ದಿನಾಂಕ – 4 ಮಾರ್ಚ್ 2021
ಪರಿವಿಡಿ :
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ವಿಮಾ ಲೋಕಪಾಲ / ಓಂಬುಡ್ಸ್ಮನ್.
2. ರಾಷ್ಟ್ರೀಯ ಜನಸಂಖ್ಯಾ ನೋಂದಣಿ.
3. ಅಮೇರಿಕಾದ ಚಿಂತಕರ ಚಾವಡಿ ವರದಿಯು ಭಾರತವನ್ನು ‘ಭಾಗಶಃ ಮುಕ್ತ’ ಎಂದು ವರ್ಗೀಕರಿಸುತ್ತದೆ.
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ಸಕ್ಕರೆಯ ಕನಿಷ್ಠ ಮಾರಾಟ ಬೆಲೆ.
2. ಡಂಪಿಂಗ್ ವಿರೋಧಿ ತೆರಿಗೆ.
ಸಾಮಾನ್ಯ ಅಧ್ಯಯನ ಪತ್ರಿಕೆ 4:
1. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಇಬ್ಬರು ಜಿಲ್ಲಾಧಿಕಾರಿಗಳಿಗೆ ಶಿಕ್ಷೆ ವಿಧಿಸಿದ ಹೈಕೋರ್ಟ್.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
1. ಸಾಗರ ಪ್ರಾದೇಶಿಕ ಯೋಜನೆ (MSP)
2. ಉದ್ಯೋಗ ಮಂಥನ.
3. ಮರುಭೂಮಿ ಧ್ವಜ ಯುಧ್ಧಾಭ್ಯಾಸ VI :
(EX Desert FLAG VI)
4. ನಾಗ್ ನದಿ.
ಸಾಮಾನ್ಯ ಅಧ್ಯಯನ ಪತ್ರಿಕೆ – 2
ವಿಷಯಗಳು: ಶಾಸನಬದ್ಧ, ನಿಯಂತ್ರಕ ಮತ್ತು ವಿವಿಧ ಅರೆ-ನ್ಯಾಯಾಂಗ ಸಂಸ್ಥೆಗಳು.
ವಿಮಾ ಲೋಕಪಾಲ / ಓಂಬುಡ್ಸ್ಮನ್:
(Insurance ombudsman)
ಸಂದರ್ಭ:
ಇತ್ತೀಚೆಗೆ, ವಿಮಾ ಓಂಬುಡ್ಸ್ಮನ್ ನಿಯಮಗಳನ್ನು ಸರ್ಕಾರ ತಿದ್ದುಪಡಿ ಮಾಡಿದೆ.
ಹೊಸ ನಿಯಮಗಳ ಪ್ರಕಾರ:
- ವಿಮಾ ದಲ್ಲಾಳಿ / ಏಜೆಂಟ್, ದಲ್ಲಾಳಿಗಳನ್ನು ಲೋಕಪಾಲ್ ವ್ಯಾಪ್ತಿಗೆ ತರಲಾಗಿದೆ.
- ಪಾಲಿಸಿದಾರರು ಈಗ ಆನ್ಲೈನ್ನಲ್ಲಿ ದೂರು ಸಲ್ಲಿಸಲು ಅವಕಾಶ ನೀಡಲಾಗಿದೆ.
- ಸೇವಾ ಕಂಪನಿಗಳು, ಏಜೆಂಟರು, ದಲ್ಲಾಳಿಗಳು ಮತ್ತು ಇತರ ಮಧ್ಯವರ್ತಿಗಳ ನಡುವಿನ ವಿವಾದಗಳನ್ನು ಲೋಕಪಾಲ್ ನ ದೂರುಗಳ ವ್ಯಾಪ್ತಿಗೆ ತರಲಾಗಿದೆ.
- ವಿಚಾರಣೆಗೆ ಓಂಬುಡ್ಸ್ಮನ್ ವೀಡಿಯೊ ಕಾನ್ಫರೆನ್ಸಿಂಗ್ ಅನ್ನು ಬಳಸಬಹುದು.
ವಿಮಾ ಓಂಬುಡ್ಸ್ಮನ್ ಕುರಿತು:
ವಿಮಾ ಓಂಬುಡ್ಸ್ಮನ್ ಅಂದರೆ ವಿಮಾ ಲೋಕಪಾಲ (Insurance Ombudsman) ಈ ಯೋಜನೆಯನ್ನು, ವೈಯಕ್ತಿಕ ಪಾಲಿಸಿದಾರರ ಕುಂದುಕೊರತೆಗಳನ್ನು ವೆಚ್ಚ ಪರಿಣಾಮಕಾರಿ, ಪರಿಣಾಮಕಾರಿ ಮತ್ತು ನಿಸ್ಪಕ್ಷಪಾತ ರೀತಿಯಲ್ಲಿ ಮತ್ತು ನ್ಯಾಯಾಲಯದ ಹೊರಗೆ ಪರಿಹರಿಸಲು ಭಾರತ ಸರ್ಕಾರವು ರೂಪಿಸಿದೆ.
ವಿಮಾ ಓಂಬುಡ್ಸ್ಮನ್ ಮುಂದೆ ಯಾರು ದೂರು ನೀಡಬಹುದು?
ವಿಮಾದಾರನ (against an insurer) ಕುಂದುಕೊರತೆ ಹೊಂದಿರುವ ಯಾವುದೇ ವ್ಯಕ್ತಿ, ಸ್ವತಃ ಅಥವಾ ತನ್ನ ಕಾನೂನು ಉತ್ತರಾಧಿಕಾರಿ, ನಾಮಿನಿ ಅಥವಾ ನಿಯೋಜಕರ ಮೂಲಕ ವಿಮಾ ಓಂಬುಡ್ಸ್ಮನ್ ಗೆ ಲಿಖಿತವಾಗಿ ದೂರು ಸಲ್ಲಿಸಬಹುದು.
ಒಬ್ಬ ವ್ಯಕ್ತಿಯು ಲೋಕಪಾಲ್ / ಒಂಬುಡ್ಸ್ಮನ್ ಅನ್ನು ಈ ಕೆಳಗಿನ ಸಂದರ್ಭಗಳಲ್ಲಿ ಮಾತ್ರ ದೂರು ನೀಡಲು ಸಂಪರ್ಕಿಸಬಹುದು:
- ದೂರಿಗೆ ಸಂಬಂಧಿಸಿದಂತೆ ವ್ಯಕ್ತಿಯು ವಿಮಾ ಕಂಪನಿಯನ್ನು ಮೊದಲು ಸಂಪರ್ಕಿಸಿದ್ದು;
- ವಿಮಾ ಕಂಪನಿ ಅದನ್ನು ತಿರಸ್ಕರಿಸಿದ್ದರೆ;
- ತೃಪ್ತಿಕರವಾಗಿ ಪರಿಹರಿಸಲಾಗಿಲ್ಲವಾದರೆ, ಅಥವಾ
- ದೂರು ನೀಡಿದ ದಿನಾಂಕದಿಂದ 30 ದಿನಗಳವರೆಗೆ ಯಾವುದೇ ಪ್ರತಿಕ್ರಿಯೆ ನೀಡಲಾಗಿಲ್ಲದ ಸಂದರ್ಭದಲ್ಲಿ.
- ಹೆಚ್ಚುವರಿಯಾಗಿ, ದೂರು ನೀಡಲು ಮಾಡಿದ ಖರ್ಚು ಸೇರಿದಂತೆ ಒಟ್ಟು ಹಕ್ಕಿನ ಮೊತ್ತವು 30 ಲಕ್ಷ ರೂ.ಗಳನ್ನು ಮೀರಿರಬಾರದು.
ಒಂಬುಡ್ಸ್ಮನ್ ನೇಮಕ:
- ವಿಮಾ ಓಂಬುಡ್ಸ್ಮನ್ ಹುದ್ದೆಗೆ ನೇಮಕಾತಿಗಾಗಿ, ವಿಮಾ ಉದ್ಯಮ, ನಾಗರಿಕ ಅಥವಾ ನ್ಯಾಯಾಂಗ ಸೇವೆಗಳಿಗೆ ಸೇರಿದ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಲಾಗುತ್ತದೆ ಮತ್ತು ಅವರನ್ನು ‘ವಿಮಾ ಮಂಡಳಿ’ ನೇಮಿಸುತ್ತದೆ.
- ವಿಮಾ ಓಂಬುಡ್ಸ್ಮನ್ ಸೇವೆಯ ಅವಧಿ ಮೂರು ವರ್ಷಗಳು.
ಪಾವತಿ / ಪರಿಹಾರ ಪ್ರಕ್ರಿಯೆ:
ಶಿಫಾರಸುಗಳು:
- ಲೋಕಪಾಲ್ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತದೆ, ಮತ್ತು
- ವಿವಾದಕ್ಕೆ ಸಂಬಂಧಿಸಿದ ಸಂಗತಿಗಳ ಆಧಾರದ ಮೇಲೆ ಸೂಕ್ತ ಶಿಫಾರಸುಗಳನ್ನು ಮಾಡುತ್ತದೆ.
- ದೂರುದಾರರು ಈ ಶಿಫಾರಸುಗಳನ್ನು ಸಂಪೂರ್ಣ ಮತ್ತು ಅಂತಿಮ ಇತ್ಯರ್ಥವೆಂದು ಒಪ್ಪಿಕೊಂಡರೆ, ಒಂಬುಡ್ಸ್ಮನ್ ಈ ಬಗ್ಗೆ ಸಂಬಂಧಿಸಿದ ಕಂಪನಿಗೆ ತಿಳಿಸುತ್ತಾರೆ ಮತ್ತು ವಿಮಾ ಕಂಪನಿಯು 15 ದಿನಗಳಲ್ಲಿ ಈ ಶಿಫಾರಸುಗಳನ್ನು ಪಾಲಿಸಬೇಕಾಗುತ್ತದೆ.
ತೀರ್ಪು / ನಿರ್ಧಾರ:
- ಶಿಫಾರಸ್ಸು / ಶಿಫಾರಸ್ಸುಗಳ ಮೂಲಕ ಯಾವುದೇ ರಾಜಿ ಏರ್ಪಡದಿದ್ದರೆ, ದೂರುದಾರರಿಂದ ಎಲ್ಲಾ ಅಗತ್ಯ ದಾಖಲೆಗಳನ್ನು ಸ್ವೀಕರಿಸಿದ 3 ತಿಂಗಳೊಳಗೆ ಓಂಬುಡ್ಸ್ಮನ್ ನಿರ್ಧಾರವನ್ನು ರವಾನಿಸುತ್ತಾನೆ ಮತ್ತು ಈ ನಿರ್ಧಾರವು ವಿಮಾ ಕಂಪನಿಯ ಮೇಲೆ ಬದ್ಧವಾಗಿರುತ್ತದೆ.
ನಿರ್ಧಾರವನ್ನು ಅಂಗೀಕರಿಸಿದ ನಂತರ:
- ತೀರ್ಪು / ನಿರ್ಧಾರ ಪ್ರಕಟವಾದ 30 ದಿನಗಳಲ್ಲಿ ವಿಮಾದಾರನು ಅದನ್ನು ಅನುಸರಿಸಬೇಕು ಮತ್ತು ಈ ವಿಷಯದಲ್ಲಿ ಓಂಬುಡ್ಸ್ಮನ್ಗೆ ಅದರ ಅನುಸರಣೆಯನ್ನು ತಿಳಿಸಬೇಕು.
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
ರಾಷ್ಟ್ರೀಯ ಜನಸಂಖ್ಯಾ ನೊಂದಣಿ:
(National Population Register)
ಸಂದರ್ಭ:
‘ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾ’(Registrar General of India- RGI) ಮೊಬೈಲ್ ಅಪ್ಲಿಕೇಶನ್ ಬಳಸುವ ಮೂಲಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ (ಅಸ್ಸಾಂ ರಾಜ್ಯವನ್ನು ಹೊರತು ಪಡಿಸಲಾಗಿದೆ ) ಮೊದಲ ಹಂತದ ಜನಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (National Population Register – NPR) ಗೆ ಕ್ಷೇತ್ರ ಪ್ರಯೋಗಗಳನ್ನು (field trials) ನಡೆಸಲು ಸಿದ್ಧತೆ ನಡೆಸಿದೆ.
ಈ ಮೊಬೈಲ್ ಅಪ್ಲಿಕೇಶನ್ ಮನೆಗಳ ಪಟ್ಟಿ ಮತ್ತು ವಸತಿ ಗಣತಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಗೆ ಸಂಬಂಧಿಸಿದ ಪ್ರಶ್ನಾವಳಿ (NPR) ಗಳನ್ನು ಒಳಗೊಂಡಿದೆ.
‘ರಾಷ್ಟ್ರೀಯ ಜನಸಂಖ್ಯಾ ನೋಂದಣಿ’ (NPR) ಎಂದರೇನು?
ಅದು ‘ದೇಶದ ಸಾಮಾನ್ಯ ನಿವಾಸಿಗಳ’ ಪಟ್ಟಿ / ರಿಜಿಸ್ಟರ್ ಆಗಿದೆ.
- ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಪೌರತ್ವ ಕಾಯ್ದೆ, 1955 ಮತ್ತು ಪೌರತ್ವ (ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಳ ವಿತರಣೆ) ನಿಯಮಗಳು, 2003 ರ ನಿಬಂಧನೆಗಳಿಗೆ ಅನುಗುಣವಾಗಿ ಸ್ಥಳೀಯ ಗ್ರಾಮ / ಉಪ ಪಟ್ಟಣ, ಉಪ-ಜಿಲ್ಲೆ, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಇದನ್ನು ಸಿದ್ಧಪಡಿಸಲಾಗುತ್ತಿದೆ.
- ಭಾರತದ ಪ್ರತಿಯೊಬ್ಬ ‘ಸಾಮಾನ್ಯ ನಿವಾಸಿ’ಗಳಿಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ (ಎನ್ಪಿಆರ್) ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.
ಉದ್ದೇಶ:
ದೇಶದ ಪ್ರತಿಯೊಬ್ಬ ಸಾಮಾನ್ಯ ನಾಗರಿಕರ ವಿವರವಾದ ಗುರುತಿನ ದತ್ತಸಂಚಯವನ್ನು (comprehensive identity database) ರಚಿಸುವುದು.
- ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಅನ್ನು ಮೊದಲು 2010 ರಲ್ಲಿ ಸಂಗ್ರಹಿಸಲಾಯಿತು ಮತ್ತು ನಂತರ ಅದನ್ನು 2015 ರಲ್ಲಿ ನವೀಕರಿಸಲಾಯಿತು.
‘ದೇಶದ ಸಾಮಾನ್ಯ ನಿವಾಸಿ’ ಯಾರು?
ಗೃಹ ಸಚಿವಾಲಯದ ಪ್ರಕಾರ, ‘ದೇಶದ ಸಾಮಾನ್ಯ ನಿವಾಸಿ’ ಯನ್ನು ಈ ಕೆಳಗಿನವರುಗಳೆಂದು ವ್ಯಾಖ್ಯಾನಿಸಲಾಗಿದೆ – ಕನಿಷ್ಠ ಆರು ತಿಂಗಳ ಕಾಲ ಸ್ಥಳೀಯ ಪ್ರದೇಶದಲ್ಲಿ ವಾಸವಾಗಿರುವ ವ್ಯಕ್ತಿ ಅಥವಾ ಮುಂದಿನ ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಒಂದು ನಿರ್ದಿಷ್ಟ ಸ್ಥಳ ಅಥವಾ ಪ್ರದೇಶದಲ್ಲಿ ವಾಸಿಸಲು ಉದ್ದೇಶಿಸಿರುವ ವ್ಯಕ್ತಿಯನ್ನು ಈ ದೇಶದ ಸಾಮಾನ್ಯ ನಿವಾಸಿ ಎಂದು NPR ಉದ್ದೇಶಗಳಿಗಾಗಿ ವ್ಯಾಖ್ಯಾನಿಸಲಾಗಿದೆ.
ವಿಷಯಗಳು: ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.
ಅಮೇರಿಕಾದ ಚಿಂತಕರ ಚಾವಡಿ ವರದಿಯು ಭಾರತವನ್ನು ‘ಭಾಗಶಃ ಮುಕ್ತ’ ಎಂದು ವರ್ಗೀಕರಿಸುತ್ತದೆ:
(U.S. thinktank report classifies India as ‘partly free’)
ಸಂದರ್ಭ:
ಇತ್ತೀಚೆಗೆ, ‘ಫ್ರೀಡಂ ಇನ್ ದಿ ವರ್ಲ್ಡ್ 2021: ಡೆಮಾಕ್ರಸಿ ಅಂಡರ್ ಸೀಜ್’ (“ ವಿಶ್ವದಲ್ಲಿ ಸ್ವಾತಂತ್ರ್ಯ 2021: ಅಪಾಯ ಅಥವಾ ದಿಗ್ಭಂಧನದಲ್ಲಿ ಪ್ರಜಾಪ್ರಭುತ್ವ”) ಎಂಬ ವರದಿಯನ್ನು ಅಮೆರಿಕದ ಚಿಂತಕರ ಚಾವಡಿ/ ಥಿಂಕ್ ಟ್ಯಾಂಕ್ ‘ಫ್ರೀಡಂ ಹೌಸ್’ ಬಿಡುಗಡೆ ಮಾಡಿದೆ.
ವರದಿಯ ಪ್ರಮುಖ ಆವಿಷ್ಕಾರಗಳು:
- ಭಾರತದಲ್ಲಿ ಜನರ ಸ್ವಾತಂತ್ರ್ಯವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲಾಗಿದೆ, ಇದರ ಪರಿಣಾಮವಾಗಿ ಭಾರತವನ್ನು ‘ಭಾಗಶಃ ಮುಕ್ತ’ ಎಂದು ವರ್ಗೀಕರಿಸಲಾಗಿದೆ.
- ವರದಿಯಲ್ಲಿ ಭಾರತ 100 ರಲ್ಲಿ 67 ನೇ ಸ್ಥಾನದಲ್ಲಿದ್ದರೆ, ಕಳೆದ ವರ್ಷ 100 ರಲ್ಲಿ ಭಾರತ 71 ನೇ ಸ್ಥಾನದಲ್ಲಿತ್ತು.
ಶ್ರೇಣಿ ಕುಸಿಯಲು ಕಾರಣಗಳು: ಭಾರತದ ಅಂಕಗಳನ್ನು ಕಡಿಮೆ ಮಾಡಲು ಕಾರಣ ಸರ್ಕಾರ ಮತ್ತು ಅದರ ಮಿತ್ರಪಕ್ಷಗಳು ಅಥವಾ ಸ್ಥಳೀಯ ಮಟ್ಟದಲ್ಲಿನ ಸರ್ಕಾರದ ಬೆಂಬಲಿಗರು ಸರ್ಕಾರದ ಟೀಕಾಕಾರರ ಮೇಲೆ ಎಸಗಿದ ದೌರ್ಜನ್ಯವಾಗಿದೆ.
- ಖಾಸಗಿ ಮಾಧ್ಯಮವು ಸಾಕಷ್ಟು ಹುರುಪಿನಿಂದ ಕೂಡಿದ್ದು ಸಾಕಷ್ಟು ವೈವಿಧ್ಯಮಯವಾಗಿದೆ, ಮತ್ತು ಇದು ರಾಜಕಾರಣಿಗಳನ್ನು ತನಿಖೆ ಮಾಡಿ ಪರಿಶೀಲಿಸುತ್ತದೆ. ಆದಾಗ್ಯೂ, ಮೋದಿ ಸರ್ಕಾರದ ಅಡಿಯಲ್ಲಿ ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿಗಳು ಗಮನಾರ್ಹವಾಗಿ ಹೆಚ್ಚಾಗಿದೆ ಮತ್ತು ಇತ್ತೀಚಿನ ವರ್ಷಗಳಲ್ಲಿ ವರದಿ ಮಾಡುವುದು ಗಮನಾರ್ಹವಾಗಿ ಕಡಿಮೆ ಮಹತ್ವಾಕಾಂಕ್ಷೆಯದಾಗಿ ಪರಿಣಮಿಸಿದೆ.
- ವಿಮರ್ಶಾತ್ಮಕ ಮಾಧ್ಯಮಗಳ ಧ್ವನಿಯನ್ನು ಅಡಗಿಸಲು ಭದ್ರತೆ, ಮಾನಹಾನಿ, ದೇಶದ್ರೋಹ ಮತ್ತು ನ್ಯಾಯಾಂಗ ನಿಂದನೆ ಯಂತಹ ಕಾನೂನು ಅಸ್ತ್ರಗಳನ್ನು ಬಳಸಲಾಗುತ್ತದೆ.
- ಒಂದೆಡೆ, ರಾಜಕಾರಣಿಗಳು, ವ್ಯಾಪಾರ ನಿರ್ವಾಹಕರು ಮತ್ತು ಲಾಬಿ ಮಾಡುವವರ ನಡುವಿನ ನಿಕಟ ಸಂಬಂಧದ ಬಹಿರಂಗಪಡಿಸುವಿಕೆಗಳು ನಡೆದಿವೆ, ಮತ್ತೊಂದೆಡೆ ಮಾಧ್ಯಮ ವ್ಯಕ್ತಿಗಳು ಮತ್ತು ಪ್ರಮುಖ ಮಾಧ್ಯಮಗಳ ಮಾಲೀಕರು ಮತ್ತು ಮಾಧ್ಯಮಕ್ಕೆ ಸಂಬಂಧಿಸಿದ ವ್ಯಕ್ತಿಗಳು ಪತ್ರಿಕೋದ್ಯಮದ ಮೇಲಿನ ಸಾರ್ವಜನಿಕ ವಿಶ್ವಾಸವನ್ನು ಹಾಳು ಮಾಡಿದ್ದಾರೆ.
ಅಮೆರಿಕ ಮತ್ತು ಚೀನಾದಲ್ಲಿ ಸ್ವಾತಂತ್ರ್ಯ:
- ಫ್ರೀಡಂ ಹೌಸ್ನ ಈ ವರದಿಯಲ್ಲಿ, ಪ್ರಜಾಪ್ರಭುತ್ವ ಮತ್ತು ನಾಗರಿಕರ ಸ್ವಾತಂತ್ರ್ಯದ ದೃಷ್ಟಿಯಿಂದ ಚೀನಾವನ್ನು ಅತ್ಯಂತ ಕೆಟ್ಟದಾಗಿದೆ ಎಂದು ವಿವರಿಸಲಾಗಿದೆ.
- ಕಳೆದ ಒಂದು ವರ್ಷದಲ್ಲಿ, ಅಮೇರಿಕಾದ ಸ್ಥಾನವು ಮೂರು ಅಂಕಗಳಷ್ಟು ಕುಸಿದಿದೆ ಮತ್ತು 100 ರಲ್ಲಿ 83 ನೇ ಸ್ಥಾನದಲ್ಲಿದೆ.
- ಯುನೈಟೆಡ್ ಸ್ಟೇಟ್ಸ್ ತನ್ನ ಸಾಂಸ್ಥಿಕ ಸುರಕ್ಷತೆಗಳನ್ನು ಬಲಪಡಿಸಲು, ನಾಗರಿಕ ರೂಢಿಗಳನ್ನು ಪುನಃಸ್ಥಾಪಿಸಲು ಮತ್ತು ಅದರ ಪ್ರಮುಖ ಸಿದ್ಧಾಂತದ ಭರವಸೆಗಳನ್ನು ಎತ್ತಿಹಿಡಿಯಲು ತೀವ್ರವಾಗಿ ಕೆಲಸ ಮಾಡಬೇಕಾಗಿದೆ.
- ಚೀನಾವನ್ನು ‘ನಾಟ್ ಫ್ರೀ’ ಎಂದು ವರ್ಗೀಕರಿಸಲಾಗಿದೆ ಮತ್ತು ಕಳೆದ ವರ್ಷಕ್ಕಿಂತ ಒಂದು ಸ್ಥಾನ ಕೆಳಗಿಳಿದಿದೆ ಮತ್ತು 100 ರಲ್ಲಿ 9 ನೇ ಸ್ಥಾನದಲ್ಲಿ ಸ್ಥಾಪಿತವಾಗಿದೆ.
- ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಸರ್ವಾಧಿಕಾರಿ ದೇಶವಾದ ಚೀನಾದಲ್ಲಿ ಆಡಳಿತದ ವಿನಾಶಕಾರಿ ಪರಿಣಾಮಗಳು ವಿಶೇಷವಾಗಿ 2020 ರಲ್ಲಿ ತೀವ್ರವಾಗಿತ್ತು.
ವರದಿಯ ಬಗ್ಗೆ:
- 1973 ರಿಂದ, ಫ್ರೀಡಂ ಹೌಸ್ ವಿಶ್ವದಾದ್ಯಂತ ರಾಜಕೀಯ ಹಕ್ಕುಗಳು ಮತ್ತು ನಾಗರಿಕ ಸ್ವಾತಂತ್ರ್ಯಗಳ ಸ್ಥಿತಿಯನ್ನು ನಿರ್ಣಯಿಸುತ್ತಿದೆ. ಇದನ್ನು ನೀತಿ ನಿರೂಪಕರು, ಪತ್ರಕರ್ತರು, ಶಿಕ್ಷಣ ತಜ್ಞರು, ಮಾನವ ಹಕ್ಕುಗಳ ಕಾರ್ಯಕರ್ತರು ಮತ್ತು ಅನೇಕರು ನಿಯಮಿತವಾಗಿ ಬಳಸುತ್ತಾರೆ.
ದೇಶಗಳು ರ್ಯಾಂಕಿಂಗ್ ನಲ್ಲಿ ಹೇಗೆ ಸ್ಥಾನ ಪಡೆದಿವೆ?
ವರದಿಯ ವಿಧಾನವು 1948 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಂಗೀಕರಿಸಿದ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ ಅಳತೆಗೋಲನ್ನು ವಿಶಾಲವಾಗಿ ಬಳಸುತ್ತದೆ.
‘ವಿಶ್ವದ ಸ್ವಾತಂತ್ರ್ಯ’, ವಾಸ್ತವವಾಗಿ, ವಿಶ್ವದ ಸರ್ಕಾರಗಳು ಅಥವಾ ಸರ್ಕಾರದ ಕಾರ್ಯಕ್ಷಮತೆ ಗಿಂತ ವ್ಯಕ್ತಿಗಳು ಅನುಭವಿಸುವ ನೈಜ-ಪ್ರಪಂಚದ ಹಕ್ಕುಗಳು ಹಾಗೂ ಸ್ವಾತಂತ್ರ್ಯಗಳಿಂದ ನಿರ್ಣಯಿಸಲ್ಪಡುತ್ತದೆ.
ವರದಿಯಲ್ಲಿ ನೀಡಲಾದ ಅಂಶಗಳ ಅಡಿಯಲ್ಲಿ ಅಂಕಗಳು ಯಾವ ವಿಷಯ ಕ್ಷೇತ್ರಗಳನ್ನು ಒಳಗೊಂಡಿರುತ್ತವೆ?
- ಚುನಾವಣಾ ಪ್ರಕ್ರಿಯೆ.
- ರಾಜಕೀಯ ಬಹುತ್ವ ಮತ್ತು ಭಾಗವಹಿಸುವಿಕೆ.
- ಸರ್ಕಾರದ ಕಾರ್ಯ.
- ಅಭಿವ್ಯಕ್ತಿ ಮತ್ತು ನಂಬಿಕೆಯ ಸ್ವಾತಂತ್ರ್ಯ.
- ಸಂಘ ಮತ್ತು ಸಾಂಸ್ಥಿಕ ಹಕ್ಕುಗಳು.
- ಕಾನೂನಿನ ಆಳ್ವಿಕೆ.
- ವೈಯಕ್ತಿಕ ಸ್ವಾಯತ್ತತೆ ಮತ್ತು ವೈಯಕ್ತಿಕ ಹಕ್ಕುಗಳು.
ಸಾಮಾನ್ಯ ಅಧ್ಯಯನ ಪತ್ರಿಕೆ – 3
ವಿಷಯ: ನೇರ ಮತ್ತು ಪರೋಕ್ಷ ಕೃಷಿ ಸಬ್ಸಿಡಿಗಳು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ವಿಷಯಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆ – ಉದ್ದೇಶಗಳು, ಕಾರ್ಯಗಳು, ಮಿತಿಗಳು, ಸುಧಾರಣೆಗಳು; ಬಫರ್ ಸ್ಟಾಕ್ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ವಿಷಯಗಳು; ತಂತ್ರಜ್ಞಾನ ಮಿಷನ್; ಪಶುಸಂಗೋಪನೆಗೆ ಸಂಬಂಧಿಸಿದ ಅರ್ಥಶಾಸ್ತ್ರ.
ಸಕ್ಕರೆಯ ಕನಿಷ್ಠ ಮಾರಾಟ ಬೆಲೆ:
(Minimum selling price for sugar)
ಸಂದರ್ಭ :
ಇತ್ತೀಚೆಗೆ, ಭಾರತೀಯ ಸಕ್ಕರೆ ಕಾರ್ಖಾನೆ ಸಂಘ (Indian Sugar Mills’ Association- ISMA) ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು (MSP) ಪ್ರತಿ ಕೆ.ಜಿ.ಗೆ 34.50 ರೂ.ಗೆ ಹೆಚ್ಚಿಸುವಂತೆ ಸರ್ಕಾರವನ್ನು ಕೇಳಿದೆ.
ಸಕ್ಕರೆ ಬೆಲೆ ನೀತಿ:
ಸಕ್ಕರೆ ಬೆಲೆಯು ಮಾರುಕಟ್ಟೆಯ ಪ್ರವೃತ್ತಿಗಳಿಗೆ ಒಳಪಟ್ಟಿರುತ್ತವೆ ಮತ್ತು ಸಕ್ಕರೆಯ ಬೇಡಿಕೆ ಮತ್ತು ಪೂರೈಕೆಯ ಮೇಲೆ ಅವಲಂಬಿತವಾಗಿರುತ್ತದೆ. ಆದಾಗ್ಯೂ, 2018 ರಿಂದ, ರೈತರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಕನಿಷ್ಠ ಮಾರಾಟದ ಬೆಲೆ –(Minimum Selling Price– MSP) ಎಂಬ ಪರಿಕಲ್ಪನೆಯನ್ನು ಜಾರಿಗೆ ತರಲಾಗಿದೆ, ಇದರಿಂದಾಗಿ ಉದ್ಯಮವು ಸಕ್ಕರೆಯ ಕನಿಷ್ಠ ಉತ್ಪಾದನಾ ವೆಚ್ಚವನ್ನು ಹೊರತೆಗೆಯಬಹುದು, ಇದರಿಂದ ರೈತರಿಗೆ ಕಬ್ಬಿನ ಬೆಲೆಯ ಬಾಕಿ ಮೊತ್ತವನ್ನು ಪಾವತಿಸಲು ಸಾಧ್ಯವಾಗುತ್ತದೆ.
- ಸಕ್ಕರೆ ಬೆಲೆ (ನಿಯಂತ್ರಣ) ಆದೇಶ, 2018 ಅನ್ನು ಅಗತ್ಯ ಸರಕುಗಳ ಕಾಯ್ದೆ, 1955 ರ ಪ್ರಕಾರ ನೀಡಲಾದ ಅಧಿಕಾರವನ್ನು ಚಲಾಯಿಸಲು ಸರ್ಕಾರವು ಸೂಚಿಸಿದೆ.
- ಈ ಆದೇಶದ ನಿಬಂಧನೆಗಳ ಪ್ರಕಾರ, ಸರ್ಕಾರವು ಕನಿಷ್ಠ ಮಾರಾಟದ ಬೆಲೆಯನ್ನು (MSP) ನಿಗದಿಪಡಿಸುತ್ತದೆ.
- ಕಬ್ಬಿನ ನ್ಯಾಯೋಚಿತ ಮತ್ತು ಸಂಭಾವನೆ ಬೆಲೆ – (Fair & Remunerative Price– FRP) ಮತ್ತು ಹೆಚ್ಚಿನ ಕಾರ್ಯ ದಕ್ಷ ಕಾರ್ಖಾನೆಗಳ ಕನಿಷ್ಠ ಪರಿವರ್ತನೆ ವೆಚ್ಚದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಸಕ್ಕರೆಯ ಕನಿಷ್ಠ ಮಾರಾಟದ ಬೆಲೆಯನ್ನು (MSP) ನಿರ್ಧರಿಸಲಾಗುತ್ತದೆ.
ಹಿನ್ನೆಲೆ:
ಫೆಡರಲ್ / ಕೇಂದ್ರ ಸರ್ಕಾರವು ‘ನ್ಯಾಯಯುತ ಮತ್ತು ಸಂಭಾವನೆ ಬೆಲೆ’ (FRP) ಅನ್ನು ಘೋಷಿಸುತ್ತದೆ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ(Commission for Agricultural Costs and Prices– CACP) ಶಿಫಾರಸುಗಳ ಆಧಾರದ ಮೇಲೆ ಪ್ರಧಾನಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಇದನ್ನು ಘೋಷಿಸುತ್ತದೆ.
ವಿಷಯಗಳು: ಆರ್ಥಿಕತೆಯ ಮೇಲೆ ಉದಾರೀಕರಣದ ಪರಿಣಾಮ, ಕೈಗಾರಿಕಾ ನೀತಿಯಲ್ಲಿನ ಬದಲಾವಣೆಗಳು ಮತ್ತು ಕೈಗಾರಿಕಾ ಅಭಿವೃದ್ಧಿಯ ಮೇಲೆ ಅವುಗಳ ಪ್ರಭಾವ.
ಡಂಪಿಂಗ್ ವಿರೋಧಿ ಸುಂಕ / ತೆರಿಗೆ:
(Anti-dumping Duty)
ಸಂದರ್ಭ :
ಭಾರತ ಸೇರಿದಂತೆ 18 ದೇಶಗಳಿಂದ ಅಲ್ಯೂಮಿನಿಯಂ ಹಾಳೆಗಳ / ಶೀಟ್ ಗಳ ರಫ್ತುದಾರರಿಗೆ ತೆರಿಗೆ ವಿಧಿಸಲು ಅಮೇರಿಕಾದ ವಾಣಿಜ್ಯ ಇಲಾಖೆ ಸಿದ್ಧತೆ ನಡೆಸಿದೆ. ವಾಣಿಜ್ಯ ಇಲಾಖೆಯ ಪ್ರಕಾರ, ಅವರು ಯುಎಸ್ ನೀಡುವ ಸಬ್ಸಿಡಿಗಳು ಮತ್ತು ಡಂಪಿಂಗ್ಗಳಿಂದ ರಫ್ತುದಾರರು ಹೆಚ್ಚಿನ ಲಾಭವನ್ನು ಪಡೆದಿದ್ದಾರೆ.
ಸ್ವತಂತ್ರ ಸಂಸ್ಥೆಯಾದ ಅಮೆರಿಕಾದ ಅಂತರರಾಷ್ಟ್ರೀಯ ವ್ಯಾಪಾರ ಆಯೋಗವು (International Trade Commission-ITC) ‘ಡಂಪಿಂಗ್ ವಿರೋಧಿ ಸುಂಕಗಳು ಅಥವಾ ಪ್ರತೀಕಾರದ ಸುಂಕಗಳನ್ನು (countervailing duties- CVDs) ವಿಧಿಸುವುದಕ್ಕೆ ಸಂಬಂಧಿಸಿದಂತೆ ಏಪ್ರಿಲ್ 15 ರೊಳಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು, ಎಂದು ಹೇಳಿದೆ.
‘ಡಂಪಿಂಗ್’ ಎಂದರೇನು?
ಅಂತರರಾಷ್ಟ್ರೀಯ ವ್ಯಾಪಾರ ಅಭ್ಯಾಸದಲ್ಲಿ, ಒಂದು ದೇಶ ಅಥವಾ ಸಂಸ್ಥೆಯು ತನ್ನ ದೇಶೀಯ ಮಾರುಕಟ್ಟೆಯಲ್ಲಿನ ಉತ್ಪನ್ನದ ಬೆಲೆಗಿಂತ ಕಡಿಮೆ ಬೆಲೆಗೆ ಆ ಉತ್ಪನ್ನವನ್ನು ರಫ್ತು ಮಾಡಿದಾಗ, ಅದನ್ನು ‘ಡಂಪಿಂಗ್’ ಎಂದು ಕರೆಯಲಾಗುತ್ತದೆ.
- ಡಂಪಿಂಗ್, ಒಂದು ಉತ್ಪನ್ನವನ್ನು ಆಮದು ಮಾಡಿಕೊಳ್ಳುವ ದೇಶದಲ್ಲಿನ ಸ್ಥಳೀಯ ಉತ್ಪನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತದೆ, ಸ್ಥಳೀಯ ಉತ್ಪಾದನಾ ಸಂಸ್ಥೆಗಳ ರಿಯಾಯಿತಿ ಮತ್ತು ಲಾಭದ ಮೇಲೆ ಪರಿಣಾಮ ಬೀರುತ್ತದೆ.
‘ಆಂಟಿ-ಡಂಪಿಂಗ್ ಡ್ಯೂಟಿ’ ಎಂದರೇನು?
ಉತ್ಪನ್ನಗಳ ಡಂಪಿಂಗ್ನಿಂದ ಉಂಟಾಗುವ ಪರಿಸ್ಥಿತಿ ಮತ್ತು ಅದು ವ್ಯವಹಾರದ ಮೇಲೆ ಬೀರಬಹುದಾದ ದುಷ್ಪರಿಣಾಮಗಳನ್ನು ಸರಿಪಡಿಸಲು ಆಂಟಿ-ಡಂಪಿಂಗ್ ಸುಂಕವನ್ನು ವಿಧಿಸಲಾಗುತ್ತದೆ.
ವಿಶ್ವ ವ್ಯಾಪಾರ ಸಂಸ್ಥೆ (WTO) ಆಡಳಿತ ಸೇರಿದಂತೆ ಜಾಗತಿಕ ವ್ಯಾಪಾರ ಮಾನದಂಡಗಳಿಗೆ ಅನುಸಾರವಾಗಿ, ದೇಶೀಯ ಉತ್ಪಾದಕರಿಗೆ ಸಮಾನ ಅವಕಾಶವನ್ನು ಒದಗಿಸಲು ದೇಶವು ಅಂತಹ ಡಂಪ್ ಮಾಡಿದ ಉತ್ಪನ್ನಗಳ ಮೇಲೆ ‘ಸುಂಕವನ್ನು’ ವಿಧಿಸಲು ಒಂದು ದೇಶಕ್ಕೆ ಅಧಿಕಾರವಿದೆ.
‘ಆಂಟಿ-ಡಂಪಿಂಗ್ ಡ್ಯೂಟಿ’ ಮತ್ತು ‘ಕೌಂಟರ್ವೈಲಿಂಗ್ ಡ್ಯೂಟಿ’ ನಡುವಿನ ವ್ಯತ್ಯಾಸ:
ಡಂಪಿಂಗ್ ವಿರೋಧಿ ತೆರಿಗೆ ಮತ್ತು ಪ್ರತೀಕಾರದ ಸುಂಕ (CVDs) ಗಳ ನಡುವಿನ ವ್ಯತ್ಯಾಸ:
- ಆಂಟಿ-ಡಂಪಿಂಗ್ ಡ್ಯೂಟಿ ‘ಕೌಂಟರ್ವೈಲಿಂಗ್ ಡ್ಯೂಟಿ- (Countervailing Duties- CVDs)’ಗಳಿಗಿಂತ ಭಿನ್ನವಾಗಿದೆ. ದೇಶೀಯ ಉತ್ಪಾದಕರನ್ನು ರಕ್ಷಿಸಲು ಆಮದು ಸಬ್ಸಿಡಿಗಳ ಋಣಾತ್ಮಕ ಪರಿಣಾಮವನ್ನು ಸಮತೋಲನಗೊಳಿಸುವ ಸಲುವಾಗಿ, ‘ಕೌಂಟರ್ವೈಲಿಂಗ್ ಸುಂಕಗಳನ್ನು’ (CVDs) ವಿಧಿಸಲಾಗುತ್ತದೆ.
- ‘ಕೌಂಟರ್ವೈಲಿಂಗ್ ಡ್ಯೂಟಿ’ (CVDs) ಆಮದು ಮಾಡಿದ ಸರಕುಗಳ ಮೇಲೆ ವಿಧಿಸುವ ಸುಂಕವಾಗಿದೆ. ರಫ್ತು ಮಾಡುವ ದೇಶದಲ್ಲಿ ಈ ಸರಕುಗಳ ಉತ್ಪಾದಕರಿಗೆ ನೀಡುವ ಸಬ್ಸಿಡಿಯನ್ನು ಸಮತೋಲನಗೊಳಿಸಲು ಈ ಸುಂಕವನ್ನು ವಿಧಿಸಲಾಗುತ್ತದೆ.
- ಉತ್ಪನ್ನದ ದೇಶೀಯ ಉತ್ಪಾದಕರು ಮತ್ತು ಅದೇ ಉತ್ಪನ್ನದ ವಿದೇಶಿ ಉತ್ಪಾದಕರ ನಡುವೆ ಸಮಾನ ಅವಕಾಶವನ್ನು ಒದಗಿಸುವುದು ‘ಕೌಂಟರ್ವೈಲಿಂಗ್ ಡ್ಯೂಟಿ’ ಯ ಉದ್ದೇಶ. ವಿದೇಶಿ ಉತ್ಪಾದಕರು, ತಮ್ಮ ದೇಶದ ಸರ್ಕಾರದಿಂದ ಪಡೆಯುವ ಸಬ್ಸಿಡಿಯಿಂದಾಗಿ ಇದೇ ರೀತಿಯ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ಶಕ್ತರಾಗುತ್ತಾರೆ.
ಸಾಮಾನ್ಯ ಅಧ್ಯಯನ ಪತ್ರಿಕೆ – 4
ವಿಷಯಗಳು: ಆಡಳಿತದಲ್ಲಿ ಸಮಗ್ರತೆ: ಸಾರ್ವಜನಿಕ ಸೇವೆಯ ಪರಿಕಲ್ಪನೆ; ಆಡಳಿತ ಮತ್ತು ಪ್ರಾಮಾಣಿಕತೆಯ ತಾತ್ವಿಕ ಆಧಾರ, ಮಾಹಿತಿ ವಿನಿಮಯ ಮತ್ತು ಸರ್ಕಾರದಲ್ಲಿ ಪಾರದರ್ಶಕತೆ, ಮಾಹಿತಿಯ ಹಕ್ಕು, ನೈತಿಕ ನಡವಳಿಕೆ, ನೀತಿ ಸಂಹಿತೆ.
ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಇಬ್ಬರು ಜಿಲ್ಲಾಧಿಕಾರಿಗಳಿಗೆ ಶಿಕ್ಷೆ ವಿಧಿಸಿದ ಹೈಕೋರ್ಟ್:
(HC punishes two Collectors for contempt)
ಸಂದರ್ಭ :
- ನ್ಯಾಯಾಂಗ ನಿಂದನೆಯ ಪ್ರಕರಣವೊಂದರಲ್ಲಿ ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ್ದಕ್ಕಾಗಿ ತೆಲಂಗಾಣ ಹೈಕೋರ್ಟ್ ಸಿರ್ಸಿಲ್ಲಾ ಜಿಲ್ಲೆಯ ಕಲೆಕ್ಟರ್ ಮತ್ತು ಅವರ ಇಬ್ಬರು ಅಧೀನ ಅಧಿಕಾರಿಗಳಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
- ಅಪರಾಧ ಸಾಬೀತಾದ ಕಾರಣ ನ್ಯಾಯಾಲಯವು ತಪ್ಪಿತಸ್ಥ ಅಧಿಕಾರಿಗಳಿಗೆ 2,000 ರೂ.ಗಳ ದಂಡವನ್ನೂ ವಿಧಿಸಿದೆ. ಅಲ್ಲದೆ, ಈ ಪ್ರಕರಣದಲ್ಲಿ ರೈತರು ನ್ಯಾಯಾಲಯದಲ್ಲಿ ಖರ್ಚು ಮಾಡಿದ ಎಲ್ಲಾ 11 ರೈತರಿಗೆ ತಲಾ 10,000 ರೂಪಾಯಿಗಳನ್ನು ಪಾವತಿಸುವಂತೆ ನ್ಯಾಯಾಲಯವು ತಪ್ಪಿತಸ್ಥ ಅಧಿಕಾರಿಗಳಿಗೆ ಸೂಚಿಸಿದೆ.
ಏನಿದು ಸಮಸ್ಯೆ?
- ಕಾಲೇಶ್ವರಂ ನೀರಾವರಿ ಯೋಜನೆಯಡಿ ಅನಂತಗಿರಿ ಜಲಾಶಯದ ನಿರ್ಮಾಣಕ್ಕಾಗಿ ರಾಜ್ಯವು ತಮ್ಮ ಜಮೀನು ಮತ್ತು ಮನೆಗಳನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ಅರ್ಜಿದಾರರು ತಿಳಿಸಿದ್ದಾರೆ.
- ಭೂಸ್ವಾಧೀನ ಕಾಯ್ದೆ 2013 ರ ನಿಬಂಧನೆಗಳ ಪ್ರಕಾರ ಈ ರೈತರನ್ನು ಪರಿಹಾರ ಮತ್ತು ಪುನರ್ವಸತಿ ಇಲ್ಲದೆ ತಮ್ಮ ಹೊಲಗಳಿಂದ ಹೊರಹಾಕಲಾಯಿತು.
- ಜಲಾಶಯದ ನಿರ್ಮಾಣ ಪೂರ್ಣಗೊಂಡ ನಂತರ, ಅದರಿಂದ ನೀರನ್ನು ಬಿಡುಗಡೆ ಮಾಡಲಾಯಿತು, ಇದರ ಪರಿಣಾಮವಾಗಿ ರೈತರ ಹೊಲ ಮತ್ತು ಮನೆಗಳು ಮುಳುಗಿದವು.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ಸಾಗರ ಪ್ರಾದೇಶಿಕ ಯೋಜನೆ (MSP):
(Marine Spatial Planning)
- ಮುಂದಿನ ಐದು ವರ್ಷಗಳ ಕಾಲ ಸಮುದ್ರ ಪ್ರಾದೇಶಿಕ ಯೋಜನೆ ಕ್ಷೇತ್ರದಲ್ಲಿ (ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ) ಜಂಟಿಯಾಗಿ ಕೆಲಸ ಮಾಡಲು ಭಾರತ ಮತ್ತು ನಾರ್ವೆ ಒಪ್ಪಿಕೊಂಡಿವೆ.
- ಇದು 2019 ರಲ್ಲಿ ಉಭಯ ದೇಶಗಳ ನಡುವೆ ಸಹಿ ಹಾಕಿದ ತಿಳುವಳಿಕೆ ಪತ್ರದಡಿ (MoU) ಭಾರತ-ನಾರ್ವೆ ಸಮಗ್ರ ಸಾಗರ ಉಪಕ್ರಮದ ಒಂದು ಭಾಗವಾಗಿದೆ.
- ಈ ಯೋಜನೆಗಾಗಿ ಲಕ್ಷದ್ವೀಪ ಮತ್ತು ಪುದುಚೇರಿಗಳನ್ನು ಪ್ರಾಯೋಗಿಕ ತಾಣಗಳಾಗಿ ಗುರುತಿಸಲಾಗಿದೆ.
ಉದ್ಯೋಗ ಮಂಥನ:
- ಇದನ್ನು , ಕೈಗಾರಿಕಾ ಉತ್ತೇಜನ ಮತ್ತು ಆಂತರಿಕ ವ್ಯಾಪಾರ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ (Department for Promotion of Industry and Internal Trade- DPIIT) ಆಯೋಜಿಸಿದೆ.
- ಉದ್ಯೋಗ್ ಮಂಥನ್ ಎಂಬುದು ಭಾರತೀಯ ಕೈಗಾರಿಕೆಗಳಲ್ಲಿ ಗುಣಮಟ್ಟ ಮತ್ತು ಉತ್ಪಾದಕತೆಯನ್ನು ಉತ್ತೇಜಿಸುವತ್ತ ಗಮನಹರಿಸಿದ ವೆಬ್ನಾರ್ಗಳ ಸರಣಿಯಾಗಿದೆ.
- ಇದು ಫಾರ್ಮಾ, ವೈದ್ಯಕೀಯ ಸಾಧನಗಳು, ಕ್ಲೋಸ್ಡ್ ಸರ್ಕ್ಯೂಟ್ ಕ್ಯಾಮೆರಾಗಳು, ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ವಿನ್ಯಾಸ ಮತ್ತು ಉತ್ಪಾದನೆ, ಹೊಸ ಮತ್ತು ನವೀಕರಿಸಬಹುದಾದ ಶಕ್ತಿ, ರೊಬೊಟಿಕ್ಸ್, ಏರೋಸ್ಪೇಸ್ ಮತ್ತು ರಕ್ಷಣಾ, ಆಟಿಕೆಗಳು, ಪೀಠೋಪಕರಣಗಳು ಸೇರಿದಂತೆ ವಿವಿಧ ಕ್ಷೇತ್ರಗಳನ್ನು ಒಳಗೊಂಡಿದೆ.
ಮರುಭೂಮಿ ಧ್ವಜ ಯುದ್ಧಾಭ್ಯಾಸ VI :
(EX Desert FLAG VI)
- ಮರುಭೂಮಿ ಧ್ವಜ ಯುದ್ಧಾಭ್ಯಾಸವು ಯುನೈಟೆಡ್ ಅರಬ್ ಎಮಿರೇಟ್ಸ್ ವಾಯುಪಡೆಯು ಆಯೋಜಿಸುವ ವಾರ್ಷಿಕ ಬಹುರಾಷ್ಟ್ರೀಯ ಸಮರಾಭ್ಯಾಸ ವಾಗಿದೆ.
- ಮೊದಲ ಬಾರಿಗೆ ಭಾರತೀಯ ಸೇನೆಯು ಯುನೈಟೆಡ್ ಅರಬ್ ಎಮಿರೇಟ್ಸ್, ಯುನೈಟೆಡ್ ಸ್ಟೇಟ್ಸ್, ಫ್ರಾನ್ಸ್, ಸೌದಿ ಅರೇಬಿಯಾ, ದಕ್ಷಿಣ ಕೊರಿಯಾ ಮತ್ತು ಬಹ್ರೇನ್ನ ವಾಯುಪಡೆಯೊಂದಿಗೆ ಮರುಭೂಮಿ ಧ್ವಜ- ಸಮರಾಭ್ಯಾಸ VI ನಲ್ಲಿ ಭಾಗವಹಿಸುತ್ತಿದೆ.
ನಾಗ ನದಿ:
- ನಾಗ್ ನದಿ ಮಹಾರಾಷ್ಟ್ರದ ನಾಗ್ಪುರ ನಗರದ ಮೂಲಕ ಹರಿಯುವ ನದಿಯಾಗಿದೆ.
- ನಾಗ್ಪುರ ನಗರಕ್ಕೆ ನಾಗಪೂರ್ ಎಂಬ ಹೆಸರು ಬರಲು ಈ ನದಿಯು ಕಾರಣವಾಗಿದೆ.
- ಕನ್ಹಾನ್-ಪೆಂಚ್ ನದಿ ವ್ಯವಸ್ಥೆಯ ಒಂದು ಭಾಗವಾಗಿ ರೂಪಗೊಂಡಿರುವ ನಾಗ್ ನದಿಯು ವಾಡಿ (Vadi) ಬಳಿಯ ಲಾವಾ ಬೆಟ್ಟಗಳಿಂದ ಹುಟ್ಟಿಕೊಂಡಿದೆ.
ಸಂದರ್ಭ :
- ನಾಗ್ ನದಿ ಮಾಲಿನ್ಯ ನಿಯಂತ್ರಣ ಯೋಜನೆಗೆ ಒಟ್ಟು 2,117.54 ಕೋಟಿ ರೂ. ಗಳ ಮಂಜೂರಾತಿ ನೀಡಲಾಗಿದೆ.
- ರಾಷ್ಟ್ರೀಯ ನದಿ ಸಂರಕ್ಷಣಾ ಯೋಜನೆಯಡಿ ಅಂಗೀಕರಿಸಲ್ಪಟ್ಟ ಈ ಯೋಜನೆಯನ್ನು ರಾಷ್ಟ್ರೀಯ ನದಿ ಸಂರಕ್ಷಣಾ ನಿರ್ದೇಶನಾಲಯ (NRCD) ಜಾರಿಗೆ ತರಲಿದೆ.