Join Our official Telegram Channel for Important Tips and Guidance : https://t.me/insightsIAStips
ಸಾಮಾನ್ಯ ಅಧ್ಯಯನ ಪತ್ರಿಕೆ 1
ಒಳಗೊಂಡಿರುವ ವಿಷಯಗಳು: ಆಧುನಿಕ ಭಾರತೀಯ ಇತಿಹಾಸವು 18ನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗೆ- ಮಹತ್ವದ ಘಟನೆಗಳು, ವ್ಯಕ್ತಿತ್ವಗಳು,ಸಮಸ್ಯೆಗಳು.
ರಾಷ್ಟ್ರೀಯ ಏಕತಾ ದಿವಸ
ಸಂದರ್ಭ: ಅಕ್ಟೋಬರ್ 31 ದೇಶಾದ್ಯಂತ ಆಚರಿಸಲಾಗುತ್ತದೆ.
ಇದು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನಾಚರಣೆ ಸಂದರ್ಭವಾಗಿದೆ.
ಹಿನ್ನೆಲೆ:
ಸರ್ದಾರ್ ಪಟೇಲ್ ಜಯಂತಿ ದಿನವನ್ನು ಏಕತಾ ದಿವಸ ಎಂದು ಆಚರಿಸಲು ಸರ್ಕಾರ 2014ರಲ್ಲಿ ನಿರ್ಧರಿಸಿತು. ಈ ಸಂದರ್ಭವು ರಾಷ್ಟ್ರದ ಏಕತೆ, ಸಮಗ್ರತೆ ಮತ್ತು ಸುರಕ್ಷತೆಗೆ ಬೆದರಿಕೆಗಳನ್ನು ತಡೆದುಕೊಳ್ಳಲು ಅಂತರಗತ ಶಕ್ತಿ ಮತ್ತು ಸ್ಥಿತಿಸ್ಥಾಪಕತ್ವವನ್ನು ಪುನಹ ದೃಢೀಕರಿಸಲು ಒಂದು ಅವಕಾಶವನ್ನು ಒದಗಿಸುತ್ತದೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಬಗ್ಗೆ:
ಸ್ವತಂತ್ರ ಗಣರಾಜ್ಯವನ್ನು ನಿರ್ಮಿಸಲು ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಎಲ್ಲಾ 562d ರಾಜ್ಯಗಳನ್ನು ಒಟ್ಟುಗೂಡಿಸಿ ಕೀರ್ತಿ ಸರ್ದಾರ್ ಪಟೇಲರಿಗೆ ಸಲ್ಲುತ್ತದೆ.
ಭಾರತೀಯ ರಾಷ್ಟ್ರೀಯ ಚಳುವಳಿಯಲ್ಲಿ ಪಾತ್ರ.
1) 1917 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಗುಜರಾತ್ ವಿಭಾಗದ ಗುಜರಾತ್ ಸಭೆಯ ಕಾರ್ಯದರ್ಶಿಯಾಗಿ ಆಯ್ಕೆಯಾದರು.
2)1918ರಲ್ಲಿ ಕೈರಾ ದಲ್ಲಿ ಸಂಭವಿಸಿದ ಪ್ರವಾಹದ ನಂತರ ಬ್ರಿಟಿಷರಿಗೆ ರೈತರು ತೆರಿಗೆ ನೀಡಬೇಕಾಗಿಲ್ಲ ಎಂದು ಒತ್ತಾಯಿಸಿ ನಡೆದ ಹೋರಾಟದಲ್ಲಿ ಸರ್ದಾರ್ ಪಟೇಲರ ಪಾತ್ರ ಬಹುಮುಖ್ಯವಾದದ್ದು.
3) ಗಾಂಧಿ ಪ್ರಾರಂಭಿಸಿದ ಅಸಹಕಾರ ಚಳುವಳಿಯನ್ನು ಬೆಂಬಲಿಸಿದರು ಮತ್ತು ಪಟೇಲ್ ಅವರೊಂದಿಗೆ ರಾಷ್ಟ್ರ ಪ್ರವಾಸ ಮಾಡಿದರು.
4)1928 ರಲ್ಲಿ ಸರ್ಕಾರಕ್ಕೆ ಹೆಚ್ಚುವರಿ ತೆರಿಗೆ ಪಾವತಿಸಲು ನಿರಾಕರಿಸಿದ ನಂತರ ರೈತರ ಭೂಮಿಯನ್ನು ವಶಪಡಿಸಿಕೊಂಡಾಗ, ಪಟೇಲರು ಸರ್ಕಾರ ಮತ್ತು ರೈತರ ಪ್ರತಿನಿಧಿಗಳ ನಡುವೆ ಒಪ್ಪಂದ ಮಾಡಿಸುವ ಮೂಲಕ ರೈತರಿಗೆ ಸಹಾಯ ಮಾಡಿದರು.
5) 1930 ರಲ್ಲಿ ಮಹಾತ್ಮ ಗಾಂಧಿಯವರು ಪ್ರಾರಂಭಿಸಿದ ಪ್ರಸಿದ್ಧ ಉಪ್ಪಿನ ಸತ್ಯಾಗ್ರಹ ಚಳುವಳಿಯಲ್ಲಿ ಭಾಗವಹಿಸಿದ ಜೈಲಿನಲ್ಲಿದ್ದರೂ.
6) 1931 ರಲ್ಲಿ ಕರಾಚಿ ಅಧಿವೇಶನದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿ ಚುನಾಯಿತರಾದರು, ಅಲ್ಲಿ ಪಕ್ಷವು ತನ್ನ ಮುಂದಿನ ಹಾದಿಯನ್ನು ಉದ್ದೇಶಿಸಿತ್ತು.
7) ಹೈದ್ರಾಬಾದ್ ನಿಜಾಮ ಪಾಕಿಸ್ತಾನಕ್ಕೆ ಸೇರುವ ಅಥವಾ ಸ್ವತಂತ್ರವಾಗಿ ಉಳಿಯುವ ಸುಳ್ಳು ಭರವಸೆಯನ್ನು ಮೂಡಿಸಿದೆ ನಂತರ ಹೈದರಾಬಾದನ್ನು ಸ್ವತಂತ್ರಗೊಳಿಸಲು ಮತ್ತು ಭಾರತಕ್ಕೆ ಸಂಯೋಜಿಸಲು “ಆಪರೇಷನ್ ಪೋಲೋ”ಪಟೇಲರು ನಡೆಸಿದರು.
“ಸರ್ದಾರ್” ಎಂಬ ಬಿರುದನ್ನು ಅವರಿಗೆ ನೀಡಿದವರು ಯಾರು?
ಬಾರ್ಡೋಲಿಯ ಮಹಿಳೆಯರು ವಲ್ಲಭಭಾಯಿ ಪಟೇಲರಿಗೆ ಸರ್ದಾರ್ ಎಂಬ ಬಿರುದನ್ನು ನೀಡಿದರು ಅಂದರೆ ಇದರರ್ಥ ಮುಖ್ಯಸ್ಥ ಅಥವಾ ನಾಯಕ.
ಸಾಮಾನ್ಯ ಅಧ್ಯಯನ ಪತ್ರಿಕೆ 2
ಒಳಗೊಂಡಿರುವ ವಿಷಯಗಳು: ಶಾಸನಬದ್ಧ, ನಿಯಂತ್ರಕ ಮತ್ತು ವಿವಿಧ ಅರೆ-ನ್ಯಾಯಾಂಗ ಸಂಸ್ಥೆಗಳು.
ವಾರ್ಷಿಕMBBS ಪ್ರವೇಶ ನಿಯಮಗಳಿಗೆ(2020) ಕನಿಷ್ಠ ಅವಶ್ಯಕತೆಗಳು
ಸಂದರ್ಭ: ರಾಷ್ಟ್ರೀಯ ವೈದ್ಯಕೀಯ ಆಯೋಗ(NMC) ಇತ್ತೀಚೆಗೆ ಪ್ರಕಟಿಸಿದೆ.
1) ಇದು ಈ ಹಿಂದಿನ ವೈದ್ಯಕೀಯ ಮಂಡಳಿಯ(MCI)1999 ರ ” ವೈದ್ಯಕೀಯ ಕಾಲೇಜುಗಳಿಗೆ ಕನಿಷ್ಠ ಪ್ರಮಾಣಿತ ಅಗತ್ಯಗಳನ್ನು” ಬದಲಾಯಿಸುತ್ತದೆ.
ಹೊಸ ನಿಯಂತ್ರಣದ ಮುಖ್ಯಾಂಶಗಳು( ಸಂಕ್ಷಿಪ್ತ ಅವಲೋಕನ)
1) ಸ್ಥಾಪಿಸಲು ಪ್ರಸ್ತಾಪಿಸುವ ಎಲ್ಲಾ ಹೊಸ ವೈದ್ಯಕೀಯ ಕಾಲೇಜುಗಳಿಗೆ ಮತ್ತು 2021- 22 ರ ಶೈಕ್ಷಣಿಕ ವರ್ಷದಿಂದ ತಮ್ಮ ವಾರ್ಷಿಕMBBS ಪ್ರವೇಶಗಳನ್ನು ಹೆಚ್ಚಿಸಲು ಪ್ರಸ್ತಾಪಿಸಿರುವ ಸ್ಥಾಪಿತ ವೈದ್ಯಕೀಯ ಕಾಲೇಜುಗಳಿಗೆ ಅನ್ವಯಿಸುತ್ತದೆ.
2) ಹೊಸ ನಿಯಂತ್ರಣವು ವೈದ್ಯಕೀಯ ಕಾಲೇಜು ಮತ್ತು ಅದರ ಅಂಗಸಂಸ್ಥೆಯ ಬೋಧನ ಆಸ್ಪತ್ರೆಗಳನ್ನು ಸ್ಥಾಪಿಸಲು ಬೇಕಾದ ಭೂಮಿಯ ಪ್ರಮಾಣವನ್ನು ಅಳಿಸಿಹಾಕಿದೆ.
3) ಹೊಸ ನಿಯಂತ್ರಣದ ಅಡಿಯಲ್ಲಿ,ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಸುಸಜ್ಜಿತ “ಕೌಶಲ್ಯ ಪ್ರಯೋಗಾಲಯ”ಈಗ ಅಗತ್ಯವಾಗಿದೆ.
4) ಶಿಕ್ಷಣ ಶಾಸ್ತ್ರ ದಲ್ಲಿ ವೈದ್ಯಕೀಯ ಶಿಕ್ಷಕರಿಗೆ ತರಬೇತಿ ನೀಡಲು ವೈದ್ಯಕೀಯ ಶಿಕ್ಷಣ ಘಟಕವನ್ನು ಸಹ ವ್ಯಾಖ್ಯಾನಿಸುತ್ತದೆ.
5) ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ನಿವಾಸಿಗಳಲ್ಲಿ ಹೆಚ್ಚುತ್ತಿರುವ ಒತ್ತಡವನ್ನು ಕಡಿಮೆ ಮಾಡಲು ವಿದ್ಯಾರ್ಥಿ ಸಮಾಲೋಚನೆ ಸೇವೆಗಳನ್ನು ಕಡ್ಡಾಯಗೊಳಿಸಲಾಗಿದೆ.
6) ಹೊಸ ವೈದ್ಯಕೀಯ ಕಾಲೇಜು ಸ್ಥಾಪಿಸಲು ಅರ್ಜಿ ಸಲ್ಲಿಸುವ ಸಮಯದಲ್ಲಿ ಕನಿಷ್ಠ 2 ವರ್ಷಗಳವರೆಗೆ ಸಂಪೂರ್ಣ ಕ್ರಿಯಾತ್ಮಕ 300 ಹಾಸಿಗೆಗಳ ಬಹು-ವಿಶೇಷ ಆಸ್ಪತ್ರೆಯ ಲಭ್ಯತೆಯನ್ನು ನಿಯಂತ್ರಣವು ಈಗ ಆದೇಶಿಸುತ್ತದೆ.( ಈ ಹಿಂದಿನ ನಿಯಮಗಳು ಕ್ರಿಯಾತ್ಮಕತೆಯ ಅವಧಿಯನ್ನು ನಿರ್ದಿಷ್ಟಪಡಿಸಿ ರಲಿಲ್ಲ).
7) ಪದವಿಪೂರ್ವ ವೈದ್ಯಕೀಯ ವಿದ್ಯಾರ್ಥಿಗಳ ತರಬೇತಿಗಾಗಿ ಎಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಎರಡು ಹೊಸ ಬೋಧನಾ ವಿಭಾಗಗಳು ಈಗ ಕಡ್ಡಾಯವಾಗಿ ಸ್ಥಾಪಿಸಬೇಕಾಗಿದೆ. ಇವುಗಳಲ್ಲಿ ತುರ್ತು ಔಷಧ ವಿಭಾಗ ಮತ್ತು ಭೌತಿಕ ಔಷಧ ಇಲಾಖೆ ಮತ್ತು ಪುನರ್ವಸತಿ ಸೇರಿವೆ.
ರಾಷ್ಟ್ರೀಯ ವೈದ್ಯಕೀಯ ಆಯೋಗದ ಬಗ್ಗೆ:
ಸುರೇಶ್ ಚಂದ್ರ ಶರ್ಮಾ ಅವರ ಅಧ್ಯಕ್ಷತೆಯಲ್ಲಿ ಮೂರು ವರ್ಷಗಳ ಅವಧಿಯಲ್ಲಿ 33 ಸದಸ್ಯರನ್ನು ಒಳಗೊಂಡ NMC ಗೆ ಕೇಂದ್ರವು ಇತ್ತೀಚಿಗೆ ಅಧಿಸೂಚನೆ ನೀಡಿದೆ.
1) ಅಧ್ಯಕ್ಷರಲ್ಲದೆ,NMC 10 ಪದನಿಮಿತ್ತ ಸದಸ್ಯರು ಮತ್ತು ಕೇಂದ್ರ ಸರ್ಕಾರದಿಂದ ನೇಮಿಸಲ್ಪಟ್ಟ 22 ಅರೆಕಾಲಿಕ ಸದಸ್ಯರನ್ನು ಒಳಗೊಂಡಿರುತ್ತದೆ.
NMC ಕಾರ್ಯಗಳು:
1) ವೈದ್ಯಕೀಯ ಸಂಸ್ಥೆಗಳು ಮತ್ತು ವೈದ್ಯಕೀಯ ವೃತ್ತಿಪರರನ್ನು ನಿಯಂತ್ರಿಸುವ ನೀತಿಗಳನ್ನು ರೂಪಿಸುವುದು.
2) ಆರೋಗ್ಯ ರಕ್ಷಣೆಯಲ್ಲಿ ಮಾನವ ಸಂಪನ್ಮೂಲ ಮತ್ತು ಮೂಲಸೌಕರ್ಯಗಳ ಅವಶ್ಯಕತೆಗಳನ್ನು ನಿರ್ಣಯಿಸುವುದು.
3) ಮಸೂದೆಯಡಿಯಲ್ಲಿ ಮಾಡಿದ ನಿಬಂಧನೆಗಳೊಂದಿಗೆ ರಾಜ್ಯ ವೈದ್ಯಕೀಯ ಮಂಡಳಿಗಳ ಅನುಸರಣೆಯ ಬಗ್ಗೆ ಖಚಿತಪಡಿಸುವುದು.
4) ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ50% ಸೀಟುಗಳಿಗೆ ಶುಲ್ಕವನ್ನು ನಿರ್ಧರಿಸಲು ಮಾರ್ಗಸೂಚಿಗಳನ್ನು ರೂಪಿಸುವುದು.
ಒಳಗೊಂಡ ವಿಷಯಗಳು: ಭಾರತ ಮತ್ತು ಅದರ ನೆರೆಹೊರೆಯ ಸಂಬಂಧಗಳು.
ಗಿಲ್ಗಿಟ್ – ಬಾಲ್ಟಿಸ್ತಾನ್ ಭಾರತದ ಒಂದು ಭಾಗವಾಗಿದೆ ಎಂದು MEA ಭಾರತೀಯ ವಿದೇಶಾಂಗ ಇಲಾಖೆ ಹೇಳುತ್ತಿದೆ
ಸಂದರ್ಭ: ಗಿಲ್ಗಿಟ್-ಬಾಲ್ಟಿಸ್ತಾನ ಎಂದು ಕರೆಯಲ್ಪಡುವ ಪ್ರದೇಶಕ್ಕೆ ಪ್ರಾಂತೀಯ ಸ್ಥಾನಮಾನವನ್ನು ನೀಡಲು ಪಾಕಿಸ್ತಾನವು ಯೋಚಿಸುತ್ತಿದೆ.
ಇತ್ತೀಚಿನ ಬೆಳವಣಿಗೆಗಳು:
1) ಗಿಲ್ಗಿಟ್-ಬಾಲ್ಟಿಸ್ತಾನ್ ಶಾಸಕಾಂಗ ಸಭೆಗೆ ಈ ತಿಂಗಳ ಕೊನೆಯಲ್ಲಿ ಪಾಕಿಸ್ತಾನ ಚುನಾವಣೆ ನಡೆಸುವುದಾಗಿ ಘೋಷಿಸಿದೆ.
2) ಈ ಪ್ರದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆಸಲು ಇಸ್ಲಾಮಬಾದ್ 2018ರ ಆಡಳಿತಾತ್ಮಕ ಆದೇಶವನ್ನು ತಿದ್ದುಪಡಿ ಮಾಡಲು ಪಾಕಿಸ್ತಾನ ದ ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
3) ಗಿಲ್ಗಿಟ್-ಬಾಲ್ಟಿಸ್ತಾನ್ ಆದೇಶ 2018ರ ಆಡಳಿತಾತ್ಮಕ ಬದಲಾವಣೆಗಳಿಗೆ ಒದಗಿಸಲಾಗಿದೆ, ಇದರಲ್ಲಿ ಪಾಕಿಸ್ತಾನದ ಪ್ರಧಾನ ಮಂತ್ರಿಗಳಿಗೆ ಪ್ರಮುಖ ವಿಷಯಗಳ ಬಗ್ಗೆ ಕಾನೂನು ರೂಪಿಸಲು ಅಧಿಕಾರ ನೀಡಲಾಗಿದೆ.
ಭಾರತದ ಪ್ರತಿಕ್ರಿಯೆ:
1) ಈ ಕ್ರಮವನ್ನು ಇಸ್ಲಾಮಾಬಾದ್ ಈ ಪ್ರದೇಶದ “ಅಕ್ರಮ”ಆಕ್ರಮಣವನ್ನು ಮರೆಮಾಚುವ ಪ್ರಯತ್ನ ನಡೆಸುತ್ತಿದೆ ಎಂದು ಭಾರತ ಹೇಳಿದೆ.
2) ಕೇಂದ್ರಾಡಳಿತ ಪ್ರದೇಶಗಳಿಗೆ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಕ್ ಹಾಗೂ ಗಿಲ್ಗಿಟ್-ಬಾಲ್ಟಿಸ್ತಾನ್ ಎಂದು ಕರೆಯಲ್ಪಡುವ ಪ್ರದೇಶ ಗಳು ಭಾರತದ ಅವಿಭಾಜ್ಯ ಭಾಗವಾಗಿವೆ ಎಂದು ಭಾರತ ಸ್ಪಷ್ಟಪಡಿಸಿದೆ.
ಗಿಲ್ಗಿಟ್-ಬಾಲ್ಟಿಸ್ತಾನ ಎಲ್ಲಿದೆ?
1) ಇದು ಉತ್ತರದಲ್ಲಿ ಚೀನಾ, ಪಶ್ಚಿಮದಲ್ಲಿ ಅಪಘಾನಿಸ್ತಾನ ಮತ್ತು ಆಗ್ನೇಯದಲ್ಲಿ ಕಾಶ್ಮೀರದ ಗಡಿಯನ್ನು ಹೊಂದಿದೆ.
2) ಇದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದೊಂದಿಗೆ ಭೌಗೋಳಿಕ ಗಡಿಯನ್ನು ಹಂಚಿಕೊಳ್ಳುತ್ತದೆ ಮತ್ತು ಭಾರತವನ್ನು ಜಮ್ಮು-ಕಾಶ್ಮೀರದ ಕೇಂದ್ರಾಳಿತ ಪ್ರದೇಶ ಭಾಗವೆಂದು ಪರಿಗಣಿಸಿದರೆ, ಪಾಕಿಸ್ತಾನ ಇದನ್ನು POKಗಿಂತ ಪ್ರತ್ಯೇಕವಾಗಿ ನೋಡುತ್ತದೆ.
ಮುಖ್ಯ ಅಂಶಗಳು:
1) ಚೀನಾ -ಪಾಕಿಸ್ತಾನ ಆರ್ಥಿಕ ಕಾರಿಡಾರ್ ಈ ಪ್ರದೇಶದ ಮೂಲಕ ಹಾದು ಹೋಗುತ್ತದೆ.
2) ಈ ಪ್ರದೇಶವು 8000 ಮೀಟರ್ ದಲ್ಲಿ ಹೊಂದಿರುವ ಐದು ಮತ್ತು ಏಳು ಸಾವಿರ ಮೀಟರ್ ಎತ್ತರವಿರುವ 50ಕ್ಕೂ ಹೆಚ್ಚು ಪರ್ವತ ಗಳನ್ನು ಹೊಂದಿದೆ.
3) ಧ್ರುವ ಪ್ರದೇಶಗಳ ಹೊರಗೆ ವಿಶ್ವದ ಅತಿ ಉದ್ದದ ಮೂರು ಹಿಮನದಿಗಳನ್ನು ಇದು ಹೊಂದಿದೆ.
ಸಾಮಾನ್ಯ ಅಧ್ಯಯನ ಪತ್ರಿಕೆ -3
ಒಳಗೊಂಡಿರುವ ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಅನ್ವಯಿಕೆಗಳು ಮತ್ತು ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸುವುದು.
ಬೃಹತ್ ಔಷಧ ಪಾರ್ಕ್ ಎಂದರೇನು ಮತ್ತು ಹಿಮಾಚಲ ಪ್ರದೇಶಕ್ಕೆ ಯಾಕೆ ಬೇಕಾಗಿದೆ?
ಸಂದರ್ಭ:
ಹಿಮಾಚಲ ಪ್ರದೇಶ ರಾಜ್ಯವು ಕೇಂದ್ರ ಸರ್ಕಾರದ ಯೋಜನೆ ಅಡಿಯಲ್ಲಿ ಬೃಹತ್ ಔಷಧ ಉದ್ಯಾನವನ ನಿರ್ಮಾಣದ ಹಂಚಿಕೆಗಾಗಿ ಸ್ಪರ್ಧಿಸುತ್ತಿದೆ.
ಅಂತಹ ಮೂರು ಉದ್ಯಾನವನಗಳನ್ನು ದೇಶಾದ್ಯಂತ ಸ್ಥಾಪಿಸಲು ಕೇಂದ್ರ ಸರ್ಕಾರ ಯೋಚಿಸುತ್ತಿದೆ.
ಬೃಹತ್ ಔಷಧಗಳು ಅಥವಾ API ಗಳು ಎಂದರೇನು?
ಬೃಹತ್ ಔಷಧವನ್ನು ಕ್ರಿಯಾಶೀಲ ಔಷಧೀಯ ಘಟಕಾಂಶ(active pharmaceutical ingredients) ಎಂದು ಕರೆಯುತ್ತಾರೆ
ಇದು ಔಷಧದ ಒಂದು ಪ್ರಮುಖ ಘಟಕಾಂಶವಾಗಿದೆ, ಇದು ಅಪೇಕ್ಷಿತ ಚಿಕಿತ್ಸೆಯನ್ನು ನೀಡುತ್ತದೆ ಅಥವಾ ಔಷಧಿಯ ಉದ್ದೇಶಿತ ಚಟುವಟಿಕೆಯನ್ನು ಪೂರೈಸುತ್ತದೆ.
1)ಉದಾಹರಣೆಗೆ: ಪ್ಯಾರಸಿಟಮಾಲ್,- ಇದು ಒಂದು ಬೃಹತ್ ಔಷಧ ವಾಗಿದೆ, ಇದು ನೋವಿನ ವಿರುದ್ಧ ಕಾರ್ಯನಿರ್ವಹಿಸುತ್ತದೆ. ಸಿದ್ಧಪಡಿಸಿದ ಔಷಧದ ಉತ್ಪನ್ನವನ್ನು ತಯಾರಿಸಲು ಬೈಂಡಿಂಗ್ ಏಜೆಂಟ್ ಗಳೊಂದಿಗೆ ಅಥವಾ ದ್ರಾವಕಗಳೊಂದಿಗೆ ಮಿಶ್ರಣ ಮಾಡಲಾಗುತ್ತದೆ.
API ಗಳನ್ನು ಹೇಗೆ ತಯಾರಿಸಲಾಗುತ್ತದೆ?
ರಾಸಾಯನಿಕಗಳು ಮತ್ತು ದ್ರಾವಕಗಳನ್ನು ಒಳಗೊಂಡ ಅನೇಕ ಪ್ರತಿಕ್ರಿಯೆಗಳಿಂದ ಅವುಗಳನ್ನು ತಯಾರಿಸಲಾಗುತ್ತದೆ.
1) ಒಂದು API ನ್ನು ರೂಪಿಸಲು ಅದರ ಪ್ರತಿಕ್ರಿಯೆಗೆ ಬೇಕಾದ ಪ್ರಾಥಮಿಕ ರಾಸಾಯನಿಕ ಅಥವಾ ಮೂಲ ಕಚ್ಚಾ ವಸ್ತು ಗಳನ್ನು ಪ್ರಮುಖ ಆರಂಭಿಕ ವಸ್ತು(key starting material) ಎಂದು ಕರೆಯುತ್ತಾರೆ.ksm
2)ಈ ಪ್ರತಿಕ್ರಿಯೆಗಳ ಸಮಯದಲ್ಲಿ ಮಧ್ಯಂತರ ಹಂತದಲ್ಲಿ ರೂಪುಗೊಂಡ ರಾಸಾಯನಿಕ ಸಂಯುಕ್ತಗಳನ್ನು ಔಷಧದ ಮಧ್ಯವರ್ತಿಗಳು ಅಥವಾ DI (DRUG INTERMEDIATES) ಎಂದು ಕರೆಯುತ್ತಾರೆ.
ಭಾರತವು ಬೃಹತ್ ಔಷಧೀಯ ಉದ್ಯಾನವನಗಳನ್ನು ಏಕೆ ಪ್ರಚಾರ ಮಾಡುತ್ತಿದೆ?
ಭಾರತವು ವಿಶ್ವದ ಅತಿ ದೊಡ್ಡ ಔಷಧೀಯ ಉದ್ಯಮಗಳ ದೇಶದಲ್ಲಿ ಒಂದಾಗಿದೆ.( ಪರಿಮಾಣದ ಪ್ರಕಾರ ಮೂರನೆಯ ಅತಿ ದೊಡ್ಡ ದೇಶ).
ಆದರೆ ಈ ಉದ್ಯಮಗಳು API ಗಳು,DI ಗಳನ್ನು ಮತ್ತುKSM ಗಳನ್ನು ಆಮದು ಮಾಡಿಕೊಳ್ಳಲು ಇತರ ದೇಶಗಳ ಮೇಲೆ,ವಿಶೇಷವಾಗಿ ಚೀನಾವನ್ನು ಅವಲಂಬಿಸಿರುತ್ತದೆ.
ಆದ್ದರಿಂದ, ಆ ದೇಶಗಳಲ್ಲಿ ಆಗುವ ಯಾವುದೇ ಅಡೆತಡೆಗಳು ಭಾರತದಲ್ಲಿನ ಔಷಧೀಯ ಉದ್ಯಮಗಳ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತವೆ.
1) ಉದಾಹರಣೆಗೆ, ಈ ವರ್ಷ, covid-19ರ ಕಾರಣದಿಂದಾಗಿ ಅವುಗಳಲ್ಲಿನ ಅಡೆತಡೆಯಿಂದ ಆಗಿ ಭಾರತದಲ್ಲಿ ಔಷಧ ತಯಾರಕರು ಮತ್ತೆ ಮತ್ತೆ ಹಿನ್ನಡೆಯನ್ನು ಅನುಭವಿಸಿದರು.
2) ಭಾರತ ಮತ್ತು ಚೀನಾ ನಡುವಿನ ಗಡಿ ಸಂಘರ್ಷವು ಈ ಪರಿಸ್ಥಿತಿಯನ್ನು ಮತ್ತಷ್ಟು ಬಲಗೊಳಿಸಿತು.
ಹಾಗಾದರೆ,ಭಾರತ ಏನು ಮಾಡುತ್ತಿದೆ?
ಹೆಚ್ಚಿನ ಸ್ವಾವಲಂಬನೆಗಾಗಿ ಕರೆ: ಈ ಬಾರಿ ಜೂನ್ ನಲ್ಲಿ, ದೇಶದಲ್ಲಿ ಮೂರು ಬೃಹತ್ ಔಷಧೀಯ ಉದ್ಯಾನವನಗಳನ್ನು ಪ್ರಚಾರಕ್ಕಾಗಿ ಔಷಧೀಯ ಇಲಾಖೆಯು ಯೋಜನೆಯನ್ನು ಘೋಷಿಸಿತು.
1) ಬೃಹತ್ ಔಷಧೀಯ ಉದ್ಯಾನವನಗಳು API ಗಳು,DI ಗಳು ಅಥವಾKSM ಗಳ ವಿಶೇಷ ತಯಾರಿಕೆಗಾಗಿ ಸಾಮಾನ್ಯ ಮೂಲ ಸೌಕರ್ಯ ಸೌಲಭ್ಯಗಳನ್ನು ಹೊಂದಿರುವ ಒಂದು ಗೊತ್ತುಪಡಿಸಿದ ಭೂಪ್ರದೇಶವನ್ನು ಹೊಂದಿರುತ್ತವೆ ಮತ್ತು ಸಾಮಾನ್ಯ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಸಹ ಹೊಂದಿರುತ್ತವೆ.
2) ಈ ಉದ್ಯಾನವನಗಳು ದೇಶದಲ್ಲಿ ಬೃಹತ್ ಔಷಧಿಗಳ ಉತ್ಪಾದನಾ ವೆಚ್ಚವನ್ನು ತಗ್ಗಿಸುವ ಮತ್ತು ದೇಶಿಯ ಬೃಹತ್ ಔಷಧ ಉದ್ಯಮದಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ.
ಬೃಹತ್ ಔಷಧ ಉದ್ಯಾನವನಗಳ ಪ್ರಚಾರಕ್ಕಾಗಿ ಯೋಜನೆಯ ಪ್ರಮುಖ ಲಕ್ಷಣಗಳು:
1) ಸಾಮಾನ್ಯ ಮೂಲಸೌಕರ್ಯ ಸೌಲಭ್ಯಗಳ ಸೃಷ್ಟಿಗೆ ಒಂದು-ಬಾರಿ -ಅನುದಾನ ನೀಡುವ ಮೂಲಕ ಯೋಜನೆಯು ದೇಶದ ಆರಿಸಿದ ಮೂರು ಉದ್ಯಾನವನಗಳನ್ನು ಬೆಂಬಲಿಸುತ್ತದೆ.
2) ಅನುದಾನ ಸಹಾಯಧನವು ಸಾಮಾನ್ಯ ಸೌಲಭ್ಯಗಳ ವೆಚ್ಚದ ಶೇಕಡ 70ರಷ್ಟು ಆಗಿರುತ್ತದೆ. ಆದರೆ ಹಿಮಾಚಲ ಪ್ರದೇಶ ಹಾಗೂ ಇತರೆ ಪರ್ವತ ರಾಜ್ಯಗಳ ಸಂದರ್ಭದಲ್ಲಿ, ಶೇಕಡ 90ರಷ್ಟು ಆಗಿರುತ್ತದೆ.
3) ಕೇಂದ್ರವು ಪ್ರತಿ ಉದ್ಯಾನವನಕ್ಕೆ ಗರಿಷ್ಠ ಒಂದು ಸಾವಿರ ಕೋಟಿ ರೂಪಾಯಿಗಳನ್ನು ನೀಡುತ್ತದೆ
4) ಒಂದು ರಾಜ್ಯ ಒಂದು ಸೈಟನ್ನು ಮಾತ್ರ ಪ್ರಸ್ತಾಪಿಸಬಹುದು, ಅದು 1000 ಎಕರೆಗಿಂತ ಕಡಿಮೆ ಇರಬಾರದು ಅಥವಾ ಬೆಟ್ಟದ ರಾಜ್ಯಗಳ ಪ್ರದೇಶದಲ್ಲಿ 700 ಎಕರೆಗಿಂತ ಕಡಿಮೆ ಇರಬಾರದು.
ಒಳಗೊಂಡಿರುವ ವಿಷಯಗಳು: ಸೈಬರ್ ಸುರಕ್ಷತೆ ಸಂಬಂಧಿತ ಸಮಸ್ಯೆಗಳು.
ಸೈಬರ್ ಅಪರಾಧಕ್ಕಾಗಿ FIR ಗಳನ್ನು ಫೈಲ್ ಮಾಡಿ ಎಂದು ರಾಜ್ಯಗಳು ಪ್ರಸ್ತಾಪಿಸಿದೆ
ಸಂದರ್ಭ:
ಕೇಂದ್ರ ಗೃಹ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ಪರೀಕ್ಷಿಸಲು ಮತ್ತು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಪ್ರಕಾರ ಸ್ವೀಕರಿಸಲಾದ ದೂರುಗಳನ್ನು ಆಧರಿಸಿ FIRಗಳನ್ನು ನೊಂದಾಯಿಸಲು ಸೂಚಿಸಿದೆ.
ಇದು ಬೇಕೇ?
ಪೋರ್ಟಲ್ ನಲ್ಲಿ ನೊಂದಾಯಿಸಲ್ಪಟ್ಟ ದೂರುಗಳಲ್ಲಿ ಕೇವಲ ಶೇಕಡ 2.5 ರಷ್ಟು ಮಾತ್ರ ಪ್ರಾಥಮಿಕ ಮಾಹಿತಿ ವರದಿ ಗಳಾಗಿ ಪರಿವರ್ತನೆಗೊಳ್ಳುತ್ತವೆ.
NCRB ಯ ಸಂಗ್ರಹಿಸಿದ ದತ್ತಾಂಶದ ಪ್ರಕಾರ, ನೊಂದಾಯಿಸಿದ ಸೈಬರ್ ಕ್ರೈಮ್ ಗಳ ಸಂಖ್ಯೆ ಹಿಂದಿನ ವರ್ಷಕ್ಕೆ ಹೋಲಿಸಿದರೆ 2019ರ ವರ್ಷದಲ್ಲಿ 63.5% ಗೆ ಏರಿಕೆಯಾಯಿತು.
ಈ ಬಗ್ಗೆ ಜಾಗೃತಿ ಮೂಡಿಸಲು ಗೃಹಸಚಿವಾಲಯದ ಪ್ರಯತ್ನಗಳು:
1) ಈ ಮೇಲೆ ತಿಳಿಸಿದ ಪೋರ್ಟಲ್ ಮೂಲಕ, ಅಂತರ್ಜಾಲದಲ್ಲಿ ” ಕಾನೂನುಬಾಹಿರ ವಿಷಯ” ವನ್ನು ಫ್ಲಾಗ್ ಮಾಡಲು” ಸೈಬರ್ ಅಪರಾಧ ಸ್ವಯಂಸೇವಕರ” ಗುಂಪನ್ನು ಬೆಳೆಸುವ ಉದ್ದೇಶವನ್ನು ಸಚಿವಾಲಯ ಹೊಂದಿದೆ.
2) ಕಾನೂನುಬಾಹಿರ/ ಕಾನೂನುಬಾಹಿರ ಆನ್ಲೈನ್ ವಿಷಯವನ್ನು ಗುರುತಿಸಲು, ವರದಿ ಮಾಡಲು ಮತ್ತು ತೆಗೆದುಹಾಕಲು ಕಾನೂನು ಜಾರಿ ಸಂಸ್ಥೆಗಳಿಗೆ ಅನುಕೂಲವಾಗುವಂತೆ ಕಾನೂನುಬಾಹಿರ ವಿಷಯಗಳ ಪಾತ್ರದಲ್ಲಿ ಸೈಬರ್ ಕ್ರೈಮ್ ಸ್ವಯಂಸೇವಕರಾಗಿ ನೊಂದಾಯಿಸಲು ಇದು ಉತ್ತಮ ದಯಾಳುಗಳನ್ನು(Samaritans) ಆಹ್ವಾನಿಸಿದೆ.
ಕಾನೂನುಬಾಹಿರ ವಿಷಯ ಎಂದರೇನು?
ಇದನ್ನು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ವಿರುದ್ಧವಾಗಿ, ಭಾರತದ ರಕ್ಷಣೆಗೆ ವಿರುದ್ಧವಾಗಿ, ರಾಜ್ಯದ ಭದ್ರತೆಗೆ ವಿರುದ್ಧವಾಗಿ, ವಿದೇಶಿ ರಾಜ್ಯಗಳೊಂದಿಗೆನ ಸ್ನೇಹ ಸಂಬಂಧದ ವಿರುದ್ಧ, ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ತರುವ ಉದ್ದೇಶ, ಕೋಮುಸೌಹಾರ್ದತೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯ ಎಂದು ವರ್ಗೀಕರಿಸಲಾಗಿದೆ.
ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಕೈಗೊಂಡ ಇತರ ಕ್ರಮಗಳು:
1) ದೇಶದಲ್ಲಿ ಸೈಬರ್ ಅಪರಾಧ ಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಮಗ್ರ ಮತ್ತು ಸಂಘಟಿತ ರೀತಿಯಲ್ಲಿ ನಿರ್ವಹಿಸಲು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ(I4c) ಸ್ಥಾಪಿಸುವ ಯೋಜನೆಯನ್ನು ಸ್ಥಾಪಿಸಲಾಗಿದೆ.
2) ನ್ಯಾಷನಲ್ ಕ್ರಿಟಿಕಲ್ ಇನ್ಫಾರ್ಮಶನ್ ಇನ್ಫ್ರಾಸ್ಟ್ರಕ್ಚರ್ ಪ್ರೋಟೆಕ್ಷನ್ ಸೆಂಟರ್(NCIIPC) ಅನ್ನು ದೇಶದಲ್ಲಿ ನಿರ್ಣಾಯಕ ಮಾಹಿತಿಯ ಮೂಲಸೌಕರ್ಯ ರಕ್ಷಣೆಗಾಗಿ ಸ್ಥಾಪನೆ.
3) ಸೈಬರ್ ಭದ್ರತಾ ಘಟನೆಗಳನ್ನು CERT-In ಗೆ ವರದಿ ಮಾಡಲು ಡಿಜಿಟಲ್ ಸೇವೆಗಳನ್ನು ಒದಗಿಸುವ ಎಲ್ಲಾ ಸಂಸ್ಥೆಗಳನ್ನು ಕಡ್ಡಾಯಗೊಳಿಸಲಾಗಿದೆ.
4) ದುರುದ್ದೇಶಪೂರಿತ ಕಾರ್ಯಕ್ರಮಗಳ ಪತ್ತೆ ಮತ್ತು ಕಾರ್ಯಕ್ರಮಗಳನ್ನು ತೆಗೆದುಹಾಕಲು ಬೇಕಾದ ಸಾಧನಗಳನ್ನು ಒದಗಿಸಲು ಸೈಬರ್ ಸ್ವಚ್ಛತಾ ಕೇಂದ್ರ(Bot net cleaning and malware analysis Centre) ಅನ್ನು ಪ್ರಾರಂಭಿಸಲಾಗಿದೆ.
5) ಸೈಬರ್ ದಾಳಿ ಮತ್ತು ಸೈಬರ್ ಭಯೋತ್ಪಾದನೆ ಎದುರಿಸಲು ಬಿಕ್ಕಟ್ಟು ನಿರ್ವಹಣೆ ಯೋಜನೆಯ ಸೂತ್ರೀಕರಣ.
ಒಳಗೊಂಡಿರುವ ವಿಷಯಗಳು: ವಿವಿಧ ಭದ್ರತಾಪಡೆಗಳು ಮತ್ತು ಏಜೆನ್ಸಿಗಳು ಮತ್ತು ಅವುಗಳ ಆದೇಶ.
Army Aviation Corps ಎಂದರೇನು?
ಸಂದರ್ಭ:
Army Aviation Corps( AAC) ತನ್ನ 35ನೇ corps ದಿನವನ್ನು ನವೆಂಬರ್ 1ರಂದು ಆಚರಿಸಿತು.
AAC ಬಗ್ಗೆ:
ಇದು ಭಾರತೀಯ ಸೇನೆಯ ಕಿರಿಯ ಕಾರ್ಪ್ಸ್.
ಈ ಕಾರ್ಪ್ಸ್ ಅನ್ನು 1986 ರಲ್ಲಿ ನವಂಬರ್ 1ರಂದು ಪ್ರತ್ಯೇಕವಾಗಿ ರಚಿಸಲಾಯಿತು.
ಸಂಯೋಜನೆ: AAC ಯು ಪ್ರಸ್ತುತ ತನಗೆ ಬೇಕಾದ ಎಲ್ಲಾ ಅಧಿಕಾರಿಗಳನ್ನು ಮತ್ತು ಸೈನಿಕರನ್ನು ಸೇನೆಯ ಎಲ್ಲಾ ದಳಗಳಿಂದ ಅದರಲ್ಲೂ ಫಿರಂಗಿ ದಳದಿಂದ ಗಮನಾರ್ಹವಾದ ಸಂಖ್ಯೆಯನ್ನು ಒಳಗೊಂಡಿದೆ.
ಪಾತ್ರಗಳು ಮತ್ತು ಕಾರ್ಯಗಳು:
1)AAC ಚಾಪರ್ ಗಳು ನಿರ್ವಹಿಸುವ ಮುಖ್ಯಪಾತ್ರಗಳು ಎಂದರೆ ವಿಚಕ್ಷಣ,ವೀಕ್ಷಣೆ,ಅಪಘಾತ ಸ್ಥಳಾಂತರಿಸುವಿಕೆ,ಅಗತ್ಯವಾದ ಲೋಡ್ಗಳನ್ನು ಹಾಕುವುದು,ಯುದ್ಧ ಶೋಧ ಮತ್ತು ಪಾರುಗಾಣಿಕೆ.
2)AAC ಹೆಲಿಕಾಪ್ಟರ್ ಗಳು ಶಾಂತಿಕಾಲದಲ್ಲಿ ಮಾನವೀಯ ನೆರವು ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ಭಾಗವಹಿಸುತ್ತವೆ.
3) ಕೆಲವು ಸನ್ನಿವೇಶಗಳಲ್ಲಿ, ಸೈನ್ಯದ ಹೆಲಿಕಾಪ್ಟರ್ ಗಳು
Airborne Command Posts ಗಳಂತೆ ಕಾರ್ಯನಿರ್ವಹಿಸಬಹುದು, ಅಗತ್ಯವಿದ್ದರೆ ಗ್ರೌಂಡ್ ಕಮಾಂಡ್ ಪೋಸ್ಟ್ ಗಳನ್ನು ಬದಲಾಯಿಸುತ್ತವೆ.
ಪಡೆಗಳು:-
AAC ಪ್ರಸ್ತುತ chetak,cheetah,lancer,Advanced Light Helicopter (ALH) ಮತ್ತು ರುದ್ರ ಎಂದು ಕರೆಯಲ್ಪಡುವ weapon system integrated ಅನ್ನು ನಿರ್ವಹಿಸುತ್ತಿದೆ.