ಸೂಚನೆ : ದಿನಕ್ಕೊಂದು ವಿಷಯ ಭಾಗವು ಸ್ಪರ್ಧಾತ್ಮಕ ಪರೀಕ್ಷೆಯ ಮೊದಲ ಹಂತ (ವಸ್ತುನಿಷ್ಠ) ಕೇಂದ್ರಿತವಾಗಿದೆ. ಪ್ರತಿನಿತ್ಯ ಒಂದು ವಿಷಯದ ನಿರ್ದಿಷ್ಟ ಅಂಶ ಕುರಿತು ಸಂಕ್ಷಿಪ್ತವಾಗಿ ಸಮಗ್ರ ಮಾಹಿತಿಯನ್ನು ನೀಡಲು ಪ್ರಯತ್ನಿಸಲಾಗುವುದು.
-
- ಸೋಮವಾರ – ರಾಜ್ಯಶಾಸ್ತ್ರ
- ಮಂಗಳವಾರ – ವಿಜ್ಞಾನ ಮತ್ತು ತಂತ್ರಜ್ಞಾನ
- ಬುಧವಾರ – ಭೂಗೋಳಶಾಸ್ತ್ರ ಮತ್ತು ಕೃಷಿ ವಲಯ
- ಗುರುವಾರ – ಅರ್ಥಶಾಸ್ತ್ರ ಮತ್ತು ಅಂತರರಾಷ್ಟ್ರೀಯ ಸಂಬಂಧ
- ಶುಕ್ರವಾರ – ಪರಿಸರ ಅಧ್ಯಯನ
- ಶನಿವಾರ – ಇತಿಹಾಸ
ಪರಿವಿಡಿ
ಸಾಮಾನ್ಯ ಪತ್ರಿಕೆ -1
1. ಮೌಂಟ್ ಎವರೆಸ್ಟ್ 3 ಅಡಿ ಎತ್ತರ ಏರಿಕೆ – ಚೀನಾ ಮತ್ತು ನೇಪಾಳದಿಂದ ಅನುಮೋದನೆ
ಸಾಮಾನ್ಯ ಪತ್ರಿಕೆ-2:
1. ನ್ಯಾಯಾಂಗದಿಂದ ಆರ್ಥಿಕತೆಯ ಮೇಲೆ ಯಾವುದೇ ರೀತಿಯ ಹೇಳಿಕೆ/ಆದೇಶಕ್ಕೆ ನಿರಾಕರಣೆ
2. ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧೀಕರಣ (NCLAT)
3. ಎಲುರು ನಿಗೂಡ ಕಾಯಿಲೆ ಸೋಂಕಿತರ ರಕ್ತದ ಮಾದರಿಗಳನ್ನು AIIMS ನಿಂದ ಆವಿಷ್ಕಾರ
4. ಪಾಕಿಸ್ತಾನ, ಚೀನಾದಿಂದ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ
ಸಾಮಾನ್ಯ ಪತ್ರಿಕೆ-3:
1. ‘ಭಾರತದಲ್ಲಿ ತಯಾರಿಸಿ’ ನೀತಿಯಿಂದಾಗಿ ಜೀವ ವಾಹಕ ಔಷಧಿಯ ಪೂರೈಕೆಗೆ ಧಕ್ಕೆ
2. ಮಕ್ಕಳ ಅಶ್ಲಿಲತೆಯನ್ನು ನಿಯಂತ್ರಿಸಲು ಮಹಾರಾಷ್ಟ್ರ ಪೋಲಿಸರಿಂದ ಕ್ರಮ
ಪೂರ್ವಭಾವಿ ಪರೀಕ್ಷೆ:
1. ಚೀನಾದ ಟೈರ್ ಕಾರ್ಖಾನೆಯಿಂದ ಶ್ರೀಲಂಕಾಕ್ಕೆ $300 ಮಿಲಿಯನ್
2. ಉತರ ಐರ್ಲಾಂಡಿನ ಪ್ರೋಟೋಕೋಲ್ (Northern Ireland protocol)
3. ಜನಸಂಖ್ಯೆ ಮತ್ತು ಅಭಿವೃದ್ಧಿಯಲ್ಲಿ ಭಾಗಿತ್ವ (PPD)
ಸಾಮಾನ್ಯ ಅಧ್ಯಯನ ಪತ್ರಿಕೆ – 1
ವಿಷಯ : ಭೂಕಂಪಗಳು, ಸುನಾಮಿ,ಜ್ವಾಲಾಮುಖಿ ಚಟುವಟಿಕೆ, ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು.
ಮೌಂಟ್ ಎವರೆಸ್ಟ್ 3 ಅಡಿ ಎತ್ತರ ಏರಿಕೆ – ಚೀನಾ ಮತ್ತು ನೇಪಾಳದಿಂದ ಅನುಮೋದನೆ
ಸಂದರ್ಭ
1954ರಲ್ಲಿ ಗುರುತಿಸಿದ್ದ ಮೌಂಟ್ ಎವರೆಸ್ಟ್ ಪರ್ವತದ ಎತ್ತರವು ಸಮುದ್ರ ಮಟ್ಟದಿಂದ 86 cm ಹೆಚ್ಚಿದೆ ಎಂದು ಇತ್ತೀಚಿಗೆ ನೇಪಾಳ ಮತ್ತು ಚೀನಾದ ವಿದೇಶಾಂಗ ಸಚಿವರು ಜಂಟಿಯಾಗಿ ಅನುಮೋದಿಸಿದ್ದಾರೆ.
ಮೌಂಟ್ ಎವರೆಸ್ಟ್ ಬಗ್ಗೆ
- ಈ ಪರ್ವತವು ನೇಪಾಳ ಮತ್ತು ಚೀನಾದ ಗಡಿಯಿಂದ ಪ್ರಾರಂಭವಾಗುವುದು
- ನೇಪಾಳದಲ್ಲಿ ಸಾಗರ್ ಮಾತಾ, ಚೀನಾದಲ್ಲಿ ಮೌಂಟ್ ಕೊಮೊಲಾಂಗ್ಮಾ ಪರ್ವತ ಎನ್ನಲಾಗಿದೆ
ಹಿನ್ನೆಲೆ:
ಇತ್ತೀಚಿಗೆ ಮೌಂಟ್ ಎವರೆಸ್ಟ್ ಪರ್ವತದ ಎತ್ತರದ ಕುರಿತು ಚರ್ಚೆ ಮೊದಲಾಯಿತು. ಎತ್ತರವನ್ನು ಶಿಲೆಯ ಎತ್ತರದಿಂದ ಅಥವಾ ಹಿಮದ ಎತ್ತರದಿಂದ ಪರಿಗಣಿಸುವುದರ ಕುರಿತು ವಿವಾದ ಮುನ್ನೆಲೆಗೆ ಬಂದಿದೆ.
ಈ ಹಿಂದಿನ ಮಾಪನ
1954ರಲ್ಲಿ ಭಾರತದ ಸಮೀಕ್ಷೆ ಈ ಪರ್ವತದ ಎತ್ತರವನ್ನು ಮೌಲ್ಯ ಮಾಪನ ಮಾಡಿತು. ಇದು ಗುರುತಿಸಿದ 8848 ಮೀ ಎತ್ತರ ಚೀನಾ ಹೊರತುಪಡಿಸಿ ವಿಶ್ವದಾದ್ಯಂತ ಅನುಮೋದನೆಗೊಳಗಾಯಿತು.
1999ರಲ್ಲಿ ಅಮೇರಿಕಾದ ತಂಡವೊಂದು ಮೌಂಟ್ ಎವರೆಸ್ಟ್ ಪರ್ವತದ ಔನ್ನತ್ಯವನ್ನು 8850ಮೀ ಎಂದಿತು.
Sources: Indian Express.
ಸಾಮಾನ್ಯ ಅಧ್ಯಯನ ಪತ್ರಿಕೆ – 2
ವಿಷಯ: ವಿವಿಧ ಸಂಸ್ಥೆಗಳ ನಡುವೆ ಅಧಿಕಾರ ವಿಭಜನೆ, ಬಿಕ್ಕಟ್ಟು ನಿವಾರಣಾ ತಂತ್ರ ಮತ್ತು ಸಂಸ್ಥೆಗಳು
ನ್ಯಾಯಾಂಗದಿಂದ ಆರ್ಥಿಕತೆಯ ಮೇಲೆ ಯಾವುದೇ ರೀತಿಯ ಹೇಳಿಕೆ/ಆದೇಶಕ್ಕೆ ನಿರಾಕರಣೆ
ಸಮಸ್ಯೆ:
ಕೈಗಾರಿಕೆ, ರಿಯಲ್ ಎಸ್ಟೇಟ್, ಶಕ್ತಿ ವಲಯ ಮತ್ತು ಇತರರು ಸಾಲ ಮನ್ನ, ಬಡ್ಡಿ ಅಂತ್ಯ ಮುಂತಾದ ವಿಷಯಗಲ ಮೇಲೆಯಲ್ಲಿ ಸರ್ಕಾರವನ್ನು ನ್ಯಾಯಾಂಗ ಮೆಟ್ಟಿಲೆರುವಂತೆ ಮಾಡಿದ್ದವು.
- ಕೇಂದ್ರ ಸರ್ಕಾರ ಮೊರಟೊರಿಯಂ ಅವಧಿಯಲ್ಲಿ ಮಾಡಿದ ಎಲ್ಲ ವರ್ಗ ಮತ್ತು ವಲಯದಲ್ಲಿನ ಸಾಲಗಳ ಮೇಲಿನ ಬಡ್ಡಿ ಮನ್ನಾ ಕ್ರಮವು ಸುಮಾರು 6 ಲಕ್ಷ ಕೋಟಿಗಿಂತ ಅಧಿಕವೆಂದು ಅಂದಾಜಿಸಲಾಗಿದೆ.
ಸರ್ಕಾರದ ಕ್ರಮಗಳು
RBI ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಹಣಕಾಸು ಸಚಿವಾಲಯಗಳು ಸಕ್ರಿಯವಾಗಿ ಪ್ರತಿಕ್ರಿಯಿಸಿವೆ.
- ವಿದ್ಯುತ್ ವಿತರಣಾ ಕಂಪನಿಗಳಿಗೆ ಸರ್ಕಾರವು, 800 90,800 ಕೋಟಿಗಿಂತ ಹೆಚ್ಚಿನ ನಿಧಿಯನ್ನು ಮಂಜೂರು ಮಾಡಿತ್ತು. ಇದು ವಿದ್ಯುತ್ ಉತ್ಪಾದಕ ಮತ್ತು ಪ್ರಸರಣ ಕಂಪನಿಗಳಿಗೆ ತಮ್ಮ ಬಾಕಿ ಹಣವನ್ನು ಪಾವತಿಸಲು ಅನುವು ಮಾಡಿಕೊಡುತ್ತದೆ.
- ರಿಯಲ್ ಎಸ್ಟೇಟ್ ವಲಯದಲ್ಲಿ, COVID-19 ಅನ್ನು ‘ದೇವರ ಕಾರ್ಯ’ ಕ್ರಿಯೆಯೆಂದು ಪರಿಗಣಿಸುವ ಮೂಲಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಗಳ ಅಡಿಯಲ್ಲಿ ಯೋಜನೆಗಳ ನೋಂದಣಿ ಮತ್ತು ಪೂರ್ಣಗೊಳಿಸುವ ದಿನಾಂಕಗಳನ್ನು ವಿಸ್ತರಿಸಲಾಯಿತು.
- ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳ ವಲಯಕ್ಕೆ (MSME) ಸರ್ಕಾರವು 3 ಲಕ್ಷ ಕೋಟಿಗಳವರೆಗೆ ತುರ್ತು ಅನುದಾನವನ್ನು ಪ್ರಾರಂಭಿಸುವ ಮೂಲಕ ಪರಿಹಾರವನ್ನು ನೀಡಿತು. MSMEಗಳು ನಿಯಮಿತವಾಗಿ ಕಾರ್ಯಾಚರಣೆಯಲ್ಲಿರಲು ಸರ್ಕಾರದ 100% ಖಾತರಿಯನ್ನು ನೀಡಿದೆ. ಹಾಗಾಗಿ,₹ 1.87 ಲಕ್ಷ ಕೋಟಿ ಮಂಜೂರಾಗಿದೆ.
- ಕೇಂದ್ರೀಯ ಬ್ಯಾಂಕ್’ನ ಪರಿಶೀಲನಾ ಚೌಕಟ್ಟು ಸಾಲದ ಖಾತೆಗಳನ್ನು ಪ್ರಮಾಣಿತದಿಂದ ನಿಷ್ಕ್ರಿಯ ಸಂಪತ್ತಾಗಿ ರೂಪಾಂತರವಾಗುವ ಸಾಧ್ಯತೆಯನ್ನು ನಿವಾರಿಸಿ ಮತ್ತು ರೇಟಿಂಗ್ಗಳ ಮೇಲೆ ಪರಿಣಾಮ ಬೀರುವ ಬಗ್ಗೆ ಆತಂಕ ವ್ಯಕ್ತಪಡಿಸಿತು.
- SEBI ಮೊರಟೊರಿಯಂ ಸಮಯದಲ್ಲಿ ಮಾಡಿದ ಡೀಫಾಲ್ಟ್ಗಳನ್ನು ಸಡಿಲಿಸಲು ಸುತ್ತೋಲೆಯನ್ನು ಹೊರಡಿಸಿದೆ.
- ಕೇಂದ್ರೀಯ ಬ್ಯಾಂಕಿನ ಕಾಮತ್ ಸಮಿತಿಯು ಸಾಲದ ಪುನರ್ರಚನೆಗೆ ಕೋವಿಡ್-19ನಿಂದ ಪರಿಣಾಮಕ್ಕೊಳಗಾದ 26 ವಲಯಗಳಲ್ಲಿ ಸಾಲ ಪುನರ್ರಚನೆಗೆ ಹಣಕಾಸಿನ ನಿಯತಾಂಕಗಳನ್ನು ಶಿಫಾರಸು ಮಾಡಿದೆ.
Sources: the Hindu.
ವಿಷಯ: ಶಾಸನಾತ್ಮಕ, ನಿಯಂತ್ರಕ ಮತ್ತು ಇತರೆ ಅರೆ-ನ್ಯಾಯಿಕ ಸಂಸ್ಥೆಗಳು
ರಾಷ್ಟ್ರೀಯ ಕಂಪನಿ ಕಾನೂನು ಮೇಲ್ಮನವಿ ನ್ಯಾಯಾಧೀಕರಣ (NCLAT)
ಕಂಪನಿ ಕಾಯ್ದೆ (2013) ಅಡಿಯಲ್ಲಿ ಈ ನ್ಯಾಯಾಧೀಕರಣಗಳನ್ನು ರಚಿಸಲಾಗಿದೆ.
ಕಾರ್ಯಗಳು:
ಕೆಳಗಿನ ಸಂದರ್ಭದಲ್ಲಿ ಪ್ರಕರಣಗಳನ್ನು ವಿಚಾರಣೆಗೆ ತೆಗೆದುಕೊಳ್ಳುವುದು
- ದಿವಾಳಿ ಮತ್ತು ದಿವಾಳಿತನ ನೀತಿ ಕಾಯ್ದೆಯ (2016) ಸೆಕ್ಷೆನ್ 61 ಅಡಿಯಲ್ಲಿ NCLT
- ದಿವಾಳಿ ಮತ್ತು ದಿವಾಳಿತನ ನೀತಿಯ ಸೆಕ್ಷೆನ್ 202 ಮತ್ತು ಸೆಕ್ಷೆನ್ 211 ಅಡಿಯಲ್ಲಿ ಭಾರತೀಯ ದಿವಾಳಿ ಮತ್ತು ದಿವಾಳಿತನ ಮಂಡಳಿ
- ಭಾರತೀಯ ಸ್ಪರ್ಧಾತ್ಮಕ ಆಯೋಗದ (CCI) ತೀರ್ಪುಗಳ ಪರಿಶೀಲನೆ
ಸಂಯೋಜನೆ:
- ನ್ಯಾಯಾಧೀಕರಣದ ಸಭಾಧ್ಯಕ್ಷರು, ಮೇಲ್ಮನವಿ ನ್ಯಾಯಾಧೀಕರಣದ ನ್ಯಾಯಿಕ ಸದಸ್ಯರನ್ನು ರಾಷ್ಟ್ರಪತಿ ಭಾರತದ ಮುಖ್ಯ ನ್ಯಾಯಾಧೀಶರೊಂದಿಗೆ ಸಮಾಲೋಚಿಸಿ ನೇಮಿಸುವರು.
- ನ್ಯಾಯಾಧೀಕರಣದ ಸದಸ್ಯರನ್ನು ಮತ್ತು ತಾಂತ್ರಿಕ ಸದಸ್ಯರನ್ನು ಆಯ್ಕೆ ಸಮಿತಿಯ ಶಿಫಾರಸ್ಸಿನ ಮೇರೆಗೆ ನೇಮಕ ಮಾಡುವರು.
- ಭಾರತದ ಮುಖ್ಯ ನ್ಯಾಯಾಧೀಶರು (ಸಭಾಧ್ಯಕ್ಷರು)
- ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯಾಧೀಶರು ಅಥವಾ ಉಚ್ಚನ್ಯಾಯಾಲಯದ ಮುಖ್ಯ ನ್ಯಾಯಾಧೀಶರು – ಸದಸ್ಯರು
- ಔದ್ಯೋಗಿಕ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ – ಸದಸ್ಯರು
- ಕಾನೂನು ಮತ್ತು ನ್ಯಾಯ ಸಚಿವಾಲಯದ ಕಾರ್ಯದರ್ಶಿ – ಸದಸ್ಯರು
- ಹಣಕಾಸು ಸಚಿವಾಲಯದ ಹಣಕಾಸು ಸೇವಾ ಇಲಾಖೆಯ ಕಾರ್ಯದರ್ಶಿ – ಸದಸ್ಯರು
ಅರ್ಹತೆ:
- ಸಭಾಧ್ಯಕ್ಷ – ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರು ಅಥವಾ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾಗಿರಬೇಕು
- ನ್ಯಾಯಿಕ ಸದಸ್ಯರು – ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಅಥವಾ ಕನಿಷ್ಠ 5 ವರ್ಷಗಳವರೆಗೆ ನ್ಯಾಯಾಧೀಕರಣದ ಸದಸ್ಯರಾಗಿರಬೇಕು
- ತಾಂತ್ರಿಕ ಸದಸ್ಯರು – ನಿರ್ಧಿಷ್ಟ ವಲಯದಲ್ಲಿ ವ್ಯಕ್ತಿಯ ಸಾಮರ್ಥ್ಯ, ಸಮಗ್ರತೆಯ ನೆಲೆಯಲ್ಲಿ ವಿಶೇಷ ಜ್ಞಾನ ಮತ್ತು ಕನಿಷ್ಠ 25 ವರ್ಷಗಳ ಅನುಭವ
ಅವಧಿ :
ಸಭಾಧ್ಯಕ್ಷರು ಮತ್ತು ಸದಸ್ಯರ ಕಾರ್ಯಾವಧಿ 5 ವರ್ಷ ಮತ್ತು 5 ವರ್ಷಗಳ ಅವಧಿವರೆಗೆ ಮರು-ನೇಮಕ ಮಾಡಬಹುದಾಗಿದೆ
Sources: the Hindu.
ವಿಷಯ : ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು
ಎಲುರು ನಿಗೂಡ ಕಾಯಿಲೆ ಸೋಂಕಿತರ ರಕ್ತದ ಮಾದರಿಗಳನ್ನು AIIMS ನಿಂದ ಪರೀಕ್ಷೆ
ಸಂದರ್ಭ:
ಆಂಧ್ರ ಪ್ರದೇಶದ ಎಲುರು ನಗರದಲ್ಲಿ ಕನಿಷ್ಠ 550 ಜನ ಅನಾರೋಗ್ಯಕ್ಕೆ ಈಡಾಗಿದ್ದಾರೆ. ಇದರ ಹಿನ್ನೆಲೆಯಲ್ಲಿ ಅಖಿಲ ಭಾರತದ ವೈಧ್ಯಕೀಯ ವಿಜ್ಞಾನದ ಸಂಸ್ಥೆ ರಕ್ತ ಪರೀಕ್ಷೆಯನ್ನು ನಡೆಸಿದೆ.
ಇದಕ್ಕೆ ಕಾರಣ
- ಕುಡಿಯುವ ನೀರಿನಲ್ಲಿ ಅಥವಾ ಹಾಲಿನಲ್ಲಿ ಸೀಸ ಮತ್ತು ನಿಕ್ಕಲ್ ಅಂಶದ ಇರುವಿಕೆಯೇ ಜನತೆಯ ಅನಾರೋಗ್ಯಕ್ಕೆ ಮುಖ್ಯ ಕಾರಣವಾಗಿದೆ.
ರೋಗಿಗಳ ಲಕ್ಷಣಗಳು
ಅನೇಕ ಜನರಲ್ಲಿ ಉದ್ವೇಗ, ವಾಂತಿ, ತಲೆನೋವಿನ ಲಕ್ಷಣಗಳು ಗೋಚರವಾಗಿವೆ. ಆದರೆ ಇದುವರೆಗೆ ಒಬ್ಬರಿಂದೊಬ್ಬರಿಗೆ ಹರಡಿದ ಲಕ್ಷಣಗಲಿಲ್ಲ.
ಪ್ರಮುಖಾಂಶಗಳು
- ರಕ್ತದ ಮಾದರಿಯಲ್ಲಿ ರಾಸಾಯನಿಕಗಳ ಪ್ರಮಾಣ ಅತೀ ಕಡಿಮೆಯಿರುವುದರಿಂದ ರೋಗಿಗಳು ತ್ವರಿತವಾಗಿ ಚೇತರಿಕೆ ಕಾಣುವರು.
- ವಿಷಾಣುವಿನ ಪ್ರಮಾಣ ಅಧಿಕವಾಗಿದ್ದರೆ ಅಥವಾ ವಾಯುವಿನ ಮೂಲಕ ಹರಡಿದರೆ ಇದು ನರಗಳ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದು.
ಸೀಸ ಪ್ರಮಾಣದ ಏರಿಕೆಗೆ ಕಾರಣಗಳು
- ಸೀಸ-ಆಮ್ಲದ ಬ್ಯಾಟರಿಗಳ ಅನೌಪಚಾರಿಕವಾದ ಮರುಬಳಕೆ
- ವಾಹನಗಳ ಮಾರಾಟ ಅಧಿಕವಾಗಿದ್ದು, ಅದಕ್ಕೆ ಪೂರಕವಾಗಿ ವಾಹನಗಳ ಬ್ಯಾಟರಿ ಮರುಬಳಕೆಯ ನಿಯಮ ಮತ್ತು ಮೂಲಸೌಕರ್ಯದ ಕೊರತೆ
- ಬ್ಯಾಟರಿ ಮರುಬಳಕೆಯ ಕಾನೂನುಬಾಹಿರ ಪದ್ಧತಿಯಿಂದಾಗಿ ಆಮ್ಲ, ಸೀಸದ ಕಣಗಳು ಮಣ್ಣನ್ನು ಸೇರುವವು.
Sources: the Hindu.
ವಿಷಯ: ಅಭಿವೃದ್ಧಿಶೀಲ ಮತ್ತು ಅಭಿವೃದ್ಧಿತ ರಾಷ್ಟ್ರಗಳ ರಾಜಕೀಯ ಬೆಳವಣಿಗೆಗಳು ಮತ್ತು ನೀತಿಗಳಿಂದ ಭಾರತದ ಹಿತಾಸಕ್ತಿ, ಅನಿವಾಸಿ ಭಾರತೀಯರ ಮೇಲೆ ಉಂಟಾಗುವ ಪರಿಣಾಮ
ಪಾಕಿಸ್ತಾನ, ಚೀನಾದಿಂದ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ
ಸಂದರ್ಭ:
ಅಮೇರಿಕಾ ರಾಜ್ಯ ಇಲಾಖೆ ಅಂತರಾರಾಷ್ಟ್ರೀಯ ಧಾರ್ಮಿಕ ಸ್ವಾತ್ನತ್ರ್ಯ ಕಾಯ್ದೆ (IRFA) ಅಡಿಯಲ್ಲಿ ಅನೇಕ ರಾಷ್ಟ್ರಗಳನ್ನು ವಿವಿಧ ಪಟ್ಟಿಗಳಲ್ಲಿ ಇರಿಸಿದೆ.
ಮುಖ್ಯಾಂಶಗಳು:
- ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಮಾಡಿದ 8 ಪ್ರಮುಖ ದೇಶಗಳಲ್ಲಿ ಪಾಕಿಸ್ತಾನ ಮತ್ತು ಚೀನಾ ದೇಶಗಳು ಮುಖ್ಯವಾಗಿವೆ. ಮಯನ್ಮಾರ್, ಎರಿಟ್ರಿಯ, ಇರಾನ್, ನೈಜಿರಿಯ, ಉತ್ತರ ಕೊರಿಯ, ಸೌದಿ ಅರೇಬಿಯಾ, ತಜಿಕಿಸ್ತಾನ ಮತ್ತು ತುರ್ಕ್ಮೇನಿಸ್ತಾನ ಉಳಿದ ರಾಷ್ಟ್ರಗಳಾಗಿವೆ.
- ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಗೆ ಸಹಿಷ್ಣತಾಭಾವವನ್ನು ತೋರಿದ್ದ ಕೋಮರೋಸ್, ಕ್ಯೂಬಾ, ನಿಕಾರಗೊವಾ ಮತ್ತು ರಷ್ಯಾದ ಸರ್ಕಾರಗಳನ್ನು ವಿಶೇಷ ಗಮನಿಕ ಪಟ್ಟಿಗೆ ಸೇರಿಸಲಾಗಿದೆ.
- ಅಲ್-ಶಾಬಾದ್, ಆಲ್-ಖೈದಾ, ಬೊಕೊ ಹರಾಮ್, ತಾಹಿರ್ ಅಲ್-ಶಾಮ್, ಹೌತಿಯರು, ISIS ತಾಲಿಬಾನ್ ಮುಂತಾದವುಗಳನ್ನು ನಿರ್ಧಿಷ್ಟ ಸಮಸ್ಯೆಯ ಘಟಕಗಳು (CPCs) ಎನ್ನಲಾಗಿದೆ.
- ಆದರೆ, USCIRF ಶಿಫಾರಸ್ಸಿನಂತೆ ಭಾರತ, ರಷ್ಯಾ, ಸಿರಿಯಾ ಮತ್ತು ವಿಯಾಟ್ನಾಂ ದೇಶಗಳನ್ನು CPCs ಎಂದು ನಿರ್ದೇಶಿಸಲು ರಾಜ್ಯ ಇಲಾಖೆ ನಿರಾಕರಿಸಿರುವುದು ಗಮನಿಸಬೇಕಾದ ಅಂಶವಾಗಿದೆ.
ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಅಮೇರಿಕಾದ ಆಯೋಗ (USCIRF)
- 1988 ರಲ್ಲಿ ಅಮೇರಿಕಾ ಒಕ್ಕೂಟ ಸರ್ಕಾರದ ಆಯೋಗದಿಂದ ಸ್ಥಾಪಿತವಾದ ಈ ಸ್ವತಂತ್ರ ಸಂಸ್ಥೆಯು ಧಾರ್ಮಿಕ ಸ್ವಾತಂತ್ರ್ಯ ಮತ್ತು ವಿಶ್ವಾಸದ ಸಾರ್ವತ್ರಿಕ ಹಕ್ಕುಗಳನ್ನು ನಿರ್ವಹಿಸುವುದು
- ಇದು ಜಾಗತಿಕವಾಗಿ ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯನ್ನು ನಿಯಂತ್ರಿಸಲು ಅಂತರಾರಾಷ್ಟ್ರೀಯ ಮಾಪಕಗಳನ್ನು ರಚಿಸುವುದು.
- ಮಾನವ ಹಕ್ಕುಗಳ ಮೇಲಿನ ಸಾರ್ವತ್ರಿಕ ಘೋಷಣೆಯು ಪ್ರತಿಯೊಬ್ಬರಿಗೂ ಆಲೋಚನೆ, ಆತ್ಮಸಾಕ್ಷಿ, ಮತ್ತು ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ನೀಡಿದೆ. ಇದು ಮತಾಂತರದ ಸ್ವಾತಂತ್ರ್ಯ, ಧಾರ್ಮಿಕ ಆಚರಣೆಯ ಸ್ವಾತಂತ್ರ್ಯ ಮುಂತಾದವನ್ನು ಒಳಗೊಂಡಿದೆ.
Sources: the Hindu.
ಸಾಮಾನ್ಯ ಅಧ್ಯಯನ ಪತ್ರಿಕೆ – 3
ವಿಷಯ : ಜಾಗತೀಕರಣದಿಂದ ಆರ್ಥಿಕತೆ ಮತ್ತು ಕೈಗಾರಿಕೆಯ ಬೆಳವಣಿಗೆಯ ಮೇಲಾದ ಪರಿಣಾಮಗಳು, ಕೈಗಾರಿಕಾ ನೀತಿಯಯಲ್ಲಾದ ಬದಲಾವಣೆಗಳು
ಭಾರತದಲ್ಲಿ ತಯಾರಿಸಿ’ ನೀತಿಯಿಂದಾಗಿ ಜೀವ ವಾಹಕ ಔಷಧಿಯ ಪೂರೈಕೆಗೆ ಧಕ್ಕೆ
ಸಂದರ್ಭ:
ಭಾರತದಾಚೆ ತಯಾರಾದ ನಿರ್ದಿಷ್ಟ ವೈಧ್ಯಕೀಯ ಸಲಕರಣೆಗಳನ್ನು (ಮುಖ್ಯವಾಗಿ ಕೋವಿಡ್-19 ಮತ್ತು ಕ್ಯಾನ್ಸರ್) ನಿರ್ಬಂಧಿಸಲು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರದ ಉತ್ತೇಜನಾ ಇಲಾಖೆಗೆ ರೈಲ್ವೆ ಸಚಿವಾಲಯ ಸೂಚಿಸಿದೆ.
ಇಲ್ಲಿಯ ಸಮಸ್ಯೆ
ಅನುಷ್ಠಾನಗೊಂಡಿರುವ ‘ಭಾರತದಲ್ಲಿ ತಯಾರಿಸಿ‘ ನೀತಿಯಲ್ಲಿ ಸ್ಥಳೀಯತೆಯ ಸರಕಿನ ನಿಬಂಧನೆಯನ್ನು ವರ್ಗ-I ವರ್ಗ –II ವಿಸ್ತರಿಸಿಲ್ಲ
ಈ ವರ್ಗದ ಪೂರೈಕೆದಾರರು ಸರ್ವ ಸರಕು ಮತ್ತು ಸೇವೆಗಳ ವಹಿವಾಟು 200 ಕೋಟಿಗಿಂತ ಕಡಿಮೆಯಿದ್ದರೆ ಅರ್ಹರಾಗಬೇಕು.
ಇದರ ಪರಿಣಾಮ
ಭಾರತದ ಮಾರುಕಟ್ಟೆಯಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಲಭ್ಯವಿರುವ ಕೆಲವು ನಿರ್ದಿಷ್ಟ ಔಷಧಗಳು ಭಾರತದಾಚೆ ನಿರ್ಮಾಣವಾಗಿವೆ. ಇವುಗಳು ಸರ್ಕಾರದ ನಿಬಂಧನೆಗಳಿಗೆ ಅನುಗುಣವಾಗಿಲ್ಲ.
ಭಾರತದಲ್ಲಿ ತಯಾರಿಸಿ ಅಭಿಯಾನ
ಈ ಅಭಿಯಾನವನ್ನು ಭಾರತ ಸರ್ಕಾರವು 2014 ರಲ್ಲಿ ಪ್ರಾರಂಭಿಸಿತು. ಭಾರತದಲ್ಲಿ ತಯಾರಿಕ ವಲಯವನ್ನು ಉತ್ತೇಜಿಸುವುದು, ಸೇವೆ ಮತ್ತು ಸರಕಿನ ತಯಾರಿಕೆಯಲ್ಲಿ ಹೂಡಿಕೆಯನ್ನು ವೃದ್ಧಿಸಿ ಆರ್ಥಿಕತೆಯನ್ನು ಸಂವರ್ಧಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಗುರಿಗಳು :
- ಆರ್ಥಿಕತೆಯಲ್ಲಿ ತಯಾರಿಕಾ ವಲಯದ ಬೆಳವಣಿಗೆಯ ದರವನ್ನು 12-14% ನಷ್ಟು ವಾರ್ಷಿಕವಾಗಿ ವೃದ್ಧಿಸುವುದು.
- 2022 ರ ವೇಳೆಗೆ ಆರ್ಥಿಕತೆಯಲ್ಲಿ ತಯಾರಿಕ ವಲಯದ ಮೂಲಕ 100 ಮಿಲಿಯನ್ ಉದ್ಯೋಗಗಳನ್ನು ನಿರ್ಮಿಸುವುದು
- ಜಿಡಿಪಿಯಲ್ಲಿ ಈಗಿನ 15-16% ನಷ್ಟಿರುವ ತಯಾರಿಕ ವಲಯದ ಕೊಡುಗೆಯನ್ನು 2022 ರ ವೇಳೆಗೆ 25%ಗೆ ವೃದ್ಧಿಸುವುದು
ಇದುವರೆಗಿನ ಫಲಿತಾಂಶ
- 2013-14 ರಿಂದ 2015-16 ವರೆಗೆ 20 ಮಿಲಿಯನ್ ಡಾಲರ್’ನಷ್ಟು ವಿದೇಶಿ ಹೂಡಿಕೆ ಏರಿಕೆಯಾಗಿದ್ದರು ಭಾರತೀಯ ಕೈಗಾರಿಕೀಕರಣದ ಮೇಲೆ ನಿರೀಕ್ಷಿತ ಕೊಡುಗೆ ನೀಡಿಲ್ಲ
- ತಯಾರಿಕ ವಲಯದಲ್ಲಿ ನೇರ ಹೊಡಿಕೆ ಮೊದಲಿಗಿಂತಲೂ ಕುಂಟಿತವಾಗಿದೆ. (2014-15 – 9.6 ಬಿಲಿಯನ್ ಡಾಲರ್, 2017-18 – 7 ಬಿಲಿಯನ್ ಡಾಲರ್)
- ಸೇವಾ ವಲಯದಲ್ಲಿ ನೇರ ಹೂಡಿಕೆಯ ಪ್ರಮಾಣ ತಯಾರಿಕಾ ವಲಯಕ್ಕಿಂತ ಮೂರು ಪಟ್ಟು ಅಧಿಕವಾಗಿದೆ. ಇದು ಭಾರತೀಯ ಸಾಂಪ್ರದಾಯಿಕ ಆರ್ಥಿಕತೆಯಲ್ಲಿ ಕಂಪ್ಯೂಟರ್ ಸೇವೆಗಳ ಅಭಿವೃದ್ಧಿಯನ್ನು ನಿದರ್ಶಿಸುತ್ತದೆ.
- ಜಾಗತಿಕವಾಗಿ ತಯಾರಿಕ ವಲಯದ ಉತ್ಪನ್ನಗಳಲ್ಲಿ ಭಾರತದ ಭಾಗ ಶೇ2 ಇದ್ದರೆ, ಚೀನಾದ ಭಾಗ ಶೇ18 ಇದೆ.
Sources: the Hindu.
ವಿಷಯ : ಸಂವಹನ ಜಾಲ, ಮಾಧ್ಯಮ ಮತ್ತು ಸಾಮಾಜಿಕ ಜಾಲ ತಾಣಗಳು ಆಂತರಿಕ ಭದ್ರತೆಗೆ ಒಡ್ಡುವ ಸವಾಲುಗಳು; ಸೈಬರ್ ಭದ್ರತೆಯ ಮೂಲಾಂಶಗಳು
ಮಕ್ಕಳ ಅಶ್ಲಿಲತೆಯನ್ನು ನಿಯಂತ್ರಿಸಲು ಮಹಾರಾಷ್ಟ್ರ ಪೋಲಿಸರಿಂದ ಕ್ರಮ
ಸಂದರ್ಭ:
ಇಂಟರ್ಪೋಲ್’ನಿಂದ ಪಡೆದ ತಂತ್ರಾಂಶದಿಂದ ಮಹಾರಾಷ್ಟ್ರ ಪೋಲಿಸಿನ ಸೈಬರ್ ವಿಭಾಗ ಅಂತರ್ಜಾಲದಲ್ಲಿ ಮಕ್ಕಳ ಅಶ್ಲೀಲತೆಯನ್ನು ನಿಯಂತ್ರಿಸಲು ಮುಂದಾಗಿದೆ.
ತಂತ್ರಾಂಶದ ಕುರಿತು
- ತಂತ್ರಾಂಶವು ನಗ್ನತೆಯ ಚಿತ್ರಗಳ ಗುರುತಿಸುವಿಕೆ, ಮುಖದ ರಚನೆಯ ನೆಲೆಯಲ್ಲಿ ವಯಸ್ಸಿನ ಗುರುತಿಸುವಿಕೆ ಮುಂತಾದ ಕ್ರಮಗಳನ್ನು ಅಳವಡಿಸಿದೆ.
- ಇದು ಅಲ್ಗೋರಿದಂ (Algorithms)ಗಳ ಮೂಲಕ ಮಕ್ಕಳ ಅಶ್ಲೀಲತೆ ಕುರಿತ ಪದಗಳನ್ನು ಗುರುತಿಸಲು ಕಾನೂನು ಅನುಷ್ಟಾನದ ಸಂಸ್ಥೆಗಳಿಗೆ ಪೂರಕವಾಗಿದೆ
- ಇದರಲ್ಲಿನ ಕೆಲವು ತಂತ್ರಗಳ ಮೂಲಕ ಸಂಸ್ಥೆಗಳು ಅಶ್ಲೀಲತೆಗೆ ಸಂಬಂಧಿಸಿದ ಚಿತ್ರ, ಪದ, ಕಿರು ಚಿತ್ರಗಳನ್ನು ಪರಿಶೀಲಿಸುತ್ತದೆ.
ಮಹಾರಾಷ್ಟ್ರದ TRACE ತಂಡ
- ದಕ್ಷಿಣ ಏಷ್ಯಾದ ಇಂಟರ್ಪೋಲ್ ವಿಭಾಗ ರಾಜ್ಯದ 12 ಅಧಿಕಾರಿಗಳಿಗೆ ತರಬೇತಿ ನೀಡಲು ಮುಂದಾಗಿದೆ. ಇವರು TRACE ಘಟಕದ ಮೂಲಾಂಶವಾಗಿದೆ.
- ಇದು 2019 ರಿಂದ ದೇಶಾದ್ಯಂತ ಜಾರಿಗೆಯಾದ ‘ಮಕ್ಕಳ ಲೈಂಗಿಕ ದೌರ್ಜನ್ಯ ಯೋಜನೆ’ಯ (Child Sexual Abuse Material – CSAM) ಭಾಗವಾಗಿದೆ.
CSAMಗೆ ಉತ್ತೇಜನ ದೊರೆಯಲು ಕಾರಣ
- ಅಮೇರಿಕಾ ಮೂಲದ ಸರ್ಕಾರೇತರ ಸಂಸ್ಥೆ ಶೋಷಿತ ಮತ್ತು ಕಾಣೆಯಾದ ಮಕ್ಕಳ ರಾಷ್ಟ್ರೀಯ ಕೇಂದ್ರವು (NCMEC) ಉತ್ತಮ ಅಂಶಗಳನ್ನು ಭಾರತೀಯ ಸಂಸ್ಥೆಗಳಿಗೆ ಸಮಾಲೋಚನೆ ನಡೆಸಿದ್ದರಿಂದ 2019 ರಲ್ಲಿ ಮಕ್ಕಳ ಅಶ್ಲೀಲತೆ ಮತ್ತು ಶೋಷಣೆಯನ್ನು ನಿಯಂತ್ರಿಸುವ ಅಭಿಯಾನಕ್ಕೆ ವೇದಿಕೆ ನಿರ್ಮಾಣವಾಯಿತು.
- ‘ಅಪರಾಧ ದಾಖಲೆಗಳ ರಾಷ್ಟ್ರೀಯ ಮಂಡಳಿ’ಯಿಂದ ರಾಜ್ಯಗಳು ಮಕ್ಕಳ ಅಶ್ಲೀಲತೆಗೆ ಸಂಬಂಧಿಸಿದ ಪ್ರಕರಣಗಳ ಮೇಲೆ ಸಲಹೆಗಳನ್ನು ಪಡೆದಿದ್ದಾರೆ
Sources: Indian Express.
ಪೂರ್ವಭಾವಿ ಪರೀಕ್ಷಾ ಕೇಂದ್ರಿತ
ಚೀನಾದ ಟೈರ್ ಕಾರ್ಖಾನೆಯಿಂದ ಶ್ರೀಲಂಕಾಕ್ಕೆ $300 ಮಿಲಿಯನ್
ಶ್ರೀಲಂಕಾದ ಆಯಾಕಟ್ಟಿನ ಬಂದರು ವಲಯದಲ್ಲಿ ಚೀನಾ $300 ಮಿಲಿಯನ್ ಹೂಡಿಕೆಯ ಮೂಲಕ ಟೈರ್ ಕಾರ್ಖಾನೆಯನ್ನು ಪ್ರಾರಂಭಿಸಲು ಮುಂದಾಗಿದೆ. ಇದು ಹಂಬಂಟೋಟ ಬಂದರಿಗೆ ಪಕ್ಕದಲ್ಲಿದೆ. ಶ್ರೀಲಂಕಾ 1.4 ಮಿಲಿಯನ್ ಡಾಲರ್ ಸಾಲವನ್ನು ಮರುಪಾವತಿಸಲು ವಿಫಲವಾದುದರಿಂದ ಈ ಬಂದರನ್ನು ಚೀನಾ ಕಂಪನಿಗೆ 2017 ರಿಂದ ಗುತ್ತಿಗೆ ನೀಡಲಾಗಿದೆ.
ಹಿನ್ನೆಲೆ :
Belt & Road ಮೂಲಸೌಕರ್ಯ ಅಭಿಯಾನದ ಮೂಲಕ ಚೀನಾ ವಿಶ್ವದಾದ್ಯಂತ ತನ್ನ ಪ್ರಭಾವವನ್ನು ಬೀರಲು ಮುಂದಾಗಿರುವುದು ಪಾಶ್ಚಾತ್ಯ ರಾಷ್ಟ್ರಗಳಿಗೆ ಮತ್ತು ಪ್ರಾದೇಶಿಕ ವಲಯದಲ್ಲಿ ಸಮಸ್ಯೆಯನ್ನು ಉಂಟುಮಾಡಿದೆ.
ಉತರ ಐರ್ಲಾಂಡಿನ ಪ್ರೋಟೋಕೋಲ್ (Northern Ireland protocol)
- ಬ್ರೆಕ್ಸಿಟ್ ನಂತರ ಉತ್ತರ ಐರ್ಲೆಂಡ್’ನ 310 ಮೈಲಿ ಗಡಿ ಭಾಗವು ಯುಕೆ ಮತ್ತು ಯುರೋಪಿಯನ್ ಒಕ್ಕೂಟಗಳ ನಡುವೆ ಇರುವ ಏಕ ಮಾತ್ರ ಭೂಭಾಗವಾಗಿದೆ.
- ಜನೇವರಿ 1 ರಿಂದ ಯುಕೆ- ಯುರೋಪಿಯನ್ ಒಕ್ಕೂಟದ ನವ ಸಂಬಂಧ ಪ್ರಾರಂಭವಾಗಲಿದ್ದು ಸರಕುಗಳನ್ನು ಐರಿಷ್ ಗಡಿಯಲ್ಲಿ ಪರಿಶೀಲನೆಗೊಳಪಡಿಸದೆ ವಹಿವಾಟಿಗೆ ಸಹಕರಿಸಬೇಕೆಂದು ‘ಉತ್ತರ ಐರ್ಲೆಂಡ್ ಪ್ರೋಟೋಕೋಲ್’ ನಲ್ಲಿ ಅನುಮೋದಿಸಲಾಗಿದೆ.
ಜನಸಂಖ್ಯೆ ಮತ್ತು ಅಭಿವೃದ್ಧಿಯಲ್ಲಿ ಭಾಗಿತ್ವ (PPD)
ಸಂದರ್ಭ:
ಜನಸಂಖ್ಯೆ ಮತ್ತು ಅಭಿವೃದ್ಧಿಯಲ್ಲಿ ಭಾಗಿತ್ವವು ಅಂತರ್-ಸಚಿವಾಲಯದ ಸಮಾವೇಶವಾಗಿದೆ. ಇತ್ತೀಚಿಗೆ ನಡೆದ ಈ ಸಮಾವೇಶದಲ್ಲಿ ಭಾರತ ಭಾಗವಹಿಸಿತ್ತು.
PPD ಕುರಿತು:
- ಇದು ಆರೋಗ್ಯ, ಜನಸಂಖ್ಯೆ, ಅಭಿವೃದ್ಧಿ ಮುಂತಾದ ಸಾಮಾಜಿಕ ವಲಯದಲ್ಲಿ ದಕ್ಷಿಣ-ದಕ್ಷಿಣ ಸಹಕಾರವನ್ನು ಉತ್ತೇಜಿಸುವ ಅಂತರ್-ಸರ್ಕಾರಿಯ ಸಂಸ್ಥೆಯಾಗಿದೆ.
- ಬಾಂಗ್ಲಾದೇಶದ ಢಾಕಾದಲ್ಲಿ ಇದರ ಕಾರ್ಯಾಲಯವಿದೆ.
- ಪ್ರಸ್ತುತ 26 ಅಭಿವೃದ್ಧಿಶೀಲ ರಾಷ್ಟ್ರಗಳು ಸದಸ್ಯತ್ವ ಪಡೆದಿದ್ದು, ಜಾಗತಿಕವಾಗಿ 59% ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ.
- ಜನಸಂಖ್ಯೆ ಮತ್ತು ಅಭಿವೃದ್ಧಿ ಮೇಲಿನ ಅಂತರರಾಷ್ಟ್ರೀಯ ಸಮಾವೇಶ (1994) ದಲ್ಲಿ ಜಾರಿಗೆ ತರಲಾಯಿತು. ಇದು ಏಷಿಯಾ, ಆಫ್ರೀಕಾ, ಲ್ಯಾಟಿನ್ ಅಮೇರಿಕಾದ 10 ಅಭಿವೃದ್ಧಿಶೀಲ ರಾಷ್ಟ್ರಗಳ ಸರಕಾರಗಳ ಮೈತ್ರಿಯಾಗಿದ್ದು ಕೈರೋ ಕ್ರಿಯಾ ಯೋಜನೆಯ (POA) ಅನುಷ್ಠಾನಕ್ಕೆ ಪೂರಕವಾಗಿದೆ.
- ಇದನ್ನು 179 ರಾಷ್ಟ್ರಗಳು ಅಂಗೀಕರಿಸಿದ್ದು, ಸಂತಾನೋತ್ಪತ್ತಿ ಆರೋಗ್ಯ, ಕುಟುಂಬ ಯೋಜನೆ ಮುಂತಾದವುಗಳಲ್ಲಿನ ಉತ್ತಮ ಕ್ರಮಗಳ ಹಂಚಿಕೆಯ ಮೂಲಕ ಅಭಿವೃದ್ಧಿಗೆ ಗಮನ ನೀಡಲಾಗುವುದು. ಇದು ಸರ್ಕಾರ, NGOs, ಸಂಶೋಧನಾ ಸಂಸ್ಥೆಗಳು ಮತ್ತು ಖಾಸಗಿ ವಲಯದ ಪರಿಣಾಮಕಾರಿ ಭಾಗಿತ್ವಕ್ಕೆ ಪ್ರೇರಕವಾಗಿದೆ.