Join Our official Telegram Channel for Important Tips and Guidance: https://t.me/insightsIAStips
ಸಾಮಾನ್ಯ ಅಧ್ಯಯನ – 1
ವಿಷಯ : GS-1: ಭಾರತೀಯ ಸಮಾಜದ ವೈಲಕ್ಷಣಗಳು, ಭಾರತದ ವೈವಿಧ್ಯತೆ..
GS-2: ವಿವಿಧ ವಲಯಗಳಲ್ಲಿ ಸರ್ಕಾರದ ನೀತಿಗಳು ಮತ್ತು ಅಭಿವೃದ್ಧಿಯ ಕ್ರಮಗಳು ಹಾಗೂ ಅನುಷ್ಟಾನದಿಂದಾಗುವ ಸಮಸ್ಯೆಗಳು.
1. What is “Love Jihad”? critically analyse the issues associated with the law against love jihad. (250 words)
1. ‘ಲವ್ ಜಿಹಾದ್’ ಎಂದರೇನು? ಪ್ರೀತಿ ಜಿಹಾದ್ ವಿರುದ್ಧದ ಕಾನೂನಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತು ವಿಮರ್ಶಾತ್ಮಕವಾಗಿ ಅವಲೋಕಿಸಿ. (250 ಪದಗಳು)
Reference: The Print
ಪ್ರಶ್ನೆಯ ಹಿನ್ನೆಲೆ:
ಇತ್ತೀಚಿಗೆ ಉತ್ತರ ಪ್ರದೇಶ ಸರ್ಕಾರ ಲವ್ ಜಿಹಾದ್ ವಿರುದ್ದದ ಸುಗ್ರೀವಾಜ್ಞೆ ಹೊರಡಿಸಿತು. ಇದು ಮಹಿಳೆಯರ ಹಕ್ಕುಗಳನ್ನು ಮುನ್ನೆಲೆ ಬರುವಂತೆ ಮಾಡಿ ಮದುವೆಯ ವಿಶೇಷ ಕಾಯ್ದೆಯ ಅಗತ್ಯತೆಯನ್ನು ಸಾರಿದೆ.
ಪ್ರಶ್ನೆಯ ಆಶಯ
ಲವ್ ಜಿಹಾದ್ ಕುರಿತ ಕಾನೂನು ಮತ್ತು ಭಾರತೀಯ ಸಮಾಜದೊಂದಿಗಿನ ಅದರ ಸಂಬಂಧ
ಉತ್ತರದ ರಚನೆ
ಪೀಠಿಕೆ:
ಉತ್ತರ ಪ್ರದೇಶದ ಪ್ರಕರಣ ಕುರಿತು ಬರೆಯಿರಿ. ಇದರ ಹಿನ್ನೆಲೆ ಕುರಿತು ಸಂಕ್ಷಿಪ್ತವಾಗಿ ವಿವರಿಸಿ.
ಮುಖ್ಯಭಾಗ:
ಈ ವಿವಾದ ಕುರಿತು ಸಂಪೂರ್ಣವಾಗಿ ಚರ್ಚಿಸಿ. ಉತ್ತರ ಪ್ರದೇಶದ ಶಾಸಕಾಂಗದಲ್ಲಿ ಇದು ಸದ್ದು ಮಾಡಲು ಕಾರಣವೇನು ಮತ್ತು ಇದು ಎದುರಿಸುತ್ತಿರುವ ಟೀಕೆ ಕುರಿತು ಬರೆಯಿರಿ.
- ಕಾನೂನು ಪಿತೃಪ್ರಧಾನತೆ ಮತ್ತು ಕೊಮುವಾದಗಳ ವಿಷಮ ಸಮ್ಮಿಶ್ರವಾಗಿದೆ
- ಅಂತರ್ಜಾತಿ ಅಥವಾ ಅಂತರ್ಧರ್ಮಿಯ ವಿವಾಹ ಮತ್ತು ಸಂಬಂಧಗಳ ವಿರುದ್ಧ ಅವಹೇಳನವನ್ನು ಅಧಿಕೃತಗೊಳಿಸುವುದು.
- ಮದುವೆಯ ಹೆಸರಿನಲ್ಲಿ ಹಿಂದೂ ಮಹಿತೆಯರನ್ನು ಮುಸ್ಲಿಂ ಯುವಕರು ಮತಾಂತರಗೊಳಿಸುತ್ತಿರುವರು. ಇದು ಹಿಂದೂ ಮಹಿಳೆಯರಿಗೆ ಅಪಾಯಕಾರಿಯಾಗಿದೆ ಎನ್ನುವ ನಿಲುವು ಕುರಿತು ಬರೆಯಿರಿ.
ಈ ಪರಿಕಲ್ಪನೆಯಲ್ಲಿನ ನ್ಯೂನ್ಯತೆಗಳನ್ನು ವಿವರಿಸಿ.
- ಲವ್ ಜಿಹಾದ್ ಕುರಿತ ಕಾನೂನಾತ್ಮಕ ಬದ್ಧತೆ
- ಕಾನೂನೇತರ ಪರಿಕಲ್ಪನೆ ಕುರಿತು ಕಾನೂನಿನ ನಿರ್ವಾತ
- ಧಾರ್ಮಿಕ ಮತಾಂತರ ಮತ್ತು ವಿವಾಹ ಕುರಿತು ಶಾಸಕಾಂಗದ ಅತಿರೇಖತೆ
ಈ ವಿಷಯದ ಕುರಿತು ನ್ಯಾಯಾಂಗದ ಅಭಿಪ್ರಾಯವನ್ನು ಚರ್ಚಿಸಿ.
ಉಪಸಂಹಾರ:
ಧಾರ್ಮಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಹಕ್ಕುಗಳ ಅಗತ್ಯತೆ ಕುರಿತು ಬರೆಯಿರಿ.
ವಿಷಯ: ಜನಸಂಖ್ಯೆ ಮತ್ತು ಸಂಬಂಧಿತ ಸಮಸ್ಯೆಗಳು; ಬಡತನ ಮತ್ತು ಅಭಿವೃದ್ಧಿ ಸಮಸ್ಯೆಗಳು; ನಗರೀಕರಣದ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು
2. “To make cities women-friendly, urban planners must focus on two core issues —greater safety from violence and adequate childcare support.” comment. (250 words)
2. “ನಗರಗಳನ್ನು ಸ್ತ್ರೀ ಸ್ನೇಹಿಯಾಗಿಸಲು ನಗರೀಕರಣದ ಯೋಜನಾಕಾರರು ದೌರ್ಜನ್ಯ ವಿರುದ್ದದ ರಕ್ಷಣೆ ಮತ್ತು ಮಕ್ಕಳ ಆರೈಕೆ ಸೌಲಭ್ಯ ಕುರಿತು ಗಮನ ಹರಿಸಬೇಕು”. ಅವಲೋಕಿಸಿ ಟಿಪ್ಪಣಿ ಬರೆಯಿರಿ (250 ಪದಗಳು)
Reference: Hindustan Times
ಪ್ರಶ್ನೆಯ ಹಿನ್ನೆಲೆ
ಜಾಗತೀಕರಣಗೊಂಡ ವಿಶ್ವ ಸಮಾನತೆಯ ಯುಗದತ್ತ ನಡೆಯುತ್ತಿದೆ. ಈ ಯುಗದಲ್ಲಿ ಮಹಿಳೆಯರಿಗೆ ಪೂರಕವಾಗಿ ನರಗಳ ರಚನೆ ಅಗತ್ಯವಾಗಿದೆ.
ಪ್ರಶ್ನೆಯ ಆಶಯ
ನಗರಗಳು ಸ್ತ್ರೀ ಸ್ನೇಹಿಯಾಗಿಸುವ ಅಗತ್ಯತೆಯನ್ನು ಕುರಿತು ಬರೆಯಿರಿ. ಇದನ್ನು ಸಾಧಿಸಲು ನಗರೀಕರಣದ ಪಾತ್ರವನ್ನು ಚರ್ಚಿಸಿ.
ಉತ್ತರದ ರಚನೆ
ಪೀಠಿಕೆ:
Start with statistics and data that show – Urban planning in India does not factor in gender perspectives. The 2019 Safe City Index, prepared by the Economist Intelligence Unit, ranks Mumbai and Delhi as one of the worst cities where women’s safety is concerned.
- ಅಂಕಿಅಂಶಗಳ ಮೂಲಕ ಭಾರತದಲ್ಲಿ ನಗರ ಯೋಜನೆ ಲಿಂಗಾಧಾರಿತದ ಕೊರತೆಯನ್ನು ಹೊಂದಿದೆ ಎಂದು ಧೃಡೀಕರಿಸಿ.
Economist Intelligence Unit ಹೊರ ತರುವ ನಗರ ಭದ್ರತಾ ಸೂಚ್ಯಾಂಕದಲ್ಲಿ ಮುಂಬೈ ಮತ್ತು ದೆಹಲಿಗಳು ಮಹಿಳಾ ಸುರಕ್ಷೆ ಕುರಿತು ಕಳಪೆ ಪ್ರದರ್ಶನ ತೋರಿವೆ.
ಮುಖ್ಯಭಾಗ:
ಮಹಿಳೆಯರ ಸಮಸ್ಯೆಗಳನ್ನು ಎದುರಿಸಲು ನಗರಗಳನ್ನು ಮರುರಚನೆಗೊಳಪಡಿಸಬೇಕಾದ ಅಗತ್ಯತೆಯನ್ನು ವಿವರಿಸಿ
- ಮಹಿಳಾ ಕಾರ್ಮಿಕ ಬಲದ ವೃದ್ಧಿ
- ಕುಟುಂಬ ಮೇಲ್ವಿಚಾರಣೆಯ ಸುಗಮತೆ
- ಸಮಯದ ಉಳಿತಾಯ ಮತ್ತು ಮಿತವ್ಯಯ
ನಗರವನ್ನು ಮಹಿಳಾ ಸ್ನೇಹಿಯಾಗಿಸಲು ಕ್ರಮಗಳನ್ನು ಬರೆಯಿರಿ. ಮುಖ್ಯವಾಗಿ ದೌರ್ಜನ್ಯ ನಿಯಂತ್ರಣ ಮತ್ತು ಮಕ್ಕಳ ಆರೈಕೆ ಸೌಲಭ್ಯ ಕುರಿತು ಚರ್ಚಿಸಿ.
- ಬೀದಿ ದೀಪಗಳ ಉನ್ನತೀಕರಣ
- ಸುರಕ್ಷಿತ ಶೌಚಾಲಯಗಳು
- ಪ್ರತ್ಯೇಕ ವಾಣಿಜ್ಯ ಮತ್ತು ವಾಣಿಜ್ಯೇತರ ವಲಯಗಳ ರಚನೆ
- ಸಮರ್ಪಕ ಸಾರಿಗೆ ಸೌಲಭ್ಯ
- ಸಮುದಾಯ ಪ್ರೇರಿತ ಗುಸ್ತುಗಾರಿಕೆ
- ತಂತ್ರಜ್ಞಾನದ ಅಳವಡಿಕೆ
- ಸ್ಮಾರ್ಟ್ ಜನತೆಯ ಮೂಲಕ ಸ್ಮಾರ್ಟ್ ಸಿಟಿ ನಿರ್ಮಾಣ
ಉದಾಹರಣೆ/ಪ್ರಕರಣಗಳನ್ನು ಬಳಸಿ
ಉಪಸಂಹಾರ:
ನೈತಿಕ ಕ್ರಮಗಳ ಮೂಲಕ ಮಹಿಳಾ ಸ್ನೇಹಿ ವ್ಯವಸ್ಥೆಯ ಮಹತ್ವವನ್ನು ಬರೆಯಿರಿ.
ಸಾಮಾನ್ಯ ಅಧ್ಯಯನ – 3
ವಿಷಯ : ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು, ದೇಶಿಯ ತಂತ್ರಜ್ಞಾನ, ನವ ತಂತ್ರಜ್ಞಾನದ ಅಭಿವೃದ್ಧಿ.
3. What are desalination plants and what is their feasibility? Discuss their application in addressing Indian water woes.(250 words)
3. ನಿರ್ಲವಣೀಕರಣದ ಘಟಕಗಳೆಂದರೇನು? ಅವುಗಳ ಕಾರ್ಯಸಾಧ್ಯತೆ ಕುರಿತು ಬರೆಯಿರಿ. ಭಾರತದ ನೀರಿನ ಸಮಸ್ಯೆ ನಿವಾರಿಸುವಲ್ಲಿ ಈ ಘಟಕಗಳ ಅಳವಡಿಕೆ ಕುರಿತು ಚರ್ಚಿಸಿ. (250 ಪದಗಳು)
Reference: The Print
ಪ್ರಶ್ನೆಯ ಆಶಯ:
ಭಾರತದ ನೀರಿನ ಸಮಸ್ಯೆ ನಿವಾರಿಸುವ ಅನ್ಯ ಕ್ರಮಗಳ ಅಧ್ಯಯನ ಮತ್ತು ಆ ಕ್ರಮಗಳ ಕಾರ್ಯಸಾಧ್ಯತೆ
ಉತ್ತರದ ರಚನೆ
ಪೀಠಿಕೆ:
ವಿಶ್ವದಾದ್ಯಂತ ನಿರ್ಲವಣೀಕರಣವನ್ನು ನೀರಿನ ಕೊರತೆಗೆ ಒಂದು ಪರಿಹಾರವೆನ್ನಲಾಗಿದೆ. ಇತ್ತೀಚಿಗೆ ಮಹಾರಾಷ್ಟ್ರ ಸರ್ಕಾರ ಮುಂಬೈ ನಗರದ ನೀರಿನ ಬೇಡಿಕೆಯನ್ನು ಪೂರೈಸಲು ನಿರ್ಲವಣೀಕರಣದ ಘಟಕಗಳನ್ನು ಸ್ಥಾಪಿಸಿತು. ಆ ಮೂಲಕ ಈ ಪ್ರಯೋಗಕ್ಕೆ ಮನ್ನಣೆ ನೀಡಿದ ಭಾರತದ 4ನೇ ರಾಜ್ಯವಾಗಿದೆ
ಮುಖ್ಯಭಾಗ:
ನಿರ್ಲವಣೀಕರಣ ಪ್ರಕ್ರಿಯೆಯ ಕಾರ್ಯ ವೈಖರಿಯ ಕುರಿತು ಚರ್ಚಿಸಿ.
ಭಾರತವನ್ನು ಕೇಂದ್ರವಾಗಿಸಿ ಇದರ ಅಳವಡಿಕೆಯ ಕುರಿತು ಬರೆಯಿರಿ. ಜೊತೆಗೆ ಅದರ ಸಾಧಕ ಮತ್ತು ಭಾದಕಗಳ ಕುರಿತು ಬರೆಯಿರಿ.
ಉಪಸಂಹಾರ :
ಈ ರೀತಿಯ ತಂತ್ರಜ್ಞಾನಗಳ ಮಹತ್ವ ಕುರಿತು ಬರೆಯಿರಿ
ವಿಷಯ: GS-2: ಭಾರತದ ಹಿತಾಸಕ್ತಿಗೆ ಪ್ರಭಾವ ಬೀರುವ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಸಂಘಗಳು ಮತ್ತು ಒಪ್ಪಂದಗಳು
GS-3: ಭಾರತದ ಆರ್ಥಿಕತೆ, ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ, ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಸಮಸ್ಯೆಗಳು.
4. As per the figures presented by the Reserve Bank of India recently, India is in an economic recession for the first time in its independent history. In this context discuss the need for India to shed its exaggerated fears of trade agreements to create new jobs. (250 words)
4. RBI ಇತ್ತೀಚಿನ ವರದಿಯ ಅಂಕಿಅಂಶಗಳ ಪ್ರಕಾರ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಭಾರತ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದರ ಹಿನ್ನೆಲೆಯಲ್ಲಿ ಭಾರತವು ಹೊಸ ಉದ್ಯೋಗಗಳ ಸೃಷ್ಟಿಗೆ ವ್ಯಾಪಾರ ಒಪ್ಪಂದಗಳ ಬಗೆಗಿನ ಉತ್ಪ್ರೇಕ್ಷಿತ ಭಯವನ್ನು ನಿಯಂತ್ರಿಸುವ ಅಗತ್ಯವನ್ನು ಚರ್ಚಿಸಿ. (250 ಪದಗಳು)
Reference: The Hindu
ಪ್ರಶ್ನೆಯ ಹಿನ್ನೆಲೆ
RBI ಇತ್ತೀಚಿನ ವರದಿಯ ಅಂಕಿಅಂಶಗಳ ಪ್ರಕಾರ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಭಾರತ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ
ಪ್ರಶ್ನೆಯ ಆಶಯ
ಉದ್ಯೋಗ ಸೃಷ್ಟಿಯಲ್ಲಿ ವಿದೇಶಿ ಒಪ್ಪಂದಗಳ ಮಹತ್ವ ಮತ್ತು ಆರ್ಥಿಕತೆಯ ಮೇಲೆ ಜಾಗತೀಕರಣದ ಪರಿಣಾಮ
ಉತ್ತರದ ರಚನೆ
ಪೀಠಿಕೆ:
ದೇಶದಲ್ಲಿನ ಉದ್ಯೋಗ, ರಫ್ತು ಮತ್ತು ವ್ಯಾಪಾರ ಒಪ್ಪಂದಗಳಿಗೆ ಸಂಬಧಿಸಿದ ಸಮಸ್ಯೆಗಳ ಕುರಿತು ಸಂಕ್ಷಿಪ್ತವಾಗಿ ಬರೆಯಿರಿ.
ಮುಖ್ಯಭಾಗ:
Jobs are the first casualty during a recession. Thousands of people lost their jobs due to the slowing economy in 2018-19 and 2019-20. Unemployment had reached a 45-year high. More than 2 crore people lost their jobs and incomes during the lockdown.
ಆರ್ಥಿಕ ಬಿಕ್ಕಟ್ಟಿನಿಂದ ಪರಿಣಾಮಕ್ಕೊಳಗಾಗುವ ವ್ಯವಸ್ಥೆಯ ಭಾಗ – ಉದ್ಯೋಗ. – ಆರ್ಥಿಕ ಕುಸಿತದಿಂದ ನಿರುದ್ಯೋಗ ಭಾರತದಲ್ಲಿ ಐತಿಹಾಸಿಕವಾಗಿ ಅಧಿಕವಾಗಿದೆ. ಇತ್ತೀಚಿಗಿನ ಲಾಕ್-ಡೌನ್ ಕ್ರಮಗಳಿಂದ 2 ಕೋಟಿಗೂ ಅಧಿಕ ಜನ ಉದ್ಯೋಗ ಕಳೆದುಕೊಂಡು ಆದಾಯ ರಹಿತವಾಗಿದ್ದಾರೆ.
‘ಭಾರತದಲ್ಲಿ ತಯಾರಿಸಿ’ ಅಭಿಯಾನದ ನಂತರವೂ, ಕಳೆದ 6 ವರ್ಷಗಳಲ್ಲಿ ರಫ್ತಿನ ಪ್ರಮಾಣ ಕುಸಿತ ಕಂಡಿದೆ. ಭಾರತದ ವಿದೇಶಿ ವ್ಯಾಪಾರ ನೀತಿ ಸಂಪೂರ್ಣವಾಗಿ ತಿರುವು ಕಂಡಿದೆ. ಇದಕ್ಕೆ
- ಅಧಿಕ ತೆರಿಗೆ
- ತೆರಿಗೆಯೇತರ ನಿರ್ಬಂಧಗಳು
- ಪ್ರಮಾಣಾತ್ಮಕ ಮಿತಿಗಳು
- ಗಡಿ ರಾಷ್ಟ್ರಗಳ ನಿಯಂತ್ರಕಗಳು
- ವ್ಯಾಪಾರ ಒಪ್ಪಂದಗಳು
- ಹಣದುಬ್ಬರದ ಕುಸಿತ ಮುಂತಾದವು ಕಾರಣಗಳಾಗಿವೆ.
ರಫ್ತು ಸಾಮಾನ್ಯವಾಗಿ ವ್ಯಾಪಾರ ಒಪ್ಪಂದಗಳೊಂದಿಗೆ ಬಹುತೇಕ ನೇರ ಸಂಬಂಧವನ್ನು ಹೊಂದಿದೆ. ಹಾಗಾಗಿ, ವ್ಯಾಪಾರ ಒಪ್ಪಂದಗಳ ಕುರಿತು ಬರೆಯಿರಿ.
- ಮುಕ್ತ ವ್ಯಾಪಾರ ನೀತಿ
- ದ್ವಿಪಕ್ಷೀಯ ವ್ಯಾಪಾರ ನೀತಿ
- ಇತರೆ ನೀತಿಗಳು
ಆರ್ಥಿಕತೆಯ ಸಮತೋಲನತೆಗೆ ಸೂಕ್ತ ಕ್ರಮಗಳನ್ನು ಬರೆಯಿರಿ
ಉಪಸಂಹಾರ:
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒಪ್ಪಂದ, ಒಡಂಬಡಿಕೆ, ಸಂಧಾನ ನೀತಿಗಳು ‘ಉಳಿವಿಗಾಗಿ ಹೋರಾಟ ನಡೆಸುವ ಮಾರ್ಗಗಳು’. ಭಾರತ ‘ಜ್ನಾನೋದಯಿತ ರಾಷ್ಟ್ರೀಯ ಹಿತಾಸಕ್ತಿ” ಎಂಬ ಕೌಟಿಲ್ಯನ ನೀತಿಯನ್ನು ವಿದೇಶಿ ವ್ಯವಹಾರಗಳಲ್ಲಿ ಅಳವಡಿಸಬೇಕಾಗಿದೆ.
ವಿಷಯ: GS-2: ಆರೋಗ್ಯ, ಶಿಕ್ಷಣ, ಮಾನವ ಸಂಪನ್ಮೂಲಗಳಿಗೆ ಸಂಬಂಧಿಸಿದ ಸಾಮಾಜಿಕ ವಲಯಗಳ ನಿರ್ವಹಣೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಸಮಸ್ಯೆಗಳು
GS-3: ಭಾರತದ ಆರ್ಥಿಕತೆ, ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ, ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಸಮಸ್ಯೆಗಳು.
5. With recently introduced labour reforms aimed at changing industrial relations, trade unions must include operative social dialogue to get their grievances redressed. Elaborate. (250 words)
5. ಇತ್ತೀಚಿಗೆ ಜಾರಿಗೆಯಾದ ಕಾರ್ಮಿಕ ಸುಧಾರಣೆಗಳು ಕೈಗಾರಿಕಾ ವಲಯ, ಕಾರ್ಮಿಕ ಸಂಘಗಳೊಂದಿಗಿನ ಸಂಬಂಧವನ್ನು ರೂಪಾಂತರಿಸಿ ಕಾರ್ಮಿಕರ ಕೊಂದುಕೊರತೆಗಳನ್ನು ಪರಿಹರಿಸಲು ಪೂರಕವಾದ ಪರಿಸರ ನಿರ್ಮಿಸಬೇಕು. ಉದಾಹರಣೆ ಸಹಿತ ವಿವರಿಸಿ. (250 ಪದಗಳು)
Reference: The HIndu
ಪ್ರಶ್ನೆಯ ಹಿನ್ನೆಲೆ
10 ಕೇಂದ್ರೀಯ ಕಾರ್ಮಿಕ ಸಂಘಗಳು ಇತ್ತೀಚಿಗೆ ರಾಷ್ಟ್ರಾಧ್ಯಂತ ಬಂದ್’ಗೆ ಕರೆ ನೀಡಿವೆ. ಇದಕ್ಕೆ ಸರ್ಕಾರದ ನೀತಿಗಳು ಜನ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಎನ್ನುವುದು ಮುಖ್ಯ ಕಾರಣವಾಗಿದೆ.
ಪ್ರಶ್ನೆಯ ಆಶಯ
ಆರ್ಥಿಕತೆಯಲ್ಲಿ ಕಾರ್ಮಿಕ ಸಂಘ ಮತ್ತು ಕಾನೂನುಗಳ ಸರಳೀಕರಣದ ಅಗತ್ಯತೆ
ಉತ್ತರದ ರಚನೆ
ಪೀಠಿಕೆ:
ಕಾರ್ಮಿಕ ಸಂಘ ಮತ್ತು ಕಾನೂನುಗಳನ್ನು ಸಂಕ್ಷಿಪ್ತವಾಗಿ ವಿವರಿಸಿ.
ಮುಖ್ಯಭಾಗ:
1991ರ ಆರ್ಥಿಕ ಸುಧಾರಣೆಗಳ ನಂತರ ಉದ್ಯೋಗದಾತರು ಮತ್ತು ಜಾಗತಿಕ ಆರ್ಥಿಕ ಸಂಸ್ಥೆಗಳು ಕಾರ್ಮಿಕ ಮಾರುಕಟ್ಟೆಯೊಂದಿಗೆ ಸಹಸಂಬಂಧವನ್ನು ಹೊಂದಿವೆ.
ಇತ್ತೀಚಿಗೆ ಜಾರಿಗೆಯಾದ ಕಾರ್ಮಿಕ ಕಾನೂನು ಕುರಿತು ಬರೆಯಿರಿ. ಈ ಕಾನೂನುಗಳಲ್ಲಿನ ನ್ಯೂನ್ಯತೆಗಳನ್ನು ಕುರಿತು ಬರೆಯಿರಿ.
- ಕಾನೂನುಗಳ ಸಂಕೀರ್ಣತೆ
- ಹೂಡಿಕೆ ಕೊರತೆ
- ಜಾಗತಿಕ ಬೆಳೆವಣಿಗೆಗಳು
ಕೋವಿಡ್-19 ಮತ್ತು ಕಾರ್ಮಿಕ ವಲಸೆಯ ಪರಿಣಾಮ ಕುರಿತು ಚರ್ಚಿಸಿ. ಕಾರ್ಮಿಕ ಸಂಘಗಳಿಗಿರುವ ಅನ್ಯ ಮಾರ್ಗಗಳ ಕುರಿತು ಬರೆಯಿರಿ.
ಉಪಸಂಹಾರ
ಕಾನೂನಿನ ಸರಳೀಕರಣ ಮತ್ತು ಆಧುನೀಕರಣ ಕುರಿತು ಬರೆಯಿರಿ.
ಸಾಮಾನ್ಯ ಅಧ್ಯಯನ – 4
ವಿಷಯ: ನೈತಿಕತೆ ಮತ್ತು ಮಾನವ ಹಸ್ತಕ್ಷೇಪ – ಮಾನವನ ಚಟುವಟಿಕೆಯಲ್ಲಿ ನೈತಿಕತೆಯ ಪಾತ್ರ, ಸಾರ, ನಿರ್ಧಾರಕಗಳು ಮತ್ತು ಪರಿಣಾಮಗಳು; ನೈತಿಕತೆಯ ಆಯಾಮಗಳು, ಖಾಸಗಿ ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ನೈತಿಕತೆ
6. India’s democracy, as envisaged by the makers of the constitution, thrived essentially because of the respect of the leaders for the ethical constitutionalism and moral activism of the grassroots activists. Do you agree? Comment. (250 words)
6. ಭಾರತದ ಪ್ರಜಾಪ್ರಭುತ್ವ ಸಂವಿಧಾನದ ನಿರ್ಮಾತೃಗಳು ಆಶಿಸಿದ ನೈತಿಕ ಸಂವಿಧಾನಿಯತೆ ಮತ್ತು ನೀತಿಯತೆಯ ಕ್ರಿಯಾಶೀಲತೆಗಳ ತಳಹದಿಯ ಮೇಲೆ ರೂಪಗೊಂಡಿದೆ. ನಿಮ್ಮ ಅನಿಸಿಕೆಯನ್ನು ವಿವರಿಸಿ. (250 ಪದಗಳು)
Reference: Indian Express
ಪ್ರಶ್ನೆಯ ಹಿನ್ನೆಲೆ
ಚುನಾಹಿತರು ಪ್ರಜಾಪ್ರಭುತ್ವದ ಸಾಧನಗಳಾದ ನ್ಯಾಯಾಂಗ, ಮಾಧ್ಯಮ ಮತ್ತು ನಾಗರೀಕ ಸಂಸ್ಥೆಗಳನ್ನು ರಕ್ಷಿಸಬೇಕು.
ಪ್ರಶ್ನೆಯ ಆಶಯ
ಭಾರತೀಯ ಪ್ರಜಾಪ್ರಭುತ್ವದಲ್ಲಿ ನೈತಿಕ ಸಾಂವಿಧಾನಿಕತೆ ಮತ್ತು ನೀತಿಯತೆಯ ಕ್ರಿಯಾಶೀಲತೆಯ ಪ್ರಾಮುಖ್ಯತೆ
ಉತ್ತರದ ರಚನೆ
ಪೀಠಿಕೆ:
ಪ್ರಶ್ನೆಯ ಹಿನ್ನೆಲೆಯನ್ನು ಸಂಕ್ಷಿಪ್ತವಾಗಿ ವಿವರಿಸಿ.
ಮುಖ್ಯಭಾಗ:
- ನೈತಿಕ ಸಂವಿಧಾನಿಕವಾದ ಮತ್ತು ನೀತಿಯತೆಯ ಕ್ರಿಯಾಶೀಲತೆಯನ್ನು ವ್ಯಾಖ್ಯಾನಿಸಿ. ಅವುಗಳ ಪ್ರಾಮುಖ್ಯತೆಯನ್ನು ಚರ್ಚಿಸಿ.
- ಮೇಲಿನ ಸಿದ್ಧಾಂತಗಳಲ್ಲಿನ ವಿಶ್ವಾಸ ನೈತಿಕ ಪ್ರಜಾಪ್ರಭುತ್ವದ ಆಲೋಚನೆಗೆ ಬುನಾದಿಯಾಗಿವೆ ಎನ್ನುವುದನ್ನು ವಿವರಿಸಿ.
- ಅಂಕಣದ ನೆಲೆಯಲ್ಲಿ ಗಾಂಧೀ, ಅರಿಸ್ಟಾಟಲ್, ಅಂಬೇಡ್ಕರ್ ಮುಂತಾದ ನಾಯಕರ ಮತ್ತು ವಿದ್ವಾಂಸರ ಅಭಿಪ್ರಾಯವನ್ನು ವಿವರಿಸಿ
- ನೈತಿಕ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ವಿವರಿಸಿ ಮತ್ತು ಅದರ ಸಾಧಕಗಳನ್ನು ಬರೆಯಿರಿ.
ಉಪಸಂಹಾರ :
ಪ್ರಜಾಪ್ರಭುತ್ವದ ಯಶಸ್ವಿಯತೆಗೆ ಭಿನ್ನ ದೃಷ್ಟಿಕೋನಗಳು ಅಗತ್ಯ. ಭಾರತೀಯ ಸಂವಿಧಾನ ನಿರ್ಮಾತೃಗಳ ದೃಷ್ಟಿಕೋನಗಳು ಮತ್ತು ಸ್ವಾತಂತ್ರ್ಯ ಸಂಗ್ರಾಮದ ಮೂಲ ಮೌಲ್ಯಗಳು ಇಂದಿಗೂ ವ್ಯವ್ಯಸ್ಥೆಯ ಮೂಲರಚನೆಗಳಾಗಿವೆ.
ವಿಷಯ: ಸಂವೇಗಾತ್ಮಕ ಬುದ್ಧಿಶಕ್ತಿ : ಪರಿಕಲ್ಪನೆ ಮತ್ತು ಉಪಯುಕ್ತತೆ; ಆಡಳಿತ ಪ್ರಕ್ರಿಯೆಯಲ್ಲಿ ಅಳವಡಿಕೆ
7. “What really matters for success, character, happiness and life-long achievements is a definite set of emotional skills— not just purely cognitive abilities.” — Daniel Goleman. Elucidate. (250 words)
7. ಯಶಸ್ವಿಯತೆಗೆ ಭೌದ್ಧಿಕ ಸಾಮರ್ಥ್ಯಕ್ಕಿಂತ ಸ್ವಭಾವ, ಸೌಖ್ಯತೆ ಮತ್ತು ಭಾವನಾತ್ಮಕ ಕೌಶಲ್ಯಗಳು ಬಹು ಮುಖ್ಯವಾಗಿವೆ ಎಂಬುದನ್ನು ಸೋದಾಹರಣವಾಗಿ ವಿವರಿಸಿ.(250 ಪದಗಳು)
Reference: Ethics, Integrity and Aptitude by Lexicon Publications
ಪ್ರಶ್ನೆಯ ಆಶಯ :
ಸಂವೇಗಾತ್ಮಕ ಬುದ್ಧಿಶಕ್ತಿ ಮತ್ತು ಭಾವನಾತ್ಮಕ ಕೌಶಲ್ಯದ ಪ್ರಾಮುಖ್ಯತೆ
ಉತ್ತರದ ರಚನೆ:
ಪೀಠಿಕೆ:
ಭೌದ್ಧಿಕ ಸಾಮರ್ಥ್ಯ ಕುರಿತು ಸಂಕ್ಷಿಪ್ತವಾಗಿ ವಿವರಿಸಿ. ಭೌದ್ಧಿಕ ಸಾಮರ್ಥ್ಯವು ವ್ಯಕ್ತಿಯಲ್ಲಿ ಜನ್ಮಜಾತವಾಗಿ ಮಿಳಿತಗೊಂಡ ಸಾಮರ್ಥ್ಯವಾಗಿದೆ. ಕೆಲವರು ಭೌದ್ಧಿಕ ಸಾಮರ್ಥ್ಯದ ಕೊರತೆಯಿಂದಾಗಿ ಗಣಿತದಲ್ಲಿ ವಿಫಲರಾಗುವರು. ಈ ರೀತಿಯ ಭೌದ್ಧಿಕ ಸಾಮರ್ಥ್ಯವು ವೃತ್ತಿ ಜೀವನದ ಯಶಸ್ವಿಯತೆ, ಲಾಭದಾಯಕತೆಗೆ ಮುಖ್ಯವಾಗಿದೆ.
ಮುಖ್ಯಭಾಗ:
ಭಾವನಾತ್ಮಕ ಕೌಶಲ್ಯಗಳೆಂದರೇನು ಮತ್ತು ದೀರ್ಘಾವಧಿಯಲ್ಲಿ ಯಶಸ್ವಿ, ಅಧಮ್ಯ ಮೌಲ್ಯವ್ಯವಸ್ಥೆಯ ಅಗತ್ಯತೆಯನ್ನು ವಿವರಿಸಿ.
ಭಾವನಾತ್ಮಕ ಸೂಚ್ಯಂಕ ಅಥವಾ ವ್ಯಕ್ತಿಯ ಸಂವೇಗಾತ್ಮಕ ಬುದ್ಧಿಶಕ್ತಿಯು ಭಾವನಾತ್ಮಕ ಕೌಶಲ್ಯವಾಗಿದೆ. ಜೀವನದಲ್ಲಿ ದೀರ್ಘಾವಧಿ ಯಶಸ್ವಿಯತೆಗಾಗಿ ಭೌದ್ಧಿಕ ಸಾಮರ್ಥ್ಯದಷ್ಟೇ ಮುಖ್ಯವಾದುದು ವ್ಯಕ್ತಿಯ ಅಧಮ್ಯ ಮೌಲ್ಯ ವ್ಯವಸ್ಥೆಯಾಗಿದೆ.
ಉಪಸಂಹಾರ:
ಸಂಶೋಧನೆಯ ಪ್ರಕಾರ ಒಂದು ಕಾರ್ಯದ ಯಶಸ್ವಿಯತೆಯ ಶೇ 20ರಷ್ಟು ಅಂಶ ಭೌದ್ಧಿಕ ಸಾಮರ್ಥ್ಯವನ್ನು ಮತ್ತು 80ರಷ್ಟು ಭಾಗ ಸಂವೇಗಾತ್ಮಕ ಬುದ್ದಿಶಕ್ತಿಯನ್ನು ಅವಲಂಭಿಸಿದೆ.