[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 7 -11-2020

Join Our official Telegram Channel for Important Tips and Guidance : https://t.me/insightsIAStips

    ಸಾಮಾನ್ಯ ಅಧ್ಯಯನ ಪತ್ರಿಕೆ  – 1


 

ಒಳಗೊಂಡಿರುವ ವಿಷಯಗಳು: ಭೂಕಂಪಗಳು, ಸುನಾಮಿ,ಜ್ವಾಲಾಮುಖಿ ಚಟುವಟಿಕೆ, ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು.

 ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ಚಂಡಮಾರುತಗಳು ಏಕೆ ಸಂಭವಿಸಲಿಲ್ಲ?


ಸಂದರ್ಭ: ಅಕ್ಟೋಬರ್ ನಿಂದ ಡಿಸೆಂಬರ್ ತಿಂಗಳುಗಳು ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ಚಂಡಮಾರುತಗಳ ಅಭಿವೃದ್ಧಿಗೆ ಬಹಳ ಪ್ರಶಸ್ತವಾದ ತಿಂಗಳುಗಳಾಗಿವೆ.

ಚಂಡಮಾರುತಗಳು ಸಾಮಾನ್ಯವಾಗಿ ಯಾವಾಗ ರೂಪುಗೊಳ್ಳುತ್ತವೆ ಹಾಗೂ ಭಾರತದ ಕರಾವಳಿ ತೀರಕ್ಕೆ ಯಾವಾಗ ಅಪ್ಪಳಿಸುತ್ತವೆ?

ವಾರ್ಷಿಕವಾಗಿ ಸುಮಾರು 80 ಚಂಡಮಾರುತಗಳು ಜಗತ್ತಿನಾದ್ಯಂತ ರೂಪುಗೊಳ್ಳುತ್ತವೆ, ಅವುಗಳಲ್ಲಿ 5 ಚಂಡಮಾರುತಗಳು ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರದಲ್ಲಿ ರೂಪುಗೊಳ್ಳುತ್ತವೆ. ಇವುಗಳನ್ನು’ ಉತ್ತರ ಹಿಂದೂಮಹಾಸಾಗರ’ ಎಂದು ಕರೆಯಲಾಗುತ್ತದೆ.

ಉತ್ತರ ಹಿಂದೂ ಮಹಾಸಾಗರದಲ್ಲಿ ಏಪ್ರಿಲ್ ನಿಂದ ಜೂನ್ ವರೆಗೆ( ಮಾನ್ಸೂನ್ಗಿಂತ ಪೂರ್ವ) ಮತ್ತು ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ( ಮಾನ್ಸೂನ್ ನಂತರದಲ್ಲಿ) ಎರಡು ರೀತಿಯ ಋತುಗಳಲ್ಲಿ ಸಂಭವಿಸುವ ಚಂಡಮಾರುತಗಳನ್ನು ನಾವು ಕಾಣಬಹುದಾಗಿದೆ.

 

ಈ ವರ್ಷ ಚಂಡಮಾರುತದ ರೂಪುಗೊಳ್ಳುವಿಕೆ ಯಾಕೆ ಕಾಣಿಸಲಿಲ್ಲ?

1)  ದಕ್ಷಿಣ ಚೀನಾ ಸಮುದ್ರದ ಕಡೆಯಿಂದ ಸಾಮಾನ್ಯವಾಗಿ “ಸಾಗರದ ಅಡಚಣೆಗಳು”(Ocean Disturbance) ಬಂಗಾಳ ಕೊಲ್ಲಿಗೆ ಪ್ರವೇಶಿಸಿ,ಭಾರತದ ಕರಾವಳಿಯತ್ತ ನುಗ್ಗುತ್ತಿದ್ದವು. ಆದರೆ ಈ ವರ್ಷದಲ್ಲಿ ಚಂಡಮಾರುತವನ್ನು ರೂಪಿಸುವ ಇಂತಹ ಯಾವುದೇ ವ್ಯವಸ್ಥೆಗಳು ಕಂಡುಬರಲಿಲ್ಲ.

2) ಸಮಭಾಜಕ ವೃತ್ತದ ಪೆಸಿಫಿಕ್ ಮಹಾಸಾಗರದ ಉದ್ದಕ್ಕೂ,”ಲಾ ನೀನಾ” ವಿದ್ಯಮಾನವು ದುರ್ಬಲ ಆಗಿದ್ದು,ಇದಕ್ಕೆ ಮತ್ತೊಂದು ಕಾರಣವಾಗಿದೆ.

3) 30ರಿಂದ 60 ದಿನಗಳ ಕಾಲ ಬರುವ ಹಾಗೂ ಉಷ್ಣವಲಯದ ಉದ್ದಕ್ಕೂ ಪೂರ್ವಕ್ಕೆ ಚಲಿಸಿ ” ಆವರ್ತಕ ಹವಾಮಾನ”ಘಟನೆಯಾದ ಇದು ಮತ್ತು ಮಳೆ ಗಾಳಿ ಸಮುದ್ರದ ಮೇಲ್ಮೈ ತಾಪಮಾನ ಹಾಗೂ ಮೋಡದ ಹೊದಿಕೆ ಮೇಲೆ ಪ್ರಭಾವ ಬೀರುವ ಘಟನೆಯಾದ “ಮೇಡನ್ ಜೂಲಿಯನ್ ಆಸಿಲೇಷನ್”(MJO) ನ ಪ್ರಭಾವವು ಇದರಮೇಲೆ ಆಗಿತ್ತು.

4) ನವೆಂಬರ್ ತಿಂಗಳಲ್ಲಿ ಎತ್ತರ ಮತ್ತು ಕಡಿಮೆ ಮಟ್ಟದ ವಾತಾವರಣದಲ್ಲಿ, ಗಾಳಿಯ ವೇಗ ವ್ಯತ್ಯಾಸದಿಂದ ಕೂಡಿದ್ದು, ಲಂಬವಾದ ಗಾಳಿಯಲ್ಲಿ ಅಸಮತೋಲನ (ಏರಿಳಿತ )ಉಂಟುಮಾಡಿ, ಕಡಿಮೆ ಒತ್ತಡದ ವಾತಾವರಣ ರೂಪುಗೊಳ್ಳಲು ಅಡಚಣೆ ಉಂಟು ಮಾಡಿತು. ಇದರಿಂದಾಗಿ ಚಂಡಮಾರುತ ರೂಪುಗೊಳ್ಳಲು ಬೇಕಾದ ಕಡಿಮೆ ಒತ್ತಡದ ಪ್ರದೇಶವು,ಈ ಸಾರಿ ಮರೀಚಿಕೆ ಆಯಿತು.

 


    ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ಒಳಗೊಂಡ ವಿಷಯಗಳು: ವಿವಾದಗಳನ್ನು ಬಗೆಹರಿಸಲು ಇರುವ  ವಿವಿಧ ಅಂಗಗಳ, ಮತ್ತು ಸಂಸ್ಥೆಗಳ ನಡುವೆ ಅಧಿಕಾರಗಳ ವಿಭಜನೆ.

 ಹರಿಯಾಣ ವಿಧಾನಸಭೆಯು,ಪಂಚಾಯತ್ ಸದಸ್ಯರನ್ನು “ಹಿಂದಕ್ಕೆ ಕರೆಸಿಕೊಳ್ಳುವ”(Recall) ವಿಧಾನಕ್ಕೆ ಸಂಬಂಧಿಸಿದಂತೆ, ಮಸೂದೆಯನ್ನು ಅಂಗೀಕರಿಸಿದೆ.


ಸಂದರ್ಭ: ಹರಿಯಾಣ ಪಂಚಾಯತಿ ರಾಜ್ (2ನೇ ತಿದ್ದುಪಡಿ) ಮಸೂದೆ,2020 ಅನ್ನು ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.

1) ಈ ತಿದ್ದುಪಡಿಯು ಜನಪ್ರತಿನಿಧಿಗಳು, ಅವರನ್ನು ಆರಿಸಿದ ಮತದಾರರಿಗೆ  ಹೊಣೆಗಾರಿಕೆ ಆಗಿರಬೇಕೆಂದು ಹೇಳಿದೆ.

 

ಮಸೂದೆಯ ಪ್ರಮುಖಾಂಶಗಳು:

1) ಇದು ಮತದಾರರಿಗೆ ಅವರು ಚುನಾಯಿಸಿದ ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರನ್ನು ಹಿಂದಕ್ಕೆ ಕರೆಸಿಕೊಳ್ಳುವ ಹಕ್ಕನ್ನು ನೀಡುತ್ತದೆ.

2) ಈ ಸಂಸ್ಥೆಗಳಲ್ಲಿ ಶೇಕಡ 50 ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಲಾಗಿದೆ.

3) ಹಿಂದುಳಿದ ವರ್ಗದಲ್ಲಿ ‘ಅತ್ಯಂತ ಹಿಂದುಳಿದವರಿಗೆ’ ಶೇಕಡ 8ರಷ್ಟು ಮೀಸಲಾತಿಯನ್ನು ನೀಡಲಾಗಿದೆ.

4) ಸರಿಯಾದ ಕಾರ್ಯನಿರ್ವಹಣೆ ಮಾಡದಿದ್ದಾಗ,ಗ್ರಾಮಗಳ ಸರಪಂಚರನ್ನು ಮತ್ತು ಬ್ಲಾಕ್ ಮಟ್ಟದ ಪಂಚಾಯತ್ ಸಮಿತಿಗಳ ಸದಸ್ಯರನ್ನು ಹಾಗೂ ಜಿಲ್ಲಾಮಟ್ಟದ ಜಿಲ್ಲಾ ಪರಿಷತ್ ಸದಸ್ಯರನ್ನು ಹಿಂದಕ್ಕೆ ಕರೆಸಿಕೊಳ್ಳಲು  ಈ ಮಸೂದೆ ಅನುಮತಿಸುತ್ತದೆ.

 

ಅನುಸರಿಸಬೇಕಾದ ವಿಧಾನಗಳು:

1) ಒಂದು ವಾರ್ಡಿನ ಅಥವಾ ಗ್ರಾಮಸಭೆಯ ಶೇಕಡ 50ರಷ್ಟು ಮತದಾರರು ಲಿಖಿತ ರೂಪದಲ್ಲಿ ಬೇಡಿಕೆಯನ್ನು ಸಲ್ಲಿಸುವುದರ ಮುಖಾಂತರ ಸರಪಂಚ ಹಾಗೂ ಸದಸ್ಯರನ್ನು ಹಿಂದಕ್ಕೆ ಗಳಿಸಿಕೊಳ್ಳಬೇಕಾದ ವಿಧಾನವನ್ನು ಪ್ರಾರಂಭಿಸಬೇಕಾಗುತ್ತದೆ.

2) ನಂತರದಲ್ಲಿ ಒಂದು ರಹಸ್ಯ ಮತದಾನವನ್ನು ನಡೆಸಲಾಗುತ್ತದೆ, ರಹಸ್ಯ ಮತದಾನದಲ್ಲಿ ಹಿಂಪಡೆಯುವಿಕೆಗೆ 2/3 ರಷ್ಟು ಮತ ನೀಡಬೇಕಾಗುತ್ತದೆ.

 

73 ಮತ್ತು 74ನೇ ತಿದ್ದುಪಡಿಗಳ ಪ್ರಮುಖ ಕಡ್ಡಾಯ ನಿಬಂಧನೆಗಳು:

1) ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ನಿಯಮಿತವಾಗಿ ನೇರ ಚುನಾವಣೆ ನಡೆಸಬೇಕು.

2) ರಾಜ್ಯಮಟ್ಟದಲ್ಲಿ ಚುನಾವಣಾ ಆಯೋಗ ಮತ್ತು ಹಣಕಾಸು ಆಯೋಗವನ್ನು ಸ್ಥಾಪಿಸಬೇಕು.

3) ಜನಸಂಖ್ಯೆಯ ಅನುಗುಣವಾಗಿ ಪ್ರತಿ ಸ್ಥಳೀಯ ಸಂಸ್ಥೆಯಲ್ಲಿ,ದಲಿತರು ಮತ್ತು ಆದಿವಾಸಿಗಳಿಗೆ ಸ್ಥಾನಗಳ ಮೀಸಲಾತಿ ನೀಡಬೇಕು.

4) ಶೇಕಡ 33ರಷ್ಟು ಮೀಸಲಾತಿ ಮಹಿಳೆಯರಿಗೆ ನೀಡಬೇಕು.

5) ಗ್ರಾಮೀಣ ಮತ್ತು ನಗರ ಸಂಸ್ಥೆಗಳ ಯೋಜನೆಗಳನ್ನು ಕ್ರೋಡೀಕರಿಸಲು, ಜಿಲ್ಲಾ ಯೋಜನಾ ಸಮಿತಿ ಗಳನ್ನು ರಚಿಸಬೇಕು.

 

ಒಳಗೊಂಡಿರುವ ವಿಷಯಗಳು:ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಮಧ್ಯಸ್ಥಿಕೆಗಳು ಮತ್ತು ಅವುಗಳ ವಿನ್ಯಾಸ ಹಾಗೂ ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013:


ಸಂದರ್ಭ: 2013ರಿಂದ ಇಲ್ಲಿಯವರೆಗೆ NFSA ಅಡಿಯಲ್ಲಿ ಸರ್ಕಾರವು 4.39 ಕೋಟಿ ನಕಲಿ ಪಡಿತರ ಚೀಟಿಗಳನ್ನು  ರದ್ದುಪಡಿಸಿದೆ.

 

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ(NFSA) 2013:

ಜನರು ಘನತೆಯಿಂದ ಜೀವನವನ್ನು ನಡೆಸಲು, ಕೈಗೆಟುಕುವ ಬೆಲೆಯಲ್ಲಿ, ಸಾಕಷ್ಟು ಪ್ರಮಾಣದ ಗುಣಮಟ್ಟದ ಆಹಾರವನ್ನು ಮತ್ತು ಪೌಷ್ಠಿಕಾಂಶದ ಸುರಕ್ಷತೆಯನ್ನು ನೀಡುವ ಉದ್ದೇಶದಿಂದ ಜಾರಿಗೆ ಬಂದ ಕಾಯ್ದೆಯಾಗಿದೆ.

 

ಕಾಯ್ದೆಯ ಪ್ರಮುಖ ಲಕ್ಷಣಗಳು:

ಉದ್ದೇಶಿತ ಸಾರ್ವಜನಿಕ ವಿತರಣಾ ವ್ಯವಸ್ಥೆ(TPDS) ಯ ವ್ಯಾಪ್ತಿ ಮತ್ತು ಅರ್ಹತೆಗಳು:

ಟಿ ಪಿ ಡಿ ಎಸ್ ವ್ಯವಸ್ಥೆಯು 50ರಷ್ಟು ನಗರ ಜನಸಂಖ್ಯೆಯನ್ನು ಮತ್ತು ಶೇಕಡಾ 75 ರಷ್ಟು ಗ್ರಾಮೀಣ ಜನಸಂಖ್ಯೆಯ ವ್ಯಾಪ್ತಿಯನ್ನು ಹೊಂದಿದೆ. ಒಬ್ಬ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಆಹಾರಧಾನ್ಯಗಳ ವಿತರಣೆ ಮಾಡಲಾಗುತ್ತದೆ. ಹಾಗೂ ಅತ್ಯಂತ ಬಡ ಕುಟುಂಬಗಳನ್ನು ಹೊಂದಿರುವವರಿಗೆ, “ಅಂತ್ಯೋದಯ ಅನ್ನ ಯೋಜನೆ” ಅಡಿಯಲ್ಲಿ ಪ್ರತಿ ಮನೆಗೆ,ಪ್ರತಿ ತಿಂಗಳು,35 ಕೆಜಿ ಆಹಾರ ಧಾನ್ಯಗಳ ನೀಡಿಕೆ ಮುಂದುವರಿಸಲಾಗಿದೆ.

 

TPDS ವ್ಯವಸ್ಥೆಯಲ್ಲಿ ಸಬ್ಸಿಡಿ ಬೆಲೆಗಳು ಮತ್ತು ಅವುಗಳ ಪರಿಷ್ಕರಣೆ:

ಕಾಯ್ದೆಯು ಜಾರಿಗೊಂಡ 3 ವರ್ಷಗಳ ತನಕ ಅಕ್ಕಿ ,ಗೋಧಿ ಮತ್ತು ಒರಟು ಧಾನ್ಯಗಳನ್ನು, ಪ್ರತಿ ಕೆಜಿಗೆ ಕ್ರಮವಾಗಿ 3/2/1 ರುಪಾಯಿಗಳಲ್ಲಿ ಸಬ್ಸಿಡಿ ದರದಲ್ಲಿ ವಿತರಿಸಬೇಕು.

ಫಲಾನುಭವಿಗಳ ಗುರುತಿಸುವಿಕೆ: ಅರ್ಹ ಫಲಾನುಭವಿಗಳನ್ನು ಗುರುತಿಸುವಿಕೆಯನ್ನು, ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಳಿತ ಪ್ರದೇಶಗಳು ಮಾಡಬೇಕಾಗುತ್ತದೆ.

 

ಮಹಿಳೆಯರು ಹಾಗೂ ಮಕ್ಕಳಿಗೆ ಪೌಷ್ಠಿಕಾಂಶ ಒದಗಿಸುವಿಕೆ:

ಆರು ವರ್ಷದೊಳಗಿನ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ಹೆಚ್ಚಿನ ಪೌಷ್ಟಿಕಾಂಶದ ಮಾನದಂಡಗಳಿಗೆ ಒಳಪಡಿಸುವುದರ ಜೊತೆಗೆ, 6ತಿಂಗಳಿನಿಂದ 14 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿಯರು ಹಾಗೂ ಹಾಲುಣಿಸುವ ತಾಯಂದಿರಿಗೆ ನಿಗದಿತ ಪೌಷ್ಠಿಕಾಂಶದ ಮಾನದಂಡಗಳ ಪ್ರಕಾರ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು(ICDS) ಮತ್ತು ಮಧ್ಯಾಹ್ನದ ಊಟದ ಯೋಜನೆಗಳು(MDM) ಜಾರಿ ಮಾಡಲಾಗಿದೆ.

 

ಹೆರಿಗೆ ಲಾಭ: ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ₹6000 ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.

 

ಮಹಿಳಾ ಸಬಲೀಕರಣ: ಮನೆಯ ಮುಖ್ಯಸ್ಥರು 18 ವರ್ಷ ಮೇಲ್ಪಟ್ಟ ಮಹಿಳೆಯಾಗಿರಬೇಕು.ಆಗ ಮಾತ್ರ ಪಡಿತರ ಚೀಟಿಯನ್ನು ವಿತರಿಸಲಾಗುತ್ತದೆ.

 

ಕುಂದುಕೊರತೆ ಪರಿಹಾರ ವಿಧಾನ: ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಸಮಸ್ಯೆ ನಿವಾರಣ ಕೇಂದ್ರಗಳು ಲಭ್ಯವಿರುತ್ತವೆ.

 

ಸಾರಿಗೆ ವೆಚ್ಚ ಮತ್ತು ಆಹಾರ ಧಾನ್ಯಗಳ ನಿರ್ವಹಣೆ ಹಾಗೂ ನ್ಯಾಯಬೆಲೆ ಅಂಗಡಿಗಳ (FPS)ವಿತರಕರ ವರ್ಗ:

ಇದಕ್ಕೆ ಕೇಂದ್ರ ಸರ್ಕಾರವು ರಾಜ್ಯಗಳಿಗೆ ಸಹಾಯ ಧನವನ್ನು ನೀಡುತ್ತದೆ.

ಪಾರದರ್ಶಕತೆ ಮತ್ತು ಉತ್ತರದಾಯಿತ್ವ: ಪಡಿತರ ವಿತರಣೆಗೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆ ಮಾಡುವುದು ಹಾಗೂ ಸಾಮಾಜಿಕ ಪರಿಶೋಧನೆ ಮಾಡುವುದು ಮತ್ತು ವಿಚಕ್ಷಣ ಸಮಿತಿಗಳನ್ನು ಮೇಲ್ವಿಚಾರಣೆಗಾಗಿ ನಿಮ್ಮದು ಅವಕಾಶ ಕಲ್ಪಿಸಲಾಗಿದೆ.

 

ಆಹಾರ ಭದ್ರತಾ ಪರಿಹಾರ: ಅರ್ಹ ಫಲಾನುಭವಿಗಳಿಗೆ ಆಹಾರಧಾನ್ಯಗಳ ವಿತರಣೆಯನ್ನು ಮಾಡದಿದ್ದಲ್ಲಿ, ಅವರಿಗೆ ಪರಿಹಾರವನ್ನು ಹಣದ ರೂಪದಲ್ಲಿ ನೀಡಲಾಗುತ್ತದೆ.

 

ದಂಡ: ಜಿಲ್ಲಾ ಕುಂದುಕೊರತೆ ಪರಿಹಾರ ಅಧಿಕಾರಿಯು ಶಿಫಾರಸು ಮಾಡಿದ ಪರಿಹಾರವನ್ನು ನೀಡಲು,ಯಾವುದೇ ಸಾರ್ವಜನಿಕ ಸೇವಕ ಅಥವಾ ಪ್ರಾಧಿಕಾರವು, ವಿಫಲವಾದರೆ ನಿಬಂಧನೆ ಪ್ರಕಾರ ರಾಜ್ಯ ಆಹಾರ ಆಯೋಗವು ದಂಡವನ್ನು ವಿಧಿಸುತ್ತದೆ.

 


    ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ಒಳಗೊಂಡಿರುವ ವಿಷಯಗಳು: ಭಾರತದ ಆರ್ಥಿಕತೆ ಮತ್ತು ಯೋಜನೆಗಳು,ಸಂಪನ್ಮೂಲಗಳ ಸಜ್ಜುಗೊಳಿಸುವಿಕೆ,ಬೆಳವಣಿಗೆ,ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ವಿಷಯಗಳು.

ಬ್ಯಾಂಕೇತರ ಹಣಕಾಸು ಸಂಸ್ಥೆಗಳ- ಕಿರು ಹಣಕಾಸು ಸಂಸ್ಥೆಗಳು(NBFC-MFI):


NBFC-MFI ಗಳೆಂದರೇನು? ಮತ್ತು ಅವು ಯಾವುವು?

NBFC-MFI ಸಂಸ್ಥೆಗಳು ಠೇವಣಿ ರಹಿತ ಸಂಸ್ಥೆಗಳಾಗಿದ್ದು, (ಭಾರತೀಯ ಕಂಪನಿ ಕಾಯ್ದೆ 1956, ರ ಸೆಕ್ಷನ್ 25 ರ ಅಡಿಯಲ್ಲಿ ಕಂಪನಿಯನ್ನು ಹೊರತುಪಡಿಸಿ) ಈ ಕೆಳಗಿನ ಶರತ್ತುಗಳನ್ನು ಪೂರೈಸಬೇಕು.

1) ಕನಿಷ್ಠ ನಿವ್ವಳ ಸ್ವಾಮ್ಯದ ನಿಧಿಗಳು: 5 ಕೋಟಿ ರೂಪಾಯಿಗಳು.( ಆದರೆ ಭಾರತದ ಈಶಾನ್ಯ ಪ್ರದೇಶದಲ್ಲಿ ನೋಂದಾಯಿಸಿಕೊಂಡರೆ 2 ಕೋಟಿ ರೂಪಾಯಿಗಳNOF ಹೊಂದಿರಬೇಕು).

2) ಅದರ ಒಟ್ಟು ನಿವ್ವಳ ಆಸ್ತಿಗಳಲ್ಲಿ ಶೇಕಡ 85 ರಷ್ಟು “ಅರ್ಹತಾ ಆಸ್ತಿಗಳ”(Qualifying Asset) ಸ್ವರೂಪದಲ್ಲಿರಬೇಕು.

 

 ಅರ್ಹತಾ ಆಸ್ತಿಗಳೆಂದರೆ ಯಾವುವು?

“ನಗದು, ಬ್ಯಾಂಕ್ ಬ್ಯಾಲೆನ್ಸ್ ಮತ್ತು ಹಣದ ಮಾರುಕಟ್ಟೆಯ ಸಾಧನಗಳನ್ನು ಹೊರತುಪಡಿಸಿ ಇರುವ ಒಟ್ಟು ಆಸ್ತಿ ಗಳನ್ನು  ನಿವ್ವಳ ಆಸ್ತಿಗಳು ಎಂದು ಕರೆಯುತ್ತಾರೆ.

 

 “ಅರ್ಹತಾ ಆಸ್ತಿಗಳು”: ಬಳಕೆಯನ್ನು ಮಾಡಲು ಅಥವಾ ಮಾರಾಟಕ್ಕೆ ಸಿದ್ಧಪಡಿಸಲು ಸಾಕಷ್ಟು ಸಮಯವನ್ನು ಹೊಂದಿರುವ ಆಸ್ತಿಗಳು ಆಗಿವೆ.

NBFCs

 

  ಒಳಗೊಂಡಿರುವ ವಿಷಯಗಳು: ಬಾಹ್ಯಾಕಾಶ ಕ್ಷೇತ್ರದಲ್ಲಿ ಅರಿವು.

EOS-01 ಎನ್ನುವುದು, ಭಾರತದ ಹೊಸದಾದ  ಭೂ ವೀಕ್ಷಣಾ ಉಪಗ್ರಹವಾಗಿದೆ.


ಸಂದರ್ಭ: ಇದು,ಇಸ್ರೋ ಕಳೆದ ವರ್ಷದ ಡಿಸೆಂಬರ್ 11ಕ್ಕೆ ಉಡಾವಣೆ ಮಾಡಿದ RISAT-2BR1 ನಂತರ ಉಡಾವಣೆ ಮಾಡಿದ ಮೊದಲ ಯೋಜನೆಯಾಗಿದೆ.

( ಗಮನಕ್ಕೆ: ಇಸ್ರೋ ಈ ವರ್ಷದ ಜನವರಿಯಲ್ಲಿ ಫ್ರೆಂಚ್ ಗಯಾನ ದಿಂದ “ಏರಿಯನ್” ರಾಕೆಟ್ಟನ್ನು ಬಳಸಿ ಸಂವಹನ ಉಪಗ್ರಹವಾದ GSAT-30 ಅನ್ನು ಬಾಹ್ಯಾಕಾಶಕ್ಕೆ ಉಡಾಯಿಸಿತ್ತು).

 

EOS-01 ಎಂದರೇನು?

ಭೂ ವೀಕ್ಷಣಾ ಉಪಗ್ರಹ ಎಂದರ್ಥ.( earth observation satellite).

ಇದು ಒಂದು ರಾಡರ್ ಇಮೇಜಿಂಗ್ ಸೆಟಲೈಟ್(RISAT) ಆಗಿದೆ, ಹಾಗೂ ಕಳೆದ ವರ್ಷ ಉಡಾವಣೆಗಳಾದ,RISAT2B ಮತ್ತು RISAT-2BR1 ಜೊತೆಗೆ ಕಾರ್ಯನಿರ್ವಹಿಸುತ್ತದೆ.

1) ಇನ್ಮುಂದೆ ಭೂಮಿಯ ಎಲ್ಲಾ ವೀಕ್ಷಣ ಉಪಗ್ರಹಗಳನ್ನು “EOS ಸರಣಿಗಳು” ಎಂದು ಕರೆಯಲಾಗುತ್ತದೆ.

 

ಯಾವುದಕ್ಕಾಗಿ ಇಂತಹ ಉಪಗ್ರಹಗಳನ್ನು ಬಳಸಲಾಗುತ್ತದೆ?

ಭೂಮಿ ಮತ್ತು ಅರಣ್ಯ ನಕ್ಷೆಗಳು ಮತ್ತು ಮೇಲ್ವಿಚಾರಣೆ, ನೀರು ಅಥವಾ ಖನಿಜಗಳು ಅಥವಾ ಮೀನು ಗಳಂತಹ ಸಂಪನ್ಮೂಲಗಳ ಬಗ್ಗೆ ನಕ್ಷೆ ಮಾಡಲು, ಹವಾಮಾನ ಮತ್ತು ಅದರ ಬಗ್ಗೆ ಅವಲೋಕನ ಮಾಡುವುದಕ್ಕಾಗಿ, ಮಣ್ಣಿನ ಬಗ್ಗೆ ಮೌಲ್ಯಮಾಪನ, ಭೂಮಿಯ ಬಗ್ಗೆ ರೇಖಾಚಿತ್ರಗಳ ನಕ್ಷೆ ಮಾಡಲು ಭೂ ವೀಕ್ಷಣ ಉಪಗ್ರಹಗಳನ್ನು ಬಳಸಲಾಗುತ್ತದೆ.

 

ರೇಡಾರ್ ಇಮೇಜಿನ (ಚಿತ್ರ ) ಅನುಕೂಲಗಳು:

ಈ ರೆಡಾರ್ ಇಮೇಜಿಂಗ್ ಗಳು( ಚಿತ್ರಗಳು), ವಾತಾವರಣದಲ್ಲಿ ಉಂಟಾಗುವ ಹವಾಮಾನ, ಮೋಡ ಅಥವಾ ಮಂಜು ಮತ್ತು ಸೂರ್ಯನ ಬೆಳಕಿನ ಏರಿಳಿತಗಳಿಂದ ಪ್ರಭಾವಿತ ವಾಗುವುದಿಲ್ಲ ಮತ್ತು ಉತ್ತಮವಾದ ಚಿತ್ರಗಳನ್ನು ಎಲ್ಲಾ ಪರಿಸ್ಥಿತಿಗಳಲ್ಲಿ ಹಾಗೂ ಎಲ್ಲಾ ಸಮಯದಲ್ಲೂ ನೀಡುತ್ತದೆ.

 

ಒಳಗೊಂಡಿರುವ ವಿಷಯಗಳು: ಸಂರಕ್ಷಣೆ ಮತ್ತು ಮಾಲಿನ್ಯ ಕ್ಕೆ ಸಂಬಂಧಿಸಿದ ವಿಷಯಗಳು:

ಕರಾವಳಿ ನಿಯಂತ್ರಣ ವಲಯ(CRZ) ದ ಬಗ್ಗೆ ಇರುವ ಮಾನದಂಡಗಳು:


ಸಂದರ್ಭ: ಕೇರಳದ ಕೊಚ್ಚಿ ಜಿಲ್ಲೆಯ ಮರಡಿ ಪುರಸಭೆಯ ವ್ಯಾಪ್ತಿಯಲ್ಲಿ ಬರುವ “ಕರಾವಳಿ ನಿಯಂತ್ರಣ ವಲಯ”ದಲ್ಲಿ ಅಕ್ರಮವಾಗಿ ಕಟ್ಟಡಗಳನ್ನು ನಿರ್ಮಿಸಲಾಗಿದೆ ಎಂದು ಅವುಗಳನ್ನು ಹೊಡೆದು ಹಾಕಲಾಯಿತು. ಅದರಲ್ಲಿ ಒಬ್ಬರು ತಮ್ಮ ಕಟ್ಟಡಕ್ಕೆ ಪರಿಹಾರ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಈಗ ಸುಪ್ರೀಂಕೋರ್ಟ್ ಇದಕ್ಕಾಗಿ, ನಿವೃತ್ತ ಕೇರಳ ಹೈಕೋರ್ಟ್ ನ್ಯಾಯಾಧೀಶರಾದ,  ನ್ಯಾ . ಬಾಲಕೃಷ್ಣನ್ ಅಯ್ಯರ್ ನೇತೃತ್ವದಲ್ಲಿ, ಒಂದು ಸಮಿತಿಯನ್ನು ರಚಿಸಿ ಆದೇಶವನ್ನು ವಿಸ್ತರಿಸಿದೆ.

 

ಸಮಸ್ಯೆಯ ಬಗ್ಗೆ ಸಂಕ್ಷಿಪ್ತ ಮಾಹಿತಿ:

ಕೇರಳದ ಕೊಚ್ಚಿಯ ಮರಡು ಕರಾವಳಿ ಪ್ರದೇಶದಲ್ಲಿ ಹಾಗೂ ಇನ್ನಿತರ ಕಡೆಗಳಲ್ಲಿ, ಅಕ್ರಮ ಕಟ್ಟಡಗಳ ನಿರ್ಮಾಣದಿಂದ, ಸುತ್ತಮುತ್ತಲಿನ ಪರಿಸರಕ್ಕೆ ಭಾರೀ ಹಾನಿ ಉಂಟಾಗುತ್ತಿದೆ ಎಂದು ಸುಪ್ರೀಂಕೋರ್ಟ್ ಸೆಪ್ಟೆಂಬರ್ 23ರಂದು ಆಘಾತ ವ್ಯಕ್ತಪಡಿಸಿತ್ತು.

1) ಕರಾವಳಿ ನಿಯಂತ್ರಣ ವಲಯ ನಿಯಮ ವನ್ನು(SEZ) ಉಲ್ಲಂಘಿಸಿ, 4 ಅಕ್ರಮ ಅಪಾರ್ಟ್ಮೆಂಟ್ ಗಳನ್ನು ಹೊಡೆದು ಹಾಕಬೇಕೆಂದು ಅಥವಾ ನೆಲಸಮ ಗಳಿಸಬೇಕೆಂಬ ಆದೇಶವನ್ನು ಕೇರಳ ಸರ್ಕಾರ ಪಾಲಿಸಲು ವಿಫಲವಾದಾಗ ಭಾರಿ ಆಕ್ರೋಶ ವ್ಯಕ್ತವಾಯಿತು. ನಂತರ ಸುಪ್ರೀಂಕೋರ್ಟ್ ಪರಿಸರಕ್ಕೆ ಉಂಟಾದ ಹಾನಿಯನ್ನು ಅಂದಾಜು ಮಾಡಲು ಒಂದು ಸಮೀಕ್ಷೆ ನಡೆಸುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದೆ.

2) ಕರಾವಳಿಯ ಉಬ್ಬರವಿಳಿತದ ಪ್ರಭಾವಕ್ಕೆ ಒಳಗಾದ ಪ್ರದೇಶದಲ್ಲಿ ಅಕ್ರಮ ಕಟ್ಟಡಗಳನ್ನು ಕಟ್ಟಿಸಲಾಗಿತ್ತು,ಅವುಗಳನ್ನು ಒಂದು ತಿಂಗಳ ಅವಧಿಯೊಳಗಾಗಿ ನೆಲಸಮಗೊಳಿಸಿಬೇಕೆಂದು ಭಾರತದ ಸುಪ್ರೀಂಕೋರ್ಟ್ 2019, ಮೇ 8 ರಂದು ಆದೇಶವನ್ನು ನೀಡಿತ್ತು.

 

CRZ ಮಾನದಂಡಗಳು:

ಭಾರತದ, ಪರಿಸರ ಸಂರಕ್ಷಣೆ ಕಾಯಿದೆ 1986 ಸೆಕ್ಷನ್ 3ರ ಅಡಿಯಲ್ಲಿ, ಕರಾವಳಿ ನಿಯಂತ್ರಣ ವಲಯ ಅಧಿಸೂಚನೆಯನ್ನು ಫೆಬ್ರುವರಿ 1991 ರಲ್ಲಿ ಮೊದಲ ಬಾರಿಗೆ ನೀಡಲಾಗಿದೆ.

2018 -19 ರಲ್ಲಿ ಹೊಸ ನಿಯಮಗಳನ್ನು ಜಾರಿ ಮಾಡಿದ್ದು,  ಇದ್ದ ಕೆಲವು ನಿರ್ಬಂಧಗಳನ್ನು ತೆಗೆದುಹಾಕಿ, ಪ್ರವಾಸೋದ್ಯಮ ಉತ್ತೇಜಿಸಲು ಮುಂದಾಗಿದೆ.

 

ಉದ್ದೇಶಗಳು:

1) ಕರಾವಳಿಯ ಪ್ರದೇಶಗಳಲ್ಲಿ ಈ ಕೆಳಗಿನ ಕೆಲವು ಚಟುವಟಿಕೆಗಳನ್ನು ಮಾಡುವಂತಿಲ್ಲ:

ದೊಡ್ಡ ಪ್ರಮಾಣದ ಕಟ್ಟಡಗಳ ನಿರ್ಮಾಣ,ಹೊಸ ಕೈಗಾರಿಕೆಗಳ ಸ್ಥಾಪನೆ,ಅಪಾಯಕಾರಿ ವಸ್ತುಗಳನ್ನು ಸಂಗ್ರಹಿಸಿಡುವುದು,ಅಥವಾ ವಿಲೇವಾರಿ ಮಾಡುವುದು, ಗಣಿಗಾರಿಕೆ.

 

ನಿರ್ಬಂಧಗಳು ಯಾವುವು?

ಪರಿಸರ ಸೂಕ್ಷ್ಮ ಪ್ರದೇಶ, ವಾಸಿಸುವ ಜನಸಂಖ್ಯೆ, ಕರಾವಳಿ ಪ್ರದೇಶ ದೂರ, ಮತ್ತು ಹವಾಮಾನಗಳನ್ನು ಆಧರಿಸಿ ಹಾಗೂ ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭ್ಯರಣ್ಯ ಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಬಂಧಗಳನ್ನು ನಿಗದಿಪಡಿಸಲಾಗಿರುತ್ತದೆ.

2) “ಕರಾವಳಿ ಪ್ರದೇಶದ 20 ಮೀಟರ್ ಒಳಗೆ ಯಾವುದೇ ಅಭಿವೃದ್ಧಿ ಚಟುವಟಿಕೆಗಳನ್ನು ಮಾಡಬಾರದು” ಎಂಬ ನಿಯಮಗಳು,ಪ್ರಸ್ತುತ ಕರಾವಳಿ ಪ್ರದೇಶಕ್ಕೆ ಅಂಟಿಕೊಂಡಿರುವ ಎಲ್ಲಾ ದ್ವೀಪಗಳಿಗೆ ಮತ್ತು ಹಿನ್ನೀರು ದ್ವೀಪಗಳಿಗೆ ಅನ್ವಯಿಸುತ್ತದೆ.

 

CRZ-3( ಗ್ರಾಮೀಣ) ಪ್ರದೇಶಗಳು, ಎಂದು ಕರೆಯಲಾಗುವ ಈ ನಿಯಮಗಳನ್ನು ಈ ಕೆಳಗಿನ ವರ್ಗಗಳಿಗೆ ನಿರ್ಧರಿಸಲಾಗಿದೆ.:

1) 2011ರ ಜನಗಣತಿಯ ಪ್ರಕಾರ, ಪ್ರತಿ ಚದರ ಕಿಲೋಮೀಟರ್ ಗೆ 2,161 ಜನಸಂಖ್ಯೆ ಸಾಂದ್ರತೆಯನ್ನು ಹೊಂದಿರುವ, ಗ್ರಾಮೀಣ ಪ್ರದೇಶಗಳಲ್ಲಿ(CRZ-3B) ಅಡಿಯಲ್ಲಿ, ಹೆಚ್ಚಿನ ಉಬ್ಬರವಿಳಿತ ವಿರುವ ಕಡೆಗಳಲ್ಲಿ 50 ಮೀಟರ್ ಒಳಗೆ ಯಾವುದೇ ಅದನ್ನು ಕೈಗೊಳ್ಳುವಂತಿಲ್ಲ.( ಈ ಮೊದಲು ಇದು 200 ಮೀಟರ್ ಗಳಷ್ಟು ಇತ್ತು)

2)CRB-3B ಅಡಿಯಲ್ಲಿ 2,162 ಜನಸಂಖ್ಯೆ ಸಾಂದ್ರತೆ ಗಿಂತ ಕಡಿಮೆ ಇರುವ, ಗ್ರಾಮೀಣ ಪ್ರದೇಶಗಳ ಭಾಗದಲ್ಲಿ ಯಾವುದೇ ಅಭಿವೃದ್ಧಿ ಮಾಡಬಾರದು ಎಂಬ ನಿಯಮವನ್ನು 200 ಮೀಟರ್ ಗಳಿಗೆ ನಿಗದಿಪಡಿಸಲಾಗಿದೆ.

 

ಜಾರಿ ಮಾಡುವಿಕೆ:

ಈ ನಿಯಮಗಳನ್ನು ಕೇಂದ್ರ ಪರಿಸರ ಸಚಿವಾಲಯ ಮಾಡಿದ್ದು, ಅವುಗಳನ್ನು ಆಯಾ ರಾಜ್ಯ ಸರಕಾರಗಳು, ತಮ್ಮ “ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಗಳ” ಮೂಲಕ ಅನುಷ್ಠಾನ ಮಾಡಬೇಕಾಗಿದೆ.


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos