[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 28 ಜನವರಿ 2021

 

ಪರಿವಿಡಿ :

ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಲಾಲಾ ಲಜಪತ್ ರಾಯ್.

2. ಹೆಣ್ಣುಮಕ್ಕಳ ಜನನವನ್ನು ಸಂಭ್ರಮಿಸುವ ಗ್ರಾಮ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಡಿಎನ್‌ಎ ತಂತ್ರಜ್ಞಾನ (ಬಳಕೆ ಮತ್ತು ಅನ್ವಯಗಳು) ನಿಯಂತ್ರಣ ಮಸೂದೆ, 2019.

2. START ಒಪ್ಪಂದದ ವಿಸ್ತರಣೆಗೆ ಅನುಮತಿ ನೀಡಿದ ರಷ್ಯಾ.

3. ಅಂತಾರಾಷ್ಟ್ರೀಯ ಇಂಧನ ಸಂಸ್ಥೆ. (IEA).

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಆನೆ ಕಾರಿಡಾರ್ ಪ್ರಕರಣದಲ್ಲಿ ರಚಿಸಲಾದ ಸಮಿತಿಯ ವಿಸ್ತರಣೆ.

2. ಅಧಿಕೃತ ರಹಸ್ಯ ಕಾಯ್ದೆ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಪ್ರಚಲಿತ ವಿದ್ಯಮಾನಗಳು.

1. ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 1


 

ವಿಷಯಗಳು: ಆಧುನಿಕ ಭಾರತದ ಇತಿಹಾಸ- ಹದಿನೆಂಟನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗಿನ- ಮಹತ್ವದ ಘಟನೆಗಳು, ವ್ಯಕ್ತಿತ್ವಗಳು, ಸಮಸ್ಯೆಗಳು.

 ಲಾಲಾ ಲಜಪತ್ ರಾಯ್ :


ಸಂದರ್ಭ :

ಲಾಲಾ ಲಜಪತ್ ರಾಯ್ ರ ಜನ್ಮ ಜಯಂತಿಯ ಸಂದರ್ಭದಲ್ಲಿ  ಅವರ ಸ್ಮರಣೆ.

ಅವರ ಕೊಡುಗೆಗಳು, ಸಾಧನೆಗಳು ಮತ್ತು ಸಂಬಂಧಿತ ಪ್ರಮುಖ ಸಂಗತಿಗಳು:

lala_lajpat_rai

  • ರಾಯ್ ಅವರನ್ನು ಸ್ವದೇಶಿ ಚಳವಳಿಯ ಸಮಯದಲ್ಲಿ ಅವರು ವಹಿಸಿದ ನಿರ್ಣಾಯಕ ಪಾತ್ರ ಮತ್ತು ಶಿಕ್ಷಣದ ಪ್ರತಿಪಾದನೆಗಾಗಿ ಸ್ಮರಿಸಲಾಗುತ್ತದೆ.
  • ಅವರು ಆರ್ಯ ಸಮಾಜದ ಸಂಸ್ಥಾಪಕರಾದ ದಯಾನಂದ ಸರಸ್ವತಿಯ ಅನುಯಾಯಿಗಳಾಗಿದ್ದರು ಮತ್ತು ಆರ್ಯ ಸಮಾಜದ ನಾಯಕರಲ್ಲಿ ಒಬ್ಬರಾದರು.
  • ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಅನ್ನು ಸ್ಥಾಪನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.
  • 1885 ರಲ್ಲಿ, ಲಾಲಾ ಲಜಪತ್ ರಾಯ್ ರವರು ಲಾಹೋರ್‌ನಲ್ಲಿ ದಯಾನಂದ್ ಆಂಗ್ಲೋ-ವೈದಿಕ ಶಾಲೆಯನ್ನು ಸ್ಥಾಪಿಸಿದರು ಮತ್ತು ಅವರ ಜೀವನದುದ್ದಕ್ಕೂ ಕಟಿಬದ್ಧ ಶಿಕ್ಷಣತಜ್ಞರಾಗಿ ಉಳಿದಿದ್ದರು.
  • ಲಾಲ್-ಬಾಲ್-ಪಾಲ್ ಎಂದು ಕರೆಯಲ್ಪಡುವ ಲಾಲಾ ಲಜಪತ್ ರಾಯ್, ಬಾಲಗಂಗಾಧರ್ ತಿಲಕ್ ಮತ್ತು ಬಿಪಿನ್ ಚಂದ್ರ ಪಾಲ್ ರವರುಗಳು ಸ್ವದೇಶಿ ಸರಕುಗಳ ಬಳಕೆಯನ್ನು ತೀವ್ರವಾಗಿ ಪ್ರತಿಪಾದಿಸಿದರು ಮತ್ತು 1905 ರಲ್ಲಿ ಲಾರ್ಡ್ ಕರ್ಜನ್ ಅವರಿಂದ ವಿವಾದಾತ್ಮಕವಾದ ಬಂಗಾಳ ವಿಭಜನೆ’ಯ ನಂತರ ಸಾಮೂಹಿಕ ಆಂದೋಲನವನ್ನು ಸಂಘಟಿಸಿದರು.
  • ಅವರು 1917 ರಲ್ಲಿ ನ್ಯೂಯಾರ್ಕ್ ನಗರದಲ್ಲಿ ಇಂಡಿಯನ್ ಹೋಮ್ ರೂಲ್ ಲೀಗ್ ಆಫ್ ಅಮೇರಿಕಾವನ್ನು ಸ್ಥಾಪಿಸಿದರು.
  • 1920 ರಲ್ಲಿ ಕೋಲ್ಕತ್ತಾದಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು, ಇದೇ ಸಮಯದಲ್ಲಿ ಮಹಾತ್ಮ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ಆರಂಭಿಸಿದರು.
  • ದೇಶಭಕ್ತ, ಲಾಲಾಲಜಪತ್ ರಾಯರು ಸೈಮನ್ ಆಯೋಗದ ವಿರುದ್ಧ ಲಾಹೋರ ನಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರಿಂದ ಹಲ್ಲೆಗೊಳಗಾಗಿ 1928 ರಲ್ಲಿ ನಿಧನರಾದರು.
  • ಲಾಲಾ ಲಜಪತ್ ರಾಯರ ಪ್ರಮುಖ ಕೃತಿಗಳು ಇಂತಿವೆ:

‘The Arya Samaj’, ‘Young India’, ‘England’s Debt to India’, ‘Evolution of Japan’, ‘India’s Will to Freedom’, ‘Message of the Bhagwad Gita’, ‘Political Future of India’, ‘Problem of National Education in India’, ‘The Depressed Glasses’, and the travelogue ‘United States of America’.

‘ಆರ್ಯ ಸಮಾಜ’, ‘ಯಂಗ್ ಇಂಡಿಯಾ’, ‘ಇಂಗ್ಲೆಂಡ್ ಮೇಲಿನ ಭಾರತದ ಸಾಲ’, ‘ಜಪಾನ್ ಅಭಿವೃದ್ಧಿ’, ‘ಸ್ವಾತಂತ್ರ್ಯಕ್ಕಾಗಿ ಭಾರತದ ಇಚ್ಛೆ’, ‘ಭಗವದ್ಗೀತೆಯ ಸಂದೇಶ’, ‘ಭಾರತದ ರಾಜಕೀಯ ಭವಿಷ್ಯ’, ‘ಭಾರತದಲ್ಲಿ ರಾಷ್ಟ್ರೀಯ ಶಿಕ್ಷಣದ ಸಮಸ್ಯೆ ‘,’ ದಿ ಡಿಪ್ರೆಸ್ಡ್ ಗ್ಲಾಸ್ ‘, ಮತ್ತು’ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ‘ಎಂಬ ಪ್ರವಾಸ ಕಥನ.

 

 ವಿಷಯಗಳು:ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳು:

ಹೆಣ್ಣುಮಕ್ಕಳ ಜನನವನ್ನು ಸಂಭ್ರಮಿಸುವ ಗ್ರಾಮ :


ಸಂದರ್ಭ :

ಮುಖ್ಯವಾಹಿನಿಯಿಂದ ದೂರವಿರುವ, ತೆಲಂಗಾಣದ  ಒಂದು ಗ್ರಾಮವಾದ ಹರಿದಾಸ್ಪುರದಲ್ಲಿ, ಹೆಣ್ಣು ಮಕ್ಕಳು ಜನಿಸಿದಾಗಲೆಲ್ಲಾ ಸಿಹಿತಿಂಡಿಗಳನ್ನು ವಿತರಿಸಿ ಮತ್ತು ದೀಪವನ್ನು ಬೆಳಗಿಸುವ ಮೂಲಕ ಸಂಭ್ರಮಾಚರಿಸಲಾಗುತ್ತದೆ.

  • ಜನರ ಮನೋಭಾವದಲ್ಲಿನ ಈ ಬದಲಾವಣೆಗೆ ಮುಖ್ಯಕಾರಣವೆಂದರೆ ಪಂಚಾಯಿತಿ ಅಧ್ಯಕ್ಷರಾದ ಮಹಮ್ಮದ್ ಶಫಿ ಮತ್ತು ಕಾರ್ಯದರ್ಶಿ ರೋಹಿತ್ ಕುಲಕರ್ಣಿಯವರ ಅವಿರತ ಪ್ರಯತ್ನವಾಗಿದೆ.

ಸರ್ಕಾರದ ಪ್ರಯತ್ನಗಳು :

ಸುಕನ್ಯಾ ಸಮೃದ್ಧಿ ಯೋಜನೆಯ (Sukanya Samriddi Yojana– SSY) ಅಡಿಯಲ್ಲಿ ಗ್ರಾಮದ ಎಲ್ಲ ಹುಡುಗಿಯರು SSY ಖಾತೆ ಹೊಂದಲಿದ್ದಾರೆ.  ಸುಕನ್ಯಾ ಸಮೃದ್ಧಿ ಯೋಜನೆ ಕೇಂದ್ರ ಸರ್ಕಾರವು ಪ್ರಾರಂಭಿಸಿದ ಉಳಿತಾಯ ಯೋಜನೆಯಾಗಿದೆ.

ಸುಕನ್ಯಾ ಸಮೃದ್ಧಿ ಯೋಜನೆಯ ಕುರಿತು :

  • ಇದು ಬೇಟಿ ಬಚಾವೊ ಬೇಟಿ ಪಢಾವೊ’ (ಮಗಳನ್ನು ಉಳಿಸಿ ಮಗಳನ್ನು ಕಲಿಸಿ) ಅಭಿಯಾನದ ಅಂಗವಾಗಿ ಪ್ರಾರಂಭಿಸಲಾದ ಬಾಲಕಿಯರ ಸಣ್ಣ ಉಳಿತಾಯ ಯೋಜನೆಯಾಗಿದೆ.
  • ಸುಕನ್ಯಾ ಸಮೃದ್ಧಿ ಯೋಜನೆಯಡಿ, ಯಾವುದೇ ಹೆಣ್ಣು ಮಗುವಿನ ಜನನದಿಂದ 10 ವರ್ಷ ತುಂಬುವವರೆಗೆ ಕನಿಷ್ಠ 250 ರೂ. (ಹಿಂದೆ ಇದು 1,000 ರೂ ಇತ್ತು) ಠೇವಣಿ ಯೊಂದಿಗೆ ಖಾತೆಯನ್ನು ತೆರೆಯಬಹುದು. ನಂತರದ ವರ್ಷಗಳಲ್ಲಿ, ಚಾಲ್ತಿಯಿರುವ ಹಣಕಾಸು ವರ್ಷದಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯಡಿ ಕನಿಷ್ಠ 250 ರೂ ಮತ್ತು ಗರಿಷ್ಠ 1.5 ಲಕ್ಷ ರೂ.ವರೆಗೆ ಠೇವಣಿ ಇಡಬಹುದು.
  • ಈ ಯೋಜನೆಯಡಿಯಲ್ಲಿ ಖಾತೆಯನ್ನು ಯಾವುದೇ ಅಂಚೆ ಕಚೇರಿಗಳಲ್ಲಿ ಅಥವಾ ವಾಣಿಜ್ಯ ಬ್ಯಾಂಕುಗಳ ಅಧಿಕೃತ ಶಾಖೆಗಳಲ್ಲಿ ತೆರೆಯಬಹುದು.
  • ಈ ಯೋಜನೆಯಡಿ ಖಾತೆ ತೆರೆದ ನಂತರ, ಈ ಹೆಣ್ಣು ಮಗುವಿಗೆ 21 ವರ್ಷ ತುಂಬುವವರೆಗೆ ಅಥವಾ 18 ವರ್ಷದ ನಂತರ ಮದುವೆಯಾಗುವವರೆಗೂ ಖಾತೆಯು ಕಾರ್ಯನಿರ್ವಹಣೆಯಲ್ಲಿ ಇರುತ್ತದೆ.
  • 18 ವರ್ಷದ ನಂತರ ಹೆಣ್ಣು ಮಗುವಿನ ಉನ್ನತ ಶಿಕ್ಷಣದ ವೆಚ್ಚಗಳ ಅಗತ್ಯವನ್ನು ಪೂರೈಸಲು ಸ್ಕೀಮ್ ನ ಶೇಕಡಾ 50 ರಷ್ಟು ಭಾಗಶಃ ಮೊತ್ತವನ್ನು ಖಾತೆಯಿಂದ ಹಿಂಪಡೆಯಲು ಅನುಮತಿಸಲಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು : ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

 ಡಿಎನ್‌ಎ ತಂತ್ರಜ್ಞಾನ (ಬಳಕೆ ಮತ್ತು ಅನ್ವಯಗಳು) ನಿಯಂತ್ರಣ ಮಸೂದೆ, 2019 :


(DNA Technology (Use and Application) Regulation Bill, 2019):

 ಸಂದರ್ಭ :

ಅಖಿಲ ಭಾರತ ಮಜ್ಲಿಸ್-ಇ-ಇತ್ತೆಹಾದ್-ಉಲ್-ಮುಸ್ಲೀಮೀನ್ (AIMIM) ಮತ್ತು CPI ನಾಯಕರು ಸಂಸದೀಯ ಸ್ಥಾಯಿ ಸಮಿತಿಯ ಡಿಎನ್‌ಎ ತಂತ್ರಜ್ಞಾನ (ಬಳಕೆ ಮತ್ತು ಅಪ್ಲಿಕೇಶನ್) ನಿಯಂತ್ರಣ ಮಸೂದೆ, 2019 ರ ವರದಿಗೆ ಈ ಕೆಳಗಿನ ಆಧಾರದ ಮೇಲೆ ಭಿನ್ನಾಭಿಪ್ರಾಯದ ಟಿಪ್ಪಣಿಗಳನ್ನು ಸಲ್ಲಿಸಿದ್ದಾರೆ:

  • ಮಸೂದೆಯು ಗೌಪ್ಯತೆ ಕಾಳಜಿಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ.
  • ಈ ಮಸೂದೆಯನ್ನು ಜಾರಿಗೊಳಿಸಿದರೆ, ಅದು ಡಿಎನ್‌ಎ ಮಾದರಿ ಸಂಗ್ರಹ ಮತ್ತು ಅನಿರ್ದಿಷ್ಟ ಸಂಗ್ರಹಣೆಯ ಮೂಲಕ ದಲಿತರು, ಮುಸ್ಲಿಮರು ಮತ್ತು ಬುಡಕಟ್ಟು ಜನಾಂಗದವರನ್ನು ಗುರಿಯಾಗಿಸುತ್ತದೆ.

ಮಸೂದೆಗೆ ಸಂಬಂಧಿಸಿದ ಪ್ರಮುಖ ಕಾಳಜಿಗಳು ಮತ್ತು ಸಮಸ್ಯೆಗಳು:

ಆಡಳಿತಾತ್ಮಕ ಉದ್ದೇಶಗಳಿಗಾಗಿ ತಮ್ಮ ವಿಶಿಷ್ಟ ಆನುವಂಶಿಕ ಮಾಹಿತಿಯನ್ನು ವರದಿ ಮಾಡಲು ಮತ್ತು ಸಂಗ್ರಹಿಸಲು ಅಪರಾಧದ ಆರೋಪ ಹೊತ್ತಿರುವ ಅಥವಾ ಕಾಣೆಯಾದ ನಾಗರಿಕರ ಡಿಎನ್‌ಎ ಮಾದರಿ ಮತ್ತು ಪ್ರೊಫೈಲಿಂಗ್ ಅನ್ನು  ಮಾಡಲು ಮಸೂದೆಯು ಪ್ರಸ್ತಾಪಿಸುತ್ತದೆ.

ಈ ಹಿನ್ನೆಲೆಯಲ್ಲಿ ಈ ಕೆಳಗಿನ ಆತಂಕಗಳಿವೆ:

  • ಜಾತಿ ಅಥವಾ ಸಮುದಾಯ ಆಧಾರಿತ ಪ್ರೊಫೈಲಿಂಗ್‌ಗಾಗಿ ಡಿಎನ್‌ಎ ಡೇಟಾವನ್ನು ದುರುಪಯೋಗಪಡಿಸಿಕೊಳ್ಳಬಹುದು.
  • ಈ ಮಸೂದೆ ಪುಟ್ಟಸ್ವಾಮಿ ಮತ್ತು ಸುಬ್ರಮಣಿಯನ್ ಸ್ವಾಮಿ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ಮಾನದಂಡಗಳನ್ನು ಉಲ್ಲಂಘಿಸುತ್ತದೆ.
  • ‘ಗೌಪ್ಯತೆ ಹಕ್ಕನ್ನು’ ರಕ್ಷಿಸಲು ಯಾವುದೇ ಶಾಸನಬದ್ಧ ಚೌಕಟ್ಟಿನ ಅನುಪಸ್ಥಿತಿಯಲ್ಲಿ, ಮಸೂದೆಯು ಅಪರಾಧ ನ್ಯಾಯ ವ್ಯವಸ್ಥೆಗೆ ಸರಿಪಡಿಸಲಾಗದ ಹಾನಿ ಮತ್ತು ವ್ಯಕ್ತಿಗಳ ‘ಗೌಪ್ಯತೆ ಹಕ್ಕಿಗೆ’ ಧಕ್ಕೆ ಉಂಟುಮಾಡುತ್ತದೆ.
  • ಸಂಗ್ರಹಿಸಬೇಕಾದ ಮಾಹಿತಿಯ ಮೇಲಿನ ಕಾನೂನಿನ ಅಸ್ಪಷ್ಟತೆ / ಅಪಾರದರ್ಶಕತೆ ಮತ್ತು ವಿವಿಧ ಉದ್ದೇಶಗಳಿಗಾಗಿ ಅದರ ಅನಿಯಂತ್ರಿತ ಬಳಕೆಯ ವಿರುದ್ಧ ಸಾಕಷ್ಟು ಶಾಸನಬದ್ಧ ರಕ್ಷಣೆ ಇಲ್ಲದೆ ಇರುವುದರಿಂದ ಭವಿಷ್ಯದಲ್ಲಿ ಈ ಕಾನೂನನ್ನು ದುರುಪಯೋಗಪಡಿಸಿಕೊಳ್ಳಬಹುದಾಗಿದೆ.

ಮಸೂದೆಯ ಪ್ರಮುಖ ಲಕ್ಷಣಗಳು :

  • ಮಸೂದೆಯು ರಾಷ್ಟ್ರೀಯ ಮತ್ತು ಪ್ರಾದೇಶಿಕ ಡಿಎನ್‌ಎ ದತ್ತಾಂಶ ಬ್ಯಾಂಕ್ ಅನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ. ಇದರ ಅಡಿಯಲ್ಲಿ, ಪ್ರತಿ ಡೇಟಾ ಬ್ಯಾಂಕ್‌ನಲ್ಲಿ, ಅಪರಾಧ ಪಟ್ಟಿ, ಶಂಕಿತರ ಅಥವಾ ಆರೋಪಿಗಳ ಪಟ್ಟಿ, ಅಪರಾಧಿಗಳ ಪಟ್ಟಿ, ಕಾಣೆಯಾದ ವ್ಯಕ್ತಿಗಳ ಪಟ್ಟಿ ಮತ್ತು ಅಪರಿಚಿತ ಮೃತರ ಅವಶೇಷಗಳನ್ನು ಇತ್ಯಾದಿಗಳನ್ನು ಸಂಗ್ರಹಿಸಲಾಗುತ್ತದೆ.
  • ದಂಡ: ಡಿಎನ್ಎ ಪ್ರೊಫೈಲ್ ಮಾಹಿತಿಯನ್ನು ಹೊಂದಲು ಅರ್ಹತೆ ಇಲ್ಲದ ವ್ಯಕ್ತಿಗಳು ಅಥವಾ ಸಂಸ್ಥೆಗಳಿಗೆ ಮಾಹಿತಿಯನ್ನು ಸೋರಿಕೆ ಮಾಡುವವರಿಗೆ, ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಒಂದು ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ.
  • ಬಳಕೆ: ಮಸೂದೆಯ ಪ್ರಕಾರ, ಡಿಎನ್‌ಎ ಪ್ರೊಫೈಲ್‌ಗಳು, ಡಿಎನ್‌ಎ ಮಾದರಿಗಳು ಮತ್ತು ದಾಖಲೆಗಳು ಸೇರಿದಂತೆ ಎಲ್ಲಾ ಡಿಎನ್‌ಎ ಡೇಟಾವನ್ನು ವ್ಯಕ್ತಿಯನ್ನು ಗುರುತಿಸಲು ಮಾತ್ರ ಬಳಸಲಾಗುತ್ತದೆ ಮತ್ತು ಈ ಮಾಹಿತಿಯನ್ನು “ಬೇರೆ ಯಾವುದೇ ಉದ್ದೇಶಕ್ಕಾಗಿ” ಬಳಸಲಾಗುವುದಿಲ್ಲ.
  • ಮಸೂದೆಯ ನಿಬಂಧನೆಗಳು ದೇಶದ ವಿವಿಧ ಭಾಗಗಳಲ್ಲಿ ಕಾಣೆಯಾದ ವ್ಯಕ್ತಿಗಳು ಮತ್ತು ಅಪರಿಚಿತ ವ್ಯಕ್ತಿಗಳ ನಡುವೆ ಹೊಂದಾಣಿಕೆ ಮಾಡಲು (cross-matching between persons) ಮತ್ತು ಸಾಮೂಹಿಕ ವಿಪತ್ತುಗಳಲ್ಲಿ ಬಲಿಯಾದವರನ್ನು ಗುರುತಿಸಲು ಸಂಗ್ರಹಿಸಿದ ಡಿಎನ್‌ಎ ದತ್ತಾಂಶವನ್ನು ಬಳಸಲು ಅನುಮತಿಸುತ್ತದೆ.
  • ಮಸೂದೆಯು ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸುವ ಮೊದಲು ವ್ಯಕ್ತಿಗಳ ಲಿಖಿತ ಒಪ್ಪಿಗೆಯನ್ನು ಪಡೆಯುವ ಪ್ರಸ್ತಾಪವನ್ನು ಹೊಂದಿದೆ. ಆದಾಗ್ಯೂ, ಏಳು ವರ್ಷಗಳ ಜೈಲು ಶಿಕ್ಷೆ ಅಥವಾ ಮರಣದಂಡನೆಯನ್ನು ಪಡೆದ ಅಪರಾಧಗಳ ಸಂದರ್ಭದಲ್ಲಿ ಒಪ್ಪಿಗೆ ಅಗತ್ಯವಿಲ್ಲ.
  • ಮಸೂದೆಯು ಡಿಎನ್‌ಎ ನಿಯಂತ್ರಣ ಮಂಡಳಿ(DNA Regulatory Board) ರಚನೆಯನ್ನು ಪ್ರಸ್ತಾಪಿಸಿದೆ. ಈ ಮಂಡಳಿಯು DNA ಪ್ರಯೋಗಾಲಯಗಳನ್ನು ಸ್ಥಾಪಿಸುವ ವಿಧಾನವನ್ನು ನಿರ್ಧರಿಸುತ್ತದೆ ಮತ್ತು ಅವುಗಳಿಗೆ ಮಾನದಂಡಗಳನ್ನು ನಿಗದಿಪಡಿಸುತ್ತದೆ ಮತ್ತು DNA ಮಾದರಿಗಳನ್ನು ವಿಶ್ಲೇಷಿಸುವ೦ತಹ ಪ್ರಯೋಗಾಲಯಗಳಿಗೆ ಮಾನ್ಯತೆ ನೀಡುತ್ತದೆ.

evidence

 

ವಿಷಯಗಳು: ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

START ಒಪ್ಪಂದದ ವಿಸ್ತರಣೆಗೆ ಅನುಮತಿ ನೀಡಿದ ರಷ್ಯಾ :


 ಸಂದರ್ಭ :

ಯುಎಸ್ ಮತ್ತು ರಷ್ಯಾ ನ್ಯೂ ಸ್ಟಾರ್ಟ್ (New START)  ಪರಮಾಣು ಶಸ್ತ್ರಾಸ್ತ್ರ ಒಪ್ಪಂದವನ್ನು ವಿಸ್ತರಿಸಲು ಒಪ್ಪಿಕೊಂಡಿವೆ.

  • ಈ ಐತಿಹಾಸಿಕ / ಹೆಗ್ಗುರುತಿನ ಶಸ್ತ್ರಾಸ್ತ್ರ ನಿಯಂತ್ರಣ ಒಪ್ಪಂದದ ವಿಸ್ತರಣೆಯು ಪ್ರತಿ ದೇಶವು ನಿಯೋಜಿಸಬಹುದಾದ ಪರಮಾಣು ಕ್ಷಿಪಣಿಗಳ ಸಂಖ್ಯೆಯನ್ನು ಮಿತಿಗೊಳಿಸುವುದನ್ನು ಮುಂದುವರಿಸುತ್ತದೆ.

nuclear_inventories

ಹಿನ್ನೆಲೆ:

ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಈ ಒಪ್ಪಂದವನ್ನು ವಿಸ್ತರಿಸುವ ಮಾತುಕತೆಗಳನ್ನು ಸ್ಥಗಿತಗೊಳಿಸಿತಲ್ಲದೆ ರಷ್ಯಾ ಮತ್ತು ಚೀನಾ ಗಳನ್ನು ಕಠಿಣ ತಪಾಸಣೆಗೆ ಒಳಪಡಿಸಬೇಕೆಂದು ಒತ್ತಾಯಿಸಿತು ಆದರೆ ಈ ಒತ್ತಾಯವನ್ನು ಚೀನಾ ತಿರಸ್ಕರಿಸಿತು.

ನ್ಯೂ ಸ್ಟಾರ್ಟ್ ಒಪ್ಪಂದದ ಕುರಿತು :

  • NEWSTART (ಸ್ಟ್ರಾಟೆಜಿಕ್ ಆರ್ಮ್ಸ್ ರಿಡಕ್ಷನ್ ಟ್ರೀಟಿ),ಒಪ್ಪಂದಕ್ಕೆ, 2010 ರಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಮತ್ತು ಆ ಸಮಯದ ಅವರ ರಷ್ಯಾದ ಸಹವರ್ತಿ ಡಿಮಿಟ್ರಿ ಮೆಡ್ವೆಡೆವ್ ಅವರು ಸಹಿ ಹಾಕಿದರು.
  • ಇದು ನ್ಯೂಕ್ಲಿಯರ್ ವೆಪನ್ ರಿಡಕ್ಷನ್ ಟ್ರೀಟಿ – (ಸ್ಟ್ರಾಟೆಜಿಕ್ ಆರ್ಮ್ಸ್ ರಿಡಕ್ಷನ್ ಟ್ರೀಟಿ-ಸ್ಟಾರ್ಟ್), ಆಗಿದ್ದು ಇದನ್ನು ಔಪಚಾರಿಕವಾಗಿ ನ್ಯೂ ​​ಸ್ಟಾರ್ಟ್’ ಟ್ರೀಟಿ ಎಂದು ಕರೆಯಲಾಗುತ್ತದೆ, ಇದು ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ರಷ್ಯಾದ ಒಕ್ಕೂಟದ ನಡುವೆ ಆದ ಒಪ್ಪಂದವಾಗಿದೆ.
  • ಈ ಒಪ್ಪಂದದ ಪ್ರಕಾರ, ಪ್ರತಿ ದೇಶವು 700 ನಿಯೋಜಿತ ಖಂಡಾಂತರ ಕ್ಷಿಪಣಿಗಳು, ನಿಯೋಜಿಸಬೇಕಾದ ಯುದ್ಧತಂತ್ರದ ಪರಮಾಣು ಸಿಡಿತಲೆಗಳ ಸಂಖ್ಯೆ 1,550 ಮತ್ತು ನಿಯೋಜಿಸಲಾಗಿರುವ ಮತ್ತು ನಿಯೋಜಿಸದ ಖಂಡಾಂತರ ಕ್ಷಿಪಣಿಗಳು (ICBM) , ಜಲಾಂತರ್ಗಾಮಿ-ಉಡಾವಣೆಯ ಬ್ಯಾಲಿಸ್ಟಿಕ್ ಕ್ಷಿಪಣಿ (SLBM) ಲಾಂಚರ್‌ಗಳು ಮತ್ತು ಪರಮಾಣು ಸಿಡಿತಲೆಗಳ ಸಂಖ್ಯೆ ಸುಸಜ್ಜಿತ ಹೆವಿ ಬಾಂಬರ್ ವಾಹನಗಳ ಸಂಖ್ಯೆಯನ್ನು 800 ಕ್ಕೆ ಸೀಮಿತಗೊಳಿಸಲಾಗಿದೆ.
  • ಇದರ ಅಡಿಯಲ್ಲಿ, ಒಪ್ಪಂದದ ಅನುಸರಣೆಯನ್ನು ಪರಿಶೀಲಿಸಲು ಹೊಸ ತಪಾಸಣೆ ಮತ್ತು ಕಠಿಣ ಪರಿಶೀಲನಾ ಕಾರ್ಯವಿಧಾನವನ್ನು ರೂಪಿಸಲಾಗುವುದು.

 

ವಿಷಯಗಳು : ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಅಂತಾರಾಷ್ಟ್ರೀಯ ಇಂಧನ ಸಂಸ್ಥೆ. (IEA):


(International Energy Agency)

ಸಂದರ್ಭ :

ಇತ್ತೀಚೆಗೆ, ಭಾರತವು ಅಂತರರಾಷ್ಟ್ರೀಯ ಇಂಧನ ಸಂಸ್ಥೆ- IEA ಜೊತೆಗೆ ಕಾರ್ಯತಂತ್ರದ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಿದೆ.

  • ಈ ಒಪ್ಪಂದವು ಸದಸ್ಯ ರಾಷ್ಟ್ರಗಳಲ್ಲಿ ಪರಸ್ಪರ ನಂಬಿಕೆ, ಬಲವಾದ ಸಹಕಾರ ಮತ್ತು ಜಾಗತಿಕ ಇಂಧನ ಸುರಕ್ಷತೆ, ಸ್ಥಿರತೆ ಮತ್ತು ಸುಸ್ಥಿರತೆಯನ್ನು ಉತ್ತೇಜಿಸುತ್ತದೆ.

ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯ ಕುರಿತು :

  • ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯು (IEA) ಅಂತರ್ ಸರ್ಕಾರಿ ಸ್ವಾಯತ್ತ ಸಂಸ್ಥೆಯಾಗಿದ್ದು ಇದನ್ನು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿಗಾಗಿನ ಸಂಘಟನೆಯ (Organisation of Economic Cooperation and Development- OECD) ಫ್ರೇಮ್ವರ್ಕ್ ಪ್ರಕಾರ ಇದನ್ನು 1974 ರಲ್ಲಿ ಸ್ಥಾಪಿಸಲಾಯಿತು.
  • ಅದರ ಕಾರ್ಯೋದ್ದೇಶವು ಮುಖ್ಯವಾಗಿ ನಾಲ್ಕು ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದೆ: ಇಂಧನ ಸುರಕ್ಷತೆ, ಆರ್ಥಿಕ ಅಭಿವೃದ್ಧಿ, ಪರಿಸರ ಜಾಗೃತಿ ಮತ್ತು ಜಾಗತಿಕ ಭಾಗವಹಿಸುವಿಕೆ.
  • ಇದರ ಪ್ರಧಾನ ಕಚೇರಿಯು ( ಸಚಿವಾಲಯ) ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿದೆ.

ಅದರ ಪಾತ್ರಗಳು ಮತ್ತು ಕಾರ್ಯಗಳು:

  • 1973-1974ರ ತೈಲ ಬಿಕ್ಕಟ್ಟಿನ ಸಂದರ್ಭದಲ್ಲಿ ಅದರ ಸದಸ್ಯರಿಗೆ ಪ್ರಮುಖ ತೈಲ ಪೂರೈಕೆ ಅಡಚಣೆ ಗಳಿಗೆ ಸ್ಪಂದಿಸಲು ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯನ್ನು ಸ್ಥಾಪಿಸಲಾಯಿತು. ಅದು ಇಂದಿಗೂ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ.
  • ಜಾಗತಿಕವಾಗಿ ಪ್ರಮುಖ ಇಂಧನ ಪ್ರವೃತ್ತಿಗಳನ್ನು ಪತ್ತೆಹಚ್ಚುವುದು ಮತ್ತು ವಿಶ್ಲೇಷಿಸುವುದು, ಬಲವಾದ ಇಂಧನ ನೀತಿಗಳನ್ನು ಉತ್ತೇಜಿಸುವುದು ಮತ್ತು ಬಹುರಾಷ್ಟ್ರೀಯ ಇಂಧನ ತಂತ್ರಜ್ಞಾನ ಸಹಕಾರವನ್ನು ಉತ್ತೇಜಿಸಲು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ಆದೇಶವು ಕಾಲಾನಂತರದಲ್ಲಿ ವಿಸ್ತರಿಸಿದೆ.

ಐಇಎ ಸಂಯೋಜನೆ ಮತ್ತು ಸದಸ್ಯತ್ವದ ಅರ್ಹತೆ:

Composition and eligibility:

ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಪ್ರಸ್ತುತ 30 ಸದಸ್ಯ ರಾಷ್ಟ್ರಗಳು ಮತ್ತು ಎಂಟು ಪಾಲುದಾರ ರಾಷ್ಟ್ರಗಳನ್ನು ಒಳಗೊಂಡಿದೆ. ಸದಸ್ಯರಾಗಲು, ದೇಶವು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) ಯಲ್ಲಿ ಸದಸ್ಯರಾಗುವುದು ಕಡ್ಡಾಯವಾಗಿದೆ. ಆದಾಗ್ಯೂ OECD ಯ ಎಲ್ಲಾ ಸದಸ್ಯರು IEA ಸದಸ್ಯರಲ್ಲ.

ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯ ಸದಸ್ಯತ್ವಕ್ಕಾಗಿ ಒಂದು ದೇಶವು ಈ ಕೆಳಗಿನ ಷರತ್ತುಗಳನ್ನು ಪೂರೈಸಬೇಕು:

  • ಹಿಂದಿನ ವರ್ಷದ 90 ದಿನಗಳಲ್ಲಿ ಮಾಡಿದ ನಿವ್ವಳ ಆಮದಿಗೆ ಸಮನಾದ ಕಚ್ಚಾ ತೈಲ ಮತ್ತು / ಅಥವಾ ಉತ್ಪನ್ನ ನಿಕ್ಷೇಪಗಳನ್ನು ದೇಶದ ಸರ್ಕಾರವು ಹೊಂದಿರಬೇಕು. ಇವು ನೇರವಾಗಿ ಸರ್ಕಾರದ ಒಡೆತನದಲ್ಲಿಲ್ಲದಿದ್ದರೂ, ಜಾಗತಿಕ ತೈಲ ಪೂರೈಕೆಯಲ್ಲಿನ ಅಡೆತಡೆಯನ್ನು ನಿವಾರಿಸಲು ಇದನ್ನು ಬಳಸಬಹುದು.
  • ದೇಶದಲ್ಲಿ ರಾಷ್ಟ್ರೀಯ ತೈಲ ಬಳಕೆಯನ್ನು 10% ರಷ್ಟು ಕಡಿಮೆ ಮಾಡಲು ‘ಬೇಡಿಕೆ ನಿಯಂತ್ರಣ ಕಾರ್ಯಕ್ರಮ’ ವನ್ನು ಜಾರಿಗೆ ತರಬೇಕು.
  • ರಾಷ್ಟ್ರೀಯ ಆಧಾರಿತವಾಗಿ ಸಂಘಟಿತ ತುರ್ತು ಪ್ರತಿಕ್ರಿಯೆ ಕ್ರಮಗಳನ್ನು (Co-ordinated Emergency Response Measures- CERM) ಜಾರಿಗೆ ತರಲು ಶಾಸನ ಸಂಸ್ಥೆಗಳು ಇರಬೇಕು.
  • ಕೋರಿಕೆಯ ಮೇರೆಗೆ, ದೇಶದ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಎಲ್ಲಾ ತೈಲ ಕಂಪನಿಗಳು ಮಾಹಿತಿ ನೀಡುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಲು ಕಾನೂನು ಕ್ರಮಗಳು ಇರಬೇಕು.
  • ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯ ಸಾಮೂಹಿಕ ಕ್ರಮಕ್ಕೆ ಅದರ ಕೊಡುಗೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ದೇಶದಲ್ಲಿ ಕಾನೂನುಗಳು ಅಥವಾ ಕ್ರಮಗಳು ಇರಬೇಕು.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

ಆನೆ ಕಾರಿಡಾರ್ ಪ್ರಕರಣದಲ್ಲಿ ರಚಿಸಲಾದ ಸಮಿತಿಯ ವಿಸ್ತರಣೆ:


ಸಂದರ್ಭ:

ಇತ್ತೀಚೆಗೆ, ಸುಪ್ರೀಂ ಕೋರ್ಟ್ ಕಳೆದ ವರ್ಷ ಅಕ್ಟೋಬರ್ 14 ರಂದು ನ್ಯಾಯಾಲಯ ರಚಿಸಿದ ತಾಂತ್ರಿಕ ಸಮಿತಿಯ ಸದಸ್ಯರಾಗಿ ಪರಿಸರ ಸಂರಕ್ಷಣಾವಾದಿ ನಂದಿತಾ ಹಜರಿಕಾ ಅವರನ್ನು ನೇಮಕ ಮಾಡಿತು. ನೀಲಗಿರಿ ಕಲೆಕ್ಟರ್ ರವರು ಕೈಗೊಂಡ ಕ್ರಮದ ವಿರುದ್ಧ ಭೂಮಾಲೀಕರು ನೀಡಿದ ದೂರುಗಳನ್ನು ಆಲಿಸಲು ಈ ಸಮಿತಿಯನ್ನು ರಚಿಸಲಾಯಿತು. ನೀಲಗಿರಿ ಕಲೆಕ್ಟರ್‌ಗೆ ಭೂಮಾಲೀಕರು ತಮ್ಮ ಕಟ್ಟಡಗಳಿಗೆ ಮೊಹರು ಹಾಕುವ ಮತ್ತು ಎಲಿಫೆಂಟ್ ಕಾರಿಡಾರ್’ ( ಆನೆಗಳ ಮೀಸಲು ಪ್ರದೇಶ ) ಪ್ರದೇಶದಲ್ಲಿ ಅನಿಯಂತ್ರಿತ ಬದಲಾವಣೆಗಳನ್ನು ಮಾಡಿದ್ದರು, ಎಂಬ ದೂರುಗಳನ್ನು ಒಳಗೊಂಡಿತ್ತು.

ಏನಿದು ಸಮಸ್ಯೆ?

  • ಸರ್ವೋಚ್ಚ ನ್ಯಾಯಾಲಯವು ಕಳೆದ ವರ್ಷ ಅಕ್ಟೋಬರ್ 14 ರಂದು ನೀಡಿದ ತೀರ್ಪಿನಲ್ಲಿ ಆನೆ ಕಾರಿಡಾರ್ (Elephant Corridor) ಅನ್ನು ಅಧಿಸೂಚಿಸುವ ಮತ್ತು ನೀಲಗಿರಿ ಜೀವಗೋಳ ಮೀಸಲು ಪ್ರದೇಶದ (the Nilgiri biosphere reserve) ಮೂಲಕ ಆನೆಗಳ ವಲಸೆ ಪಥವನ್ನು ರಕ್ಷಿಸುವ ತಮಿಳುನಾಡು ಸರ್ಕಾರದ ಅಧಿಕಾರವನ್ನು ಎತ್ತಿಹಿಡಿದಿದೆ.
  • ಪರಿಸರಕ್ಕೆ ಬಹಳ ಮುಖ್ಯವಾದ ಆನೆಗಳಂತಹ ‘ಪ್ರಮುಖ ಪ್ರಜಾತಿಗಳನ್ನು’ (Key Stone species) ರಕ್ಷಿಸುವುದು ರಾಜ್ಯದ ಕರ್ತವ್ಯ ಎಂದು ನ್ಯಾಯಾಲಯ ಹೇಳಿದೆ.

ಕಾರಿಡಾರ್ ನ ಸ್ಥಳ:

  • ಪರಿಸರ ಸೂಕ್ಷ್ಮ ಸಿಗುರ್ ಪ್ರಸ್ಥಭೂಮಿಯಲ್ಲಿರುವ  (sigur plateau) ಈ ಆನೆ ಕಾರಿಡಾರ್ ಪಶ್ಚಿಮ ಮತ್ತು ಪೂರ್ವ ಘಟ್ಟಗಳನ್ನು ಪರಸ್ಪರ ಸಂಪರ್ಕಿಸುತ್ತದೆ ಮತ್ತು ಆನೆಗಳ ಸಂಖ್ಯೆ ಮತ್ತು ಅವುಗಳ ಆನುವಂಶಿಕ ವೈವಿಧ್ಯತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
  • ಈ ಆನೆ ಕಾರಿಡಾರ್ ನೈಋತ್ಯ ಭಾಗದಲ್ಲಿ ನೀಲಗಿರಿ ಬೆಟ್ಟಗಳನ್ನು ಮತ್ತು ಅದರ ಈಶಾನ್ಯ ಭಾಗದಲ್ಲಿ ಮೊಯಾರ್ ನದಿ ಕಣಿವೆಯನ್ನು (Moyar River valley) ಹೊಂದಿದೆ. ಆಹಾರ ಮತ್ತು ನೀರಿನ ಹುಡುಕಾಟದಲ್ಲಿ ಆನೆಗಳು ಈ ಪ್ರಸ್ಥಭೂಮಿಯ ಮೂಲಕ ಹಾದು ಹೋಗುತ್ತವೆ.

elephant_corridors

ಆನೆ ಕಾರಿಡಾರ್ ಎಂದರೇನು ?

ಆನೆ ಕಾರಿಡಾರ್‌’ ಗಳು ಆನೆಗಳ ಎರಡು ವಿಶಾಲ ಆವಾಸಸ್ಥಾನಗಳನ್ನು ಸಂಪರ್ಕಿಸುವ ಕಿರಿದಾದ ಪಟ್ಟಿಗಳಾಗಿವೆ (narrow strips). ಅಪಘಾತಗಳು ಮತ್ತು ಇತರ ಕಾರಣಗಳಿಂದ ಪ್ರಾಣಿಗಳ ಮರಣವನ್ನು ಕಡಿಮೆ ಮಾಡುವಲ್ಲಿ ಆನೆ ಕಾರಿಡಾರ್‌ಗಳು ಪ್ರಮುಖ ಪಾತ್ರವಹಿಸುತ್ತವೆ. ಆದ್ದರಿಂದ, ವಲಸೆ ಕಾರಿಡಾರ್‌ಗಳನ್ನು ಸಂರಕ್ಷಿಸಲು ಕಾಡುಗಳ ವಿಘಟನೆಯು ಹೆಚ್ಚು ಮುಖ್ಯವಾಗುತ್ತದೆ.

ಆನೆ ಕಾರಿಡಾರ್ ಗಳನ್ನು ಏಕೆ ಸಂರಕ್ಷಿಸಬೇಕು ?

  • ಆನುವಂಶಿಕವಾಗಿ ಕಾರ್ಯಸಾಧ್ಯವಾದ ಸಾಮರ್ಥ್ಯವನ್ನು ಹೆಚ್ಚಿಸಲು ಆನೆಗಳ ಸಂಖ್ಯೆಯ ಏರಿಕೆ / ಚಲನೆಯನ್ನು ಖಚಿತಪಡಿಸಿಕೊಳ್ಳುವುದು ಅವಶ್ಯಕ. ಹುಲಿಗಳು ಸೇರಿದಂತೆ ಇತರ ಪ್ರಭೇದಗಳು ಸಹ ಈ ಕಾಡುಗಳ ಮೇಲೆ ಅವಲಂಬಿತವಾಗಿರುವುದರಿಂದ ಇದು ಕಾಡುಗಳನ್ನು ಪುನರುತ್ಪಾದಿಸಲು ಸಹ ಸಹಾಯ ಮಾಡುತ್ತದೆ.
  • ಸುಮಾರು 40% ಆನೆ ಸಂರಕ್ಷಿತ ಪ್ರದೇಶಗಳು ಅಸುರಕ್ಷಿತವಾಗಿವೆ, ಏಕೆಂದರೆ ಅವು ಸಂರಕ್ಷಿತ ಉದ್ಯಾನವನಗಳು ಮತ್ತು ಅಭಯಾರಣ್ಯಗಳ ವ್ಯಾಸ್ತಿಯ ಹೊರಗೆ ಇವೆ. ಇದಲ್ಲದೆ, ವಲಸೆ ಕಾರಿಡಾರ್‌ಗಳು ಯಾವುದೇ ನಿರ್ದಿಷ್ಟ ಕಾನೂನು ರಕ್ಷಣೆಯನ್ನು ಅನುಭವಿಸುವುದಿಲ್ಲ.
  • ಹೊಲಗಳಾಗಿ ಪರಿವರ್ತನೆಗೊಂಡಿರುವ ಅರಣ್ಯ ಮತ್ತು ಅನಿಯಂತ್ರಿತ ಪ್ರವಾಸೋದ್ಯಮವು ವನ್ಯಜೀವಿಗಳ ಹಾದಿಯನ್ನು ನಿರ್ಬಂಧಿಸುತ್ತದೆ. ಇದು ವನ್ಯಜೀವಿಗಳನ್ನು ಇತರ ಪರ್ಯಾಯ ಮಾರ್ಗಗಳನ್ನು ಹುಡುಕಲು ಒತ್ತಾಯಿಸುತ್ತದೆ, ಇದರ ಪರಿಣಾಮವಾಗಿ ಆನೆ-ಮಾನವ ಸಂಘರ್ಷ ಹೆಚ್ಚಾಗುತ್ತದೆ.
  • ಪರಿಸರ ಪ್ರವಾಸೋದ್ಯಮದ ಸಡಿಲ ನಿಯಂತ್ರಣವು ಈ ಪ್ರಮುಖ ಆವಾಸಸ್ಥಾನಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ವಿಶೇಷವಾಗಿ ಇದು ಆನೆಗಳಂತಹ ವಿಶಾಲ ವ್ಯಾಪ್ತಿಯನ್ನು ಹೊಂದಿರುವ ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆ.

ಅಖಿಲ ಭಾರತ ಮಟ್ಟದಲ್ಲಿನ ಪ್ರಯತ್ನಗಳು :

  • 2017 ರಲ್ಲಿ, ವಿಶ್ವ ಆನೆಗಳ ದಿನಾಚರಣೆಯಂದು, ಆನೆಗಳನ್ನು ರಕ್ಷಿಸುವ ರಾಷ್ಟ್ರವ್ಯಾಪಿ ಅಭಿಯಾನವಾದ ಗಜ್ ಯಾತ್ರೆ’  ಯನ್ನು ಪ್ರಾರಂಭಿಸಲಾಯಿತು.
  • ಈ ಅಭಿಯಾನದಲ್ಲಿ ಆನೆ ಶ್ರೇಣಿಯ 12 ರಾಜ್ಯಗಳನ್ನು ಒಳಗೊಳ್ಳಲು ಯೋಜಿಸಲಾಗಿದೆ.
  • ತಮ್ಮ ಆವಾಸಸ್ಥಾನಗಳಲ್ಲಿ ಮುಕ್ತ ಸಂಚಾರವನ್ನು ಉತ್ತೇಜಿಸಲು ‘ಆನೆ ಕಾರಿಡಾರ್’ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶವಾಗಿದೆ.

ಮಾನವ-ಆನೆ ಸಂಘರ್ಷದ ನಿರ್ವಹಣೆಗಾಗಿ ಅರಣ್ಯ ಸಚಿವಾಲಯದ ಮಾರ್ಗಸೂಚಿಗಳು: ( ಅತ್ಯುತ್ತಮ ಅಭ್ಯಾಸಗಳು).

  • ಆನೆಗಳನ್ನು ತಮ್ಮ ನೈಸರ್ಗಿಕ ಆವಾಸಸ್ಥಾನಗಳಲ್ಲಿಯೇ ಇರುವಂತೆ ಮಾಡಲು ನೀರಿನ ಮೂಲಗಳ ನಿರ್ಮಾಣ ಮತ್ತು ಕಾಡಿನ ಬೆಂಕಿಯನ್ನು ನಿಯಂತ್ರಿಸುವುದು.
  • ತಮಿಳುನಾಡಿನಲ್ಲಿರುವಂತೆ ಆನೆಗಳಿಗೆ ಆನೆಕಂದಕ ನಿರ್ಮಾಣ ಮಾಡುವುದು.(Elephant Proof trenches).
  • ಕರ್ನಾಟಕದಲ್ಲಿರುವಂತೆ ತೂಗು ಬೇಲಿಗಳು ಹಾಗೂ ರೈಲು ಕಂಬಿಗಳನ್ನು ಬಳಸಿ ತಡೆಗೋಡೆಗಳ ನಿರ್ಮಾಣ ಮಾಡುವುದು. (Hanging fences and rubble walls).
  • ಉತ್ತರ ಬಂಗಾಳದಲ್ಲಿ ಬಳಸುವ ಮೆಣಸಿನಕಾಯಿ ಹೊಗೆ ಮತ್ತು ಅಸ್ಸಾಂನಲ್ಲಿ ಜೇನುನೊಣಗಳ ಅಥವಾ ಹುಲಿ-ಸಿಂಹ ಗಳಂತಹ ಮಾಂಸಾಹಾರಿ ಪ್ರಾಣಿಗಳ ಶಬ್ದ ಉಂಟುಮಾಡುವುದು.
  • ತಂತ್ರಜ್ಞಾನದ ಬಳಕೆ: ದಕ್ಷಿಣ ಬಂಗಾಳದಲ್ಲಿ ಆನೆಗಳನ್ನು ಗುರುತಿಸುವುದು, ಮತ್ತು ಆನೆಗಳ ಉಪಸ್ಥಿತಿಯ ಮೇಲ್ವಿಚಾರಣೆ ಮತ್ತು ಎಚ್ಚರಿಕೆಗಾಗಿ ಎಸ್‌ಎಂಎಸ್ ಎಚ್ಚರಿಕೆ ಸಂದೇಶಗಳನ್ನು ಕಳುಹಿಸುವುದು.

ಈ ನಿಟ್ಟಿನಲ್ಲಿ ಖಾಸಗಿ ಸಂಸ್ಥೆಗಳ ಪ್ರಯತ್ನಗಳು:

  • ಏಷ್ಯನ್ ಎಲಿಫೆಂಟ್ ಅಲೈಯನ್ಸ್ (Asian Elephant Alliance), ಇದು ಐದು ಸರ್ಕಾರೇತರ ಸಂಸ್ಥೆಗಳ ಜಂಟಿ ಆರಂಭಿಕ ಉಪಕ್ರಮವಾಗಿದೆ. ಭಾರತದ 12 ರಾಜ್ಯಗಳಲ್ಲಿ ಆನೆಗಳು ಬಳಸುತ್ತಿರುವ 101 ಕಾರಿಡಾರ್‌ಗಳಲ್ಲಿ 96 ಅನ್ನು ಸುರಕ್ಷಿತಗೊಳಿಸಲು ಕಳೆದ ವರ್ಷ ಇದನ್ನು ಸ್ಥಾಪಿಸಲಾಯಿತು.
  • ‘ಎಲಿಫೆಂಟ್ ಕಾರಿಡಾರ್’ ಸಂರಕ್ಷಣೆಗಾಗಿ NGO ಎಲಿಫೆಂಟ್ ಫ್ಯಾಮಿಲಿ, ಅಂತರಾಷ್ಟ್ರೀಯ ಪ್ರಾಣಿ ಕಲ್ಯಾಣ ನಿಧಿ (International Fund for Animal Welfare), IUCN ನೆದರ್ಲ್ಯಾಂಡ್ಸ್ ಮತ್ತು ವರ್ಲ್ಡ್ ಲ್ಯಾಂಡ್ ಟ್ರಸ್ಟ್, ಭಾರತದ ವನ್ಯಜೀವಿ ಮಂಡಳಿ,ಯ (Wildlife Trust of India -WTI) ಸಹಯೋಗದೊಂದಿಗೆ ಕೆಲಸ ಮಾಡುತ್ತಿವೆ.

deadly_passage

 

ವಿಷಯಗಳು: ಸಂವಹನ ನೆಟ್‌ವರ್ಕ್‌ಗಳ ಮೂಲಕ ಆಂತರಿಕ ಭದ್ರತೆಗೆ ಸವಾಲುಗಳು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಸುರಕ್ಷತೆಯ ಮೂಲಗಳು; ಹಣ ವರ್ಗಾವಣೆ ಮತ್ತು ಅದರ ತಡೆಗಟ್ಟುವಿಕೆ.

 ಸರ್ಕಾರದ (ಅಧಿಕೃತ) ರಹಸ್ಯ ಕಾಯ್ದೆ:


(Official Secrets Act):

ಸಂದರ್ಭ :

ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕೆಂದು ಕೋರಿ ಮುಂಬೈ ಪೊಲೀಸ್ ಆಯುಕ್ತರಿಗೆ ದೂರು ನೀಡಲಾಗಿದೆ.

ಹಿನ್ನೆಲೆ:

ವಾಟ್ಸಾಪ್ ಚಾಟ್ ಮೂಲಕ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ್ದಕ್ಕಾಗಿ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಿ ಬಂಧಿಸುವಂತೆ ಮಹಾರಾಷ್ಟ್ರ ಕಾಂಗ್ರೆಸ್ ಒತ್ತಾಯಿಸಿದೆ.

ಅಧಿಕೃತ ರಹಸ್ಯ ಕಾಯ್ದೆಯ ಕುರಿತು :

  • ಈ ಕಾಯ್ದೆಯನ್ನು ಮೂಲತಃ 1899 ರಿಂದ 1905 ರವರೆಗೆ ಭಾರತದ ವೈಸ್ರಾಯ್ ಆಗಿದ್ದ ಲಾರ್ಡ್ ಕರ್ಜನ್ ರವರ ಆಳ್ವಿಕೆಯಲ್ಲಿ ಜಾರಿಗೆ ತರಲಾಯಿತು.
  • ಈ ಕಾಯಿದೆಯ ಮುಖ್ಯ ಉದ್ದೇಶವೆಂದರೆ ರಾಷ್ಟ್ರೀಯತಾವಾದಿ ಪ್ರಕಟಣೆಗಳ ಧ್ವನಿಯನ್ನು ನಿಗ್ರಹಿಸುವುದಾಗಿತ್ತು.
  • ಈ ಹಿಂದೆ ಜಾರಿಯಲ್ಲಿದ್ದ ಕಾಯಿದೆಯನ್ನು ಭಾರತೀಯ ಅಧಿಕೃತ ರಹಸ್ಯ ಕಾಯ್ದೆ 1923 (Indian Official Secrets Act,1923) ನಿಂದ ಬದಲಾಯಿಸಲಾಯಿತು ಮತ್ತು ದೇಶದ ಆಡಳಿತದಲ್ಲಿ ಗೌಪ್ಯತೆಗೆ ಸಂಬಂಧಿಸಿದ ಎಲ್ಲಾ ವಿಷಯಗಳಿಗೆ ಇದನ್ನು ವಿಸ್ತರಿಸಲಾಯಿತು.

ಕಾಯ್ದೆಯ ವ್ಯಾಪ್ತಿ:

ಇದು ಮುಖ್ಯವಾಗಿ ಎರಡು ಅಂಶಗಳೊಂದಿಗೆ ವ್ಯವಹರಿಸುತ್ತದೆ:

  • ಬೇಹುಗಾರಿಕೆ ಅಥವಾ ಗೂಢಚರ್ಯೆಯು ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಒಳಗೊಂಡಿದೆ.
  • ಕಾಯ್ದೆಯ ಸೆಕ್ಷನ್ 5 ರ ಅಡಿಯಲ್ಲಿ ಸರ್ಕಾರದ ಇತರ ಗೌಪ್ಯ / ರಹಸ್ಯ ಮಾಹಿತಿಯನ್ನು ಬಹಿರಂಗಪಡಿಸುವುದು.

ರಹಸ್ಯ ಮಾಹಿತಿ” ಯನ್ನು ವ್ಯಾಖ್ಯಾನಿಸಲಾಗಿದೆಯೆ?

  • ಈ ಕಾಯಿದೆಯು ‘ರಹಸ್ಯ’ ದಾಖಲೆಗಳನ್ನು ವ್ಯಾಖ್ಯಾನಿಸುವುದಿಲ್ಲ. ಇದರ ಪ್ರಕಾರ – ಯಾವ ದಾಖಲೆಗಳು ಅಥವಾ ಮಾಹಿತಿಯನ್ನು ‘ರಹಸ್ಯ’ ಎಂದು ವರ್ಗೀಕರಿಸಬಹುದು ಎಂಬುದನ್ನು ಸರ್ಕಾರ ನಿರ್ಧರಿಸುತ್ತದೆ. ಅಥವಾ ‘ರಹಸ್ಯ’ ದಾಖಲೆಯ ವ್ಯಾಪ್ತಿಗೆ ಒಳಪಡುವ ವಿಷಯವನ್ನು ನಿರ್ಧರಿಸುವುದು ಸರ್ಕಾರದ ವಿವೇಚನೆಯಾಗಿದೆ.
  • ಈ ಕಾಯ್ದೆ 2005 ರ ಮಾಹಿತಿ ಹಕ್ಕು ಕಾಯ್ದೆಗೆ ವಿರುದ್ಧವಾಗಿದೆ ಎಂದು ಹೇಳಲಾಗುತ್ತದೆ.
  • ಆದಾಗ್ಯೂ, ಯಾವುದೇ ಮಾಹಿತಿಗೆ ಸಂಬಂಧಿಸಿದಂತೆ ಅಧಿಕೃತ ರಹಸ್ಯ ಕಾಯ್ದೆಯಡಿ ಯಾವುದೇ ಅಸಂಗತತೆ ಇದ್ದರೆ, ಮಾಹಿತಿ ಹಕ್ಕು ಕಾಯ್ದೆ (RTI ಕಾಯ್ದೆ) ಪರಿಣಾಮಕಾರಿಯಾಗಿರುತ್ತದೆ.
  • ಆದರೆ, ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 8 ಮತ್ತು 9 ರ ಅಡಿಯಲ್ಲಿ ಸರ್ಕಾರ ಯಾವುದೇ ಮಾಹಿತಿ ನೀಡಲು ನಿರಾಕರಿಸಬಹುದು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ:

  • ಪ್ರಧಾನ ಮಂತ್ರಿಗಳ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು 2021 ರ ಋತುವಿನಲ್ಲಿ ಕೊಬ್ಬರಿಗೆ ಕನಿಷ್ಠ ಬೆಂಬಲ ಬೆಲೆ (MSP) ನೀಡುವುದಕ್ಕೆ ಅನುಮೋದನೆ ನೀಡಿದೆ.
  • ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ (CACP) ಶಿಫಾರಸುಗಳನ್ನು ಆಧರಿಸಿ ಈ ಅನುಮೋದನೆ ನೀಡಲಾಗಿದೆ.
  • 2021 ರ ಋತುವಿನಲ್ಲಿ ಕೊಬ್ಬರಿಯ ಕನಿಷ್ಠ ಬೆಂಬಲ ಬೆಲೆ ಹೆಚ್ಚಳವು ಅಖಿಲ ಭಾರತ ಸರಾಸರಿ ಉತ್ಪಾದನಾ ವೆಚ್ಚಕ್ಕಿಂತ 1.5 ಪಟ್ಟು ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸುವ ತತ್ವಕ್ಕೆ ಅನುಗುಣವಾಗಿರುತ್ತದೆ. ಇದನ್ನು 2018-19ರ ಬಜೆಟ್‌ನಲ್ಲಿ ಸರ್ಕಾರ ಘೋಷಿಸಿತ್ತು.

  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos