[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 15ನೇ ಜೂನ್ 2021

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ತುಳು ಭಾಷೆಯ ಇತಿಹಾಸ ಮತ್ತು ಅಧಿಕೃತ ಭಾಷೆಯ ಸ್ಥಾನಮಾನದ ಬೇಡಿಕೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA).

2. ಇಂಟರ್ನೆಟ್ ನಿರ್ಬಂಧಗಳ ಅಗತ್ಯತೆಯ ಬಗ್ಗೆ G7 ಭಾರತೀಯ ದೃಷ್ಟಿಕೋನವನ್ನು ಸರಿಹೊಂದಿಸುತ್ತದೆ.

3. ನ್ಯಾಟೋ ಶೃಂಗಸಭೆ.

4. ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (SIPRI) ವರ್ಷದ ಪುಸ್ತಕ 2021.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ನ್ಯೂ ಶೆಫರ್ಡ್ ರಾಕೆಟ್ ವ್ಯವಸ್ಥೆ ಎಂದರೇನು?

2. ಬಾಸ್ಮತಿ ಅಕ್ಕಿಗಾಗಿ ಭಾರತ ಮತ್ತು ಪಾಕಿಸ್ತಾನ ಗಳ ಹೋರಾಟ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್.

2. EU ಸಾಮಾನ್ಯೀಕೃತ ವ್ಯವಸ್ಥೆಗಳ ಆದ್ಯತೆಗಳು (GSP).

3. ಜೀವನ್ ವಾಯು.

4. ಜರ್ದಾಲು ಮಾವು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ತುಳು ಭಾಷೆಯ ಇತಿಹಾಸ ಮತ್ತು ಅಧಿಕೃತ ಭಾಷೆಯ ಸ್ಥಾನಮಾನದ ಬೇಡಿಕೆ:


(The history of Tulu and the demand for official language status)

 ಸಂದರ್ಭ:

ತುಳು(Tulu) ಭಾಷೆಯನ್ನು ಸಂವಿಧಾನದ ಎಂಟನೇ ಅನುಸೂಚಿಯಲ್ಲಿ(eighth schedule of the Constitution) ಸೇರಿಸಬೇಕು ಮತ್ತು ಅದಕ್ಕೆ ಕರ್ನಾಟಕ ಮತ್ತು ಕೇರಳದಲ್ಲಿ ಅಧಿಕೃತ ಭಾಷೆಯ(official language status) ಸ್ಥಾನಮಾನವನ್ನು ನೀಡುವಂತೆ ಮಂಡಿಸಿರುವ ಹಕ್ಕೊತ್ತಾಯದ ಬೇಡಿಕೆಯ ಕೂಗು ದಿನೇದಿನೇ ಬೆಳೆಯುತ್ತಿದೆ.

ತುಳು ಭಾಷೆಯ ಕುರಿತು:

  1. ತುಳು ಒಂದು ದ್ರಾವಿಡ ಭಾಷೆಯಾಗಿದ್ದು, ಮುಖ್ಯವಾಗಿ ಕರ್ನಾಟಕದ ಎರಡು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಮತ್ತು ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಮಾತನಾಡುತ್ತಾರೆ.
  2. 2011 ರ ಜನಗಣತಿಯ ವರದಿಯ ಪ್ರಕಾರ, ಭಾರತದಲ್ಲಿ ತುಳು ಭಾಷೆಯನ್ನು ಮಾತನಾಡುವವರ ಸಂಖ್ಯೆ 18,46,427.
  3. ರಾಬರ್ಟ್ ಕಾಲ್ಡ್ ವೆಲ್ ‘(1814-1891) ತನ್ನ ಪುಸ್ತಕ ಎ ಕಂಪೆರೇಟಿವ  ಗ್ರಾಮರ್ ಆಫ್ ದ್ರಾವಿಡಿಯನ್ ಅಥವಾ ದಕ್ಷಿಣ-ಭಾರತೀಯ ಭಾಷೆಗಳ ಕುಟುಂಬ (A Comparative Grammar of the Dravidian or South-Indian Family of Languages) ದಲ್ಲಿ,ತುಳು ಭಾಷೆಯನ್ನು “ದ್ರಾವಿಡ ಭಾಷಾ ಕುಟುಂಬದ ಅತ್ಯಂತ ಅಭಿವೃದ್ಧಿ ಹೊಂದಿದ ಭಾಷೆಗಳಲ್ಲಿ ಒಂದಾಗಿದೆ” ಎಂದು ಬಣ್ಣಿಸಿದ್ದಾರೆ.
  4. ತುಳು ಭಾಷೆಯು ಶ್ರೀಮಂತ ಮೌಖಿಕ ಸಾಹಿತ್ಯ ಸಂಪ್ರದಾಯವನ್ನು ಹೊಂದಿದೆ, ಇದರಲ್ಲಿ ಪಡ್ಡಾನಾದಂತಹ (Paddana) ಜಾನಪದ ಗೀತೆಗಳು ಮತ್ತು ಸಾಂಪ್ರದಾಯಿಕ ಜಾನಪದ ರಂಗಭೂಮಿ ಪ್ರಕಾರಗಳಾದ ಯಕ್ಷಗಾನವನ್ನು ಒಳಗೊಂಡಿವೆ.

 

ಸಂವಿಧಾನದ 8ನೇ ಅನುಸೂಚಿ:

ಭಾರತದ ಸಂವಿಧಾನದ ಭಾಗ XVII ರಲ್ಲಿ, ಅಧಿಕೃತ ಭಾಷೆಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ವಿಧಿ 343 ರಿಂದ ವಿಧಿ 351 ರವರೆಗೆ ಮಾಡಲಾಗಿದೆ.

ಎಂಟನೇ ಅನುಸೂಚಿಗೆ ಸಂಬಂಧಿಸಿದ ಸಾಂವಿಧಾನಿಕ ನಿಬಂಧನೆಗಳು ಇಂತಿವೆ:

  1. ವಿಧಿ 344: ಆರ್ಟಿಕಲ್ 344 (1) ಸಂವಿಧಾನದ ಪ್ರಾರಂಭದಿಂದ ಐದು ವರ್ಷಗಳ ಅವಧಿ ಮುಗಿದ ನಂತರ ರಾಷ್ಟ್ರಪತಿಗಳು ಸಂವಿಧಾನಾತ್ಮಕವಾಗಿ ಒಂದು ಆಯೋಗವನ್ನು ರಚಿಸಬೇಕು.
  2. (ಅದರಂತೆ ಸಂವಿಧಾನ ಪ್ರಾರಂಭವಾದ ಐದು ವರ್ಷಗಳ ನಂತರ ರಾಷ್ಟ್ರಪತಿಗಳು ಶ್ರೀ ಬಿ ಜಿ ಕೇರ್ ಅವರ ಅಧ್ಯಕ್ಷತೆಯಲ್ಲಿ ಒಂದು ಆಯೋಗವನ್ನು ನೇಮಿಸಿದರು).
  3. ವಿಧಿ 351: ಇದರ ಅಡಿಯಲ್ಲಿ, ಹಿಂದಿ ಭಾಷೆಯ ಅಭಿವೃದ್ಧಿಗೆ, ಅದರ ಪ್ರಸಾರಕ್ಕೆ ಸಂಬಂಧಿಸಿದಂತೆ ನಿಬಂಧನೆಗಳನ್ನು ಮಾಡಲಾಗಿದೆ, ಇದರಿಂದ ಇದು ಭಾರತದ ಸಂಯೋಜಿತ ಸಂಸ್ಕೃತಿಯ ಎಲ್ಲಾ ಅಂಶಗಳಿಗೆ ಅಭಿವ್ಯಕ್ತಿ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ.
  4. ವಿಧಿ 345: ಪ್ರತಿಯೊಂದು ರಾಜ್ಯದ ಶಾಸನಸಭೆಗಳು ಆ ರಾಜ್ಯದಲ್ಲಿ ಪ್ರಚಲಿತವಾಗಿರುವ ಒಂದು ಅಥವಾ ಹೆಚ್ಚಿನ ಭಾಷೆಗಳನ್ನು ಅಲ್ಲಿನ ಯಾವುದೇ ಅಧಿಕೃತ ಉದ್ದೇಶಗಳಿಗೆ ಬಳಸಿಕೊಳ್ಳುವ ಅಧಿಕಾರವನ್ನು ಹೊಂದಿವೆ ಎಂದು ತಿಳಿಸುತ್ತದೆ.
  5. ವಿಧಿ 347: ರಾಷ್ಟ್ರಪತಿಗಳು ಒಂದು ರಾಜ್ಯದಲ್ಲಿ ಅಲ್ಲಿನ ಒಂದು ನಿರ್ದಿಷ್ಟ ಭಾಷೆಯು ಆ ರಾಜ್ಯಕ್ಕೆ ಪೂರ್ತಿಯಾಗಿ ಅಥವಾ ಭಾಗಶಃ ಅಧಿಕೃತ ಭಾಷೆಯಾಗಬೇಕು ಎಂದು ನಿರ್ದೇಶನ ನೀಡಬಹುದು.

ಪ್ರಸ್ತುತ, ಸಂವಿಧಾನದ ಎಂಟನೇ ಅನುಸೂಚಿಯಲ್ಲಿ, ಅಸ್ಸಾಮೀಸ್, ಬಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಉರ್ದು, ಬೋಡೋ, ಸಂತಾಲಿ , ಮೈಥಿಲಿ ಮತ್ತು ಡೋಗ್ರಿ, ಸೇರಿದಂತೆ ಒಟ್ಟು 22 ಅಧಿಕೃತ ಭಾಷೆಗಳಿವೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA):


(National Food Security Act)

ಸಂದರ್ಭ:

ಇತ್ತೀಚೆಗೆ, ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು, ಪಡಿತರ ಚೀಟಿಗಳಿಲ್ಲದ ವಲಸಿಗರಿಗೆ ಮತ್ತು ಆಹಾರ-ಸುರಕ್ಷತೆಯ ರಕ್ಷಣೆಯಿಲ್ಲದವರಿಗೆ ಆಹಾರ ಧಾನ್ಯಗಳನ್ನು ಒದಗಿಸಲುರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ’ (NFSA) ಅಡಿಯಲ್ಲಿ 3.7 ಲಕ್ಷ ಟನ್ ಆಹಾರ ಧಾನ್ಯಗಳನ್ನು ಭಾರತದ ಆಹಾರ ನಿಗಮದಿಂದ (FCI) ಸಬ್ಸಿಡಿ ದರದಲ್ಲಿ ಖರೀದಿಸಿವೆ ಎಂದು ತಿಳಿಸಿದೆ.

ಅದೇ ಸಮಯದಲ್ಲಿ, ಪಡಿತರ ಚೀಟಿಗಳಿಲ್ಲದವರು ವಿನಾಶಕಾರಿ ಸಾಂಕ್ರಾಮಿಕ ರೋಗದ ಮಧ್ಯೆ ಸಾಯಲು ಬಿಡಬಹುದು ಎಂದು ನ್ಯಾಯಾಲಯದಲ್ಲಿ ಎದ್ದಿರುವ ಆತಂಕಗಳನ್ನು ಕೇಂದ್ರ ಸರ್ಕಾರವು ತಳ್ಳಿಹಾಕಿದೆ.

 

ಹಿನ್ನೆಲೆ:

“ಪಡಿತರ ಚೀಟಿ ಇಲ್ಲದ ವಲಸೆ ಕಾರ್ಮಿಕರಿಗೆ ಆಹಾರವನ್ನು ಹೇಗೆ ನೀಡಲಾಗುವುದು” ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಕೇಳಿದೆ.

 

‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ’ (NFSA),2013:

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) 2013, ಜನರು ಗೌರವಯುತ ಜೀವನವನ್ನು ನಡೆಸಲು ಅವರಿಗೆ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸುವ ಮೂಲಕ ಮಾನವ ಜೀವನ ಚಕ್ರ ವಿಧಾನದಲ್ಲಿ ಆಹಾರ ಮತ್ತು ಪೌಷ್ಠಿಕಾಂಶದ ಸುರಕ್ಷತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.

 

ಪ್ರಮುಖ ಲಕ್ಷಣಗಳು:

ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ (TPDS) ಅಡಿಯಲ್ಲಿ ವ್ಯಾಪ್ತಿ ಮತ್ತು ಅರ್ಹತೆ: ಗ್ರಾಮೀಣ ಜನಸಂಖ್ಯೆಯ 75% ಮತ್ತು ನಗರ ಜನಸಂಖ್ಯೆಯ 50% ಟಿಪಿಡಿಎಸ್ ಅಡಿಯಲ್ಲಿ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು 5 ಕೆಜಿ ಏಕರೂಪದ ಅರ್ಹತೆಯನ್ನು ಹೊಂದಿರುತ್ತದೆ. ಆದಾಗ್ಯೂ, ಅಸ್ತಿತ್ವದಲ್ಲಿರುವ ಅಂತ್ಯೋದಯ ಅನ್ನ ಯೋಜನೆ (AAY) ವ್ಯಾಪ್ತಿಯಲ್ಲಿ  ಬರುವ ಕಡು ಬಡವ ಕುಟುಂಬಗಳು ಪ್ರತಿ ತಿಂಗಳು 35 ಕೆ.ಜಿ. ಆಹಾರಧಾನ್ಯಗಳನ್ನು ಪಡೆಯುತ್ತಲೇ ಇರುತ್ತಾರೆ.

 

TPDS ಅಡಿಯಲ್ಲಿ ಸಬ್ಸಿಡಿ ದರಗಳು ಮತ್ತು ಅದರ ಪರಿಷ್ಕರಣೆ: ಟಿಪಿಡಿಎಸ್ ಅಡಿಯಲ್ಲಿ ಆಹಾರ ಧಾನ್ಯಗಳು ಅಂದರೆ ಅಕ್ಕಿ, ಗೋಧಿ ಮತ್ತು ಒರಟು(ಸಿರಿ) ಧಾನ್ಯಗಳನ್ನು  ಪ್ರತಿ ಕೆ.ಜಿ.ಗೆ ಕ್ರಮವಾಗಿ ರೂ 3 / 2/1 ರಂತೆ ಈ ಕಾಯಿದೆಯ ಪ್ರಾರಂಭದ ದಿನಾಂಕದಿಂದ 3 ವರ್ಷಗಳ ಅವಧಿಗೆ ಒದಗಿಸಲಾಗುವುದು . ಅದರ ನಂತರ ಈ ಬೆಲೆಗಳನ್ನು ಕನಿಷ್ಠ ಬೆಂಬಲ ಬೆಲೆಯೊಂದಿಗೆ ಸೂಕ್ತವಾಗಿ ಜೋಡಿಸಲಾಗುತ್ತದೆ.

ಮನೆಗಳ ಗುರುತಿಸುವಿಕೆ: TPDS ಅಡಿಯಲ್ಲಿ ಪ್ರತಿ ರಾಜ್ಯಕ್ಕೆ ನಿಗದಿಪಡಿಸಿದ ವ್ಯಾಪ್ತಿಯಲ್ಲಿ ಅರ್ಹ ಮನೆಗಳನ್ನು ಗುರುತಿಸುವ ಕೆಲಸವನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ಮಾಡುತ್ತವೆ.

ಮಹಿಳೆಯರು ಮತ್ತು ಮಕ್ಕಳಿಗೆ ಪೌಷ್ಠಿಕಾಂಶದ ಬೆಂಬಲ: ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು (ICDS) ಮತ್ತು ಮಧ್ಯಾಹ್ನದ ಬಿಸಿಯೂಟ (MDM) ಯೋಜನೆಗಳ ಅಡಿಯಲ್ಲಿ ಸೂಚಿಸಲಾದ ಪೌಷ್ಠಿಕಾಂಶದ ಮಾನದಂಡಗಳ ಪ್ರಕಾರ 6 ತಿಂಗಳಿನಿಂದ 14 ವರ್ಷದೊಳಗಿನ ಮಕ್ಕಳು, ಗರ್ಭಿಣಿ ಮಹಿಳೆಯರು ಮತ್ತು ಹಾಲುಣಿಸುವ ತಾಯಂದಿರು   ಆಹಾರವನ್ನು ಪಡೆಯಲು ಅರ್ಹರಾಗಿದ್ದಾರೆ. 6 ವರ್ಷ ವಯಸ್ಸಿನವರೆಗಿನ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಹೆಚ್ಚಿನ ಪೌಷ್ಠಿಕಾಂಶದ ಮಾನದಂಡಗಳನ್ನು ಸೂಚಿಸಲಾಗಿದೆ.

ಹೆರಿಗೆ ಲಾಭ: ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ರೂ .6,000 ಗಳ ಹೆರಿಗೆ (ಮಾತೃತ್ವ) ಸೌಲಭ್ಯವನ್ನೂ ನೀಡಲಾಗುವುದು.

ಮಹಿಳಾ ಸಬಲೀಕರಣ: ಪಡಿತರ ಚೀಟಿ ನೀಡುವ ಉದ್ದೇಶದಿಂದ, ಕುಟುಂಬದಲ್ಲಿ 18 ವರ್ಷ ಅಥವಾ ಅದಕ್ಕಿಂತ ಮೇಲ್ಪಟ್ಟ ಮಹಿಳೆಯನ್ನು ಕುಟುಂಬದ ಮುಖ್ಯಸ್ಥರೆಂದು ಪರಿಗಣಿಸಲಾಗುತ್ತದೆ.

ಕುಂದುಕೊರತೆ ನಿವಾರಣಾ ಕಾರ್ಯವಿಧಾನ: ಕುಂದುಕೊರತೆ ನಿವಾರಣಾ ಕಾರ್ಯವಿಧಾನವು ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಲಭ್ಯವಾಗಲಿದೆ.

ಆಹಾರ ಧಾನ್ಯಗಳ ನಿರ್ವಹಣೆ ಮತ್ತು ಸಾರಿಗೆ ವೆಚ್ಚ ಮತ್ತು ನ್ಯಾಯೋಚಿತ ಬೆಲೆ ಮಳಿಗೆ (FPS) ವ್ಯಾಪಾರಿಗಳ ಲಾಭಗಳು: ರಾಜ್ಯದೊಳಗೆ ಆಹಾರ ಧಾನ್ಯಗಳ ಸಾಗಣೆಗೆ ಮಾಡಿದ ಖರ್ಚು, ಅದರ ನಿರ್ವಹಣೆ ಮತ್ತು ನ್ಯಾಯೋಚಿತ ಬೆಲೆ ಮಳಿಗೆ (ಎಫ್‌ಪಿಎಸ್) ವ್ಯಾಪಾರಿಗಳ ಲಾಭ ಈ ಉದ್ದೇಶಕ್ಕಾಗಿ ರೂಪಿಸಲಾದ ಮಾನದಂಡಗಳ ಪ್ರಕಾರ ಮೇಲಿನ ವೆಚ್ಚವನ್ನು ಪೂರೈಸಲು ರಾಜ್ಯಗಳಿಗೆ ಕೇಂದ್ರ ಸರ್ಕಾರವು ಸಹಾಯ ಮಾಡುತ್ತದೆ.

ಪಾರದರ್ಶಕತೆ ಮತ್ತು ಉತ್ತರದಾಯಿತ್ವ: ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು, ಪಿಡಿಎಸ್, ಸಾಮಾಜಿಕ ಲೆಕ್ಕಪರಿಶೋಧನೆ ಮತ್ತು ವಿಜಿಲೆನ್ಸ್ ಸಮಿತಿಗಳ ಸ್ಥಾಪನೆಗೆ ಸಂಬಂಧಿಸಿದ ದಾಖಲೆಗಳನ್ನು ತೋರಿಸಲು ಅವಕಾಶ ಕಲ್ಪಿಸಲಾಗಿದೆ.

ಆಹಾರ ಭದ್ರತಾ ಭತ್ಯೆ: ಸೂಕ್ತವಾದ ಆಹಾರ ಧಾನ್ಯಗಳು ಅಥವಾ ಆಹಾರವನ್ನು ಸರಬರಾಜು ಮಾಡದಿದ್ದಲ್ಲಿ, ಅರ್ಹ ಫಲಾನುಭವಿಗಳಿಗೆ ಆಹಾರ ಭದ್ರತಾ ಭತ್ಯೆಯನ್ನು ಒದಗಿಸಲು ಅವಕಾಶ ಕಲ್ಪಿಸಲಾಗಿದೆ.

ದಂಡ: ಜಿಲ್ಲಾ ಕುಂದುಕೊರತೆ ಪರಿಹಾರ ಅಧಿಕಾರಿ ಶಿಫಾರಸು ಮಾಡಿದಂತೆ ಯಾವುದೇ ಸಾರ್ವಜನಿಕ ಸೇವಕ ಅಥವಾ ಪ್ರಾಧಿಕಾರ ಪರಿಹಾರ ಪರಿಹಾರವನ್ನು ನೀಡಲು ವಿಫಲವಾದರೆ, ರಾಜ್ಯ ಆಹಾರ ಆಯೋಗವು, ಅಸ್ತಿತ್ವದಲ್ಲಿರುವ ನಿಬಂಧನೆಯ ಪ್ರಕಾರ ದಂಡ ವಿಧಿಸುತ್ತದೆ.

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಇಂಟರ್ನೆಟ್ ನಿರ್ಬಂಧಗಳ ಅಗತ್ಯತೆಯ ಬಗ್ಗೆ G 7 ಭಾರತೀಯ ದೃಷ್ಟಿಕೋನವನ್ನು ಸರಿಹೊಂದಿಸುತ್ತದೆ:


(G7 accommodates Indian stand on need for Internet curbs)

ಸಂದರ್ಭ:

ಇತ್ತೀಚೆಗೆ, ಜಿ 7 ಮತ್ತು ಅತಿಥಿ ರಾಷ್ಟ್ರಗಳೊಂದಿಗೆ ಭಾರತವು “ಮುಕ್ತ ಸಮಾಜಗಳು” (Open Societies) ಕುರಿತು ಜಂಟಿ ಹೇಳಿಕೆಗೆ ಸಹಿ ಹಾಕಿದೆ,ಇದು ಪ್ರಜಾಪ್ರಭುತ್ವವನ್ನು ರಕ್ಷಿಸಲು ಮತ್ತು ಜನರು ಭಯ ಮತ್ತು ದಬ್ಬಾಳಿಕೆಯಿಂದ ಮುಕ್ತವಾಗಿ ಬದುಕಲು ಸಹಾಯ ಮಾಡುವ ಸಾಧನವಾಗಿ “ಆನ್‌ಲೈನ್ ಮತ್ತು ಆಫ್‌ಲೈನ್ ಎರಡೂ ಅಭಿವ್ಯಕ್ತಿ ಸ್ವಾತಂತ್ರ್ಯ” ದ ಮೌಲ್ಯಗಳನ್ನು ದೃಢಪಡಿಸುತ್ತದೆ ಅಥವಾ ಪುನರುಚ್ಚರಿಸುತ್ತದೆ ಮತ್ತು ಪ್ರೋತ್ಸಾಹಿಸುತ್ತದೆ.

ಈ ಹೇಳಿಕೆಯು “ರಾಜಕೀಯ ಪ್ರೇರಿತ ಇಂಟರ್ನೆಟ್ ಸ್ಥಗಿತಗೊಳಿಸುವಿಕೆ” ಯನ್ನು ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವಕ್ಕೆ ಒಡ್ಡುವ ಬೆದರಿಕೆಗಳಲ್ಲಿ ಒಂದಾಗಿದೆ ಎಂದು ಉಲ್ಲೇಖಿಸಿದೆ.

 

11 ಪ್ರಜಾಪ್ರಭುತ್ವಗಳು:

ಈ ಜಂಟಿ ಹೇಳಿಕೆಗೆ ಜಿ -7 ದೇಶಗಳು ಮತ್ತು ಭಾರತ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸಹಿ ಹಾಕಿವೆ. ಆತಿಥೇಯ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಈ ದೇಶಗಳಿಗೆ “11 ಪ್ರಜಾಪ್ರಭುತ್ವಗಳು / ಪ್ರಜಾಪ್ರಭುತ್ವಗಳು ಇಲೆವೆನ್” (Democracies 11) ಎಂದು ಹೆಸರಿಸಿದ್ದಾರೆ.

 

ಇಂಟರ್ನೆಟ್ ನಿರ್ಬಂಧದ’ ಅಗತ್ಯದ ಬಗ್ಗೆ ಭಾರತದ ಅಭಿಪ್ರಾಯಗಳು:

ಮುಕ್ತ ಸಮಾಜಗಳು ವಿಶೇಷವಾಗಿ ಮಾಹಿತಿ ಮತ್ತು ಸೈಬರ್ ದಾಳಿಗೆ ಗುರಿಯಾಗುತ್ತವೆ. ಆದ್ದರಿಂದ, “ಸೈಬರ್‌ಪೇಸ್ ಪ್ರಜಾಪ್ರಭುತ್ವ ಮೌಲ್ಯಗಳನ್ನು ಮುನ್ನಡೆಸುವ ಮಾರ್ಗವಾಗಿ ಉಳಿದಿದೆ ಮತ್ತು ಅದನ್ನು ಮಟ್ಟಹಾಕುವಂತಿಲ್ಲ” ಎಂದು ಖಚಿತಪಡಿಸಿಕೊಳ್ಳುವ ಅವಶ್ಯಕತೆಯಿದೆ. ಆದ್ದರಿಂದ, ಕೆಲವು ಸಂದರ್ಭಗಳಲ್ಲಿ ಇಂಟರ್ನೆಟ್ ಅನ್ನು ನಿರ್ಬಂಧಿಸುವುದು ಅವಶ್ಯಕ ಎಂದು ಹೇಳುತ್ತದೆ.

ಹಿನ್ನೆಲೆ:  

ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತರ್ಜಾಲ ನಿರ್ಬಂಧದ ಬಗ್ಗೆ ಭಾರತ ಪರಿಶೀಲನೆಯಲ್ಲಿದೆ, ಕೇಂದ್ರ ಸರ್ಕಾರವು ತನ್ನ ಹೊಸ ಐಟಿ ನಿಯಮಗಳ ಬಗ್ಗೆ ಟ್ವಿಟರ್‌ನಂತಹ ಟೆಕ್ ದೈತ್ಯ ಸಂಸ್ಥೆಗಳಿಂದ ಪ್ರತಿಭಟನೆಯನ್ನು ಎದುರಿಸುತ್ತಿದೆ.

ಟ್ವಿಟರ್, ಕಳೆದ ತಿಂಗಳು, ಭಾರತದಲ್ಲಿನ ತನ್ನ ಕಚೇರಿಗಳ ಮೇಲೆ ನಡೆಸಿದ ಪೊಲೀಸ್ ತನಿಖೆಯನ್ನು “ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಭಾವ್ಯ ಬೆದರಿಕೆ” ಎಂದು ಬಣ್ಣಿಸಿದೆ.

2019-2020ರ ಅವಧಿಯಲ್ಲಿ,‘ಪೌರತ್ವ ತಿದ್ದುಪಡಿ ಕಾಯ್ದೆ’ ವಿರುದ್ಧ ಮತ್ತು ಕಳೆದ ಜನವರಿಯಲ್ಲಿ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ದೆಹಲಿ ಮತ್ತು ಅಸ್ಸಾಂನಲ್ಲಿ ಇದೇ ರೀತಿಯ ಸಂವಹನವನ್ನು ನಿರ್ಬಂಧಿಸಲಾಗಿತ್ತು.

 

ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವ ವಿಧಾನ:

ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸುವುದಕ್ಕೆ ಸಂಬಂಧಿಸಿದ ಮೂರು ಕಾನೂನುಗಳು ಎಂದರೆ, ಮಾಹಿತಿ ತಂತ್ರಜ್ಞಾನ ಕಾಯ್ದೆ -2000, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (CrPC), 1973 ಮತ್ತು ಟೆಲಿಗ್ರಾಫ್ ಆಕ್ಟ್, 1885.

2017 ಕ್ಕಿಂತ ಮೊದಲು, ಕ್ರಿಮಿನಲ್ ಪ್ರೊಸೀಜರ್ ಸಂಹಿತೆಯ ಸೆಕ್ಷನ್ 144’ ರ ಅಡಿಯಲ್ಲಿ ಇಂಟರ್ನೆಟ್ ಅಮಾನತು ಅಥವಾ ಸ್ಥಗಿತಗೊಳಿಸುವ ಆದೇಶಗಳನ್ನು ಹೊರಡಿಸಲಾಗಿದೆ.

 

  1. ಇಂಟರ್ನೆಟ್ ಅಮಾನತುಗೊಳಿಸುವಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರವು ಟೆಲಿಗ್ರಾಫ್ ಕಾಯ್ದೆಯಡಿ ಟೆಲಿಕಾಂ ಸೇವೆಗಳ ತಾತ್ಕಾಲಿಕ ಅಮಾನತು  (ಸಾರ್ವಜನಿಕ ತುರ್ತು ಅಥವಾ ಸಾರ್ವಜನಿಕ ಸೇವೆ)  (Temporary Suspension of Telecom Services (Public Emergency or Public Service) Rules) ನಿಯಮಗಳನ್ನು 2017 ರಲ್ಲಿ ಜಾರಿಗೆ ತಂದಿದೆ.
  2. 2017 ರ ನಿಯಮಗಳ ಹೊರತಾಗಿಯೂ, ಸೆಕ್ಷನ್ 144 ರ ಅಡಿಯಲ್ಲಿ ವಿಶಾಲ ಅಧಿಕಾರವನ್ನು ಹೆಚ್ಚಾಗಿ ಸರ್ಕಾರವು ಬಳಸಿಕೊಳ್ಳುತ್ತದೆ.
  3. ಈ ನಿಯಮಗಳ ಅಧಿಕಾರಗಳ ಮೂಲವೆಂದರೆ ಭಾರತೀಯ ಟೆಲಿಗ್ರಾಫ್ ಕಾಯ್ದೆಯ ಸೆಕ್ಷನ್ 5 (2), ಇದು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯ ಹಿತಾಸಕ್ತಿ” ಯನ್ನು ಗಮನದಲ್ಲಿರಿಸಿಕೊಂಡು ಸಂದೇಶಗಳನ್ನು ಪ್ರತಿಬಂಧಿಸಲು (Interception) ಅಧಿಕಾರವನ್ನು ಒದಗಿಸುತ್ತದೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ನ್ಯಾಟೋ ಶೃಂಗಸಭೆ:


(NATO Summit)

 

ಸಂದರ್ಭ:

ಇತ್ತೀಚೆಗೆ, ಬೆಲ್ಜಿಯಂನ ರಾಜಧಾನಿ ಬ್ರಸೆಲ್ಸ್ ನಲ್ಲಿ ನ್ಯಾಟೋ ಶೃಂಗಸಭೆ ನಡೆಯಿತು. ಇದರಲ್ಲಿ ಎಲ್ಲಾ 30 ಮಿತ್ರ ರಾಷ್ಟ್ರಗಳ ಮುಖಂಡರು ಭಾಗವಹಿಸಿದ್ದರು.

 

ಸಭೆಯ ಫಲಿತಾಂಶಗಳು:

  1. ನ್ಯಾಟೋ ರಾಷ್ಟ್ರಗಳ ಮುಖ್ಯಸ್ಥರು ನ್ಯಾಟೋ ಸ್ಥಾಪನೆಯ ‘ವಾಷಿಂಗ್ಟನ್ ಒಪ್ಪಂದ’ಕ್ಕೆ ಮತ್ತು ಅದರಲ್ಲಿ ಸೇರಿಸಲಾಗಿರುವ’ ಸಾಮೂಹಿಕ ರಕ್ಷಣೆಯ 5 ನೇ ವಿಧಿಗೆ ‘ಬಲವಾಗಿ ಬದ್ಧರಾಗಿದ್ದಾರೆ ಎಂದು ಹೇಳಿದ್ದಾರೆ.ಆರ್ಟಿಕಲ್ 5 ‘ನ್ಯಾಟೋದ ಯಾವುದೇ ಸದಸ್ಯ ರಾಷ್ಟ್ರದ ವಿರುದ್ಧದ ದಾಳಿಯನ್ನು ಈ ಸಂಘಟನೆಯ ಎಲ್ಲರ ವಿರುದ್ಧದ ಆಕ್ರಮಣವೆಂದು ಪರಿಗಣಿಸಲಾಗುತ್ತದೆ,ಎಂದು ಹೇಳುತ್ತದೆ.
  2. ಈ ಸಭೆಯಲ್ಲಿ, ಪ್ರಮುಖ ಮತ್ತು ಚಿಂತಾಜನಕ ವಿಷಯವಾಗಿ ಮಾರ್ಪಟ್ಟಿರುವ ಸೈಬರ್ ದಾಳಿಯನ್ನು ಆರ್ಟಿಕಲ್ 5 ರ ಭಾಷೆಯಲ್ಲಿ ಸೇರಿಸಲು ಮತ್ತು ಅದನ್ನು ನವೀಕರಿಸಲು ಒಪ್ಪಲಾಯಿತು.

 

ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ-(NATO) ಕುರಿತು:

  1. ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ- NATO ಒಂದು ಅಂತರ್ ಸರ್ಕಾರಿ ಮಿಲಿಟರಿ ಮೈತ್ರಿಕೂಟವಾಗಿದೆ.
  2. ಇದನ್ನು ವಾಷಿಂಗ್ಟನ್ ಒಪ್ಪಂದದ ಮೂಲಕ ಏಪ್ರಿಲ್ 4, 1949 ರಂದು ಸ್ಥಾಪಿಸಲಾಯಿತು.
  3. ಈ ಒಪ್ಪಂದಕ್ಕೆ 1949 ರ ಏಪ್ರಿಲ್ 4 ರಂದು ಸಹಿ ಹಾಕಲಾಯಿತು.
  4. ಪ್ರಧಾನ ಕಚೇರಿ – ಬ್ರಸೆಲ್ಸ್, ಬೆಲ್ಜಿಯಂ.
  5. ಮೈತ್ರಿಕೂಟದ ಕಮಾಂಡ್ ಕಾರ್ಯಾಚರಣೆಗಳ ಪ್ರಧಾನ ಕಚೇರಿ – ಮೊನ್ಸ್, ಬೆಲ್ಜಿಯಂ.

 

ಸಂರಚನೆ:

ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ (NATO) ಯು 12 ಮೂಲ ಸ್ಥಾಪಕ ಸದಸ್ಯ ದೇಶಗಳಿಂದ ಸ್ಥಾಪಿತವಾಯಿತು, ಪ್ರಸ್ತುತ ಅದರ ಸದಸ್ಯತ್ವ 30 ಕ್ಕೆ ಹೆಚ್ಚಳಗೊಂಡಿದೆ. ಈ ಗುಂಪಿಗೆ ಸೇರ್ಪಡೆಗೊಂಡ ಇತ್ತೀಚಿನ ದೇಶ ಉತ್ತರ ಮ್ಯಾಸಿಡೋನಿಯಾ, ಇದನ್ನು ಮಾರ್ಚ್ 27, 2020 ರಂದು ನ್ಯಾಟೋದಲ್ಲಿ ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು.

ನ್ಯಾಟೋ ಸದಸ್ಯತ್ವವು ‘ಈ ಒಪ್ಪಂದದ ತತ್ವಗಳನ್ನು ಮತ್ತಷ್ಟು ಹೆಚ್ಚಿಸುವ, ಗೌರವಿಸುವ ಮತ್ತು ಉತ್ತರ ಅಟ್ಲಾಂಟಿಕ್ ಪ್ರದೇಶದ ಸುರಕ್ಷತೆಗೆ ಕೊಡುಗೆ ನೀಡುವ ಯಾವುದೇ ಯುರೋಪಿಯನ್ ದೇಶಕ್ಕೆ’ ಮುಕ್ತವಾಗಿದೆ.

 

ಉದ್ದೇಶಗಳು:

ರಾಜಕೀಯ – ನ್ಯಾಟೋ ಪ್ರಜಾಪ್ರಭುತ್ವ ಮೌಲ್ಯಗಳನ್ನು ಉತ್ತೇಜಿಸುತ್ತದೆ ಮತ್ತು ಸಮಸ್ಯೆಗಳನ್ನು ಪರಿಹರಿಸಲು, ಪರಸ್ಪರ ನಂಬಿಕೆಯನ್ನು ಬೆಳೆಸಲು ಮತ್ತು ದೀರ್ಘಾವಧಿಯಲ್ಲಿ ಸಂಘರ್ಷವನ್ನು ತಡೆಗಟ್ಟಲು ರಕ್ಷಣಾ ಮತ್ತು ಸುರಕ್ಷತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಮಾಲೋಚಿಸಲು ಮತ್ತು ಸಹಕರಿಸಲು ಸದಸ್ಯ ರಾಷ್ಟ್ರಗಳಿಗೆ ಅನುವು ಮಾಡಿಕೊಡುತ್ತದೆ.

ಮಿಲಿಟರಿ – ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸಲು ನ್ಯಾಟೋ ಬದ್ಧವಾಗಿದೆ. ರಾಜತಾಂತ್ರಿಕ ಪ್ರಯತ್ನಗಳು ವಿಫಲವಾದರೆ, ಬಿಕ್ಕಟ್ಟು-ನಿರ್ವಹಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅದು ಮಿಲಿಟರಿ ಶಕ್ತಿಯನ್ನು ಹೊಂದಿದೆ. ಈ ಪ್ರಕ್ರಿಯೆಗಳನ್ನು ನ್ಯಾಟೋದ ಸಂಸ್ಥಾಪಕ ಒಪ್ಪಂದದ (ವಾಷಿಂಗ್ಟನ್ ಒಪ್ಪಂದ) ಸಾಮೂಹಿಕ ರಕ್ಷಣಾ ಷರತ್ತು (ವಿಧಿ 5) ಅಥವಾ ವಿಶ್ವಸಂಸ್ಥೆಯ ಆದೇಶದ ಅಡಿಯಲ್ಲಿ ಏಕಾಂಗಿಯಾಗಿ ಅಥವಾ ಇತರ ದೇಶಗಳು ಮತ್ತು ಅಂತರಾಷ್ಟ್ರೀಯ ಸಂಘಟನೆಗಳ ಸಹಕಾರದೊಂದಿಗೆ ಜಾರಿಗೆ ತರಲಾಗುವುದು.

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (SIPRI) ವರ್ಷದ ಪುಸ್ತಕ 2021.


(Stockholm International Peace Research Institute (SIPRI) Year Book 2021)

 

ಸಂದರ್ಭ:

ಇತ್ತೀಚೆಗೆ, ಸ್ವೀಡಿಷ್ ಥಿಂಕ್ ಟ್ಯಾಂಕ್ (ಸ್ವೀಡನ್ನಿನ ಚಿಂತಕರ ಚಾವಡಿ) ‘ಸ್ಟಾಕ್ಹೋಮ್ ಅಂತರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ’ (Stockholm International Peace Research Institute -SIPRI) ತನ್ನ ವರ್ಷದ ಪುಸ್ತಕ 2021 ಅನ್ನು ಬಿಡುಗಡೆ ಮಾಡಿದೆ.

 

ಪ್ರಮುಖ ಸಂಶೋಧನೆಗಳು:

  1. ಕಳೆದ ವರ್ಷದ ಆರಂಭದಲ್ಲಿ ಇದ್ದ 150 ಪರಮಾಣು ಸಿಡಿತಲೆಗಳಿಗೆ ಹೋಲಿಸಿದರೆ, 2021 ರ ಆರಂಭದಲ್ಲಿ, ಭಾರತವು ಅಂದಾಜು 156 ಪರಮಾಣು ಸಿಡಿತಲೆಗಳನ್ನು ಹೊಂದಿದೆ.
  2. 2020 ರಲ್ಲಿ ಪಾಕಿಸ್ತಾನವು ಹೊಂದಿದ್ದ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆ 160 ಆಗಿದ್ದು, ಈಗ ಅದು 165 ಕ್ಕೆ ಏರಿದೆ.
  3. ಚೀನಾದ ಪರಮಾಣು ಶಸ್ತ್ರಾಗಾರವು 2020 ರ ಆರಂಭದಲ್ಲಿ 320 ಕ್ಕೂ ಹೆಚ್ಚು ಪರಮಾಣು ಶಸ್ತ್ರಾಸ್ತ್ರಗಳನ್ನು ಒಳಗೊಂಡಿತ್ತು, ಇದು 2021 ರಲ್ಲಿ 350 ಕ್ಕೆ ಹೆಚ್ಚಳಗೊಂಡಿದೆ.
  4. ಒಂಬತ್ತು ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರಗಳು – ಯುಎಸ್, ರಷ್ಯಾ, ಬ್ರಿಟನ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ, ಇಸ್ರೇಲ್ ಮತ್ತು ಉತ್ತರ ಕೊರಿಯಾ – 2021 ರ ಆರಂಭದಲ್ಲಿ ಒಟ್ಟು 13,080 ಪರಮಾಣು ಸಿಡಿತಲೆಗಳನ್ನು ಹೊಂದಿದ್ದವು.

 

ಒಟ್ಟಾರೆ, ರಷ್ಯಾ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ ಗಳು ಜಾಗತಿಕ ಪರಮಾಣು ಶಸ್ತ್ರಾಸ್ತ್ರಗಳಲ್ಲಿ 90% ಕ್ಕಿಂತ ಹೆಚ್ಚು ಶಸ್ತ್ರಾಸ್ತ್ರಗಳನ್ನು ಹೊಂದಿವೆ.   

 ಪ್ರಸ್ತುತ ಕಾಳಜಿಗಳು:

ಜಾಗತಿಕ ಮಿಲಿಟರಿ ದಾಸ್ತಾನು ಸಂಗ್ರಹದಲ್ಲಿ ಒಟ್ಟಾರೆ ಶಸ್ತ್ರಾಸ್ತ್ರಗಳ ಸಂಖ್ಯೆ ಹೆಚ್ಚುತ್ತಿರುವಂತೆ ಕಂಡುಬರುತ್ತಿದೆ, ಇದು ಶೀತಲ ಸಮರದ ಅಂತ್ಯದ ನಂತರ ಜಾಗತಿಕ ಪರಮಾಣು ಶಸ್ತ್ರಾಗಾರದ ಕುಸಿತವು ನಿಂತುಹೋಗಿದೆ ಎಂಬುದರ ಆತಂಕಕಾರಿ ಸಂಕೇತವಾಗಿದೆ.

  1. ಪರಮಾಣು ಯುದ್ಧದ ಅಂಚಿನಲ್ಲಿರುವ ಪರಸ್ಪರರ ಸುರಕ್ಷತೆಯನ್ನು ಅಪಾಯಕಾರಿಯಾಗಿ ಹಾಳುಮಾಡುವ ಹೊಸ ತಂತ್ರಜ್ಞಾನಗಳು ಮತ್ತು ಸಾಮರ್ಥ್ಯಗಳನ್ನು ಭಾರತ ಮತ್ತು ಪಾಕಿಸ್ತಾನ ಅನ್ವೇಷಿಸುತ್ತಿರುವುದು ದೊಡ್ಡ ಕಳವಳಕಾರಿ ವಿಷಯವಾಗಿದೆ.
  2. ಭಾರತ-ಪಾಕಿಸ್ತಾನ “ಭವಿಷ್ಯದ ತುರ್ತು ಸಮಯದಲ್ಲಿ ತಪ್ಪು ಲೆಕ್ಕಾಚಾರಗಳು ಅಥವಾ ತಪ್ಪು ತಿಳುವಳಿಕೆಗಳಿಂದಾಗಿ ತಮ್ಮ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯಲ್ಲಿ ಎಡವುವ ಅಪಾಯವನ್ನು ಎದುರಿಸಬಹುದು”.
  3. ಪರಮಾಣು ಶಸ್ತ್ರಸಜ್ಜಿತ ರಾಷ್ಟ್ರವಾಗಿ ಚೀನಾದ ಉದಯಗೊಳ್ಳುತ್ತಿರುವ ಚಿತ್ರಣವು ಭಾರತದ ಭದ್ರತಾ ಸವಾಲುಗಳನ್ನು ಹೆಚ್ಚಿಸುತ್ತಿದೆ.

 

ಪರಮಾಣು ಶಸ್ತ್ರಾಸ್ತ್ರಗಳ ಕುರಿತು ಭಾರತದ ನಿಲುವು:

ಪರಮಾಣು ಶಸ್ತ್ರಾಸ್ತ್ರ ಹೊಂದಿರುವ ದೇಶಗಳ ವಿರುದ್ಧ ಮೊದಲ ಬಳಕೆ  (No First Use– NFU) ಮಾಡಡಿರುವ ನೀತಿ ಮತ್ತು ಪರಮಾಣು ಶಸ್ತ್ರಾಸ್ತ್ರ  ಹೊಂದಿರದ ದೇಶಗಳ ವಿರುದ್ಧ ಬಳಸುವುದಿರುವ’ ನೀತಿಗೆ ಭಾರತ ಬದ್ಧವಾಗಿದೆ.

ಭಾರತದ ಪ್ರಕಾರ, ನಿಶ್ಯಸ್ತ್ರೀಕರಣ ಸಮಾವೇಶವು, (The Conference on Disarmament- CD) ವಿಶ್ವದ ಏಕೈಕ ಬಹುಪಕ್ಷೀಯ ನಿಶ್ಯಸ್ತ್ರೀಕರಣ ಒಪ್ಪಂದದ ಸಮಾಲೋಚನಾ ವೇದಿಕೆಯಾಗಿದೆ, ಮತ್ತು ಈ ವೇದಿಕೆಯ ಮೂಲಕ ಸಮಗ್ರ ಪರಮಾಣು ಶಸ್ತ್ರಾಸ್ತ್ರಗಳ ಸಮಾವೇಶದಡಿಯಲ್ಲಿ ಮಾತುಕತೆ ನಡೆಸಲು ಭಾರತ ಬೆಂಬಲಿಸುತ್ತದೆ.

  1. ನಿಶ್ಯಸ್ತ್ರೀಕರಣದ ಸಮಾವೇಶದಲ್ಲಿ ಫಿಸ್ಸಿಲ್ ಮೆಟೀರಿಯಲ್ ಕಟ್-ಆಫ್ ಟ್ರೀಟಿ (Fissile Material Cut-off Treaty– FMCT) ಹಿನ್ನೆಲೆಯಲ್ಲಿ ಭಾರತ ಕೂಡ ಸಂವಾದಕ್ಕೆ ಬದ್ಧವಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ನ್ಯೂ ಶೆಫರ್ಡ್ ರಾಕೆಟ್ ವ್ಯವಸ್ಥೆ ಎಂದರೇನು?


(New Shephard rocket system)

ಸಂದರ್ಭ:

ಅಮೆಜಾನ್ ಸಂಸ್ಥಾಪಕ ಮತ್ತು ಬಿಲಿಯನೇರ್ ಜೆಫ್ ಬೆಜೋಸ್ ಅವರ ಬಾಹ್ಯಾಕಾಶ ಕಂಪನಿ ಬ್ಲೂ ಒರಿಜಿನ್’ (Blue Origin) ಇತ್ತೀಚೆಗೆ ಪ್ರವಾಸಿಗರನ್ನು ಬಾಹ್ಯಾಕಾಶಕ್ಕೆ ಕರೆದೊಯ್ಯುವ ‘ನ್ಯೂ ಶೆಫರ್ಡ್’ ರಾಕೆಟ್ ವ್ಯವಸ್ಥೆಯಲ್ಲಿ ಮೊದಲ ಆಸನಕ್ಕಾಗಿ ಆನ್‌ಲೈನ್ ಹರಾಜನ್ನು ಪೂರ್ಣಗೊಳಿಸಿದೆ.

ಜುಲೈ 20 ರಂದು ನ್ಯೂ ಶೆಫರ್ಡ್ ತನ್ನ ಮೊದಲ ಮಾನವಸಹಿತ ಹಾರಾಟವನ್ನು ಮಾಡಲಿದೆ, ಮತ್ತು ವಿಜೇತ ಬಿಡ್ಡು ದಾರನು ಜೆಫ್ ಬೆಜೋಸ್ ಮತ್ತು ಅವನ ಸಹೋದರನೊಂದಿಗೆ ನ್ಯೂ ಶೆಫರ್ಡ್‌ನಲ್ಲಿ ಹಾರಲು ಅವಕಾಶ ಸಿಗುತ್ತದೆ. ಜುಲೈ 20 ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಚಂದ್ರನ ಮೇಲೆ ಇಳಿದ 52 ನೇ ವಾರ್ಷಿಕೋತ್ಸವವನ್ನು ಸಹ ಸೂಚಿಸುತ್ತದೆ.  

 

ಹಿನ್ನೆಲೆ:

ಬ್ಲೂ ಆರಿಜಿನ್ ಆಯೋಜಿಸಿದ್ದ ಹರಾಜಿನಲ್ಲಿ 159 ದೇಶಗಳ 7,600 ಕ್ಕೂ ಹೆಚ್ಚು ಜನರು “ಮೊದಲ ಆಸನ” (first seat) ಕ್ಕಾಗಿ ಬಿಡ್ ಮಾಡಲು ನೋಂದಾಯಿಸಿಕೊಂಡಿದ್ದರು. ಈ ಆಸನವನ್ನು ಅಂತಿಮವಾಗಿ $ 28 ಮಿಲಿಯನ್ ಗೆ ಬಿಡ್ ಕೂಗಿದ್ದವರು ಗೆದ್ದರು.

 

ಏನಿದು ನ್ಯೂ ಶೆಫರ್ಡ್, ರಾಕೆಟ್ ವ್ಯವಸ್ಥೆ?

  1. ಇದು, ಪ್ರವಾಸಿಗರನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಕರೆದೊಯ್ಯುವ ರಾಕೆಟ್ ವ್ಯವಸ್ಥೆಯಾಗಿದೆ.
  2. ಈ ವ್ಯವಸ್ಥೆಯನ್ನು ಬ್ಲೂ ಒರಿಜಿನ್’ ನಿರ್ಮಿಸಿದೆ.
  3. ‘ನ್ಯೂ ​​ಶೆಫರ್ಡ್’ ಗೆ ಬಾಹ್ಯಾಕಾಶಕ್ಕೆ ಹೋದ ಅಮೆರಿಕದ ಮೊದಲ ಗಗನಯಾತ್ರಿ ಅಲನ್ ಶೆಫರ್ಡ್ ಅವರ ಹೆಸರನ್ನು ಇಡಲಾಗಿದೆ.
  4. ಇದು ಬಾಹ್ಯಾಕಾಶದಲ್ಲಿ ಹಾರಲು ಮತ್ತು ಭೂಮಿಯಿಂದ 100 ಕಿ.ಮೀ ಗಿಂತ ಹೆಚ್ಚು ದೂರದಲ್ಲಿ ಬಾಹ್ಯಾಕಾಶ ಉಪಕರಣಗಳ ಪೇಲೋಡ್‌ಗಳನ್ನು (Payloads) ಸಾಗಿಸಲು ಸೌಲಭ್ಯವನ್ನು ಒದಗಿಸುತ್ತದೆ.
  5. ‘ನ್ಯೂ ​​ಶೆಫರ್ಡ್’ ಸಂಪೂರ್ಣ ಮರುಬಳಕೆ ಮಾಡಬಹುದಾದ, ಲಂಬವಾದ ಟೇಕ್-ಆಫ್ ಮತ್ತು ಲಂಬವಾದ ಲ್ಯಾಂಡಿಂಗ್(vertical takeoff and vertical landing space vehicle) ಬಾಹ್ಯಾಕಾಶ ವಾಹನವಾಗಿದೆ.

 

ಈ ಕಾರ್ಯಾಚರಣೆಯ ವೈಜ್ಞಾನಿಕ ಉದ್ದೇಶಗಳು:

  1. ಗಗನಯಾತ್ರಿಗಳು ಮತ್ತು ಸಂಶೋಧನೆ-ಸಂಬಂಧಿತ ಬಾಹ್ಯಾಕಾಶ ಉಪಕರಣಗಳನ್ನು ಕ್ರೆಮನ್ ರೇಖೆಯನ್ನು ಮೀರಿ ಸಾಗಿಸಲು ಈ ಮಿಷನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಕ್ರೆಮನ್ ಲೈನ್’(Karman line) ಎನ್ನುವುದು ಭೂಮಿಯ ವಾತಾವರಣ ಮತ್ತು ಬಾಹ್ಯಾಕಾಶದ ನಡುವೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟ ಬಾಹ್ಯಾಕಾಶ ಗಡಿಯಾಗಿದೆ.
  2. ಈ ವ್ಯವಸ್ಥೆಯನ್ನು ವಿನ್ಯಾಸಗೊಳಿಸುವ ಉದ್ದೇಶವು ಶೈಕ್ಷಣಿಕ ಸಂಶೋಧನೆ, ಸಾಂಸ್ಥಿಕ ತಂತ್ರಜ್ಞಾನ ಅಭಿವೃದ್ಧಿ ಮತ್ತು ಇತರ ಉದ್ಯಮಶೀಲ ಉದ್ಯಮಗಳಿಗೆ ಸ್ಥಳಾವಕಾಶಕ್ಕೆ ಸುಗಮ ಮತ್ತು ವೆಚ್ಚ-ಪರಿಣಾಮಕಾರಿ ಪ್ರವೇಶವನ್ನು ಒದಗಿಸುವುದು.

 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗೃತಿ.

ಬಾಸ್ಮತಿ ಅಕ್ಕಿಗಾಗಿ ಭಾರತ ಮತ್ತು ಪಾಕಿಸ್ತಾನ ಗಳ ಹೋರಾಟ:


(India and Pakistan’s battle over basmati)  

ಸಂದರ್ಭ:

ವಿಶ್ವದ ಅತಿದೊಡ್ಡ ಬಾಸ್ಮತಿ ಅಕ್ಕಿ ರಫ್ತುದಾರನಾದ ಭಾರತವು, ಯುರೋಪಿಯನ್ ಒಕ್ಕೂಟದ ಕೃಷಿ ಉತ್ಪನ್ನಗಳು ಮತ್ತು ಆಹಾರ ಪದಾರ್ಥಗಳಿಗಾಗಿನ ಗುಣಮಟ್ಟದ ಯೋಜನೆಗಳ(Council on Quality Schemes for Agricultural Products and Foodstuffs) ಮಂಡಳಿಯಿಂದ ಸಂರಕ್ಷಿತ ಭೌಗೋಳಿಕ ಸೂಚಿ (protected geographical indication -PGI) ಸ್ಥಾನಮಾನಕ್ಕಾಗಿ ಅರ್ಜಿ ಸಲ್ಲಿಸಿದೆ. ಇದು ಭಾರತಕ್ಕೆ ‘ಬಾಸ್ಮತಿ’ ಹೆಸರಿನಲ್ಲಿ ಯುರೋಪಿಯನ್ ಒಕ್ಕೂಟದಲ್ಲಿ ಏಕಮಾತ್ರ ಮಾಲೀಕತ್ವವನ್ನು ನೀಡುತ್ತದೆ.

 

ಈಗ ಎದುರಾಗಿರುವ ಸಮಸ್ಯೆ ಏನು?

ಭಾರತವನ್ನು ಹೊರತುಪಡಿಸಿ, ಬಾಸ್ಮತಿ ಅಕ್ಕಿ ರಫ್ತು ಮಾಡುವ ವಿಶ್ವದ ಏಕೈಕ ದೇಶವಾದ ಪಾಕಿಸ್ತಾನವು ವಿಶೇಷವಾಗಿ ಐರೋಪ್ಯ ಒಕ್ಕೂಟವು ಪಾಕಿಸ್ತಾನದ ಬಾಸ್ಮತಿಗೆ ಪ್ರಮುಖ ಮಾರುಕಟ್ಟೆಯಾಗಿರುವುದರಿಂದ  ಭಾರತದ ಈ ಕ್ರಮವನ್ನು ಅದು ವಿರೋಧಿಸಿದೆ. ಭಾರತವು ಬಾಸ್ಮತಿಗೆ ‘ಪಿಜಿಐ ಟ್ಯಾಗ್’ ಪಡೆಯುವುದರಿಂದ ಅದರ ರಫ್ತು ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ, ಆದ ಕಾರಣ ಇದನ್ನು ವಿರೋಧಿಸುವುದಾಗಿ ತಿಳಿಸಿದೆ.

 

ಈಗ ಏನಾಗಿದೆ?

ಪಾಕಿಸ್ತಾನವು ಮಾರ್ಚ್ 2020 ರಲ್ಲಿ ಭೌಗೋಳಿಕ ಸೂಚಕಗಳು (ನೋಂದಣಿ ಮತ್ತು ಸಂರಕ್ಷಣೆ) (Geographical Indications (Registration and Protection) Act) ಕಾಯ್ದೆಯನ್ನು ಜಾರಿಗೆ ತಂದಿತು, ಇದರ ಅಡಿಯಲ್ಲಿ, ಬಾಸ್ಮತಿ ಅಕ್ಕಿಯ ಮೇಲೆ ಏಕೈಕ ಹಕ್ಕನ್ನು’ ನೋಂದಾಯಿಸಲು ಭಾರತ ಮಾಡಿದ ಅರ್ಜಿಯನ್ನು ವಿರೋಧಿಸುವ ಹಕ್ಕನ್ನು ಪಾಕಿಸ್ತಾನಕ್ಕೆ ನೀಡಲಾಗಿದೆ.

ಆದರೆ ಭಾರತವು ಸೆಪ್ಟೆಂಬರ್ 11 ರಂದು ಯುರೋಪಿಯನ್ ಒಕ್ಕೂಟದ ಅಧಿಕೃತ ಜರ್ನಲ್‌ನಲ್ಲಿ ಪ್ರಕಟಿಸಿದ ಅರ್ಜಿಯಲ್ಲಿ, ಬಾಸ್ಮತಿಯನ್ನು ಭಾರತೀಯ ಮೂಲದ ಉತ್ಪನ್ನವೆಂದು ಘೋಷಿಸಿದೆ.

 

ಐರೋಪ್ಯ ಒಕ್ಕೂಟದ ಅಧಿಕೃತ ಜರ್ನಲ್ ಪ್ರಕಾರ, ಯಾವುದೇ ದೇಶವು ಅದು ಪ್ರಕಟಣೆಯಾದ ದಿನಾಂಕದಿಂದ ಮೂರು ತಿಂಗಳೊಳಗೆ ಯುರೋಪಿಯನ್ ಪಾರ್ಲಿಮೆಂಟಿನ ಆರ್ಟಿಕಲ್ 50 (2) (ಎ) ರೆಗ್ಯುಲೇಷನ್ಸ್ (EU) ಮತ್ತು ಯುರೋಪಿಯನ್ ಒಕ್ಕೂಟದ ಕೃಷಿ ಉತ್ಪನ್ನಗಳು ಮತ್ತು ಆಹಾರ ಪದಾರ್ಥಗಳಿಗಾಗಿನ ಗುಣಮಟ್ಟದ ಯೋಜನೆಗಳ ಮಂಡಳಿಯಲ್ಲಿ ಈ ಕುರಿತು ಹೆಸರನ್ನು ನೋಂದಾಯಿಸುವ ಅರ್ಜಿಯನ್ನು ವಿರೋಧಿಸಬಹುದು.

 

ಪಾಕಿಸ್ತಾನದ ವಾದ:

ತಾನು ಬಾಸ್ಮತಿ ಅಕ್ಕಿಯ ಪ್ರಮುಖ ಉತ್ಪಾದಕ ಎಂದು ಪಾಕಿಸ್ತಾನ ಹೇಳಿದೆ ಮತ್ತು ‘ಬಾಸ್ಮತಿ ಅಕ್ಕಿಯ ಮೇಲೆ ಏಕಮಾತ್ರ ಹಕ್ಕು ಸಾಧಿಸಲು ಭಾರತವು ಸಲ್ಲಿಸಿರುವ ಅರ್ಜಿಯು ಅನುಚಿತವಾಗಿದೆ ಎಂದು ವಾದಿಸಿದೆ.

 

ಹಿನ್ನೆಲೆ:

2010 ರ ಮೇ ನಲ್ಲಿ, ಪಂಜಾಬ್, ಹರಿಯಾಣ, ದೆಹಲಿ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಪಶ್ಚಿಮ ಉತ್ತರ ಪ್ರದೇಶ ಮತ್ತು ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳಲ್ಲಿ ಬೆಳೆದ ‘ಬಾಸ್ಮತಿ’ ಗೆ ಭೌಗೋಳಿಕ ಸೂಚಕ (GI) ಸ್ಥಾನಮಾನ ನೀಡಲಾಯಿತು.

 

ಭೌಗೋಳಿಕ ಸೂಚಕ (GI) ದ ಕುರಿತು:

GI ಮುಖ್ಯವಾಗಿ ನಿರ್ದಿಷ್ಟ ಭೌಗೋಳಿಕ ಪ್ರದೇಶದಿಂದ ಪಡೆಯಲಾದ, ಕೃಷಿ, ನೈಸರ್ಗಿಕ ಅಥವಾ ತಯಾರಿಸಿದ ಉತ್ಪನ್ನವಾಗಿದೆ (ಕರಕುಶಲ ವಸ್ತುಗಳು ಮತ್ತು ಕೈಗಾರಿಕಾ ವಸ್ತುಗಳು).

  1. ವಿಶಿಷ್ಟವಾಗಿ, ಅಂತಹ ಹೆಸರು ಗುಣಮಟ್ಟ ಮತ್ತು ವಿಶಿಷ್ಟತೆಯ ಭರವಸೆಯನ್ನು ನೀಡುತ್ತದೆ, ಇದು ಮೂಲಭೂತವಾಗಿ ಅದರ ಮೂಲದ ಸ್ಥಳಕ್ಕೆ ಕಾರಣವಾಗಿದೆ.
  2. ಒಂದು ಉತ್ಪನ್ನವನ್ನು ಅದು ಸಿದ್ಧಗೊಳ್ಳುವ ಅಥವಾ ಉತ್ಪಾದನೆ ಆಗುವ ಭೌಗೋಳಿಕ ಸ್ಥಳದಿಂದ ಗುರುತಿಸಿದರೆ, ಅದರ ಆಧಾರದ ಮೇಲೆಯೇ ಅದರ ಗುಣಮಟ್ಟವನ್ನು ನಿರ್ಧರಿಸುವುದಕ್ಕೆ ಭೌಗೋಳಿಕ ಸೂಚಿಕೆ ಅಥವಾ ಜಿಯಾಗ್ರಫಿಕಲ್ ಇಂಡಿಕೇಷನ್ಸ್ (GI) ಎಂದು ಕರೆಯಲಾಗುತ್ತದೆ.

 

ಭೌಗೋಳಿಕ ಸೂಚಕದ (GI TAG) ನ ಪ್ರಯೋಜನಗಳು:

GI ರಕ್ಷಣೆಯನ್ನು ನೀಡಿದ ನಂತರ, ಇತರ ತಯಾರಕರು ಇದೇ ರೀತಿಯ ಉತ್ಪನ್ನಗಳನ್ನು ಇದೇ ಹೆಸರಿನಲ್ಲಿ ಮಾರಾಟ ಮಾಡುವ ಮೂಲಕ ಬೌಧ್ಧಿಕ ಹಕ್ಕನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಮತ್ತು ಆ ಉತ್ಪನ್ನದ ಸತ್ಯಾಸತ್ಯತೆಯ ಬಗ್ಗೆ ಇದು ಗ್ರಾಹಕರಿಗೆ ನೆಮ್ಮದಿಯನ್ನು ಅಥವಾ ಭರವಸೆಯನ್ನು ನೀಡುತ್ತದೆ.

 

ಭೌಗೋಳಿಕ ಸೂಚಕದ ನೋಂದಾಯಿತ ಮಾಲೀಕರು ಯಾರು?

  1. ಕಾನೂನಿನ ಮೂಲಕ ಅಥವಾ ಅಡಿಯಲ್ಲಿ ಸ್ಥಾಪಿಸಲಾದ ವ್ಯಕ್ತಿಗಳ,ತಯಾರಕರ ಯಾವುದೇ ಸಂಘ, ಸಂಘಟನೆ ಅಥವಾ ಅಧಿಕಾರದ ಯಾವುದೇ ಸಂಘವು ನೋಂದಾಯಿತ ಮಾಲೀಕರಾಗಿರಬಹುದು. ಅಥವಾ
  2. ಭೌಗೋಳಿಕ ಸೂಚಿಕೆಗಳ ನೋಂದಣಿಗೆ, ಉತ್ಪಾದಕರು, ಯಾವುದೇ ವ್ಯಕ್ತಿಗಳ ಸಂಘಟನೆ, ಕಾನೂನು ರೀತ್ಯಾ ಸ್ಥಾಪಿತವಾದ ಸಂಘ ಸಂಸ್ಥೆಗಳು ನೋಂದಣಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿದಾರರು ಉತ್ಪಾದಕರ ಹಿತಾಸಕ್ತಿಯನ್ನು ಪ್ರತಿನಿಧಿಸಬೇಕು.
  3. ಅರ್ಜಿ ಸಲ್ಲಿಸಿದ ಭೌಗೋಳಿಕ ಸೂಚಕಕ್ಕೆ ನೋಂದಾಯಿತ ಮಾಲೀಕರಾಗಿ ಅವರ ಹೆಸರನ್ನು ರಿಜಿಸ್ಟರ್ ಆಫ್ ಜಿಯಾಗ್ರಫಿಕಲ್ ಇಂಡಿಕೇಶನ್‌ನಲ್ಲಿ ನಮೂದಿಸಬೇಕು.

 

ಭೌಗೋಳಿಕ ಸೂಚಕದ ನೋಂದಣಿಯು ಎಷ್ಟು ಕಾಲ ಮಾನ್ಯವಾಗಿರುತ್ತದೆ?

  1. ಭೌಗೋಳಿಕ ಸೂಚ್ಯಂಕದ ನೋಂದಣಿಯು 10 ವರ್ಷಗಳ ಅವಧಿಗೆ ಮಾನ್ಯವಾಗಿರುತ್ತದೆ/ ಊರ್ಜಿತದಲ್ಲಿರುತ್ತದೆ.
  2. ಪ್ರತಿ 10 ವರ್ಷಗಳ ಅವಧಿಗೆ ಇದನ್ನು ನಿಯತಕಾಲಿಕವಾಗಿ ನವೀಕರಿಸಬಹುದು. ನವೀಕರಿಸದಿದ್ದರೆ ನೋಂದಣಿ ದಾಖಲೆಯಿಂದ ತೆಗೆದು ಹಾಕಲಾಗುತ್ತದೆ.

 

ಭೌಗೋಳಿಕ ಸೂಚಕಗಳಿಗೆ ಸಮ್ಮತಿ ನೀಡಿ  ನಿಯಂತ್ರಿಸುವವರು ಯಾರು?

ಅಂತರರಾಷ್ಟ್ರೀಯ ಮಟ್ಟದಲ್ಲಿ :

ಬೌದ್ಧಿಕ ಆಸ್ತಿ ಹಕ್ಕುಗಳ (IPR) ಒಂದು ಅಂಶವಾಗಿ ಕೈಗಾರಿಕಾ ಆಸ್ತಿ ಸಂರಕ್ಷಣೆಗಾಗಿನ ಪ್ಯಾರಿಸ್ ಒಪ್ಪಂದದ ಅಡಿಯಲ್ಲಿ (under the Paris Convention for the Protection of Industrial Property) ಭೌಗೋಳಿಕ ಸೂಚಕಗಳು ಒಳಗೊಂಡಿವೆ. ವಿಶ್ವ ವ್ಯಾಪಾರ ಸಂಸ್ಥೆ (WTO) ಯ ವ್ಯಾಪಾರ-ಸಂಬಂಧಿತ ಅಂಶಗಳ ಕುರಿತು ಬೌದ್ಧಿಕ ಆಸ್ತಿ ಹಕ್ಕುಗಳ ಒಪ್ಪಂದ (Trade-Related Aspects of Intellectual Property Rights -TRIPS) ದಿಂದ  GI ಅನ್ನು ನಿಯಂತ್ರಿಸಲಾಗುತ್ತದೆ.

 

ಭಾರತದಲ್ಲಿ:

ಭಾರತದಲ್ಲಿ, ಭೌಗೋಳಿಕ ಸೂಚಕಗಳ ನೋಂದಣಿಯನ್ನು ಸರಕುಗಳ ಭೌಗೋಳಿಕ ಸೂಚಕಗಳ  (ನೋಂದಣಿ ಮತ್ತು ಸಂರಕ್ಷಣೆ) ಕಾಯ್ದೆ 1999, (Geographical Indications of Goods (Registration and Protection) Act, 1999) ರ ಮೂಲಕ ನಿಯಂತ್ರಿಸಲಾಗುತ್ತದೆ, ಇದು 2003 ರ ಸೆಪ್ಟೆಂಬರ್ 15ರಂದು ಜಾರಿಗೆ ಬಂದಿದೆ. ಭೌಗೋಳಿಕ ಸೂಚಿಕೆಗಳ ನೋಂದಣಿಯ ಕೇಂದ್ರ ಕಚೇರಿ, ಚೆನ್ನೈ, ತಮಿಳುನಾಡಿನಲ್ಲಿದೆ. ಭಾರತದಲ್ಲಿ  GI ಟ್ಯಾಗ್‌ ಪಡೆದ ಮೊಟ್ಟಮೊದಲ ಉತ್ಪನ್ನವೆಂದರೆ ಡಾರ್ಜಿಲಿಂಗ್ ಚಹಾ,2004-05ರಲ್ಲಿ.

ಭಾರತದಲ್ಲಿ ಅತಿ ಹೆಚ್ಚು (42) ಉತ್ಪನ್ನಗಳಿಗೆ ಭೌಗೋಳಿಕ ಸೂಚಿಕೆ ಪಡೆದ ರಾಜ್ಯವೆಂದರೆ ಕರ್ನಾಟಕ.

 


 ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್:

(National Securities Depository Limited)

  1.  ಆಗಸ್ಟ್ 1996 ರಲ್ಲಿ ‘ಠೇವಣಿ ಕಾಯ್ದೆ’ ಜಾರಿಯೊಂದಿಗೆ 1996 ರಲ್ಲಿ NSDL ಸ್ಥಾಪನೆಗೆ ದಾರಿ ಮಾಡಿಕೊಟ್ಟಿತು.
  2. ಇದು ಭಾರತೀಯ ಬಂಡವಾಳ ಮಾರುಕಟ್ಟೆಯಲ್ಲಿ ಅಭೌತಿಕ ರೂಪದಲ್ಲಿ ಹಿಡಿದಿಟ್ಟುಕೊಂಡಿರುವ ಮತ್ತು ಸ್ಥಾಪಿಸಲಾದ ಹೆಚ್ಚಿನ ಭದ್ರತೆಗಳನ್ನು ನಿರ್ವಹಿಸುತ್ತದೆ.
  3. ದೇಶದ ಬಂಡವಾಳ ಮಾರುಕಟ್ಟೆಯಲ್ಲಿ ಹೂಡಿಕೆದಾರರು ಮತ್ತು ದಲ್ಲಾಳಿಗಳಿಗೆ ಸಹಾಯ ಮಾಡಲು NSDL ಕಾರ್ಯನಿರ್ವಹಿಸುತ್ತದೆ.
  4. ದಕ್ಷತೆಯನ್ನು ಹೆಚ್ಚಿಸುವ, ಅಪಾಯವನ್ನು ಕಡಿಮೆ ಮಾಡುವ ಮತ್ತು ವೆಚ್ಚವನ್ನು ಕಡಿಮೆ ಮಾಡುವ ವಸಾಹತು ಪರಿಹಾರಗಳನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತೀಯ ಮಾರುಕಟ್ಟೆಗಳ ಸುರಕ್ಷತೆ ಮತ್ತು ಉತ್ತಮತೆಯನ್ನು ಖಚಿತಪಡಿಸುವ ಗುರಿ ಹೊಂದಿದೆ.

 

EU ಸಾಮಾನ್ಯೀಕೃತ ವ್ಯವಸ್ಥೆಗಳ ಆದ್ಯತೆಗಳು (GSP):

  1. ಇತ್ತೀಚೆಗೆ, ಯುರೋಪಿಯನ್ ಪಾರ್ಲಿಮೆಂಟ್ ಶ್ರೀಲಂಕಾಕ್ಕೆ ನೀಡಿರುವ GSP+ ಸ್ಥಾನಮಾನವನ್ನು ತಾತ್ಕಾಲಿಕವಾಗಿ ಹಿಂತೆಗೆದುಕೊಳ್ಳುವುದನ್ನು ಪರಿಗಣಿಸಲು ಯುರೋಪಿಯನ್ ಆಯೋಗವನ್ನು ಒತ್ತಾಯಿಸಿ ನಿರ್ಣಯವನ್ನು ಅಂಗೀಕರಿಸಿತು.
  2. ಸಾಮಾನ್ಯೀಕೃತ ವ್ಯವಸ್ಥೆಗಳ ಆದ್ಯತೆಗಳು (Generalised System of Preferences- GSP) ದುರ್ಬಲ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಯುರೋಪಿಯನ್ ಒಕ್ಕೂಟ ಕ್ಕೆ ರಫ್ತು ಮಾಡುವ ಸರಕುಗಳ ಮೇಲೆ ಕಡಿಮೆ ಅಥವಾ ಯಾವುದೇ ಸುಂಕವನ್ನು ಪಾವತಿಸದಿರಲು ಅನುವು ಮಾಡಿಕೊಡುತ್ತದೆ. ಇದು ಈ ದೇಶಗಳಿಗೆ EU ಮಾರುಕಟ್ಟೆಗೆ ಗಮನಾರ್ಹ ಪ್ರವೇಶವನ್ನು ಒದಗಿಸುತ್ತದೆ ಮತ್ತು ಅವುಗಳ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.

 

ಹಿನ್ನೆಲೆ:

ಮಾನವ ಹಕ್ಕುಗಳು, ಕಾರ್ಮಿಕ ಪರಿಸ್ಥಿತಿಗಳು, ಪರಿಸರದ ರಕ್ಷಣೆ ಮತ್ತು ಉತ್ತಮ ಆಡಳಿತದ ಕುರಿತು 27 ಅಂತರರಾಷ್ಟ್ರೀಯ ಸಂಪ್ರದಾಯಗಳನ್ನು ಜಾರಿಗೆ ತರುವ ಬದ್ಧತೆಯ ಮೇಲೆ ಶ್ರೀಲಂಕಾಕ್ಕೆ 2017 ರಲ್ಲಿ GSP+ ಅಥವಾ ಯುರೋಪಿಯನ್ ಯೂನಿಯನ್‌ ನ ಸಾಮಾನ್ಯೀಕೃತ ವ್ಯವಸ್ಥೆಗಳ ಆದ್ಯತೆ (GSP)ಯ ಸ್ಥಾನಮಾನ ನೀಡಲಾಯಿತು.

  

ಜೀವನ ವಾಯು:

 ದೇಶದ ಮೊದಲ ವಿದ್ಯುತ್ ಮುಕ್ತ CPAP ಸಾಧನ ‘ಜೀವನ್ ವಾಯು’ (Jivan Vayu) ಅನ್ನು IIT ರೋಪರ್ ಅಭಿವೃದ್ಧಿಪಡಿಸಿದ್ದಾರೆ.

ಇದನ್ನು CPAP ಯಂತ್ರಕ್ಕೆ ಪರ್ಯಾಯವಾಗಿ ಬಳಸಬಹುದು.

  1. ಆದಾಗ್ಯೂ, ವಿದ್ಯುತ್ ಇಲ್ಲದೆ ಕಾರ್ಯನಿರ್ವಹಿಸುವ ದೇಶದ ಮೊದಲ ಸಾಧನ ಇದಾಗಿದೆ, ಮತ್ತು ಆಸ್ಪತ್ರೆಗಳಲ್ಲಿನ ಆಮ್ಲಜನಕ ಉತ್ಪಾದನಾ ಘಟಕಗಳಾದ ಆಮ್ಲಜನಕ ಸಿಲಿಂಡರ್‌ಗಳು ಮತ್ತು ಆಮ್ಲಜನಕದ ಪೈಪ್‌ಲೈನ್‌ಗಳಿಗೆ ಹೊಂದಿಕೊಳ್ಳುತ್ತದೆ.

CPAP ಎಂದರೇನು?

  1.  ಸ್ಲೀಪ್ ಅಪ್ನಿಯಾ ಎಂದು ಕರೆಯಲ್ಪಡುವ ನಿದ್ರೆಯ ಸಮಯದಲ್ಲಿ ಉಸಿರಾಟದ ತೊಂದರೆ ಇರುವ ರೋಗಿಗಳಿಗೆ ನಿರಂತರ ಧನಾತ್ಮಕ ವಾಯುಮಾರ್ಗ ಒತ್ತಡ (Continuous positive airway pressure – CPAP) ವು, ಒಂದು ಚಿಕಿತ್ಸಾ ವಿಧಾನವಾಗಿದೆ. ಇದರಿಂದಾಗಿ ರೋಗಿಯು ಹೆಚ್ಚು ಸುಲಭವಾಗಿ ಉಸಿರಾಡಬಹುದಾಗಿದೆ.
  2. CPAP ಯಂತ್ರವು, ರೋಗಿಯ ಗಂಟಲಿನಲ್ಲಿ ಗಾಳಿಯ ಒತ್ತಡವನ್ನು ಹೆಚ್ಚಿಸುತ್ತದೆ,ಆ ಮೂಲಕ ಉಸಿರಾಡುವಾಗ ಗಾಳಿಯ ಮಾರ್ಗವು ಕುಸಿಯದಂತೆ ನೋಡಿಕೊಳ್ಳುತ್ತದೆ.

 

ಜರ್ದಾಲು ಮಾವು:

  1. ಜರ್ದಾಲು ಅಥವಾ ಝರ್ದಾಲು ಮಾವು ಭಾಗಲ್ಪುರ್ ಮತ್ತು ಪಕ್ಕದ ಬಿಹಾರದ ಜಿಲ್ಲೆಗಳಲ್ಲಿ ಬೆಳೆಯುವ ಒಂದು ವಿಶಿಷ್ಟವಾದ ಮಾವಿನಕಾಯಿಯಾಗಿದೆ.
  2. ಇದಕ್ಕೆ 2018 ರಲ್ಲಿ GI ಟ್ಯಾಗ್ ಅನ್ನು ನೀಡಲಾಯಿತು.

  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos