಳನ್ನು ತಡೆಗಟ್ಟಬಹುದು.

lighting

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಭಾರತೀಯ ಆರ್ಥಿಕತೆ ಮತ್ತು ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ , ಪ್ರಗತಿ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು.

ಚಿಲ್ಲರೆ ನೇರ ಯೋಜನೆಯನ್ನು ಅನಾವರಣಗೊಳಿಸಿದ RBI


(RBI unveils retail direct scheme)

ಸಂದರ್ಭ:

ಇತ್ತೀಚೆಗೆ ಆರ್‌ಬಿಐ, ಈ ಯೋಜನೆಯನ್ನು (Retail Direct Scheme) ಪ್ರಾರಂಭಿಸಿತು.

ಯೋಜನೆಯಡಿಯಲ್ಲಿ, ಚಿಲ್ಲರೆ ಹೂಡಿಕೆದಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ನೊಂದಿಗೆ ಚಿಲ್ಲರೆ ನೇರ ಗಿಲ್ಟ್ ಖಾತೆಗಳನ್ನು (Retail Direct Gilt – RDG) ನೇರವಾಗಿ ತೆರೆಯಲು ಅವಕಾಶವಿರುತ್ತದೆ.

 

ಅದು ಹೇಗೆ ಕಾರ್ಯನಿರ್ವಹಿಸುತ್ತದೆ?

ಯೋಜನೆಯಡಿಯಲ್ಲಿ, ನೋಂದಾಯಿತ ಬಳಕೆದಾರರಿಗೆ ಸರ್ಕಾರಿ ಭದ್ರತೆಗಳ ಪ್ರಾಥಮಿಕ ವಿತರಣೆ ಮತ್ತು ನೆಗೋಶಿಯೇಟೆಡ್ ಡೀಲಿಂಗ್ ಸಿಸ್ಟಮ್-ಆರ್ಡರ್ ಮ್ಯಾಚಿಂಗ್ ಸಿಸ್ಟಮ್ (Negotiated Dealing System-Order Matching system -NDS-OM) ಗೆ ಮೀಸಲಾದ ಆನ್‌ಲೈನ್ ಪೋರ್ಟಲ್ ಮೂಲಕ ಪ್ರವೇಶವನ್ನು ಒದಗಿಸಲಾಗುತ್ತದೆ.(NDS-OM ಎನ್ನುವುದು ರಿಸರ್ವ್ ಬ್ಯಾಂಕ್ ಒಡೆತನದ ಸರ್ಕಾರಿ ಸೆಕ್ಯುರಿಟಿಗಳ ದ್ವಿತೀಯ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಪರದೆ ಆಧಾರಿತ ಎಲೆಕ್ಟ್ರಾನಿಕ್ ಆರ್ಡರ್ ಹೊಂದಾಣಿಕೆಯ ವ್ಯವಸ್ಥೆಯಾಗಿದೆ).

  1. ಚಿಲ್ಲರೆ ಹೂಡಿಕೆದಾರರಿಗೆ RDG ಖಾತೆ ತೆರೆಯಲು ಮತ್ತು ನಿರ್ವಹಿಸಲು ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.

 

ಯೋಜನೆಯ ಉದ್ದೇಶಗಳು:

ಸರ್ಕಾರಿ ಸೆಕ್ಯುರಿಟೀಸ್ ಮಾರುಕಟ್ಟೆ – ಆನ್‌ಲೈನ್ ಮೋಡ್ ಮೂಲಕ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಚಿಲ್ಲರೆ ಹೂಡಿಕೆದಾರರಿಗೆ ಪ್ರವೇಶವನ್ನು ಸುಧಾರಿಸುವುದು.

ಯೋಜನೆಯ ಮಹತ್ವ:

ವೈಯಕ್ತಿಕ ಹೂಡಿಕೆದಾರರಿಂದ ಸರ್ಕಾರಿ ಭದ್ರತೆಗಳಲ್ಲಿ (G- secs) ಹೂಡಿಕೆ ಮಾಡಲು ಅನುಕೂಲವಾಗುವಂತೆ ಈ ಯೋಜನೆ ಒನ್ ಸ್ಟಾಪ್ (ಒಂದು ನಿಲುಗಡೆ) ಪರಿಹಾರವಾಗಿದೆ.

 

ಬಳಕೆದಾರರಿಗೆ ಲಭ್ಯವಿರುವ ಹೂಡಿಕೆಗಳ ಪ್ರಕಾರಗಳು:

  1. ಭಾರತ ಸರ್ಕಾರದ ಖಜಾನೆ ಬಿಲ್ ಗಳು.
  2. ಭಾರತ ಸರ್ಕಾರ ದಿನಾಂಕದ ಭದ್ರತೆಗಳು.
  3. ಸಾರ್ವಭೌಮ ಚಿನ್ನದ ಬಾಂಡ್‌ಗಳು (SGB).
  4. ರಾಜ್ಯ ಅಭಿವೃದ್ಧಿ ಸಾಲಗಳು (SDLs).

ನೀವು ತಿಳಿದುಕೊಳ್ಳಬೇಕಾದ ವಿಷಯಗಳು:

  1. ಗಿಲ್ಟ್ ಖಾತೆಗಳು ಯಾವುವು?
  2. ಚಿಲ್ಲರೆ ಹೂಡಿಕೆದಾರರು ಯಾರು?
  3. ಸರ್ಕಾರಿ ಭದ್ರತೆಗಳು (G-secs) ಎಂದರೇನು?

 

ಗಿಲ್ಟ್ ಖಾತೆ ಎಂದರೇನು?

ಗಿಲ್ಟ್ ಖಾತೆಯನ್ನು ಬ್ಯಾಂಕ್ ಖಾತೆಗೆ ಹೋಲಿಸಬಹುದು, ಒಂದೇ ವ್ಯತ್ಯಾಸವೆಂದರೆ, ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು ಮತ್ತು ಹಿಂಪಡೆಯುವುದು, ಖಜಾನೆ ಬಿಲ್‌ಗಳು ಅಥವಾ ಸರ್ಕಾರಿ ಭದ್ರತೆಗಳನ್ನು ಗಿಲ್ಟ್ ಖಾತೆಯಲ್ಲಿ ಠೇವಣಿ ಇಡಲಾಗುತ್ತದೆ ಮತ್ತು ಹಿಂಪಡೆಯಲಾಗುತ್ತದೆ.

ಬೇರೆ ರೀತಿಯಲ್ಲಿ ಹೇಳುವುದಾದರೆ, ಇದು ಸರ್ಕಾರಿ ಭದ್ರತೆಗಳನ್ನು ಹೊಂದಿರುವ ಖಾತೆಯಾಗಿದೆ.

 

ಚಿಲ್ಲರೆ ಹೂಡಿಕೆದಾರರು ಯಾರು?

ಚಿಲ್ಲರೆ ಹೂಡಿಕೆದಾರ (retail investor) ಎಂದರೆ ಸಾಂಪ್ರದಾಯಿಕ ಅಥವಾ ಆನ್‌ಲೈನ್ ದಲ್ಲಾಳಿ ಸಂಸ್ಥೆಗಳು ಅಥವಾ ಇತರ ರೀತಿಯ ಹೂಡಿಕೆ ಖಾತೆಗಳ ಮೂಲಕ ಈಕ್ವಿಟಿ ಷೇರುಗಳು, ಸರಕು ಒಪ್ಪಂದಗಳು, ಮ್ಯೂಚುವಲ್ ಫಂಡ್‌ಗಳು ಅಥವಾ ವಿನಿಮಯ ವ್ಯಾಪಾರ ನಿಧಿಗಳನ್ನು (ETFs) ಖರೀದಿಸಿ ಮಾರಾಟ ಮಾಡುವ ವ್ಯಕ್ತಿ.

 

ಸರ್ಕಾರಿ ಭದ್ರತೆಗಳು (G- Secs) ಎಂದರೇನು?

ಸರ್ಕಾರಿ ಭದ್ರತೆಗಳ ಬಗ್ಗೆ ತಿಳಿದುಕೊಳ್ಳಲು ಈ ಕೆಳಗಿನ ಲಿಂಕ್ ಅನ್ನು ಉಪಯೋಗಿಸಿ.

https://www.insightsonindia.com/2021/02/06/what-are-govt-securities-3/

 

ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.

ಸಿಂಗಾಪುರದ ನಂತರ, ಭಾರತದ BHIM-UPI ಅನ್ನು ಅಳವಡಿಸಿಕೊಂಡ ಭೂತಾನ್:


(After Singapore, Bhutan adopts India’s BHIM-UPI)

ಸಂದರ್ಭ:

ಇತ್ತೀಚೆಗೆ, ಭೂತಾನ್ ತನ್ನ ತ್ವರಿತ ಸ್ಪಂದನ (Quick Response – QR) ಸಂಕೇತಗಳಿಗಾಗಿ ಭಾರತದ ಏಕೀಕೃತ ಪಾವತಿ ವ್ಯವಸ್ಥೆ (Unified Payment Interface (UPI) ಮಾನದಂಡಗಳನ್ನು ಅಳವಡಿಸಿಕೊಂಡ ಮೊದಲ ದೇಶವಾಗಿದೆ. ಸಿಂಗಾಪುರದ ನಂತರ ವ್ಯಾಪಾರಿ (Merchant Locations) ಸ್ಥಳಗಳಲ್ಲಿ, BHIM-UPI ಸ್ವೀಕಾರವನ್ನು ಹೊಂದಿರುವ ಎರಡನೇ ದೇಶವೂ ಕೂಡ ಇದಾಗಿದೆ.

ರುಪೇ ಕಾರ್ಡ್‌ (RuPay Cards) ಗಳನ್ನು ನೀಡುವ ಮತ್ತು ಸ್ವೀಕರಿಸುವ ಮತ್ತು BHIM-UPI  ಸ್ವೀಕರಿಸುವ ಏಕೈಕ ದೇಶ ಭೂತಾನ್ ಆಗಲಿದೆ.

BHIM ಎಂದರೇನು?

ಭಾರತ್ ಇಂಟರ್ಫೇಸ್ ಫಾರ್ ಮನಿ (Bharat Interface for Money -BHIM) UPI ಮೂಲಕ ಕಾರ್ಯನಿರ್ವಹಿಸುವ ಭಾರತದ ಡಿಜಿಟಲ್ ಪಾವತಿ ಅಪ್ಲಿಕೇಶನ್ (ಅಪ್ಲಿಕೇಶನ್) ಆಗಿದೆ, ಏಕೀಕೃತ ಪಾವತಿ ಇಂಟರ್ಫೇಸ್ (UPI) ವ್ಯವಸ್ಥೆಯಲ್ಲಿ, ಒಂದೇ ಮೊಬೈಲ್ ಅಪ್ಲಿಕೇಶನ್‌ನಿಂದ ಅನೇಕ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಬಹುದು.

  1. ಭೀಮ್ ಅಪ್ಲಿಕೇಶನ್ ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (National Payments Corporation of India -NPCI) ಅಭಿವೃದ್ಧಿಪಡಿಸಿದೆ.
  2. ಇದು ನೈಜ-ಸಮಯದ ಹಣ ವರ್ಗಾವಣೆಯ ಸೌಲಭ್ಯವನ್ನು ಒದಗಿಸುತ್ತದೆ.
  3. ಇದನ್ನು, ಡಿಸೆಂಬರ್, 2016 ರಲ್ಲಿ ಪ್ರಾರಂಭಿಸಲಾಯಿತು.

 

UPI ಎಂದರೇನು?

ಏಕೀಕೃತ ಪಾವತಿ ಇಂಟರ್ಫೇಸ್ (UPI) ಒಂದು ತ್ವರಿತ ನೈಜ-ಸಮಯ ಪಾವತಿ ವ್ಯವಸ್ಥೆಯಾಗಿದೆ. ಬಳಕೆದಾರರು ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಇತರ ಪಕ್ಷಕ್ಕೆ ಬಹಿರಂಗಪಡಿಸದೆ ಅನೇಕ ಬ್ಯಾಂಕ್ ಖಾತೆಗಳಲ್ಲಿ ನೈಜ-ಸಮಯದ ಆಧಾರದ ಮೇಲೆ ಹಣವನ್ನು ವರ್ಗಾಯಿಸಲು ಈ ವ್ಯವಸ್ಥೆಯು ಅನುಮತಿಸುತ್ತದೆ.

 

BHIM ಅಪ್ಲಿಕೇಶನ್ ಮೂರು ಹಂತದ ದೃಢೀಕರಣ ವ್ಯವಸ್ಥೆಯನ್ನು ಹೊಂದಿದೆ:

  1. ಮೊದಲಿಗೆ, ಈ ಅಪ್ಲಿಕೇಶನ್ ಯಾವುದೇ ಸಾಧನ (ಕಂಪ್ಯೂಟರ್, ಮೊಬೈಲ್) ದ ID ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಆಗುತ್ತದೆ.
  2. ಎರಡನೆಯದಾಗಿ ವಹಿವಾಟು ನಡೆಸಲು ಬಳಕೆದಾರರು ಬ್ಯಾಂಕ್ ಖಾತೆಯನ್ನು (UPI ಅಥವಾ ಸಕ್ರಿಯಗೊಳಿಸಿಲ್ಲದ UPI ) ಸಿಂಕ್ ಮಾಡಬೇಕಾಗುತ್ತದೆ.
  3. ಮೂರನೆಯದಾಗಿ, ಬಳಕೆದಾರನು ತನ್ನ ಸಾಧನದಲ್ಲಿ BHIM ಅಪ್ಲಿಕೇಶನ್ ಅನ್ನು ಪ್ರಾರಂಭಿಸುವಾಗ ‘PIN’ ರಚಿಸಲು ಕೇಳಲಾಗುತ್ತದೆ, ಅಪ್ಲಿಕೇಶನ್‌ಗೆ ‘ಲಾಗ್ ಇನ್’ ಮಾಡಲು ಈ ‘PIN’ ನ ಅಗತ್ಯವಿದೆ. ಯಾವುದೇ ವಹಿವಾಟು ನಡೆಸಲು ಬಳಕೆದಾರನು ತನ್ನ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ‘UPI PIN’ ಅನ್ನು ಬಳಸಬೇಕಾಗುತ್ತದೆ.

 

ವಿಷಯಗಳು: ಮೂಲಸೌಕರ್ಯ- ಇಂಧನ.

ಲಡಾಖ್‌ನಲ್ಲಿ ಭಾರತದ ಮೊದಲ ಹಸಿರು ಹೈಡ್ರೋಜನ್ ಮೊಬಿಲಿಟಿ ಯೋಜನೆಯನ್ನು ಸ್ಥಾಪಿಸಲಿರುವ NTPC REL:


(NTPC REL to set up India’s first green Hydrogen Mobility project in Ladakh)

ಸಂದರ್ಭ:

NTPC ನವೀಕರಿಸಬಹುದಾದ ಇಂಧನ ನಿಗಮಿತ (NTPC Renewable Energy Ltd NTPC REL) ವು, ದೇಶದ ಮೊದಲ ಹಸಿರು ಹೈಡ್ರೋಜನ್ ಸಾರಿಗೆ ಯೋಜನೆಯನ್ನು ಲಡಾಖ್‌ನಲ್ಲಿ ಸ್ಥಾಪಿಸಲಿದೆ. (National Thermal Power Corporation Limited =ರಾಷ್ಟ್ರೀಯ ಉಷ್ಣಶಕ್ತಿ ನಿಗಮ ನಿಯಮಿತ)

  1. NTPC REL ಇದು, ರಾಷ್ಟ್ರೀಯ ಉಷ್ಣಶಕ್ತಿ ನಿಗಮ ನಿಯಮಿತ (NTPC) ದ ಶೇ 100 ರಷ್ಟು ಅಂಗಸಂಸ್ಥೆಯಾಗಿದೆ.

 

ಗ್ರೀನ್ ಹೈಡ್ರೋಜನ್ / ಹಸಿರು ಜಲಜನಕ ಎಂದರೇನು?

ನವೀಕರಿಸಬಹುದಾದ ಶಕ್ತಿಯನ್ನು ಬಳಸಿಕೊಂಡು ‘ವಿದ್ಯುದ್ವಿಭಜನೆ’ (Electrolysis)ಯಿಂದ  ಉತ್ಪತ್ತಿಯಾಗುವ ಹೈಡ್ರೋಜನ್ ಅನ್ನು ‘ಗ್ರೀನ್ ಹೈಡ್ರೋಜನ್’ (Green Hydrogen) ಎಂದು ಕರೆಯಲಾಗುತ್ತದೆ. ಇದು ಇಂಗಾಲದ ಯಾವುದೇ ಕುರುಹುಗಳನ್ನು(Carbon–Footprint) ಹೊಂದಿರುವುದಿಲ್ಲ.

 

ಹಸಿರು ಹೈಡ್ರೋಜನ್ ಪ್ರಾಮುಖ್ಯತೆ:

  1. ಭಾರತವು ತನ್ನ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆ (Nationally Determined Contribution- INDC) ಗುರಿಗಳನ್ನು ಪೂರೈಸಲು ಮತ್ತು ಪ್ರಾದೇಶಿಕ ಮತ್ತು ರಾಷ್ಟ್ರೀಯ ಇಂಧನ ಸುರಕ್ಷತೆ, ಪ್ರವೇಶ ಮತ್ತು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಹಸಿರು ಹೈಡ್ರೋಜನ್ ಶಕ್ತಿಯು ನಿರ್ಣಾಯಕವಾಗಿದೆ.
  2. ಹಸಿರು ಹೈಡ್ರೋಜನ್ “ಶಕ್ತಿ ಶೇಖರಣಾ ಆಯ್ಕೆ” ಯಾಗಿ ಕಾರ್ಯನಿರ್ವಹಿಸುತ್ತದೆ, ಇದು ಭವಿಷ್ಯದಲ್ಲಿ ನವೀಕರಿಸಬಹುದಾದ ಶಕ್ತಿಯ ಅಂತರವನ್ನು ನಿವಾರಿಸಲು ನಿರ್ಣಾಯಕವಾಗಿರುತ್ತದೆ.
  3. ಚಲನಶೀಲತೆಗೆ ಸಂಬಂಧಿಸಿದಂತೆ, ನಗರಗಳಲ್ಲಿ ಅಥವಾ ರಾಜ್ಯಗಳ ಒಳಗೆ ದೂರದ ಪ್ರಯಾಣಕ್ಕಾಗಿ, ಸರಕು ಸಾಗಣೆಗೆ, ರೈಲ್ವೆಗಳು, ದೊಡ್ಡ ಹಡಗುಗಳು, ಬಸ್ಸುಗಳು ಅಥವಾ ಟ್ರಕ್‌ಗಳು ಇತ್ಯಾದಿಗಳಲ್ಲಿ ಹಸಿರು ಹೈಡ್ರೋಜನ್ ಅನ್ನು ಬಳಸಬಹುದು. .

 

ಹಸಿರು ಹೈಡ್ರೋಜನ್ ಅನ್ವಯಗಳು:

  1. ಅಮೋನಿಯಾ ಮತ್ತು ಮೆಥನಾಲ್ ನಂತಹ ಹಸಿರು ರಾಸಾಯನಿಕಗಳನ್ನು ಅಸ್ತಿತ್ವದಲ್ಲಿರುವ ಅಗತ್ಯಗಳಾದ ರಸಗೊಬ್ಬರಗಳು, ಚಲನಶೀಲತೆ, ವಿದ್ಯುತ್, ರಾಸಾಯನಿಕಗಳು, ಸಾಗಾಟ ಇತ್ಯಾದಿಗಳಲ್ಲಿ ನೇರವಾಗಿ ಬಳಸಬಹುದು.
  2. ವ್ಯಾಪಕವಾದ ಸ್ವೀಕಾರವನ್ನು ಪಡೆಯಲು ಸಿಜಿಡಿ ನೆಟ್‌ವರ್ಕ್‌ನಲ್ಲಿ ಶೇಕಡಾ 10 ರಷ್ಟು ಹಸಿರು ಹೈಡ್ರೋಜನ್ ಮಿಶ್ರಣವನ್ನು ಅಳವಡಿಸಿಕೊಳ್ಳಬಹುದು.

 

ಪ್ರಯೋಜನಗಳು:

  1. ಇದು ಶುದ್ಧ ದಹನಕಾರಿ ಅಣುವಾಗಿದ್ದು, ಕಬ್ಬಿಣ ಮತ್ತು ಉಕ್ಕು, ರಾಸಾಯನಿಕಗಳು ಮತ್ತು ಸಾರಿಗೆಯಂತಹ ಕ್ಷೇತ್ರಗಳನ್ನು ಡಿಕಾರ್ಬೊನೈಸ್ ಮಾಡುವ ಸಾಮರ್ಥ್ಯ ಹೊಂದಿದೆ.
  2. ಹಸಿರು ಹೈಡ್ರೋಜನ್ ಶಕ್ತಿಯ ಶೇಖರಣೆಗಾಗಿ ಖನಿಜಗಳು ಮತ್ತು ಅಪರೂಪದ-ಭೂಮಿಯ ಅಂಶ ಆಧಾರಿತ ಬ್ಯಾಟರಿಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  3. ಗ್ರಿಡ್‌ನಿಂದ ಸಂಗ್ರಹಿಸಲಾಗದ ಅಥವಾ ಬಳಸಲಾಗದ ನವೀಕರಿಸಬಹುದಾದ ಶಕ್ತಿಯನ್ನು ಹೈಡ್ರೋಜನ್ ಉತ್ಪಾದಿಸಲು ಬಳಸಿಕೊಳ್ಳಬಹುದು.

 

ಹಸಿರು ಹೈಡ್ರೋಜನ್ ಉತ್ಪಾದನೆಯಲ್ಲಿ ಭಾರತ ಸರ್ಕಾರ ಕೈಗೊಂಡ ಕ್ರಮಗಳು ಯಾವುವು?

  1. 2021 ರ ಫೆಬ್ರವರಿಯಲ್ಲಿ ಮಂಡಿಸಿದ ಬಜೆಟ್ ಭಾಷಣದಲ್ಲಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರವರು ನವೀಕರಿಸಬಹುದಾದ ಮೂಲಗಳಿಂದ ಹೈಡ್ರೋಜನ್ ಉತ್ಪಾದಿಸಲು ಹೈಡ್ರೋಜನ್ ಎನರ್ಜಿ ಮಿಷನ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದರು. 
  2. ಅದೇ ತಿಂಗಳಲ್ಲಿ, ಸರ್ಕಾರಿ ಸ್ವಾಮ್ಯದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಗ್ರೀನ್‌ಸ್ಟಾಟ್ ನಾರ್ವೆ (Greenstat Norway)ಯೊಂದಿಗೆ ಹೈಡ್ರೋಜನ್ ಆನ್ ಎಕ್ಸಲೆನ್ಸ್ ಸೆಂಟರ್ (Centre of Excellence on Hydrogen -CoE-H) ಸ್ಥಾಪಿಸಲು ಒಪ್ಪಂದಕ್ಕೆ ಸಹಿ ಹಾಕಿತು. ಇದು ನಾರ್ವೇಜಿಯನ್ ಮತ್ತು ಭಾರತೀಯ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು / ವಿಶ್ವವಿದ್ಯಾಲಯಗಳ ನಡುವೆ ಹಸಿರು ಮತ್ತು ನೀಲಿ ಹೈಡ್ರೋಜನ್ ಉತ್ಪಾದನೆಗೆ ಸಂಶೋಧನೆ ಮತ್ತು ಅಭಿವೃದ್ಧಿ (R & D) ಯೋಜನೆಗಳನ್ನು ಉತ್ತೇಜಿಸುತ್ತದೆ.
  3. ಇತ್ತೀಚೆಗೆ, ಭಾರತ ಮತ್ತು ಅಮೆರಿಕ ಹಣಕಾಸು ಸಂಗ್ರಹಿಸಲು ಮತ್ತು ಹಸಿರು ಇಂಧನ ಅಭಿವೃದ್ಧಿಯನ್ನು ವೇಗಗೊಳಿಸಲು ಸ್ಟ್ರಾಟೆಜಿಕ್ ಕ್ಲೀನ್ ಎನರ್ಜಿ ಪಾರ್ಟ್‌ನರ್‌ಶಿಪ್ (Strategic Clean Energy Partnership -SCEP) ಆಶ್ರಯದಲ್ಲಿ ಕಾರ್ಯಪಡೆ ಸ್ಥಾಪಿಸಿವೆ.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಪರಿಸರ ನಿಯಮಗಳನ್ನು ಉಲ್ಲಂಘಿಸುವವರಿಗೆ ಅಮ್ನೆಸ್ಟಿ ಯೋಜನೆ:


(Amnesty scheme for violators of environment norms)

ಸಂದರ್ಭ:

ಪರಿಸರ ಅನುಮತಿ ಮಾನದಂಡಗಳನ್ನು ಉಲ್ಲಂಘಿಸಿರುವ ಮೂಲಸೌಕರ್ಯ ಮತ್ತು ಕೈಗಾರಿಕಾ ಯೋಜನೆಗಳಿಗೆ ಕೇಂದ್ರ ಪರಿಸರ ಸಚಿವಾಲಯವು ಕ್ಷಮಾದಾನ ಯೋಜನೆಯನ್ನು (Amnesty Scheme) ಸಿದ್ಧಪಡಿಸಿದೆ.

ಹಿನ್ನೆಲೆ:

ಇತ್ತೀಚೆಗೆ, ಕೇಂದ್ರ ಪರಿಸರ ಸಚಿವಾಲಯವು ‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿ’ (National Green Tribunal) ಹೊರಡಿಸಿದ ನಿರ್ದೇಶನಗಳಿಗೆ ಅನುಸಾರವಾಗಿ ಈ ‘ಪ್ರಮಾಣಿತ ಕಾರ್ಯಾಚರಣೆ ವಿಧಾನ’ (Standard Operating Procedure- SOP) ಸಿದ್ಧಪಡಿಸಿದೆ.ಈ ವರ್ಷದ ಆರಂಭದಲ್ಲಿ, NGTಯು, ಪರಿಸರ ಸಚಿವಾಲಯಕ್ಕೆ ಹಸಿರು ನಿಬಂಧನೆಗಳನ್ನು ಉಲ್ಲಂಘಿಸಿದ್ದಕ್ಕಾಗಿ ‘ದಂಡ’ ಮತ್ತು ‘ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್’ (SOP) ವಿಧಿಸುವಂತೆ ನಿರ್ದೇಶನ ನೀಡಿರುವುದನ್ನು ಗಮನಿಸಬಹುದು.

 

ಸಚಿವಾಲಯವು ರೂಪಿಸಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನ (Standard operating procedure):

  1. ಹೊಸ SOP ಪ್ರಕಾರ, ಅಗತ್ಯ ಅನುಮತಿ ಪಡೆಯದೆ ತಮ್ಮ ಉತ್ಪಾದನಾ ಸಾಮರ್ಥ್ಯವನ್ನು ವಿಸ್ತರಿಸಿದ ಯೋಜನೆಗಳು ಮರು ಮೌಲ್ಯಮಾಪನದವರೆಗೆ ತಮ್ಮ ಹಳೆಯ ಉತ್ಪಾದನಾ ಮಿತಿಗೆ ಮರಳಬೇಕಾಗುತ್ತದೆ.
  2. ಯೋಜನೆಗೆ ಪೂರ್ವ ಪರಿಸರ ಅನುಮತಿ (Environment Clearance – EC) ಪಡೆಯುವ ಅಗತ್ಯವಿಲ್ಲದಿದ್ದರೂ ಈಗ ನವೀಕರಿಸಿದ ಮಾನದಂಡಗಳ ಅಡಿಯಲ್ಲಿ ಅನುಮತಿ ಪಡೆಯುವುದು ಅಗತ್ಯವಿದ್ದರೆ, ಯೋಜನೆಯು ತನ್ನ ಉತ್ಪಾದನೆಯನ್ನು ಮತ್ತೆ ಮೌಲ್ಯಮಾಪನ ಮಾಡುವವರೆಗೆ ಪೂರ್ವ ಪರಿಸರ ಅನುಮತಿ ಅಗತ್ಯವಿಲ್ಲದ ಮಟ್ಟಿಗೆ ನಿರ್ಬಂಧಿಸಬೇಕಾಗುತ್ತದೆ.
  3. ಪರಿಸರ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿರುವ ಮತ್ತು ಪರಿಸರ ಅನುಮತಿ ನೀಡಲು ಎಂದಿಗೂ ಅರ್ಹತೆ ಇಲ್ಲದ ಯೋಜನೆಗಳನ್ನು ಮಾತ್ರ ನಿರ್ಬಂಧಿಸಬೇಕು ಅಥವಾ ಮುಚ್ಚಬೇಕು.
  4. ಪರಿಸರ ಮಾನದಂಡಗಳನ್ನು ಉಲ್ಲಂಘಿಸುವ, ಆದರೆ ‘ನ್ಯಾಯಯುತ ಮತ್ತು ಸ್ವೀಕಾರಾರ್ಹ’ ಯೋಜನೆಗಳಿಂದ ಉಂಟಾಗುವ ‘ಪರಿಸರ-ಹಾನಿ’ ಯನ್ನು ನಿರ್ಣಯಿಸಲಾಗುತ್ತದೆ ಮತ್ತು ಪರಿಹಾರ ಯೋಜನೆ ಸಿದ್ಧಪಡಿಸಲಾಗುವುದು. ಈ ಯೋಜನೆಗಳು ಕೇಂದ್ರ ಅಥವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮುಂದೆ ‘ಪರಿಹಾರ ಯೋಜನೆ’ ಮತ್ತು ‘ನೈಸರ್ಗಿಕ ಮತ್ತು ಸಮುದಾಯ ಸಂಪನ್ಮೂಲ ವೃದ್ಧಿ ಯೋಜನೆ’ಗೆ ಸಮಾನವಾದ ಬ್ಯಾಂಕ್ ಗ್ಯಾರಂಟಿಯನ್ನು ಸಲ್ಲಿಸಬೇಕಾಗುತ್ತದೆ.
  5. ಸಚಿವಾಲಯದ ಜ್ಞಾಪಕ ಪತ್ರದಲ್ಲಿ, ಸರ್ಕಾರಿ ಸಂಸ್ಥೆಗಳಾದ ಕೇಂದ್ರ ಪರಿಸರ ನಿಯಂತ್ರಣ ಮಂಡಳಿ (CPCB), ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಮತ್ತು ‘ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಅಧಿಕಾರಿಗಳಿಗೆ’ ಅಂತಹ ಉಲ್ಲಂಘನೆಗಳನ್ನು ಗುರುತಿಸಲು ಮತ್ತು ಅವುಗಳ ವಿರುದ್ಧ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲು ಅಧಿಕಾರ ನೀಡಲಾಗಿದೆ.

 

ಕಳವಳಗಳು / ಸಮಸ್ಯೆಗಳು:

  1. ಹೊಸ ಕ್ಷಮಾದಾನ ಯೋಜನೆಯ ನಿಬಂಧನೆಗಳು ಪರಿಸರ ಮಾನದಂಡಗಳ ಉಲ್ಲಂಘನೆಗೆ ಸಂಬಂಧಿಸಿದ ಪರಿಸರ ಪರಿಣಾಮ ಮೌಲ್ಯಮಾಪನ ಕರಡು ಅಧಿಸೂಚನೆ 2020’ (Environment Impact Assessment Notification 2020) ಕರಡಿನ ನಿಬಂಧನೆಗಳಿಗೆ ಹೋಲುತ್ತವೆ ಎಂದು ತಜ್ಞರು ಹೇಳುತ್ತಾರೆ, ಇದು ಕಳೆದ ವರ್ಷ ಬಿಡುಗಡೆಯಾದ ಕರಡಿನಲ್ಲಿನ ‘ಪೋಸ್ಟ್-ಫ್ಯಾಕ್ಟೊ ಕ್ಲಿಯರೆನ್ಸ್’ (post-facto clearances) ವ್ಯಾಪಕ ಸಾರ್ವಜನಿಕ ಟೀಕೆಗೆ ಗುರಿಯಾಯಿತು.
  2. ಸಚಿವಾಲಯ ಹೊರಡಿಸಿದ ಜ್ಞಾಪಕ ಪತ್ರವು “ಉಲ್ಲಂಘನೆಗಳ ನಂತರದ ಕ್ರಮಬದ್ಧಗೊಳಿಸುವಿಕೆಯನ್ನು” (post facto regularisation of violations) ಸಾಮಾನ್ಯೀಕರಿಸಿದೆ – ಇದರಲ್ಲಿ, ಪರಿಸರ ಮಾನದಂಡಗಳನ್ನು ಮೊದಲು ಯೋಜನೆಯಿಂದ ಉಲ್ಲಂಘಿಸಲಾಗುತ್ತದೆ, ಮತ್ತು ನಂತರ ಯೋಜನಾ ಪ್ರತಿಪಾದಕರು ‘ಪರಿಸರ ಅನುಮತಿ’ಗಾಗಿ ಅರ್ಜಿ ಸಲ್ಲಿಸಬಹುದು ಮತ್ತು ದಂಡವನ್ನು ಪಾವತಿಸಿದ ನಂತರ ಬಿಡುಗಡೆ ಮಾಡಲಾಗುತ್ತದೆ.
  3. ಅಲ್ಲದೆ, ಇದು ಮಾಲಿನ್ಯಕಾರರಿಂದ ‘ಪಾವತಿ ಮಾಡಲಾಗುವ ಮಾನದಂಡ’ಗಳ ಆಧಾರದ ಮೇಲೆ ಉಲ್ಲಂಘನೆಗಳನ್ನು ಸಾಂಸ್ಥಿಕಗೊಳಿಸಲಾಗುತ್ತದೆ.
  4. ಈ SOPಯಲ್ಲಿ, ಉಲ್ಲಂಘಿಸುವವರನ್ನು ಮತ್ತು ಅಪರಾಧವನ್ನು ನಿರ್ಧರಿಸುವಲ್ಲಿ ಸಚಿವಾಲಯಕ್ಕೆ “ತೀವ್ರ ಶಕ್ತಿ” ನೀಡಲಾಗಿದೆ. ಇದು ಪರಿಸರ ಅನುಮತಿಗಳನ್ನು ಉಲ್ಲಂಘಿಸುವವರಿಗೆ, ವಿಶೇಷವಾಗಿ ದೊಡ್ಡ ಉದ್ಯಮಿಗಳಿಗೆ ಸಚಿವಾಲಯದೊಂದಿಗೆ ಮಾತುಕತೆ ನಡೆಸಲು ಅವಕಾಶ ನೀಡುತ್ತದೆ.

 

ಪರಿಸರ ಪ್ರಭಾವ ಮೌಲ್ಯಮಾಪನ (EIA) ಕರಡು ಅಧಿಸೂಚನೆ 2020 ರಲ್ಲಿ ವಿವಾದಾತ್ಮಕ ನಿಬಂಧನೆಗಳು:

  1. ಕರಡು ಅಧಿಸೂಚನೆಯು ಷರತ್ತು 14 (2) ಮತ್ತು 26 ರ ಅಡಿಯಲ್ಲಿ– ರಾಸಾಯನಿಕ ಉತ್ಪಾದನೆ ಮತ್ತು ಪೆಟ್ರೋಲಿಯಂ ಉತ್ಪನ್ನಗಳು; ಕಟ್ಟಡ, ನಿರ್ಮಾಣ ಮತ್ತು ಪ್ರದೇಶ ಅಭಿವೃದ್ಧಿ; ಒಳನಾಡಿನ ಜಲಮಾರ್ಗಗಳು ಮತ್ತು ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣೆ ಅಥವಾ ಅಗಲೀಕರಣ ಮುಂತಾದ ಹಲವಾರು ದೊಡ್ಡ ಕೈಗಾರಿಕೆಗಳು ಮತ್ತು ಯೋಜನೆಗಳನ್ನು ಪರಿಸರ ಪ್ರಭಾವದ ಮೌಲ್ಯಮಾಪನ ಪ್ರಕ್ರಿಯೆಯ ಭಾಗವಾಗಿ ಸಾರ್ವಜನಿಕ ಸಮಾಲೋಚನೆಯಿಂದ ವಿನಾಯಿತಿ ನೀಡುತ್ತದೆ.
  2. ಕೇಂದ್ರ ಸರ್ಕಾರವು ಯೋಜನೆಗಳನ್ನು ‘ಕಾರ್ಯತಂತ್ರ’ ಎಂದು ವರ್ಗೀಕರಿಸುವ ಮಾನದಂಡಗಳ ಬಗ್ಗೆ ಕರಡು ಸ್ಪಷ್ಟೀಕರಣವನ್ನು ನೀಡುವುದಿಲ್ಲ ಮತ್ತು ಆದ್ದರಿಂದ ಇದು ವಿಪರೀತ ವಿಶಾಲವಾದ ವ್ಯಾಖ್ಯಾನಗಳಿಗೆ ಮುಕ್ತವಾಗಬಹುದು.
  3. ಕರಡಿನಲ್ಲಿ, ಅಗತ್ಯವಾದ ಪರಿಸರ ಅನುಮತಿ ಅಥವಾ ಸಮಸ್ಯೆಗಳನ್ನು ಪಡೆಯದೆ ಕೈಗೊಂಡ ಯೋಜನೆಗಳಿಗೆ ‘ಕಾರ್ಯೋತ್ತರ-ಅನುಮೋದನೆ’ (post-facto clearances) ಯ ಅವಕಾಶ ಕಲ್ಪಿಸಲಾಗಿದೆ.
  4. ಇದು ಸಾರ್ವಜನಿಕ ಸಮಾಲೋಚನೆ ವಿಚಾರಣೆಯ ಅವಧಿಯನ್ನು ಗರಿಷ್ಠ 40 ದಿನಗಳವರೆಗೆ ಕಡಿಮೆ ಮಾಡುತ್ತದೆ.
  5. ಪರಿಸರ ಅನುಮತಿ ಕೋರಿ ಸಲ್ಲಿಸಲಾದ ಯಾವುದೇ ಅರ್ಜಿಗೆ ಸಾರ್ವಜನಿಕ ವಿಚಾರಣೆಯ ಸಮಯದಲ್ಲಿ ಸಾರ್ವಜನಿಕರಿಗೆ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಲು ಒದಗಿಸುವ ಸಮಯವನ್ನು ಇದು 30 ರಿಂದ 20 ದಿನಗಳವರೆಗೆ ಕಡಿಮೆ ಮಾಡುತ್ತದೆ.
  6. ಗಣಿಗಾರಿಕೆ ಯೋಜನೆಗಳಿಗೆ ಪರಿಸರ ಅನುಮತಿಗಳ ಸಿಂಧುತ್ವವನ್ನು (ಪ್ರಸ್ತುತ ಇರುವ 30 ವರ್ಷಗಳಿಂದ 50 ವರ್ಷಗಳಿಗೆ ) ಮತ್ತು ನದಿ ಕಣಿವೆ ಯೋಜನೆಗಳಿಗೆ ಪರಿಸರ ಕ್ಲಿಯರೆನ್ಸ್ ಸಿಂಧುತ್ವವನ್ನು (10 ವರ್ಷದಿಂದ 15 ವರ್ಷಕ್ಕೆ ಹೆಚ್ಚಿಸಲಾಗಿದೆ) ಯೋಜನೆಯ ಕಾರಣದಿಂದ ಉಂಟಾಗುವ ಯಾವುದೇ ಬದಲಾಯಿಸಲಾಗದ ಪರಿಸರ, ಸಾಮಾಜಿಕ ಮತ್ತು ಆರೋಗ್ಯದ ಸಂಬಂಧಿ ಅಪಾಯಗಳು ಹೆಚ್ಚಾಗುವ ಸಾಧ್ಯತೆ ಇದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಗೌರವ ಕಾನ್ಸುಲ್ ಜನರಲ್ ಗಳು:

(Honorary Consul generals)

ಬೆಂಗಳೂರು ಮೂಲದ ಕೈಗಾರಿಕೋದ್ಯಮಿ ಎನ್.ಎಸ್. ಶ್ರೀನಿವಾಸ ಮೂರ್ತಿ ಯವರನ್ನು ಕರ್ನಾಟಕಕ್ಕೆ ವಿಯೆಟ್ನಾಂ ನ ಗೌರವ ಕಾನ್ಸುಲ್ ಜನರಲ್ ಆಗಿ ನೇಮಿಸಲಾಗಿದೆ.

  1. ಅವರು ವಿಶ್ವದಾದ್ಯಂತ 19 ನೇ ಮತ್ತು ಭಾರತದಿಂದ ವಿಯೆಟ್ನಾಂ ಗೆ ಮೊದಲ ಗೌರವ ಕಾನ್ಸುಲ್ ಜನರಲ್ ಆಗಿದ್ದಾರೆ.

ಗೌರವ ಕಾನ್ಸುಲ್ ಎಂದರೆ ಯಾರು?

  1. ಭಾರತದ ರಾಜತಾಂತ್ರಿಕ ಸಂಬಂಧಗಳ ವೃದ್ಧಿಯೊಂದಿಗೆ, ಗೌರವಾನ್ವಿತ ಕಾನ್ಸುಲ್ ಜನರಲ್ ರವರು ಆರ್ಥಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಉತ್ತೇಜಿಸುವ ಕಾರ್ಯ ಮಾಡುತ್ತಾರೆ.
  2. ಅವರು ಖಾಸಗಿ/ಸರ್ಕಾರೇತರ ವ್ಯಕ್ತಿಗಳಾಗಿದ್ದು, ಅರೆಕಾಲಿಕ ಆಧಾರದ ಮೇಲೆ ತಮಗೆ ಒಪ್ಪಿಸಿದ ಕಾರ್ಯಗಳನ್ನು ಯಾವುದೇ ಸಂಭಾವನೆ ಪಡೆಯದೆ ನೆರವೇರಿಸುತ್ತಾರೆ.
  3. ಇವರ,ಔಪಚಾರಿಕ ನೇಮಕಾತಿಗೆ ಮೊದಲು ವಿದೇಶಾಂಗ ಸಚಿವಾಲಯದ (Ministry of External Affairs -MEA) ಅನುಮೋದನೆ ಅತ್ಯಗತ್ಯ.
  4. ಗೌರವಾನ್ವಿತ ಕಾನ್ಸುಲ್ ಜನರಲ್ ಗಳು ಪಾಸ್ಪೋರ್ಟ್ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ ಅಥವಾ ವೀಸಾ ಅಥವಾ ನಿವಾಸ ಪರವಾನಗಿಗೆ ಸಂಬಂಧಿಸಿದ ವಿಷಯಗಳನ್ನು ಅವರು ನಿರ್ವಹಿಸುವುದಿಲ್ಲ.
  5. ಗೌರವಾನ್ವಿತ ಕಾನ್ಸುಲ್ ಜನರಲ್ ಗಳು ನ್ಯಾಯಾಂಗ ವಿಚಾರಣೆಯಲ್ಲಿ ವಕೀಲರಾಗಿ ಅಥವಾ ಕಾನೂನು ಸಲಹೆಗಾರರಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.

honorary

 

ಭಾರತದ ಮೊದಲ ಕ್ರಿಪ್ಟೋಗಾಮಿಕ್ ಉದ್ಯಾನವನ:

(India’s first cryptogamic garden)

  1.  ಇತ್ತೀಚೆಗೆ, ಭಾರತದ ಮೊದಲ ‘ಕ್ರಿಪ್ಟೋಗಾಮಿಕ್ ಗಾರ್ಡನ್’ ಅನ್ನು ಉತ್ತರಾಖಂಡದ ಚಕ್ರತಾ ನಗರ ಡೆಹ್ರಾಡೂನ್‌ನಲ್ಲಿ ಉದ್ಘಾಟಿಸಲಾಯಿತು.
  2. ಈ ಉದ್ಯಾನದಲ್ಲಿ ಸುಮಾರು 50 ಜಾತಿಯ ಕಲ್ಲುಹೂವುಗಳು, ಜರೀಗಿಡಗಳು ಮತ್ತು ಶಿಲೀಂಧ್ರಗಳು (ಒಟ್ಟಾರೆಯಾಗಿ ಕ್ರಿಪ್ಟೋಗಾಮಿಕ್ ಎಂದು ಕರೆಯಲ್ಪಡುತ್ತವೆ) ಕಂಡುಬರುತ್ತವೆ.
  3. ಈ ಪ್ರಭೇದಗಳ ಬೆಳವಣಿಗೆಗೆ ಅನುಕೂಲಕರವಾದ ಕಡಿಮೆ ಮಾಲಿನ್ಯ ಮಟ್ಟ ಮತ್ತು ಆರ್ದ್ರ ವಾತಾವರಣದಿಂದಾಗಿ ಈ ತಾಣವನ್ನು ಆಯ್ಕೆ ಮಾಡಲಾಗಿದೆ.

 

ಕ್ರಿಪ್ಟೋಗಮ್ ಗಳು ಯಾವುವು?

ಸಸ್ಯ ಸಾಮ್ರಾಜ್ಯವನ್ನು ಕ್ರಿಪ್ಟೋಗಮ್ ಗಳು(Cryptogams)  ಮತ್ತು ಫನೆರೋಗಮ್ಗಳು (phanerogams) ಎಂದು ಎರಡು ಉಪ ಸಾಮ್ರಾಜ್ಯಗಳಾಗಿ ವಿಂಗಡಿಸಬಹುದು.

  1. ಕ್ರಿಪ್ಟೋಗಮ್ ಗುಂಪು ‘ಬೀಜರಹಿತ ಸಸ್ಯಗಳು’(seedless plants) ಮತ್ತು ‘ಸಸ್ಯ-ತರಹದ ಜೀವಿಗಳನ್ನು’ (plant-like organisms) ಹೊಂದಿದ್ದರೆ, ಫನೆರೋಗಮ್ ಗುಂಪು ‘ಬೀಜವನ್ನು ಹೊಂದಿರುವ ಸಸ್ಯಗಳನ್ನು’(seed-bearing plants) ಒಳಗೊಂಡಿದೆ.
  2. ಫನೆರೋಗಮ್‌ಗಳನ್ನು ಮತ್ತಷ್ಟು ಎರಡು ವರ್ಗಗಳಾಗಿ ಅಂದರೆ, ಜಿಮ್ನೋಸ್ಪರ್ಮ್‌ಗಳು (gymnosperms) ಮತ್ತು ಆಂಜಿಯೋಸ್ಪೆರ್ಮ್‌ಗಳು  (angiosperms) ಎಂದು ವಿಂಗಡಿಸಲಾಗಿದೆ.
  3. “ಕ್ರಿಪ್ಟೋಗೇಮ್” ಎಂಬ ಪದದ ಅರ್ಥ ‘ಪರೋಕ್ಷ ಸಂತಾನೋತ್ಪತ್ತಿ’, ಅಂದರೆ ಈ ಸಸ್ಯಗಳು ಯಾವುದೇ ಸಂತಾನೋತ್ಪತ್ತಿ ರಚನೆ, ಬೀಜಗಳು ಅಥವಾ ಹೂವುಗಳನ್ನು ಉತ್ಪಾದಿಸುವುದಿಲ್ಲ.
  4. ಕ್ರಿಪ್ಟೋಗಮ್ ಸಸ್ಯಗಳಾದ ಪಾಚಿ, ಕಲ್ಲುಹೂವು, ಪಾಚಿಗಳು ಮತ್ತು ಜರೀಗಿಡಗಳು ಬೀಜಗಳ ಸಹಾಯದಿಂದ ಸಂತಾನೋತ್ಪತ್ತಿ ಮಾಡುತ್ತವೆ.

 

ಅಂತರರಾಷ್ಟ್ರೀಯ ವ್ಯಾಪಾರ ಹಣಕಾಸು ಸೇವೆಗಳ ವೇದಿಕೆ (ITFS):

ಇತ್ತೀಚೆಗೆ, ‘ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಪ್ರಾಧಿಕಾರ’ (IFSCA) ದ ಮೂಲಕ ‘ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳಲ್ಲಿ’ (IFSCs) ವ್ಯವಹಾರ ಸಂಬಂಧಿತ ಹಣಕಾಸು ಸೇವೆಗಳನ್ನು ಒದಗಿಸಲು ‘ಅಂತರರಾಷ್ಟ್ರೀಯ ವ್ಯಾಪಾರ ಹಣಕಾಸು ಸೇವೆಗಳ ವೇದಿಕೆ’ (International trade finance services platform – ITFS) ಯನ್ನು ಸ್ಥಾಪಿಸಲು ಮತ್ತು ನಿರ್ವಹಿಸಲು ಒಂದು ಚೌಕಟ್ಟನ್ನು ಬಿಡುಗಡೆ ಮಾಡಲಾಗಿದೆ.

  1. ರಫ್ತುದಾರರು ಮತ್ತು ಆಮದುದಾರರು ITFS ನಂತಹ ಅಂತರರಾಷ್ಟ್ರೀಯ ವ್ಯಾಪಾರ ವಹಿವಾಟುಗಳಿಗೆ ಮೀಸಲಾದ ಎಲೆಕ್ಟ್ರಾನಿಕ್ ಪ್ಲಾಟ್‌ಫಾರ್ಮ್ ಮೂಲಕ ತಮ್ಮ ಅಂತರರಾಷ್ಟ್ರೀಯ ವ್ಯಾಪಾರದ ಅವಧಿಯಲ್ಲಿ ವಹಿವಾಟು ನಡೆಸಲು ಸ್ಪರ್ಧಾತ್ಮಕ ಷರತ್ತುಗಳ ಮೇಲೆ ವಿವಿಧ ವ್ಯಾಪಾರ ಸಂಬಂಧಿತ ಹಣಕಾಸು ಸೌಲಭ್ಯಗಳನ್ನು ಪಡೆಯಲು ಈ ಚೌಕಟ್ಟು ಅನುವು ಮಾಡಿಕೊಡುತ್ತದೆ.
  2. ಇದು ತಮ್ಮ ವ್ಯವಹಾರ ಕರಾರುಗಳನ್ನು ಲಿಕ್ವಿಡ್ ಫಂಡ್ (ದ್ರವ ನಿಧಿ) ಗಳಾಗಿ ಪರಿವರ್ತಿಸುವ ಮತ್ತು ಅಲ್ಪಾವಧಿಯ ಹಣಕಾಸು ಸೌಲಭ್ಯವನ್ನು ಪಡೆಯುವ ಸಾಮರ್ಥ್ಯಕ್ಕೆ ಸಹಾಯ ಮಾಡುತ್ತದೆ.