ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 1:
1. ಪೂರ್ಣ ಚಂದ್ರ ಗ್ರಹಣ ಮತ್ತು ಸೂಪರ್ ಮೂನ್.
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ವಾಕ್ ಮತ್ತು ಅಭಿವ್ಯಕ್ತಿಗೆ ಸಂಬಂಧಿಸಿದ ಅಪರಾಧಗಳನ್ನು ವ್ಯಾಖ್ಯಾನಿಸಲಿರುವ ಸಮಿತಿ.
2. ಒನ್ ಸ್ಟಾಪ್ ಸೆಂಟರ್ ಯೋಜನೆ.
3. ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿನ ದಮನಕಾರಿ ನೀತಿಯ ಕುರಿತು ಬ್ರಿಟನ್ನಲ್ಲಿ ಸ್ಥಾಪಿಸಲಾದ ಜನತಾ ನ್ಯಾಯಮಂಡಳಿಯನ್ನು ಖಂಡಿಸಿದ ಚೀನಾ.
4. ಗಾಜಾಪಟ್ಟಿಗೆ ಬೆಂಬಲ ನೀಡುವ ಭರವಸೆ ನೀಡಿದ ಬ್ಲಿಂಕೆನ್.
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ಗ್ರೀನ್ಲ್ಯಾಂಡ್ ಐಸ್ ಶೀಟ್ಗೆ ಸಂಬಂಧಿಸಿರುವ ನದಿಗಳಲ್ಲಿ ಹೆಚ್ಚಿನ ಪ್ರಮಾಣದ ಪಾದರಸ ಕಂಡುಬಂದಿದೆ.
2. ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಸಂಸ್ಥೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ )ನಿಯಮಗಳು, 2021.
ಸಾಮಾನ್ಯ ಅಧ್ಯಯನ ಪತ್ರಿಕೆ 4:
1. ವೈಮಾನಿಕ ವಿವಾಹ: DGCA ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ ತಜ್ಞರು.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
1. ಪೀಡಿಯಾಟ್ರಿಕ್ ಇನ್ಫ್ಲಮೇಟರಿ ಮಲ್ಟಿಸಿಸ್ಟಮ್ ಸಿಂಡ್ರೋಮ್ (PIMS-TS).
2. WHO ಬಯೋಹಬ್ ಉಪಕ್ರಮ.
3. ಉಡುಪಿಯಲ್ಲಿ ದೊರೆತ ಬುದ್ಧನ ಸಣ್ಣ/ಚಿಕಣಿ ಪ್ರತಿಮೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 1
ವಿಷಯಗಳು: ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆಗಳು ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು, ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಸ್ಥಳ- ನಿರ್ಣಾಯಕ ಭೌಗೋಳಿಕ ವೈಶಿಷ್ಟ್ಯಗಳಲ್ಲಿನ ಬದಲಾವಣೆಗಳು (ಸಾಗರಗಳು ಮತ್ತು ಐಸ್-ಕ್ಯಾಪ್ಗಳು ಸೇರಿದಂತೆ) ಮತ್ತು ಸಸ್ಯ ಮತ್ತು ಪ್ರಾಣಿ ಮತ್ತು ಅಂತಹ ಬದಲಾವಣೆಗಳ ಪರಿಣಾಮಗಳು.
ಪೂರ್ಣ ಚಂದ್ರ ಗ್ರಹಣ ಮತ್ತು ಸೂಪರ್ ಮೂನ್:
(Total lunar eclipse and supermoon)
ಸಂದರ್ಭ:
ಮೇ 26 ರಂದು, ಪೂರ್ಣ ಚಂದ್ರಗ್ರಹಣ ಮತ್ತು ‘ಸೂಪರ್ಮೂನ್’, ಎಂಬ ಎರಡು ಖಗೋಳ ವಿದ್ಯಮಾನಗಳು ಸಂಭವಿಸುತ್ತವೆ.
- ವಿಶೇಷವಾಗಿ, ಸೂಪರ್ಮೂನ್ ಮತ್ತು ಪೂರ್ಣ ಚಂದ್ರಗ್ರಹಣದ ವಿದ್ಯಮಾನಗಳು ಸುಮಾರು ಆರು ವರ್ಷಗಳ ನಂತರ ಏಕಕಾಲದಲ್ಲಿ ಘಟಿಸುತ್ತಿವೆ.
ಸೂಪರ್ ಮೂನ್ ಎಂದರೇನು?
ಚಂದ್ರನ ಕಕ್ಷೆಯು ಭೂಮಿಗೆ ಹತ್ತಿರದಲ್ಲಿದ್ದಾಗ ಮತ್ತು ಅದೇ ಸಮಯದಲ್ಲಿ ಚಂದ್ರನು ಪೂರ್ಣ ಗಾತ್ರದಲ್ಲಿರುವ, ಈ ಸ್ಥಿತಿಯನ್ನು ‘ಸೂಪರ್ಮೂನ್’ ಎಂದು ಕರೆಯಲಾಗುತ್ತದೆ.
ಭೂಮಿಗೆ ಹತ್ತಿರದಲ್ಲಿರುವುದರಿಂದ, ಚಂದ್ರ ಭೂಮಿಯಿಂದ ಅತೀ ಸಮೀಪದಲ್ಲಿ ಗೋಚರಿಸಲಿದ್ದಾನೆ. ಹೀಗಾಗಿ, ಚಂದ್ರನು ಸಾಮಾನ್ಯಕ್ಕಿಂತಲೂ ಹೆಚ್ಚು ದೊಡ್ಡದಾಗಿ ಕಾಣಿಸುತ್ತಾನೆ.
ಒಂದು ವಿಶೇಷ ವರ್ಷದಲ್ಲಿ,ಎರಡರಿಂದ ನಾಲ್ಕು ಪೂರ್ಣ ಸೂಪರ್ಮೂನ್ಗಳು (Full Supermoons) ಮತ್ತು ಸತತವಾಗಿ ಎರಡರಿಂದ ನಾಲ್ಕು ಹೊಸ ಸೂಪರ್ಮೂನ್ಗಳು (New Supermoons) ಸಂಭವಿಸಬಹುದು.
*ದಯವಿಟ್ಟು ಗಮನಿಸಿ:
ಚಂದ್ರನು ತನ್ನ ಅಕ್ಷದ ಸುತ್ತ ಸುತ್ತುತ್ತ ಭೂಮಿಯ ಸುತ್ತಲೂ ಸುತ್ತುವುದನ್ನು ಚಂದ್ರನ ಪರಿಭ್ರಮಣ ಎನ್ನುವರು. ಹೀಗೆ ಪರಿಭ್ರಮಣದ ಒಂದು ಸಮಯದಲ್ಲಿ, ಇವೆರಡರ ನಡುವಿನ ಅಂತರವು ಕಡಿಮೆ ಆದಾಗ ಅಂದರೆ ಚಂದ್ರ ಮತ್ತು ಭೂಮಿಯು ಪರಸ್ಪರ ಹತ್ತಿರದಲ್ಲಿರುವ ಈ ಸ್ಥಿತಿಯನ್ನು “ನೀಚಸ್ಥಾನ” (Perigee) ಎಂದು (ಸರಾಸರಿ ಅಂತರ, ಸುಮಾರು 360,000 ಕಿ.ಮೀ) ಕರೆಯಲಾಗುತ್ತದೆ ಮತ್ತು, ಭೂಮಿಯನ್ನು ಚಂದ್ರನು ಪರಿಭ್ರಮಿಸುವ ಒಂದು ಸಮಯದಲ್ಲಿ, ಚಂದ್ರನು ಭೂಮಿಯಿಂದ ಅತಿ ಹೆಚ್ಚು ದೂರದಲ್ಲಿರುವಾಗ (ಸುಮಾರು 405,000 ಕಿ.ಮೀ), ಅದನ್ನು ‘ಉಚ್ಚ ಸ್ಥಾನ’ (Apogee) ಎಂದು ಕರೆಯಲಾಗುತ್ತದೆ.
ಮೇ 26 ರಂದು ನಡೆಯುವ ಖಗೋಳ ವಿದ್ಯಮಾನದ ಸಂದರ್ಭದಲ್ಲಿ ಚಂದ್ರನ ಬಣ್ಣವು ‘ಕೆಂಪು’ ಆಗಿ ಕಾಣಿಸಿಕೊಳ್ಳಲು ಕಾರಣವೇನು?
ಪೂರ್ಣ ಚಂದ್ರ ಗ್ರಹಣದಿಂದಾಗಿ, ಚಂದ್ರನೂ ಕೆಂಪು ಬಣ್ಣದಲ್ಲಿ ಕಾಣಿಸುತ್ತದೆ. ಏಕೆಂದರೆ, ಈ ಸಮಯದಲ್ಲಿ ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಚಲಿಸುತ್ತದೆ, ಆಗ ಭೂಮಿಯು ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳದಂತೆ ತಡೆಯುತ್ತದೆ. ಮತ್ತು, ಈ ಸೌರ ಬೆಳಕು ಭೂಮಿಯ ವಾತಾವರಣದ ಮೂಲಕ ಹಾದುಹೋದಾಗ, ಭೂಮಿಯ ನೆರಳಿನ ಅಂಚುಗಳು ಹಗುರವಾಗುತ್ತವೆ / ಮೃದುಗೊಳ್ಳುತ್ತವೆ,ಇದರಿಂದಾಗಿ ಚಂದ್ರನು ಗಾಢ ಗುಲಾಬಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಾನೆ. ಅಥವಾ
ಚಂದ್ರನು ಭೂಮಿಯ ನೆರಳಿನಿಂದ ಸಂಪೂರ್ಣವಾಗಿ ಆವರಿಸಿದಾಗ ಅದು ಕಪ್ಪಾಗುತ್ತದೆ, ಆದರೆ ಸಂಪೂರ್ಣವಾಗಿ ಕಪ್ಪು ಬಣ್ಣಕ್ಕೆ ಹೋಗುವುದಿಲ್ಲ. ಬದಲಾಗಿ, ಇದು ಕೆಂಪು ಬಣ್ಣವನ್ನು ತೆಗೆದುಕೊಳ್ಳುತ್ತದೆ, ಅದಕ್ಕಾಗಿಯೇ ಒಟ್ಟು ಚಂದ್ರ ಗ್ರಹಣಗಳನ್ನು ಕೆಲವೊಮ್ಮೆ ಕೆಂಪು ಅಥವಾ ರಕ್ತ ಚಂದ್ರ ಎಂದು ಕರೆಯಲಾಗುತ್ತದೆ.
ಸೂರ್ಯನ ಬೆಳಕು ಗೋಚರ ಬೆಳಕಿನ ಎಲ್ಲಾ ಬಣ್ಣಗಳನ್ನು ಹೊಂದಿರುತ್ತದೆ. ಭೂಮಿಯ ವಾತಾವರಣವನ್ನು ರೂಪಿಸುವ ಅನಿಲದ ಕಣಗಳು ನೀಲಿ ತರಂಗಾಂತರಗಳ ಬೆಳಕನ್ನು ಚದುರಿಸುವ ಸಾಧ್ಯತೆಯಿದೆ, ಆದರೆ ಕೆಂಪು ತರಂಗಾಂತರಗಳು ಹಾದುಹೋಗುತ್ತವೆ. ಇದನ್ನು ರೇಲೀ ಸ್ಕ್ಯಾಟರಿಂಗ್ ಎಂದು ಕರೆಯಲಾಗುತ್ತದೆ, ಮತ್ತು ಅದಕ್ಕಾಗಿಯೇ ಆಕಾಶವು ನೀಲಿ ಮತ್ತು ಸೂರ್ಯೋದಯ ಮತ್ತು ಸೂರ್ಯಾಸ್ತಗಳು ಹೆಚ್ಚಾಗಿ ಕೆಂಪು ಬಣ್ಣದ್ದಾಗಿರುತ್ತವೆ.
ಚಂದ್ರಗ್ರಹಣದ ಸಂದರ್ಭದಲ್ಲಿ, ಕೆಂಪು ಬೆಳಕು ಭೂಮಿಯ ವಾತಾವರಣದ ಮೂಲಕ ಹಾದುಹೋಗಬಹುದು ಮತ್ತು ಚಂದ್ರನ ಕಡೆಗೆ ವಕ್ರೀಭವನಗೊಳ್ಳುತ್ತದೆ – ಅಥವಾ ಬಾಗುತ್ತದೆ, ಇದು ಗ್ರಹಣ ಸಮಯದಲ್ಲಿ ಚಂದ್ರನನ್ನು ಮಸುಕಾದ ಕೆಂಪು ಬಣ್ಣದಿಂದ ಬಿಡುತ್ತದೆ
ಮಸುಕಂಚಿನ ಚಂದ್ರ ಗ್ರಹಣ ಎಂದರೆ…
ಸೂರ್ಯ, ಭೂಮಿ ಮತ್ತು ಚಂದ್ರ ಒಂದೇ ನೇರದಲ್ಲಿ ಇರದ ಸಮಯದಲ್ಲಿ ಸಂಭವಿಸುವ ಗ್ರಹಣವನ್ನು ಅರೆನೆರಳು ಅಥವಾ ಮಸುಕಂಚಿನ ಚಂದ್ರ ಗ್ರಹಣ ಎನ್ನಲಾಗುತ್ತದೆ. ಈ ವೇಳೆ ಚಂದ್ರನ ಮೇಲೆ ಸೂರ್ಯನ ಬೆಳಕು ಬೀಳುವುದನ್ನು ಭೂಮಿಯ ಕೆಲ ಭಾಗ ತಡೆಯುತ್ತದೆ. ಇದರಿಂದ ಚಂದ್ರನ ಮೇಲೆ ಭೂಮಿಯ ಪಾರ್ಶ್ವ ನೆರಳು ಆವರಿಸಿಕೊಳ್ಳುವುದರಿಂದ ಚಂದ್ರನ ಪೂರ್ಣ ಭಾಗ ಇಲ್ಲವೇ ಕೆಲ ಭಾಗ ನೆರಳಾಗುತ್ತದೆ.ಇದನ್ನು ತೋಳ ಚಂದ್ರ ಗ್ರಹಣ (Wolf Moon eclipse) ಎಂದು ಕೂಡ ಕರೆಯಲಾಗುತ್ತದೆ.
ಭಾಗಶಃ ಚಂದ್ರಗ್ರಹಣದ ಸಮಯದಲ್ಲಿ, ಚಂದ್ರನ ಮೇಲ್ಮೈನ ಒಂದು ಭಾಗವು ಭೂಮಿಯ ನೆರಳಿನಿಂದ ಆವರಿಸಿದರೆ, ಉಳಿದ ಭಾಗವು ಬೆಳಕು ಸುಳಿಯದ ಭಾಗದಿಂದ ಗಾಢ ಛಾಯೆಯ ಪ್ರಭಾವಕ್ಕೆ ಒಳಗಾಗುತ್ತದೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಕೇಂದ್ರ ಮತ್ತು ರಾಜ್ಯಗಳ ಕಾರ್ಯಗಳು ಮತ್ತು ಜವಾಬ್ದಾರಿಗಳು, ಫೆಡರಲ್ ರಚನೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಸವಾಲುಗಳು, ಸ್ಥಳೀಯ ಮಟ್ಟದಲ್ಲಿ ಅಧಿಕಾರ ಮತ್ತು ಹಣಕಾಸು ಹಂಚಿಕೆ ಮತ್ತು ಅದರಲ್ಲಿನ ಸವಾಲುಗಳು.
ವಾಕ್ ಮತ್ತು ಅಭಿವ್ಯಕ್ತಿಗೆ ಸಂಬಂಧಿಸಿದ ಅಪರಾಧಗಳನ್ನು ವ್ಯಾಖ್ಯಾನಿಸಲಿರುವ ಸಮಿತಿ:
(Panel to define offences of speech, expression)
ಸಂದರ್ಭ:
ಭಾರತೀಯ ದಂಡ ಸಂಹಿತೆಯಲ್ಲಿ (Indian Penal Code (IPC) “ದ್ವೇಷ ಭಾಷಣ”(hate speech) ಎಂದರೆ ಏನು ಎಂಬುದರ ಬಗ್ಗೆ ಸ್ಪಷ್ಟವಾದ ವ್ಯಾಖ್ಯಾನವಿಲ್ಲದ ಕಾರಣ, ಅಪರಾಧ ಕಾನೂನುಗಳಲ್ಲಿನ ಸುಧಾರಣೆಗಳ ಸಮಿತಿಯು (Committee for Reforms in Criminal Laws) ಮೊದಲ ಬಾರಿಗೆ ಇಂತಹ ಭಾಷಣವನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದೆ.
- ಸಮಿತಿಯು, ಶೀಘ್ರದಲ್ಲೇ ತನ್ನ ವರದಿಯನ್ನು ಸಲ್ಲಿಸುವ ನಿರೀಕ್ಷೆಯಿದೆ.
‘ದ್ವೇಷ ಭಾಷಣ’ ವನ್ನು ಬೇರೆಲ್ಲಿಯಾದರೂ ವ್ಯಾಖ್ಯಾನಿಸಲಾಗಿದೆಯೇ?
ಇತ್ತೀಚೆಗೆ, ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿ ಯು (Bureau of Police Research and Development- BPRD) ಸೈಬರ್ ಕಿರುಕುಳ ಸಂಬಂಧಿತ ಪ್ರಕರಣಗಳ ಬಗ್ಗೆ ತನಿಖಾ ಸಂಸ್ಥೆಗಳ ಕೈಪಿಡಿಯನ್ನು ಪ್ರಕಟಿಸಿದೆ, ಇದರಲ್ಲಿ ‘ದ್ವೇಷ ಭಾಷಣ’ ವನ್ನು ಒಂದು ಭಾಷೆಯಾಗಿ ವ್ಯಾಖ್ಯಾನಿಸಲಾಗಿದೆ, ಆ ಮೂಲಕ ಒಬ್ಬ ವ್ಯಕ್ತಿಯನ್ನು ಅವನ ಅಥವಾ ಅವಳ ಗುರುತು ಅಥವಾ ಇತರ ಗುಣಲಕ್ಷಣಗಳನ್ನು (ಉದಾ., ಲೈಂಗಿಕ ಆಸಕ್ತಿ, ಅಂಗವೈಕಲ್ಯ, ಧರ್ಮ, ಇತ್ಯಾದಿ) ಆಧರಿಸಿ ಅಪಚಾರ, ಅವಮಾನ, ಬೆದರಿಕೆ ಹಾಕುವುದು ಅಥವಾ ಗುರಿಮಾಡುವುದಾಗಿದೆ.
ಪ್ರಮಾಣಿತ ವ್ಯಾಖ್ಯಾನದ ಅಗತ್ಯತೆ:
ಕಾನೂನುಬದ್ಧವಾಗಿ ಹೇಳುವುದಾದರೆ, ಯಾವುದೇ ‘ದ್ವೇಷದ ಮಾತು’ ಅಥವಾ ‘ದ್ವೇಷ ಭಾಷಣ’ಗಳ ಕುರಿತ ಕ್ರಿಮಿನಲ್ ಷರತ್ತುಗಳನ್ನು ಅದು ಯಾವುದೇ ರೀತಿಯ ಹಿಂಸಾಚಾರವನ್ನು ಪ್ರಚೋದಿಸಿದಾಗ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಅಡ್ಡಿಯುಂಟುಮಾಡಿದಾಗ ಮಾತ್ರ ಅನ್ವಯಿಸಬಹುದು. ಸೂಕ್ತವಾದ ವ್ಯಾಖ್ಯಾನವಿಲ್ಲದ ಕಾರಣ, ಯಾರನ್ನಾದರೂ ಟೀಕಿಸುವುದನ್ನು ಸಹ ‘ದ್ವೇಷ ಭಾಷಣ’ ಅಥವಾ(Hate Speech) ಎಂದೂ ಕರೆಯಲಾಗುತ್ತದೆ.
‘ಕ್ರಿಮಿನಲ್ ಕಾನೂನು ಸುಧಾರಣಾ ಸಮಿತಿ’ ಬಗ್ಗೆ:
2019 ರಲ್ಲಿ, ಗೃಹ ವ್ಯವಹಾರಗಳ ಸಚಿವಾಲಯವು ರಾಜ್ಯಗಳು, ಸುಪ್ರೀಂ ಕೋರ್ಟ್, ಹೈಕೋರ್ಟ್ಗಳು, ಬಾರ್ ಕೌನ್ಸಿಲ್ ಆಫ್ ಇಂಡಿಯಾ, ಬಾರ್ ಕೌನ್ಸಿಲ್ ಆಫ್ ಸ್ಟೇಟ್ಸ್, ಮತ್ತು ವಿಶ್ವವಿದ್ಯಾಲಯಗಳಿಂದ ಸಲಹೆಗಳನ್ನು ಕೋರಿದ ನಂತರ 1860 ರಲ್ಲಿ ರೂಪುಗೊಂಡ ‘ಭಾರತೀಯ ದಂಡ ಸಂಹಿತೆ’ (IPC) ಮತ್ತು ‘ಕ್ರಿಮಿನಲ್ ಪ್ರೊಸೀಜರ್ ಕೋಡ್’ (CrPC) ನ ಬಗ್ಗೆ ಕೂಲಂಕಶವಾಗಿ ಪರಿಶೀಲಿಸುವ ಮೂಲಕ ಸರಿಪಡಿಸಲು ನಿರ್ಧರಿಸಿತು.
- ಇದರ ನಂತರ, ‘IPC’ ಯಲ್ಲಿನ ಸುಧಾರಣೆಗಳಿಗೆ ಸಂಬಂಧಿಸಿದ ಸಮಿತಿಯು ವಿವರವಾದ ವಿಚಾರಣೆ ನಡೆಸುತ್ತಿದೆ.
- ಈ ಸಮಿತಿಯು IPC ಯಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ಮಾಡುವ ಬದಲು, ವಿಶ್ವನಾಥನ್ ಸಮಿತಿಯು ಶಿಫಾರಸು ಮಾಡಿದಂತೆ ‘ದ್ವೇಷ ಭಾಷಣ’ ದಂತಹ ಬಾಕಿ ಇರುವ ಎಲ್ಲ ಸಮಸ್ಯೆಗಳನ್ನು ಪರಿಶೀಲಿಸಬಹುದು ಮತ್ತು ನಂತರ ‘ಭಾರತೀಯ ದಂಡ ಸಂಹಿತೆಯಲ್ಲಿ’ ವ್ಯಾಪಕ ಬದಲಾವಣೆಗಳನ್ನು ಮಾಡಬಹುದು ಎಂದು ನಿರ್ಧರಿಸಿದೆ.
ದ್ವೇಷ ಭಾಷಣ ಗಳಿಗೆ ಕಾರಣವಾಗುವ ಅಂಶಗಳು:
ವ್ಯಕ್ತಿಗಳು ‘ದ್ವೇಷದ ಮಾತು’ ಹರಡಲು ಮುಖ್ಯ ಕಾರಣವೆಂದರೆ ಅವರು ತಮ್ಮ ಮನಸ್ಸಿನಲ್ಲಿ ನೆಲೆಸಿರುವ ರೂಢಿಗತ ಅಥವಾ ಸಾಂಪ್ರದಾಯಿಕ ಅಭ್ಯಾಸಗಳನ್ನು ನಂಬುತ್ತಾರೆ (believe in stereotypes) ಮತ್ತು ಈ ಸಂಪ್ರದಾಯಗಳ ಕಾರಣದಿಂದಾಗಿ, ಮತ್ತೊಂದು ವರ್ಗ ಅಥವಾ ವ್ಯಕ್ತಿಗಳ ಗುಂಪು ಅವರಿಗಿಂತ ಕೆಳಮಟ್ಟದಲ್ಲಿದೆ ಎಂದು ಅವರು ನಂಬುತ್ತಾರೆ ಮತ್ತು ಅದಕ್ಕಾಗಿ ಅವರಿಗೆ ಸಮಾನ ಹಕ್ಕುಗಳನ್ನು ನೀಡಲಾಗುವುದಿಲ್ಲ.
- ಶಾಂತಿಯುತವಾಗಿ ಸಹಬಾಳ್ವೆ ನಡೆಸುವ ಹಕ್ಕನ್ನು ಲೆಕ್ಕಿಸದೆ ನಿರ್ದಿಷ್ಟ ಸಿದ್ಧಾಂತಕ್ಕೆ ಅಂಟಿಕೊಳ್ಳುವ ಮೊಂಡು ತನವು ದ್ವೇಷದ ಮಾತಿನ ಬೆಂಕಿಗೆ ತುಪ್ಪ ಸುರಿಯುವ ಮೂಲಕ ಮತ್ತಷ್ಟು ಪ್ರಚೋದಿಸುತ್ತದೆ.
ದ್ವೇಷದ ಮಾತು ಪ್ರಜಾಪ್ರಭುತ್ವದ ಎರಡು ಪ್ರಮುಖ ಸಿದ್ಧಾಂತಗಳಿಗೆ ಬೆದರಿಕೆ ಹಾಕುತ್ತದೆ:
- ಎಲ್ಲರಿಗೂ ಸಮಾನ ಘನತೆಯ ಭರವಸೆ.
- ಎಲ್ಲರನ್ನೂ ಒಳಗೊಳ್ಳುವ ಮೂಲಕ ಸಾರ್ವಜನಿಕ ಯೋಗಕ್ಷೇಮ.
‘ದ್ವೇಷ ಭಾಷಣ’ ಗುರುತಿಸಲು ಅಗತ್ಯ ಮಾನದಂಡಗಳು:
- ಮಾತಿನ ತೀವ್ರತೆ.
- ಚಿತಾವಣೆ.
- ಭಾಷಣ ಬರೆಯುವ ವ್ಯಕ್ತಿಯ ಸಾಮಾಜಿಕ ಸ್ಥಾನಮಾನ.
- ಭಾಷಣದಿಂದ ಪ್ರಭಾವಿತರಾಗುವ ಸಂತ್ರಸ್ತರ ಸಾಮಾಜಿಕ ಸ್ಥಿತಿ.
- ಭಾಷಣದ / ಮಾತಿನ ಸಾಮರ್ಥ್ಯ.
- ಭಾಷಣದ ಸಂದರ್ಭ.
ಈ ಅಂಶಕ್ಕೆ ಸಂಬಂಧಿಸಿದ ದಂಡನಾತ್ಮಕ ನಿಬಂಧನೆಗಳು:
- ಭಾರತೀಯ ದಂಡ ಸಂಹಿತೆಯ (Indian Penal Code– IPC) 153 ಎ ಮತ್ತು 153 ಬಿ ವಿಭಾಗಗಳು ಎರಡು ಗುಂಪುಗಳ ನಡುವಿನ ದ್ವೇಷ ಮತ್ತು ದ್ವೇಷವನ್ನುಂಟು ಮಾಡುವ ಕೃತ್ಯಗಳನ್ನು ಶಿಕ್ಷಿಸಲು ಅವಕಾಶವನ್ನು ಒದಗಿಸುತ್ತದೆ.
- ಐಪಿಸಿಯ ಸೆಕ್ಷನ್ 295 ಎ ಉದ್ದೇಶಪೂರ್ವಕ ಅಥವಾ ದುರುದ್ದೇಶಪೂರಿತ ಉದ್ದೇಶದಿಂದ ಒಂದು ವರ್ಗದ ಧಾರ್ಮಿಕ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಶಿಕ್ಷೆ ವಿಧಿಸುತ್ತದೆ.
- IPC ಯ 505 (1) ಮತ್ತು 505 (2) ವಿಭಾಗಗಳು, ವಿವಿಧ ಗುಂಪುಗಳ ನಡುವೆ ದ್ವೇಷ ಮತ್ತು ಹಿಂಸೆಗೆ ಕಾರಣವಾಗುವ ದುರುದ್ದೇಶಪೂರಿತ ಅಥವಾ ಅಸಹ್ಯಕರ ವಿಷಯವನ್ನು ಪ್ರಕಟಿಸುವುದು ಮತ್ತು ಪ್ರಸಾರ ಮಾಡುವುದನ್ನು ಅಪರಾಧವೆಂದು ಪರಿಗಣಿಸುತ್ತದೆ.
- ಪ್ರಜಾ ಪ್ರಾತಿನಿಧ್ಯ ಕಾಯ್ದೆ (RPA), 1951 ರ ಸೆಕ್ಷನ್ 8 ರ ಅಡಿಯಲ್ಲಿ, ವಾಕ್ ಸ್ವಾತಂತ್ರ್ಯವನ್ನು ಕಾನೂನುಬಾಹಿರವಾಗಿ ಬಳಸಿದ ಆರೋಪ ಹೊತ್ತಿರುವ ವ್ಯಕ್ತಿಯನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿಷೇಧಿಸುತ್ತದೆ.
- RPA ಯ ಸೆಕ್ಷನ್ 123 (3 A) ಮತ್ತು 125 ರ ಅಡಿಯಲ್ಲಿ, ಚುನಾವಣೆಯ ಸಂದರ್ಭದಲ್ಲಿ ಜನಾಂಗ, ಧರ್ಮ, ಸಮುದಾಯ, ಜಾತಿ ಅಥವಾ ಭಾಷೆಯ ಆಧಾರದ ಮೇಲೆ ದ್ವೇಷವನ್ನು ಉತ್ತೇಜಿಸುವುದನ್ನು ನಿಷೇಧಿಸಲಾಗಿದೆ ಮತ್ತು ಇದನ್ನು ಭ್ರಷ್ಟ ಚುನಾವಣಾ ಪದ್ಧತಿಗಳ ಅಡಿಯಲ್ಲಿ ಸೇರಿಸಲಾಗಿದೆ.
ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಕಾರ್ಯವಿಧಾನಗಳು,ಕಾನೂನುಗಳು, ಸಂಸ್ಥೆಗಳು ಮತ್ತು ಈ ದುರ್ಬಲ ವಿಭಾಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಸಂಸ್ಥೆಗಳು.
ಒನ್ ಸ್ಟಾಪ್ ಸೆಂಟರ್ ಯೋಜನೆ:
(One Stop Centre scheme)
ಸಂದರ್ಭ:
‘ಲಿಂಗ ಆಧಾರಿತ ಹಿಂಸಾಚಾರ’ದಿಂದ ಬದುಕುಳಿದಿರುವ ಭಾರತೀಯ ಮಹಿಳೆಯರಿಗೆ ನೆರವು ನೀಡಲು ದೇಶಗಳಲ್ಲಿರುವ 10 ಕಾರ್ಯಾಚರಣೆಗಳಲ್ಲಿ ಕೇಂದ್ರ ಸರ್ಕಾರವು ಒಂದು ನಿಲುಗಡೆ ಕೇಂದ್ರಗಳನ್ನು / ಒನ್ ಸ್ಟಾಪ್ ಸೆಂಟರ್ (One Stop Centres– OSCs) ಸ್ಥಾಪಿಸಲಿದೆ.
ಸೌದಿ ಅರೇಬಿಯಾ, ಆಸ್ಟ್ರೇಲಿಯಾ, ಕೆನಡಾ, ಸಿಂಗಾಪುರ್, ಬಹ್ರೇನ್, ಕುವೈತ್, ಕತಾರ್, ಒಮಾನ್ ಮತ್ತು ಯುಎಇ, ಜೆಡ್ಡಾ ಮತ್ತು ರಿಯಾದ್, ಗಳಲ್ಲಿ ‘ಒನ್ ಸ್ಟಾಪ್ ಸೆಂಟರ್’ಗಳು ಸ್ಥಾಪನೆಯಾಗಲಿವೆ.
ಈ ಯೋಜನೆ ಕುರಿತು:
ಸಖಿ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ಕೇಂದ್ರ ಪ್ರಾಯೋಜಿತ ಯೋಜನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ (MWCD) ವು ರೂಪಿಸಿದೆ.
ಇದು ‘ರಾಷ್ಟ್ರೀಯ ಮಹಿಳಾ ಸಬಲೀಕರಣ ಮಿಷನ್’ಗಾಗಿ ಇರುವ ಒಂದು ನಿಗದಿತ ಮಾನದಂಡವನ್ನು ಹೊಂದಿರುವ ಯೋಜನೆ (Umbrella Scheme)ಯ ಒಂದು ಉಪ-ಯೋಜನೆಯಾಗಿದೆ.
ಗುರಿ ಗುಂಪುಗಳು: ಜಾತಿ, ಜನಾಂಗ, ವರ್ಗ, ಧರ್ಮ, ಪ್ರದೇಶ, ಲೈಂಗಿಕ ದೃಷ್ಟಿಕೋನ ಅಥವಾ ವೈವಾಹಿಕ ಸ್ಥಿತಿಯನ್ನು ಲೆಕ್ಕಿಸದೆ ಹಿಂಸಾಚಾರದಿಂದ ಬಳಲುತ್ತಿರುವ 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಿಕೆಯರು ಸೇರಿದಂತೆ ಎಲ್ಲಾ ಮಹಿಳೆಯರನ್ನು ‘ಒನ್ ಸ್ಟಾಪ್ ಸೆಂಟರ್ಸ್’ (OSC) ಬೆಂಬಲಿಸುತ್ತದೆ.
ಈ ಕೇಂದ್ರಗಳನ್ನು ಈ ಕೆಳಗಿನ ಸೇವೆಗಳಿಗೆ ಪ್ರವೇಶವನ್ನು ಒದಗಿಸಲು ಮಹಿಳಾ ಸಹಾಯವಾಣಿಯೊಂದಿಗೆ ಸಂಯೋಜಿಸಲಾಗುವುದು:
- ತುರ್ತು ಪ್ರತಿಕ್ರಿಯೆ ಮತ್ತು ಪಾರುಗಾಣಿಕಾ ಸೇವೆಗಳು
- ವೈದ್ಯಕೀಯ ಸಹಾಯ
- FIR ದಾಖಲಿಸುವಲ್ಲಿ ಮಹಿಳೆಯರಿಗೆ ಸಹಾಯ
- ಮಾನಸಿಕ-ಸಾಮಾಜಿಕ ಬೆಂಬಲ ಮತ್ತು ಸಮಾಲೋಚನೆ
- ಕಾನೂನು ನೆರವು ಮತ್ತು ಸಮಾಲೋಚನೆ
- ಆಶ್ರಯ
- ವಿಡಿಯೋ ಕಾನ್ಫರೆನ್ಸಿಂಗ್ ಸೌಲಭ್ಯ.
ನಿಧಿಗಳು:
ಈ ಯೋಜನೆಗೆ ‘ನಿರ್ಭಯ ನಿಧಿ’ಯ ಮೂಲಕ ಹಣ ನೀಡಲಾಗುವುದು. ಈ ಯೋಜನೆಯಡಿ ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶದ ಆಡಳಿತಗಳಿಗೆ ಕೇಂದ್ರ ಸರ್ಕಾರ 100% ಆರ್ಥಿಕ ನೆರವು ನೀಡಲಿದೆ.
ರಕ್ಷಣೆಯ ಅವಶ್ಯಕತೆ:
- ಲಿಂಗ ಆಧಾರಿತ ಹಿಂಸೆ (Gender Based Violence– GBV): ಇದು ಜಾಗತಿಕ ಆರೋಗ್ಯ, ಮಾನವ ಹಕ್ಕುಗಳು ಮತ್ತು ಅಭಿವೃದ್ಧಿ ವಿಷಯವಾಗಿದೆ, ಮತ್ತು ಇದು ಭೌಗೋಳಿಕತೆ, ವರ್ಗ, ಸಂಸ್ಕೃತಿ, ವಯಸ್ಸು, ಜನಾಂಗ ಮತ್ತು ಧರ್ಮವನ್ನು ವಿಶ್ವದ ಪ್ರತಿಯೊಂದು ಮೂಲೆಯಲ್ಲಿನ, ಪ್ರತಿ ಸಮುದಾಯ ಮತ್ತು ದೇಶಗಳ ಮೇಲೆ ಪರಿಣಾಮ ಬಿರುತ್ತದೆ.
- ಹಿಂಸಾಚಾರದ ನಿರ್ಮೂಲನೆ ಕುರಿತ 1993 ರ ವಿಶ್ವಸಂಸ್ಥೆಯ ಘೋಷಣೆಯ 1 ನೇ ವಿಧಿಯು ಲಿಂಗ ಆಧಾರಿತ ನಿಂದನೆಯನ್ನು ವ್ಯಾಖ್ಯಾನಿಸುತ್ತದೆ. ಇದನ್ನು – “ಲಿಂಗ ಆಧಾರಿತ ಹಿಂಸಾಚಾರದ ಕೃತ್ಯ ಎಂದು ಕರೆಯುತ್ತದೆ”, ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಯಾವುದೇ ಕ್ರಿಯೆ, ಅದು ದೈಹಿಕ, ಲೈಂಗಿಕ ಅಥವಾ ಮಾನಸಿಕ ಹಾನಿಗೆ ಕಾರಣವಾಗಬಹುದು, ದೈಹಿಕ, ಲೈಂಗಿಕ ಅಥವಾ ಮಾನಸಿಕ ಹಾನಿ ಮತ್ತು ಸಾರ್ವಜನಿಕ ಅಥವಾ ಖಾಸಗಿ ಜೀವನದಲ್ಲಿ ಫಲಿತಾಂಶವು ಮಹಿಳೆಯರ ಮೇಲಿನ ಚಿತ್ರಹಿಂಸೆ, ಅಂತಹ ಕೃತ್ಯಗಳ ಬೆದರಿಕೆ, ಬಲಾತ್ಕಾರ ಅಥವಾ ಅನಿಯಂತ್ರಿತವಾಗಿ ಅವರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು ಸೇರಿದೆ.
- ಭಾರತದಲ್ಲಿ ಲಿಂಗ ಆಧಾರಿತ ಹಿಂಸಾಚಾರದ ಉದಾಹರಣೆಗಳು; ಅತ್ಯಾಚಾರ, ವರದಕ್ಷಿಣೆ, ಮರ್ಯಾದೆ ಹತ್ಯೆ, ಆಸಿಡ್ ದಾಳಿ, ಮಾಟಗಾತಿ-ಬೇಟೆ, ಲೈಂಗಿಕ ಕಿರುಕುಳ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ವ್ಯಾಪಾರಿ ಉದ್ದೇಶದ ಲೈಂಗಿಕ ಶೋಷಣೆಗಾಗಿ ಕಳ್ಳಸಾಗಣೆ, ಬಾಲ್ಯವಿವಾಹ, ಲಿಂಗಾಧಾರಿತ-ಗರ್ಭಪಾತ ಮತ್ತು ಸತಿ ಸೇರಿದಂತೆ ಸಾರ್ವತ್ರಿಕವಾಗಿ ಪ್ರಚಲಿತದಲ್ಲಿರುವ ಕೌಟುಂಬಿಕ ಮತ್ತು ಲೈಂಗಿಕ ದೌರ್ಜನ್ಯಗಳ ಹಿಂಸಾಚಾರ ಇತ್ಯಾದಿಗಳು ಹೆಚ್ಚಾಗಿ ಕಂಡುಬರುತ್ತವೆ.
ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.
ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿನ ದಮನಕಾರಿ ನೀತಿಯ ಕುರಿತು ಬ್ರಿಟನ್ನಲ್ಲಿ ಸ್ಥಾಪಿಸಲಾದ ಜನತಾ ನ್ಯಾಯಮಂಡಳಿಯನ್ನು ಖಂಡಿಸಿದ ಚೀನಾ:
(China denounces people’s tribunal in Britain on alleged Xinjiang abuses)
ಸಂದರ್ಭ:
ಚೀನಾದ ಕ್ಸಿನ್ಜಿಯಾಂಗ್ ಪ್ರದೇಶದಲ್ಲಿನ ಉಯಿಘರ್ ಮತ್ತು ಇತರ ಟರ್ಕಿಶ್ ಮುಸ್ಲಿಂ ಜನಾಂಗದ ಹತ್ಯಾಕಾಂಡದ ಆರೋಪದ ಬಗ್ಗೆ ತನಿಖೆ ನಡೆಸಲು ಬ್ರಿಟನ್ ನಲ್ಲಿ ಜನತಾ ನ್ಯಾಯಮಂಡಳಿಯನ್ನು (People’s Tribunal) ಸ್ಥಾಪಿಸುವ ಯೋಜನೆಯನ್ನು ಚೀನಾ ಖಂಡಿಸಿದೆ.
ಏನಿದು ಸಮಸ್ಯೆ?
ಕ್ಸಿನ್ಜಿಯಾಂಗ್ ಪ್ರಾಂತ್ಯವು ಚೀನಾದ ವಿದೇಶಾಂಗ ನೀತಿಗೆ ಪ್ರಮುಖ ತಲೆನೋವಾಗಿ ಪರಿಣಮಿಸಿದೆ. ಕ್ಸಿನ್ಜಿಯಾಂಗ್ನಲ್ಲಿ, ಒಂದು ದಶಲಕ್ಷಕ್ಕೂ ಹೆಚ್ಚು ಉಯಿಘರ್ಗಳು, ಕಝಕಿಗಳು ಮತ್ತು ಇತರ ಅಲ್ಪಸಂಖ್ಯಾತ ಸಮುದಾಯಗಳ ಸದಸ್ಯರನ್ನು ಮರು-ಶಿಕ್ಷಣ (re-education) ಶಿಬಿರಗಳಲ್ಲಿ ಬಂಧಿಸಿದ್ದಾರೆ ಎಂಬ ಆರೋಪವಿದೆ.
- ಈ ಶಿಬಿರಗಳಲ್ಲಿ, ಈ ಸಮುದಾಯಗಳು ತಮ್ಮ ಸಾಂಪ್ರದಾಯಿಕ ಸಂಸ್ಕೃತಿಯನ್ನು ತ್ಯಜಿಸಲು ಮತ್ತು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷ ಮತ್ತು ಅದರ ನಾಯಕ ಕ್ಸಿ ಜಿನ್ಪಿಂಗ್ಗೆ ನಿಷ್ಠೆ ತೋರುವ ಪ್ರತಿಜ್ಞೆ ಸ್ವೀಕರಿಸುವಂತೆ ಒತ್ತಾಯಿಸಲಾಗುತ್ತದೆ.
- ಮಹಿಳೆಯರನ್ನು ಗರ್ಭನಿರೋಧಕ ವಿಧಾನಗಳಿಗೆ ಒಳಗಾಗಲು ಒತ್ತಾಯಿಸಲಾಗಿದೆ, ಮತ್ತು ಅವರ ಮಕ್ಕಳನ್ನು ಬಂಧಿತ ಪೋಷಕರಿಂದ ಒತ್ತಾಯಪೂರ್ವಕವಾಗಿ ತೆಗೆದುಕೊಳ್ಳಲಾಗಿದೆ ಎಂದು ಈ ಪ್ರದೇಶದ ಮಹಿಳೆಯರು ಆರೋಪಿಸಿ ಸಾಕ್ಷಿ ನುಡಿದಿದ್ದಾರೆ.
- ಅಲ್ಲದೆ ಈ ಪ್ರಾಂತ್ಯದಲ್ಲಿನ ಬಲವಂತದ ದುಡಿಮೆಯ ಹಿಂಸಾಚಾರವನ್ನು ಮನಗಂಡ ಬಹುರಾಷ್ಟ್ರೀಯ ಕಂಪನಿಗಳು ಚೀನಾದ ಪ್ರಮುಖ ಹತ್ತಿ ಉದ್ಯಮ ದೊಂದಿಗಿನ ಸಂಬಂಧಗಳನ್ನು ಕಡಿತಗೊಳಿಸಲು ಮುಂದಾಗಿದೆ.
ಈ ಆರೋಪಗಳಿಗೆ ಚೀನಾದ ಪ್ರತಿಕ್ರಿಯೆ:
ಕ್ಸಿನ್ಜಿಯಾಂಗ್ ಪ್ರದೇಶದಲ್ಲಿ ಚೀನಾದ ಆಡಳಿತದ ವಿರುದ್ಧ ವರ್ಷಗಳ ಹಿಂಸಾತ್ಮಕ ಘಟನೆಗಳ ನಂತರ ಜಿಹಾದಿ ಪ್ರಚಾರದಿಂದ ಪ್ರಭಾವಿತರಾದವರನ್ನು ಆಮೂಲಾಗ್ರವಾಗಿ ಮನ ಪರಿವರ್ತಿಸಲು ಉದ್ಯೋಗ ತರಬೇತಿ ಮತ್ತು ಸಮಾಲೋಚನೆ ನೀಡುತ್ತಿದೆ ಎಂದು ಚೀನಾ ಹೇಳಿದೆ.
ನ್ಯಾಯಮಂಡಳಿ ಮತ್ತು ಅದರ ಪರಿಣಾಮಗಳು:
- ಈ ನ್ಯಾಯಮಂಡಳಿಗೆ ಸರ್ಕಾರದ ಬೆಂಬಲವಿಲ್ಲ.
- ಇದರ ಅಧ್ಯಕ್ಷತೆಯನ್ನು ಪ್ರಮುಖ ವಕೀಲ ಜೆಫ್ರಿ ನೈಸ್ (Geoffrey Nice) ವಹಿಸಲಿದ್ದಾರೆ. ಅವರು ಸೆರ್ಬಿಯಾದ ಮಾಜಿ ಅಧ್ಯಕ್ಷ ಸ್ಲೊಬೊಡಾನ್ ಮಿಲೋಸೆವಿಕ್ (Slobodan Milosevic) ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಹೋರಾಡಿದ್ದಾರೆ ಮತ್ತು ಅಂತರರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದಲ್ಲಿ ಕೆಲಸ ಮಾಡಿದ್ದಾರೆ.
- ನ್ಯಾಯಮಂಡಳಿಯ ನಿರ್ಧಾರವು ಎರಡೂ ಸರ್ಕಾರಗಳ ಮೇಲೆ ಬದ್ಧವಾಗುವುದಿಲ್ಲವಾದರೂ, ಸಾರ್ವಜನಿಕವಾಗಿ ಸಾಕ್ಷ್ಯಗಳನ್ನು ನೀಡುವ ಮೂಲಕ, ಕ್ಸಿನ್ಜಿಯಾಂಗ್ನಲ್ಲಿ ನಡೆಯುತ್ತಿರುವ ಆಪಾದಿತ ದುಷ್ಕೃತ್ಯವನ್ನು ಎದುರಿಸಲು ಅಂತರರಾಷ್ಟ್ರೀಯ ಕ್ರಮ ತೆಗೆದುಕೊಳ್ಳಲು ಒತ್ತಾಯಿಸುತ್ತದೆ ಎಂದು ಅದರ ಸಂಘಟಕರು ಭಾವಿಸುತ್ತಾರೆ.
ಉಯಿಘರ್ ಗಳು ಯಾರು?
- ಉಯಿಘರ್ ಗಳು ಚೀನಾದ ವಾಯುವ್ಯ ಕ್ಸಿನ್ಜಿಯಾಂಗ್ ಪ್ರಾಂತ್ಯದಲ್ಲಿ ವಾಸಿಸುವ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ. ಅವರು ಕ್ಸಿನ್ಜಿಯಾಂಗ್ ಪ್ರಾಂತ್ಯದ ಜನಸಂಖ್ಯೆಯ ಸುಮಾರು 40 ಪ್ರತಿಶತದಷ್ಟಿದ್ದಾರೆ.
- ಚೀನಾಕ್ಕಿಂತ ಟರ್ಕಿ ಮತ್ತು ಮಧ್ಯ ಏಷ್ಯಾದ ಇತರ ದೇಶಗಳೊಂದಿಗೆ ಉಯಿಘರ್ ಗಳು ಹೆಚ್ಚು ನಿಕಟವಾದ ಜನಾಂಗೀಯ ಸಂಬಂಧವನ್ನು ಹೊಂದಿದ್ದಾರೆ.
- ಉಯಿಘರ್ ಸಮುದಾಯವು ತಮ್ಮದೇ ಆದ ಭಾಷೆಯನ್ನು ಟರ್ಕಿಶ್ ಭಾಷೆಯೊಂದಿಗೆ ನಿಕಟವಾಗಿ ಮಾತನಾಡುತ್ತಾರೆ ಮತ್ತು ತಮ್ಮನ್ನು ಸಾಂಸ್ಕೃತಿಕವಾಗಿ ಮತ್ತು ಜನಾಂಗೀಯವಾಗಿ ಮಧ್ಯ ಏಷ್ಯಾದ ದೇಶಗಳಿಗೆ ಹತ್ತಿರವೆಂದು ಪರಿಗಣಿಸುತ್ತಾರೆ.
- ಚೀನಾ ಈ ಸಮುದಾಯವನ್ನು ಕೇವಲ ಪ್ರಾದೇಶಿಕ ಅಲ್ಪಸಂಖ್ಯಾತರೆಂದು ಗುರುತಿಸುತ್ತದೆ ಮತ್ತು ಅವರನ್ನು ದೇಶದ ಮೂಲನಿವಾಸಿಗಳು ಅಥವಾ ಸ್ಥಳೀಯ ಗುಂಪು ಎಂದು ಪರಿಗಣಿಸಲು ನಿರಾಕರಿಸುತ್ತದೆ.
- ಪ್ರಸ್ತುತ, ಉಯಿಘರ್ ಜನಾಂಗೀಯ ಸಮುದಾಯದ ಅತಿದೊಡ್ಡ ಜನಸಂಖ್ಯೆಯು ಚೀನಾದ ಕ್ಸಿನ್ಜಿಯಾಂಗ್ ಪ್ರದೇಶದಲ್ಲಿ ವಾಸಿಸುತ್ತಿದೆ.
- ನೆರೆಯ ಮಧ್ಯ ಏಷ್ಯಾದ ದೇಶಗಳಾದ ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್ ಮತ್ತು ಕಜಾಕಸ್ಥಾನ್ ಗಳಲ್ಲೂ ಉಯಿಘರ್ ಗಳು ಹೆಚ್ಚಿನ ಜನಸಂಖ್ಯೆ ಕಂಡುಬರುತ್ತಾರೆ.
ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ಕಿರುಕುಳ, ಬಲವಂತದ ಬಂಧನ, ತೀವ್ರ ತನಿಖೆ, ಕಣ್ಗಾವಲು ಮತ್ತು ಗುಲಾಮಗಿರಿಯಂತಹ ಸುಳ್ಳು ಆರೋಪಗಳ ಅಡಿಯಲ್ಲಿ ಉಯಿಗರ್ ಮುಸ್ಲಿಮರನ್ನು ದಶಕಗಳಿಂದ ಚೀನಾದ ಸರ್ಕಾರವು ನಿಂದಿಸುತ್ತಿದೆ.
ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.
ಗಾಜಾಪಟ್ಟಿಗೆ ಬೆಂಬಲ ನೀಡುವ ಭರವಸೆ ನೀಡಿದ ಬ್ಲಿಂಕೆನ್:
(Blinken promises support for Gaza)
ಸಂದರ್ಭ:
ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಇತ್ತೀಚಿನ ವಿನಾಶಕಾರಿ ಯುದ್ಧದ ನಂತರ ‘ಗಾಜಾ’ಕ್ಕೆ’ “ಅಂತರರಾಷ್ಟ್ರೀಯ ಬೆಂಬಲವನ್ನು ಒಟ್ಟುಗೂಡಿಸುವುದಾಗಿ” ಪ್ರತಿಜ್ಞೆ ಮಾಡಿದ್ದಾರೆ. ಆದಾಗ್ಯೂ, ಗಾಜಾದ ಉಗ್ರಗಾಮಿ ‘ಹಮಾಸ್’ ಆಡಳಿತಗಾರರಿಂದ ಯಾವುದೇ ಸಹಾಯವನ್ನು ಪ್ರತ್ಯೇಕವಾಗಿ ಇರಿಸುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಏನಿದು ಸಮಸ್ಯೆ?
- ಇಸ್ರೇಲ್ ಮತ್ತು ಹಮಾಸ್ ನಡುವಿನ 11 ದಿನಗಳ ಯುದ್ಧವು 250 ಕ್ಕೂ ಹೆಚ್ಚು ಜನರನ್ನು ಕೊಂದಿತು, ಹೆಚ್ಚಾಗಿ ಪ್ಯಾಲೆಸ್ತೀನಿಯರು, ಮತ್ತು ಆರ್ಥಿಕವಾಗಿ ಸಮೃದ್ಧವಲ್ಲದ ಕರಾವಳಿ ಪ್ರದೇಶದಲ್ಲಿ ವ್ಯಾಪಕ ವಿನಾಶಕ್ಕೆ ಕಾರಣವಾಯಿತು.
- ಇತ್ತೀಚೆಗೆ ಜಾರಿಗೆ ಬಂದ ಕದನ ವಿರಾಮ ಇನ್ನೂ ಜಾರಿಯಲ್ಲಿದೆ, ಆದರೆ ಈ ಕದನ ವಿರಾಮವು ಇಸ್ರೇಲಿ-ಪ್ಯಾಲೇಸ್ಟಿನಿಯನ್ ಸಂಘರ್ಷದ ಆಧಾರವಾಗಿರುವ ಯಾವುದೇ ಸಮಸ್ಯೆಗಳನ್ನು ಬಗೆಹರಿಸಿಲ್ಲ.
ಸೂಚನೆ: ಈ ಸಮಸ್ಯೆಯನ್ನು ಈ ಹಿಂದೆ ಆಳವಾಗಿ ವಿವರಿಸಲಾಗಿದೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 3
ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು:
ಗ್ರೀನ್ಲ್ಯಾಂಡ್ ಐಸ್ ಶೀಟ್ಗೆ ಸಂಬಂಧಿಸಿರುವ ನದಿಗಳಲ್ಲಿ ಹೆಚ್ಚಿನ ಪ್ರಮಾಣದ ಪಾದರಸ ಕಂಡುಬಂದಿದೆ:
(High levels of mercury found in rivers linked to Greenland Ice Sheet)
ಸಂದರ್ಭ:
ಇತ್ತೀಚಿನ ಸಂಶೋಧನೆಯ ಪ್ರಕಾರ, ‘ಗ್ರೀನ್ಲ್ಯಾಂಡ್ ಐಸ್ ಶೀಟ್’ ಅಥವಾ ಗ್ರೀನ್ಲ್ಯಾಂಡ್ ಹಿಮಪದರ ದಿಂದ ನೀರು ಪೂರೈಕೆಯಾಗುವ ಜಲಮೂಲಗಳಲ್ಲಿ ಹೆಚ್ಚಿನ ಪ್ರಮಾಣದ ‘ಪಾದರಸ’ (Mercury) ದ ಸಾಂದ್ರತೆಯು ಕಂಡುಬಂದಿವೆ.
ಕಂಡುಬಂದಿರುವ ಪಾದರಸದ ಪ್ರಮಾಣ:
ನದಿಗಳಲ್ಲಿ ವಿಶೇಷವಾಗಿ ಕರಗಿದ ಪಾದರಸವು ಸರಿಸುಮಾರು 1 – 10 ng L-1 (ಒಲಿಂಪಿಕ್ ಈಜುಕೊಳದಲ್ಲಿನ ಉಪ್ಪು-ಕಣದ ಗಾತ್ರಕ್ಕೆ ಸಮನಾದ ಪಾದರಸದ ಪ್ರಮಾಣ) ಆಗಿರುತ್ತದೆ.
ಗ್ರೀನ್ಲ್ಯಾಂಡ್ ಹಿಮಪದರಗಳಿಂದ (Greenland Ice Sheet) ನಿರನ್ನು ಪಡೆಯುವ ಜಲಮೂಲಗಳಲ್ಲಿ, ವಿಜ್ಞಾನಿಗಳು ಪಾದರಸದ ಮಟ್ಟವು 150 ng L-1 ಗಿಂತ ಹೆಚ್ಚು ಎಂದು ಕಂಡುಹಿಡಿದಿದ್ದಾರೆ, ಇದು ಸರಾಸರಿಯಾಗಿ ನದಿಯಲ್ಲಿ ಕಂಡುಬರುವ ಪಾದರಸದ ಪ್ರಮಾಣಕ್ಕಿಂತ ಹೆಚ್ಚಿನದಾಗಿದೆ.
‘ಪಾದರಸ’ದ ಹೆಚ್ಚಿನ ಸಾಂದ್ರತೆಯ ಹಿಂದಿನ ಕಾರಣಗಳು ಯಾವುವು?
ಹೆಚ್ಚಿನ ಮಾಲಿನ್ಯಕಾರಕಗಳಾದ ಯಾವುದೇ ಉದ್ಯಮ ಅಥವಾ ಇತರ ಮಾನವಜನ್ಯ ಚಟುವಟಿಕೆಗಳಿಂದ ಇದು ಸಂಭವಿಸಿಲ್ಲ. ಹಿಮನದಿಗಳು, ಅಂದರೆ, ಪರ್ವತದ ಇಳಿಜಾರುಗಳಲ್ಲಿನ ಹಿಮನದಿಗಳು ನಿಧಾನವಾಗಿ ಚಲಿಸುವ ಸಂದರ್ಭದಲ್ಲಿ ‘ಪಾದರಸ-ಸಮೃದ್ಧ ಆಧಾರ ಶಿಲೆಯ’ (Mercury-rich bedrock) ಸವೆತ ಸಂಭವಿಸುತ್ತದೆ ಮತ್ತು ಹಿಮನದಿಗಳು ಕರಗಿದಾಗ ಈ ಸವೆತದ ಶೀಲಾ-ಕಣಗಳು ನೀರಿನ ಮೂಲಕ ಹರಿದು ಜಲಮೂಲಗಳನ್ನು ತಲುಪುತ್ತವೆ.
ಪ್ರಸ್ತುತ ಕಾಳಜಿಗಳು:
- ಇಲ್ಲಿಯವರೆಗೆ, ಪಾದರಸವನ್ನು ತಡೆಯಲು ಪ್ರಯತ್ನಗಳು ನಡೆಯುತ್ತಿವೆ, ಅಂದರೆ ಪಾದರಸವು ಕೈಗಾರಿಕೆಗಳಂತಹ ನೇರ ಮಾನವಜನ್ಯ ಚಟುವಟಿಕೆಗಳಿಂದ ಬಿಡುಗಡೆಯಾಗುವುದನ್ನು ತಡೆಯುವ ಪ್ರಯತ್ನಗಳು ನಡೆದಿದೆ.
- ಆದರೆ ಈಗ, ಪಾದರಸವು ಹಿಮನದಿಗಳಂತಹ ಹವಾಮಾನ-ಸೂಕ್ಷ್ಮ ವಾತಾವರಣದಿಂದ ಬಿಡುಗಡೆಯಾಗುತ್ತಿದೆ ಎಂದು ತಿಳಿದುಬಂದಿದೆ ಮತ್ತು ಈ ಪಾದರಸದ ಮೂಲಗಳು ನಿರ್ವಹಿಸಲು ಸಾಕಷ್ಟು ಕಷ್ಟಕರವೆಂದು ಸಾಬೀತುಪಡಿಸುತ್ತದೆ.
- ಇದಲ್ಲದೆ, ಭೂಮಿಯು ನಿರಂತರವಾಗಿ ಬೆಚ್ಚಗಾಗುತ್ತಿರುವುದರಿಂದ ಮತ್ತು ಹಿಮಗಡ್ಡೆಗಳು ಮತ್ತು ಹಿಮನದಿಗಳು ಹಿಂದೆಂದಿಗಿಂತಲೂ ವೇಗವಾಗಿ ಕರಗುತ್ತಿರುವುದರಿಂದ ಇದು ‘ನೀರಿನ ಮಾಲಿನ್ಯ’ವನ್ನೂ ಹೆಚ್ಚಿಸುತ್ತದೆ.
ಇತ್ತೀಚಿನ ಆವಿಷ್ಕಾರದ ಮಹತ್ವ:
- ಈ ಹೊಸ ಆವಿಷ್ಕಾರದಿಂದ ವಿಷಗಳು (toxins) ಹಿಮನದಿಗಳ ಮೂಲಕವೂ ಹರಿಯುತ್ತವೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. ಈ ವಿಷವು ನೀರಿನ ಗುಣಮಟ್ಟ ಮತ್ತು ನೀರಿನ ಪ್ರವಾಹದ ಕೆಳ ಪಾತ್ರದ ಬಳಿ ವಾಸಿಸುವ ಸಮುದಾಯಗಳ ಮೇಲೆ ಯಾವ ಪರಿಣಾಮ ಬೀರುತ್ತವೆ ಎಂಬುದನ್ನು ಈಗ ಸಂಶೋಧಕರು ಅಧ್ಯಯನ ಮಾಡಬೇಕಾದ ಒತ್ತಡವನ್ನು ಸೃಷ್ಟಿಸಿದೆ.ಮತ್ತು ತಾಪಮಾನ ಏರಿಕೆಯ ಜಗತ್ತಿನಲ್ಲಿ ಯಾವ ಬದಲಾವಣೆಗಳು ಸಂಭವಿಸಬಹುದು? ಎಂಬುದನ್ನು ಅಧ್ಯಯನ ಮಾಡಬೇಕಿದೆ.
- ಅಲ್ಲದೆ, ಇದು ಭೂಮಿಯ ಭೂ-ರಾಸಾಯನಿಕ ಮತ್ತು ಜೈವಿಕ ಪ್ರಕ್ರಿಯೆಗಳ ಮೇಲೆ ಅದರ ಪ್ರಭಾವವನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.
ಪಾದರಸದ ಬಗೆಗಿನ ಪ್ರಮುಖ ಸಂಗತಿಗಳು:
ಮೂಲ: ಪಾದರಸವು ನೈಸರ್ಗಿಕವಾಗಿ ಕಂಡುಬರುವ ಅಂಶವಾಗಿದೆ, ಮತ್ತು ಇದು ಗಾಳಿ, ನೀರು ಮತ್ತು ಮಣ್ಣಿನಲ್ಲಿ ಕಂಡುಬರುತ್ತದೆ. ನೈಸರ್ಗಿಕ ಪ್ರಕ್ರಿಯೆಗಳಾದ ಬಂಡೆಗಳ ಸವೆತ, ಹವಾಮಾನ, ಜ್ವಾಲಾಮುಖಿ ಸ್ಫೋಟಗಳು, ಭೂಶಾಖದ ಚಟುವಟಿಕೆಗಳು, ಕಾಡಿನ ಬೆಂಕಿ ಮುಂತಾದವುಗಳ ಮೂಲಕ ಇದು ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಇದಲ್ಲದೆ, ‘ಪಾದರಸ’ವು ಮಾನವ ಚಟುವಟಿಕೆಗಳ ಮೂಲಕವೂ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ.
ವಿಷಕಾರಿ ಪರಿಣಾಮಗಳು: ಪಾದರಸವು ಮಾನವ ನರಮಂಡಲ, ಜೀರ್ಣಕಾರಿ ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಶ್ವಾಸಕೋಶ, ಮೂತ್ರಪಿಂಡ, ಚರ್ಮ ಮತ್ತು ಕಣ್ಣುಗಳ ಮೇಲೆ ವಿಷಕಾರಿ ಪರಿಣಾಮಗಳನ್ನು ಬೀರುತ್ತದೆ.
ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕವಾದ ಪ್ರಮುಖ ರಾಸಾಯನಿಕಗಳು – ‘ಪಾದರಸ’ವನ್ನು ವಿಶ್ವ ಆರೋಗ್ಯ ಸಂಸ್ಥೆ (WHO)ಯು ಪ್ರಮುಖವಾದ ಸಾರ್ವಜನಿಕ ಆರೋಗ್ಯ ಕಾಳಜಿಯ ಹತ್ತು ರಾಸಾಯನಿಕಗಳ ಗುಂಪಿನಲ್ಲಿ ‘ಮರ್ಕ್ಯುರಿ’ ಪಾದರಸವು ಸಹ ಒಂದು ಎಂದು ಪರಿಗಣಿಸುತ್ತದೆ.
ಮಿನಮಾಟಾ ಕಾಯಿಲೆ: ಇದು ಮೀಥೈಲ್ಮೆರ್ಕ್ಯುರಿ (Methylmercury) ವಿಷದಿಂದ ಉಂಟಾಗುವ ಕಾಯಿಲೆಯಾಗಿದ್ದು, ಇದನ್ನು ಜಪಾನ್ನ ಮಿನಾಮಟಾ ಕೊಲ್ಲಿಯ ನಿವಾಸಿಗಳಲ್ಲಿ ಮೊದಲು ಗಮನಿಸಲಾಯಿತು. ‘ಪಾದರಸ ಕೈಗಾರಿಕಾ ತ್ಯಾಜ್ಯ’ದಿಂದ ಕಲುಷಿತಗೊಂಡ ಮೀನುಗಳನ್ನು ತಿನ್ನುವ ಪರಿಣಾಮವಾಗಿ ಈ ರೋಗ ಹರಡಿತು.
‘ಮಿನಮಾಟಾ ಸಮಾವೇಶ’ದ ಬಗ್ಗೆ:
- ಪಾದರಸದ ಮೇಲಿನ ಮಿನಮಾಟಾ ಸಮಾವೇಶವು (Minamata Convention on Mercury) ಪಾದರಸ ಮತ್ತು ಅದರ ಸಂಯುಕ್ತಗಳ ದುಷ್ಪರಿಣಾಮಗಳಿಂದ ಮಾನವನ ಆರೋಗ್ಯ ಮತ್ತು ಪರಿಸರವನ್ನು ರಕ್ಷಿಸುವ ಜಾಗತಿಕ ಒಪ್ಪಂದವಾಗಿದೆ.
- 2013 ರಲ್ಲಿ ಸ್ವಿಟ್ಜರ್ಲ್ಯಾಂಡ್ನ ಜಿನೀವಾದಲ್ಲಿ ನಡೆದ ಅಂತರ್-ಸರ್ಕಾರಿ ಸಮಾಲೋಚನಾ ಸಮಿತಿಯ ಐದನೇ ಅಧಿವೇಶನದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು ಮತ್ತು ಅದನ್ನು 2017 ರಲ್ಲಿ ಜಾರಿಗೆ ತರಲಾಯಿತು.
- ಈ ಸಮಾವೇಶದ ಮುಖ್ಯ ಉದ್ದೇಶವೆಂದರೆ ಅದರ ಜೀವನ ಚಕ್ರದಲ್ಲಿ ಮಾನವಜನ್ಯ ಚಟುವಟಿಕೆಗಳಿಂದ ‘ಪಾದರಸ’ದ ಬಿಡುಗಡೆಯನ್ನು ನಿಯಂತ್ರಿಸುವುದು.
- ಇದು ವಿಶ್ವಸಂಸ್ಥೆಯ ಒಪ್ಪಂದವಾಗಿದೆ.
- ಸಮಾವೇಶವು ‘ಪಾದರಸ’ದ ಮಧ್ಯಂತರ ಸಂಗ್ರಹಣೆ ಮತ್ತು ತ್ಯಾಜ್ಯವಾದ ನಂತರ ಅದನ್ನು ವಿಲೇವಾರಿ ಮಾಡುವುದು, ಪಾದರಸದಿಂದ ಕಲುಷಿತಗೊಂಡ ತಾಣಗಳು ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಸಹ ತಿಳಿಸುತ್ತದೆ.
- ಈ ಸಮಾವೇಶವನ್ನು ಭಾರತವು ಒಪ್ಪಿ (ratified) ಅಂಗೀಕರಿಸಿದೆ.
ವಿಷಯಗಳು: ಸಂವಹನ ನೆಟ್ವರ್ಕ್ಗಳ ಮೂಲಕ ಆಂತರಿಕ ಭದ್ರತೆಗೆ ಸವಾಲುಗಳು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಸುರಕ್ಷತೆಯ ಮೂಲಗಳು; ಸೈಬರ್ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳು ಅಕ್ರಮ ಹಣ ವರ್ಗಾವಣೆ ಮತ್ತು ಅದರ ತಡೆಗಟ್ಟುವಿಕೆ.
ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಸಂಸ್ಥೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ ) ನಿಯಮಗಳು, 2021:
(The Information Technology (Guidelines for Intermediaries and Digital Media Ethics Code) Rules, 2021:)
ಸಂದರ್ಭ:
ನೀತಿ ಸಂಹಿತೆ ಮತ್ತು ಮೂರು ಹಂತದ ಕುಂದುಕೊರತೆ ಪರಿಹಾರ ಚೌಕಟ್ಟನ್ನು ಒಳಗೊಂಡ ಡಿಜಿಟಲ್ ವಿಷಯವನ್ನು ನಿಯಂತ್ರಿಸುವ ಹೊಸ IT ನಿಯಮಗಳು ಮೇ 26 ರಿಂದ ಜಾರಿಗೆ ಬಂದಿವೆ.
ಹಿನ್ನೆಲೆ:
ಫೆಬ್ರವರಿ 25 ರಂದು,ಕೇಂದ್ರವು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಸಂಸ್ಥೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ನಿಯಮಗಳು 2021
(the Information Technology (Intermediary Guidelines and Digital Media Ethics Code) Rules 2021) ಅನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 87 (2) ರ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸುವ ಮೂಲಕ ಮತ್ತು ಹಿಂದಿನ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು) ನಿಯಮಗಳು 2011 (Information Technology (Intermediary Guidelines) Rules 2011),ಅನ್ನು ಬದಲಾಯಿಸುವ ಮೂಲಕ ರೂಪಿಸಿತು. ಇದು ಮೇ 26 ರಿಂದ ಜಾರಿಗೆ ಬರಲಿದೆ.
ಹೊಸ ನಿಯಮಗಳ ಅವಲೋಕನ:
- ಇದು OTT ಸೇವಾ ಪೂರೈಕೆದಾರರು ಮತ್ತು ಡಿಜಿಟಲ್ ಪೋರ್ಟಲ್ ಗಳಿಗೆ ಕುಂದುಕೊರತೆ ನಿವಾರಣಾ ವ್ಯವಸ್ಥೆ ಯನ್ನು ರೂಪಿಸುವುದನ್ನು ಕಡ್ಡಾಯಗೊಳಿಸುತ್ತದೆ. ಸಾಮಾಜಿಕ ಮಾಧ್ಯಮದ ದುರುಪಯೋಗದ ವಿರುದ್ಧ ತಮ್ಮ ಕುಂದುಕೊರತೆಗಳನ್ನು ವ್ಯಕ್ತಪಡಿಸಲು ಸೋಶಿಯಲ್ ಮೀಡಿಯಾದ ಗ್ರಾಹಕರಿಗೆ ಇದು ಅತ್ಯವಶ್ಯಕವಾಗಿದೆ.
- ಮಹತ್ವದ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಮುಖ್ಯ ಅನುಸರಣೆ ಅಧಿಕಾರಿಯನ್ನು(chief compliance officer) ನೇಮಿಸುವುದು ಸಹ ಕಡ್ಡಾಯವಾಗಿರುತ್ತದೆ ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ 24 × 7 ಸಮನ್ವಯಕ್ಕಾಗಿ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು (social media intermediaries ) ನೋಡಲ್ ಸಂಪರ್ಕ ವ್ಯಕ್ತಿಯನ್ನು (nodal contact person)ನೇಮಿಸುವುದು ಕಡ್ಡಾಯವಾಗಿರುತ್ತದೆ.
- ಕುಂದುಕೊರತೆ ನಿವಾರಣಾ ಅಧಿಕಾರಿ: ಸಾಮಾಜಿಕ ಮಾಧ್ಯಮ ಸಂಸ್ಥೆಗಳು ದೂರುಗಳನ್ನು ನಿರ್ವಹಿಸಲು ಕುಂದುಕೊರತೆ ನಿವಾರಣಾ ಅಧಿಕಾರಿಯನ್ನು ನೇಮಿಸಬೇಕಾಗುತ್ತದೆ. ಅವರು ದೂರನ್ನು 24 ಗಂಟೆಗಳ ಒಳಗೆ ದಾಖಲಿಸಿಕೊಂಡು 15 ದಿನಗಳಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ.
- ವಿಷಯವನ್ನು ತೆಗೆದುಹಾಕುವುದು: ಬಳಕೆದಾರರ ಘನತೆಗೆ ವಿರುದ್ಧವಾಗಿ, ವಿಶೇಷವಾಗಿ ಮಹಿಳೆಯರ – ಬಹಿರಂಗಗೊಂಡ ಅವರ ವೈಯಕ್ತಿಕ ಖಾಸಗಿ ಅಂಗಗಳ ಬಗ್ಗೆ ಅಥವಾ ನಗ್ನತೆ ಅಥವಾ ಲೈಂಗಿಕ ಕ್ರಿಯೆ ಅಥವಾ ಸೋಗು ಹಾಕುವಿಕೆ ಇತ್ಯಾದಿಗಳ ಬಗ್ಗೆ ದೂರುಗಳಿದ್ದರೆ – ದೂರು ನೀಡಿದ 24 ಗಂಟೆಗಳ ಒಳಗೆ ಅದನ್ನು ತೆಗೆದುಹಾಕಲು ಸಾಮಾಜಿಕ ಮಾಧ್ಯಮ ವೇದಿಕೆಗಳು ಕ್ರಮಕೈಗೊಳ್ಳುವುದು ಅಗತ್ಯವಾಗಿರುತ್ತದೆ.
- ಮಾಸಿಕ ವರದಿ: ಸ್ವೀಕರಿಸಿದ ಒಟ್ಟು ದೂರುಗಳ ಸಂಖ್ಯೆ ಮತ್ತು ಪರಿಹಾರದ ಸ್ಥಿತಿಯ ಬಗ್ಗೆ ಅವರು ಮಾಸಿಕ ವರದಿಯನ್ನು ಪ್ರಕಟಿಸಬೇಕಾಗುತ್ತದೆ.
- ಸುದ್ದಿ ಪ್ರಕಾಶಕರಿಗೆ ಮೂರು ಹಂತದ ನಿಯಂತ್ರಣ ಇರುತ್ತದೆ – ಸ್ವಯಂ ನಿಯಂತ್ರಣ,ನಿವೃತ್ತ ನ್ಯಾಯಾಧೀಶರು ಅಥವಾ ಶ್ರೇಷ್ಠ ವ್ಯಕ್ತಿಯ ನೇತೃತ್ವದ ಸ್ವಯಂ-ನಿಯಂತ್ರಕ ಸಂಸ್ಥೆ, ಮತ್ತು ಅಭ್ಯಾಸಗಳ ಸಂಹಿತೆಗಳು ಮತ್ತು ಕುಂದುಕೊರತೆ ನಿವಾರಣಾ ಸಮಿತಿ ಸೇರಿದಂತೆ,ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೇಲ್ವಿಚಾರಣೆ.
ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿ ಸಂಸ್ಥೆಗಳು ಎಂದರೇನು? ಮತ್ತು ಅದರ ಅಡಿಯಲ್ಲಿ ಪಡೆದ ಲಾಭಗಳು ಯಾವುವು?
ಹೊಸ ಮಾನದಂಡಗಳ ಪ್ರಕಾರ, 50 ಲಕ್ಷಕ್ಕೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಕಂಪನಿಗಳನ್ನು ‘ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು’ ಎಂದು ಪರಿಗಣಿಸಲಾಗುತ್ತದೆ.
ಹೊಸ ನಿಯಮಗಳನ್ನು ಅನುಸರಿಸದಿದ್ದರೆ ಆಗುವ ಪರಿಣಾಮಗಳು:
- ಸಾಮಾಜಿಕ ಮಾಧ್ಯಮ ದೈತ್ಯ ಸಂಸ್ಥೆಗಳಾದ ಫೇಸ್ಬುಕ್, ಟ್ವಿಟರ್, ಇನ್ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಮೆಸೆಂಜರ್ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪಾಲಿಸದಿದ್ದರೆ ನಿಷೇಧವನ್ನು(could face a ban) ಎದುರಿಸಬೇಕಾಗುತ್ತದೆ.
- ಅವರು “ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು” ಎಂಬ ಸ್ಥಾನಮಾನವನ್ನು ಕಳೆದುಕೊಳ್ಳುವ ಅಪಾಯವನ್ನು ಸಹ ಎದುರಿಸಬೇಕಾಗುತ್ತದೆ ಮತ್ತು ಅವರು ಪರಿಷ್ಕೃತ ನಿಯಮಗಳನ್ನು ಪಾಲಿಸದಿದ್ದರೆ ಕ್ರಿಮಿನಲ್ ಕ್ರಮಗಳನ್ನು ಎದುರಿಸಲು ಹೊಣೆಗಾರರಾಗಬಹುದು.
ಸಂಬಂಧಿತ ಕಳವಳಗಳು:
- ವಿಶೇಷವಾಗಿ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ, ಹಲವು ಉದ್ಯಮ ಸಂಸ್ಥೆಗಳು ಒಂದು ವರ್ಷದವರೆಗೆ ಅನುಸರಣಾ ವಿಂಡೋಗಾಗಿ ಸರ್ಕಾರಕ್ಕೆ ಪತ್ರ ಬರೆದಿವೆ.
- ಹೊಸ ನಿಯಮಗಳ ಅಡಿಯಲ್ಲಿ ಐಟಿ ಕಾಯ್ದೆಯ ಸೆಕ್ಷನ್ 79 ರ ಅಡಿಯಲ್ಲಿ ಮಧ್ಯವರ್ತಿಗಳಿಗೆ ನೀಡಲಾಗುವ ‘ಸುರಕ್ಷಿತ ಬಂದರು’ (ಸೇಫ್ ಹಾರ್ಬರ್ ನಿಬಂಧನೆಗಳನ್ನು) ಭದ್ರತೆ ಲಭ್ಯವಿಲ್ಲದಿರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಲಾಗಿದೆ.
- ಇದು,ಮಧ್ಯವರ್ತಿಗಳ ಅನುಸರಣೆಗಾಗಿ ನೌಕರರ ಮೇಲೆ ಕ್ರಿಮಿನಲ್ ಹೊಣೆಗಾರಿಕೆಯನ್ನು ಹೇರಲು ಕಾರಣವಾಗಬಹುದಾದ, ನಿಯಮಗಳಲ್ಲಿನ ಒಂದು ಷರತ್ತಿನ್ನು ಮರು-ಪರಿಶೀಲಿಸುವಂತೆ ಅವರು ವಿನಂತಿಸಿದ್ದಾರೆ, ವ್ಯವಹಾರವನ್ನು ಸುಲಭಗೊಳಿಸುವ ಹಿತದೃಷ್ಟಿಯಿಂದ ಅದನ್ನು ಕೈಬಿಡಬೇಕೆಂದು ಕೇಳಿಕೊಳ್ಳುತ್ತಾರೆ.
- ಎಂಡ್-ಟು-ಎಂಡ್ ಎನ್ಕ್ರಿಪ್ಟ್ ಮಾಡಲಾದ ಪ್ಲ್ಯಾಟ್ಫಾರ್ಮ್ಗಳಲ್ಲಿನ ಮಾಹಿತಿಯ ಮೊದಲ ಮೂಲ ವ್ಯಕ್ತಿಯ ಅಥವಾ ಒರಿಜಿನೇಟರ್ ನ ಪತ್ತೆಹಚ್ಚುವಿಕೆ ಆದೇಶವು ಸಾಮಾಜಿಕ ಮಾಧ್ಯಮ ವೇದಿಕೆಯ ಭದ್ರತಾ ವಿನ್ಯಾಸವನ್ನು ದುರ್ಬಲಗೊಳಿಸಬಹುದು. ಇದು ಇಡೀ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಪ್ರತಿಕೂಲ ವ್ಯಕ್ತಿಗಳಿಂದ ಸೈಬರ್ ದಾಳಿಗೆ ಗುರಿಯಾಗಿಸಬಹುದು.
- ಹೆಚ್ಚುವರಿಯಾಗಿ, ಅಸ್ತಿತ್ವದಲ್ಲಿರುವ ದತ್ತಾಂಶ ಉಳಿಸಿಕೊಳ್ಳುವ ಆದೇಶವು ಭದ್ರತಾ ಅಪಾಯಗಳು ಮತ್ತು ತಾಂತ್ರಿಕ ಸಂಕೀರ್ಣತೆಗಳ ಜೊತೆಗೆ ಭಾರತ ಮತ್ತು ವಿದೇಶಗಳಲ್ಲಿನ ಬಳಕೆದಾರರ ಗೌಪ್ಯತೆಗೆ ಅಪಾಯವನ್ನುಂಟುಮಾಡುತ್ತದೆ, ಇದು ಅಸ್ತಿತ್ವದಲ್ಲಿರುವ ಪರಿಸರ ವ್ಯವಸ್ಥೆಯೊಂದಿಗೆ ಏಕೀಕರಣದ ಮೊದಲು ಅಭಿವೃದ್ಧಿ ಮತ್ತು ಪರೀಕ್ಷೆಗೆ ಸಾಕಷ್ಟು ಸಮಯ ಬೇಕಾಗುತ್ತದೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 4
ವಿಷಯಗಳು: ಸಾರ್ವಜನಿಕ ಆಡಳಿತದಲ್ಲಿ ಸಾರ್ವಜನಿಕ / ನಾಗರಿಕ ಸೇವಾ ಮೌಲ್ಯಗಳು ಮತ್ತು ನೈತಿಕತೆ: ಸ್ಥಿತಿ ಮತ್ತು ತೊಂದರೆಗಳು; ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನೈತಿಕ ಕಾಳಜಿ ಮತ್ತು ಸಂದಿಗ್ಧತೆಗಳು. ಮಾಹಿತಿ ಹಂಚಿಕೆ ಮತ್ತು ಸರ್ಕಾರದಲ್ಲಿ ಪಾರದರ್ಶಕತೆ.
ವೈಮಾನಿಕ ವಿವಾಹ: DGCA ಖಂಡಿತವಾಗಿಯೂ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ ತಜ್ಞರು:
(Plane wedding: DGCA must take action, say experts:)
ಸಂದರ್ಭ:
ನಾಗರಿಕ ವಿಮಾನಯಾನ ನಿರ್ದೇಶನಾಲಯವು (DGCA), ಚಾರ್ಟರ್ಡ್ ಸ್ಪೈಸ್ ಜೆಟ್ ವಿಮಾನದ ಹಾರಾಟದ ಸಮಯದಲ್ಲಿ 161 ಪ್ರಯಾಣಿಕರು ವೈಮಾನಿಕ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ಕೋವಿಡ್ ಮಾನದಂಡಗಳನ್ನು ಉಲ್ಲಂಘಿಸಿರುವ ಬಗ್ಗೆ ತನಿಖೆ ಆರಂಭಿಸಿದೆ.
ಕೋವಿಡ್ ಮಾನದಂಡಗಳನ್ನು ಉಲ್ಲಂಘಿಸಿ ವಿಮಾನದ ಹಾರಾಟದ ಸಮಯದಲ್ಲಿ ವಿವಾಹದ ಆಚರಣೆಗಳನ್ನು ಸಹ ನಡೆಸಲಾಯಿತು. ವಧು-ವರರು ವಿವಾಹ ವಿಧಿಗಳನ್ನು ಪೂರ್ಣಗೊಳಿಸುತ್ತಿದ್ದಂತೆ ವಿಮಾನವು ಮಧುರೈನ ಮೀನಾಕ್ಷಿ ಅಮ್ಮನ್ ದೇವಾಲಯದ ಮೇಲೆ ಹಾರಾಡಿತು.
- ಆದರೆ, ವಿಮಾನದಲ್ಲಿ ವಿವಾಹದ ಆಚರಣೆಗಳು ನಡೆಯಲಿರುವ ಕುರಿತು ನನಗೆ ಮಾಹಿತಿ ಇರಲಿಲ್ಲ ಎಂದು ಸ್ಪೈಸ್ ಜೆಟ್ ವಿಮಾನ ಕಂಪನಿಯು ಹೇಳುತ್ತದೆ.
DGCA ದ ನಿಯಮಗಳು:
ಮಾರ್ಚನಲ್ಲಿ, DGCA ಯು, ಎಲ್ಲಾ ವಿಮಾನಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳು ಮತ್ತು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಗಳಿಗೆ ಹೊರಡಿಸಿದ ಸುತ್ತೋಲೆಯಲ್ಲಿ, ಹಾರಾಟದ ಸಮಯದಲ್ಲಿ ಪದೇ ಪದೇ ಎಚ್ಚರಿಕೆ ನೀಡಿದ್ದರೂ, ಕೋವಿಡ್ -19 ಪ್ರೋಟೋಕಾಲ್ / ನಿಯಮಾವಳಿಗಳನ್ನು ಉಲ್ಲಂಘಿಸುವ ಪ್ರಯಾಣಿಕರನ್ನು “ಅಶಿಸ್ತಿನ ಪ್ರಯಾಣಿಕರು” ಎಂದು ಘೋಷಿಸುವಂತೆ ಸುತ್ತೋಲೆಯಲ್ಲಿ ತಿಳಿಸಿತು.
- ಇದರರ್ಥ ಹಾರಾಟದ ಸಮಯದಲ್ಲಿ ಮುಖವಾಡಗಳನ್ನು ಸರಿಯಾಗಿ ಧರಿಸದ ಅಥವಾ ಸಾಮಾಜಿಕ ಅಂತರದ ಮಾನದಂಡಗಳನ್ನು ಪಾಲಿಸದ ಪ್ರಯಾಣಿಕರನ್ನು ಕನಿಷ್ಠ ಮೂರು ತಿಂಗಳವರೆಗೆ ವಿಮಾನ ಪ್ರಯಾಣ ನಿಷೇಧದ ಪಟ್ಟಿಯಲ್ಲಿ (no-fly list) ಸೇರಿಸಬಹುದು.
- ನಿಯಮಗಳನ್ನು ಉಲ್ಲಂಘಿಸುವವರನ್ನು ಮೂರು ಹಂತಗಳಲ್ಲಿ ವಿಮಾನ ಪ್ರಯಾಣ ನಿಷೇಧದ (no-fly list) ಪಟ್ಟಿಯಲ್ಲಿ ಸೇರಿಸಬಹುದು: ಮೌಖಿಕ ನಿಂದನೆಗೆ ಮೂರು ತಿಂಗಳು, ದೈಹಿಕ ಹಲ್ಲೆಗೆ ಆರು ತಿಂಗಳು, ಮತ್ತು ಮಾರಣಾಂತಿಕ ವರ್ತನೆಗೆ ಎರಡು ವರ್ಷ ಅಥವಾ ಹೆಚ್ಚಿನದು.
- ಈ ನಿಯಮಗಳ ಪ್ರಕಾರ, ವಿಮಾನಯಾನ ಸಿಬ್ಬಂದಿ ದೂರು ಸಲ್ಲಿಸಿದ ನಂತರ, ವಿಮಾನಯಾನ ಸಂಸ್ಥೆಯು ರಚಿಸಿದ ಆಂತರಿಕ ಸಮಿತಿಯು ಅಪರಾಧದ ಸ್ವರೂಪ ಮತ್ತು ಪ್ರಯಾಣಿಕರಿಗೆ ನೀಡಬೇಕಾದ ಶಿಕ್ಷೆಯ ಮಟ್ಟವನ್ನು ನಿರ್ಧರಿಸುತ್ತದೆ ಎಂದು ನಿಯಮಗಳು ತಿಳಿಸುತ್ತವೆ.
ಇತ್ತೀಚಿನ ಘಟನೆಗೆ ಸಂಬಂಧಿಸಿದ ಸಮಸ್ಯೆಗಳು:
- ಯಾರೂ ಕೂಡ ಮುಖಗವಸುಗಳು ಮತ್ತು PPE ಕಿಟ್ಗಳನ್ನು ಧರಿಸಿರಲಿಲ್ಲ.
- ಯಾವುದೇ ಸಾಮಾಜಿಕ ಅಂತರವಿಲ್ಲ.
- 100 ಕ್ಕೂ ಹೆಚ್ಚು ಜನರನ್ನು ಒಟ್ಟುಗೂಡಿಸುವುದು.
- ಎಲ್ಲಾ ಸುರಕ್ಷತಾ ಮಾನದಂಡಗಳ ಉಲ್ಲಂಘನೆ ಮಾಡಿರುವುದು.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ಪೀಡಿಯಾಟ್ರಿಕ್ ಇನ್ಫ್ಲಮೇಟರಿ ಮಲ್ಟಿಸಿಸ್ಟಮ್ ಸಿಂಡ್ರೋಮ್ (PIMS-TS):
- ಮಕ್ಕಳಲ್ಲಿ ‘ಮಲ್ಟಿಸಿಸ್ಟಮ್ ಇನ್ಫ್ಲಾಮೇಟರಿ ಸಿಂಡ್ರೋಮ್’ (MIS-C) ಎಂದೂ ಕರೆಯಲ್ಪಡುವ PIMS-TS, SARS-CoV-2 ಸೋಂಕಿಗೆ ಸಂಬಂಧಿಸಿದ ಅಪರೂಪದ ಸ್ಥಿತಿಯಾಗಿದೆ, ಮತ್ತು ಇದನ್ನು ಮೊದಲು ಏಪ್ರಿಲ್ 2020 ರಲ್ಲಿ ಕಂಡುಹಿಡಿಯಲಾಗಿದೆ.
- ಕಾರಣಗಳು: ಈ ಸ್ಥಿತಿಗೆ ಕಾರಣವಾಗುವ ಅಂಶಗಳು ಇನ್ನೂ ತಿಳಿದುಬಂದಿಲ್ಲ, ಆದರೆ ಇದನ್ನು ಅಪರೂಪದ ‘ರೋಗನಿರೋಧಕ ಅತಿಯಾದ ಪ್ರತಿಕ್ರಿಯೆ’ (immune overreaction) ಎಂದು ಪರಿಗಣಿಸಲಾಗುತ್ತದೆ. ಸೌಮ್ಯ ಅಥವಾ ರೋಗಲಕ್ಷಣದ SARS-CoV-2 ಸೋಂಕಿನ ನಂತರ ಸುಮಾರು ನಾಲ್ಕರಿಂದ ಆರು ವಾರಗಳ ನಂತರ ಈ ಸ್ಥಿತಿಯು ಕಂಡುಬರುತ್ತದೆ.
- ಲಕ್ಷಣಗಳು: ಜ್ವರ, ದದ್ದು, ಕಣ್ಣಿನ ಸೋಂಕು ಮತ್ತು ಜಠರಗರುಳಿನ ಲಕ್ಷಣಗಳು (ಉದಾ. ಅತಿಸಾರ, ಹೊಟ್ಟೆ ನೋವು, ವಾಕರಿಕೆ) ಇತ್ಯಾದಿಗಳನ್ನು ಈ ಸ್ಥಿತಿಯ ಲಕ್ಷಣಗಳು ಒಳಗೊಂಡಿವೆ. ಕೆಲವು ಅಪರೂಪದ ಸಂದರ್ಭಗಳಲ್ಲಿ, ಈ ಸ್ಥಿತಿಯು ದೇಹದ ಬಹು-ಅಂಗಗಳ ವೈಫಲ್ಯಕ್ಕೆ ಕಾರಣವಾಗಬಹುದು.
ಸುದ್ದಿಯಲ್ಲಿರಲು ಕಾರಣ?
SARS-CoV2 ಗೆ ಸಂಬಂಧಿಸಿದ ಅಪರೂಪದ ಪೀಡಿಯಾಟ್ರಿಕ್ ಇನ್ಫ್ಲಮೇಟರಿ ಮಲ್ಟಿಸಿಸ್ಟಮ್ ಸಿಂಡ್ರೋಮ್ (PIMS-TS) ನ ಹೆಚ್ಚಿನ ಲಕ್ಷಣಗಳು ಆರು ತಿಂಗಳ ನಂತರ ಗುಣಮುಖವಾಗುತ್ತವೆ ಎಂದು ಸಣ್ಣ ಅಧ್ಯಯನವು ವರದಿ ಮಾಡಿದೆ.
WHO ಬಯೋಹಬ್ ಉಪಕ್ರಮ:
(WHO BioHub initiative)
ರೋಗಕಾರಕಗಳನ್ನು ಸಂಗ್ರಹಿಸಲು, ಹಂಚಿಕೊಳ್ಳಲು ಮತ್ತು ವಿಶ್ಲೇಷಣೆ ಮಾಡಲು ಬಯೋಹಬ್ ಒಂದು ಜಾಗತಿಕ ಸೌಲಭ್ಯವಾಗಲಿದೆ.
ಮಹತ್ವ: ಪ್ರಸ್ತುತ, ರೋಗಕಾರಕಗಳ ಹಂಚಿಕೆಯನ್ನು ದೇಶಗಳ ನಡುವೆ ದ್ವಿಪಕ್ಷಿಯವಾಗಿ ಮಾಡಲಾಗುತ್ತದೆ; WHO ನ ಬಯೋಹಬ್ ಈ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ.
ಈ ಸೌಲಭ್ಯವನ್ನು ಪರಿಚಯಿಸಲು WHO ಮತ್ತು ಸ್ವಿಟ್ಜರ್ಲೆಂಡ್ ತಿಳುವಳಿಕೆ ಪತ್ರಕ್ಕೆ / ಒಪ್ಪಂದಕ್ಕೆ ಸಹಿ ಹಾಕಿವೆ.
ನೊವೆಲ್ ಕರೋನವೈರಸ್ ಕಾಯಿಲೆ (ಕೋವಿಡ್ -19) ಸಾಂಕ್ರಾಮಿಕ ದೃಷ್ಟಿಯಲ್ಲಿ ಈ ಕ್ರಮವು ಮಹತ್ವದ್ದಾಗಿದೆ ಮತ್ತು ಅಪಾಯಗಳನ್ನು ನಿರ್ಣಯಿಸಲು ಮತ್ತು ಪ್ರತಿ ಕ್ರಮಗಳನ್ನು ಪ್ರಾರಂಭಿಸಲು ರೋಗಕಾರಕ ಮಾಹಿತಿಯನ್ನು ಹಂಚಿಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಅಗತ್ಯವನ್ನು ಗಮನಿಸಿದರೆ ಈ ಹಂತವು ಮುಖ್ಯವಾಗಿದೆ.
ಉಡುಪಿಯಲ್ಲಿ ದೊರೆತ ಬುದ್ಧನ ಸಣ್ಣ / ಚಿಕಣಿ ಪ್ರತಿಮೆ:
ಕರ್ನಾಟಕದ ಉಡುಪಿ ಜಿಲ್ಲೆಯ ಅಲೆಂಬಿಯಲ್ಲಿ ಪಾಳುಬಿದ್ದ ಬಾವಿಯಿಂದ ತೆಗೆದ ಅವಶೇಷಗಳ ನಡುವೆ ಬುದ್ಧನ ಚಿಕಣಿ ಪ್ರತಿಮೆ ಪತ್ತೆಯಾಗಿದೆ.
ವಿವರಣೆ:
- ಈ ಪ್ರತಿಮೆಯು ಒಂಬತ್ತು ಸೆಂಟಿಮೀಟರ್ ಎತ್ತರ, ಐದು ಸೆಂಟಿಮೀಟರ್ ಅಗಲ ಮತ್ತು ಎರಡು ಸೆಂಟಿಮೀಟರ್ ದಪ್ಪವಾಗಿರುತ್ತದೆ.
- ಈ ಪ್ರತಿಮೆಯಲ್ಲಿ ಬುದ್ಧನು ‘ಧರ್ಮಚಕ್ರ ಪರಿವರ್ತನ ಮುದ್ರೆ’ಯಲ್ಲಿ ಕಮಲದ ಪೀಠದ ಮೇಲೆ ಕುಳಿತಿದ್ದಾನೆ.
- ಪೀಠದ ಕೆಳಗೆ ಧರ್ಮ ಚಕ್ರದ ಎರಡೂ ಬದಿಯಲ್ಲಿ ಆರು ಶಿಷ್ಯರು ಕುಳಿತಿದ್ದಾರೆ.
- ಈ ಪ್ರತಿಮೆಯಲ್ಲಿ ಭಗವಾನ್ ಬುದ್ಧ ಬಟ್ಟೆ ಮತ್ತು ಕಿವಿಯೋಲೆಗಳನ್ನು ಧರಿಸಿದ್ದಾನೆ.
- ಸಣ್ಣ ಉಶ್ನಿಷವನ್ನು(Ushnisha) ತಲೆಯ ಮೇಲ್ಭಾಗದಲ್ಲಿ ತೋರಿಸಲಾಗಿದೆ.
- ತಲೆಯ ಹಿಂಭಾಗದಲ್ಲಿ ಸುಂದರವಾಗಿ ಕೆತ್ತಿದ ವೃತ್ತಾಕಾರದ ಹಾಲೆ ಕಾಣಿಸಿಕೊಳ್ಳುತ್ತದೆ.
- ಪ್ರತಿಮೆಯ ಮೇಲಿನ ಮೂಲೆಗಳಲ್ಲಿ, ಎರಡು ಯಕ್ಷಗಳು ಮತ್ತು ಎರಡು ರೆಕ್ಕೆಯ ಕುದುರೆಗಳನ್ನು ಬೆನ್ನಿನ ಎರಡೂ ಬದಿಯಲ್ಲಿ ಕೆತ್ತಲಾಗಿದೆ.
- ಇದನ್ನು ಗುಪ್ತಾ ಶೈಲಿಯ ಶಿಲ್ಪಕಲೆಯಲ್ಲಿ ನಿರ್ಮಿಸಲಾಗಿದೆ.
ಈ ಆವಿಷ್ಕಾರದ ಪ್ರಾಮುಖ್ಯತೆ:
ಸಾಂಪ್ರದಾಯಿಕವಾಗಿ, ಪ್ರಾಚೀನ ತುಳುನಾಡು ಬನವಾಸಿಯ ಕದಂಬರ ಅಧೀನದಲ್ಲಿತ್ತು ಎಂದು ಹೇಳಲಾಗುತ್ತದೆ. ಬನವಾಸಿಯ ಕದಂಬರು ಮತ್ತು ಉತ್ತರದ ಗುಪ್ತರ ನಡುವೆ ವೈವಾಹಿಕ ಸಂಬಂಧಗಳು ಏರ್ಪಟ್ಟಿದ್ದವು. ಆದ್ದರಿಂದ, ಬುದ್ಧನ ಪ್ರತಿಮೆಯ ಆವಿಷ್ಕಾರವು ಅಸಮಾನ್ಯ ಸಂಗತಿಯೇನಲ್ಲ.