Join Our official Telegram Channel for Important Tips and Guidance: https://t.me/insightsIAStips
ಸಾಮಾನ್ಯ ಅಧ್ಯಯನ – 1
ವಿಷಯ: ಭಾರತೀಯ ಸಮಾಜದ ವೈಲಕ್ಷಣಗಳು, ಭಾರತದ ವೈವಿಧ್ಯತೆ. ಮಹಿಳೆಯರು ಮತ್ತು ಮಹಿಳಾ ಸಂಘಗಳ ಪಾತ್ರ
1. What is Germany’s new boardroom quota for women? Can it be viewed as the next step in narrowing the gap of sexual inequality in the country? Explain. (250 words)
1. ಜರ್ಮನಿಯ ನವ ಮಂಡಳಿಯಲ್ಲಿ ಮಹಿಳೆಯರ ಕೋಟಾ ಎಂದರೇನು? ಇದನ್ನು ದೇಶದಲ್ಲಿನ ಲಿಂಗ ಅಸಮಾನತೆಯ ಕಂದರವನ್ನು ಮಿತಗೊಳಿಸುವ ಮುಂದಿನ ಹೆಜ್ಜೆಯಾಗಿ ನೋಡಬಹುದೇ? (250 ಪದಗಳು)
Reference: Indian Express
ಪ್ರಶ್ನೆಯ ಹಿನ್ನೆಲೆ:
ಕಂಪನಿಗಳ ಮಂಡಳಿಯಲ್ಲಿ ಮಹಿಳಾ ಕೋಟ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲು ಜರ್ಮನಿಯ ಸಮ್ಮಿಶ್ರ ಸರ್ಕಾರ ಉಮ್ಮತ ಸೂಚಿಸಿದೆ. ಇದನ್ನು ಯೂರೋಪಿನ ಬೃಹತ್ ಆರ್ಥಿಕತೆಯಲ್ಲಿ ಒಂದು ಮೈಲುಗಲ್ಲನ್ನು ನಿರ್ಮಿಸಿದ ಹೆಜ್ಜೆ ಎನ್ನಲಾಗಿದೆ.
ಪ್ರಶ್ನೆಯ ಆಶಯ:
ಜರ್ಮನಿ ಕಂಪನಿಗಳ ನವ ಮಂಡಳಿಯಲ್ಲಿ ಮಹಿಳೆಯರ ಕೋಟಾ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಚರ್ಚಿಸಿ. ದೇಶದಲ್ಲಿರುವ ಲಿಂಗ ತಾರತಮ್ಯದ ಕಂದರವನ್ನು ಮಿತಗೊಳಿಸುವ ಹೆಜ್ಜೆಯಾಗಿ ಹೇಗೆ ಗ್ರಹಿಸಬೇಕು ವಿವರಿಸಿ.
ಉತ್ತರದ ರಚನೆ:
ಪೀಠಿಕೆ:
ಜರ್ಮನಿ ಸರ್ಕಾರದ ಈ ನಡೆ ಕುರಿತು ಸಂಕ್ಷಿಪ್ತವಾಗಿ ಬರೆಯಿರಿ. ದೇಶದ ಕಂಪನಿಗಳಲ್ಲಿ ಉನ್ನತ ಸ್ಥಾನದ ನಿರ್ವಹಣೆಯಲ್ಲಿ ಮಹಿಳಾ ಕೋಟ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲು ಜರ್ಮನಿಯ ಸರ್ಕಾರ ಮುಂದಾಗಿದೆ.
ಮುಖ್ಯ ಭಾಗ:
ಜರ್ಮನಿಯ ಸರ್ಕಾರ ಜಾರಿಗೆ ತಂದ ಈ ಯೋಜನೆಯನ್ನು ಮೊದಲು ವಿವರಿಸಿ.
2015ರಿಂದ ಯೂರೋಪಿನ ದೊಡ್ಡ ಆರ್ಥಿಕತೆಯಾದ ಜರ್ಮನಿ ಕಂಪನಿಯ ಸಲಹಾ ಮಂಡಳಿಯಲ್ಲಿ ಸ್ವಯಂ ಪ್ರೇರಿತವಾಗಿ ಶೇ 30 ಮಹಿಳೆಯರ ಕೋಟಾ ವ್ಯವಸ್ಥೆ ಇತ್ತು.
ವಿಶ್ವದಾದ್ಯಂತ ಮಹಿಳಾ ಕೋಟಾ/ಮೀಸಲಾತಿ ಕುರಿತ ಅಂಕಿಅಂಶಗಳನ್ನು ಬರೆಯಿರಿ.ಭಾರತದ ಆಯಾಮದೊಂದಿಗೆ ಈ ನೀತಿಯ ಅಳವಡಿಕೆಯ ಅಗತ್ಯತೆಯನ್ನು ಚರ್ಚಿಸಿ.
ಉನ್ನತ ಹುದ್ದೆಯಲ್ಲಿ ಮಹಿಳಾ ಸ್ಥಾನದ ಏರಿಕೆಗೆ ಹೇಗೆ ಪೂರಕವಾಗಿದೆ. ಚರ್ಚಿಸಿ
ಉಪಸಂಹಾರ:
ಮಹಿಳಾ ಕೋಟಾ ಅಥವಾ ಮೀಸಲಾತಿಯ ಪ್ರಾಮುಖ್ಯತೆಯೊಂದಿಗೆ ಅಂತ್ಯಗೊಳಿಸಿ.
ಸಾಮಾನ್ಯ ಅಧ್ಯಯನ – 2
ವಿಷಯ: ಭಾರತದ ಹಿತಾಸಕ್ತಿಗೆ ಪ್ರಭಾವ ಬೀರುವ ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಸಂಘಗಳು ಮತ್ತು ಒಪ್ಪಂದಗಳು
2. There is a view that India must discard the outdated perception and seize the new strategic partnerships in the Gulf region. Elucidate. (250 words)
2. ಭಾರತವು ಗಲ್ಫ್ ವಲಯದಲ್ಲಿ ನವ ಒಪ್ಪಂದಗಳನ್ನು ಮೊಟಕುಗೊಳಿಸಬೇಕು ಮತ್ತು ಪ್ರಸ್ತುತತೆಯನ್ನು ಕಳೆದುಕೊಂಡ ಒಡಂಬಡಿಕೆಗಳನ್ನು ನಿರಚನೆಗೊಳಪಡಿಸಬೇಕು ಎಂಬ ಅಭಿಪ್ರಾಯವಿದೆ. ವಿವರಿಸಿ. (250 ಪದಗಳು)
Reference: Indian Express
ಪ್ರಶ್ನೆಯ ಆಶಯ :
ಗಲ್ಫ್ ವಲಯದಲ್ಲಿ ಭಾರತದ ನವ ಒಡಂಬಡಿಕೆ/ಒಪ್ಪಂದಗಳ ಪ್ರಾಮುಖ್ಯತೆ.
ಉತ್ತರದ ರಚನೆ:
ಪೀಠಿಕೆ:
ಗಲ್ಫ್ ರಾಷ್ಟ್ರಗಳಲ್ಲಿ ಭಾರತದ ಸಂಬಂಧವನ್ನು ಕುರಿತು ಸಂಕ್ಷಿಪ್ತವಾಗಿ ಬರೆಯಿರಿ.
ಮುಖ್ಯ ಭಾಗ:
ವಿದೇಶಾಂಗ ಸಚಿವ ಜೈಶಂಕರ್ ಬಹರೈನ್ ಮತ್ತು ಯು.ಎ.ಇಗೆ ಇತ್ತೀಚಿಗೆ ಭೇಟಿ ನೀಡಿದರು. ಗಲ್ಫ್ ವಲಯದಲ್ಲಿನ ರಾಚನಿಕ ಬದಲಾವಣೆ ಮತ್ತು ಹಿಂದೂ ಮಹಾಸಾಗರದ ಮೇಲೆ ಪ್ರಭಾವ ಬೀರಲು ಇದು ಸದಾವಕಾಷವಾಗಿದೆ
ಗಲ್ಫ್ ವಲಯದಲ್ಲಿನ ಸಮಸ್ಯೆಗಳನ್ನು ಪರಿಚಯಿಸಿ.
ಗಲ್ಫ್ ವಲಯದೊಂದಿಗೆ ಭಾರತದ ಸಂಬಂಧ ಕುರಿತ ಸಾಧ್ಯತೆಯನ್ನು ವಿವರಿಸಿ.
ಉಪಸಂಹಾರ:
ಮುಂದಿನ ಕ್ರಮಗಳನ್ನು ಕುರಿತು ಬರೆಯಿರಿ
ಸಾಮಾನ್ಯ ಅಧ್ಯಯನ – 3
ವಿಷಯ : ಭಾರತದ ಆರ್ಥಿಕತೆ, ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ, ಬೆಳವಣಿಗೆ, ಅಭಿವೃದ್ಧಿ ಮತ್ತು ಉದ್ಯೋಗಗಳಿಗೆ ಸಂಬಂಧಿಸಿದ ಸಮಸ್ಯೆಗಳು
3. RBI has recently recommended giving banking licenses to corporate houses as a part of banking reforms. In this context, critically analyse allowing corporates in Indian banking system. (250 words)
3. ಬ್ಯಾಂಕಿಂಗ್ ಸುಧಾರಣೆಯ ಭಾಗವಾಗಿ ಕಾರ್ಪೋರೆಟ್ ವಲಯಕ್ಕೆ ಬ್ಯಾಂಕಿಂಗ್ ಪರವಾನಗಿ ನೀಡಲು RBI ಮುಂದಾಗಿದೆ. ಇದರ ಹಿನ್ನೆಲೆಯಲ್ಲಿ, ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಕಾರ್ಪೋರೆಟ್’ಗಳ ಪ್ರವೇಶವನ್ನು ವಿಮರ್ಶಾತ್ಮಕವಾಗಿ ಅವಲೋಕಿಸಿ. (250 ಪದಗಳು)
Reference: Economic Times
ಪ್ರಶ್ನೆಯ ಹಿನ್ನೆಲೆ:
ಔದ್ಯೋಗಿಕ ವಲಯ ಬ್ಯಾಂಕಿಂಗ್ ಕ್ಷೇತ್ರವನ್ನು ಪ್ರವೇಶಿಸುವ ಕುರಿತು RBI ತನ್ನ ಇಂಕಿತವನ್ನು ಅಭಿವ್ಯಕ್ತಪಡಿಸಿತ್ತು. ರಘುರಾಮ್ ರಂಜನ್ RBI ನ ಈ ನಡೆಗೆ ವಿರೋದತೆಯನ್ನು ವ್ಯಕ್ತಪಡಿಸಿದ್ದಾರೆ.
ಪ್ರಶ್ನೆಯ ಆಶಯ:
ವ್ಯವಸ್ಥೆಯಲ್ಲಿ ಬ್ಯಾಂಕಿಂಗ್ ವಲಯ ಮತ್ತು ಔದ್ಯೋಗಿಕ ವಲಯದ ಅಂತರ್ಸಂಬಂಧ.
ಉತ್ತರದ ರಚನೆ :
ಪೀಠಿಕೆ
ಪ್ರಶ್ನೆಯ ಹಿನ್ನೆಲೆಯನ್ನು ಬರೆಯಿರಿ. ಆರ್ಥಿಕತೆಯಲ್ಲಿ ಔದ್ಯೋಗಿಕ (ಕಾರ್ಪೋರೆಟ್) ವಲಯದ ಪಾತ್ರವೇನು?
ಮುಖ್ಯಭಾಗ:
RBI ತೆಗೆದುಕೊಂಡ ಈ ಕ್ರಮದ ಹಿನ್ನಲೆಯನ್ನು ವಿವರವಾಗಿ ಚರ್ಚಿಸಿ.
ಬ್ಯಾಕಿಂಗ್ ವಲಯದ ಖಾಸಗೀಕರಣದ ಸಾಧಕ-ಬಾಧಕಗಳನ್ನು ಪಟ್ಟಿ ಮಾಡಿ. ಈ ಕ್ರಮದಲ್ಲಿ ಮಿಳಿತವಾಗಿರುವ ಅಪಾಯ ಮತ್ತು ಸಮಸ್ಯೆಗಳನ್ನು ವಿವರಿಸಿ
ಉಪಸಂಹಾರ:
ಬದಲಾವಣೆ ಜಗದ ನಿಯಮ. ಔದ್ಯೋಗಿಕ ವಲಯದ ನ್ಯೂನ್ಯತೆಗಳನ್ನು ನಿವಾರಿಸಿ ಆರ್ಥಿಕತೆಗೆ ಪೂರಕವಾಗಿಸಲು ನಿಯಂತ್ರಕ ಕ್ರಮಗಳನ್ನು ಸೂಚಿಸಿ
ವಿಷಯ : ಭಾರತದಲ್ಲಿ ಭೂ ಸುಧಾರಣೆಗಳು
4. Discuss the primacy of land reforms to address the ongoing agrarian crisis in India. (250 words)
4. ಭಾರತದಲ್ಲಿ ಪ್ರಚಲಿತದಲ್ಲಿರುವ ಕೃಷಿ ವಲಯದ ಬಿಕ್ಕಟ್ಟನ್ನು ನಿವಾರಿಸಲು ಭೂ-ಸುಧಾರಣೆಯ ಪಾತ್ರವನ್ನು ಚರ್ಚಿಸಿ. (250 ಪದಗಳು)
Reference: The Hindu
ಪ್ರಶ್ನೆಯ ಆಶಯ:
ದೇಶದಲ್ಲಿನ ಕೃಷಿ ವಲಯದ ಬಿಕ್ಕಟ್ಟನ್ನು ನಿವಾರಿಸಲು ಭೂ-ಸುಧಾರಣೆಗಳು ನಿರ್ಧಾರಕವಾಗಿದೆ
ಉತ್ತರದ ರಚನೆ
ಪೀಠಿಕೆ
ದೇಶದ ಕೃಷಿ ವಲಯದ ಪ್ರಸ್ತುತ ಪರಿಸ್ಥಿತಿಯನ್ನು ಅಂಕಿಅಂಶಗಳ ಮೂಲಕ ಪ್ರಸ್ತುತಪಡಿಸಿ.
ಮುಖ್ಯ ಭಾಗ:
ಭೂ-ಸುಧಾರಣೆಯ ಇಂದಿನ ಅಗತ್ಯತೆಯನ್ನು ವಿವರಿಸಿ. ಈ ವಿವರಣೆ ಕೆಳಗಿನ ಅಂಶಗಳನ್ನು ಅಧರಿಸಿರಲಿ.
- ಭೂ ದಾಖಲೆಗಳ ನಿರ್ಮಾಣ ಮತ್ತು ಡಿಜಿಟಲೀಕರಣ ಪ್ರಕ್ರಿಯೆ
- ಸಾರ್ವಜನಿಕ ಭೂ ಬಿಕ್ಕಟ್ಟು ದತ್ತಾಂಶ ನಿರ್ಮಾಣ
- ಪ್ರತಿ ಹಿಡುವಲಿಯ ನಕ್ಷೆ ಕುರಿತು ಮಾಹಿತಿ
ದೇಶದಲ್ಲಿ ಭೂ ಸುಧಾರಣೆಯ ಪ್ರಾಮುಖ್ಯತೆಯನ್ನು ಮರು ಪ್ರಸ್ತುತಪಡಿಸಿ.
ಈ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡ ಕ್ರಮಗಳ ಕುರಿತು ಚರ್ಚಿಸಿ.
ಉಪಸಂಹಾರ:
ಭೂ ಸುಧಾರಣೆಯ ಯಶಸ್ವಿಯತೆಗೆ ಕ್ರಮಗಳನ್ನು ಸೂಚಿಸಿ.
ವಿಷಯ: ಸಂವಹನ ಜಾಲ, ಮಾಧ್ಯಮ ಮತ್ತು ಸಾಮಾಜಿಕ ಜಾಲ ತಾಣಗಳು ಆಂತರಿಕ ಭದ್ರತೆಗೆ ಒಡ್ಡುವ ಸವಾಲುಗಳು; ಸೈಬರ್ ಭದ್ರತೆಯ ಮೂಲಾಂಶಗಳು; ಮನಿ-ಲಾಂಡ್ರಿಂಗ್ ಮತ್ತು ಅದರ ನಿವಾರಣೆ
5. How can Cryptocurrency be used for money laundering? Discuss and suggest measures to curb the unlawful use of crypto currency. (250 words)
5. ಮನಿ-ಲಾಂಡ್ರಿಂಗ್ ಪ್ರಕ್ರಿಯೆಯಲ್ಲಿ ಕ್ರಿಪ್ಟೋಕರೆನ್ಸಿಯ ಬಳಕೆಯನ್ನು ವಿವರಿಸಿ. ಈ ಕರೆನ್ಸಿಯ ಕಾನೂನುಬಾಹಿರ ಬಳಕೆಯ ನಿಯಂತ್ರಣಕ್ಕೆ ಕ್ರಮಗಳನ್ನು ಸೂಚಿಸಿಮತ್ತು ಚರ್ಚಿಸಿ. (250 ಪದಗಳು)
Reference: Live Mint , The Hindu
ಪ್ರಶ್ನೆಯ ಹಿನ್ನೆಲೆ
ಇತ್ತೀಚಿಗೆ ಕ್ರಿಮಿನಲ್ ಹಣಕಾಸು ಕುರಿತ 4ನೇ ಜಾಗತಿಕ ಸಮಾವೇಶದಲ್ಲಿ 132 ರಾಷ್ಟ್ರಗಳು ಭಾಗವಹಿಸಿದ್ದವು. ಈ ಸಮಾವೇಶದಲ್ಲಿ ಅಗೋಚರ (Virtual) ಸಂಪತ್ತು, ಮನಿ ಲಾಂಡ್ರಿಂಗ್ ನಿಯಂತ್ರಣದ ಸಾಮರ್ಥ್ಯ ವಿಸ್ತರಣೆ ಕುರಿತು ಚರ್ಚಿಸಲಾಯಿತು
ಪ್ರಶ್ನೆಯ ಆಶಯ
ಇಂದಿನ ಜಾಗತೀಕರಣಗೊಂಡ ಆರ್ಥಿಕತೆಯಲ್ಲಿ ಕ್ರಿಪ್ಟೋಕರೆನ್ಸಿಯ ಪಾತ್ರವನ್ನು ಅರಿಯುವುದು ಮತ್ತು ಅದರ ದುರುಪಯೋಗಕ್ಕೆ ಕ್ರಮಗಳನ್ನು ಸೂಚಿಸುವುದು.
ಉತ್ತರದ ರಚನೆ:
ಪೀಠಿಕೆ:
ಕ್ರಿಪ್ಟೋಕರೆನ್ಸಿಯ ಅರ್ಥವನ್ನು ವಿವರಿಸಿ. ಕ್ರಿಪ್ಟೋಕರೆನ್ಸಿಗೆ ಉದಾಹರಣೆ ನೀಡಿ.
ಮುಖ್ಯ ಭಾಗ:
ಉದಾಹರಣೆ ಸಹಿತವಾಗಿ ಕ್ರಿಪ್ಟೋಕರೆನ್ಸಿ ಮತ್ತು ಅಪರಾಧಗಳ ನಡುವಿನ ಅಂತರ್ಸಂಬಂಧ ಕುರಿತು ವಿವರವಾಗಿ ಚರ್ಚಿಸಿ.
ಮನಿ-ಲಾಂಡ್ರಿಂಗ್ ಮತ್ತು ಕ್ರಿಪ್ಟೋಕರೆನ್ಸಿಗಳು ಒಡ್ಡಿದ ಸಮಸ್ಯೆಯನ್ನು ನಿವಾರಿಸುವ ಕ್ರಮಗಳನ್ನು ಕುರಿತು ವಿವರಿಸಿ.
- ಸಾಮರ್ಥ್ಯ ವೃದ್ಧಿಗೆ ಕ್ರಮಗಳು
- ‘Follow the Money’ ತಂತ್ರದ ಅಳವಡಿಕೆ
- ಅಪರಾಧಿ ಜಾಲದ ನಿವಾರಣೆಗೆ ಮಾಹಿತಿ ಹಂಚಿಕೆಯ ಪ್ರಕ್ರಿಯೆಯನ್ನು ಸಂವರ್ಧಿಸಿ
- ಕ್ರಿಮಿನಲ್ ಹಣಕಾಸಿನ ತನಿಖೆಯಲ್ಲಿ ನವ ತಂತ್ರಜ್ಞಾನಗಳ ಬಳಕೆ
ಉಪಸಂಹಾರ :
ಮುಂದಿನ ಮಾರ್ಗವನ್ನು ಕುರಿತು ಬರೆಯಿರಿ
ವಿಷಯ : GS-2: ವಿವಿಧ ವಲಯಗಳಲ್ಲಿ ಸರ್ಕಾರದ ನೀತಿಗಳು ಮತ್ತು ಅಭಿವೃದ್ಧಿಯ ಕ್ರಮಗಳು ಹಾಗೂ ಅನುಷ್ಟಾನದಿಂದಾಗುವ ಸಮಸ್ಯೆಗಳು
ವಿಷಯ : GS-3: ಸಂರಕ್ಷಣೆ, ಪರಿಸರ ಮಾಲಿನ್ಯ, ಪರಿಸರ ಪರಿಶೀಲನಾ ಕ್ರಮಗಳು
6. The symbiotic phase of implementing Jal Jeevan Mission can be productively used to engage in a dialogue with the states about the larger water resources management agenda, beyond the mission’s goals. Comment. (250 words)
6. ಜಲ ಜೀವನ್ ಯೋಜನೆಯ ಉದ್ದೇಶಗಳ ಗಡಿದಾಟಿ ರಾಜ್ಯಗಳ ಬೃಹತ್ ಜಲ ಸಂಪನ್ಮೂಲಗಳ ನಿರ್ವಹಣಾ ಧ್ಯೇಯವನ್ನು ಪೂರೈಸಲು ಧನಾತ್ಮಕವಾಗಿ ಬಳಸಬಹುದಾಗಿದೆ. ಅವಲೋಕಿಸಿ (250 ಪದಗಳು)
Reference: Indian Express
ಪ್ರಶ್ನೆಯ ಹಿನ್ನೆಲೆ
ಜಲ ಆಡಳಿತ ಪ್ರಕ್ರಿಯೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.
ಪ್ರಶ್ನೆಯ ಆಶಯ
ಜಲ ಆಡಳಿತ ಮತ್ತು ಸಹಕಾರಿ ಒಕ್ಕೂಟದ ಮಹತ್ವ
ಉತ್ತರದ ರಚನೆ
ಪೀಠಿಕೆ:
ಯೋಜನೆ ಮತ್ತು ಉದ್ದೇಶ ಕುರಿತು ಸಂಕ್ಷಿಪ್ತವಾಗಿ ಬರೆಯಿರಿ. ಇದು 2024 ವೇಳೆಗೆ ಪ್ರತಿ ಗೃಹಗಳಿಗೆ ಪ್ರತಿ ದಿನ ಪ್ರತಿ ವ್ಯಕ್ತಿಗೆ 55 ಲೀ ಕೊಳವೆ ನೀರನ್ನು ಪೂರೈಸುವುದು ಮುಖ್ಯೋದ್ದೆಶವನ್ನು ಹೊಂದಿದೆ.
ಮುಖ್ಯಭಾಗ:
ಅಂತರ್-ರಾಜ್ಯ ಜಲ ಆಡಳಿತ ಒಡ್ಡುವ ಸವಾಲುಗಳಾವುವು ಮತ್ತು ಅವುಗಳನ್ನು ನಿಯಂತ್ರಿಸುವ ಕ್ರಮಗಳನ್ನು ಕುರಿತು ಬರೆಯಿರಿ.
ಸುಸ್ಥಿರಾಭಿವೃದ್ಧಿಗೆ ಜಲ ಆಡಳಿತ ಅಗತ್ಯತೆಯನ್ನು ವಿವರಿಸಿ.
ಉಪಸಂಹಾರ:
ಜಲ ಆಡಳಿತವನ್ನು ಅನುಷ್ಠಾನಗೊಳಿಸುವ ಇತರೆ ಮಾರ್ಗಗಳನ್ನು ಕುರಿತು ಬರೆಯಿರಿ. ಅಥವಾ ಪ್ರಶ್ನೆಯ ಹೇಳಿಕೆಯ ಮಹತ್ವವನ್ನು ಬರೆಯಿರಿ
General Studies – 4
ವಿಷಯ: ಸಾರ್ವಜನಿಕ ಆಡಳಿತದಲ್ಲಿ ಮೌಲ್ಯಗಳು ಮತ್ತು ನೈತಿಕತೆ : ಸ್ಥಿತಿ ಮತ್ತು ಸಮಸ್ಯೆಗಳು; ಸಾರ್ವಜನಿಕ ಮತ್ತು ಖಾಸಗಿ ವಲಯದಲ್ಲಿ ನೈತಿಕ ಸಂದಿಗ್ಧತೆ; ನೈತಿಕತೆಯ ಮೂಲಗಳಾಗಿ ಕಾನೂನು, ನಿಯಮಾವಳಿ ಮತ್ತು ಆತ್ಮಸಾಕ್ಷಿಯ ಪಾತ್ರ; ಹೊಣೆಗಾರಿಕೆ ಮತ್ತು ನೈತಿಕ ಆಡಳಿತ; ಆಡಳಿತದಲ್ಲಿ ನೈತಿಕ ಮೌಲ್ಯಗಳ ಸಂವರ್ಧನೆ; ಅಂತರಾರಾಷ್ಟ್ರೀಯ ಸಂಬಂಧ ಮತ್ತು ಹಣಕಾಸಿನಲ್ಲಿ ನೈತಿಕ ಸಮಸ್ಯೆಗಳು; ಔದ್ಯೋಗಿಕ ಆಡಳಿತ
7. Discuss the ethical aspects involved in regulation of betting and gambling. (250 words)
7. ಜೂಜುಗಾರಿಕೆಯ ನಿಯಂತ್ರಣದಲ್ಲಿರುವ ನೈತಿಕ ಅಂಶಗಳನ್ನು ಚರ್ಚಿಸಿ. (250 ಪದಗಳು)
Reference: The Hindu
ಪ್ರಶ್ನೆಯ ಹಿನ್ನೆಲೆ:
ಇತ್ತೀಚಿಗೆ, ಹಣಕಾಸಿನ ರಾಜ್ಯ ಸಚಿವ ಅನುರಾಗ್ ಟಾಕೂರ್ ಕ್ರೀಡೆಗಳಲ್ಲಿ (ಮುಖ್ಯವಾಗಿ ಕ್ರಿಕೆಟ್) ಜೂಜುಗಾರಿಕೆಯನ್ನು ಶಾಸನಬದ್ಧವಾಗಿಸಲು ಇಂಕಿತವನ್ನು ವ್ಯಕ್ತಪಡಿಸಿದ್ದರು. ಇದು ಜೂಜುಗಾರಿಕಾ ಪ್ರಕ್ರಿಯೆಯನ್ನು ಚರ್ಚೆಯ ವಿಷಯವಾಗಿಸಿತ್ತು.
ಪ್ರಶ್ನೆಯ ಆಶಯ
ಸೂಕ್ತ ಉದಾಹರಣೆಯ ಮೂಲಕ ಜೂಜುಗಾರಿಕೆಯ ನಿಯಂತ್ರಣ ಕುರಿತು ನೈತಿಕ ಅಂಶಗಳನ್ನು ವಿವರಣಾತ್ಮಕವಾಗಿ ಚರ್ಚಿಸಿ.
ಉತ್ತರದ ರಚನೆ
ಪೀಠಿಕೆ:
ಜೂಜುಗಾರಿಕೆ ಮತ್ತು ಮನೋರಂಜನಾ ಕುರಿತು ಬರೆಯಿರಿ.
ಮುಖ್ಯ ಭಾಗ:
2018ರಲ್ಲಿ ಭಾರತದ ಕಾನೂನು ಆಯೋಗ ಜೂಜುಗಾರಿಕೆಗೆ ಶಾಸನಾತ್ಮಕ ಸ್ಥಾನ ನೀಡುವ ಇಂಕಿತವನ್ನು ವ್ಯಕ್ತಪಡಿಸಿತು. ಆದರೆ, ಪ್ರಸ್ತುತ ಸ್ಥಿತಿ ಸರಿಯಿರದ ಕಾರಣ ಕಾನೂನು ಬಾಹಿರ ಜೂಜುಗಾರಿಕೆಯನ್ನು ನಿರ್ಬಂಧಿಸಿದೆ. ಇದು ಸಾಧ್ಯವಾಗದ ಪಕ್ಷದಲ್ಲಿ ಈ ಚಟುವಟಿಕೆಯನ್ನು ನಿಯಂತ್ರಣಕ್ಕೊಳಪಡಿಸುವುದು ಸೂಕ್ತ ಕ್ರಮವಾಗಿದೆ.
7ನೇ ಅನುಸೂಚಿಯ ರಾಜ್ಯ ಪಟ್ಟಿಯಲ್ಲಿನ ಈ ವಿಷಯದ ಕಾನೂನಿನ ಸ್ಥಾನವನ್ನು ಕುರಿತು ಬರೆಯಿರಿ.
- ಸರ್ಕಾರ ಹೊರಡಿಸುವ ಲಾಟರಿ ಪ್ರಕ್ರಿಯೆ ಕೇಂದ್ರ ಪಟ್ಟಿಯಲ್ಲಿದೆ.
- ಪ್ರಸ್ತುತವಾಗಿ ದೇಶದಲ್ಲಿ ಲಾಟರಿ ಹೊರತುಪಡಿಸಿ ಉಳಿದೆಲ್ಲ ಜೂಜುಗಾರಿಕಾ ಪ್ರಕ್ರಿಯೆಗಳನ್ನು ನಿರ್ಬಂಧಿಸಲಾಗಿದೆ.
ಜೂಜುಗಾರಿಕೆ ಮತ್ತು ಗ್ಯಾಮ್ಬ್ಲಿಂಗ್ ಪರ, ವಿರೋಧ ಕುರಿತು ಬರೆಯಿರಿ. ಇಲ್ಲಿರುವ ನೈತಿಕ ಆಯಾಮವನ್ನು ಕುರಿತು ಬರೆಯಿರಿ.
ಉಪಸಂಹಾರ:
ನೈತಿಕವಾಗಿ ಸಮಸ್ಯೆಯನ್ನು ನಿವಾರಿಸಲು ನ್ಯಾಯೋಚಿತ ಮತ್ತು ಸಮತೋಲಿತ ನೆಲೆಯಲ್ಲಿ ಸೂಕ್ತ ಕ್ರಮಗಳನ್ನು ಸೂಚಿಸಿ.